Homeಮುಖಪುಟಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

- Advertisement -
- Advertisement -

ಪುಟಕ್ಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್

ಭಾರತದಲ್ಲಿ ಭಗವದ್ಗೀತೆ ಮತ್ತು ಯೋಗವನ್ನು ಪರ ವಿರೋಧಗಳ ನೆಲೆಗಟ್ಟುಗಳಿಂದಲ್ಲದೇ ಮರು ಸಂಶೋಧನೆ ಮಾಡಿದ ವಿದ್ವಾಂಸ ಫುಲ್ಗೇಂದ ಸಿನ್ಹಾ. ಅವರು ಅಮೆರಿಕೆಯಲ್ಲಿ ಸ್ವಯಂ ಯೋಗಾಚಾರ್ಯ ರಾಗಿದ್ದ ಕಾರಣದಿಂದ ಯೋಗದ ಮೂಲವನ್ನು ಹುಡುಕಲು ಹೊರಟ ಅವರು ಅದರ ಜೊತೆಜೊತೆಗೇ ಗೀತೆಯ ಮೂಲವನ್ನೂ ಗುರುತಿಸುವ ಯತ್ನ ಮಾಡಿದರು.

ಇದರಿಂದ ಗೀತಾ- ಯಾಸ್ ಇಟ್ ವಾಸ್ ಎಂಬ ಮಹತ್ವಪೂರ್ಣ ಕೃತಿಯ ರಚನೆಯಾಯ್ತು. ಗೀತಾ – ಯಾಸ್ ಇಟ್ ಈಸ್ ಎಂಬ ಇಸ್ಕಾನ್ ಸಂಸ್ಥಾಪಕರ ಕೃತಿಯೊಂದಿದೆ. ಈ ಕೃತಿಗಳ ನಡುವಿನ ವ್ಯತ್ಯಾಸವೆಂದರೆ, ಇಸ್ಕಾನ್ ಕೃತಿ ಮಂಪರನ್ನು ತರಿಸುತ್ತದೆ. ಸಿನ್ಹಾರವರ ಸಂಶೋಧನಾ ಕೃತಿ ಮಂಪರನ್ನು ಹರಿಸುತ್ತದೆ.

ಸಿನ್ಹಾರವರ ಈ ಕೃತಿ ಮಹತ್ವದ್ದು ಎನಿಸುವುದಕ್ಕೆ ಕಾರಣಗಳಿವೆ. ಯಾವುದೇ ನೆಲದ ಸಾಂಸ್ಕೃತಿಕ ರೂಢಿಗಳು ಮತ್ತು ಧಾರ್ಮಿಕ ನಂಬುಗೆಗಳು ಸಮಾಜದ ಪ್ರಗತಿಗೆ ಅಥವಾ ಅವನತಿಗೆ ಹೇಗೆ ಕಾರಣವಾಗುತ್ತದೆ ಎಂದು ವಿವರಿಸುತ್ತದೆ. ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಹೇಗೆ ಅಲ್ಲ ಎಂದು ಪ್ರತಿಪಾದಿಸುತ್ತದೆ ಮತ್ತು ಅತಿ ಮುಖ್ಯವಾಗಿ ಮೂಲದಲ್ಲಿ ಇದ್ದಂತಹ ಭಗವದ್ಗೀತೆ ಏನು? ಯಾವ್ಯಾವ ಪ್ರಭಾವಗಳಿಂದ ಮತ್ತು ಯಾವ್ಯಾವ ನುಸುಳುವಿಕೆಗಳಿಂದ ಈಗ ನಾವು ಕಾಣುತ್ತಿರುವ ಭಗವದ್ಗೀತೆಯಾಗಿದೆ ಎಂದು ಆಧಾರಸಹಿತ ವಿವರಿಸುತ್ತಾರೆ.

ಚಿಂತನೆ ಮತ್ತು ಭಾವನೆಗಳ ಪ್ರಭಾವವು ದೇಶದ ಪ್ರಗತಿಗೆ ಹೇಗೆ ಕೆಲಸ ಮಾಡುತ್ತದೆ ಎಂದು ಯೋಚಿಸುತ್ತಾರೆ ಸಿನ್ಹಾ. ಕೆಲವು ದೇಶಗಳಿಗೆ ಸಂಪನ್ಮೂಲಗಳ ಕೊರತೆ ಇದ್ದು, ಎಲ್ಲವೂ ವ್ಯತಿರಿಕ್ತವಾಗಿರುವಂತಹ ವಾತಾವರಣವೇ ಇದ್ದರೂ ಔದ್ಯೋಗಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಾರೆ. ಆದರೆ, ಭಾರತದಂತಹ ದೇಶವು ಎಲ್ಲವೂ ಇದ್ದು ಹಾಗೆ ಸಾಧಿಸಲಾಗದಿರುವುದಕ್ಕೆ ಕಾರಣ ಏನು ಎಂದು ನೋಡುತ್ತಾ, ಸಿನ್ಹಾ ಗೀತೆಯ ಕಡೆ ನೋಡುತ್ತಾರೆ. ಕೆಲಸ ಮಾಡು ಆದರೆ ಪ್ರತಿಫಲವನ್ನು ಅಪೇಕ್ಷಿಸಬೇಡ. ಬಯಕೆ ದುಃಖಕ್ಕೆ ಕಾರಣ, ಬಯಕೆಯನ್ನು ಹೊಂದಬೇಡ. ವಿಧಿ ಲಿಖಿತದಂತೆ ಎಲ್ಲವೂ ನಡೆಯುತ್ತದೆ. ಪ್ರಾಪಂಚಿಕ ವ್ಯವಹಾರ ನಶ್ವರ, ಆಧ್ಯಾತ್ಮಿಕತೆಯೇ ಉನ್ನತ ಮತ್ತು ಅಮರ. ನೀನು ಏನೇ ಮಾಡಿದರೂ ದೇವರು ಅನುಗ್ರಹಿಸದಿದ್ದರೆ ಎಲ್ಲವೂ ವ್ಯರ್ಥ. ದುಃಖ, ಸಂತೋಷ, ಯಶಸ್ಸು ಮತ್ತು ವೈಫಲ್ಯ ಎಲ್ಲವೂ ದೇವರ ಇಚ್ಛೆ. ಬೇರೂರಿರುವ ಇಂತಹ ವಿಚಾರಗಳು ಯಾವ ರೀತಿಯಲ್ಲಿ ಮನುಷ್ಯನ ಸಂಕಲ್ಪ ಮತ್ತು ಸಾಧನೆಗೆ ನ್ಯಾಯ ಸಂದಾಯ ಮಾಡುತ್ತದೆ ಎಂಬುದು ಸಿನ್ಹಾರ ಚಿಂತನೆ. ರಾಷ್ಟ್ರೀಯತೆಯು ಧಾರ್ಮಿಕತೆಯ ಮೇಲೆ ಅವಲಂಬಿತವಾದರೆ ಎಂತಹ ಪ್ರಮಾದಗಳನ್ನು ಮತ್ತು ವೈಫಲ್ಯಗಳನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.

ಕಪಿಲ ಪತಂಜಲ ಗೌತಮ ಜಿನರೆಲ್ಲರ ತಾತ್ವಿಕತೆಗಳು ಭಾರತದ ಸಿದ್ಧಾಂತಕ್ಕೆ ಕಾಣ್ಕೆಗಳನ್ನು ನೀಡಿದವು ಎನ್ನುತ್ತಲೇ ವ್ಯಾಸನ ಭಗವದ್ಗೀತೆಯಲ್ಲಿ ಅವೆಲ್ಲವೂ ಹೇಗೆ ನುಸುಳಿದವು ಎಂಬುದು ಒಂದು ಸಸ್ಪೆನ್ಸ್ ಥ್ರಿಲ್ಲರ್.
ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯಲ್ಲಿ ಹದಿನೈದು ಅಧ್ಯಾಯಗಳೇ ಕಲಬೆರಕೆಯವು ಎಂದರೆ ಮರ್ಮಾಘಾತವಾಗದೇ!

ಮೂಲ ಗೀತ ಮೊದಲನೆಯ ಅಧ್ಯಾಯದ 28ನೇ ಶ್ಲೋಕದಿಂದ ಆರಂಭವಾಗುತ್ತದೆ. ನಂತರ ಮೊದಲ 3 ಅಧ್ಯಾಯಗಳಷ್ಟೇ ಅಸಲಿ ಎನ್ನುತ್ತಾ ಕ್ರಿಶ 800 ರಲ್ಲಿ ಬ್ರಾಹ್ಮಣವಾದವನ್ನು ಮತ್ತು ಅದ್ವೈತ ಸಿದ್ಧಾಂತವನ್ನು ಹೇಗೆ ತರಲಾಯ್ತು ಎಂದು ಕೂಲಂಕುಷವಾಗಿ ವಿವರಿಸುತ್ತಾರೆ.

ಕೊನೆಗೆ ತಿಳಿಯುವುದೇನೆಂದರೆ, ಮೂಲ ಭಗವದ್ಗೀತೆ ಅನೇಕ ಪ್ರಭಾವಗಳನ್ನು, ಬದಲಾವಣೆಗಳನ್ನು ಮತ್ತು ಕಲಬೆರಕೆಗಳನ್ನು ಹೊಂದಿದೆ. ಯೋಗ, ಗೀತೆ ಹಿಂದೂ ಧರ್ಮದ ಅಥವಾ ವೈದಿಕ ಧರ್ಮದ ಕೊಡುಗೆ ಏನಲ್ಲ. ಯೋಗ ದೇಹಕ್ಕೆ ಮತ್ತು ಗೀತೆ ಮನಸ್ಸಿಗೆ ಆರೋಗ್ಯ ಕೊಡುವ ದೃಷ್ಟಿಯನ್ನು ಹೊಂದಿರುವುದರಿಂದ ಪೂರ್ವಾಗ್ರಹಪೀಡಿತರಾಗಿ ತಿರಸ್ಕರಿಸಬಾರದು ಎಂಬುದು. ಒಬ್ಬ ಸತ್ಯಾನ್ವೇಷಿಯು ಪೂರ್ವಾಗ್ರಹಗಳಲ್ಲಿ ಬಂಧಿತನಾದರೆ ಸಂಶೋಧನೆಯಾಗಲಿ, ಅಧ್ಯಯನವಾಗಲಿ ಹೇಗೆ ಸಾಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುಜನರಿಗೆ ತಿಳಿದ ವಿಚಾರ. ಇದರಲ್ಲಿ ವಿಶೇಷವಾಗಿ ಏನೂ ಇಲ್ಲ. ಶತಮಾನಗಳಿಂದ ಈ ವಾದ ಇದ್ದದ್ದೇ…‌‌.!!

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...