Homeಅಂಕಣಗಳುಅಸಹನೆ, ಅಶಾಂತಿಯತ್ತ ಸಾಗುತ್ತಿದೆ ಸೌಹಾರ್ದ ಭಾರತ

ಅಸಹನೆ, ಅಶಾಂತಿಯತ್ತ ಸಾಗುತ್ತಿದೆ ಸೌಹಾರ್ದ ಭಾರತ

ಸಾವನ್ನು ಸಂಭ್ರಮಿಸುವ, ದ್ವೇಷವೇ ರಾಜಕೀಯವಾಗಿರುವ ಸಾಮಾಜಿಕ ಬಿಕ್ಕಟ್ಟಿನಲ್ಲಿ ನಮ್ಮ ದೇಶ

- Advertisement -
- Advertisement -

| ಸೋಮಶೇಖರ್ ಚಲ್ಯ |

ಭಾರತದ ಸ್ವಾತಂತ್ರ್ಯ ಚಳುವಳಿಯ ಹಾದಿಯಲ್ಲಿ ಶಾಂತಿ ಮತ್ತು ಅಹಿಂಸೆಗಳೇ ಧ್ಯೇಯವಾಗಿ ಬೆಳೆದುಬಂದಿದ್ದವು. ಹಿಂಸೆಯಿಂದ ಯಾವುದನ್ನೂ ಗೆಲ್ಲಲಾಗುವುದಿಲ್ಲ, ಶಾಂತಿಯಿಂದ ಹೋರಾಡೋಣ ಸ್ವಾತಂತ್ರ್ಯ ಪಡೆಯೋಣ ಎಂಬುದು ಗಾಂಧಿಯವರ ಉದ್ದೇಶವಾಗಿತ್ತು. ಇದು ಇಡೀ ಜಗತ್ತಿಗೆ ಭಾರತವೊಂದು ಶಾಂತಿಪ್ರಿಯ ರಾಷ್ಟ್ರವೆಂಬುದನ್ನು ತೋರಿಸಿತ್ತು.

ಅಂತೆಯೇ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲೂ ಎಲ್ಲರನ್ನು ಸಮಭಾವದಿಂದ ಕಾಣುವ, ಅಭಿವ್ಯಕ್ತಿ ಮತು ವ್ಯಕ್ತಿ ಗೌರವದೊಂದಿಗೆ ಭಾತೃಭಾವನೆಯನ್ನು ಬೆಳೆಸುವುದು ನಮ್ಮ ಆಧ್ಯತೆಯೆಂದು ¨ರೆದುಕೊಂಡಿದ್ದೇವೆ. ಆದರೆ ಗಾಂಧಿ ಹೇಳಿದ ಶಾಂತಿ ಮಂತ್ರವನ್ನು ಇತಿಹಾಸದ ಪುಟದಲ್ಲಿಯೂ, ಸಂವಿಧಾನದ ಆಶಯವನ್ನು ಅದರ ಪ್ರಸ್ತಾವನೆಯಲ್ಲೂ ಮಾತ್ರ ಓದಿಕೊಳ್ಳುವಂತಹ ಅಧೋಗತಿಗೆ ಭಾರತವನ್ನು ಕೊಂಡೊಯ್ಯಲಾಗುತ್ತಿದೆ.

ಜೂನ್ 12ರ ಬುಧವಾರ ಪ್ರಕಟಗೊಂಡ ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ಸ್ಥಾನ ಕುಸಿಯುತ್ತಾ ಸಾಗಿದೆ. 163 ರಾಷ್ಟ್ರಗಳ ಪೈಕಿ ಭಾರತ 141ನೇ ಸ್ಥಾನವನ್ನು ಪಡೆದುಕೊಂಡಿರುವುದು ಆಘಾತಕಾರಿ ಸಂದೇಶವನ್ನು ರವಾನಿಸಿದೆ. ಬಹಶಃ ಶಾಂತಿ ರಾಷ್ಟ್ರಗಳ ಪಟ್ಟಿಯೆಂದು ಕರೆಯುದಕ್ಕಿಂತ ಅಶಾಂತಿ ರಾಷ್ಟ್ರಗಳ ಪಟ್ಟಿ ಎಂದು ನೋಡಿದರೆ ಭಾರತ ಮೊದಲ 22ನೇ ಸ್ಥಾನದಲ್ಲಿದೆ. ಕಳೆದ ವರ್ಷ 136ನೇ ಸ್ಥಾನ ಪಡೆದುಕೊಂಡಿದ್ದ ಭಾರತ ಈ ಭಾರಿ 141ನೇ ಸ್ಥಾನ್ಕಕೆ ಕುಸಿದಿದೆ. ಇದು ದೇಶ ಎಂತಹ ಅಸಹನೆ, ಹಿಂಸಾಚಾರದೆಡೆಗೆ ಸಾಗಿದೆ ಎಂಬುದನ್ನು ತೋರಿಸುತ್ತಿದೆ. ಇದಕ್ಕೆ ಇತ್ತೀಚಿನ ಹಲವು ವಿದ್ಯಾಮಾನಗಳು ಸಾಕ್ಷಿಯಾಗಿವೆ.

ಗಿರೀಶ್ ಕಾರ್ನಾಡರು ನಿಧನರಾದ ಸಂದರ್ಭದಲ್ಲಿ ಅವರ ಸಾವನ್ನು ಸಂಭ್ರಮಿಸುವ ವಿಕೃತಿಯನ್ನು ಮೆರೆಯುವ ಮಟ್ಟಿಗೆ ಜನರ ಆಲೋಚನೆಗಳು ವಿಷಕಾರಿಯಾಗುತ್ತಿವೆ. ಗೌರಿ ಲಂಕೇಶ್ ಹತ್ಯೆಗೆ ಅಂತಾರಾಷ್ಟ್ರೀಯ ಮಟ್ಟಿದಲ್ಲಿ ಮನಸ್ಸುಗಳು ಮರುಗಿದ್ದವು. ಆದರೆ ನಮ್ಮದೇ ದೇಶದ/ರಾಜ್ಯದ ಕೆಲವು ಹೀನ ಮನಸ್ಸುಗಳು ಗೌರಿಯವರ ಸಾವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದವು.

ಭಾರತದ ಸಂಸ್ಕøತಿಯೆಂದರೆ ಸಾವಿಗೆ ಮರುಗುವ, ನೋವಿಗೆ ಸ್ಪಂದಿಸುವುದಾಗಿತ್ತು. ಸರ್ವಜನಾಂಗದ ಶಾಂತಿಯ ತೋಟವಾಗಬೇಕಿದ್ದ ನಮ್ಮ ರಾಷ್ಟ್ರ ಇಂದು ಕೋಮು ಭಾವನೆಯಿಂದ ಕ್ರೌರ್ಯವನ್ನು ತುಂಬಿಕೊಳ್ಳುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರಗಳು ಯಾರೊಬ್ಬರೂ ಮೃತಪಟ್ಟರೂ, ಹಿಂದೂಗಳ ಹತ್ಯೆಯೆಂದು ಬೊಬ್ಬೆ ಹೊಡೆಯುತ್ತಾ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸಿ ಕೋಮು ವಿಷವನ್ನು ಭಿತ್ತುತ್ತುದ್ದಾರೆ. ಇದೇ ಸಂದರ್ಭದಲ್ಲಿ ಯಾವುದೇ ಮುಸ್ಲಿಮನಾಗಲೀ/ಪ್ರಗತಿಪರರಾಗಲಿ ಅಥವಾ ಕೋಮು ವಿರೋಧಿಯಾಗಲೀ ಸಂಘಪರಿವಾರದ ಅಥವಾ ಬಿಜೆಪಿಯ ಕಾರ್ಯಕರ್ತರು ಮರಣ ಹೊಂದಿದ ಸಂದರ್ಭದಲ್ಲಿ ಅಬ್ಬಾ ಸತ್ತನೆಂದು ಅವರ ಸಾವನ್ನು ಸಂಭ್ರಮಿಸಿದ ಉದಾಹಣೆಗಳಿಲ್ಲ. ಆದರೆ ತಮ್ಮ ವಿರೋಧಿಗಳ ಸಾವನ್ನು ಸಂಭ್ರಮಿಸುವ ಅನಾಗರಿಕ ಸಂಸ್ಕøತಿ ಸಂಘಪರಿವಾರದಲ್ಲಿ ಬೆಳೆದು ಇಂದು ರಾಷ್ಟ್ರವನ್ನೇ ವ್ಯಾಪಿಸಿದೆ.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಶುರುವಾದ ರಾಜಕೀಯ ಹಿಂಸಾಚಾರ ಇಂದಿಗೂ ನಿಂತಿಲ್ಲ. ಚುನಾವಣಾ ಫಲಿತಾಂಶದ ನಂತರ ಒಟ್ಟು 13 ಜನ ಈ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಈ ರಾಜಕೀಯ ಜಗಳವನ್ನು ಕೋಮುಗಲಭೆಯಾಗಿ ತಿರುಚುವ ಹುನ್ನಾರನ್ನು ಬಿಜೆಪಿ ನಾಯಕರು ಎಣೆಯುತ್ತಿದ್ದಾರೆ. ಸದಾ ಕೋಮುವಾದ, ಗಲಭೆ, ಹತ್ಯೆಗಳನ್ನೇ ರಾಜಕೀಯ ದಾಳವಾಗಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರ ಗಾಂಧಿ ಹತ್ಯೆ ಮಾಡಿದ ಗೂಡ್ಸೆಯನ್ನು ಪೂಜಿಸುವ, ಗೋದ್ರಾ ಹತ್ಯೆ, ಬಾಬರಿ ಮಸೀದಿ, ಬಾಬಾಬುಡನ್‍ಗಿರಿ, ಶಬರಿಮಲೆಗಳಂತ ಇಶ್ಯೂಗಳನ್ನು ಗಲಭೆ, ಹಿಂಸಾಚಾರಗಳಿಗೆ ತಿರುಗಿಸಿ ರಾಜಕೀಯ ಲಾಭ ಪಡೆಯುತ್ತಾ ದೇಶದಲ್ಲಿ ಅಶಾಂತಿ ಮತ್ತು ಅಪಾಯಕಾರಿ ವಾತಾವರಣವನ್ನು ಸೃಷ್ಟಿಮಾಡುತ್ತಿವೆ.

ಪ್ರಪಂಚಕ್ಕೇ ಪ್ರೀತಿ, ಶಾಂತಿಯಯ ಸಂದೇಶವನ್ನು ಸಾರಿದ ಬುದ್ದ ಮತ್ತು ಗಾಂಧಿ ಹುಟ್ಟಿದ ದೇಶವಿಂದು ದ್ವೇಷ, ಅಸಹಿಷ್ಣುತೆ, ಹಿಂಸಾಚಾರದ ದಳ್ಳುರಿಯಲ್ಲಿ ಸಿಕ್ಕು ನಲುಗುತ್ತಿದೆ. “ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ.” ಎಂಬ ಮಾಜಿ ಸಿಎಂ ಸಿದ್ಧರಾಮಯ್ಯವನರ ಟ್ವೀಟ್ ಸಾವನ್ನು ಸಂಭ್ರನಿಸುವ, ದ್ವೇಷವನ್ನೇ ದಾಳ ಮಾಡಿಕೊಂಡಿರುವವರ ಮನಮುಟ್ಟುವಂತದ್ದು. ಆದರೆ ಅದಕ್ಕೆ ಅವರು ಸತ್ತಾಗ ದೀಪಾವಳಿ ಆಚರಿಸುತ್ತೇವೆ ಎಂದು ಪ್ರತ್ಯುತ್ತರ ಕೊಟ್ಟವರ ಮನಸ್ಥಿತಿಯನ್ನು ತಿದ್ದುವುದಾದರೂ ಹೇಗೆ?

ಮತ್ತೊಂದು ವಿಚಾರವೆಂದರೆ 2008ರಿಂದ ಇಲ್ಲಿಯವರೆಗೆ ಐಸ್‍ಲ್ಯಾಂಡ್ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಭಯೋತ್ಪಾದಕ ರಾಷ್ಟ್ರವೆಂದು ಬಿಂಬಿತವಾಗಿರುವ ಪಾಕಿಸ್ಥಾನ 153ನೇ ಸ್ಥಾನದಲ್ಲಿದೆ. ಭಾರತದ 141ನೇ ಸ್ಥಾನಕ್ಕೂ ಪಾಕಿಸ್ತಾನದ ಸ್ಥಾನಕ್ಕೂ ಅಂತಹ ಅಂತರವೇನು ಇಲ್ಲ. ಭಾರತವನ್ನು ಪಾಕಿಸ್ತಾನದೆಡೆಗೆ ಸಾಗಲು ಬಿಡದೆ, ಅದನ್ನು ಐಸ್‍ಲ್ಯಾಂಡಿನೆಡೆಗೆ ಸ್ನೇಹ, ಪ್ರೀತಿ, ಸಹಭಾಳ್ವೆ, ಸೌಹಾದರ್ತೆಯ ಮೂಲಕ ಕೊಂಡೊಯ್ಯುವ ಹೊಣೆ ಪ್ರತಿಯೊಬ್ಬ ಭಾರತೀಯರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...