HomeUncategorizedಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

ಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

- Advertisement -
- Advertisement -

ಸ್ತ್ರೀಗೆ ಹೆಣ್ತನ ವರದಾನ. ಮಗುವಿಗೆ ಜನ್ಮ ನೀಡುವುದು ಅಂದರೆ ತಾಯಿಯೇ ಪುನರ್ಜನ್ಮ ಪಡೆದಂತೆ. ಅಂತಹ ತಾಯಿ ಒಂಬತ್ತು ತಿಂಗಳವರೆಗೆ ಮಗುವನ್ನು ಹೊತ್ತು ಕನಸು ಕಟ್ಟುತ್ತಾಳೆ. ಮಗುವಿನ ಒದ್ದಾಟ, ಹೊರಳಾಟವನ್ನು ಅನುಭವಿಸಿ, ಬೇನೆ ತಿಂದು, ಜೀವವನ್ನೇ ಪಣಕ್ಕಿಟ್ಟು ತನ್ನ ಕರುಳ ಕುಡಿಯನ್ನು ಜಗತ್ತಿಗೆ ಪರಿಚಯಿಸುತ್ತಾಳೆ. ಇಂತಹ ತಾಯಿಯ ಹೆರಿಗೆಯ ಸಮಯ ಅದೆಷ್ಟು ಯಾತನಾಮಯ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ, ಹೆರಿಗೆಯ ಸಮಯದವರೆಗೆ ಗರ್ಭಿಣಿ ಕೆಲಸ ಮಾಡುತ್ತಾಳಂತೆ.

ಹೌದು… ಶೇ. 63 ರಷ್ಟು ಗರ್ಭಿಣಿಯರು ಮಗುವಿನ ಹೆರಿಗೆಯ ಸಮಯದವರೆಗೆ ಕೆಲಸ ಮಾಡುತ್ತಾರೆ ಎಂದು ಜಚ್ಚಾ-ಬಚ್ಚಾ ಸಮೀಕ್ಷೆ ಹೇಳಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದ ಜಚ್ಚಾ-ಬಚ್ಚಾ ಗರ್ಭಿಣಿಯರು ಮಗುವಿಗೆ ಜನ್ಮ ನೀಡುವ ಕೊನೆಯ ಗಳಿಗೆಯವರೆಗೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದೆ.

ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್ ನೇತೃತ್ವದ ಸಂಶೋಧನಾ ತಂಡ, ಛತ್ತೀಸ್ ಗಢ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಹಿಂದಿನ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ ತಾಯಂದಿರನ್ನು ಮಾತನಾಡಿಸಿತ್ತು. 706 ಮಹಿಳೆಯರಲ್ಲಿ 342 ಗರ್ಭಿಣಿಯರು, 364 ಹೆರಿಗೆಯಾದ ತಾಯಂದಿರನ್ನು (ಶೂಶ್ರೂಷೆ ತಾಯಂದಿರನ್ನು) ಸಂದರ್ಶಿಸಿತ್ತು.

ಸಮೀಕ್ಷೆ ವೇಳೆ, ಶೇ. 21 ರಷ್ಟು ಶುಶ್ರೂಷಾ ಗರ್ಭಿಣಿಯರಿಗೆ ಕೆಲಸದಲ್ಲಿ ಸಹಾಯ ಮಾಡಲು ಸಹಾಯಕರಿಲ್ಲ. ಕೆಲಸಕ್ಕಾಗಿ ಯಾವುದೇ ಸಹಾಯ ಲಭ್ಯವಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಅದರಲ್ಲಿ ಶೇ.49 ರಷ್ಟು ಮಹಿಳೆಯರು ಆಹಾರ ಮತ್ತು ವಿಶ್ರಾಂತಿ ಕೊರತೆಯಿಂದ ಬಳಲಿದ್ದಾರೆ ಮತ್ತು ದಣಿದಿದ್ದಾರೆ ಎಂದು ಮಾಹಿತಿಯನ್ನು ಸಮೀಕ್ಷೆ ಬಹಿರಂಗಪಡಿಸಿದೆ.  ದಾಗಿ ಗರ್ಭಾವಸ್ಥೆಯಲ್ಲಿ ಕ್ಷಾಮ ಮತ್ತು ದಣಿದಿದ್ದಾರೆ. ಭಾರತದಲ್ಲಿ ಸಂಭವಿಸುವ 3 ಮಕ್ಕಳ ಸಾವುಗಳಲ್ಲಿ 2 ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತವೆ. ಇದು ಗ್ರಾಮೀಣ ಭಾಗಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿದೆ ಎಂದು ಸಮೀಕ್ಷೆ ದೃಢೀಕರಿಸಿದೆ.

ಸಾಮಾನ್ಯವಾಗಿ ನಾರ್ಮಲ್ ಶಿಶುಗಳ ಮಾಸ್ ಇಂಡೆಕ್ಸ್ ಹೊಂದಿರುವ ಗರ್ಭಿಣಿಯರ ತೂಕ 13 ರಿಂದ 18 ಕಿಲೋಗ್ರಾಂ ಇರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ 7 ಕಿಲೋ ಗ್ರಾಂ ತೂಕ ಹೆಚ್ಚಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಾಯೋಗಿಕವಾಗಿ, ಶುಶ್ರೂಷಾ ಮಹಿಳೆಯರು ಹೆರಿಗೆಗಾಗಿ ಸರಾಸರಿ 6,500 ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದು ಒಬ್ಬ ಕಾರ್ಮಿಕನಿಗೆ ಇರುವ ಸಂಬಳಕ್ಕಿಂತ ದುಪ್ಪಟ್ಟು ಖರ್ಚಾಗಿದೆ. ಕಾರ್ಮಿಕರ ಮನೆಯ ಮೂರನೇ ಒಂದು ಭಾಗದಷ್ಟು ಮಹಿಳೆಯರು ವೆಚ್ಚವನ್ನು ಸರಿದೂಗಿಸಲು, ಸಾಲ ಮಾಡುತ್ತಾರೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮುಂಬೈನಲ್ಲಿ NCP – ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ: NCP ಶಾಸಕಾಂಗ ನಾಯಕತ್ವದಿಂದ ಅಜಿತ್‌ ಪವಾರ್‌ ಉಚ್ಚಾಟನೆ

ಆದಾಗ್ಯೂ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿನ ಎಲ್ಲಾ ಮಹಿಳೆಯರಿಗೆ ಯಾವುದೇ ವೆಚ್ಚವಿಲ್ಲದೆ ಸಾಂಸ್ಥಿಕ ವಿತರಣೆ ನೀಡಬೇಕಾಗಿದೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಕೇವಲ 4 ಕಿಲೋಗ್ರಾಂಗಳಷ್ಟು ಕಡಿಮೆ ಸರಾಸರಿ ತೂಕ ದಾಖಲಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಸೋನಭದ್ರದಲ್ಲಿ ಸಂದರ್ಶನ ಮಾಡಿದ 64 ಗರ್ಭಿಣಿಯರಲ್ಲಿ  ಶೇ. 48 ರಷ್ಟು ಗರ್ಭಿಣಿಯರು ಕಡಿಮೆ ತೂಕ ಹೊಂದಿದ್ದಾರೆ. ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು ಎಂಬುದರ ಅರಿವು ಇವರಿಗಿಲ್ಲ. ಹೀಗಾಗಿ ಸರಾಸರಿಗಿಂತ ಕಡಿಮೆ ತೂಕ ದಾಖಲಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ತಾಯಿ ಆರೋಗ್ಯ ಕಾರ್ಯಕ್ರಮ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ. ಇವುಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಪೂರಕ ವ್ಯವಸ್ಥೆ ಮಾಡಲಾಗಿದೆ. ಹೀಗಿರುವಾಗಲೂ ಗ್ರಾಮೀಣ ಭಾಗದ ಕೆಳಮಟ್ಟದ ಮಹಿಳೆಯರಲ್ಲಿ ಅನಾರೋಗ್ಯ ಕಾಡುತ್ತಿದೆ.

ದೈಹಿಕ ದೌರ್ಬಲ್ಯ, ಶಕ್ತಿ ಕುಂದುವಿಕೆ, ಪಾದಗಳಲ್ಲಿ ಸೆಳೆತ, ಹಗಲು ದೃಷ್ಟಿ ದೋಷ, ಮೈ-ಕೈ ಸೆಳತ, ಗರ್ಭಿಣಿಯರಲ್ಲಿ ಕಂಡು ಬರುವ ಅನಾರೋಗ್ಯಕರ ಅಂಶಗಳಾಗಿವೆ. ಅದರಲ್ಲೂ ಶೇ. 41 ರಷ್ಟು ಪಾದಗಳಲ್ಲಿ ಸೆಳೆತ, ದೃಷ್ಟಿ ದೌರ್ಬಲ್ಯ ಶೇ. 17 ರಷ್ಟು ಶೇ.9 ರಷ್ಟು ಮಹಿಳೆಯರಲ್ಲಿ ಸೆಳೆತದ ಲಕ್ಷಣಗಳು ಕಂಡು ಬರುತ್ತವೆ ಎಂದು ಸಮೀಕ್ಷೆ ಹೇಳಿದೆ.

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆಯ ವ್ಯಾಪ್ತಿಯ ತುಲನಾತ್ಮಕ ಅಂಕಿ-ಅಂಶಗಳನ್ನು ಗಮನಿಸಿದರೆ, ಒಡಿಶಾದಲ್ಲಿ ಗರ್ಭಿಣಿಯರು ಚೆನ್ನಾಗಿದ್ದಾರೆ. ಇಲ್ಲಿನ 3 ರಿಂದ 6 ವರ್ಷದೊಳಗಿನ ಅಂಗನವಾಡಿ ಮಕ್ಕಳು ವಾರಕ್ಕೆ ಐದು ಬಾರಿ ಮೊಟ್ಟೆ ಪಡೆಯುತ್ತಾರೆ. ಕಿರಿಯ ಮಕ್ಕಳು, ಗರ್ಭಿಣಿ ಮತ್ತು ಹೆರಿಗೆಯಾದ ಮಹಿಳೆಯರಿಗೆ ಪಡಿತರ ಭಾಗವಾಗಿ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದು ಸಮೀಕ್ಷೆ ವರದಿಯಲ್ಲಿ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ : ಕಪ್ಪು ಬಾವುಟ ಹಾರಿಸಿ, ಮಸೂದೆ ಪ್ರತಿಸುಟ್ಟು ಪ್ರತಿಭಟನೆಗೆ ಚಾಲನೆ ಕೊಟ್ಟ ಎಂ.ಕೆ ಸ್ಟಾಲಿನ್

ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಮರ ಸಾರಿದ್ದು, ಗುರುವಾರ (ಏ.16) ಅಧಿಕೃತವಾಗಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆ, ನಾಮಕ್ಕಲ್‌ನಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವ...

ತೆಲಂಗಾಣ ಜಾತಿ ಜನಗಣತಿ: ಸಾಮಾನ್ಯ ಜಾತಿಗಳಿಗಿಂತ ಮೂರು ಪಟ್ಟು ಹೆಚ್ಚು ಹಿಂದುಳಿದಿರುವ ಎಸ್‌ಸಿ- ಎಸ್‌ಟಿ ಸಮುದಾಯ

ತೆಲಂಗಾಣದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳು ಸಾಮಾನ್ಯ ಜಾತಿಗಳಿಗಿಂತ ಮೂರು ಪಟ್ಟು ಹೆಚ್ಚು ಹಿಂದುಳಿದಿವೆ, ಹಿಂದುಳಿದ ವರ್ಗಗಳು (ಬಿಸಿ) 2.7 ಪಟ್ಟು ಹೆಚ್ಚು ಹಿಂದುಳಿದಿವೆ; ರಾಜ್ಯದ ಕಲ್ಯಾಣ...

ಮಹಾರಾಷ್ಟ್ರ: ಎರಡು ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ ಬೀದಿ ನಾಯಿ: ಚಿಕಿತ್ಸೆಗಾಗಿ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತ ಗಾಯಾಳುಗಳು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಎರಡು ಗಂಟೆಗಳಲ್ಲಿ ಕನಿಷ್ಠ 40 ಜನರನ್ನು ಕಚ್ಚಿದ್ದು, ರೇಬೀಸ್ ವಿರುದ್ಧ ಲಸಿಕೆ ಪಡೆಯಲು ಸಂತ್ರಸ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ...

ಇರಾನ್‌ಗೆ ಶಸ್ತ್ರಾಸ್ತ್ರ ಕಳುಹಿಸುವುದಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಿರಾಕರಿಸಿದ್ದಾರೆ: ಡೊನಾಲ್ಡ್‌ ಟ್ರಂಪ್

"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿರಾಕರಿಸಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಚೀನಾ ಇರಾನ್‌ಗೆ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳ ನಂತರ ಅಮೆರಿಕದ...

‘ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು’: ಮಾಯಾವತಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಉದ್ದೇಶಿತ ಶೇಕಡಾ 33ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಬೇಕೆಂದು ಬಹುಜನ ಸಮಾಜ...

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...

ಉತ್ತರ ಪ್ರದೇಶ| ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೋಳಿ ಹಬ್ಬದಂದು ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಮೂವರು ಯುವಕರ...

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...