Homeಕರ್ನಾಟಕಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

ಜನಾಕ್ರೋಶದ ಫಲ: ‘ಬನ್ನಂಜೆ’ ಪಾಠದಲ್ಲಿ ತಿದ್ದುಪಡಿ ತಂದ ಸರ್ಕಾರ

- Advertisement -
- Advertisement -

ಪಠ್ಯ ಪರಿಶೀಲನಾ ಸಮಿತಿ ಮಾಡಿರುವ ಕೇಸರೀಕರಣ ಹಾಗೂ ಹಲವು ಎಡವಟ್ಟುಗಳ ಕುರಿತು ಭಾರೀ ಆಕ್ರೋಶ ಭುಗಿಲೆದ್ದ ಬಳಿಕ ಸರ್ಕಾರ ಸಮರ್ಥನೆಗಿಳಿದಿದ್ದು ತಿಳಿದೇ ಇದೆ. ಜನರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದಿದ್ದರೂ ತಾನು ಮಾಡಿರುವ ತಪ್ಪುಗಳನ್ನು ಪರಾಮರ್ಶಿಸಿಕೊಂಡಿರುವುದು ಮೇಲುನೋಟಕ್ಕೆ ಕಾಣುತ್ತಿದೆ.

10ನೇ ತರಗತಿಯ ಕನ್ನಡ (ಪ್ರಥಮ) ಭಾಷಾ ಪಠ್ಯದಲ್ಲಿ ಅಳವಡಿಸಲಾಗಿರುವ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’ದ ಪಾಠದಲ್ಲಿ ಕೆಲವು ಬದಲಾವಣೆಗಳನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಶೀಲನಾ ಸಮಿತಿ ತಂದಿದೆ. ಪರಿಷ್ಕೃತ ಪಠ್ಯದ ಪಿಡಿಎಫ್ ಸೋರಿಕೆಯಾದಾಗ ಆ ಪಾಠದಲ್ಲಿನ ಹಲವು ತಪ್ಪುಗಳನ್ನು ಜನರು ಗುರುತಿಸಿದ್ದರು. ಬನ್ನಂಜೆಯವರ ಪಾಠದ ಕುರಿತು ‘ನಾನುಗೌರಿ.ಕಾಂ’ನಲ್ಲಿ ವಿಸ್ತೃತವಾಗಿ ವರದಿಯಾಗಿತ್ತು. ಹಣವನ್ನು ಹೆಣ್ಣಿಗೆ ಹೋಲಿಸಿ ಅತ್ಯಂತ ಕೀಳು ಅಭಿರುಚಿ ಬರುವಂತೆ ಪಾಠವನ್ನು ರೂಪಿಸಲಾಗಿತ್ತು. “ಬನ್ನಂಜೆಯ ಪಾಠದಲ್ಲಿ ಹೆಣ್ಣಿನ ಅಪಮೌಲ್ಯೀಕರಣ” ಮಾಡಲಾಗಿದೆ ಎಂಬುದು ಅರಿವಾದ ಬಳಿಕ ಮರು ರೂಪಿಸಲಾದ ಪಠ್ಯದಲ್ಲಿ ತಿದ್ದುಪಡಿ ತರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಮೊದಲೇನಿತ್ತು?

“ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು.”

ಮುಂದುವರಿದು, “ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕಥೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ..”

ಸೋರಿಕೆಯಾದ ಪಿಡಿಎಫ್‌ ಪ್ರತಿಯಲ್ಲಿದ್ದ ಸಾಲುಗಳು

ಈ  ಮೇಲಿನ ಸಾಲುಗಳಿಗೆ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿರಿ: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಜನರು ಎತ್ತಿದ ಆಕ್ಷೇಪಗಳೇನು?

  • “ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಕಾಣ- ಗುಹೇಶ್ವರ” ಎಂಬ ವಚನ ಪರಂಪರೆಯ ಈ ನಾಡಿನಲ್ಲಿ ಹೆಣ್ಣಿನ ಕುರಿತು ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲಾಗುತ್ತಿದೆಯೇ?
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿವರ್ತನೆಯ ಕಡೆಗೆ ಹೋಗುತ್ತಿರುವಾಗ ಹೆಣ್ಣಿನ ಕುರಿತ ಈ ಸಂಚುಚಿತ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವುದು ಅಪಾಯಕಾರಿ. ಹೆಣ್ಣು ಮಕ್ಕಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದಾರೆ. ಸಂಪತ್ತಿನೊಂದಿಗೆ ಹೆಣ್ಣನ್ನು ಹೋಲಿಸಿ, ಆಕೆ ಚಂಚಲೆ ಎಂದು ಬಿಂಬಿಸುವುದು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ.
  • ಹೆಣ್ಣು ಕೇವಲವಷ್ಟೇ ಎಂಬ ಭಾವನೆ ಈ ರೀತಿಯ ಸಾಲುಗಳಿಂದ ಎಳೆಯ ಮನಸ್ಸುಗಳಲ್ಲಿ ಹುಟ್ಟುತ್ತದೆ. ಎಸ್‌ಎಸ್‌ಎಲ್‌ಸಿ ಮಕ್ಕಳ ವಯಸ್ಸನ್ನು ಗಮನಿಸಬೇಕು. ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವ ವಯಸ್ಸದು. ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಹೆಣ್ಣು ಒಬ್ಬರ ಹತ್ತಿರ ಶಾಶ್ವತವಾಗಿ ನಿಲ್ಲುವುದಿಲ್ಲ, ಆಕೆ ಚಂಚಲೆ ಎಂದು ಈ ವಯಸ್ಸಿನ ಮಕ್ಕಳ ಮುಂದೆ ಬೋಧಿಸಿದರೆ ತನ್ನ ಸಹಪಾಠಿಯನ್ನು ಒಬ್ಬ ಹುಡುಗ ಹೇಗೆ ನೋಡಬಹುದು? ಹಸಿ ಮಣ್ಣಿನಂತಹ ಅವರ ಮನಸ್ಸಿನಲ್ಲಿ ಯಾವ ವಿಗ್ರಹ ರೂಪ ತಾಳಬಹುದು?
  • ಈ ಪಠ್ಯದಲ್ಲಿ ಯಾವ ಸಂದೇಶ ಇದೆ? ಹಣ ಒಂದು ಸಾಧನವಷ್ಟೇ. ಅದು ಗಂಡಿಗೂ ಬೇಕು, ಹೆಣ್ಣಿಗೂ ಬೇಕು. ಹೀಗಿರುವಾಗ ಪುರುಷಪ್ರಧಾನ ವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಹಣವನ್ನು ವಿಶ್ಲೇಷಿಸಿರುವುದೇ ತಪ್ಪು. ಇಂತಹ ಪಾಠಗಳನ್ನು ಶಿಕ್ಷಕಿಯರು ತಮ್ಮ ಮಕ್ಕಳಿಗೆ ಬೋಧಿಸುವುದಾದರೂ ಹೇಗೆ?

ಈಗ ಆಗಿರುವ ಬದಲಾವಣೆ ಏನು?

“ಈ ಸಿರಿಯನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಸಿರಿಗೆ ಆಕರ್ಷಿತರಾದವರೆ. ಎಲ್ಲರೂ ಸಿರಿಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಸಿರಿಯ ಜಾಯಮಾನಕ್ಕೆ ಸಲ್ಲದು.”

ಕೆಟ್ಟ ನಡತೆಯ ಇಂಥ ಸಿರಿಯು ಹೇಗೋ ದೇವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತದೆ. ಅಲ್ಲಿಗೆ ಮುಗಿಯಿತು ಅವರ ಕತೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ.

– ಹೀಗೆ ಪಠ್ಯವನ್ನು ತಿದ್ದಲಾಗಿದೆ. ಬನ್ನಂಜೆಯವರ ಲಿಂಗಾಧಾರಿತ ದೃಷ್ಟಿಕೋನವನ್ನು ಪಠ್ಯ ಪರಿಶೀಲನಾ ಸಮಿತಿ ಮಾರ್ಪಾಡು ಮಾಡಿರುವುದು ಸ್ಪಷ್ಟವಾಗುತ್ತದೆ.

ಪರಿಷ್ಕೃತ ಪಠ್ಯದಲ್ಲಿ ಬದಲಾದ ಸಾಲುಗಳು

ಇದನ್ನೂ ಓದಿರಿ: ರೋಹಿತ್‌ ಚಕ್ರತೀರ್ಥ ಆಯ್ಕೆಯ ಮಾನದಂಡಗಳೇನು?: ಬಹಿರಂಗ ಪತ್ರ ಬರೆದ ಶಿಕ್ಷಣ ತಜ್ಞರು

ಲೇಖಕರ ಮೂಲ ಪಠ್ಯ ಬದಲಿಸಬಹುದೇ?

“ಇದು ಎಲ್ಲದಕ್ಕಿಂತ ಅನಾಹುತಕಾರಿ ಹೆಜ್ಜೆ. ಲೇಖಕರು ಇರುವಾಗಲಾದರೂ ಅಡ್ಡಿ ಇಲ್ಲ ಎನ್ನಬಹುದೇನೋ? ಆದರೆ ಲೇಖಕರು ಗತಿಸಿದ ನಂತರ ಅವರು ಬರೆದ ಅವರು ಬರೆದ ಒಂದಕ್ಷರವನ್ನು ತಿದ್ದಬಾರದು. ಇಂದು ಗೋವಿಂದಾಚಾರ್ಯರನ್ನು ತಿದ್ದಲು ಹೊರಟ ಮಂದಿಯೇ ತಮಗೆ ಬೇಕಾದ ಹಾಗೆ ನಾಳೆ ಅಂಬೇಡ್ಕರ್, ಕುವೆಂಪು, ಲಂಕೇಶ್, ತಿರುಮಲಾಂಬ ಎಲ್ಲರನ್ನು ತಿದ್ದಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ.

“ಈಗಾಗಲೇ ಕುವೆಂಪು ವಿಷಯದಲ್ಲಿ ಅವರು ಏನು ಪ್ರತಿಪಾದಿಸಿದ್ದರೋ ಅದಕ್ಕೆ ವಿರುದ್ದವಾಗಿ ಹಲವು ಅಪದ್ದಗಳನ್ನು ಸೃಷ್ಟಿಸುವ ಪ್ರಯತ್ನಗಳು ಸದಾ ಇಲ್ಲಿ ಚಾಲ್ತಿಯಲ್ಲಿವೆ. ಆದರೆ ಅದಕ್ಕೆ ಅವಕಾಶವೇ ನೀಡದಂತೆ ಅವರ ಬರಹಗಳ ಒಂದೊಂದು ವಾಕ್ಯವು ಇಲ್ಲಿಯ ಜಾತೀಯತೆ, ವರ್ಗ ಸಂಘರ್ಷ, ಮೇಲ್ಜಾತಿಯವರ ಮೇಲರಿಮೆ, ತಳ ಸಮುದಾಯದ ಮೇಲೆ ನಡೆಯುವ ಹಲ್ಲೆ, ಶೋಷಣೆ ,ಎಲ್ಲವನ್ನು ತೆರೆದಿಡುತ್ತವೆ. ನಿಧಾನಕ್ಕೆ ಅದನ್ನೇ ಬದಲಾಯಿಸಿಬಿಟ್ಟರೆ, ಇಲ್ಲಿ ಎಲ್ಲವೂ ಚೆನ್ನಾಗಿತ್ತು, ಚೆನ್ನಾಗಿದೆ ಎಂಬುದನ್ನು ಸಾಬೀತು ಮಾಡಿದಂತಾಗಿಬಿಡುತ್ತದೆ. ಇದಕ್ಕೆ ಅವಕಾಶ ಕೊಡಬಾರದು” ಎಂದು ತಿಳಿಸಿದ್ದಾರೆ.

“ಹೆಡಗೇವಾರ್‌ ಭಗವಾಧ್ವಜ ಎಂದು ಬರೆದಿದ್ದರೆ ಅದನ್ನು ರಾಷ್ಟ್ರಧ್ವಜ ಎಂದು ತಿದ್ದಿ ನಮ್ಮ ಮಕ್ಕಳಿಗೆ ಪಠ್ಯವಾಗಿಸಬೇಕಾಗಿಲ್ಲ. ಬನ್ನಂಜೆಯವರ ಪಠ್ಯದಲ್ಲೂ ಮಹಿಳೆಯರ ಬಗೆಗೆ ಇರುವ ಆಕ್ಷೇಪಾರ್ಯ ವಾಕ್ಯಗಳಿದ್ದರೆ ಅದನ್ನು ತಿದ್ದಿ ಅವರೇ ನಿಜವಾದ ಸ್ತ್ರೀ ಉದ್ದಾರಕರು ಎಂಬಂತೆ ಬಿಂಬಿಸಬೇಕಿಲ್ಲ. ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ, ನಮ್ಮ ರಾಷ್ಟ್ರಕ್ಕಾಗಿ ಅಲ್ಲಿನ ಜನರ ಏಳಿಗೆಗಾಗಿ ಜೀವವನ್ನೇ ತೇಯ್ದ ಸಾವಿರಾರು ಜನರ ಚರಿತ್ರೆ ದಾಖಲಾಗಿದೆ. ಅದನ್ನು ಮಕ್ಕಳು ಓದುವಂತಾಗಲಿ. ತಿದ್ದಲ್ಪಟ್ಟ ಬರೆಹಗಳನ್ನು ಪಠ್ಯವಾಗಿಸಿ ಓದಿಸಬೇಕಿಲ್ಲ. ಸಮೃದ್ದವಾದ ನಿಜ ಕಾಳಜಿಯ ಬರೆಹಗಳು, ಬರೆಹಗಾರರು, ವ್ಯಕ್ತಿತ್ವಗಳು ಆಗಿಹೋಗಿರುವ/ಇರುವ ನಾಡಿನಲ್ಲಿ ಸಾವಿರಾರು ಪಠ್ಯಗಳನ್ನು ಮಾಡಬಹುದು. ಅದಕ್ಕಾಗಿ ಸೂಕ್ತವಾದ ಶಿಕ್ಷಣ ತಜ್ಞರಿಗೂ ಇಲ್ಲಿ ಖಂಡಿತಾ ಕೊರತೆಯಿಲ್ಲ” ಎಂದು ಹೇಳಿದ್ದಾರೆ.

“ಲೇಖಕರ ಮೂಲ ಬರಹಕ್ಕೆ ಧಕ್ಕೆಯಾಗದಂತೆ ಸಂಕ್ಷಿಪ್ತಗೊಳಿಸಿ, ಪಠ್ಯವಾಗಿ ರೂಪಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಆದರೆ, ಇಲ್ಲಿ ಮೂಲ ಲೇಖಕರ ವಿಚಾರಗಳನ್ನೇ ಬದಲಿಸಲು ಹೊರಟಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬನ್ನಂಜೆ ಪಾಠದ ಸಾರಾಂಶ ಪ್ರಸ್ತುತವೇ?

ಬನ್ನಂಜೆಯವರ ಪಾಠದಲ್ಲಿನ ಲಿಂಗಾಧಾರಿತ ದೃಷ್ಟಿಕೋನವನ್ನು ತಿದ್ದಿದ್ದರೂ ‘ಶುಕನಾಸನ ಉಪದೇಶ’ ಪಾಠದ ಪ್ರಸ್ತುತತೆಯ ಪ್ರಶ್ನೆ ಬದಿಗೆ ಸರಿಯುವುದಿಲ್ಲ. ಹಣದ ಕುರಿತು ನಕಾರಾತ್ಮಕವಾಗಿ ಮಾತನಾಡುವ ಈ ಪಾಠವು ಮಕ್ಕಳಿಗೆ ಕಲಿಸುವುದೇನು ಎಂಬುದೂ ಚರ್ಚೆಯಾಗಬೇಕಿದೆ.

ವಿವಾದ ಉಂಟಾದ ಸಂದರ್ಭದಲ್ಲಿ ಆಧ್ಮಾತ್ಮಿಕ ವಿಚಾರಗಳ ಬರಹಗಾರರು ಹಾಗೂ ಪ್ರಾಧ್ಯಾಪಕರೂ ಆದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಣದ ಕುರಿತ ಬನ್ನಂಜೆಯವರ ಬೋಧಪ್ರದ (didactic) ಲೇಖನ ಹೊಸದಾಗಿ ಸೇರ್ಪಡೆಯಾಗಿದೆ. ಆ ಲೇಖನದಲ್ಲಿ ಬನ್ನಂಜೆಯವರು ಹಣ ಕೆಟ್ಟದ್ದು, ವರ್ಜ್ಯ ಎಂದು ಉಪದೇಶಿಸುತ್ತಾರೆ. ತನ್ನ ತಾಯಿ-ತಂದೆಯರನ್ನು ಒಳಗೊಂಡಂತೆ ಲೋಕದಲ್ಲಿ ಪ್ರತಿಯೊಬ್ಬರು ಹಣ ಸಂಪಾದನೆಗಾಗಿ ಶ್ರಮಿಸುತ್ತಿರುವ ವಾಸ್ತವದ ಮಧ್ಯೆ ಬದುಕುತ್ತಿರುವ ಮಗುವನ್ನು ಇಂತಹ ವಾಸ್ತವ ದೂರವಾದ ಲೇಖನಗಳು ಸಂಶಯಾತ್ಮನನ್ನಾಗಿಸುತ್ತವೆ, ಗೊಂದಲಕ್ಕೀಡು ಮಾಡುತ್ತವೆ. ಪಠ್ಯವೆನಿಸಿಕೊಳ್ಳುವ ಒಂದು ‘ಪಠ್ಯ’ವು ವಿದ್ಯಾರ್ಥಿಗೆ ಒಂದು ವಸ್ತು ವಿಷಯವನ್ನು ಅದರ ಸಮಗ್ರ ಸ್ವರೂಪದಲ್ಲಿ ಪರಿಚಯಿಸಿಕೊಡಬೇಕಲ್ಲದೆ ಅದು ಏಕಮುಖಿಯಾದ, ಉಪದೇಶಾತ್ಮಕವಾದ ಪಠ್ಯ ಆಗಬಾರದು. ಬನ್ನಂಜೆ ಉಪದೇಶದಂತೆ ಹಣ ನಿಜಕ್ಕೂ ಕೇಡಿನ ಮೂಲವೇ ಆಗಿದ್ದಲ್ಲಿ ಪುರಂದರದಾಸರು ಲಕ್ಷ್ಮಿಯನ್ನು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂದು ಕರೆಯುತ್ತಿರಲಿಲ್ಲ” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲಜ್ಜೆಗೆಟ್ಟ ಸರ್ಕಾರ, ಪರಿಷ್ಕರಣೆಕಗೊಂಡ ಪುಸ್ತಕವನ್ನೇ ಮುದ್ರಿಸಿ ವಿತರಿಸಲು ಮೇ 27 ರಂದು ಸುತ್ತೋಲೆ ಗಳಿಸಿದೆ!

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...