Homeಮುಖಪುಟಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

- Advertisement -
- Advertisement -

ಯಾತ್ರೆ ಹೇಗೆ ನಡೀತಿದೆ? ಏನಾದರೂ ಪರಿಣಾಮ ಆಯ್ತಾ? ಚುನಾವಣೆಯಲ್ಲಿ ಲಾಭ ಆಗಲುಂಟಾ? ಏನಾದರೂ ಸಾಧಿಸ್ತೀರೋ ಇಲ್ವೋ? ಯಾವಾಗ ಕನ್ಯಾಕುಮಾರಿಯಿಂದ ’ಭಾರತ ಜೋಡೊ ಯಾತ್ರಾ’ ಶುರುವಾಯ್ತೋ, ಆವಾಗಿನಿಂದ ಕರೆಗಳು ಬರುತ್ತಲೇ ಇವೆ. ಇಂತಹ ಪರಿಚಿತ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಟಿವಿಯಲ್ಲೂ ಕೋಳಿಜಗಳ ಶುರುವಾಗಿದೆಯಂತೆ. ಯಾತ್ರೆಯ ಹಿಂದಿನ ಇರಾದೆ ಏನಿದೆ ಎಂಬುದರ ಮೇಲೆ ಈ ಯಾತ್ರೆ ಏನು ಸಾಧಿಸುವುದು ಎಂಬುದು ನಿಂತಿದೆ. ಪಾದಯಾತ್ರೆಗಳ ಅನೇಕ ರೀತಿಯದ್ದಾಗಬಹುದು; ಕೆಲವರಿಗೆ ನಡಿಗೆಯಾದರೆ, ಕೆಲವರಿಗೆ ಕಸರತ್ತು. ಅಲೆಮಾರಿ ಸಮಾಜದವರಿಗೆ ಜೀವನಶೈಲಿ; ಹಾಗೂ ಬೀದಿ ಸುತ್ತಿ ಸರಕು ಮಾರಾಟ ಮಾಡುವವರಿಗೆ ವ್ಯಾಪಾರ. ಕೆಲವರು ಹರಕೆ ಹೊತ್ತು ನಡೆದರೆ, ಕೆಲವರು ದೇವರ ದರ್ಶನದ ಆಕಾಂಕ್ಷೆಯಿಟ್ಟು ನಡೆಯುತ್ತಾರೆ. ಕೆಲವೇ ಕೆಲವರು ತನ್ನೊಳಗಿನ ದೇವರನ್ನು ಹುಡುಕುತ್ತ ಕಾಲ್ನಡಿಗೆಯ ಯಾತ್ರೆ ಮಾಡುತ್ತಾರೆ.

ಇದೇ ಮಾತು ರಾಜಕೀಯ ಪಾದಯಾತ್ರೆಗಳಿಗೂ ಅನ್ವಯಿಸುತ್ತದೆ. ಇಲ್ಲಿಯೂ ಕೆಲವರು ಪ್ರವಾಸಿಗಳಿದ್ದಾರೆ, ಕೆಲವರಿಗೆ ದರ್ಶನದ ಆಕಾಂಕ್ಷೆಯಿದ್ದರೆ ಕೆಲವರಿಗೆ ಟಿಕೆಟ್‌ದ್ದು. ನಮ್ಮಲ್ಲಿ ಚುನಾವಣಾ ಪಾದಯಾತ್ರೆಗಳ ಇತಿಹಾಸವೂ ತುಂಬಾ ಹಳೆಯದು. ನಮ್ಮಲ್ಲಿ ಆದ ಕೆಲವು ಪಾದಯಾತ್ರೆಗಳಿಂದ ದೇಶವು ತನ್ನನ್ನು ತಾನು ಗುರುತಿಸಿಕೊಂಡಿದೆ, ಕಳೆದುಕೊಂಡ ತನ್ನ ಆತ್ಮಬಲವನ್ನು ಪಡೆದುಕೊಂಡಿದೆ.

ಸ್ವಾಭಾವಿಕವಾಗಿಯೇ ’ಭಾರತ ಜೋಡೊ ಯಾತ್ರೆ’ಯಲ್ಲಿ ಇವೆಲ್ಲವುಗಳ ಒಂದಿಷ್ಟು ಅಂಶಗಳಿವೆ. ಹಾಗಾಗಿ ದೇಶದ ಒಂದು ದೊಡ್ಡ ಪಕ್ಷದಿಂದ ಪ್ರಾಯೋಜಿತವಾದ ಇಂತಹ ಯಾತ್ರೆಗಳಲ್ಲಿ ಪ್ರವಾಸಿಗರೂ ಇರುತ್ತಾರೆ, ಅವರೊಂದಿಗೆ ಪೈಲ್ವಾನರೂ ಇರುತ್ತಾರೆ, ಟಿಕೆಟ್ ಆಕಾಂಕ್ಷಿಗಳೂ ಇರುತ್ತಾರೆ ಹಾಗೂ ದರ್ಶನಾರ್ಥಿಗಳೂ ಇರುತ್ತಾರೆ. ಈ ಯಾತ್ರೆಯ ಯಶಸ್ಸು, ವಿಫಲತೆಗಳನ್ನು ಈ ಸಣ್ಣ ಆಕಾಂಕ್ಷೆಗಳ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಎಂದಿನಂತೆಯೇ ರಾಜಕೀಯ ಪಂಡಿತರು ಇದನ್ನು ಕಾಂಗ್ರೆಸ್ ಪಕ್ಷ ಅಥವಾ ರಾಹುಲ್ ಗಾಂಧಿಯ ಲಾಭ-ನಷ್ಟಗಳ ಲೆಕ್ಕದಲ್ಲಿ ಒರೆಗೆ ಹಚ್ಚಲಿದ್ದಾರೆ. ಆದರೆ, ಒಂದು ಪಕ್ಷದ ಅಥವಾ ಒಬ್ಬ ನಾಯಕನ ಲಾಭವು ರಾಷ್ಟ್ರದ ಹಿತಾಸಕ್ತಿಯ ಅಳತೆಗೋಲಾಗಲು ಸಾಧ್ಯವಿಲ್ಲ.

ಇಂದಿನ ಸಂದರ್ಭದಲ್ಲಿ ಭಾರತ ಜೋಡೊ ಯಾತ್ರೆಯ ಸಫಲತೆಯ ಒಂದೇ ಒಂದು ಅಳತೆ ಆಗಿರಬಹುದು. ಅದು, ದೇಶದ ಭವಿಷ್ಯದ ಮೇಲೆ ಕವಿದಿರುವ ಕಾರ್ಮೋಡಗಳನ್ನು ಇಲ್ಲವಾಗಿಸುವಲ್ಲಿ ಈ ಯಾತ್ರೆ ಸಹಕಾರಿಯಾಗುವುದೇ? ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಆಂದೋಲನ ಹಾಗೂ ಸಭ್ಯತೆಯ ಪರಂಪರೆಯನ್ನು ಉಳಿಸುವಲ್ಲಿ ಏನಾದರೂ ಯೋಗದಾನ ನೀಡುವುದೇ? ರಾಜಕೀಯ ಶಕ್ತಿಯ ಸಮತೋಲನವನ್ನು ಸ್ವಲ್ಪ ಮಟ್ಟಿಗಾದರೂ, ದೇಶವನ್ನು ಜೋಡಿಸುವ ಕಡೆಗೆ ತಿರುಗಿಸಬಲ್ಲದೇ? ನನ್ನಂತಹ ಜನರು ಇದೇ ನಿರೀಕ್ಷೆಯಲ್ಲಿ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದೇವೆ. ದೇಶದ ಇತಿಹಾಸದಲ್ಲಿ ಸೂಕ್ಷ್ಮವಾದ ಮತ್ತು ನಿರ್ಣಾಯಕವಾದ ಸಮಯದಲ್ಲಿ ನಡೆಯುತ್ತಿರುವ ಈ ಯಾತ್ರೆಯನ್ನು ಬೇರೆ ಯಾವುದೇ ದೃಷ್ಟಿಕೋನದಲ್ಲಿ ನೋಡುವುದು ಒಂದು ದೊಡ್ಡ ಅಸಡ್ಡೆಯೆನಿಸುತ್ತದೆ.

ಸುಮಾರು 5 ತಿಂಗಳು ನಡೆಯಲಿರುವ ಈ ಯಾತ್ರೆಯ ಬಗ್ಗೆ ಮೊದಲ 5 ದಿನದ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ಹಾಸ್ಯಾಸ್ಪದವಾಗುವುದು; ಆದರೆ ಈ ಮೊದಲ ಝಲಕ್‌ನಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಮೊದಲ ವಾರದಲ್ಲಿ ಈ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಕೇರಳದ ತಿರುವನಂತಪುರಂ ಜಿಲ್ಲೆಗಳಿಂದ ಹಾದುಹೋಗುತ್ತಿದೆ. ಇವೆರಡೂ ತುಲನಾತ್ಮಕವಾಗಿ ಕಾಂಗ್ರಸ್‌ನ ಪ್ರಬಲ ಕ್ಷೇತ್ರಗಳಾಗಿವೆ. ಹಾಗಾಗಿ ಯಾತ್ರೆಗೆ ಇಷ್ಟು ಬೃಹತ್ತಾಗಿ ಸಿಕ್ಕ ಜನರ ಸಮರ್ಥನೆಯಿಂದ ಅಚ್ಚರಿಯಾಗಲಾರದು. ಆದರೆ, ಗಮನಿಸಬೇಕಾದ ಅಂಶವೇನೆಂದರೆ, ಹೆಚ್ಚುಕಡಿಮೆ ಎಲ್ಲಾ ಸಮಯದಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಈ ಯಾತ್ರೆಯನ್ನು ಸ್ವಾಗತಿಸಲು ಜನರ ನಿಂತಿದ್ದರು, ಹಾಗೂ ಅವರಲ್ಲಿ ಅನೇಕರು ಗಂಟೆಗಳವರೆಗೆ ನಿಂತಿದ್ದರು. ಸ್ವಾಭಾವಿಕವಾಗಿಯೇ, ಈ ಜನಸಮೂಹದಲ್ಲಿ ಹೆಚ್ಚಿನ ಜನರನ್ನು ಪಕ್ಷದ ಕಾರ್ಯಕರ್ತರು ಸೇರಿಸಿರಬಹುದು. ಹಾಗೆ ನೋಡಿದರೂ ಇದೂ ಒಂದು ಸಾಧನೆಯೇ.

ಕೆಲವರು ಕೇವಲ ನೋಡುಗರಾಗಿಯೂ ಇದ್ದರು. ಆದರೆ ಈ ಜನಸಮೂಹದಲ್ಲಿ ಸಾಧಾರಣ ಜನರು ಒಂದು ಭಾಗವೂ ಇತ್ತು, ಅವರನ್ನು ಯಾವುದೇ ಪಕ್ಷದವರು ಅಲ್ಲಿ ಸೇರಿಸಿದ್ದಲ್ಲ, ಅವರು ಖುದ್ದಾಗಿ ಬಂದಿದ್ದರು. ಕತ್ತಲೆಯಲ್ಲಿ ಒಂದು ಪುಟ್ಟ ಆಸೆಯ ಬೆಳಕನ್ನು ಕಂಡಾಗ ಕಾಣುವ ಒಂದು ಹೊಳಪು ಇವರ ಕಣ್ಣುಗಳಲ್ಲಿತ್ತು. ಇವರನ್ನು ಈಗಾಗಲೇ ಕಾಂಗ್ರೆಸ್ ಸಮರ್ಥಕ ಅಥವಾ ಮತದಾರರೆಂಬ ಹೆಸರು ಕೊಡುವುದು ಬೇಡ. ಒಂದು ಪಾದಯಾತ್ರೆಯ ಬಗ್ಗೆ ಗೌರವ ಭಾವನೆ ಇರಲೂ ಸಾಧ್ಯ ಮತ್ತು ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎನ್ನಬಹುದು. ಮುಂದಿನ ಕೆಲವು ದಿನಗಳಲ್ಲೇ ತಿಳಿಯುವುದಾದರೂ, ಈ ಯಾತ್ರೆಯು ಒಂದು ಸಕಾರಾತ್ಮಕವಾದ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಚುನಾವಣೆಗಳಲ್ಲಿ ಇದರ ಪರಿಣಾಮ ಏನಾಗುವುದು ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ಏನು ಪರಿಣಾಮ ಎಂಬ ಬಗ್ಗೆಯೂ ಸ್ವಲ್ಪವೂ ಅಂದಾಜು ಮಾಡಲಾಗುವುದಿಲ್ಲ. ಆದರೆ ಈ ಸಕಾರಾತ್ಮಕತೆಯಿಂದ ಈಗಿರುವ ವಿಕಲ್ಪವಿಲ್ಲದಿರುವ ರಾಜಕೀಯ ವಾತಾವರಣವನ್ನು ಎಲ್ಲಿಯಾದರೂ ಒಡೆಯುವ ಸಾಮರ್ಥ್ಯವಂತೂ ಇದೆ.

ಈಗಲೇ ಈ ಯಾತ್ರೆಯು ದೇಶದ ಮನಸ್ಥಿತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡುವುದೂ ಹುಚ್ಚುತನವಾಗುತ್ತದೆ. ಆದರೆ ಒಂದಂತೂ ಸತ್ಯ; ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿರುವ ಈ ನಡಿಗೆ ದೇಶದ ಮೌನ ಮತ್ತು ಏಕತಾನತೆಯ ಭಾವನೆಯನ್ನು ಮುರಿದುಹಾಕಿದೆ. ತಾವೆಂದೂ ಕಾಂಗ್ರೆಸ್‌ನ ಬೆಂಬಲ ನೀಡದೇ ಇರುವ ಹಾಗೂ ಬೀದಿಗಳಲ್ಲಿ ಕಾಂಗ್ರೆಸ್‌ಅನ್ನು ವಿರೋಧಿಸಿದ ಅನೇಕರು ಈ ಯಾತ್ರೆಗೆ ಸಮರ್ಥನೆ ಮಾಡುತ್ತಿದ್ದಾರೆ. ದೇಶದ ಜನಾಂದೋಲನಗಳ ಒಂದು ಭಾಗವು ಕನ್ಯಾಕುಮಾರಿಯಿಂದಲೇ ಈ ಯಾತ್ರೆಯಲ್ಲಿ ಕೂಡಿಕೊಂಡಿದೆ.

ಹೊರಗಿನಿಂದ ಬಂದ ಈ ಅನಿರೀಕ್ಷಿತ ಸಮರ್ಥನೆಯಿಂದ ಕಾಂಗ್ರೆಸ್‌ನ ಪಾದಯಾತ್ರಿಗಳ ಆತ್ಮಸ್ಥೈರ್ಯವು ಹೆಚ್ಚಿದೆ. ಕಳೆದ ಇಡೀ ವಾರದಲ್ಲಿ ಈ ಯಾತ್ರೆಯಲ್ಲಿ ಜೊತೆಗೂಡುವ ಆಕಾಂಕ್ಷೆ ಇಟ್ಟುಕೊಂಡವರ ಸಂದೇಶಗಳು ಹೆಚ್ಚುತ್ತಿವೆ. ಕನಿಷ್ಠ ಒಂದು ಮಟ್ಟಕ್ಕಂತೂ ನಾವು ಒಬ್ಬಂಟಿಗಳಲ್ಲ ಎಂಬ ಭಾವನೆ ಮೂಡುತ್ತಿದೆ. ದೇಶ ಬದಲಿಸುವ ಮಾತು ಈಗ ಹೇಳಿದರೆ ದೊಡ್ಡ ಮಾತಾಗುತ್ತದೆ, ಆದರೆ ದೇಶವನ್ನು ಜೋಡಿಸುವ ಇಚ್ಛೆ ಹೊಂದಿದ್ದವರಲ್ಲಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಬೋಣಿ ತುಂಬಾ ಚೆನ್ನಾಗಾಗಿದೆ.

ಯೋಗೇಂದ್ರ ಯಾದವ್

(ಕನ್ನಡಕ್ಕೆ): ರಾಜಶೇಖರ ಅಕ್ಕಿ


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಿಜೆಪಿ ಮಾಡಿದ ಹಾನಿಯನ್ನು ಸರಿಪಡಿಸುವ ಪ್ರಯತ್ನ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...