Homeಮುಖಪುಟಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

- Advertisement -
- Advertisement -

ಯಾತ್ರೆ ಹೇಗೆ ನಡೀತಿದೆ? ಏನಾದರೂ ಪರಿಣಾಮ ಆಯ್ತಾ? ಚುನಾವಣೆಯಲ್ಲಿ ಲಾಭ ಆಗಲುಂಟಾ? ಏನಾದರೂ ಸಾಧಿಸ್ತೀರೋ ಇಲ್ವೋ? ಯಾವಾಗ ಕನ್ಯಾಕುಮಾರಿಯಿಂದ ’ಭಾರತ ಜೋಡೊ ಯಾತ್ರಾ’ ಶುರುವಾಯ್ತೋ, ಆವಾಗಿನಿಂದ ಕರೆಗಳು ಬರುತ್ತಲೇ ಇವೆ. ಇಂತಹ ಪರಿಚಿತ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಟಿವಿಯಲ್ಲೂ ಕೋಳಿಜಗಳ ಶುರುವಾಗಿದೆಯಂತೆ. ಯಾತ್ರೆಯ ಹಿಂದಿನ ಇರಾದೆ ಏನಿದೆ ಎಂಬುದರ ಮೇಲೆ ಈ ಯಾತ್ರೆ ಏನು ಸಾಧಿಸುವುದು ಎಂಬುದು ನಿಂತಿದೆ. ಪಾದಯಾತ್ರೆಗಳ ಅನೇಕ ರೀತಿಯದ್ದಾಗಬಹುದು; ಕೆಲವರಿಗೆ ನಡಿಗೆಯಾದರೆ, ಕೆಲವರಿಗೆ ಕಸರತ್ತು. ಅಲೆಮಾರಿ ಸಮಾಜದವರಿಗೆ ಜೀವನಶೈಲಿ; ಹಾಗೂ ಬೀದಿ ಸುತ್ತಿ ಸರಕು ಮಾರಾಟ ಮಾಡುವವರಿಗೆ ವ್ಯಾಪಾರ. ಕೆಲವರು ಹರಕೆ ಹೊತ್ತು ನಡೆದರೆ, ಕೆಲವರು ದೇವರ ದರ್ಶನದ ಆಕಾಂಕ್ಷೆಯಿಟ್ಟು ನಡೆಯುತ್ತಾರೆ. ಕೆಲವೇ ಕೆಲವರು ತನ್ನೊಳಗಿನ ದೇವರನ್ನು ಹುಡುಕುತ್ತ ಕಾಲ್ನಡಿಗೆಯ ಯಾತ್ರೆ ಮಾಡುತ್ತಾರೆ.

ಇದೇ ಮಾತು ರಾಜಕೀಯ ಪಾದಯಾತ್ರೆಗಳಿಗೂ ಅನ್ವಯಿಸುತ್ತದೆ. ಇಲ್ಲಿಯೂ ಕೆಲವರು ಪ್ರವಾಸಿಗಳಿದ್ದಾರೆ, ಕೆಲವರಿಗೆ ದರ್ಶನದ ಆಕಾಂಕ್ಷೆಯಿದ್ದರೆ ಕೆಲವರಿಗೆ ಟಿಕೆಟ್‌ದ್ದು. ನಮ್ಮಲ್ಲಿ ಚುನಾವಣಾ ಪಾದಯಾತ್ರೆಗಳ ಇತಿಹಾಸವೂ ತುಂಬಾ ಹಳೆಯದು. ನಮ್ಮಲ್ಲಿ ಆದ ಕೆಲವು ಪಾದಯಾತ್ರೆಗಳಿಂದ ದೇಶವು ತನ್ನನ್ನು ತಾನು ಗುರುತಿಸಿಕೊಂಡಿದೆ, ಕಳೆದುಕೊಂಡ ತನ್ನ ಆತ್ಮಬಲವನ್ನು ಪಡೆದುಕೊಂಡಿದೆ.

ಸ್ವಾಭಾವಿಕವಾಗಿಯೇ ’ಭಾರತ ಜೋಡೊ ಯಾತ್ರೆ’ಯಲ್ಲಿ ಇವೆಲ್ಲವುಗಳ ಒಂದಿಷ್ಟು ಅಂಶಗಳಿವೆ. ಹಾಗಾಗಿ ದೇಶದ ಒಂದು ದೊಡ್ಡ ಪಕ್ಷದಿಂದ ಪ್ರಾಯೋಜಿತವಾದ ಇಂತಹ ಯಾತ್ರೆಗಳಲ್ಲಿ ಪ್ರವಾಸಿಗರೂ ಇರುತ್ತಾರೆ, ಅವರೊಂದಿಗೆ ಪೈಲ್ವಾನರೂ ಇರುತ್ತಾರೆ, ಟಿಕೆಟ್ ಆಕಾಂಕ್ಷಿಗಳೂ ಇರುತ್ತಾರೆ ಹಾಗೂ ದರ್ಶನಾರ್ಥಿಗಳೂ ಇರುತ್ತಾರೆ. ಈ ಯಾತ್ರೆಯ ಯಶಸ್ಸು, ವಿಫಲತೆಗಳನ್ನು ಈ ಸಣ್ಣ ಆಕಾಂಕ್ಷೆಗಳ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಎಂದಿನಂತೆಯೇ ರಾಜಕೀಯ ಪಂಡಿತರು ಇದನ್ನು ಕಾಂಗ್ರೆಸ್ ಪಕ್ಷ ಅಥವಾ ರಾಹುಲ್ ಗಾಂಧಿಯ ಲಾಭ-ನಷ್ಟಗಳ ಲೆಕ್ಕದಲ್ಲಿ ಒರೆಗೆ ಹಚ್ಚಲಿದ್ದಾರೆ. ಆದರೆ, ಒಂದು ಪಕ್ಷದ ಅಥವಾ ಒಬ್ಬ ನಾಯಕನ ಲಾಭವು ರಾಷ್ಟ್ರದ ಹಿತಾಸಕ್ತಿಯ ಅಳತೆಗೋಲಾಗಲು ಸಾಧ್ಯವಿಲ್ಲ.

ಇಂದಿನ ಸಂದರ್ಭದಲ್ಲಿ ಭಾರತ ಜೋಡೊ ಯಾತ್ರೆಯ ಸಫಲತೆಯ ಒಂದೇ ಒಂದು ಅಳತೆ ಆಗಿರಬಹುದು. ಅದು, ದೇಶದ ಭವಿಷ್ಯದ ಮೇಲೆ ಕವಿದಿರುವ ಕಾರ್ಮೋಡಗಳನ್ನು ಇಲ್ಲವಾಗಿಸುವಲ್ಲಿ ಈ ಯಾತ್ರೆ ಸಹಕಾರಿಯಾಗುವುದೇ? ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಆಂದೋಲನ ಹಾಗೂ ಸಭ್ಯತೆಯ ಪರಂಪರೆಯನ್ನು ಉಳಿಸುವಲ್ಲಿ ಏನಾದರೂ ಯೋಗದಾನ ನೀಡುವುದೇ? ರಾಜಕೀಯ ಶಕ್ತಿಯ ಸಮತೋಲನವನ್ನು ಸ್ವಲ್ಪ ಮಟ್ಟಿಗಾದರೂ, ದೇಶವನ್ನು ಜೋಡಿಸುವ ಕಡೆಗೆ ತಿರುಗಿಸಬಲ್ಲದೇ? ನನ್ನಂತಹ ಜನರು ಇದೇ ನಿರೀಕ್ಷೆಯಲ್ಲಿ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದೇವೆ. ದೇಶದ ಇತಿಹಾಸದಲ್ಲಿ ಸೂಕ್ಷ್ಮವಾದ ಮತ್ತು ನಿರ್ಣಾಯಕವಾದ ಸಮಯದಲ್ಲಿ ನಡೆಯುತ್ತಿರುವ ಈ ಯಾತ್ರೆಯನ್ನು ಬೇರೆ ಯಾವುದೇ ದೃಷ್ಟಿಕೋನದಲ್ಲಿ ನೋಡುವುದು ಒಂದು ದೊಡ್ಡ ಅಸಡ್ಡೆಯೆನಿಸುತ್ತದೆ.

ಸುಮಾರು 5 ತಿಂಗಳು ನಡೆಯಲಿರುವ ಈ ಯಾತ್ರೆಯ ಬಗ್ಗೆ ಮೊದಲ 5 ದಿನದ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ಹಾಸ್ಯಾಸ್ಪದವಾಗುವುದು; ಆದರೆ ಈ ಮೊದಲ ಝಲಕ್‌ನಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಮೊದಲ ವಾರದಲ್ಲಿ ಈ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಕೇರಳದ ತಿರುವನಂತಪುರಂ ಜಿಲ್ಲೆಗಳಿಂದ ಹಾದುಹೋಗುತ್ತಿದೆ. ಇವೆರಡೂ ತುಲನಾತ್ಮಕವಾಗಿ ಕಾಂಗ್ರಸ್‌ನ ಪ್ರಬಲ ಕ್ಷೇತ್ರಗಳಾಗಿವೆ. ಹಾಗಾಗಿ ಯಾತ್ರೆಗೆ ಇಷ್ಟು ಬೃಹತ್ತಾಗಿ ಸಿಕ್ಕ ಜನರ ಸಮರ್ಥನೆಯಿಂದ ಅಚ್ಚರಿಯಾಗಲಾರದು. ಆದರೆ, ಗಮನಿಸಬೇಕಾದ ಅಂಶವೇನೆಂದರೆ, ಹೆಚ್ಚುಕಡಿಮೆ ಎಲ್ಲಾ ಸಮಯದಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಈ ಯಾತ್ರೆಯನ್ನು ಸ್ವಾಗತಿಸಲು ಜನರ ನಿಂತಿದ್ದರು, ಹಾಗೂ ಅವರಲ್ಲಿ ಅನೇಕರು ಗಂಟೆಗಳವರೆಗೆ ನಿಂತಿದ್ದರು. ಸ್ವಾಭಾವಿಕವಾಗಿಯೇ, ಈ ಜನಸಮೂಹದಲ್ಲಿ ಹೆಚ್ಚಿನ ಜನರನ್ನು ಪಕ್ಷದ ಕಾರ್ಯಕರ್ತರು ಸೇರಿಸಿರಬಹುದು. ಹಾಗೆ ನೋಡಿದರೂ ಇದೂ ಒಂದು ಸಾಧನೆಯೇ.

ಕೆಲವರು ಕೇವಲ ನೋಡುಗರಾಗಿಯೂ ಇದ್ದರು. ಆದರೆ ಈ ಜನಸಮೂಹದಲ್ಲಿ ಸಾಧಾರಣ ಜನರು ಒಂದು ಭಾಗವೂ ಇತ್ತು, ಅವರನ್ನು ಯಾವುದೇ ಪಕ್ಷದವರು ಅಲ್ಲಿ ಸೇರಿಸಿದ್ದಲ್ಲ, ಅವರು ಖುದ್ದಾಗಿ ಬಂದಿದ್ದರು. ಕತ್ತಲೆಯಲ್ಲಿ ಒಂದು ಪುಟ್ಟ ಆಸೆಯ ಬೆಳಕನ್ನು ಕಂಡಾಗ ಕಾಣುವ ಒಂದು ಹೊಳಪು ಇವರ ಕಣ್ಣುಗಳಲ್ಲಿತ್ತು. ಇವರನ್ನು ಈಗಾಗಲೇ ಕಾಂಗ್ರೆಸ್ ಸಮರ್ಥಕ ಅಥವಾ ಮತದಾರರೆಂಬ ಹೆಸರು ಕೊಡುವುದು ಬೇಡ. ಒಂದು ಪಾದಯಾತ್ರೆಯ ಬಗ್ಗೆ ಗೌರವ ಭಾವನೆ ಇರಲೂ ಸಾಧ್ಯ ಮತ್ತು ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎನ್ನಬಹುದು. ಮುಂದಿನ ಕೆಲವು ದಿನಗಳಲ್ಲೇ ತಿಳಿಯುವುದಾದರೂ, ಈ ಯಾತ್ರೆಯು ಒಂದು ಸಕಾರಾತ್ಮಕವಾದ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಚುನಾವಣೆಗಳಲ್ಲಿ ಇದರ ಪರಿಣಾಮ ಏನಾಗುವುದು ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ಏನು ಪರಿಣಾಮ ಎಂಬ ಬಗ್ಗೆಯೂ ಸ್ವಲ್ಪವೂ ಅಂದಾಜು ಮಾಡಲಾಗುವುದಿಲ್ಲ. ಆದರೆ ಈ ಸಕಾರಾತ್ಮಕತೆಯಿಂದ ಈಗಿರುವ ವಿಕಲ್ಪವಿಲ್ಲದಿರುವ ರಾಜಕೀಯ ವಾತಾವರಣವನ್ನು ಎಲ್ಲಿಯಾದರೂ ಒಡೆಯುವ ಸಾಮರ್ಥ್ಯವಂತೂ ಇದೆ.

ಈಗಲೇ ಈ ಯಾತ್ರೆಯು ದೇಶದ ಮನಸ್ಥಿತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡುವುದೂ ಹುಚ್ಚುತನವಾಗುತ್ತದೆ. ಆದರೆ ಒಂದಂತೂ ಸತ್ಯ; ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿರುವ ಈ ನಡಿಗೆ ದೇಶದ ಮೌನ ಮತ್ತು ಏಕತಾನತೆಯ ಭಾವನೆಯನ್ನು ಮುರಿದುಹಾಕಿದೆ. ತಾವೆಂದೂ ಕಾಂಗ್ರೆಸ್‌ನ ಬೆಂಬಲ ನೀಡದೇ ಇರುವ ಹಾಗೂ ಬೀದಿಗಳಲ್ಲಿ ಕಾಂಗ್ರೆಸ್‌ಅನ್ನು ವಿರೋಧಿಸಿದ ಅನೇಕರು ಈ ಯಾತ್ರೆಗೆ ಸಮರ್ಥನೆ ಮಾಡುತ್ತಿದ್ದಾರೆ. ದೇಶದ ಜನಾಂದೋಲನಗಳ ಒಂದು ಭಾಗವು ಕನ್ಯಾಕುಮಾರಿಯಿಂದಲೇ ಈ ಯಾತ್ರೆಯಲ್ಲಿ ಕೂಡಿಕೊಂಡಿದೆ.

ಹೊರಗಿನಿಂದ ಬಂದ ಈ ಅನಿರೀಕ್ಷಿತ ಸಮರ್ಥನೆಯಿಂದ ಕಾಂಗ್ರೆಸ್‌ನ ಪಾದಯಾತ್ರಿಗಳ ಆತ್ಮಸ್ಥೈರ್ಯವು ಹೆಚ್ಚಿದೆ. ಕಳೆದ ಇಡೀ ವಾರದಲ್ಲಿ ಈ ಯಾತ್ರೆಯಲ್ಲಿ ಜೊತೆಗೂಡುವ ಆಕಾಂಕ್ಷೆ ಇಟ್ಟುಕೊಂಡವರ ಸಂದೇಶಗಳು ಹೆಚ್ಚುತ್ತಿವೆ. ಕನಿಷ್ಠ ಒಂದು ಮಟ್ಟಕ್ಕಂತೂ ನಾವು ಒಬ್ಬಂಟಿಗಳಲ್ಲ ಎಂಬ ಭಾವನೆ ಮೂಡುತ್ತಿದೆ. ದೇಶ ಬದಲಿಸುವ ಮಾತು ಈಗ ಹೇಳಿದರೆ ದೊಡ್ಡ ಮಾತಾಗುತ್ತದೆ, ಆದರೆ ದೇಶವನ್ನು ಜೋಡಿಸುವ ಇಚ್ಛೆ ಹೊಂದಿದ್ದವರಲ್ಲಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಬೋಣಿ ತುಂಬಾ ಚೆನ್ನಾಗಾಗಿದೆ.

ಯೋಗೇಂದ್ರ ಯಾದವ್

(ಕನ್ನಡಕ್ಕೆ): ರಾಜಶೇಖರ ಅಕ್ಕಿ


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಿಜೆಪಿ ಮಾಡಿದ ಹಾನಿಯನ್ನು ಸರಿಪಡಿಸುವ ಪ್ರಯತ್ನ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...