Homeಮುಖಪುಟಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌...

ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ?’

- Advertisement -
- Advertisement -

ಬುಧವಾರದಂದು ಪ್ರಧಾನಿ ಮೋದಿ ಪಂಜಾಬ್‌ಗೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಉಂಟಾದ ಭದ್ರತಾ ಲೋಪ ಪ್ರಕರಣದ ಹಿನ್ನಲೆಯಲ್ಲಿ, ಕನ್ನಡದ ಸುದ್ದಿ ವಾಹಿನಿ ‘ನ್ಯೂಸ್‌ ಫಸ್ಟ್‌ ಕನ್ನಡ’ ಸುದ್ದಿಯೊಂದನ್ನು ಮಾಡಿದೆ. ಒಂದು ವರ್ಷ ಹಿಂದೆಯೆ ಪ್ರಧಾನಿಯ ಕೊಲೆಗೆ ಸಂಚು ನಡೆದಿತ್ತೆ? ಎಂದು ಪ್ರಶ್ನಿಸಿ ಊಹಾಪೋಹಗಳ ಮೇಲೆ ವರದಿಯೊಂದನ್ನು ಶುಕ್ರವಾರ ಬಿತ್ತರಿಸಿದೆ.

‘ನ್ಯೂಸ್‌ ಫಸ್ಟ್‌ ಕನ್ನಡ’ ತನ್ನ ಸುದ್ದಿಯನ್ನು ಒಂದೂವರೆ ವರ್ಷದ ಹಳೆಯ ಅನಿಮೇಷನ್‌ ವಿಡಿಯೊ ಹಾಡಿನ ಆಧಾರದ ಮೇಲೆ ಮಾಡಿದೆ ಎಂಬುವುದು ವಿಶೇಷವಾಗಿದೆ. ಮಾಧ್ಯಮವು ತಾನು ಮಾಡಿದ ಸುದ್ದಿಯನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದೆ.

ಇದನ್ನೂ ಓದಿ:ಪಂಜಾಬ್‌ ಭದ್ರತಾ ಲೋಪ ಆರೋಪ: 100 ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ಎಫ್‌ಐಆರ್

ಒಟ್ಟು 13:19 ಸೆಕೆಂಡ್‌ ಈ ವಿಡಿಯೊ ಸುದ್ದಿ ಇದ್ದು, ಆಂಕರ್‌ಗಳು ‘ಪ್ರಧಾನಿ ಮೇಲೆ ದಾಳಿಗೆ 2020 ರಲ್ಲೇ ಸಂಚು ನಡೆದಿತ್ತಾ?’ ಎಂದು ಪ್ರಶ್ನಿಸುತ್ತಲೇ ಪ್ರಾರಂಭಿಸುತ್ತಾರೆ. ನಂತರ ‘ಮೋದಿ ಮೇಲೆ ದಾಳಿ ಸಂಚಿನ ಸ್ಪೋಟಕ ವಿಡಿಯೊ ಬಹಿರಂಗ’, ‘ಫಿರೋಜ್‌ಪುರ ಬ್ರಿಡ್ಜ್‌ ಮೇಲೆ ದಾಳಿಗೆ ಮಾಡಿದ್ರಾ ಪ್ಲಾನ್?’, ‘ದಾಳಿಗೆ ರೂಪಿಸಿದ್ದ ಅನಿಮೇಷನ್‌ ವಿಡಿಯೊ’, ‘1 ನಿಮಿಷ 7 ಸೆಕೆಂಡ್‌‌ನ ಅನಿಮೇಷನ್‌ ವಿಡಿಯೊ’, ‘2020 ರ ಡಿಸೆಂಬರ್‌ನಲ್ಲಿ ವಿಡಿಯೊ ಬಿಡುಗಡೆ’, ‘ಘಟನೆ ನಡೆದ ಫಿರೋಝ್‌ಪುರದಿಂದಲೇ ದೃಶ್ಯ ತಯಾರಾಗಿದೆ’, ‘ಮೋದಿಯನ್ನು ಸುತ್ತುವರೆಯಲು 2020 ರಲ್ಲೇ ಪ್ರೀಪ್ಲಾನ್’ ಎಂದು ನಿರೂಪಕಿಯು ಹೇಳುತ್ತಾ, ನಂತರ ಅನಿಮೇಷನ್‌ನ ಒಂದೊಂದೇ ದೃಶ್ಯಗಳನ್ನು ತಮ್ಮ ವಿಡಿಯೊದಲ್ಲಿ ತೋರಿಸುತ್ತಾರೆ.

ವಾಸ್ತವದಲ್ಲಿ ನಿರೂಪಕಿ ಹೇಳುವ ಹಲವು ಪ್ರಮುಖ ವಿಚಾರಗಳಿಗೆ ಯಾವುದೇ ಆಧಾರ ಇಲ್ಲ. ಮೊದಲ ವಾಕ್ಯದಿಂದಲೇ ಅವುಗಳನ್ನು ಒಂದೊಂದಾಗಿ ಗಮನಿಸುತ್ತಾ ಬರೋಣ.

‘ಪ್ರಧಾನಿ ಮೇಲೆ ದಾಳಿಗೆ 2020 ರಲ್ಲೇ ಸಂಚು ನಡೆದಿತ್ತಾ?’, ‘ಫಿರೋಜ್‌ಪುರ ಬ್ರಿಡ್ಜ್‌ ಮೇಲೆ ದಾಳಿಗೆ ಮಾಡಿದ್ರಾ ಪ್ಲಾನ್?’ ಎಂದು ಪ್ರಶ್ನಿಸುತ್ತಾರೆ. ಪ್ರಧಾನಿ ಮೋದಿ ಮೇಲೆ ಯಾರಾದರೂ ದಾಳಿ ಮಾಡುವ ಸಂಚು ನಡೆಸಿದ್ದರೆ, ಅಂಥವರು ಇಷ್ಟೊತ್ತಿಗೆ ಜೈಲಲ್ಲಿ ಇರಬೇಕಾಗಿತ್ತು. ಆದರೆ ಒಂದು ವರ್ಷ ಕಳೆದು ಕೂಡಾ ಬಹಿರಂಗ ಆಗುವುದಿಲ್ಲ ಎಂದಾದರೆ, ನಮ್ಮ ದೇಶದ ಗುಪ್ತಚರ ಇಲಾಖೆ ಮೇಲೆ ಸಂಶಯ ಪಡಬೇಕಾಗುತ್ತದೆ. ಒಟ್ಟಿನಲ್ಲಿ ನಿರೂಪಕಿಯು ಇಲ್ಲಿ ಪ್ರಶ್ನೆಯೊಂದನ್ನು ವೀಕ್ಷಕರಿಗೆ ಕೇಳುತ್ತಾರೆ.

‘ಮೋದಿ ಮೇಲೆ ದಾಳಿ ಸಂಚಿನ ಸ್ಪೋಟಕ ವಿಡಿಯೊ ಬಹಿರಂಗ’ ಎಂದು ಹೇಳುವ ನಿರೂಪಕಿಯೂ ಅನಿಮೇಷನ್‌ ವಿಡಿಯೊವನ್ನು ತೋರಿಸುತ್ತಾರೆ. ಆದರೆ ಈ ವಿಡಿಯೊ ಸ್ಪೋಟಕ ವಿಡಿಯೊ ಅಲ್ಲ. ಈ ರೀತಿಯ ಹಲವಾರು ವಿಡಿಯೊಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಈ ರೀತಿಯ ರಾಜಕೀಯ ಅನಿಮೇಷನ್‌ಗಳನ್ನು ದೇಶದ ಪ್ರಮುಖ ರಾಜಕೀಯ ನಾಯಕರ ವಿರುದ್ದ ಅವರ ವಿರೋಧಿಗಳು ಮಾಡುತ್ತಲೇ ಬಂದಿದ್ದಾರೆ. ಈ ರೀತಿಯ ವಿಡಿಯೊ ಬಗ್ಗೆ ಕೆಲವರು ಆಕ್ಷೇಪಗಳನ್ನು ಎತ್ತಿದ್ದಾರೆ. ಇವುಗಳನ್ನು ರಚಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಯೆ ಇಲ್ಲವೆ ಎಂಬ ಮಾಹಿತಿ ನಾನುಗೌರಿ.ಕಾಂಗೆ ಸಿಕ್ಕಿಲ್ಲ.

ಇದನ್ನೂ ಓದಿ:ಪಂಜಾಬ್‌ ಭದ್ರತಾ ಲೋಪ ಆರೋಪ: ಹೊಸ ವಿಡಿಯೊ ವೈರಲ್ ನೊಂದಿಗೆ ಮತ್ತಷ್ಟು ಪ್ರಶ್ನೆಗಳು

‘ದಾಳಿಗೆ ರೂಪಿಸಿದ್ದ ಅನಿಮೇಷನ್‌ ವಿಡಿಯೊ’ ಎಂದು ಮಾಧ್ಯಮವೂ ನೇರವಾಗಿ ಹೇಳುತ್ತದೆ. ಆದರೆ ದಾಳಿಗೆ ಬೇಕಾಗಿ ಅನಿಮೇಷನ್ ರೂಪಿಸಲಾಗಿದೆ ಎಂದು ದೇಶದ ಯಾವುದೇ ತನಿಖಾ ಸಂಸ್ಥೆಯೂ ಹೇಳಿಕೆ ನೀಡಿಲ್ಲ. ಒಂದು ವೇಳೆ ಪ್ರಧಾನಿ ಮೇಲೆ ದಾಳಿ ಮಾಡಲು ರೂಪಿಸಿದ್ದ ಅನಿಮೇಷನ್‌ ಇದು ಎಂದು ಆಗಿದ್ದರೆ, ಒಂದು ವರ್ಷದ ಹಿಂದೆಯೆ ಸುದ್ದಿಯಾಗಿರುತ್ತಿತ್ತು. ಆದರೆ ಅಂತಹ ಯಾವುದೇ ಸುದ್ದಿ ನಮಗೆ ಲಭ್ಯವಾಗಿಲ್ಲ. ಜೊತೆಗೆ ಇದನ್ನು ರಚಿಸಿದವರು ಜೈಲಲ್ಲಿ ಇರಬೇಕಾಗಿತ್ತು.

‘1 ನಿಮಿಷ 7 ಸೆಕೆಂಡ್‌‌ನ ಅನಿಮೇಷನ್‌ ವಿಡಿಯೊ’, ‘2020 ರ ಡಿಸೆಂಬರ್‌ನಲ್ಲಿ ವಿಡಿಯೊ ಬಿಡುಗಡೆ’ ಎಂದು ನಿರೂಪಕಿ ಹೇಳುತ್ತಾರೆ. ಈ ವಿಡಿಯೊ 2020 ಡಿಸೆಂಬರ್‌ ಅಲ್ಲಿ ಅ‌ಪ್ಲೋಡ್ ಆಗಿದೆ ಎಂಬುವುದು ನಿಜವಾದರೂ, DHAKKA GAMING ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೊ 3:2 ಸೆಕೆಂಡ್‌ ಇದೆ. BP Shorts ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೊ 3:32 ಸೆಕೆಂಡ್‌ ಇದೆ.

‘ಘಟನೆ ನಡೆದ ಫಿರೋಝ್‌ಪುರದಿಂದಲೇ ದೃಶ್ಯ ತಯಾರಾಗಿದೆ’. ಈ ಹೇಳಿಕೆಗೂ ಯಾವುದೇ ಆಧಾರವನ್ನು ಮಾಧ್ಯಮವೂ ನೀಡಿಲ್ಲ. ಆದರೆ ಈ ವಿಡಿಯೊವನ್ನು ಪೂರ್ತಿ ಅಪ್ಲೋಡ್ ಮಾಡಿರುವ ಮೇಲಿನ ಎರಡು ಚಾನೆಲ್‌ನಲ್ಲಿ ಅದು ಇಂತಹ ಜಾಗದಿಂದ ಅಪ್ಲೋಡ್ ಮಾಡಲಾಗಿದೆ ಎಂದು ವಿಡಿಯೊದಲ್ಲಿ ಉಲ್ಲೇಖ ಮಾಡಿಲ್ಲ. ಒಂದು ಚಾನೆಲ್ ತನ್ನ ಲೊಕೇಷನ್ ಅಮೆರಿಕಾ ಎಂದು ಹೇಳಿಕೊಂಡರೆ, ಇನ್ನೊಂದು ಭಾರತ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ:ಭದ್ರತಾ ಲೋಪ: ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್, ಪಂಜಾಬ್ ಸರ್ಕಾರದಿಂದ ತನಿಖಾ ತಂಡ…10 ಪಾಯಿಂಟ್ಸ್‌‌

‘ಮೋದಿಯನ್ನು ಸುತ್ತುವರೆಯಲು 2020 ರಲ್ಲೇ ಪ್ರೀಪ್ಲಾನ್’ ಎಂಬ ವಾಕ್ಯಕ್ಕೂ ಚಾನೆಲ್‌ ಯಾವುದೇ ಆಧಾರ ನೀಡಿಲ್ಲ. ವಾಸ್ತವದಲ್ಲಿ ರೈತ ಹೋರಾಟವನ್ನು ಮುನ್ನಡೆಸಿದ್ದ ಕಿಸಾನ್ ಮೋರ್ಚಾ ನಾಯಕರು, “ಪ್ರಧಾನಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಯಾವುದೇ ಯೋಜನೆ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

ಪೂರ್ವನಿರ್ಧರಿತ ವೇಳಾಪಟ್ಟಿಯಂತೆ, ಜನವರಿ 5 ರಂದು ಪಂಜಾಬ್‌ನ ಪ್ರತಿ ಜಿಲ್ಲೆ ಮತ್ತು ತಹಸಿಲ್ ಕೇಂದ್ರ ಕಚೇರಿಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲಾಯಿತು. ಫಿರೋಜ್‌ಪುರ ಜಿಲ್ಲಾ ಕೇಂದ್ರಕ್ಕೆ ತೆರಳದಂತೆ ಕೆಲ ರೈತರನ್ನು ಪೊಲೀಸರು ತಡೆದಾಗ ಹಲವು ಕಡೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇವುಗಳಲ್ಲಿ ಪ್ರಧಾನಿಯವರ ಬೆಂಗಾವಲು ಪಡೆ ಬಂದು ನಿಲ್ಲಿಸಿ ಹಿಂತಿರುಗಿದ ಪೈರಾಯನ ಮೇಲ್ಸೇತುವೆಯೂ ಇತ್ತು. ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಪ್ರಧಾನಿ ಬೆಂಗಾವಲು ಪಡೆ ಹಾದು ಹೋಗುತ್ತದೆ ಎಂಬ ಖಚಿತ ಮಾಹಿತಿ ಇರಲಿಲ್ಲ. ಪ್ರಧಾನಿ ವಾಪಸಾದ ಬಳಿಕ ಮಾಧ್ಯಮಗಳಿಂದ ಈ ಮಾಹಿತಿ ಸಿಕ್ಕಿದೆ. ಪ್ರತಿಭಟನಾ ನಿರತ ರೈತರು ಪ್ರಧಾನಿ ಬೆಂಗಾವಲು ಪಡೆ ಕಡೆಗೆ ಹೋಗಲು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಇದು ಶುಕ್ರವಾರ ವೈರಲ್‌ ಆದ ಹೊಸ ವಿಡಿಯೊ ಮೂಲಕ ಸಾಬೀತಾಗಿದೆ. ಬಿಜೆಪಿ ಧ್ವಜದೊಂದಿಗೆ ‘ನರೇಂದ್ರ ಮೋದಿ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಗುಂಪು ಮಾತ್ರ ಆ ಬೆಂಗಾವಲು ಪಡೆಯ ಬಳಿ ತಲುಪಿತ್ತು” ಎಂದು ಕಿಸಾನ್ ಮೋರ್ಚಾ ಹೇಳಿದೆ.

ಹದಿಮೂರು ನಿಮಿಷ ಈ ಸುದ್ದಿ ವಿಡಿಯೊದಲ್ಲಿ ‘ನ್ಯೂಸ್‌ ಫಸ್ಟ್‌ ಕನ್ನಡ’ ಈ ಅನಿಮೇಷನ್‌ ರೀತಿಯಲ್ಲೇ ನಡೆದಿದೆ ಎಂದು ಹೇಳುತ್ತಾರೆ. ಇದರ ನಂತರ ಈ ಅನಿಮೇಷನ್‌ ಅನ್ನು ಚಾನೆಲ್‌ನ ಮತ್ತೊಬ್ಬರು ವಿಶ್ಲೇಷಣೆ ಮಾಡುತ್ತಾರೆ.

ಇದನ್ನೂ ಓದಿ:ಪಂಜಾಬ್‌ ಭದ್ರತಾ ಲೋಪ ವಿವಾದ; ಪತ್ರಕರ್ತೆಯೊಬ್ಬರ ಹಲವು ಪ್ರಶ್ನೆಗಳು!

ಅವರು ಕೂಡಾ ನಿರೂಪಕಿ ಈ ಹಿಂದೆ ಹೇಳಿದ್ದ ಅದೇ ವಿಷಯವನ್ನು ಮತ್ತೊಮ್ಮೆ ಹೇಳುತ್ತಾರೆ. ವಿಶ್ಲೇಷಣೆ ಮಾಡುತ್ತಾ, “ಅನಿಮೇಷನ್‌ನಲ್ಲಿ ಪ್ರಧಾನಿಯನ್ನು ತಡೆದಾಗ ಭದ್ರತೆಗೆ ಇದ್ದ ವ್ಯಕ್ತಿಗಳು ಓಡಿ ಹೋಗುತ್ತಾರೆ. ಹಾಗೆಯೆ ಇಲ್ಲಿ ಕೂಡಾ ನಡೆಯುತ್ತದೆ. ಪ್ರಧಾನಿಯ ಭದ್ರತೆಗೆ ಇದ್ದ ಎಸ್‌ಪಿಜಿಯನ್ನು ಬಿಟ್ಟರೆ, ಪಂಜಾಬಿ ಪೊಲೀಸರು ಎಲ್ಲಿದ್ದರು?” ಎಂದು ಪ್ರಶ್ನಿಸುತ್ತಾ, “ಪಂಜಾಬಿ ಪೊಲೀಸರು ಪ್ರತಿಭಟನಾಕಾರರೊಂದಿಗೆ ಸೇರಿ ಚಹಾ ಕುಡಿತಾ ಇರುತ್ತಾರೆ. ಅವರು ಬ್ರಿಡ್ಜ್‌ ಮೇಲೆ ಚಾಯ್ ಪೆ ಚರ್ಚಾ ನಡೆಸುತ್ತಾ ಇರುತ್ತಾರೆ” ಎಂದು ನಿರೂಪಕ ಸ್ವತಃ ನೋಡಿದಂತೆ ಹೇಳುತ್ತಾರೆ.

ಆದರೆ ವಾಸ್ತವದಲ್ಲಿ ಪಂಜಾಬಿ ಪೊಲೀಸರು ಅಲ್ಲಿಯೇ ಇದ್ದರು. ಒಂದು ವೇಳೆ ಅವರು ಪ್ರತಿಭಟನಾಕಾರರೊಂದಿಗೆ ಚಹಾ ಸೇವಿಸುತ್ತಿದ್ದರೆ ಅಥವಾ ಪ್ರಧಾನಿಯನ್ನು ಬಿಟ್ಟು ಓಡಿ ಹೋಗಿದ್ದರೆ ಅದು ದೊಡ್ಡ ಸುದ್ದಿಯಾಗಿರುತ್ತಿತ್ತು. ಆದರೆ ಈ ರೀತಿಯಾಗಿ ಎಲ್ಲಿಯೂ ಸುದ್ದಿಯಾಗಿಲ್ಲ. ಜೊತೆಗೆ ಚಹಾದೊಂದಿಗೆ ಚರ್ಚೆಯೂ ನಡೆಸುತ್ತಿರಲಿಲ್ಲ. ಘಟನೆ ನಡೆದಾಗ ಎಸ್‌ಪಿಜಿ ಕಮಾಂಡೋಗಳು ಪ್ರಧಾನಿಯ ಕಾರಿನ ಸುತ್ತಲೆ ಇದ್ದರು. ಯಾಕೆಂದರೆ ಅವರು ಪ್ರಧಾನಿಯ ರಕ್ಷಣೆಗೆಂದೇ ಇರುವ ಪಡೆಯಾಗಿದ್ದು, ಅವರು ಪ್ರಧಾನಿಯನ್ನು ಬಿಟ್ಟು ಕದಲುವ ಹಾಗೆಯೆ ಇಲ್ಲ.

ಆದರೆ ಪಂಜಾಬಿ ಪೊಲೀಸರು ಕೂಡಾ ಅಲ್ಲೇ ಇದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ಮಾಡಿದ ಸುದ್ದಿಯಲ್ಲಿ ಕಾಣಬಹುದು.

ಇದನ್ನೂ ಓದಿ:ಪಂಜಾಬ್: ಪ್ರಧಾನಿ ಕಾರ್ಯಕ್ರಮ ರದ್ದು; ಏನಂತಾರೆ ನೆಟ್ಟಿಗರು?

ವಾಸ್ತವದಲ್ಲಿ, ಶುಕ್ರವಾದಂದು ಘಟನೆಯ ಸಮಯದಲ್ಲಿ ಮಾಡಲಾಗಿರುವ ಹೊಸ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪ್ರಧಾನಿ ಮೋದಿಯ ಕಾರು ಫ್ಲೈಓವರ್‌ನಲ್ಲಿ ನಿಂತಿರುವಾಗ, ಅವರ ಕಾರಿನ ತೀರಾ ಹತ್ತಿರದಲ್ಲೇ ಒಂದಷ್ಟು ಜನರು ಬಿಜೆಪಿ ಧ್ವಜವನ್ನು ಬೀಸುತ್ತಾ, ಘೋಷಣೆ ಕೂಗುವುದನ್ನು ಕಾಣಬಹುದು.

ಘಟನೆ ನಡೆದಾಗ ಪ್ರತಿಭಟನಾ ನಿರತ ರೈತರು ಪ್ರಧಾನಿಯನ್ನು ತಡೆದಿದ್ದಾರೆ ಎಂದು ಮಾಧ್ಯಮಗಳು ಬುಧವಾರ ಸುದ್ದಿ ಮಾಡಿದ್ದವು. ಆದರೆ ಡಿಜಿಟಲ್‌ ಮಾಧ್ಯಮಗಳು, ಪ್ರಧಾನಿಯ ಕಾರಿನ ತೀರಾ ಹತ್ತಿರದಲ್ಲಿ ಇದ್ದ ಗುಂಪು ರೈತರ ಗುಂಪಲ್ಲ, ಬಿಜೆಪಿ ಕಾರ್ಯಕರ್ತರಾಗಿದ್ದು ಅವರ ಕೈಯ್ಯಲ್ಲಿ ಇದ್ದಿದ್ದು ಬಿಜೆಪಿ ಧ್ವಜ ಎಂದು ಸ್ಪಷ್ಟವಾಗಿ ತೋರಿಸಿದ್ದವು.

ಇದನ್ನೂ ಓದಿ:ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲ ರೈತ ಸಂಘಟನೆಗಳ ನಿರ್ಧಾರ: ಅಂತರ ಕಾಯ್ದುಕೊಂಡ SKM

ಇಷ್ಟೇ ಅಲ್ಲದೆ, ಶುಕ್ರವಾರ ಬಿಡುಗಡೆಯಾದ ವಿಡಿಯೊದಲ್ಲಿ, ಬಿಜೆಪಿಯ ಧ್ವಜದೊಂದಿಗೆ ಪ್ರಧಾನಿಯ ಕಾರಿಗಿಂತ ಕೆಲವೇ ಮೀಟರ್‌ ಅಂತರದಲ್ಲಿ ನಿಂತು ಧ್ವಜವನ್ನು ಬೀಸುತ್ತಾ ನರೇಂದ್ರ ಮೋದಿ ಜಿಂದಾಬಾದ್‌ ಎಂದು ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಎರಡು ರಸ್ತೆಗಳಿರುವ ಫ್ಲೈಓವರ್‌ನಲ್ಲಿ ಒಂದು ರಸ್ತೆಯಲ್ಲಿ ಪ್ರಧಾನಿಯ ಕಾರು ಮತ್ತು ಅವರ ಬೆಂಗಾವಲು ಇದ್ದು, ಇನ್ನೊಂದು ರಸ್ತೆಯಲ್ಲಿ ಜನರು ಘೋಷಣೆ ಕೂಗುತ್ತಿದ್ದಾರೆ. ಈ ರಸ್ತೆಯಲ್ಲಿ ಬಸ್ಸು ಮತ್ತು ಇತರ ವಾಹನ ನಿಂತಿರುವುದು ಕೂಡಾ ಕಾಣುತ್ತದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಪಂಜಾಬ್‌ ಮುಖ್ಯಮಂತ್ರಿ ಚನ್ನಿ ಅವರು, “ರಾಜ್ಯ ಸರ್ಕಾರದಿಂದ ಯಾವುದೆ ಲೋಪ ಆಗಿಲ್ಲ. ಆದರೆ ಪ್ರಧಾನಿ ಮೋದಿ ಅವರು ರಸ್ತೆ ಮೂಲಕ ತೆರಳಲಿದ್ದಾರೆ ಎಂದು ನಿಗದಿಯಾಗಿರಲಿಲ್ಲ. ಪ್ರಧಾನಿ ಮೋದಿ ಜೀವಕ್ಕೆ ಯಾವುದೇ ಬೆದರಿಕೆ ಇಲ್ಲ. ಒಬ್ಬ ಪಂಜಾಬಿಯಾಗಿ ಅವರ ಜೀವವನ್ನು ರಕ್ಷಿಸಲು ನಾನು ಜೀವ ಪಣಕ್ಕಿಡಲೂ ಸಿದ್ದ” ಎಂದು ಹೇಳಿದ್ದರು.

ರೈತರ ಹೋರಾಟ ಶುರುವಾದ ದಿನದಿಂದಲೂ ಮುಖ್ಯವಾಹಿನಿ ಮಾಧ್ಯಮಗಳು ರೈತರ ವಿರುದ್ಧ ವರದಿಗಳನ್ನು ಮಾಡುತ್ತಲೇ ಬಂದಿವೆ. ಮಾಧ್ಯಮಗಳು ಪ್ರಭುತ್ವವನ್ನು ಓಲೈಸುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಒಂದು ವರ್ಷ ಕಾಲ ಮಳೆ, ಬಿಸಿಲೆನ್ನದೆ ಶಾಂತಿಯುತವಾಗಿ ಹೋರಾಟ ಮಾಡಿದ ರೈತರ ಕುರಿತು ಬರೆಯುವಾಗ, ವರದಿ ಮಾಡುವಾಗ ಮಾಧ್ಯಮಗಳಿಗೆ ಎಚ್ಚರಿಕೆ ಇರಬೇಕಲ್ಲವೇ? ಸುಮಾರು 700 ರೈತರು ಹೋರಾಟದಲ್ಲಿ ಜೀವಕಳೆದುಕೊಂಡಿದ್ದಾರೆ. ಗಾಂಧಿ ಮಾರ್ಗದಲ್ಲಿ ನಡೆದು ಸರ್ಕಾರವನ್ನು ಮಣಿಸಿದ್ದಾರೆ. ಇಂತಹ ರೈತರ ಕುರಿತು ವರದಿ ಮಾಡುವಾಗ ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಲ್ಲವೇ?

ಇದನ್ನೂ ಓದಿ:ಪಂಜಾಬ್ ಕೋರ್ಟ್ ಸ್ಪೋಟ ಪ್ರಕರಣಕ್ಕೆ ತಿರುವು: ಮೃತಪಟ್ಟ ಮಾಜಿ ಪೊಲೀಸ್ ಆರೋಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...