HomeUncategorizedಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

ಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

- Advertisement -
- Advertisement -

ಸ್ತ್ರೀಗೆ ಹೆಣ್ತನ ವರದಾನ. ಮಗುವಿಗೆ ಜನ್ಮ ನೀಡುವುದು ಅಂದರೆ ತಾಯಿಯೇ ಪುನರ್ಜನ್ಮ ಪಡೆದಂತೆ. ಅಂತಹ ತಾಯಿ ಒಂಬತ್ತು ತಿಂಗಳವರೆಗೆ ಮಗುವನ್ನು ಹೊತ್ತು ಕನಸು ಕಟ್ಟುತ್ತಾಳೆ. ಮಗುವಿನ ಒದ್ದಾಟ, ಹೊರಳಾಟವನ್ನು ಅನುಭವಿಸಿ, ಬೇನೆ ತಿಂದು, ಜೀವವನ್ನೇ ಪಣಕ್ಕಿಟ್ಟು ತನ್ನ ಕರುಳ ಕುಡಿಯನ್ನು ಜಗತ್ತಿಗೆ ಪರಿಚಯಿಸುತ್ತಾಳೆ. ಇಂತಹ ತಾಯಿಯ ಹೆರಿಗೆಯ ಸಮಯ ಅದೆಷ್ಟು ಯಾತನಾಮಯ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ, ಹೆರಿಗೆಯ ಸಮಯದವರೆಗೆ ಗರ್ಭಿಣಿ ಕೆಲಸ ಮಾಡುತ್ತಾಳಂತೆ.

ಹೌದು… ಶೇ. 63 ರಷ್ಟು ಗರ್ಭಿಣಿಯರು ಮಗುವಿನ ಹೆರಿಗೆಯ ಸಮಯದವರೆಗೆ ಕೆಲಸ ಮಾಡುತ್ತಾರೆ ಎಂದು ಜಚ್ಚಾ-ಬಚ್ಚಾ ಸಮೀಕ್ಷೆ ಹೇಳಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದ ಜಚ್ಚಾ-ಬಚ್ಚಾ ಗರ್ಭಿಣಿಯರು ಮಗುವಿಗೆ ಜನ್ಮ ನೀಡುವ ಕೊನೆಯ ಗಳಿಗೆಯವರೆಗೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದೆ.

ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್ ನೇತೃತ್ವದ ಸಂಶೋಧನಾ ತಂಡ, ಛತ್ತೀಸ್ ಗಢ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಹಿಂದಿನ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ ತಾಯಂದಿರನ್ನು ಮಾತನಾಡಿಸಿತ್ತು. 706 ಮಹಿಳೆಯರಲ್ಲಿ 342 ಗರ್ಭಿಣಿಯರು, 364 ಹೆರಿಗೆಯಾದ ತಾಯಂದಿರನ್ನು (ಶೂಶ್ರೂಷೆ ತಾಯಂದಿರನ್ನು) ಸಂದರ್ಶಿಸಿತ್ತು.

ಸಮೀಕ್ಷೆ ವೇಳೆ, ಶೇ. 21 ರಷ್ಟು ಶುಶ್ರೂಷಾ ಗರ್ಭಿಣಿಯರಿಗೆ ಕೆಲಸದಲ್ಲಿ ಸಹಾಯ ಮಾಡಲು ಸಹಾಯಕರಿಲ್ಲ. ಕೆಲಸಕ್ಕಾಗಿ ಯಾವುದೇ ಸಹಾಯ ಲಭ್ಯವಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಅದರಲ್ಲಿ ಶೇ.49 ರಷ್ಟು ಮಹಿಳೆಯರು ಆಹಾರ ಮತ್ತು ವಿಶ್ರಾಂತಿ ಕೊರತೆಯಿಂದ ಬಳಲಿದ್ದಾರೆ ಮತ್ತು ದಣಿದಿದ್ದಾರೆ ಎಂದು ಮಾಹಿತಿಯನ್ನು ಸಮೀಕ್ಷೆ ಬಹಿರಂಗಪಡಿಸಿದೆ.  ದಾಗಿ ಗರ್ಭಾವಸ್ಥೆಯಲ್ಲಿ ಕ್ಷಾಮ ಮತ್ತು ದಣಿದಿದ್ದಾರೆ. ಭಾರತದಲ್ಲಿ ಸಂಭವಿಸುವ 3 ಮಕ್ಕಳ ಸಾವುಗಳಲ್ಲಿ 2 ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತವೆ. ಇದು ಗ್ರಾಮೀಣ ಭಾಗಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿದೆ ಎಂದು ಸಮೀಕ್ಷೆ ದೃಢೀಕರಿಸಿದೆ.

ಸಾಮಾನ್ಯವಾಗಿ ನಾರ್ಮಲ್ ಶಿಶುಗಳ ಮಾಸ್ ಇಂಡೆಕ್ಸ್ ಹೊಂದಿರುವ ಗರ್ಭಿಣಿಯರ ತೂಕ 13 ರಿಂದ 18 ಕಿಲೋಗ್ರಾಂ ಇರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ 7 ಕಿಲೋ ಗ್ರಾಂ ತೂಕ ಹೆಚ್ಚಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಾಯೋಗಿಕವಾಗಿ, ಶುಶ್ರೂಷಾ ಮಹಿಳೆಯರು ಹೆರಿಗೆಗಾಗಿ ಸರಾಸರಿ 6,500 ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದು ಒಬ್ಬ ಕಾರ್ಮಿಕನಿಗೆ ಇರುವ ಸಂಬಳಕ್ಕಿಂತ ದುಪ್ಪಟ್ಟು ಖರ್ಚಾಗಿದೆ. ಕಾರ್ಮಿಕರ ಮನೆಯ ಮೂರನೇ ಒಂದು ಭಾಗದಷ್ಟು ಮಹಿಳೆಯರು ವೆಚ್ಚವನ್ನು ಸರಿದೂಗಿಸಲು, ಸಾಲ ಮಾಡುತ್ತಾರೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮುಂಬೈನಲ್ಲಿ NCP – ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ: NCP ಶಾಸಕಾಂಗ ನಾಯಕತ್ವದಿಂದ ಅಜಿತ್‌ ಪವಾರ್‌ ಉಚ್ಚಾಟನೆ

ಆದಾಗ್ಯೂ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿನ ಎಲ್ಲಾ ಮಹಿಳೆಯರಿಗೆ ಯಾವುದೇ ವೆಚ್ಚವಿಲ್ಲದೆ ಸಾಂಸ್ಥಿಕ ವಿತರಣೆ ನೀಡಬೇಕಾಗಿದೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಕೇವಲ 4 ಕಿಲೋಗ್ರಾಂಗಳಷ್ಟು ಕಡಿಮೆ ಸರಾಸರಿ ತೂಕ ದಾಖಲಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಸೋನಭದ್ರದಲ್ಲಿ ಸಂದರ್ಶನ ಮಾಡಿದ 64 ಗರ್ಭಿಣಿಯರಲ್ಲಿ  ಶೇ. 48 ರಷ್ಟು ಗರ್ಭಿಣಿಯರು ಕಡಿಮೆ ತೂಕ ಹೊಂದಿದ್ದಾರೆ. ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು ಎಂಬುದರ ಅರಿವು ಇವರಿಗಿಲ್ಲ. ಹೀಗಾಗಿ ಸರಾಸರಿಗಿಂತ ಕಡಿಮೆ ತೂಕ ದಾಖಲಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ತಾಯಿ ಆರೋಗ್ಯ ಕಾರ್ಯಕ್ರಮ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ. ಇವುಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಪೂರಕ ವ್ಯವಸ್ಥೆ ಮಾಡಲಾಗಿದೆ. ಹೀಗಿರುವಾಗಲೂ ಗ್ರಾಮೀಣ ಭಾಗದ ಕೆಳಮಟ್ಟದ ಮಹಿಳೆಯರಲ್ಲಿ ಅನಾರೋಗ್ಯ ಕಾಡುತ್ತಿದೆ.

ದೈಹಿಕ ದೌರ್ಬಲ್ಯ, ಶಕ್ತಿ ಕುಂದುವಿಕೆ, ಪಾದಗಳಲ್ಲಿ ಸೆಳೆತ, ಹಗಲು ದೃಷ್ಟಿ ದೋಷ, ಮೈ-ಕೈ ಸೆಳತ, ಗರ್ಭಿಣಿಯರಲ್ಲಿ ಕಂಡು ಬರುವ ಅನಾರೋಗ್ಯಕರ ಅಂಶಗಳಾಗಿವೆ. ಅದರಲ್ಲೂ ಶೇ. 41 ರಷ್ಟು ಪಾದಗಳಲ್ಲಿ ಸೆಳೆತ, ದೃಷ್ಟಿ ದೌರ್ಬಲ್ಯ ಶೇ. 17 ರಷ್ಟು ಶೇ.9 ರಷ್ಟು ಮಹಿಳೆಯರಲ್ಲಿ ಸೆಳೆತದ ಲಕ್ಷಣಗಳು ಕಂಡು ಬರುತ್ತವೆ ಎಂದು ಸಮೀಕ್ಷೆ ಹೇಳಿದೆ.

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆಯ ವ್ಯಾಪ್ತಿಯ ತುಲನಾತ್ಮಕ ಅಂಕಿ-ಅಂಶಗಳನ್ನು ಗಮನಿಸಿದರೆ, ಒಡಿಶಾದಲ್ಲಿ ಗರ್ಭಿಣಿಯರು ಚೆನ್ನಾಗಿದ್ದಾರೆ. ಇಲ್ಲಿನ 3 ರಿಂದ 6 ವರ್ಷದೊಳಗಿನ ಅಂಗನವಾಡಿ ಮಕ್ಕಳು ವಾರಕ್ಕೆ ಐದು ಬಾರಿ ಮೊಟ್ಟೆ ಪಡೆಯುತ್ತಾರೆ. ಕಿರಿಯ ಮಕ್ಕಳು, ಗರ್ಭಿಣಿ ಮತ್ತು ಹೆರಿಗೆಯಾದ ಮಹಿಳೆಯರಿಗೆ ಪಡಿತರ ಭಾಗವಾಗಿ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದು ಸಮೀಕ್ಷೆ ವರದಿಯಲ್ಲಿ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...