Homeಅಂಕಣಗಳು’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

’ಕಲ್ಲು ಹೂವಿನ ನೆರಳು’: ತಾಜಾ ನಿರೂಪಣೆಯ ಮತ್ತು ಸಂವೇದನೆಯುಳ್ಳ ಗ್ರಹಿಕೆಯ ಕಥೆಗಳು

- Advertisement -
- Advertisement -

ಕಥಾ ರಚನೆಗೆ ಬೇಕಾದ ಸರಕು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೂಡ, ಅದನ್ನು ಕಥೆಯಾಗಿಸುವ ನಿರೂಪಣಾ ಕೌಶಲ್ಯಕ್ಕೆ ಸಿದ್ಧತೆ ಮತ್ತು ಕಾರ್ಯಕ್ಷಮತೆಯ ಅಗತ್ಯವಿದೆ. ಅನಿಲ್ ಗುನ್ನಾಪುರ ಅವರ ’ಕಲ್ಲು ಹೂವಿನ ನೆರಳು’ ಸಂಕಲನದಲ್ಲಿ ಅಂತಹ ಕೌಶಲ್ಯದ ಛಾಯೆ ನಮಗೆ ಕಥೆಗಳ ಒಳಗಿಳಿದಂತೆ ಕಾಣತೊಡಗುತ್ತದೆ. ಕಥೆಗಾರನ ತನ್ಮಯತೆ ಮತ್ತು ಅಂತರಾಳದ ತುಡಿತಗಳಿಗೆ ಅಕ್ಷರದ ಬಣ್ಣ ಬಳಿದಾಗ, ಅದು ಕಲ್ಲು ಹೂವಿನ ನೆರಳಾಗಿ ವಿಶಿಷ್ಟವಾದ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ. ತನ್ನ ಸುತ್ತಲಿನವರು ತಮ್ಮ ಬದುಕನ್ನು ಹೆಣೆದುಕೊಳ್ಳುವಂತೆಯೇ, ಕಥೆಗಾರ ಕಥೆಗಳ ಹೆಣೆಯುತ್ತ, ತನ್ನೊಳಗಿನ ಭಾವ ಪ್ರಪಂಚವನ್ನು ಲೋಕದೃಷ್ಟಿಯಿಂದ ಕಾಣಬಯಸುತ್ತಾನೆ. ಇಲ್ಲಿನ ಬಹುತೇಕ ಕಥೆಗಳು ಕೆಂಡದಂತೆ ಕಂಡರೂ ಕೂಡ ಮಂಜಿನ ಹಾಗೆ ತಣ್ಣನೆಯ ನೋವು, ಹತಾಶೆ, ಮೌನ ಮತ್ತು ಕ್ರೌರ್ಯದ ನಿಲುಗನ್ನಡಿಯೇ ಆಗಿವೆ. ಸುತ್ತಲಿನ ಲೋಕ ಮೀಮಾಂಸೆ ಒಂದೆಡೆಯಾದರೆ, ಬದುಕಿನ ಸಣ್ಣಸಣ್ಣ ತಿರುವುಗಳು ಕೂಡ ನೋವಿನ ನಗಾರಿ ಬಾರಿಸಲು ನಿಂತಿರುವಂತೆ ಕಾಣುವುದು ಇಲ್ಲಿನ ಕಥೆಗಳ ವಿಶೇಷ!

ಪ್ರತಿ ಕಥೆಯ ಸ್ಥಾಯಿಭಾವ, ಮೌನ ಮತ್ತು ಮುಗ್ಧತೆಯೇ ಆಗಿದ್ದರೂ, ಅದಕ್ಕಿರುವ ಸಂಚಾರಿ ಭಾವ ಮನೋಸಂಬಂಧವೆ ಆಗಿಬಿಡುತ್ತದೆ. ಕೊಳದೊಳಗೆ ಸಣ್ಣ ಕಲ್ಲು ಬಿದ್ದು ತರಂಗ ಎಬ್ಬಿಸುವ ಹಾಗೆ, ಸಣ್ಣದೊಂದು ಮಾತು, ಘಟನೆ, ಸ್ವಕಲ್ಪಿತ ವಿಚಾರಗಳಿಂದ ಮನಸ್ಸಿನಲ್ಲಿ ಏಳಬಹುದಾದ ತರಂಗಗಳ ಒಟ್ಟು ಮೊತ್ತವೇ ಈ ಕಥಾಗುಚ್ಚ ಎನ್ನಬಹುದು!

ಇಲ್ಲಿನ ಪ್ರತಿ ಕಥೆಗೂ ಅಂತರ್ ಸಂಬಂಧೀಯ ಗುಣ ಇದ್ದಂತೆ ಕಾಣುತ್ತಿದ್ದಂತೆಯೇ, ಇಲ್ಲವೆನಿಸಿಯೂಬಿಡುತ್ತದೆ. ’ಪರಿಮಳ’ ಕಥೆಯ ಪಮ್ಮಿಯೂ, ’ಗುಲ್ ಮೊಹರ್ ಹುಡುಗ’ನಾದ ಅಪ್ಪುವಿಗೂ ಸಾಮ್ಯತೆಯ ಕಲ್ಪಿಸಬಹುದು. ಇಬ್ಬರಲ್ಲೂ ಮುಗ್ಧತೆ ಸಾಮಾನ್ಯವೆನಿಸಿದರೂ, ಪಮ್ಮಿಗೆ ಸಂಬಂಧದ ಕುರಿತಿರುವ ಗೊಂದಲ ಅಪ್ಪುವಿಗಿಲ್ಲ.

ಆದರೆ, ’ಗುಲ್ ಮೊಹರ್ ಹುಡುಗ’ ಕಥೆಯಲ್ಲಿರುವ ಅರವಿಂದನಿಗೆ ಇರುವ ಲೈಂಗಿಕ ಆಸಕ್ತಿ ಹೆಂಡತಿಯಾದ ನಳಿನಿಯಲ್ಲಿ ಹೆಚ್ಚು ಕಾಣಿಸದು, ಅಂತೆಯೇ ’ಶ್ಯಾರಿಯ ಗಲ್ಲಾ ಡೆಬ್ಬಿ’ಯ ಬಾಯಕ್ಕನಿಗೆ ಇರುವ ಲೈಂಗಿಕ ಆಸಕ್ತಿ ಗಂಡ ಹುಚ್ಚಯ್ಯನಿಗೆ ಇಲ್ಲದಿರುವುದು ಒಂದು ರೀತಿಯ ವೈರುಧ್ಯವನ್ನು ಎದುರಿಟ್ಟ ಹಾಗಿದೆ. ಇದರಿಂದ ಪರಸ್ಪರ ಸಂಬಂಧಗಳ ನಡುವೆ ಬಿಟ್ಟಿರಬಹುದಾದ ಬಿರುಕು ಕೂಡ ಪ್ರಮುಖ ಪಾತ್ರವಹಿಸಿದೆ ಎನಿಸಬಹುದು. ’ಹುಚ್ಚಯ್ಯನ ಲೀಲೆ’ ಕಥೆಯಲ್ಲಿ ಬರುವ ಚೆನ್ನಪ್ಪನಿಗೂ ’ಕಮಲಜ್ಜಿ’ಗೂ ಇರಬಹುದಾದ ಉದಾರತೆಯ ಗುಣವು ಒಂದೇ ಅನ್ನಿಸಿದರೂ, ಚೆನ್ನಪ್ಪನದು ಊರ ಜನರ ಕುರಿತ ತನಗರಿವಿಲ್ಲದೆಯೇ ಬಂದಿರುವ ಅಘೋಷಿತ ಕಾಳಜಿಯಾದರೆ, ಕಮಲಜ್ಜಿಯದ್ದು ಮಗನ, ಮೊಮ್ಮಕ್ಕಳ ಕುರಿತ ಕೌಟುಂಬಿಕ ಕಾಳಜಿ, ಚೆನ್ನಪ್ಪ ಹುಚ್ಚಯ್ಯನಂತೆಯೇ ಆಧ್ಯಾತ್ಮದಲ್ಲಿ ಐಕ್ಯವಾದರೆ, ಕಮಲಜ್ಜಿ ಸಂಬಂಧಗಳ ಸೆಳೆತದಲ್ಲೆ ಮುಳುಗುತ್ತಾಳೆ.

ಅನಿಲ್ ಗುನ್ನಾಪುರ

ಇನ್ನೂ ’ಶ್ಯಾರಿಯ ಗಲ್ಲಾ ಡೆಬ್ಬಿ’ ಕಥೆಯಂತು ಓದುಗರ ಕಣ್ಣಂಚಿನಲ್ಲಿ ನೀರು ಚಿಮ್ಮಿಸಬಲ್ಲ ಅನಿರೀಕ್ಷಿತ ದುರಂತದ ಕಥೆ. ಬದುಕ ಕಟ್ಟಿಕೊಳ್ಳಲು ಊರಿಂದ ಊರಿಗೆ ಅಲೆಯುವ ಬದುಕಿನ ಬವಣೆ ಇಲ್ಲಿನ ಕೇಂದ್ರ ವಸ್ತು. ಬಾಯಕ್ಕನ ಬದುಕಿನ ಹಸಿವಿನೊಂದಿಗೆ, ಮಿಲನದ ಹಸಿವು, ಗಂಡ ಹುಚ್ಚಪ್ಪನ ಕುಡಿತದ ಹಸಿವು, ಮಗಳು ಶ್ಯಾರಿಯ ಅಕ್ಷರದ ಹಸಿವು ಅಲ್ಲದೇ ಕೊನೆಯಲ್ಲಿ ಅಪರಿಚಿತ ಆಸಾಮಿಯ ಅತ್ಯಾಚಾರದ ಹಸಿವಿನಿಂದಾಗಿ ಇಡೀ ಕುಟುಂಬವೇ ನರಳುವ ಮತ್ತು ಓದುಗರನ್ನು ವಿಚಿತ್ರ ಯಾತನೆಗೆ ಒಳಗು ಮಾಡುವ ಕಥೆಯಿದು.
ಇಲ್ಲಿನ ಎಂಟು ಕಥೆಗಳ ಪೈಕಿ ’ಚಿನ್ಮಯ ನಿಲಯ’ ಕಥೆಯ ವಸ್ತು ಕನ್ನಡ ಕಥಾ ಲೋಕಕ್ಕೆ ತೀರ ಹೊಸತು ಅನ್ನಿಸಿತು. ಬುದ್ಧಿಮಾಂದ್ಯರ ಲೈಂಗಿಕತೆಯ ಕುರಿತು ಮಿಶಲ್ ಫುಕೋ ಹೇಳಿದ ನಿಯಮವನ್ನು, ಕಥೆಗಾರ ಅರಿವಿದ್ದೋ, ಅರಿವಿಲ್ಲದೆಯೋ ಬಳಸಿಕೊಂಡಿದ್ದಾನೆ ಮತ್ತು ಯಶಸ್ವಿ ಕೂಡ ಆಗಿದ್ದಾನೆ. ಆ ಕಥೆಯ ನಿರೂಪಣೆ
ಕುತೂಹಲ ಅನಿಸುತ್ತದೆ, ಚಂಪಾ ಆಂಟಿ ಮತ್ತು ಸುಭಾಷ್ ಅಂಕಲ್‌ನ ಮನೆಯ ಕಥೆಯನ್ನು ಯಾರು ನಿರೂಪಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಈ ಕಥೆಯಲ್ಲಿ ಬರುವ ಸಂಬಂಧಗಳ ಬಂಧ ಕೆಲವು ಸಲ ಬಿಗಿಯಾಗಿ, ಮತ್ತೂ ಗಟ್ಟಿಯಾಗಿ ಏಕತಾನತೆಯನ್ನು ಇಲ್ಲವಾಗಿಸುತ್ತದೆ. ಮೂವತ್ತೊಂದು ವರ್ಷದ ಚಿನ್ಮಯನ ಅಂಗಾಂಗವು ಚಂದ್ರವ್ವನ ಸ್ಪರ್ಷದಿಂದ ಜಾಗೃತವಾಗುವ ಮತ್ತು ಪರಸ್ಪರರು ಬೆರೆಯುವುದು ಅವನ ಬದುಕಿನ ಚೈತನ್ಯಕ್ಕೆ ಕಾರಣವಾಯಿತೇ? ಅಥವಾ ಅವನಲ್ಲಾದ ಬದಲಾವಣೆ ಮನುಷ್ಯ ಸಹಜವಾದದ್ದೆ? ಎಂಬ ಹಲವು ವಿಚಾರವನ್ನು ವಿವೇಚಿಸುವಂತೆ ಮಾಡುತ್ತ ನಿರೂಪಕ ನಿರ್ಗಮಿಸುತ್ತಾನೆ.

’ಚುಕ್ಕಿ ಕೇಳಿದ ಕತೆ’ ವಿಶೇಷವಾಗಿ ನಿರೂಪಿಸಿದ ಒಂದು ಕಥಾವಸ್ತು. ಕಥೆಯೊಳಗೊಂದು ಕಥೆ ಹೆಣೆಯುವ ಕುಸುರಿ ಕೆಲಸದಲ್ಲಿ ಕಥೆಗಾರ ಗೆದ್ದಿದ್ದಾನೆ. ’ಅವನಿ’ ಕಥೆಯೂ ಕೂಡ ಸಹಜ ಕುತೂಹಲದಿಂದ ಏನನ್ನೋ ಹೇಳಲುಹೋಗಿ, ಕೊನೆಗೆ ಏನೂ ಹೇಳದೆ ದೃಶ್ಯಗಳನ್ನಷ್ಟೆ ಎದುರಿಟ್ಟು ಸುಂದರ ಚಿತ್ರಾಕೃತಿಯಾಗಿ ನಿಂತುಬಿಡುತ್ತದೆ.

ಹೀಗೆ ಕಥೆಗಳ ಚೌಕಟ್ಟಿನಲ್ಲಿ ತುಂಬಬಹುದಾದ ಚಿತ್ರಗಳನ್ನು ಕಥೆಗಾರ ತನ್ನ ಅನುಭವದ ಕುಂಚದಿಂದ ಚಿತ್ರಿಸಲು ಪ್ರಯತ್ನಪಟ್ಟಿದ್ದಾನೆ. ಕುತೂಹಲದ ನಿರೂಪಣೆ ಮತ್ತು ಭಾಷಾ ಸೊಗಡಿನ ವೈಶಿಷ್ಟ್ಯತೆ ಆಕರ್ಷಕವಾಗಿದೆ. ಕಥೆಯ ಕೊನೆಯನ್ನು ಕೊನೆಯಾಗುವಂತೆಯೂ ಮತ್ತು ಕೊನೆಗಾಣದಂತೆಯೂ ಎಲ್ಲವನ್ನೂ ತಾನೆ ಹೇಳಿ ಮುಗಿಸಬೇಕೆಂಬ ವಾಚಾಳಿತನ ಕಥೆಗಾರನಿಗಿಲ್ಲ. ಒಟ್ಟಿನಲ್ಲಿ ಹೊಸ ತಲೆಮಾರಿನ ಕಥೆಗಳಿಗೆ ವಿಶೇಷ ಆಯಾಮ ಇರುವುದಂತೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...