Homeಮುಖಪುಟಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ...

ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ

‘ಮಾತಿಂದ ಮಾವಿನ ಕಾಯಿ ಉದುರುವುದಿಲ್ಲ’. ಶ್ರಮಜೀವಿಗಳನ್ನು ಈ ಸಂಕಟದಿಂದ ಕಾಪಾಡಲು ಸರ್ಕಾರದ ಕಡೆಯಿಂದ ಬದ್ಧತೆಯಿಂದ ಕೂಡಿದ ದಿಟ್ಟ ಕ್ರಮ ಆಗತ್ಯ. ಹಾಗಾಗಿ ಅತಿ ಶ್ರೀಮಂತರಿಗೆ ಅವರ ಸಂಪತ್ತಿನ ಮೇಲೆ ಶೇ.2ರಷ್ಟು ತುರ್ತು ‘ಕೊರೋನಾ ತೆರಿಗೆ’ಯನ್ನು ವಿಧಿಸಬೇಕು,

- Advertisement -
- Advertisement -

ಲಾಕ್‌ಡೌನ್‌ನಿಂದ ಉಂಟಾಗಿರುವ ಭಾರೀ ನಷ್ಟವನ್ನು ಭರಿಸಲು, ಆರ್ಥಿಕತೆ ಚೇತರಿಸಿಕೊಳ್ಳಲು ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಬಿಡುಗಡೆ ಮಾಡಿದ ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ತಿಳಿಸಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇಂದು ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದ ಶ್ರಮಜೀವಿಗಳ ಮೇಲೆ ಉಂಟಾದ ಆರ್ಥಿಕ‌, ಸಾಮಾಜಿಕ, ರಾಜಕೀಯ ಪರಿಣಾಮಗಳನ್ನು ಬಿಚ್ಚಿಡುವ ಅಧ್ಯಯನ ವರದಿ ಬಿಡುಗಡೆಯಾಗಿದೆ. ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಅಲೆಮಾರಿ, ಆದಿವಾಸಿ ಸಮುದಾಯವಿರುವಲ್ಲಿಯೇ ವರದಿ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

ಹಕ್ಕಿ ಪಿಕ್ಕಿ ಸಮುದಾಯದ ಮುಖಂಡರಾದ ರೈಸ್‌ರವರು‌ ಮಾತನಾಡಿ “ನಮ್ಮ ಜೀವನ ಮೊದಲೇ ನಿಕೃಷ್ಟವಾಗಿತ್ತು. ಈಗ ಇರುವ ಲಾಕ್‌ಡೌನ್‌ನಿಂದಾಗಿ ಇನ್ನು ಹದಗೆಟ್ಟಿದೆ. ಸಮರ್ಪಕ ಮನೆಗಳಿಲ್ಲದ ನಮಗೆ ಬಹಳ ತೊಂದರೆಯಾಗಿದೆ. ಮಳೆ ಶುರುವಾಗಿ ನಮ್ಮ ಜನರೆಲ್ಲರೂ ನೆನಯುತ್ತಿರುವಾಗ ತಾಲ್ಲೂಕು ಆಡಳಿತದ ಬಳಿ ಕನಿಷ್ಠ ಟಾರ್ಪಲ್‌ ಕೊಡಿಸಿ ಎಂದು ಸಹಾಯ ಕೇಳಿದರೆ ಆರ್‌ಟಿಸಿ ಕೇಳುತ್ತಾರೆ. ಮನೆಯೇ ಇಲ್ಲದ ನಾವು ಆರ್‌ಟಿಸಿ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ್ದಾರೆ. ಕಷ್ಟಗಳು ನಮಗೆ ಹೊಸದಲ್ಲ, ಆದರೆ ಈ ರೀತಿ ದುಡಿದು ಬದುಕಲು ಸಾಧ್ಯವಿಲ್ಲ ಎಂದಾದಮೇಲೆ ಬದುಕಿದ್ದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

#ಶ್ರಮಜೀವಿಗಳ_ಲಾಕ್ಡೌನ್#ಅಧ್ಯಯನವರದಿ_ಬಿಡುಗಡೆ#ಕರ್ನಾಟಕ_ಜನಶಕ್ತಿ#ಹಕ್ಕಿಪಿಕ್ಕಿ_ಅಲೆಮಾರಿ_ಸಮುದಾಯದವರಿಂದ#ಶ್ರೀರಂಗಪಟ್ಟಣ_ಮಂಡ್ಯ

Posted by Karnataka janashakthi ಕರ್ನಾಟಕ ಜನಶಕ್ತಿ on Wednesday, June 3, 2020

ಶೇ.59.9 ರಷ್ಟು ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಶೇ.79 ಮಂದು ಲಾಕ್‌ಡೌನ್‌ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಒದ್ದಾಡಿದ್ದಾರೆ. ಶೇ.92 ರಷ್ಟು ಮಂದಿಗೆ ಆರೋಗ್ಯ ತಪಾಸಣೆ ಮಾಡಿಸಲು ಸಾಧ್ಯವಾಗಿಲ್ಲ. ಶೇ.73 ರಷ್ಟು ರೈತರು ತಮ್ಮ ಬೆಳೆಯನ್ನು ನಷ್ಟಕ್ಕೆ ಮಾರಿದ್ದಾರೆ. ಶೇ.95 ಆದಿವಾಸಿಗಳಿಗೆ ಈ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಅಧ್ಯಯನ ವರದಿಯು ಎತ್ತಿತೋರಿಸಿದೆ.

‘ಮಾತಿಂದ ಮಾವಿನ ಕಾಯಿ ಉದುರುವುದಿಲ್ಲ’. ಶ್ರಮಜೀವಿಗಳನ್ನು ಈ ಸಂಕಟದಿಂದ ಕಾಪಾಡಲು ಸರ್ಕಾರದ ಕಡೆಯಿಂದ ಬದ್ಧತೆಯಿಂದ ಕೂಡಿದ ದಿಟ್ಟ ಕ್ರಮ ಆಗತ್ಯ. ಹಾಗಾಗಿ ಅತಿ ಶ್ರೀಮಂತರಿಗೆ ಅವರ ಸಂಪತ್ತಿನ ಮೇಲೆ ಶೇ.2ರಷ್ಟು ತುರ್ತು ‘ಕೊರೋನಾ ತೆರಿಗೆ’ಯನ್ನು ವಿಧಿಸಬೇಕು ಎಂದು ಅಧ್ಯಯನ ವರದಿಯ ಶಿಫಾರಸ್ಸುಗಳಲ್ಲಿ ತಿಳಿಸಲಾಗಿದೆ.

ಜೀವನಾವಶ್ಯಕ ಕನಿಷ್ಟ ಮೊತ್ತದ ನೇರ ಹಣ ವರ್ಗಾವಣೆಯನ್ನು ದೇಶದ ಎಲ್ಲ, ಶ್ರಮಜೀವಿಗಳಿಗೆ ಬಿಪಿಎಲ್ ಕಾರ್ಡುದಾರರ ಅಕೌಂಟುಗಳಿಗೆ ಮಾಡಬೇಕು ಆಗ ಮಾತ್ರವೇ ಅವರ ಚೇತರಿಸಿಕೊಳ್ಳಲು ಸಾಧ್ಯ ಎಂದು ಅಧ್ಯಯನ ವರದಿ ಒತ್ತಾಯಿಸಿದೆ.

ಸರ್ಕಾರಕ್ಕೆ ಇತರ ಪ್ರಮುಖ ಶಿಫಾರಸ್ಸುಗಳು

  1. ಪಡಿತರ ಹಂಚಿಕೆಯ ವ್ಯವಸ್ಥೆಯ ಮೂಲಕ ಕೇವಲ ಅಕ್ಕಿ/ಗೋಧಿ ಮಾತ್ರವಲ್ಲದೆ ಜೀವನಾವಶ್ಯಕ ಆಹಾರ ಸಾಮಗ್ರಿಗಳನ್ನು ವಿತರಿಸುವ ತುರ್ತು ಕ್ರಮವನ್ನು ಕೈಗೊಳ್ಳಬೇಕು.
  2. ರೇಷನ್ ಕಾರ್ಡ್‌ಗಳಿಲ್ಲದ ಜನರಿಗೂ ಮತ್ತು ವಲಸೆ ಕಾರ್ಮಿಕರಿಗೂ ಆಹಾರ ಧಾನ್ಯಗಳ ಕೊರತೆಯಾಗದಂತೆ ತಾತ್ಕಾಲಿಕ ಪಡಿತರ ಗುರುತಿನ ಚೀಟಿಗಳ ವ್ಯವಸ್ಥೆ ಆಗಬೇಕು.
  3. 2 ತಿಂಗಳು ದುಡಿಮೆಯಿಲ್ಲದೆ ಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳು, ಟ್ಯಾಕ್ಸಿ-ಕ್ಯಾಬ್ ಡ್ರೈವರ್‌ಗಳು, ಆಟೋ ಚಾಲಕರು ಮತ್ತು ಸಣ್ಣ ಪುಟ್ಟ ಉದ್ದಿಮೆಗಳ ಉದ್ಯೋಗಸ್ಥರಿಗೆ ಸಹಾಯಧನವನ್ನು ಈ ಕೂಡಲೇ ನೀಡಬೇಕು.
  4. ಬಡವರು ಮತ್ತು ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಅಗತ್ಯವಿರುವಷ್ಟು ಆರೋಗ್ಯ ಸಲಕರಣೆಗಳ ಪೂರೈಕೆಗೆ ಈಗಲೇ ಕ್ರಮ ಕೈಗೊಳ್ಳಬೇಕು
  5. ಲಾಕ್‌ಡೌನ್ ಹೊತ್ತಿಗೆ ತಾತ್ಕಾಲಿಕವಾಗಿ ಹೇರಿದ್ದ ಮದ್ಯನಿಷೇಧವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಂದುವರಿಯಬಹುದಾಗಿದ್ದ ಸರ್ಕಾರ ಅದರ ಬದಲಿಗೆ, ಲಾಕ್‌ಡೌನ್ ನಡುವೆಯೇ, ಕೊರೊನಾ ಅಪಾಯವಿದ್ದಾಗಲೂ ಮದ್ಯ ಮಾರಾಟ ಆರಂಭಿಸಿತು. ಇದನ್ನು ನಿಲ್ಲಿಸಬೇಕು. ಸಂಪೂರ್ಣ ಮದ್ಯನಿಷೇಧದ ಕಡೆಗೆ ವೈಜ್ಞಾನಿಕವಾದಂತಹ ರೀತಿಯಲ್ಲಿ ಮುಂದಡಿಯಿಡಲು ಇರುವ ಅವಕಾಶಗಳ ಬಗ್ಗೆ ಹೋರಾಟಗಾರರು ಮತ್ತು ಪರಿಣತರೊಂದಿಗೆ ಚರ್ಚಿಸಿ, ಮುಂದುವರೆಯಬೇಕು.
  6. ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ವಿಶೇಷ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು: ನರೇಗಾ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು.
  7. ‘ನಗರ ಉದ್ಯೋಗ ಖಾತರಿ ಯೋಜನೆ’ಯನ್ನು ಜಾರಿಗೆ ತರಬೇಕು.
  8. ವಲಸೆ ಕಾರ್ಮಿಕರ ಸರ್ವೇ ಮತ್ತು ದಾಖಲಾತಿ ನಡೆಯಬೇಕು.
  9. ಸಣ್ಣ-ಮಧ್ಯಮ ಉದ್ದಿಮೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಅಧ್ಯಯನ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಚಂದ್ರಶೇಖರ್‌, ವರದರಾಜು, ಜ್ಯೋತಿ ಮುಂತಾದವರು ಭಾಗವಹಿಸಿದ್ದರು.


ಇದನ್ನೂ ಓದಿ: ಲಾಕ್‌ಡೌನ್‌ ಶ್ರಮಜೀವಿಗಳ ಬದುಕನ್ನು ದುಸ್ತರಗೊಳಿಸಿದೆ: ಬಡಜನರ ಸ್ಥಿತಿಗತಿ ಬಿಚ್ಚಿಟ್ಟ ಜನಶಕ್ತಿಯ ಅಧ್ಯಯನ ವರದಿ


Also Read: COVID-19: How Effective is the lockdown in India?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....