Homeನ್ಯಾಯ ಪಥ’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

- Advertisement -
- Advertisement -

ಉಚಿತ ವಿದ್ಯುತ್ ನೀಡುವುದು ಒಂದು ಕೆಟ್ಟ ನೀತಿ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ,
ಸಾಮಾನ್ಯ ಜನರಿಗೆ ಈ ರೀತಿಯ ಉಡುಗೊರೆ ನೀಡುವುದರ ಕುರಿತು ನಾವೇಕೆ ಇಷ್ಟೊಂದು ಅಸಮಾಧಾನ ಹೊಂದುತ್ತೇವೆ? ಅತ್ಯಂತ ಶ್ರೀಮಂತರ ತೆರಿಗೆ ಕಡಿತ ಮತ್ತು ಸಾಲ ಮನ್ನಾ ಕುರಿತು ನಾವೇಕೆ ಚಿಂತೆಯನ್ನೇ ಮಾಡುವುದಿಲ್ಲ?

ನನಗೆ ಅಸ್ಸಾಮಿನ ಹಿರಿಯ ಗೆಳೆಯರೊಬ್ಬರ ಇ-ಮೇಲ್ ಬಂತು. “ಪ್ರತಿ ವರ್ಷವೂ ಅಸ್ಸಾಮಿನಲ್ಲಿ ನೆರೆಗಳು ಉಂಟುಮಾಡುವ ವಿನಾಶದ ಕುರಿತು ಮಧ್ಯಪ್ರವೇಶ ಮಾಡುವಂತೆ ನಾವು ನ್ಯಾಯಾಲಯಗಳ ಮೊರೆಹೋಗಬಹುದೆ?” ಎಂದು ಅವರು ಕೇಳಿದ್ದರು. ಈ ದೂರಿನ ವೇದಿಕೆಯ ಕುರಿತಾಗಲೀ, ಅದರ ಫಲಶ್ರುತಿಯ ಕುರಿತಾಗಲೀ ಸ್ಪಷ್ಟವಾಗಿ ತಿಳಿಯದೆ, ಅವರು ಸ್ವಲ್ಪ ಹಿಂಜರಿಕೆಯಿಂದಲೇ ಬರೆದಿದ್ದರು. ಆದರೆ, ದಿನನಿತ್ಯ ಎಂಬಂತೆ ನನ್ನನ್ನು ಸಂಪರ್ಕಿಸುವ ಇತರರಿಗೆ ಇಂತಾ ಸಂಶಯವಾಗಲೀ, ಹಿಂಜರಿಕೆಯಾಗಲೀ ಇಲ್ಲವೇ ಇಲ್ಲ. ಅಗ್ನಿಪಥ ಯೋಜನೆ, ಗೋದಿಯ ರಫ್ತು ಅಥವಾ ರಫ್ತಿನ ನಿಷೇಧ, ಅಥವಾ ಹೀಗೆ ಇನ್ನೂ ಹಲವು ವಿಷಯಗಳ ಕುರಿತು ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ಮೊರೆಹೋದರೆ ಮಾತ್ರವೇ ದೇಶ ಉಳಿಯಬಹುದು ಎಂಬುದು ಅವರ ದೃಢ ನಂಬಿಕೆ. ಅವರು ಎತ್ತುವ ವಿಷಯಗಳು ನನ್ನ ಹೃದಯಕ್ಕೂ ಹತ್ತಿರವಾದವುಗಳೇ. ಆದರೆ, ಸಮಸ್ಯೆ ಅಥವಾ ಪರಿಹಾರ ಕಾನೂನಿನಲ್ಲಿ ಇದೆ ಎಂದು ಅವರೇಕೆ ಯೋಚಿಸುತ್ತಾರೆಂದು ನನಗೆ ಸ್ಪಷ್ಟವಾಗಿಲ್ಲ. ’ನೀನು ಪ್ರಶಾಂತ್ ಭೂಷಣ್ ಅವರ ಗೆಳೆಯನಾಗಿರುವುದಕ್ಕೆ ತೆರಬೇಕಾಗಿರುವ ಬೆಲೆಯಿದು’ ಎಂದು- ನಾನು ಪ್ರತೀ ವಾರವೂ ಇಂತಾ ಕೆಲವು ವಿನಂತಿಗಳನ್ನು ಅವರಿಗೆ ವರ್ಗಾಯಿಸುವಾಗ- ನನಗೆ ನಾನೇ ಹೇಳಿಕೊಳ್ಳುತ್ತೇನೆ. ಇಂತಹ ವಿನಂತಿಗಳ ವಿಶೇಷವಾದ ವಿಭಾಗವೊಂದನ್ನು ನಾನು ಗಮನಿಸಿದ್ದೇನೆ. ಕಾನೂನಿನ ಮಧ್ಯಪ್ರವೇಶದ ಮೂಲಕ ಭಾರತೀಯ ರಾಜಕಾರಣದಲ್ಲಿ ಸುಧಾರಣೆ ತರಲು ಬಯಸುವ ನನ್ನ ಗೆಳೆಯರಿವರು.

ಪ್ರಶಾಂತ್ ಭೂಷಣ್

1960ರಿಂದ 80ರ ದಶಕದವರೆಗೂ ಈ ವಿನಂತಿಗಳು- ’ಮೊದಲು ಬಂದವರು ವಿಜಯಿ’ ಎಂಬ ಚುನಾವಣಾ ವ್ಯವಸ್ಥೆಯಿಂದ, ಪ್ರಮಾಣಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವ ವ್ಯವಸ್ಥೆಗೆ ನಾವು ಬದಲಾಗಬೇಕು ಎಂಬಂತವುಗಳಾಗಿರುತ್ತಿದ್ದವು. ಚುನಾವಣಾ ಆಯೋಗವು ಟಿ.ಎನ್. ಶೇಷನ್ ಅವರ ನೇತೃತ್ವದಲ್ಲಿ ಮಾಡಿದ ಚುನಾವಣಾ ಸುಧಾರಣೆಗಳು ಮುನ್ನೆಲೆಗೆ ಬಂದುದರಿಂದ ಈ ಧ್ವನಿಗಳು ಇನ್ನಷ್ಟೂ ಜೋರಾದವು ಮತ್ತು ’ಗಂಭೀರವಲ್ಲದ ಆಭ್ಯರ್ಥಿಗಳು’ ಚುನಾವಣಾ ಕಣಕ್ಕೆ ಇಳಿಯಂತೆ ಮಾಡೋಣ, ಅತಂತ್ರ ಪರಿಸ್ಥಿತಿ ಉಂಟಾಗದಂತೆ ತಡೆಯೋಣ, ಕ್ರಿಮಿನಲ್‌ಗಳು ಮತ್ತು ಭ್ರಷ್ಟರು ಚುನಾಯಿತರಾಗದಂತೆ ತಡೆಯೋಣ ಮುಂತಾದ ಬೇಡಿಕೆಗಳು ಹೆಚ್ಚಾದವು. ಯಾವುದೇ ಜಾತಿ ಅಥವಾ ಕೋಮಿನ ಹೆಸರಿನಲ್ಲಿ ಮತ ಕೇಳುವುದನ್ನು ತಡೆಯೋಣ, ಪಕ್ಷಗಳು ತಾವು ನೀಡಿದ ಚುನಾವಣಾ ಭರವಸೆಗಳಿಗೆ ಕಾನೂನು ಪ್ರಕಾರ ಬದ್ಧವಾಗಿರುವಂತೆ ಮಾಡೋಣ- ಇತ್ಯಾದಿಯಾಗಿ ಈ ಪಟ್ಟಿಗೆ ಇನ್ನಷ್ಟು ವಿಷಯಗಳು ನಂತರದಲ್ಲಿ ಸೇರಿಕೊಂಡವು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್‌: ‘ಮೋದಿಶಾಹಿ’ ಅಧೋಗತಿಗೆ ತಲುಪುತ್ತಿದೆ ಎಂದ ಕಾಂಗ್ರೆಸ್‌

ಪ್ರತೀ ಸಲ ನಾನು ಇಂತಹ ಪ್ರಸ್ತಾಪಗಳನ್ನು ಕೇಳಿದಾಗ ನನಗೆ ಬೀದಿ ದೀಪದ ಕೆಳಗೆ ತನ್ನ ಕಳೆದುಹೋದ ಬೀಗದ ಕೈ ಹುಡುಕುತ್ತಿದ್ದ ವ್ಯಕ್ತಿಯೊಬ್ಬನ ಕುರಿತ ಜೋಕೊಂದು ನೆನಪಾಗುತ್ತದೆ. “ಬೀಗದ ಕೈ ಕಳೆದು ಹೋದದ್ದು ಎಲ್ಲಿ?” ಎಂದು ಕೇಳಿದಾಗ, ಆತ ಕತ್ತಲಲ್ಲಿ ಇದ್ದ ದೂರದ ಸ್ಥಳವೊಂದನ್ನು ತೋರಿಸುತ್ತಾನೆ. “ಹಾಗಾದರೆ ನೀನದನ್ನು ಈ ಬೀದಿ ದೀಪದ ಕೆಳಗೆ ಯಾಕೆ ಹುಡುಕುತ್ತಿದ್ದೀಯ?” ಎಂದು ಕೇಳಿದಾಗ, ಆವನು ಮುಗ್ಧವಾಗಿ ಉತ್ತರಿಸುತ್ತಾನೆ: “ಇಲ್ಲಿ ಬೆಳಕು ಇದೆಯಲ್ಲ; ಅಲ್ಲಿ ಕತ್ತಲೆ!” ರಾಜಕೀಯದ ರೋಗಗಳನ್ನು ಗುಣಪಡಿಸಲು ಕಾನೂನು, ನ್ಯಾಯಾಂಗ ಮತ್ತು ಸಾಂಸ್ಥಿಕ ಪರಿಹಾರಗಳನ್ನು ಬಯಸುವವರು ಹೆಚ್ಚಾಗಿ ಆ ಮನುಷ್ಯನಷ್ಟೇ ಮುಗ್ಧರೋ, ಪೆದ್ದರೋ ಆಗಿರುತ್ತಾರೆ. ಇದಕ್ಕಿಂತಲೂ ಕೆಟ್ಟ ವಿಷಯವೆಂದರೆ, ಇಂತಾ ಹಸ್ತಕ್ಷೇಪಗಳು ಹಲವು ಬಾರಿ ಪ್ರಜಾಪ್ರಭುತ್ವವೊಂದರಲ್ಲಿ ಸಾಮಾನ್ಯ ಜನರ ಅಗತ್ಯ ಮತ್ತು ಆಶಯಗಳ ಬದಲಿಗೆ ಪ್ರತಿಷ್ಟಿತರ ಕಳವಳ-ಆತಂಕಗಳನ್ನು ಕೂರಿಸಬಯಸುತ್ತವೆ.

ಹಿಂದೆ1996ರಲ್ಲಿ, ಚುನಾವಣಾ ಸುಧಾರಣೆಗಳ ಮೇಲಿನ ಚಿಂತನೆಗಳ ಕುರಿತು ’ಬಿಯಾಂಡ್ ಮಿಡಲ್ ಕ್ಲಾಸ್ ಫ್ಯಾಂಟೆಸೀಸ್’ (ಮಧ್ಯಮ ವರ್ಗದ ಭ್ರಮೆಗಳ ಆಚೆ) ಎಂಬ ಕಟುವಾದ ಲೇಖನವೊಂದನ್ನು ನಾನು ಬರೆದೆ. (ಸೆಮಿನಾರ್, ನಂ. 440, ಎಪ್ರಿಲ್ 1996.) ಏನೂ ಬದಲಾಗಲಿಲ್ಲ- ನಾನು ಕೆಲವು ಗೆಳೆಯರ ಅನುಕಂಪ ಕಳೆದುಕೊಳ್ಳುವುದರ ಹೊರತಾಗಿ. ನಂತರದಲ್ಲಿ ರಾಜಕೀಯ ಸುಧಾರಣೆ ಏನು, ಏಕೆ, ಹೇಗೆ ಎಂಬ ಕುರಿತು ವಿವರಿಸುತ್ತಾ, ಹೆಚ್ಚು ಉದ್ದವಾದ, ಹೆಚ್ಚು ನಿರಾಳವಾದ ಆವೃತ್ತಿಯನ್ನು ಬರೆದೆ. ಆದರೆ, ದೇಶದ ಎಲ್ಲಾ ರಾಜಕೀಯ ರೋಗಗಳಿಗೆ ಯಾವುದಾದರೂ ಕಾನೂನು ಅಥವಾ ಇನ್ನಾವುದರ ಮೂಲಕವೇ ಅಂತಿಮ ಪರಿಹಾರ ಕಂಡುಕೊಳ್ಳಲು ಬಯಸುವವರ ಉತ್ಸಾಹವನ್ನು ಮಾತ್ರ ಇದ್ಯಾವುದೂ ಕುಂದಿಸಿಲ್ಲ.

ನಾವೊಂದು ಮಂತ್ರದ ಕಷಾಯ ಹುಡುಕುತ್ತಿರುವ ದೇಶವಾಗಿದ್ದೇವೆ. ನಾವು ಎಂತ ಅವಸರದಲ್ಲಿದ್ದೇವೆ ಎಂದರೆ, ನಿಜವಾಗಿಯೂ ರೋಗವಿದೆಯೇ ಅಥವಾ ಅದಕ್ಕೆ ನಾವು ಬಯಸುವಂತಾ ರೀತಿಯ ಮದ್ದಿನ ಅಗತ್ಯ ಇದೆಯೇ ಎಂದು ಯೋಚಿಸುವಷ್ಟೂ ನಮಗೆ ವ್ಯವಧಾನವಿಲ್ಲ. ನಾವು ಎಷ್ಟು ಹತಾಶರಾಗಿದ್ದೇವೆ ಎಂದರೆ, ವೈದ್ಯನ ಕುರಿತಾಗಲೀ ಮದ್ದಿನ ಕುರಿತಾಗಲೀ ವಿಚಾರಿಸಿ ನೋಡಲು ಸಮಯ ವ್ಯರ್ಥ ಮಾಡುವಂತಿಲ್ಲ. ನಮಗೆ ಪಕ್ಕಾ ಪರಿಹಾರ ಬೇಕು: ಇಲ್ಲೇ ಮತ್ತು ಈಗಿಂದೀಗಲೇ!

ರೋಗಕ್ಕಿಂತಲೂ ಕೆಟ್ಟ ಪರಿಹಾರ?

ಈ ಮಹಾ ಕಥಾನಕದಲ್ಲಿ ಇತ್ತೀಚಿನದ್ದು ಎಂದರೆ, ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ವೇಳೆ ’ವಿವೇಚನೆಯಿಲ್ಲದ ಉಚಿತ ಕೊಡುಗೆ’ಗಳ ಭರವಸೆ ನೀಡುವುದನ್ನು ತಡೆಯಬೇಕು, ಇಲ್ಲವಾದರೆ ಚುನಾವಣಾ ಆಯೋಗವು ಅಂತಾ ಪಕ್ಷಗಳ ಚುನಾವಣಾ ಚಿಹ್ನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟನ್ನು ಕೋರುವ ಅರ್ಜಿ. ಅರ್ಜಿದಾರ, ವಕೀಲ ಮತ್ತು ಚಿಕ್ಕ ಮಟ್ಟದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಎಂಬವರು ಕೋಮುದ್ವೇಷ ಹರಡುತ್ತಿರುವ ಆರೋಪಗಳ ಸಹಿತ ಹಲವಾರು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ ಎಂದಷ್ಟೇ ಹೇಳಿದರೆ ಸಾಕಾಗುತ್ತದೆ. ಚುನಾವಣಾ ಸುಧಾರಣೆಗಳಿಗೆ ನೇರವಾಗಿ ಸಂಬಂಧ ಹೊಂದಿರುವ ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆಗೆ ಸಮಯ ಹೊಂದಿಸಲಾಗದ ಸುಪ್ರೀಂ ಕೋರ್ಟ್, ತನ್ನ ಅಮೂಲ್ಯವಾದ ಸಮಯವನ್ನು ಇಂತಹದ್ದೊಂದು ಅರ್ಜಿಯ ವಿಚಾರಣೆಗೆ ಕೊಡುತ್ತಿದೆ ಎಂಬುದರ ಕುರಿತೂ ನಾವು ಗಮನ ಕೇಂದ್ರೀಕರಿಸುವುದು ಬೇಡ. ವರದಿಗಳ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ಪೀಠವು, ಈ ಉಚಿತ ಕೊಡುಗೆಗಳು ಮುಂದುವರಿಯಬೇಕೇ ಬೇಡವೇ ಎಂಬ ಕುರಿತು ನಿಲುವೊಂದನ್ನು ತಳೆಯಬೇಕು ಎಂದು ಕೇಂದ್ರ ಸರಕಾರವನ್ನು ಕೋರಿದ್ದು, ಮುಂದಿನ ವಿಚಾರಣೆಗೆ ಆಗಸ್ಟ್ 3ರ ದಿನಾಂಕ ನಿಗದಿಪಡಿಸಿದೆ.

ಅಶ್ವಿನಿ ಉಪಾಧ್ಯಾಯ

ಒಂದು ಕ್ಷಣ ನಾವು ’ಉಚಿತ ಕೊಡುಗೆ’ ಎಂಬ ವ್ಯಾಪಕವಾದ ರಾಜಕೀಯ ರೋಗ ಇದೆ ಎಂದೇ ಅಂದುಕೊಳ್ಳೋಣ. ಆದುದರಿಂದ, ಇದರ ಕುರಿತಾಗಿ ಆತಂಕ ಹೊಂದಿರುವ ಎಲ್ಲರೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ಈ ರೋಗ ಎಷ್ಟು ಗಂಭೀರವಾದದ್ದು? ಇದು ನನ್ನ ಆದ್ಯತೆಗಳ ಪಟ್ಟಿಯಲ್ಲಿ ಅತ್ಯಂತ ಮೇಲೆ ಇದೆಯೆ? ಇದು ಗುಣವಾಗಬಹುದೆ? ಚಿಕಿತ್ಸೆ ಕೈಗೆಟಕುವಂತದ್ದೆ? ಅಥವಾ ಆ ರೋಗಕ್ಕಿಂತ ಅದರ ಚಿಕಿತ್ಸೆಯೇ ಹೆಚ್ಚು ಖರ್ಚಿನದಾಗಿದ್ದರೆ, ರೋಗದೊಂದಿಗೆಯೇ ಬದುಕಲು ನಾನು ಕಲಿಯಬೇಕೆ? ಅದನ್ನು ಗುಣಪಡಿಸಬೇಕಾದರೆ, ಸರಿಯಾದ ವೈದ್ಯರು ಯಾರು? ಸರಿಯಾದ ಔಷಧಿ ಯಾವುದು?

ಈಗ ನೀವು ಒಂದು ನಿಮಿಷ ಯೋಚನೆ ಮಾಡಿದರೂ ಸಾಕು; ಯಾವುದೇ ರಾಜಕೀಯ ಪಕ್ಷದ ಚುನಾವಣಾ ಚಿಹ್ನೆಯನ್ನು ಕಿತ್ತುಕೊಳ್ಳುವುದು, ಅಥವಾ ಆ ಮೂಲಕ, ಚುನಾವಣಾ ಯಶಸ್ಸಿನ ಯಾವುದೇ ಅವಕಾಶವನ್ನು ಇಲ್ಲದಂತೆ ಮಾಡುವುದು ರೋಗಕ್ಕಿಂತಲೂ ಕೆಟ್ಟದಾದ ಚಿಕಿತ್ಸೆ ಎಂದು ತಿಳಿದುಬಿಡುತ್ತದೆ. ಒಂದು ಪ್ರಜಾಪ್ರಭುತ್ವದಲ್ಲಿ ಯಾರ ಕೈಗೂ ಇಂತಾ ಕೊಡಲಿಯನ್ನು ಕೊಡಬಾರದು; ಯಾಕೆಂದರೆ, ಅಂತಾ ಕೊಡಲಿ ಹೊಂದಿದ ವ್ಯಕ್ತಿ ಅಥವಾ ಸಂಸ್ಥೆ ಜನರಿಗಿಂತಲೂ ಹೆಚ್ಚು ಶಕ್ತಿಶಾಲಿ ಆಗುವ ಕಾರಣಕ್ಕಾಗಿ. ಚುನಾವಣಾ ಆಯೋಗವು ಈಗಾಗಲೇ ಕಳೆದುಕೊಂಡಿರುವುದಕ್ಕಿಂತಲೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಇನ್ನೂ ಕಳೆದುಕೊಳ್ಳಬಾರದು ಎಂದಾದರೆ, ಇಂತಾ ಅಧಿಕಾರವನ್ನು ಅದಕ್ಕೆ ಯಾವತ್ತೂ ನೀಡಬಾರದು. “ಇದು ಮತದಾರರೇ ನಿರ್ಧರಿಸಬೇಕಾದ ಪ್ರಶ್ನೆ” ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿರುವುದು ಸರಿಯಾಗಿದೆ.

ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತೆ ಹಣಕಾಸು ಆಯೋಗವನ್ನು ಕೇಳಬಹುದೇ ಎಂಬುದನ್ನು ಮುಖ್ಯ ನ್ಯಾಯಮೂರ್ತಿಯನ್ನೊಳಗೊಂಡ ಪೀಠವು ಪರಿಗಣಿಸಿದೆ ಎಂದು ವರದಿಗಳು ಹೇಳುತ್ತವೆ. ವಾಸ್ತವವೆಂದರೆ, ಯಾವುದೇ ಸಂಸ್ಥೆಯು ಇಂತಾ ಒಂದು ಅಧಿಕಾರವನ್ನು ಅನಿಯಂತ್ರಿತವಾಗಿ ಅಥವಾ ನಿರಂಕುಶವಾಗಿ ಚಲಾಯಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಕೊಲ್ಲುವ ಅತ್ಯಂತ ಸಾಮಾನ್ಯ ಉಪಾಯ ಎಂದರೆ, ಒಂದಲ್ಲದಿದ್ದರೆ, ಇನ್ನೊಂದು ನೆಪ ಹೂಡಿ ಪ್ರತಿಸ್ಪರ್ಧಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸುವುದು ಎಂಬುದನ್ನು ನಾವು ಮರೆಯುವುದು ಬೇಡ. ಇಂತಾ ಒಂದು ಅವಕಾಶದ ಕಿಟಕಿ ನಮ್ಮ ದೇಶದಲ್ಲಿ ಈ ತನಕ ಇಲ್ಲ. ಇಂತಾ ಕಿಟಕಿಯೊಂದನ್ನು ಯಾವತ್ತೂ ತೆರೆಯಬಾರದು.

’ಉಚಿತ ಕೊಡುಗೆ’ ಒಂದು ರೋಗವೆ?

ಹಾಗಾದರೆ, ರೋಗವನ್ನು ಗುಣಪಡಿಸುವುದು ಹೇಗೆ? ಈ ಪ್ರಶ್ನೆಯನ್ನು ಮುಂದುವರಿಸಿ, ಇನ್ನೊಂದು ಪರಿಹಾರವನ್ನು ಹುಡುಕುವ ಮೊದಲು ಒಂದು ಚಿಂತನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ; ಪ್ರಜಾಪ್ರಭುತ್ವವೊಂದರಲ್ಲಿ ರಾಜಕೀಯವು ಸ್ವಯಂ ನಿಯಂತ್ರಿತ ಚಟುವಟಿಕೆಯಾಗಿರಬೇಕು. ನೀವು ಪ್ರಜಾಪ್ರಭುತ್ವವನ್ನು ಬಾಹ್ಯ ಬೆದರಿಕೆಗಳಿಂದ ರಕ್ಷಿಸಬಹುದು; ತಾತ್ಕಾಲಿಕ ತಪ್ಪುಗಳಿಂದ, ವೈಯಕ್ತಿಕ ತೆವಲುಗಳಿಂದ, ಬಹುಸಂಖ್ಯಾತವಾದಿ ಅತಿರೇಕಗಳಿಂದ ರಕ್ಷಿಸಿಕೊಳ್ಳಬಹುದು. ಆದರೆ, ನೀವು ಪ್ರಜಾಪ್ರಭುತ್ವವನ್ನು ಜನರಿಂದಲೇ ರಕ್ಷಿಸಿಕೊಳ್ಳಲು ಆಗದು.

ಒಂದು ವೇಳೆ ’ಉಚಿತ ಕೊಡುಗೆ’ಗಳು ಜನರನ್ನು ಆಕರ್ಷಿಸುತ್ತವೆ ಎಂದಾದರೆ, ನೀವು ಅವರಿಗೆ ಈ ಕುರಿತು ತಿಳುವಳಿಕೆ ನೀಡಬಹುದು. ಇಂತಾ ಭರವಸೆಗಳ ಪೊಳ್ಳುತನವನ್ನು ಬಹಿರಂಗಗೊಳಿಸಲು ಸಾಧ್ಯವಾಗುವಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡಬಹುದು. ಕಾರ್ಯಸಾಧ್ಯವಲ್ಲದ ಭರವಸೆಗಳನ್ನು ನೀಡುವ ಪಕ್ಷಗಳು ಮತ್ತು ನಾಯಕರನ್ನು ಈ ಕುರಿತು ಪ್ರಶ್ನಿಸಲು ಮಾಧ್ಯಮಗಳಿಗೆ ಹೆಚ್ಚಿನ ಅಧಿಕಾರ ನೀಡಬಹುದು. ಒಂದು ವೇಳೆ ಜನರು ಅತ್ಯಂತ ದೊಡ್ಡ ವರ್ಗ ಒಂದು ದೂರಕಾಲೀನ ಕಾರ್ಯಸೂಚಿಯನ್ನು ಬಯಸಿದರೆ, ಸ್ವತಃ ಪ್ರಜಾಪ್ರಭುತ್ವವನ್ನೇ ದಮನಿಸದೆ ನೀವೇನೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಅಂತಿಮವಾಗಿ ’ಉಚಿತ ಕೊಡುಗೆ’ಗಳ ಬಗ್ಗೆ, ಅಂದರೆ, ’ರೋಗ’ದ ಬಗ್ಗೆಯೇ ಒಂದು ಚಿಂತನೆ. ’ಉಚಿತ ಕೊಡುಗೆ’ಗಳನ್ನು ನೀಡುವುದು ಒಂದು ಸಮಸ್ಯೆ ಎಂದು ನಾವೇಕೆ ಭಾವಿಸಬೇಕು? ಮೇಲ್ನೋಟಕ್ಕೇ ಇಂತಹ ನೀತಿಗಳು ಬೇಜವಾಬ್ದಾರಿಯುತ ಮತ್ತು ರಾಷ್ಟ್ರೀಯ ಆರ್ಥಿಕ ಸಂಪನ್ಮೂಲಗಳ ಪೋಲು ಎಂಬಂತೆ ಕಾಣುತ್ತವೆ. ನನ್ನನ್ನು ಕೇಳಿದರೆ, ಉಚಿತ ವಿದ್ಯುತ್ ಒಂದು ಕೆಟ್ಟ ನೀತಿ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಸಾಮಾನ್ಯ ಜನರಿಗೆ ಈ ರೀತಿಯ ಉಡುಗೊರೆ ನೀಡುವ ಬೇಜವಾಬ್ದಾರಿ ಆರ್ಥಿಕ ನೀತಿಗಳನ್ನು ಕುರಿತು ಮಾತ್ರವೇ ನಾವೇಕೆ ಇಷ್ಟೊಂದು ಅಸಮಾಧಾನ ಹೊಂದುತ್ತೇವೆ? ಅತ್ಯಂತ ಶ್ರೀಮಂತರ ತೆರಿಗೆ ಕಡಿತ, ಲಾಭದ ಮಳೆ ಸುರಿಸುವ ಕಾರ್ಯಕ್ರಮಗಳು ಮತ್ತು ಸಾಲ ಮನ್ನಾ ಕುರಿತು ನಾವೇಕೆ ಚಿಂತೆಯನ್ನೇ ಮಾಡುವುದಿಲ್ಲ?

ಈ ರೀತಿಯ ತರ್ಕರಹಿತ ’ಉಚಿತ ಕೊಡುಗೆ’ಗಳ ಭರವಸೆಗಳಿಗೆ ಬಲಿಬೀಳುವ ಬಡ ಮತದಾರರು ಅಷ್ಟೊಂದು ತರ್ಕರಹಿತರಲ್ಲ ಎಂಬುದರಿಂದಾಗಿ ಆಗಿರಬಹುದೆ? ಬಹುಶಃ ಅವರಿಗೆ ಪ್ರಜಾಪ್ರಭುತ್ವದ ತರ್ಕ ಮತ್ತು ಮೇಲಿಂದ ಕೆಳಕ್ಕೆ ಇಳಿದುಬರುವ ಆರ್ಥಿಕತೆಯ ಅಸಾಧ್ಯತೆ ತಜ್ಞರಿಗಿಂತ ಹೆಚ್ಚಾಗಿ ಅರ್ಥವಾಗುತ್ತದೆ. ತಾರ್ಕಿಕ ವಿವೇಚನೆಯಿಂದ ಕೆಲಸ ಮಾಡುವ ನೀತಿಗಳು ಹೇಗಿದ್ದರೂ ತಮಗೆ ಹೆಚ್ಚಿನದೇನನ್ನೂ ನೀಡುವುದಿಲ್ಲ; ಈಗಲೇ, ಇಲ್ಲಿಯೇ ಎಷ್ಟನ್ನು ಬಾಚಿಕೊಳ್ಳಲು ಸಾಧ್ಯವೋ ಅಷ್ಟೇ ತಮಗೆ ಸಿಗುವುದು ಎಂದು ಬಹುಶಃ ಅವರಿಗೆ ಅರ್ಥವಾಗಿದೆ. ಕೆಲವು ನೇರ ಮತ್ತು ಕಣ್ಣಿಗೆ ಕಾಣುವ ಸರಕುಗಳು ಮತ್ತು ’ಉಚಿತ ಕೊಡುಗೆ’ಗಳು ಮಾತ್ರವೇ ವಾಸ್ತವದಲ್ಲಿ ತಮಗೆ ದಕ್ಕಲಿರುವುದು ಎಂದು ಅವರಿಗೆ ಗೊತ್ತಿರುವುದರಿಂದಲೇ ಅವರು ಅವುಗಳಿಗಾಗಿಯೇ ಮತ ಹಾಕುತ್ತಾರೆ. ಈ ’ಉಚಿತ ಕೊಡುಗೆ’ಗಳ ಬಗ್ಗೆ ಚಿಂತಿತರಾಗಿರುವವರು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹಿಂದೊಮ್ಮೆ ಕರೆದಿದ್ದ ’ತಾರ್ಕಿಕ ಮೂರ್ಖ’ರೇ ಆಗಿರಬಹುದೆ?

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...