ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ) ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕುರಿತ ಅಪರೂಪದ ದಾಖಲೆಗಳ ಆನ್ಲೈನ್ ವಸ್ತು ಪ್ರದರ್ಶನ ನಡೆಸಿದೆ.
ಎಲ್ಎಸ್ಇ ದಕ್ಷಿಣ ಏಷ್ಯಾ ಕೇಂದ್ರ ಎಲ್ಎಸ್ಇ ಲೈಬ್ರರಿ ಮತ್ತು ಡಿಕೊಲೊನೈಸಿಂಗ್ ಎಲ್ಎಸ್ಇ ಕಲೆಕ್ಟಿವ್ ಎಂಬ ಮೂರು ಕೇಂದ್ರಗಳು ಸೇರಿ ನಡೆಸಿವೆ. ಇದರಲ್ಲಿ ಮೊದಲು 1916 ರಲ್ಲಿ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ದಾಖಲಾಗಿರುವ ಅರ್ಜಿಯನ್ನು ತೋರಿಸುವ ಮೂಲಕ ಆನ್ಲೈನ್ ಪ್ರದರ್ಶನವನ್ನು ಆರಂಭಿಸಲಾಗಿದೆ.
ಎಲ್ಎಸ್ಇಯೊಂದಿಗಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂಬಂಧ, ಸಂವಹನಗಳ ದಾಖಲೆ, ಅಂಬೇಡ್ಕರ್ ಅವರ ಜೀವನದಿಂದ ಪ್ರೇರಿತವಾದ ಎಲ್ಎಸ್ಇಯಲ್ಲಿ ಅವರ ಚಟುವಟಿಕೆಯನ್ನು ದಾಖಲಿಸಲು ಈ ಪ್ರದರ್ಶನ ಒಂದು ಉತ್ತಮ ಕಾರ್ಯ ಸ್ಥಳವಾಗಿದೆ ಎಂದು ಎಲ್ಎಸ್ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಇಸ್ಲಾಂ ಮತ್ತು ಅಂಬೇಡ್ಕರ್ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!
Ambedkdar first studied at @LSENews in 1916. Here’s a copy of his application form, where the course cost ten pounds and ten shillings (paid for by a scholarship that he won). #LSEAmbedkar pic.twitter.com/wZWXAhQulG
— LSE Library (@LSELibrary) June 30, 2021
ವಸ್ತು ಪ್ರದರ್ಶನದ ಜೊತೆಗೆ ಅಂಬೇಡ್ಕರ್ ಕುರಿತ ಹಲವು ಕಾರ್ಯಕ್ರಮಗಳು, ಓದಿನ ಪಟ್ಟಿಗಳು, ಪಾಡ್ಕಾಸ್ಟ್ಗಳು ಮತ್ತು ಇತರ ವಿಷಯಗಳ ರೆಕಾರ್ಡಿಂಗ್ಗಳನ್ನು ಸೇರಿಸಲಾಗುತ್ತದೆ. ಜೊತೆಗೆ ಅಂಬೇಡ್ಕರ್ ಎಂದರೆ ನಮಗೆ ಏನು ಎಂಬುದರ ಕುರಿತು ಎಲ್ಎಸ್ಇ ಸಮುದಾಯದಿಂದ ವಿಚಾರಗಳನ್ನು ಪಡೆದು ಒಂದೆಡೆ ಸೇರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಅಂಬೇಡ್ಕರ್ ಅವರು ತಮ್ಮ 25 ವರ್ಷದಲ್ಲಿ 1916 ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ದಾಖಲಾಗಿದ್ದರು. ಇದಕ್ಕಿಂತ ಮೊದಲೇ ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಮುಂಬೈ ಎಲ್ಫಿನ್ಸ್ಟೋನ್ (Elphinstone) ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ ಮೊದಲ ದಲಿತ ಸಮುದಾಯದ ವ್ಯಕ್ತಿ ಅಂಬೇಡ್ಕರ್.
ತಮ್ಮ ಬಾಲ್ಯದುದ್ದಕ್ಕೂ “ಅಸ್ಪೃಶ್ಯ” ಎಂದು ತಾರತಮ್ಯವನ್ನು ಎದುರಿಸುತ್ತಿದ್ದ ಅವರು, ಬರೋಡಾ ರಾಜ್ಯದಿಂದ (ಈಗ ವಡೋದರಾ) ವಿದ್ಯಾರ್ಥಿವೇತನವನ್ನು ಪಡೆದರು. ಇದರಿಂದ ವಿದೇಶದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಗಿಸಿ, ಡಾಕ್ಟರೇಟ್ ಪಡೆದು ಅಲ್ಲಿಂದ ಲಂಡನ್ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದ್ದರು.
ಈ ಆನ್ಲೈನ್ ವಸ್ತು ಪ್ರದರ್ಶನದಲ್ಲಿ ಅಂಬೇಡ್ಕರ್ ಅವರ ಕುರಿತ ಅಪರೂಪದ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಡುವಿನ ಅವಿನಾಭಾವ ಸಂಬಂಧವನ್ನು ಈ ಪ್ರದರ್ಶನ ತಿಳಿಸುತ್ತದೆ. ಭಾರತದ ಸಂವಿಧಾನ ರಚಿಸುವಲ್ಲಿಯೂ ಎಲ್ಎಸ್ಇ ಜೊತೆಗಿನ ನಂಟು ಕುರಿತು ಇದು ವಿವರಿಸುತ್ತದೆ.
ಇದನ್ನೂ ಓದಿ: ಚಿತ್ರರಂಗದ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವ ಕೇಂದ್ರದ ಹೊಸ ಕಾನೂನು: ಕಮಲ್ ಹಾಸನ್ ಸೇರಿ ಚಿತ್ರತಾರೆಯರ ವಿರೋಧ