Homeಅಂಕಣಗಳುಅಸಹನೆ, ಅಶಾಂತಿಯತ್ತ ಸಾಗುತ್ತಿದೆ ಸೌಹಾರ್ದ ಭಾರತ

ಅಸಹನೆ, ಅಶಾಂತಿಯತ್ತ ಸಾಗುತ್ತಿದೆ ಸೌಹಾರ್ದ ಭಾರತ

ಸಾವನ್ನು ಸಂಭ್ರಮಿಸುವ, ದ್ವೇಷವೇ ರಾಜಕೀಯವಾಗಿರುವ ಸಾಮಾಜಿಕ ಬಿಕ್ಕಟ್ಟಿನಲ್ಲಿ ನಮ್ಮ ದೇಶ

- Advertisement -
- Advertisement -

| ಸೋಮಶೇಖರ್ ಚಲ್ಯ |

ಭಾರತದ ಸ್ವಾತಂತ್ರ್ಯ ಚಳುವಳಿಯ ಹಾದಿಯಲ್ಲಿ ಶಾಂತಿ ಮತ್ತು ಅಹಿಂಸೆಗಳೇ ಧ್ಯೇಯವಾಗಿ ಬೆಳೆದುಬಂದಿದ್ದವು. ಹಿಂಸೆಯಿಂದ ಯಾವುದನ್ನೂ ಗೆಲ್ಲಲಾಗುವುದಿಲ್ಲ, ಶಾಂತಿಯಿಂದ ಹೋರಾಡೋಣ ಸ್ವಾತಂತ್ರ್ಯ ಪಡೆಯೋಣ ಎಂಬುದು ಗಾಂಧಿಯವರ ಉದ್ದೇಶವಾಗಿತ್ತು. ಇದು ಇಡೀ ಜಗತ್ತಿಗೆ ಭಾರತವೊಂದು ಶಾಂತಿಪ್ರಿಯ ರಾಷ್ಟ್ರವೆಂಬುದನ್ನು ತೋರಿಸಿತ್ತು.

ಅಂತೆಯೇ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲೂ ಎಲ್ಲರನ್ನು ಸಮಭಾವದಿಂದ ಕಾಣುವ, ಅಭಿವ್ಯಕ್ತಿ ಮತು ವ್ಯಕ್ತಿ ಗೌರವದೊಂದಿಗೆ ಭಾತೃಭಾವನೆಯನ್ನು ಬೆಳೆಸುವುದು ನಮ್ಮ ಆಧ್ಯತೆಯೆಂದು ¨ರೆದುಕೊಂಡಿದ್ದೇವೆ. ಆದರೆ ಗಾಂಧಿ ಹೇಳಿದ ಶಾಂತಿ ಮಂತ್ರವನ್ನು ಇತಿಹಾಸದ ಪುಟದಲ್ಲಿಯೂ, ಸಂವಿಧಾನದ ಆಶಯವನ್ನು ಅದರ ಪ್ರಸ್ತಾವನೆಯಲ್ಲೂ ಮಾತ್ರ ಓದಿಕೊಳ್ಳುವಂತಹ ಅಧೋಗತಿಗೆ ಭಾರತವನ್ನು ಕೊಂಡೊಯ್ಯಲಾಗುತ್ತಿದೆ.

ಜೂನ್ 12ರ ಬುಧವಾರ ಪ್ರಕಟಗೊಂಡ ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ಸ್ಥಾನ ಕುಸಿಯುತ್ತಾ ಸಾಗಿದೆ. 163 ರಾಷ್ಟ್ರಗಳ ಪೈಕಿ ಭಾರತ 141ನೇ ಸ್ಥಾನವನ್ನು ಪಡೆದುಕೊಂಡಿರುವುದು ಆಘಾತಕಾರಿ ಸಂದೇಶವನ್ನು ರವಾನಿಸಿದೆ. ಬಹಶಃ ಶಾಂತಿ ರಾಷ್ಟ್ರಗಳ ಪಟ್ಟಿಯೆಂದು ಕರೆಯುದಕ್ಕಿಂತ ಅಶಾಂತಿ ರಾಷ್ಟ್ರಗಳ ಪಟ್ಟಿ ಎಂದು ನೋಡಿದರೆ ಭಾರತ ಮೊದಲ 22ನೇ ಸ್ಥಾನದಲ್ಲಿದೆ. ಕಳೆದ ವರ್ಷ 136ನೇ ಸ್ಥಾನ ಪಡೆದುಕೊಂಡಿದ್ದ ಭಾರತ ಈ ಭಾರಿ 141ನೇ ಸ್ಥಾನ್ಕಕೆ ಕುಸಿದಿದೆ. ಇದು ದೇಶ ಎಂತಹ ಅಸಹನೆ, ಹಿಂಸಾಚಾರದೆಡೆಗೆ ಸಾಗಿದೆ ಎಂಬುದನ್ನು ತೋರಿಸುತ್ತಿದೆ. ಇದಕ್ಕೆ ಇತ್ತೀಚಿನ ಹಲವು ವಿದ್ಯಾಮಾನಗಳು ಸಾಕ್ಷಿಯಾಗಿವೆ.

ಗಿರೀಶ್ ಕಾರ್ನಾಡರು ನಿಧನರಾದ ಸಂದರ್ಭದಲ್ಲಿ ಅವರ ಸಾವನ್ನು ಸಂಭ್ರಮಿಸುವ ವಿಕೃತಿಯನ್ನು ಮೆರೆಯುವ ಮಟ್ಟಿಗೆ ಜನರ ಆಲೋಚನೆಗಳು ವಿಷಕಾರಿಯಾಗುತ್ತಿವೆ. ಗೌರಿ ಲಂಕೇಶ್ ಹತ್ಯೆಗೆ ಅಂತಾರಾಷ್ಟ್ರೀಯ ಮಟ್ಟಿದಲ್ಲಿ ಮನಸ್ಸುಗಳು ಮರುಗಿದ್ದವು. ಆದರೆ ನಮ್ಮದೇ ದೇಶದ/ರಾಜ್ಯದ ಕೆಲವು ಹೀನ ಮನಸ್ಸುಗಳು ಗೌರಿಯವರ ಸಾವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದವು.

ಭಾರತದ ಸಂಸ್ಕøತಿಯೆಂದರೆ ಸಾವಿಗೆ ಮರುಗುವ, ನೋವಿಗೆ ಸ್ಪಂದಿಸುವುದಾಗಿತ್ತು. ಸರ್ವಜನಾಂಗದ ಶಾಂತಿಯ ತೋಟವಾಗಬೇಕಿದ್ದ ನಮ್ಮ ರಾಷ್ಟ್ರ ಇಂದು ಕೋಮು ಭಾವನೆಯಿಂದ ಕ್ರೌರ್ಯವನ್ನು ತುಂಬಿಕೊಳ್ಳುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರಗಳು ಯಾರೊಬ್ಬರೂ ಮೃತಪಟ್ಟರೂ, ಹಿಂದೂಗಳ ಹತ್ಯೆಯೆಂದು ಬೊಬ್ಬೆ ಹೊಡೆಯುತ್ತಾ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸಿ ಕೋಮು ವಿಷವನ್ನು ಭಿತ್ತುತ್ತುದ್ದಾರೆ. ಇದೇ ಸಂದರ್ಭದಲ್ಲಿ ಯಾವುದೇ ಮುಸ್ಲಿಮನಾಗಲೀ/ಪ್ರಗತಿಪರರಾಗಲಿ ಅಥವಾ ಕೋಮು ವಿರೋಧಿಯಾಗಲೀ ಸಂಘಪರಿವಾರದ ಅಥವಾ ಬಿಜೆಪಿಯ ಕಾರ್ಯಕರ್ತರು ಮರಣ ಹೊಂದಿದ ಸಂದರ್ಭದಲ್ಲಿ ಅಬ್ಬಾ ಸತ್ತನೆಂದು ಅವರ ಸಾವನ್ನು ಸಂಭ್ರಮಿಸಿದ ಉದಾಹಣೆಗಳಿಲ್ಲ. ಆದರೆ ತಮ್ಮ ವಿರೋಧಿಗಳ ಸಾವನ್ನು ಸಂಭ್ರಮಿಸುವ ಅನಾಗರಿಕ ಸಂಸ್ಕøತಿ ಸಂಘಪರಿವಾರದಲ್ಲಿ ಬೆಳೆದು ಇಂದು ರಾಷ್ಟ್ರವನ್ನೇ ವ್ಯಾಪಿಸಿದೆ.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಶುರುವಾದ ರಾಜಕೀಯ ಹಿಂಸಾಚಾರ ಇಂದಿಗೂ ನಿಂತಿಲ್ಲ. ಚುನಾವಣಾ ಫಲಿತಾಂಶದ ನಂತರ ಒಟ್ಟು 13 ಜನ ಈ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಈ ರಾಜಕೀಯ ಜಗಳವನ್ನು ಕೋಮುಗಲಭೆಯಾಗಿ ತಿರುಚುವ ಹುನ್ನಾರನ್ನು ಬಿಜೆಪಿ ನಾಯಕರು ಎಣೆಯುತ್ತಿದ್ದಾರೆ. ಸದಾ ಕೋಮುವಾದ, ಗಲಭೆ, ಹತ್ಯೆಗಳನ್ನೇ ರಾಜಕೀಯ ದಾಳವಾಗಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರ ಗಾಂಧಿ ಹತ್ಯೆ ಮಾಡಿದ ಗೂಡ್ಸೆಯನ್ನು ಪೂಜಿಸುವ, ಗೋದ್ರಾ ಹತ್ಯೆ, ಬಾಬರಿ ಮಸೀದಿ, ಬಾಬಾಬುಡನ್‍ಗಿರಿ, ಶಬರಿಮಲೆಗಳಂತ ಇಶ್ಯೂಗಳನ್ನು ಗಲಭೆ, ಹಿಂಸಾಚಾರಗಳಿಗೆ ತಿರುಗಿಸಿ ರಾಜಕೀಯ ಲಾಭ ಪಡೆಯುತ್ತಾ ದೇಶದಲ್ಲಿ ಅಶಾಂತಿ ಮತ್ತು ಅಪಾಯಕಾರಿ ವಾತಾವರಣವನ್ನು ಸೃಷ್ಟಿಮಾಡುತ್ತಿವೆ.

ಪ್ರಪಂಚಕ್ಕೇ ಪ್ರೀತಿ, ಶಾಂತಿಯಯ ಸಂದೇಶವನ್ನು ಸಾರಿದ ಬುದ್ದ ಮತ್ತು ಗಾಂಧಿ ಹುಟ್ಟಿದ ದೇಶವಿಂದು ದ್ವೇಷ, ಅಸಹಿಷ್ಣುತೆ, ಹಿಂಸಾಚಾರದ ದಳ್ಳುರಿಯಲ್ಲಿ ಸಿಕ್ಕು ನಲುಗುತ್ತಿದೆ. “ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ.” ಎಂಬ ಮಾಜಿ ಸಿಎಂ ಸಿದ್ಧರಾಮಯ್ಯವನರ ಟ್ವೀಟ್ ಸಾವನ್ನು ಸಂಭ್ರನಿಸುವ, ದ್ವೇಷವನ್ನೇ ದಾಳ ಮಾಡಿಕೊಂಡಿರುವವರ ಮನಮುಟ್ಟುವಂತದ್ದು. ಆದರೆ ಅದಕ್ಕೆ ಅವರು ಸತ್ತಾಗ ದೀಪಾವಳಿ ಆಚರಿಸುತ್ತೇವೆ ಎಂದು ಪ್ರತ್ಯುತ್ತರ ಕೊಟ್ಟವರ ಮನಸ್ಥಿತಿಯನ್ನು ತಿದ್ದುವುದಾದರೂ ಹೇಗೆ?

ಮತ್ತೊಂದು ವಿಚಾರವೆಂದರೆ 2008ರಿಂದ ಇಲ್ಲಿಯವರೆಗೆ ಐಸ್‍ಲ್ಯಾಂಡ್ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಭಯೋತ್ಪಾದಕ ರಾಷ್ಟ್ರವೆಂದು ಬಿಂಬಿತವಾಗಿರುವ ಪಾಕಿಸ್ಥಾನ 153ನೇ ಸ್ಥಾನದಲ್ಲಿದೆ. ಭಾರತದ 141ನೇ ಸ್ಥಾನಕ್ಕೂ ಪಾಕಿಸ್ತಾನದ ಸ್ಥಾನಕ್ಕೂ ಅಂತಹ ಅಂತರವೇನು ಇಲ್ಲ. ಭಾರತವನ್ನು ಪಾಕಿಸ್ತಾನದೆಡೆಗೆ ಸಾಗಲು ಬಿಡದೆ, ಅದನ್ನು ಐಸ್‍ಲ್ಯಾಂಡಿನೆಡೆಗೆ ಸ್ನೇಹ, ಪ್ರೀತಿ, ಸಹಭಾಳ್ವೆ, ಸೌಹಾದರ್ತೆಯ ಮೂಲಕ ಕೊಂಡೊಯ್ಯುವ ಹೊಣೆ ಪ್ರತಿಯೊಬ್ಬ ಭಾರತೀಯರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...