Homeಅಂಕಣಗಳು’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

- Advertisement -
- Advertisement -

ಕಥಾ ರಚನೆಗೆ ಬೇಕಾದ ಸರಕು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೂಡ, ಅದನ್ನು ಕಥೆಯಾಗಿಸುವ ನಿರೂಪಣಾ ಕೌಶಲ್ಯಕ್ಕೆ ಸಿದ್ಧತೆ ಮತ್ತು ಕಾರ್ಯಕ್ಷಮತೆಯ ಅಗತ್ಯವಿದೆ. ಅನಿಲ್ ಗುನ್ನಾಪುರ ಅವರ ’ಕಲ್ಲು ಹೂವಿನ ನೆರಳು’ ಸಂಕಲನದಲ್ಲಿ ಅಂತಹ ಕೌಶಲ್ಯದ ಛಾಯೆ ನಮಗೆ ಕಥೆಗಳ ಒಳಗಿಳಿದಂತೆ ಕಾಣತೊಡಗುತ್ತದೆ. ಕಥೆಗಾರನ ತನ್ಮಯತೆ ಮತ್ತು ಅಂತರಾಳದ ತುಡಿತಗಳಿಗೆ ಅಕ್ಷರದ ಬಣ್ಣ ಬಳಿದಾಗ, ಅದು ಕಲ್ಲು ಹೂವಿನ ನೆರಳಾಗಿ ವಿಶಿಷ್ಟವಾದ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ. ತನ್ನ ಸುತ್ತಲಿನವರು ತಮ್ಮ ಬದುಕನ್ನು ಹೆಣೆದುಕೊಳ್ಳುವಂತೆಯೇ, ಕಥೆಗಾರ ಕಥೆಗಳ ಹೆಣೆಯುತ್ತ, ತನ್ನೊಳಗಿನ ಭಾವ ಪ್ರಪಂಚವನ್ನು ಲೋಕದೃಷ್ಟಿಯಿಂದ ಕಾಣಬಯಸುತ್ತಾನೆ. ಇಲ್ಲಿನ ಬಹುತೇಕ ಕಥೆಗಳು ಕೆಂಡದಂತೆ ಕಂಡರೂ ಕೂಡ ಮಂಜಿನ ಹಾಗೆ ತಣ್ಣನೆಯ ನೋವು, ಹತಾಶೆ, ಮೌನ ಮತ್ತು ಕ್ರೌರ್ಯದ ನಿಲುಗನ್ನಡಿಯೇ ಆಗಿವೆ. ಸುತ್ತಲಿನ ಲೋಕ ಮೀಮಾಂಸೆ ಒಂದೆಡೆಯಾದರೆ, ಬದುಕಿನ ಸಣ್ಣಸಣ್ಣ ತಿರುವುಗಳು ಕೂಡ ನೋವಿನ ನಗಾರಿ ಬಾರಿಸಲು ನಿಂತಿರುವಂತೆ ಕಾಣುವುದು ಇಲ್ಲಿನ ಕಥೆಗಳ ವಿಶೇಷ!

ಪ್ರತಿ ಕಥೆಯ ಸ್ಥಾಯಿಭಾವ, ಮೌನ ಮತ್ತು ಮುಗ್ಧತೆಯೇ ಆಗಿದ್ದರೂ, ಅದಕ್ಕಿರುವ ಸಂಚಾರಿ ಭಾವ ಮನೋಸಂಬಂಧವೆ ಆಗಿಬಿಡುತ್ತದೆ. ಕೊಳದೊಳಗೆ ಸಣ್ಣ ಕಲ್ಲು ಬಿದ್ದು ತರಂಗ ಎಬ್ಬಿಸುವ ಹಾಗೆ, ಸಣ್ಣದೊಂದು ಮಾತು, ಘಟನೆ, ಸ್ವಕಲ್ಪಿತ ವಿಚಾರಗಳಿಂದ ಮನಸ್ಸಿನಲ್ಲಿ ಏಳಬಹುದಾದ ತರಂಗಗಳ ಒಟ್ಟು ಮೊತ್ತವೇ ಈ ಕಥಾಗುಚ್ಚ ಎನ್ನಬಹುದು!

ಇಲ್ಲಿನ ಪ್ರತಿ ಕಥೆಗೂ ಅಂತರ್ ಸಂಬಂಧೀಯ ಗುಣ ಇದ್ದಂತೆ ಕಾಣುತ್ತಿದ್ದಂತೆಯೇ, ಇಲ್ಲವೆನಿಸಿಯೂಬಿಡುತ್ತದೆ. ’ಪರಿಮಳ’ ಕಥೆಯ ಪಮ್ಮಿಯೂ, ’ಗುಲ್ ಮೊಹರ್ ಹುಡುಗ’ನಾದ ಅಪ್ಪುವಿಗೂ ಸಾಮ್ಯತೆಯ ಕಲ್ಪಿಸಬಹುದು. ಇಬ್ಬರಲ್ಲೂ ಮುಗ್ಧತೆ ಸಾಮಾನ್ಯವೆನಿಸಿದರೂ, ಪಮ್ಮಿಗೆ ಸಂಬಂಧದ ಕುರಿತಿರುವ ಗೊಂದಲ ಅಪ್ಪುವಿಗಿಲ್ಲ.

ಆದರೆ, ’ಗುಲ್ ಮೊಹರ್ ಹುಡುಗ’ ಕಥೆಯಲ್ಲಿರುವ ಅರವಿಂದನಿಗೆ ಇರುವ ಲೈಂಗಿಕ ಆಸಕ್ತಿ ಹೆಂಡತಿಯಾದ ನಳಿನಿಯಲ್ಲಿ ಹೆಚ್ಚು ಕಾಣಿಸದು, ಅಂತೆಯೇ ’ಶ್ಯಾರಿಯ ಗಲ್ಲಾ ಡೆಬ್ಬಿ’ಯ ಬಾಯಕ್ಕನಿಗೆ ಇರುವ ಲೈಂಗಿಕ ಆಸಕ್ತಿ ಗಂಡ ಹುಚ್ಚಯ್ಯನಿಗೆ ಇಲ್ಲದಿರುವುದು ಒಂದು ರೀತಿಯ ವೈರುಧ್ಯವನ್ನು ಎದುರಿಟ್ಟ ಹಾಗಿದೆ. ಇದರಿಂದ ಪರಸ್ಪರ ಸಂಬಂಧಗಳ ನಡುವೆ ಬಿಟ್ಟಿರಬಹುದಾದ ಬಿರುಕು ಕೂಡ ಪ್ರಮುಖ ಪಾತ್ರವಹಿಸಿದೆ ಎನಿಸಬಹುದು. ’ಹುಚ್ಚಯ್ಯನ ಲೀಲೆ’ ಕಥೆಯಲ್ಲಿ ಬರುವ ಚೆನ್ನಪ್ಪನಿಗೂ ’ಕಮಲಜ್ಜಿ’ಗೂ ಇರಬಹುದಾದ ಉದಾರತೆಯ ಗುಣವು ಒಂದೇ ಅನ್ನಿಸಿದರೂ, ಚೆನ್ನಪ್ಪನದು ಊರ ಜನರ ಕುರಿತ ತನಗರಿವಿಲ್ಲದೆಯೇ ಬಂದಿರುವ ಅಘೋಷಿತ ಕಾಳಜಿಯಾದರೆ, ಕಮಲಜ್ಜಿಯದ್ದು ಮಗನ, ಮೊಮ್ಮಕ್ಕಳ ಕುರಿತ ಕೌಟುಂಬಿಕ ಕಾಳಜಿ, ಚೆನ್ನಪ್ಪ ಹುಚ್ಚಯ್ಯನಂತೆಯೇ ಆಧ್ಯಾತ್ಮದಲ್ಲಿ ಐಕ್ಯವಾದರೆ, ಕಮಲಜ್ಜಿ ಸಂಬಂಧಗಳ ಸೆಳೆತದಲ್ಲೆ ಮುಳುಗುತ್ತಾಳೆ.

ಅನಿಲ್ ಗುನ್ನಾಪುರ

ಇನ್ನೂ ’ಶ್ಯಾರಿಯ ಗಲ್ಲಾ ಡೆಬ್ಬಿ’ ಕಥೆಯಂತು ಓದುಗರ ಕಣ್ಣಂಚಿನಲ್ಲಿ ನೀರು ಚಿಮ್ಮಿಸಬಲ್ಲ ಅನಿರೀಕ್ಷಿತ ದುರಂತದ ಕಥೆ. ಬದುಕ ಕಟ್ಟಿಕೊಳ್ಳಲು ಊರಿಂದ ಊರಿಗೆ ಅಲೆಯುವ ಬದುಕಿನ ಬವಣೆ ಇಲ್ಲಿನ ಕೇಂದ್ರ ವಸ್ತು. ಬಾಯಕ್ಕನ ಬದುಕಿನ ಹಸಿವಿನೊಂದಿಗೆ, ಮಿಲನದ ಹಸಿವು, ಗಂಡ ಹುಚ್ಚಪ್ಪನ ಕುಡಿತದ ಹಸಿವು, ಮಗಳು ಶ್ಯಾರಿಯ ಅಕ್ಷರದ ಹಸಿವು ಅಲ್ಲದೇ ಕೊನೆಯಲ್ಲಿ ಅಪರಿಚಿತ ಆಸಾಮಿಯ ಅತ್ಯಾಚಾರದ ಹಸಿವಿನಿಂದಾಗಿ ಇಡೀ ಕುಟುಂಬವೇ ನರಳುವ ಮತ್ತು ಓದುಗರನ್ನು ವಿಚಿತ್ರ ಯಾತನೆಗೆ ಒಳಗು ಮಾಡುವ ಕಥೆಯಿದು.
ಇಲ್ಲಿನ ಎಂಟು ಕಥೆಗಳ ಪೈಕಿ ’ಚಿನ್ಮಯ ನಿಲಯ’ ಕಥೆಯ ವಸ್ತು ಕನ್ನಡ ಕಥಾ ಲೋಕಕ್ಕೆ ತೀರ ಹೊಸತು ಅನ್ನಿಸಿತು. ಬುದ್ಧಿಮಾಂದ್ಯರ ಲೈಂಗಿಕತೆಯ ಕುರಿತು ಮಿಶಲ್ ಫುಕೋ ಹೇಳಿದ ನಿಯಮವನ್ನು, ಕಥೆಗಾರ ಅರಿವಿದ್ದೋ, ಅರಿವಿಲ್ಲದೆಯೋ ಬಳಸಿಕೊಂಡಿದ್ದಾನೆ ಮತ್ತು ಯಶಸ್ವಿ ಕೂಡ ಆಗಿದ್ದಾನೆ. ಆ ಕಥೆಯ ನಿರೂಪಣೆ
ಕುತೂಹಲ ಅನಿಸುತ್ತದೆ, ಚಂಪಾ ಆಂಟಿ ಮತ್ತು ಸುಭಾಷ್ ಅಂಕಲ್‌ನ ಮನೆಯ ಕಥೆಯನ್ನು ಯಾರು ನಿರೂಪಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಈ ಕಥೆಯಲ್ಲಿ ಬರುವ ಸಂಬಂಧಗಳ ಬಂಧ ಕೆಲವು ಸಲ ಬಿಗಿಯಾಗಿ, ಮತ್ತೂ ಗಟ್ಟಿಯಾಗಿ ಏಕತಾನತೆಯನ್ನು ಇಲ್ಲವಾಗಿಸುತ್ತದೆ. ಮೂವತ್ತೊಂದು ವರ್ಷದ ಚಿನ್ಮಯನ ಅಂಗಾಂಗವು ಚಂದ್ರವ್ವನ ಸ್ಪರ್ಷದಿಂದ ಜಾಗೃತವಾಗುವ ಮತ್ತು ಪರಸ್ಪರರು ಬೆರೆಯುವುದು ಅವನ ಬದುಕಿನ ಚೈತನ್ಯಕ್ಕೆ ಕಾರಣವಾಯಿತೇ? ಅಥವಾ ಅವನಲ್ಲಾದ ಬದಲಾವಣೆ ಮನುಷ್ಯ ಸಹಜವಾದದ್ದೆ? ಎಂಬ ಹಲವು ವಿಚಾರವನ್ನು ವಿವೇಚಿಸುವಂತೆ ಮಾಡುತ್ತ ನಿರೂಪಕ ನಿರ್ಗಮಿಸುತ್ತಾನೆ.

’ಚುಕ್ಕಿ ಕೇಳಿದ ಕತೆ’ ವಿಶೇಷವಾಗಿ ನಿರೂಪಿಸಿದ ಒಂದು ಕಥಾವಸ್ತು. ಕಥೆಯೊಳಗೊಂದು ಕಥೆ ಹೆಣೆಯುವ ಕುಸುರಿ ಕೆಲಸದಲ್ಲಿ ಕಥೆಗಾರ ಗೆದ್ದಿದ್ದಾನೆ. ’ಅವನಿ’ ಕಥೆಯೂ ಕೂಡ ಸಹಜ ಕುತೂಹಲದಿಂದ ಏನನ್ನೋ ಹೇಳಲುಹೋಗಿ, ಕೊನೆಗೆ ಏನೂ ಹೇಳದೆ ದೃಶ್ಯಗಳನ್ನಷ್ಟೆ ಎದುರಿಟ್ಟು ಸುಂದರ ಚಿತ್ರಾಕೃತಿಯಾಗಿ ನಿಂತುಬಿಡುತ್ತದೆ.

ಹೀಗೆ ಕಥೆಗಳ ಚೌಕಟ್ಟಿನಲ್ಲಿ ತುಂಬಬಹುದಾದ ಚಿತ್ರಗಳನ್ನು ಕಥೆಗಾರ ತನ್ನ ಅನುಭವದ ಕುಂಚದಿಂದ ಚಿತ್ರಿಸಲು ಪ್ರಯತ್ನಪಟ್ಟಿದ್ದಾನೆ. ಕುತೂಹಲದ ನಿರೂಪಣೆ ಮತ್ತು ಭಾಷಾ ಸೊಗಡಿನ ವೈಶಿಷ್ಟ್ಯತೆ ಆಕರ್ಷಕವಾಗಿದೆ. ಕಥೆಯ ಕೊನೆಯನ್ನು ಕೊನೆಯಾಗುವಂತೆಯೂ ಮತ್ತು ಕೊನೆಗಾಣದಂತೆಯೂ ಎಲ್ಲವನ್ನೂ ತಾನೆ ಹೇಳಿ ಮುಗಿಸಬೇಕೆಂಬ ವಾಚಾಳಿತನ ಕಥೆಗಾರನಿಗಿಲ್ಲ. ಒಟ್ಟಿನಲ್ಲಿ ಹೊಸ ತಲೆಮಾರಿನ ಕಥೆಗಳಿಗೆ ವಿಶೇಷ ಆಯಾಮ ಇರುವುದಂತೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...