Homeಕರ್ನಾಟಕನಟಿಯರ ವಿರುದ್ಧ ನಿಂದನಾತ್ಮಕ ಸುದ್ದಿ: ‘ಸುವರ್ಣ’ ಚಾನೆಲ್‌ ವಿರುದ್ಧ ಜನಾಕ್ರೋಶ

ನಟಿಯರ ವಿರುದ್ಧ ನಿಂದನಾತ್ಮಕ ಸುದ್ದಿ: ‘ಸುವರ್ಣ’ ಚಾನೆಲ್‌ ವಿರುದ್ಧ ಜನಾಕ್ರೋಶ

- Advertisement -
- Advertisement -

ಸುವರ್ಣ ಚಾನೆಲ್‌ನ ಸುದ್ದಿ ವೆಬ್‌ಸೈಟ್‌ನಲ್ಲಿ ಮಹಿಳೆಯರ ಕುರಿತು ಬರುತ್ತಿರುವ ನಿಂದನಾತ್ಮಕ ಸುದ್ದಿಗಳಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಟಿ ಸಂಜನಾ ಗಲ್ರಾನಿಯವರು ಸುವರ್ಣ ವಾಹಿನಿಗೆ ಕರೆ ಮಾಡಿ ಛೀ ಮಾರಿ ಹಾಕಿದ್ದರು. ಆಕ್ಷೇಪಾರ್ಹ ಸುದ್ದಿಗಳನ್ನು, ಊಹಾಪೋಹಗಳನ್ನು ಸುವರ್ಣ ಸುದ್ದಿ ವಾಹಿನಿ ಹರಡುತ್ತಿದೆ ಎಂದು ಆರೋಪಿಸಿದ್ದರು. ‘ಇನ್ನು ಮುಂದೆ ಸಂಜನಾ ಅವರಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡುವುದಿಲ್ಲ” ಎಂದು ಸವರ್ಣ ವಾಹಿನಿಯ ಸಿಬ್ಬಂದಿ ಸ್ಪಷ್ಟಪಡಿಸಿದ್ದರು. ಇಷ್ಟೆಲ್ಲ ಆದ ಮೇಲೂ ಸುವರ್ಣ ವೆಬ್‌ಸೈಟ್‌ನಲ್ಲಿ ನಟಿಯರ ಕುರಿತು, ಮಹಿಳೆಯರ ಕುರಿತು ಬರುತ್ತಿರುವ ತೃತೀಯ ದರ್ಜೆಯ ಸುದ್ದಿಗಳು ನಿಂತಿಲ್ಲ.

 ಇದನ್ನೂ ಓದಿರಿ:  ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

“ವಿಚ್ಛೇದನಾ ನಂತರ ಸಮಂತಾ ಗರ್ಭಿಣಿ; ಅಭಿಮಾನಿಗಳು ಶಾಕ್‌” ಎಂದು ಸವರ್ಣ ಇತ್ತೀಚೆಗೆ ವರದಿ ಮಾಡಿತ್ತು. ಅದಕ್ಕಿಂತ ಮತ್ತಷ್ಟು ವಿಕೃತವಾಗಿ ಮತ್ತೊಂದು ವರದಿ ಮಾಡಲಾಗಿದೆ. “ಬ್ರಾ ಧರಿಸದ ಮಲೈಕಾ ಮಾರ್ನಿಂಗ್ ವಾಕ್‌, ಕಾಲೆಳೆದ ನೆಟ್ಟಿಗರು” ಎಂದು ಹೆಲ್‌ಲೈನ್‌ನೊಂದಿಗೆ ಮಾಡಿರುವ ವರದಿ ಜನಾಕ್ರೊಶಕ್ಕೆ ಕಾರಣವಾಗಿದೆ.

ಚಿಂತಕ ನಾ.ದಿವಾಕರ್‌ ಅವರು ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಮಾಡಿ, ಸುದ್ದಿ ವಾಹಿನಿಗಳ ನೈತಿಕ ಅಧಃಪಥನವನ್ನು ಪ್ರಶ್ನಿಸಿದ್ದಾರೆ.

“ಕೆಲವು ದಶಕಗಳ ಹಿಂದೆ ಪತ್ರಿಕಾ ರಂಗ ಇನ್ನೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದ್ದ ಕಾಲದಲ್ಲಿ, ಮಾಧ್ಯಮಗಳು ಮಾರುಕಟ್ಟೆಯ ಸರಕುಗಳನ್ನು ಮಾರಾಟ ಮಾಡುವ ಜಗುಲಿ ಕಟ್ಟೆಗಳಾಗಿಲ್ಲದಿದ್ದ ಕಾಲದಲ್ಲಿ, ಪತ್ರಿಕಾ ರಂಗ ಮತ್ತು ಮಾಧ್ಯಮಗಳಲ್ಲಿ ನೈತಿಕತೆ ಕೊಂಚ ಮಟ್ಟಿಗೆ ಕಾಣಬಹುದಾಗಿದ್ದ ಕಾಲದಲ್ಲಿ, ರತಿ ವಿಜ್ಞಾನ ಮುಂತಾದ ಅದೇ ತೆರನಾದ ಅಶ್ಲೀಲ ಪತ್ರಿಕೆಗಳು ಮಾರುಕಟ್ಟೆಗೆ ದಾಳಿ ಇಟ್ಟಿದ್ದವು. ಕೀಳು ಮಟ್ಟದ ಅಶ್ಲೀಲತೆ ಮತ್ತು ಅಸಭ್ಯ ಭಾಷೆಯ ಮೂಲಕ ಪಡ್ಡೆ ಹುಡುಗರನ್ನು ಆಕರ್ಷಿಸುತ್ತಿದ್ದ ಪತ್ರಿಕೆಗಳಿವು. ಅಯ್ಯೋ, ಪತ್ರಿಕಾರಂಗ ನೈತಿಕವಾಗಿ ಅಧೋಗತಿಗಿಳಿಯುತಿದೆ ಎಂಬ ಮಾತುಗಳು ಸಹಜವಾಗಿಯೇ ಕೇಳಿಬರುತ್ತಿದ್ದವು. ಆಗಲೂ ಸಹ ಮುಖ್ಯವಾಹಿನಿಯ ಪತ್ರಿಕೆಗಳು ತಮ್ಮ ಘನತೆ ಉಳಿಸಿಕೊಂಡು ಬಂದಿದ್ದವು” ಎಂದು ಅವರು ಹೇಳಿದ್ದಾರೆ.

ಮುಂದುವರಿದು, “ಈಗ, ಡಿಜಿಟಲ್ ವಿದ್ಯುನ್ಮಾನ ಯುಗದಲ್ಲಿ ಮಾಧ್ಯಮಗಳೇ ಮಾರಾಟವಾಗಿ‌ ಮಾರುಕಟ್ಟೆಯ ಜಾಹೀರಾತು ಜಗುಲಿಗಳಾಗಿಬಿಟ್ಟಿವೆ. ವ್ಯತ್ಯಾಸ ಎಂದರೆ ಮುಖ್ಯವಾಹಿನಿಯ ಮಾಧ್ಯಮಗಳೇ ರತಿವಿಜ್ಞಾನಕ್ಕಿಂತಲೂ ಕೀಳುಮಟ್ಟದ ‘ಮನರಂಜನೆ’ ಒದಗಿಸಲು ಸಜ್ಜಾಗಿಬಿಟ್ಟಿವೆ. ಇದನ್ನು ನೈತಿಕ ಅಧಃಪತನ ಎನ್ನುವುದಕ್ಕೂ ಮುಜುಗರವಾಗುತ್ತದೆ ಏಕೆಂದರೆ ಈ ವಾಹಿನಿಗಳಿಗೆ ನೈತಿಕತೆ, ಘನತೆ ಮುಂತಾದ ಪರಿಚಯವೇ ಇರಲಾರದಷ್ಟು ಮಾರಿಕೊಂಡುಬಿಟ್ಟಿವೆ. ಇನ್ನು ಇವುಗಳಿಂದ ಲಿಂಗ ಸೂಕ್ಷ್ಮತೆ, ಸ್ತ್ರೀ ಸಂವೇದನೆ , ಸಭ್ಯತೆ ಮುಂತಾದುವನ್ನು ನಿರೀಕ್ಷಿಸುವುದು ಸಾಧ್ಯವೇ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಸಾಮಾಜಿಕ ಸೌಜನ್ಯ, ಮಾನವೀಯ ಘನತೆ, ಸಾರ್ವಜನಿಕ ಸಭ್ಯತೆ ಈ ಲಕ್ಷಣಗಳೇ ಇಲ್ಲದ ಇಂತಹ ಮಾಧ್ಯಮಗಳಿಂದ, ಸುದ್ದಿವಾಹಿನಿಗಳಿಂದ ಸ್ತ್ರೀ ಸಂವೇದನೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ! ನೈತಿಕ ಅಧಃಪತನಕ್ಕೂ ಒಂದು‌ಮಿತಿ ಇರುತ್ತದೆ. ತಮ್ಮನ್ನೇ ತಾವು ಮಾರಿಕೊಳ್ಳುವುದಕ್ಕೂ ಒಂದು ಮಿತಿ ಇರುತ್ತದೆ. ಹಣಕ್ಕಾಗಿ ಎಂತಹ ಕೀಳುಮಟ್ಟಕ್ಕಿಳಿಯುವುದಕ್ಕೂ ಒಂದು ಮಿತಿ ಇರುತ್ತದೆ. ಈ ಎಲ್ಲ ಮಿತಿಗಳನ್ನೂ ಮೀರಿ ಸುವರ್ಣ ವಾಹಿನಿ ಬೆತ್ತಲಾಗಿಬಿಟ್ಟಿದೆ. ನೈತಿಕ ಅಧಃಪತನದ ಪರಾಕಾಷ್ಠೆಗೆ ಸುವರ್ಣವಾಹಿನಿ ಸಮಾನಾಂತರ ಪದವಾಗಿ ಬಳಸಬಹುದು. ಇನ್ನೇನು ಹೇಳಲು ಸಾಧ್ಯ” ಎಂದಿದ್ದಾರೆ.

ಸುವರ್ಣ ವಾಹಿನಿಯ ಫೇಸ್‌ಬುಕ್‌ ಪೇಜ್‌ನಲ್ಲಿ ಹಾಕಿರುವ ಈ ಸುದ್ದಿಗೆ ಸುಮಾರು ಐದು ನೂರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಅಲ್ಲಿ ಬಂದಿರುವ ಕೆಲವು ಕಮೆಂಟ್‌ಗಳನ್ನು ಓದಿದರೂ ಸಾಕು. ಸುವರ್ಣ ವಾಹಿನಿ ವಿರುದ್ಧ ಜನರ ಆಕ್ರೋಶ ಹೇಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿರಿ: ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ?’

“ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲ ಬರೆಯೋದಕ್ಕೆ ನಾಚಿಕೆ ಆಗಲ್ವ? ನಿಮ್ಮ ಅಕ್ಕಾ ತಂಗೀರ ವಿಚಾರದಲ್ಲಿ ಕೂಡಾ ಹೀಗೇ ಆಡ್ತೀರಾ?” ಎಂದು ಸಮೀರ್‌ ಎಂಬವರು ಪ್ರಶ್ನಿಸಿದ್ದಾರೆ.

“ಯಾವಾಗ ನೋಡಿದ್ರೂ ನೆಟ್ಟಿಗರು ನೆಟ್ಟಿಗರು ಅಂತೀರಾ. ಯಾರ್ರಪ್ಪ ಅವ್ರು, ಅಷ್ಟೊಂದು ನೆಟ್ಟಗೆ ಇರೋವ್ರು? ನಿಮಗೆ ಬರ್ಯೋಕೆ ಬೇರೆ ವಿಷ್ಯ ಸಿಗ್ದೆ ಇದ್ರೆ ನಂಗ್ ಹೇಳಿ.. ನಮ್ಮ್ ಊರಲ್ಲಿ, ನಮ್ಮ್ ತಾಲೂಕ್ ಅಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ದಿನ ಪಬ್ಲಿಶ್ ಮಾಡಿ. ಲಜ್ಜೆಗೇಡಿ ರಾಜಕೀಯ ನಾಯಕ್ರುಗಳಿಗೆ ತಿಳ್ಸಿದಾಗೆ ಆಗುತ್ತೆ” ಎಂದು ಎ.ಆರ್‌.ಅನಿತಾ ಎಂಬವರು ಕಮೆಂಟ್ ಮಾಡಿದ್ದಾರೆ.

“ಇದು ವೈಯಕ್ತಿಕವಾದ ವಿಚಾರ. ಇದನ್ನು ಮಾಧ್ಯಮದಲ್ಲಿ ತೋರಿಸುವುದು ನಿಮ್ಮ ನಾಚಿಕೆಗೇಡಿನ ಕೆಲಸ. ಮಹಿಳೆಯರ ಸಮಸ್ಯೆಗಳು ಇರುವುದರಿಂದ ಕೆಲವರು ಒಳಉಡುಪಿನಿಂದ ದೂರ ಸರಿಯುತ್ತಾರೆ ಅದರಲ್ಲಿ ತಪ್ಪೇನಿದೆ?” ಎಂದು ಉಷಾ ಎಂಬವರು ಪ್ರಶ್ನಿಸಿದ್ದಾರೆ.

“ಡಿಯರ್ ಸುವರ್ಣ ವೆಬ್, ಈಚೆಗಷ್ಟೇ ಸಂಜನಾ ಅವರಿಂದ ಮಂಗಳಾರತಿ ಮಾಡಿಸಿಕೊಂಡದ್ದು ಸಾಲಲಿಲ್ಲವೇ? ಅವರು ಯಾವ ಬಟ್ಟೆ ಹಾಕೊಂಡು ವಾಕಿಂಗ್ ಹೋದ್ರೆ ನಿಮಗೇನು? ನಿವೇನಾದರೂ ಕೊಡಿಸುತ್ತಿದ್ದಾರಾ? ಇಂತಹ ವಿಷಯಗಳಲ್ಲಿರುವ ಆಸಕ್ತಿಯನ್ನು ನೊಂದವರ ಪರವಾಗಿ ತೋರಿಸಿ, ಜನ ಕೈಮುಗಿಯುತ್ತಾರೆ…” ಎಂದು ಮೈಸೂರು ನಿವಾಸಿಯೊಬ್ಬರು ಕೋರಿದ್ದಾರೆ.

“ನಿಮ್ಮಂತ ಹಲ್ಕೆಟ್ ಮಾಧ್ಯಮಗಳಿಂದ ಎಲ್ಲಾ, ಮಾಧ್ಯಮಗಳಿಗೂ ಕೆಟ್ಟ ಹೆಸರು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡ್ರಪ್ಪ ಅಂದ್ರೆ ನಿಮ್ಮಗಳ ಯೋಗ್ಯತೆ ತೋರ್ಸೋ ಪೋಸ್ಟ್ ಹಾಕ್ತಿರಲ್ಲ” ಎಂದು ಕವಯತ್ರಿ ಸೌಮ್ಯಾ ಹೆಗ್ಗಡಹಳ್ಳಿ ಬುದ್ಧಿ ಹೇಳಿದ್ದಾರೆ.


ಇದನ್ನೂ ಓದಿರಿ: ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...