Homeಕರ್ನಾಟಕ‘ಅಂಬೇಡ್ಕರ್‌ ಹೇಳಿಕೆ ನಾನು ಓದಿದ್ದಲ್ಲ, ಬೇರೆ ಯಾರೊ ಬರೆದಿದ್ದು ತೆಗೆದುಕೊಂಡಿದ್ದೇನೆ’ - ವಿಜಯ ಕರ್ನಾಟಕ ಅಂಕಣದ...

‘ಅಂಬೇಡ್ಕರ್‌ ಹೇಳಿಕೆ ನಾನು ಓದಿದ್ದಲ್ಲ, ಬೇರೆ ಯಾರೊ ಬರೆದಿದ್ದು ತೆಗೆದುಕೊಂಡಿದ್ದೇನೆ’ – ವಿಜಯ ಕರ್ನಾಟಕ ಅಂಕಣದ ಕುರಿತು ಎನ್‌. ಮಹೇಶ್‌

ಅಂಬೇಡ್ಕರ್‌ ಅವರು ಸಾವರ್ಕರ್ ಅನ್ನು ‘ಸ್ವಾತಂತ್ರ್ಯವೀರ’ ಎಂದು ಕರೆದಿದ್ದಾರೆ ಎಂದು ಅಂಕಣದಲ್ಲಿ ಉಲ್ಲೇಖಿಸಲಾಗಿದೆ

- Advertisement -
- Advertisement -

ಬಿಜೆಪಿ ಶಾಸಕ ಎನ್‌. ಮಹೇಶ್‌ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಅಂಕಣ ಬರಹದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌‌.ಅಂಬೇಡ್ಕರ್‌ ಅವರ ಹೇಳಿಕೆಯನ್ನು ತಿರುಚಿ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಉತ್ತರಿಸಿರುವ ಅವರು, “ಈ ಬಗ್ಗೆ ಬೇರೆ ಯಾರೊ ಬರೆದಿದ್ದನ್ನು ತೆಗೆದುಕೊಂಡಿದ್ದೇನೆ. ಅವರಲ್ಲಿ ಉಲ್ಲೇಖ ಕೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

ಮಾಜಿ ಬಿಎಸ್‌ಪಿ ನಾಯಕ, ಪ್ರಸ್ತುತ ಬಿಜೆಪಿ ಪಕ್ಷಕ್ಕೆ ಪಕ್ಷಾಂತರವಾಗಿರುವ ಕೊಳ್ಳೆಗಾಲದ ಶಾಸಕರಾದ ಮಹೇಶ್ ಅವರು ಮಂಗಳವಾರದ ವಿಜಯ ಕರ್ನಾಟಕ ಪತ್ರಿಕೆಗೆ ‘ಸಮಾಜ ಸುಧಾರಣೆಯ ದಿವ್ಯಚೇತನ ಸಾರ್ವರ್ಕರ್‌’ ಎಂಬ ಲೇಖನವನ್ನು ಬರೆದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬರಹದ ಮೊದಲ ಪ್ಯಾರಾದಲ್ಲಿ, “ಸಮಾಜ ಸುಧಾರಣೆಯ ದಿವ್ಯಚೈತನ್ಯದ ಸೊಡರು ಸ್ವಾತಂತ್ಯ್ರವೀರ ಸಾವರ್ಕರ್‌. ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆಯ ಆಚರಣೆಯು ಒಂದು ಕಳಂಕವಾಗಿದ್ದ, ಇಂಥ ಅಮಾನವೀಯ ಆಚರಣೆಯಿಂದ ನನ್ನಂಥವರಿಗೆ ಆಗುವ ಅವಮಾನ ಅಷ್ಟಿಷ್ಟಲ್ಲ. ಆದರೆ, ಸಾವರ್ಕರ್‌ ಅವರು ಇದರ ನಿವಾರಣೆಗೆ ಕೈಗೊಂಡಿರುವ ಕ್ರಮಗಳು ಕ್ರಾಂತಿಕಾರಿಯಾಗಿವೆ. ಇಂಥ ಐದೋ ಹತ್ತೋ ಮಂದಿ ಇದ್ದರೆ ಅಸ್ಪೃಶ್ಯತೆಯು ಮುಂದಿನ ಕೆಲವೇ ವರ್ಷಗಳಲ್ಲಿ ಇತಿಹಾಸದ ಸಂಗತಿಯಾಗುತ್ತದೆ ಎನ್ನುವ ವಿಶ್ವಾಸ ನನಗಿದೆ” ಎಂದು ಅಂಬೇಡ್ಕರ್‌ ಅವರ ಹೇಳಿದ್ದಾರೆ ಎಂದು ಎನ್. ಮಹೇಶ್ ಅವರು ಬರೆದಿದ್ದಾರೆ.

ಆದರೆ ಈ ಬಗ್ಗೆ ಅನೇಕ ಅಂಬೇಡ್ಕರ್‌‌ವಾದಿಗಳು ಆಕ್ಷೇಪವೆತ್ತಿದ್ದು, ಅಂಬೇಡ್ಕರ್‌ ಅವರು ಈ ರೀತಿ ಅಥವಾ ಇದೇ ರೀತಿ ಅರ್ಥ ಬರುವ ಮಾತು ಹಾಗೂ ಬರಹವನ್ನಾಗಲಿ ಹೇಳಿಯೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಂತಕ ಹ.ರಾ. ಮಹೇಶ್ ಅವರು, “ಈ ಮಾತು ಅಥವಾ ಬರಹ ಬಾಬಾಸಾಹೇಬರ ಯಾವ ಸಂಪುಟದಲ್ಲಿದೆ…!? ಬಾಬಾಸಾಹೇಬರು ಬರೆದಿರುವ ಯಾವ ಪುಸ್ತಕದಲ್ಲಿ ಅಥವಾ ಅವರ ಬರಹ ಭಾಷಣಗಳ‌ ಯಾವ ಸಂಪುಟದ ಯಾವ ಅಧ್ಯಾಯದ ಎಷ್ಟನೇ ಪುಟದಲ್ಲಿ ಬಾಬಾಸಾಹೇಬರು ಸಾವರ್ಕರ್ ಅನ್ನು ‘ಸ್ವಾತಂತ್ರ್ಯವೀರ’ ಎಂದು ಕರೆದಿದ್ದಾರೆ ಅಥವಾ ಆ ಅರ್ಥ ಬರುವಂತೆ ಬರೆದಿದ್ದಾರೆ..?” ಎಂದು ಪ್ರಶ್ನಿಸಿದ್ದಾರೆ.

“ಈ ಲೇಖನ ಬರೆದವರು ಅಥವಾ ಬರೆದುಕೊಟ್ಟವರು ಸಾರ್ವಜನಿಕರಿಗೆ ಆಧಾರ ಸಮೇತ ಸಾಕ್ಷೀಕರಿಸಬೇಕು. ಇಲ್ಲದಿದ್ದರೆ ಈ ಲೇಖನದ ವಿಷಯ ಮತ್ತು ಬರೆದವರ ವ್ಯಕ್ತಿತ್ವ ಎರಡೂ ಫೇಕ್ ಎಂದು ಮತ್ತೆ ಸಾಬೀತಾಗುತ್ತದೆ. ಮತ್ತು ಇದು ಬಾಬಾಸಾಹೇಬರಿಗೆ ಮಾಡಿದ ಅವಮಾನ ಮತ್ತು ಅಂಬೇಡ್ಕರ್ ವಾದಿಗಳಿಗೆ ಮಾಡಿದ ದ್ರೋಹವಾಗುತ್ತದೆ. ಈ ನಡೆಯನ್ನು ಜನ ಎಂದೆಂದಿಗೂ ಕ್ಷಮಿಸುವುದಿಲ್ಲ” ಎಂದು ಹ.ರಾ.ಹೇಶ್‌ ಅವರು ಹೇಳಿದ್ದಾರೆ.

 

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶಾಸಕ ಎನ್‌. ಮಹೇಶ್‌, “ಈ ಬಗ್ಗೆ ಬೇರೆ ಯಾರೊ ಬರೆದಿದ್ದನ್ನು ತೆಗೆದುಕೊಂಡಿದ್ದೇನೆ. ಅವರಲ್ಲಿ ಉಲ್ಲೇಖ ಕೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕದ ಲೇಖನವನ್ನು ಶಾಸಕ ಎನ್‌. ಮಹೇಶ್ ಅವರು ಬರೆದಿಲ್ಲ, ಬೇರೆ ಯಾರೋ ಬರೆದು ಅವರ ಹೆಸರು ಹಾಕಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು,“ಆ ಬರಹ ನಾನೆ ಬರೆದಿರುವುದು, ಈ ಬಗ್ಗೆ ಸಂಶಯ ಯಾಕೆ? ಮನುಷ್ಯ ಬದಲಾಗಬಾರದೆ, ನಾನು ನನ್ನ ಗ್ರಹಿಕೆಯಿಂದ ಬರೆದಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಸಕ ಎನ್‌.ಮಹೇಶ್‌ ಸೂಚನೆ ಮೇರೆಗೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಆರೋಪ

“ಲೇಖನದ ಉಲ್ಲೇಖವನ್ನು ನಾನು ಕೊಡುತ್ತೇನೆ. ಅದನ್ನು ಅವರು ಎಲ್ಲಿಂದ ತೆಗೆದುಕೊಂಡಿದ್ದಾರೆ ಎಂದು ನಾನು ಅವರೊಂದಿಗೆ ಕೇಳುತ್ತಿದ್ದೇನೆ. ಅದನ್ನು ಪಡೆದುಕೊಂಡು ಕೊಡುತ್ತೇನೆ. ಈಗ ನಾನು ಹೊರಗಡೆ ಇದ್ದು, ನಂತರ ನಾನೇ ಮಾಹಿತಿ ನೀಡುತ್ತೇನೆ” ಎಂದು ನಾನುಗೌರಿ.ಕಾಂ ಜೊತೆಗೆ ಶಾಸಕ ಮಹೇಶ್ ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಈ ಅಯ್ಯೋಗ್ಯ ಯಾರಿಗೆ ಬೇಕಾದರೂ ಚಮಚಾಗಿರಿ ಮಾಡಿಕೊಂಡು ಗುಲಾಮಗಿರಿ ಮಾಡಿಕೊಳ್ಳಲಿ,ಅದರೆ ಇಲ್ಲಿ ಭಾಬಾಸಾಹೇಬರ ಹೆಸರನ್ನ ಯಾಕೆ ತೆಗೆದುಕೊಂಡು ಬಂದ? ಇವನ ಸ್ವಾರ್ಥ ತೆವಲಿಗೆ ಇವನ ಕ್ಷೇತ್ರದ ಜನತೆ ಸರಿಯಾಗಿ ವಿಚಾರಿಸಿಕೊಳ್ಳಲಿ.

  2. ಬರಹ ಬೇರೆಯವರದು, ಹೆಸರು ಇವರದು, ದಲಿತರನ್ನು ದಿಕ್ಕು ತಪ್ಪಿಸುವ ಪ್ರಯತ್ನ, ಮುಂದೆ ಒಂದು ದಿನ ದಲಿತ ನಾಯಕರೇ ದಲಿತರಿಗೆ ಮೀಸಲಾತಿಯ ಅಗತ್ಯವಿಲ್ಲ ಎಂದು ಹೇಳುವಂತಹ ಪರಿಸ್ಥಿತಿಗೆ ತರುತ್ತಾರೆ, ಇದು ಶತ ಸಿದ್ಧ, ದಲಿತರು ಹುಷಾರಾಗಿರಿ.

  3. ನಂಗೂ ಮಿಸಲಾತಿ ಬೇಡ … ಆದ್ರೆ ಬಾಬಾ ಸಾಹೇಬರು ಹೇಳಿದ ಸಮ ಪಾಲು ಸಮ ಬಾಳು ಬೇಕು…..

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...