Homeಅಂಕಣಗಳುಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

ಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

- Advertisement -
- Advertisement -
  1. ಗಡಿ

ಛೇ!
ಇದು ಬರೀ ಒಂದು ಗೆರೆ ಕಣೋ
ಯಾರೋ ಸಿಟ್ಟಲ್ಲಿ ಗೀಚಿದ್ದಾರೆ ಅಷ್ಟೆ.
ಬಾ, ಬಾ ಈ ಗೆರೆಯನ್ನೇ
centre line ಮಾಡಿ ಕಬಡ್ಡಿ ಆಡೋಣ.

ನನ್ನ ಏರಿಯಾಗೆ ಬಾ, ಬಂದು
ಒಂದು ಆವಾಜ್ ಹಾಕು.
ನನ್ನ ಮೇಲೆ ಕೈ ಬೀಸು, ಮುಟ್ಟಿ
ಹಿಂದಿರುಗು ನೋಡೋಣ.

ನಾನೂ ಬಿಡೋದಿಲ್ಲ
ನಿನ್ನ ಮೇಲೆ ಬೀಳುತ್ತೇನೆ
ಕಟ್ಟಿಹಾಕುತ್ತೇನೆ ವಾಪಸ್ಸು ಹೋಗದಂತೆ.

ನನ್ನ ಪಾಳಿ ಈಗ,
ನಿನ್ನ ಏರಿಯಾಕ್ಕೆ ನಾನು
ಹು ತು ತೂ ಅನ್ನುತ್ತ ಆಕ್ರಮಣ ಮಾಡಿದಾಗ
ಸಾಧ್ಯವಾದರೆ ನನ್ನ ಹಿಡಿ
ಬಿಡಬೇಡ ವಾಪಸ್ಸು ಗಡಿ ದಾಟಲು.

ಇದು ಬರೀ ಒಂದು ಗೆರೆ ಕಣೋ
ಹಾಗೇ ಇರಲಿ ಬಿಡು
ಯಾರೋ ಸಿಟ್ಟಿನಿಂದ ಗೀಚಿದ್ದಾರೆ
ಅಷ್ಟೇ.

ಗುಲ್ಜಾರ್
ಖ್ಯಾತ ಉರ್ದು ಕವಿ – ಸಿನಿಮಾ ಸಾಹಿತಿ

*****

2. ಕಣ್ಣುಗಳಿಗೆ ವೀಸಾ ಬೇಕಿಲ್ಲ

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.
ಕಣ್ಮುಚ್ಚಿ
ಹಾರಿಬಿಡುತ್ತೇನೆ ಪ್ರತಿದಿನ
ಗಡಿಗಳ ಮಿತಿಯನ್ನು,
ಭೇಟಿಯಾಗಲು
ಮೆಹದೀ ಹಸನ್‌ನನ್ನು!

ಪೆಟ್ಟಾಗಿದೆಯಂತೆ ಅವನ ದನಿಗೇನೋ
ಕುಳಿತುಬಿಟ್ಟಿದೆಯಂತೆ ಗಜಲ್
ಅವನೆದುರು ಮೂಕವಾಗಿ
ತುಟಿ ಕಂಪಿಸುತ್ತ
ಪುಟಗಳ ನಡುವಿನ ಹೂವು
ಒಣಗಿಹೋಗಿದೆಯೆಂದರೆ
ಗೆಳೆಯ ’ಫರಾಜ್’ ಕೂಡ
ಇನ್ನಿಲ್ಲ ಎಂದೇ ಅರ್ಥ.
ಬಹುಶಃ ಇನ್ನು ಕನಸುಗಳಲ್ಲೇ
ನಮ್ಮ ಭೇಟಿ.

ಕಣ್ಮುಚ್ಚಿಕೊಂಡು ದಾಟಿಬಿಡುತ್ತೇನೆ
ಗಡಿಗಳ ಮಿತಿಯನ್ನು ಮೇಲಿಂದ ಮೇಲೆ.

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.

ಗುಲ್ಜಾರ್
ಖ್ಯಾತ ಉರ್ದು ಕವಿ- ಸಿನಿಮಾ ಸಾಹಿತಿ

*****

3. ಕಲಾವಿದನ ಸಂಕಟ

ಹಿಂದುಸ್ತಾನ್ ಜಿಂದಾಬಾದ್
ಪಾಕಿಸ್ತಾನ್ ಜಿಂದಾಬಾದ್
ಎಂದು ಕೂಗುತ್ತ, ಚೀರುತ್ತ ಸಾಗಿರುವ
ಘೋಷಣೆಗಳ ನಡುವೆ
ಬೇಕಾದಷ್ಟು ಪ್ರಶ್ನೆಗಳಿದ್ದವು.

ಯಾವುದನ್ನ ನನ್ನ ದೇಶ ಅಂತ ಹೇಳಲಿ?
ಜನ ಯಾಕೆ ಹೀಗೆ ಒಬ್ಬರಾದ ಮೇಲೊಬ್ಬರು ಸಾಯುತ್ತಿದ್ದಾರೆ?

ಈ ಪ್ರಶ್ನೆಗಳಿಗೆ ಕೆಲವು ನಿರ್ದಿಷ್ಟ ಉತ್ತರಗಳಿವೆ
ಕೆಲವು ಹಿಂದುಸ್ತಾನಿ ಉತ್ತರಗಳು
ಕೆಲವು ಪಾಕಿಸ್ತಾನಿ ಉತ್ತರಗಳು
ಕೆಲವು ಹಿಂದೂ ಉತ್ತರಗಳು
ಕೆಲವು ಮುಸ್ಲಿಂ ಉತ್ತರಗಳು
ಕೆಲವರು ಉತ್ತರಗಳನ್ನ 1857ರ ಪಾಳುಬಿದ್ದ ಇತಿಹಾಸದಲ್ಲಿ ಹುಡುಕಿದರೆ
ಇನ್ನೂ ಕೆಲವರು ಮೊಘಲ್ ಆಡಳಿತದ ಅವಶೇಷಗಳಲ್ಲಿ.

ಎಲ್ಲ ಹಿಂದೆ ಹೋಗಿ ಹುಡುಕುತ್ತಿದ್ದಾರೆ
ಆದರೆ ಇವತ್ತಿನ ಕೊಲೆಗಾರ
ರಕ್ತ ಮತ್ತು ಚೂರಿಗಳಿಂದ ಭವಿಷ್ಯ ಬರೆಯುತ್ತಿದ್ದಾನೆ

ಈ ಸುದ್ದಿ ಹೇಳುತ್ತ ಹೇಳುತ್ತ
ನಾನು ನಿಮ್ಮ ಕಲ್ಲೇಟುಗಳನ್ನ ಬೇಕಾದರೆ ಸಹಿಸಬಲ್ಲೆ
ಆದರೆ ಹಿಂದೂ-ಮುಸ್ಲಿಂ ದಂಗೆಯಲ್ಲಿ
ಯಾರಾದರೂ ನನ್ನ ತಲೆ ಒಡೆದರೆ
ನನ್ನ ರಕ್ತದ ಪ್ರತಿ ಹನಿಯೂ ಕಣ್ಣೀರಿನಲ್ಲಿ ಕೈ ತೊಳೆಯುತ್ತದೆ.

ನಾನೊಬ್ಬ ಕಲಾವಿದ
ನನಗೆ ದುಷ್ಟ ಗಾಯಗಳು ಮತ್ತು
ಕೊಳಕು ಕಲೆಗಳು ಇಷ್ಟವಿಲ್ಲ.

ಸಾದತ್ ಹಸನ್ ಮಂಟೋ
ಉರ್ದುವಿನಲ್ಲಿ ಬರೆಯುತ್ತಿದ್ದ ಖ್ಯಾತ ಕಥೆಗಾರ

*****

4. ಪ್ರೇಮದ ಪಾತ್ರ

ನಮ್ಮ ಈ ದೇಶದಲ್ಲಿ
ಎಷ್ಟೋ ಶತಮಾನಗಳ ನಂತರ
ನಮಗೆ ಸಾಧ್ಯವಾಗಿದೆ ಉಸಿರಾಡಲು,
ಎಷ್ಟೋ ದಶಕಗಳಾದ ಮೇಲೆ
ಅವಕಾಶ ದೊರೆತಿದೆ ಪ್ರೇಮಿಸಲು,
ಎಷ್ಟೋ ಸಮಯವಾದ ಮೇಲೆ
ಶುರು ಮಾಡಿದ್ದೇವೆ ಓದಲು, ಬರೆಯಲು.

ಈಗ ನಾವು ರೂಪಿಸಬೇಕಾಗಿದೆ
ನಮ್ಮ ಪ್ರೇಮ ಪದ್ಯಗಳಲ್ಲಿ
ಬಂಡಾಯದ ರೂಪಕಗಳನ್ನು

ಪ್ರೇಮ ತಾನೇ ಸ್ವತಃ
ಎದ್ದು ನಿಂತು ವಹಿಸಬೇಕಾಗಿದೆ
ಬಂಡಾಯದ ಪಾತ್ರ.

ಯೋಗೇಶ ಮೈತ್ರೇಯ
ಮರಾಠಿ ಯುವ ಕವಿ ಮತ್ತು ವಿಮರ್ಶಕ

*****

5. ಶಿಕ್ಷೆಯ ಅಗತ್ಯವಿಲ್ಲ

ಇನ್ನೊಬ್ಬರಿಂದ
ನಿಮಗೆ ನೋವಾಗುತ್ತಿದೆಯೆಂದರೆ
ಆ ಇನ್ನೊಬ್ಬರು ತಮ್ಮೊಳಗೆ
ಅನುಭವಿಸುತ್ತಿದ್ದಾರೆ ಆಳವಾದ ಸಂಕಟ,
ಮತ್ತು ಉಕ್ಕಿ ಹರಿಯುತ್ತಿದೆ.
ಅವರ ಈ ನೋವು

ನಿಮ್ಮ ಶಿಕ್ಷೆಯ ಅಗತ್ಯವಿಲ್ಲ ಅವರಿಗೆ
ಬೇಕಾಗಿದೆ ನಿಮ್ಮ ಸಹಾಯ
ಈ ಸಂದೇಶವನ್ನೇ ಅಲ್ಲವೆ
ಅವರು ತಲುಪಿಸಲು ಪ್ರಯತ್ನಿಸುತ್ತಿರುವುದು
ನಿಮಗೆ.

ತಿಚ್ ನ್ಹಾತ್ ಹಾನ್
ಬೌದ್ಧ ಚಿಂತಕ-ಬರಹಗಾರ

*****

6. ಹೃದಯದ ಬಾಗಿಲು

ಯಾರನ್ನ ವೈರಿ ಎಂದು ಗುರುತಿಸಲಿ?
ವೈರಿ ಎಂದಮೇಲೆ ಕೈ ಕೈ ಮಿಲಾಯಿಸಲು ತಕ್ಕವನಾಗಿರಬೇಕು.
ಸೂರ್ಯನ ದಿಕ್ಕಿಗೆ ಹೊರಳಿ ಒಂದೇ ಸವನೇ ನಡೆಯುತ್ತಿದ್ದೇನೆ.
ಈಗ ಪ್ರಶ್ನೆ ಕೇಳುತ್ತಿರುವುದು ಹೃದಯ,
ಉದ್ರಿಕ್ತ ಮನಸ್ಸಲ್ಲ.
ಹೃದಯ ಮತ್ತು ಸೂರ್ಯನ ಅಮ್ಮಂದಿರು
ಖಾಸಾ ಅಕ್ಕ ತಂಗಿಯರು.
ಹೃದಯಕ್ಕೆ ನೋಡುವುದೂ ಗೊತ್ತು
ನೋಡಿದ್ದಕ್ಕೆ ಅರ್ಥ ಹಚ್ಚುವುದೂ ಗೊತ್ತು.
ಹೃದಯ,
ಕಟಕಟ ಎನ್ನುತ್ತಿರುವ ಹಲ್ಲುಗಳ ಸಿಟ್ಟಿನ ಕಥೆಯನ್ನು
ಎಷ್ಟು ಸೂಕ್ಷ್ಮವಾಗಿ
ಅರ್ಥಮಾಡಿಕೊಳ್ಳುತ್ತದೆಯೋ
ಅಷ್ಟೇ ಸೂಕ್ಷ್ಮವಾಗಿ
ಮನದಲ್ಲಿಯೇ ಅಂದುಕೊಂಡ ಹಾರೈಕೆಯನ್ನೂ ಕೇಳಿಸಿಕೊಳ್ಳಬಲ್ಲದು.

ಮನಸ್ಸಿನ ಬಾಗಿಲು
ಹೃದಯದ ಮೂಲಕವೇ ತೆರೆದುಕೊಳ್ಳಬೇಕು,
ಯಾವ ವೈರಿ ಒಳಗೆ ನುಗ್ಗಿದರೂ
ಗೆಳೆಯನಾಗುವ ಅಪಾಯವನ್ನು ದಾಟಿಯೇ
ಮುಂದೆ ಹೋಗಬೇಕು.

ಜಾಯ್ ಹಾಜೊ
ಅಮೆರಿಕನ್ ಕವಿ-ಸಂಗೀತಕಾರ್ತಿ

*****

7. ಭಗವಂತನ ಪವಿತ್ರ ಯೋಜನೆ

ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.

ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.

ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,

ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ

ಶಮ್ಸ್ ತಬ್ರೀಝೀ
12 ನೇ ಶತಮಾನದ ಪರ್ಶಿಯನ್ ಕವಿ

*****

8. ಭಗವಂತನಿಂದ

ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ, ಬೌದ್ಧ
ಎಂದೆಲ್ಲ ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ
ಎಷ್ಟು ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ ಎಂದುಕೊಳ್ಳಲೂ
ಭಯವಾಗುತ್ತದೆ.

ಪ್ರೇಮ ನನ್ನನ್ನು
ಎಷ್ಟು ಅಲುಗಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ, ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.

ಹಾಫಿಜ್
14ನೇ ಶತಮಾನದ ಪರ್ಶಿಯನ್ ಕವಿ

ಚಿದಂಬರ ನರೇಂದ್ರ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಕವಿ-ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಚಿದಂಬರ ಅನುವಾದಿಸಿರುವ ಕವನ ಸಂಕಲನ. ’ಗಾಳಿಕೆನೆ’ ಅವರ ಸ್ವತಂತ್ರ ಕವಿತೆಗಳ ಸಂಕಲನ


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...