Homeಮುಖಪುಟಭಾರತದ ಇಂದಿನ ಪರಿಸ್ಥಿತಿಗೆ ಕನ್ನಡಿಯಂತಿರುವ 'Z'

ಭಾರತದ ಇಂದಿನ ಪರಿಸ್ಥಿತಿಗೆ ಕನ್ನಡಿಯಂತಿರುವ ‘Z’

- Advertisement -
- Advertisement -

Z ಅಂದರೆ ಗ್ರೀಕ್ ಭಾಷೆಯಲ್ಲಿ ’ಅವನು ಜೀವಂತವಾಗಿದ್ದಾನೆ’ ಎಂದರ್ಥ. ಗ್ರೀಕ್‌ನಲ್ಲಿ ಈ ಅಕ್ಷರವನ್ನ ಪ್ರತಿಭಟನೆಯ ಪ್ರಮುಖ ಸ್ಲೋಗನ್ ಆಗಿ ಬಳಸಲಾಗುತ್ತದೆ. ನಮ್ಮಲ್ಲಿ ಭಗತ್ ಸಿಂಗ್‌ರಿಂದ ಹೆಚ್ಚು ಪ್ರಚಲಿತಕ್ಕೆ ಬಂದ ’ಇಂಕ್ವಿಲಾಬ್ ಜಿಂದಾಬಾದ್’ ಎಂಬ ಸ್ಲೋಗನ್ನಿಗೆ ಇದು ಅರ್ಥದಲ್ಲಿ ಮತ್ತು ಉದ್ದೇಶದಲ್ಲಿ ಹೆಚ್ಚು ಸಮೀಪದ್ದಾಗಿದೆ. ಸಾಮಾಜಿಕ ಚಳವಳಿಗಳ ಜತೆಗೆ ಗುರುತಿಸಿಕೊಂಡಿದ್ದ, ಸಮುದಾಯ ರಂಗತಂಡದ ಸದಸ್ಯರಾಗಿದ್ದ ನಿವೃತ್ತ ಪ್ರಾಧ್ಯಾಪಕ ಎಚ್ ವಿ ವೇಣುಗೋಪಾಲ್ (ಜೂನ್ 24ರಂದು ಅವರು ನಮ್ಮನ್ನಗಲಿದರು) ಅವರು ಗ್ರೀಕ್‌ನ ಖ್ಯಾತ ಸಿನಿಮಾ ನಿರ್ದೇಶಕ ಕೊಸ್ಟ ಗವ್ರಾಸ್‌ನ ನೋಡಲೇಬೇಕಾದ ನಾಲ್ಕು ಸಿನಿಮಾಗಳನ್ನು ಪಟ್ಟಿ ಮಾಡುವಿರಾ ಎಂದಾಗ ನನಗೆ ತಟ್ಟನೆ ನೆನಪಾಗಿದ್ದು ಇವರ 1969ರ ಸಿನಿಮಾ ’Z’.

’Z’ ಸಿನಿಮಾವನ್ನು ನಾನು ನೋಡಿದ ಕಾಲಕ್ಕೆ, ನಮ್ಮದೇ ಪರಿಸ್ಥಿತಿಗೆ ನಿರ್ದಿಷ್ಟವಾಗಿ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲವಾಗಿದ್ದರೂ, ನಮ್ಮನ್ನಾಳುವ ಪ್ರಭುತ್ವ ಸಾಮಾನ್ಯವಾಗಿ ಜನಪರ ಧ್ವನಿಗಳನ್ನು ಮತ್ತು ಪ್ರತಿರೋಧ-ಪ್ರತಿಭಟನೆಗಳನ್ನು ಹೇಗೆ ಹತ್ತಿಕ್ಕುತ್ತವೆ ಎಂಬುದನ್ನು ಮನಗಾಣಿಸಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಈ ದೇಶದಲ್ಲಿ ಜನಪರ ಚಳವಳಿ, ಪ್ರತಿಭಟನೆ, ಪ್ರತಿರೋಧಗಳನ್ನು ಪ್ರಭುತ್ವ ಹತ್ತಿಕ್ಕಿದ್ದು, ಇದಕ್ಕೆ ಪೂರಕವಾಗಿ ಮೂಲಭೂತವಾದವನ್ನು ತನ್ನ ಕಾರ್ಯಸಾಧನೆಗೆ ಬಳಸಿಕೊಂಡಿದ್ದು, ಅಲ್ಪಸಂಖ್ಯಾತ ಜನಪರ ದನಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಜೈಲು ಪಾಲಾಗುವಂತೆ ಮಾಡಿದ್ದು- ಇವೆಲ್ಲವೂ ಕೊಸ್ಟ ಗವ್ರಾಸ್‌ನ ’Z’ ಸಿನಿಮಾದ ನಡೆಯುವ ಘಟನೆಗಳ ಪ್ರತಿಬಿಂಬದಂತೆ ಕಂಡವು.

’Z’ (1969): ’Z’ ಸಿನಿಮಾ ಗ್ರೀಕ್‌ನ ಲೇಖಕ ಮತ್ತು ರಾಜತಾಂತ್ರಿಕ ವಸ್ಸಿಲಿಸ್ ವಸ್ಸಿಲಿಕೊಸ್ 1966ರಲ್ಲಿ ಬರೆದ ಇದೇ ಹೆಸರಿನ ಕಾದಂಬರಿ ಆಧರಿಸಿದ್ದು. ಗ್ರೀಕ್‌ನ ರಾಜಕಾರಣಿ ಮತ್ತು ಯುದ್ಧ ವಿರೋಧಿ ಗ್ರಿಗೋರಿಸ್ ಲ್ಯಾಂಬ್ರಾಕಿಸ್‌ನನ್ನು ಅಂದು ಅಧಿಕಾರದಲ್ಲಿದ್ದ Regime of the Colonels ಎಂಬ ಬಲಪಂಥೀಯ ಮಿಲಿಟರಿ ಪಕ್ಷ, ಪೊಲೀಸ್ ಹಾಗೂ ತನ್ನ ಬಲಫಂಥೀಯ ಸಂಘಟನೆಯ ಗೂಂಡಾಗಳನ್ನು ಬಳಸಿಕೊಂಡು ಹೇಗೆ ಹತ್ಯೆಗೈಯ್ಯಲಾಯಿತು ಎಂಬುದನ್ನು ವಿವರವಾಗಿ ಪ್ರಸ್ತುತಪಡಿಸುತ್ತದೆ.

ಕೊಸ್ಟ ಗವ್ರಾಸ್‌

ಸಿನಿಮಾ ಪ್ರಾರಂಭದ ದೃಶ್ಯ, ಕೃಷಿ ಸಂಬಂಧಿತ ಒಂದು ಕಾರ್ಯಕ್ರಮ; ಮಿಲಿಟರಿ ಸರ್ಕಾರದ ಭಾಗವಾಗಿದ್ದ ಪೊಲೀಸ್ ಚೀಫ್ ತನ್ನ ಭಾಷಣದಲ್ಲಿ ಹೀಗೆ ಹೇಳುತ್ತಾನೆ: ’ಹೇಗೆ ಬೆಳೆಗಳಿಗೆ ಫಂಗಸ್ ತಗುಲಿ ಅದು ಇಡೀ ಬೆಳೆಯನ್ನೇ ನಾಶ ಮಾಡುತ್ತದೆಯೊ, ಈ ಐಡಿಯಾಲಜಿ ಎಂಬುದು ಕೂಡ ಒಂದು ರೀತಿಯ ಫಂಗಸ್ ಅಥವಾ ವೈರಸ್, ಇಸಮ್ ಎಂಬುದು ನಮ್ಮ ಆಂತರಿಕ ಭದ್ರತೆಗೆ ಮಾರಕವಾದದ್ದು. ಇದನ್ನು ಪ್ರಾರಂಭಿಕ ಹಂತದಲ್ಲೇ ನಾಶ ಮಾಡಬೇಕು ಮತ್ತು ಹೆಚ್ಚು ಹರಡದ ಹಾಗೆ ಮುಂಜಾಗ್ರತೆಯನ್ನು ವಹಿಸಬೇಕು. ಇದನ್ನು ಎರಡು ಹಂತಗಳಲ್ಲಿ ಮಾಡಬಹುದು; ಒಂದು ಶಾಲಾ ಹಂತದಲ್ಲಿ ಮತ್ತೊಂದು ಕಾಲೇಜು ಹಂತದಲ್ಲಿ. ಆಂತರಿಕ ಭದ್ರತೆಗೆ ಯುದ್ಧ ಅನಿವಾರ್ಯ’ ಈ ಮಾತುಗಳು ಈ ಬಲಪಂಥೀಯ ಸಿದ್ಧಾಂತದ ಆಲೋಚನೆ ಯಾವ ಮಾದರಿಯದ್ದು ಎಂಬುದಕ್ಕೆ ನಿದರ್ಶನವಾಗಿ ಕಾಣುತ್ತದೆ.

ಅಣು ಶಸ್ತ್ರಾಸ್ತ್ರಗಳನ್ನು ಹೊಂದುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಗ್ರಿಗೋರಿಸ್ ಲ್ಯಾಂಬ್ರಾಕಿಸ್ ಮಾಡಬೇಕಾದ ಭಾಷಣಕ್ಕಾಗಿ ಅಲ್ಲಿನ ವಿರೋಧ ಪಕ್ಷ ಮತ್ತು ಎಡಪಂಥೀಯ ಸಂಘಟನೆಗಳು ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿರುತ್ತವೆ. ಆದರೆ ಅಲ್ಲಿನ ಸರ್ಕಾರ ತನ್ನ ಪ್ರಭಾವ ಬಳಸಿ ಆ ಕಾರ್ಯಕ್ರಮಕ್ಕೆ ಸಭಾಂಗಣ ಸಿಗದ ರೀತಿ ಮಾಡುತ್ತದೆ. ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡಲು ನಿರಾಕರಿಸುತ್ತದೆ. ಹೇಗಾದರೂ ಸರಿ, ಈ ಕಾರ್ಯಕ್ರಮ ಮಾಡಿಯೇ ತೀರಬೇಕು ಎಂದು ನಿರ್ಧರಿಸಿದಾಗ, ಗ್ರಿಗೋರಿಸ್‌ನ ಜೀವಕ್ಕೆ ಅಪಾಯವಿದೆ ಎಂಬ ಸುಳಿವು ಸಿಗುತ್ತದೆ. ಕಾರ್ಯಕ್ರಮ ರದ್ದುಮಾಡಲು ಆಯೋಜನೆಯ ಕೆಲವು ಸದಸ್ಯರು ಸೂಚಿಸಿದಾಗ ಗ್ರಿಗೋರಿಸ್ ನಿರಾಕರಿಸುತ್ತಾನೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಉದ್ವಿಗ್ನತೆಯ ವಾತಾವರಣವಿದೆ; ಒಂದು ಕಡೆ ಗ್ರಿಗೋರಿಸ್ ಭಾಷಣವನ್ನು ವಿರೋಧಿಸುವ ಜನಸಮೂಹ, ಮತ್ತೊಂದು ಕಡೆ ಕಾರ್ಯಕ್ರಮ ಬೆಂಬಲಿಸಿ ಬಂದ ಜನಸಮೂಹ, ಇನ್ನೊಂದೆಡೆ ಪೊಲೀಸ್ ಸಿಬ್ಬಂದಿ. ಗ್ರಿಗೋರಿಸ್ ಭಾಷಣವನ್ನು ವಿರೋಧಿಸಿ ಬಂದ ಜನಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದವರನ್ನು ಮತ್ತು ಆಯೋಜಕರನ್ನು ಹೀಯಾಳಿಸುವುದು, ಎಳೆದಾಡುವುದನ್ನು ಮಾಡುವುದರ ಮುಖಾಂತರ ಅವರನ್ನು ಉದ್ರೇಕಿಸುತ್ತಿದ್ದಾರೆ. ಪೊಲೀಸರು ಮಾತ್ರ ಪರಿಸ್ಥಿಯನ್ನು ನಿಯಂತ್ರಿಸದೆ ನಿರ್ಲಿಪ್ತರಾಗಿದ್ದಾರೆ; ಇದನ್ನೆಲ್ಲ ಧಿಕ್ಕರಿಸಿ ಭಾಷಣ ಮಾಡಲು ತೆರಳುತ್ತಿದ್ದ ಗ್ರಿಗೋರಿಸ್‌ನ ಮೇಲೆ ಹಲ್ಲೆ ಮಾಡಲಾಗುತ್ತದೆ. ಆಗಲೂ ಪೊಲೀಸರು ಹಲ್ಲೆ ಮಾಡುತ್ತಿದ್ದವರನ್ನು ತಡೆಯುವುದಿಲ್ಲ. ಗ್ರಿಗೊರಿಸ್ ಭಾಷಣ ಮಾಡುತ್ತಿದ್ದಾಗಲೇ ಹೊರಗಡೆ ಕಾರ್ಯಕ್ರಮದ ಅಯೋಜಕರನೇಕರ ಮೇಲೆ ಹಲ್ಲೆ ಮಾಡಲಾಗುತ್ತದೆ. ಗ್ರಿಗೋರಿಸ್ ಎಂದು ತಿಳಿದು ಬೇರೊಬ್ಬನನ್ನು ಎಳೆದೊಯ್ದು ಸಾಯುವ ರೀತಿ ಹೊಡೆಯಲಾಗುತ್ತದೆ. ಭಾಷಣ ಮುಗಿಸಿ ಹೊರಬರುವ ಗ್ರಿಗೋರಿಸ್ ದೂರು ಹೇಳಲು ಪೊಲೀಸ್ ಮುಖ್ಯಸ್ಥನನ್ನು ಕೂಗಿ, ಅವನ ಬಳಿ ಹೋಗುತ್ತಿದ್ದಾಗಲೆ, ಅವನ ಕಡೆಗೆ ವೇಗವಾಗಿ ನುಗ್ಗುವ ಗೂಡ್ಸ್ ಆಟೋದಲ್ಲಿದ್ದ ಒಬ್ಬ ವ್ಯಕ್ತಿ ಗ್ರಿಗೋರಿಸ್ ತಲೆಗೆ ಬಲವಾಗಿ ಬಡಿದು ಪರಾರಿಯಾಗುತ್ತಾನೆ.

ಗ್ರಿಗೋರಿಸ್‌ಗೆ ಬಿದ್ದ ಪೆಟ್ಟಿನಿಂದ ಅವನ ಮೆದುಳು ತೀವ್ರವಾಗಿ ಗಾಯಗೊಂಡಿರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದುತ್ತಾನೆ. ಪೊಲೀಸರು ಅದೊಂದು ಆಕ್ಸಿಡೆಂಟ್ ಎಂದು ಬಿಂಬಿಸಿ ವರದಿ ತಯಾರು ಮಾಡುತ್ತಿರುತ್ತಾರೆ. ಆದರೆ, ಪೊಲೀಸ್‌ನವರಿಗೆ ಆಸ್ಪತ್ರೆ ವರದಿಯನ್ನು ತಿರುಚುವುದಕ್ಕಾಗಲಿ ಹಾಗು ಈ ಪ್ರಕರಣವನ್ನು ತನಿಖೆ ನಡೆಸುವ ನಿಷ್ಪಕ್ಷಪಾತಿಯಾದ ನ್ಯಾಯಾಧೀಶ ಕ್ರಿಸ್ಟೋಸ್ ಸರ್ಟ್ಝೆಟಕಿಸ್‌ನನ್ನು ದಾರಿ ತಪ್ಪಿಸುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. ಮುಂದಿನ ಅರ್ಧ ಸಿನಿಮಾ ಗ್ರಿಗೋರಿಸ್ ಕೊಲೆಯ ಹಿಂದಿನ ಸಂಚನ್ನು ಯಾರ ಒತ್ತಡ ಅಥವಾ ಬೆದರಿಕೆಗೂ ಜಗ್ಗದ ನ್ಯಾಯಾಧೀಶ ಕ್ರಿಸ್ಟೋಸ್ ಬಯಲು ಮಾಡುವ ವೃತ್ತಾಂತ. ಇದು ಸಾಧ್ಯವಾಗುವುದು ಮಾತ್ರ ಫೋಟೊ ಜರ್ನಲಿಸ್ಟ್ ಗಿಯೊರ್ಗೊಸ್ ಬರ್ಟ್ಸೊಸ್‌ನ ಧೈರ್ಯವಂತಿಕೆಯಿಂದ.

ಅಂದು ಗ್ರಿಗೋರಿಸ್ ಕಾರ್ಯಕ್ರಮದ ಆಯೋಜಕರು ಮತ್ತು ಗ್ರಿಗೋರಿಸ್ ಮೇಲೆ ಹಲ್ಲೆ ಮಾಡಿದವರ ಗುರುತುಗಳನ್ನು ಬೆನ್ನಟ್ಟಿ ಹೋದಾಗ ಫೋಟೊ ಜರ್ನಲಿಸ್ಟ್ ಗಿಯೊರ್ಗೊಸ್ ಮತ್ತು ನ್ಯಾಯಾಧೀಶ ಕ್ರಿಸ್ಟೋಸ್‌ಗೆ ತಿಳಿಯುವುದು ಅವರೆಲ್ಲಾ ಒಂದೇ ಮೂಲಕ್ಕೆ ಸೇರಿದವರೆಂದು. ಇವರೆಲ್ಲರೂ ಬಲಪಂಥ ಅಲೋಚನೆಗಳನ್ನು ಪ್ರತಿಪಾದಿಸುತ್ತಿದ್ದ ಸಂಘಟನೆಯವರೇ ಆಗಿರುತ್ತಾರೆ. ಇವರನ್ನು ಗ್ರಿಗೋರಿಸ್ ಹತ್ಯೆಗೆ ನೇಮಿಸುವುದು ಅಂದಿನ ಸರ್ಕಾರದ ಭಾಗವಾಗಿದ್ದ ಪೊಲೀಸ್ ಮುಖ್ಯಸ್ಥ.

ಸಿನಿಮಾ ಒಂದರ ಘಟನೆಯನ್ನಾಗಲಿ ಅಥವಾ ಕಥೆಯನ್ನಾಗಲಿ ಇಷ್ಟು ವಿವರವಾಗಿ ಹೇಳುವುದು ಸಾಧುವಲ್ಲ. ಹೀಗೆ ಹೇಳುವುದಕ್ಕೆ ಕಾರಣ: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಕರಾಳ ಘಟನೆಗಳು ಮತ್ತು ಅದರ ಹಿಂದಿರುವ ಸಂಚನ್ನು ಯಾವ ಉತ್ಪ್ರೇಕ್ಷೆಯೂ ಇಲ್ಲದೆ ’Z’ ಸಿನಿಮಾಗೆ ಸಮೀಕರಿಸಿಕೊಂಡು ನೋಡಬಹುದಾಗಿರುವುದರಿಂದ. ಈ ರೀತಿಯ ಸಂಚಿನ ಬಗ್ಗೆ ಎರಡು ದಶಕಗಳ ಹಿಂದೆಯೇ ಭಾರತದ ಪಶ್ಚಿಮ ರಾಜ್ಯವೊಂದರಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಸಲಾದ ಜನಾಂಗೀಯ ದೌರ್ಜನ್ಯದಿಂದದನೇ ತಿಳಿದಿತ್ತಾದರೂ, ಅದು ಸಂಖ್ಯೆಯಲ್ಲಿ ಈ ದಿನ ಕಾಣಿಸಿಕೊಳ್ಳುತ್ತಿರುವ ಮಟ್ಟಕ್ಕೆ ಅಥವಾ ವಿಸ್ತಾರದಲ್ಲಿ ಇಡೀ ದೇಶವನ್ನೆ ಆವರಿಸಿರುವ ಮಟ್ಟಕ್ಕೆ ಇರಲಿಲ್ಲವೇನೋ! ಈಗ ಇದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಸಂಚಾಗಿ ಮಾತ್ರ ಉಳಿಯದೆ, ಈ ದೇಶದ ಎಲ್ಲಾ ಹಿಂದುಳಿದ ಸಮುದಾಯಗಳ ವಿರುದ್ಧ ತಿರುಗಿ ತನ್ನ ಕಬಂಧ ಬಾಹುಗಳನ್ನು ಚಾಚಿದೆ.

ಭೀಮಾ ಕೋರೆಗಾಂವ್ ಘಟನೆ ಆದಿಯಾಗಿ, ಕೊರೊನಾ ಸಮಯದಲ್ಲಿ ತಬ್ಲಿಗಿ ಜಮಾತ್ ವಿರುದ್ಧ ಮಾಡಿದ ನಕಲಿ ಆರೋಪಗಳು, ಕರಾಳ ಕೃಷಿ ಮಸೂದೆಗಳನ್ನು ಹಾಗು ನಾಗರಿಕ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದ್ದು, ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ಹೀಗೆ ಅಸಂಖ್ಯಾತ ಪ್ರಭುತ್ವದ ದಬ್ಬಾಳಿಕೆಗಳು, ಅವುಗಳ ವಿರುದ್ಧ ನಡೆದ ರೈತ ಹೋರಾಟ, ಮುಸ್ಲಿಂ ತಾಯಂದಿರು ಶಹೀನ್‌ಬಾಗ್‌ನಲ್ಲಿ ನಡೆಸಿದ ಚಳವಳಿ, ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯ ಪರಿಷ್ಕರಣೆ ಚಳವಳಿಗಳನ್ನು ಹತ್ತಿಕ್ಕುವ ಸಂಚುಗಳನ್ನು ಮಾಡಿದ್ದು ಇವೆಲ್ಲಾ ಸಿನಿಮಾದ ಘಟನೆಗಳಿಗೆ ರಿಲೇಟ್ ಆಗುತ್ತವೆ. ಹಿಂದೂ ಧಾರ್ಮಿಕ ಮೂಲಭೂತವಾದಿಗಳು ನಡೆಸುತ್ತಿರುವ ಭಯೋತ್ಪಾದನೆ ಕೃತ್ಯಗಳಿಗೆ ಪ್ರಭುತ್ವ ನಿರ್ಲಿಪ್ತವಾಗಿರುವುದು ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಒತ್ತಾಸೆಯಾಗಿರುವುದು ಇವತ್ತು ಗೌಪ್ಯವಾಗಿಯೇನು ಉಳಿದಿಲ್ಲ.

1963ರ ಗ್ರೀಸ್‌ನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ’Z’ ಸಿನಿಮಾಗೆ ಹೋಲಿಕೆ ಮಾಡಿ ನೋಡಿದರೆ ಭಾರತದ್ದು ಇನ್ನೂ ಚಿಂತಾಜನಕ ಸ್ಥಿತಿ. ಈ ಸಿನಿಮಾದಲ್ಲಿ ಪ್ರಭುತ್ವದ ದಬ್ಬಾಳಿಕೆ ಮತ್ತು ರಾಜಕೀಯ ಒಳಸಂಚನ್ನು ಭೇದಿಸಿದ ಫೋಟೊ ಜರ್ನಲಿಸ್ಟ್ ಗಿಯೊರ್ಗೊಸ್ ಆವತ್ತಿನ ಪತ್ರಿಕೋದ್ಯಮದ ಪ್ರತಿನಿಧಿಯಾಗಿಯೂ ನ್ಯಾಯಾಧೀಶ ಕ್ರಿಸ್ಟೋಸ್ ಅಂದಿನ ನ್ಯಾಯಾಂಗದ ಪ್ರತಿನಿಧಿಯಾಗಿಯೂ ಆಶಾವಾದಿಯಾಗಿ ಕಾಣುತ್ತಾರೆ. ಇಲ್ಲಿ?

ಕೊಸ್ಟ ಗವ್ರಾಸ್

ಕೊಸ್ಟ ಗವ್ರಾಸ್ ಈಗ 89ರ ಹರೆಯ. Adults in the Room ಸಿನಿಮಾ ಮಾಡಿದಾಗ ಗವ್ರಾಸ್‌ಗೆ 86 ವರ್ಷ. ಬಹಳ ಜನಪ್ರಿಯ ಸಿನಿಮಾಗಳಿಗೆ ಕೊಡುವ ಆಸ್ಕರ್‌ನಿಂದ ಹಿಡಿದು, ವಸ್ತು ಮತ್ತು ಅದನ್ನು ಕಟ್ಟುವ ಕಲಾತ್ಮಕತೆಯನ್ನು ಗುರುತಿಸಿ ನೀಡುವ ಕಾನ್ ಸಿನಿಮೋತ್ಸವದ ಪಾಮ್ ಡಿ ಓರ್ ಪ್ರಶಸ್ತಿಗಳನ್ನು ಪಡೆದಿರುವುದು ಗವ್ರಾಸ್‌ನ ವಿಶೇಷತೆ. ಗವ್ರಾಸ್ ಬಹಳ ಮುಖ್ಯವಾಗಿ ಪೊಲಿಟಿಕಲ್ ಫಿಲಂಮೇಕರ್. ಇವನ ರಾಜಕೀಯ ಸಿನಿಮಾಗಳಿಂದ ಒಲಿವರ್ ಸ್ಟೋನ್, ವಿಲಿಯಂ ಫ್ರೈಡ್ಕಿನ್, ಸ್ಟೀವನ್ ಸೊಡೆರ್ಬರ್ಗ್ ಮುಂತಾದ ಸಿನಿಮಾ ನಿರ್ಮಾತೃಗಳು ಪ್ರಭಾವಿತರಾಗಿದ್ದಾರೆ. ಅದರಲ್ಲೂ ’Z’ ಕೊಸ್ಟ ಗವ್ರಾಸ್ ವೃತ್ತಿ ಜೀವನದ ಮೈಲಿಗಲ್ಲು. ಈ ಸಿನಿಮಾ ನೋಡಿದ ಓಲಿವರ್ ಸ್ಟೋನ್ ’ಕೊಸ್ಟ ಗವ್ರಾಸ್ ನನ್ನ ಪ್ರಾರಂಭ ದಿನಗಳ ಆದರ್ಶ ಪುರುಷ’ ಅಂತ ಹೇಳಿಕೊಂಡಿದ್ದಾರೆ. ವಿಲಿಯಂ ಫ್ರೈಡ್ಕಿನ್ ‘Z’ ನನ್ನ ಯಾವತ್ತಿನ ಅತಿ ಮೆಚ್ಚುಗೆಯ ಸಿನಿಮಾ’ ಎಂದಿದ್ದಾರೆ. ಸೊಡೆರ್ಬರ್ಗ್ ’ತನ್ನ Traffic ಸಿನಿಮಾಗೆ ’Z’ ಸ್ಪೂರ್ತಿ ಎಂದು ಸ್ಮರಿಸುತ್ತಾರೆ. ಇವನ 1970ರ The Confession, 1982ರ Missing, 2002 ಮತ್ತು 2019ರ Adults in The Room ನಾನು ನೋಡಿರುವ ಮತ್ತು ಎಲ್ಲರೂ ನೋಡಬೇಕೆಂದು ಬಯಸುವ ಸಿನಿಮಾಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕ್ರಾಂತಿಕಾರಿ ಕೊಸ್ತಾರ ದಿಟ್ಟ ಪೊಲಿಟಿಕಲ್ ಸಿನಿಮಾಗಳು

ಇದನ್ನೂ ಓದಿ: ವಿಕ್ರಾಂತ್‌ ರೋಣ: ದಲಿತರನ್ನು ‘ಪಾತಕಿ’ಗಳಂತೆ ತೋರಿಸಿ ಸಾಧಿಸಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...