Homeಮುಖಪುಟಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷರಾಗಲಿದ್ದಾರೆ. ಕಾಂಗ್ರೆಸ್ಸಿಗೊಂದು ಚುನಾಯಿತ ಅಧ್ಯಕ್ಷರಿಲ್ಲದ ಕೊರತೆಗೆ, ಮಲ್ಲಿಕಾರ್ಜುನ ಖರ್ಗೆಯವರು ಆ ಸ್ಥಾನವನ್ನು ತುಂಬುವುದರೊಂದಿಗೆ ತಾಂತ್ರಿಕವಾಗಿ ಪರಿಹಾರ ಸಿಗಬಹುದು. ಆದರೆ ಕಾಂಗ್ರೆಸ್ ಇಂದು ಎದುರಿಸುತ್ತಿರುವ ನಾಯಕತ್ವದ ಕೊರತೆ ಈ ಮೂಲಕ ನೀಗುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ಅತಿಯಾದ ಆಶಾವಾದ ಆದೀತು. ಅಂತಹ ಆಶಾವಾದವನ್ನು ಸ್ವತಃ ಕಾಂಗ್ರೆಸ್ಸಿನ ಕಾರ್ಯಕತ್ರರೂ ಇಟ್ಟುಕೊಂಡಿರಲಾರರು.

ಅಂತೂ ಕರ್ನಾಟಕದವರೊಬ್ಬರು ಅಖಿಲ ಭಾರತ ಮಟ್ಟದ ರಾಜಕೀಯ ಹುದ್ದೆಯೊಂದನ್ನು ಹೊಂದಲಿದ್ದಾರೆ ಎನ್ನುವುದು ಒಂದು ರೀತಿಯಲ್ಲಿ ಪಕ್ಷಾತೀತವಾಗಿ ಸಂತಸಪಡಬೇಕಾದ ವಿಚಾರವಾದರೆ, ಕಾಂಗ್ರೆಸ್ ಪಕ್ಷ ಚಾರಿತ್ರಿಕವಾಗಿ ಬಸವಳಿದು ನಿಂತಿರುವ ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾಗುತ್ತಿರುವುದರಲ್ಲಿ ಸವಾಲೆಷ್ಟು, ಸಂಭ್ರಮವೆಷ್ಟು ಎನ್ನುವುದು ಇನ್ನೊಂದು ಪ್ರಶ್ನೆ. ಅದ್ಯಾಕೋ ಕರ್ನಾಟಕದವರು ರಾಷ್ಟ್ರಮಟ್ಟದ ರಾಜಕೀಯ ಪದವಿ ಹೊಂದುವ ಅವಕಾಶಗಳು ಬಂದಾಗಲೆಲ್ಲಾ ಅದರೊಂದಿಗೆ ಏನೋ ಒಂದು ವಿಲಕ್ಷಣ ಬೆಳವಣಿಗೆ ತಳುಕುಹಾಕಿಕೊಂಡಿರುತ್ತದೆ. ಕಾಂಗ್ರೆಸ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಎಸ್. ನಿಜಲಿಂಗಪ್ಪನವರು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಅವರ ಅವಧಿಯಲ್ಲಿ ಕಾಂಗ್ರೆಸ್ ಚಾರಿತ್ರಿಕವಾಗಿ ಹೋಳಾಯಿತು. ಕರ್ನಾಟಕದ ಎಸ್.ಆರ್ ಬೊಮ್ಮಾಯಿ ಅವರು ಜನತಾ ದಳದ ಅಧ್ಯಕ್ಷರಾದರು. ಅಷ್ಟೊತ್ತಿಗೆ ರಾಷ್ಟ್ರಮಟ್ಟದಲ್ಲಿ ಜನತಾದಳದ ಅವನತಿ ಆರಂಭವಾಗಿತ್ತು. ಈಗ ಖರ್ಗೆಯವರು ನಿತ್ರಾಣ ಸ್ಥಿತಿಯಲ್ಲಿರುವ ಸ್ಥಿತಿಯಲ್ಲೇ ಕಾಂಗ್ರೆಸ್ಸಿನ ಅಧಿಪತ್ಯ ವಹಿಸಿಕೊಳ್ಳಲಿದ್ದಾರೆ.

ಎಸ್. ನಿಜಲಿಂಗಪ್ಪ

ಕಾಂಗ್ರೆಸ್ ಎದುರಿಸುತ್ತಿರುವ ಚಾರಿತ್ರಿಕ ನಾಯಕತ್ವ ಕೊರತೆಯ ಸಮಸ್ಯೆಗೆ ಹಲವಾರು ಆಯಾಮಗಳಿವೆ. ಆ ಪಕ್ಷದ ಉಳಿವಿಗೆ ನೆಹರು ಕುಟುಂಬದ ನಾಯಕತ್ವ ಅನಿವಾರ್ಯವೋ ಅಥವಾ ಆ ಪಕ್ಷದ ಕಾಯಕಲ್ಪಕ್ಕೆ ನೆಹರೂ ಕುಟುಂಬದ ಹೊರಗಿನವರೊಬ್ಬರು ಅಧ್ಯಕ್ಷರಾಗುವುದು ಅನಿವಾರ್ಯವೋ ಎಂಬ ಯಕ್ಷ ಪ್ರಶ್ನೆಗೆ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ಸದ್ಯಕ್ಕೆ ನೆಹರೂ ಕುಟುಂಬದಲ್ಲಿ ಕಾಂಗ್ರೆಸ್ಸಿಗೆ ಅಧ್ಯಕ್ಷರಾಗುವ ಉಮೇದು ಯಾರಿಗೂ ಇಲ್ಲದೆ ಇರುವ ಕಾರಣವೋ ಏನೋ, ಪಕ್ಷಕ್ಕೊಬ್ಬರು ಚುನಾಯಿತ ಅಧ್ಯಕ್ಷರನ್ನು ತರುವ ನಿರ್ಧಾರವಾಗಿ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಇದೀಗ ಚುನಾಯಿತರಾಗಲಿರುವ ಅಧ್ಯಕ್ಷರು ನಿಜಕ್ಕೂ ಚುನಾಯಿತ ಅಧ್ಯಕ್ಷರೇ? ಇಂತವರೇ ಅಧ್ಯಕ್ಷರಾಗಬೇಕು ಎಂದು ಕುಟುಂಬದವರು ನಿರ್ಧರಿಸಿ, ಅವರ ಕೈಯ್ಯಲ್ಲಿ ನಾಮಪತ್ರ ಹಾಕಿಸಿ, ಪಕ್ಷದ ಮತದಾರರಿಗೆ ಇಂತವರಿಗೆ ಮತ ಹಾಕಬೇಕು ಎನ್ನುವ ಸೂಚನೆಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ರವಾನಿಸಿ ಅಧ್ಯಕ್ಷರೊಬ್ಬರನ್ನು ಚುನಾಯಿಸಿದರೆ ಅದನ್ನು ಚುನಾವಣೆ ಅಂತ ಕರೆಯುವುದು ಸೂಕ್ತವಲ್ಲ. ಹಾಗೆಯೇ ಈ ರೀತಿ ಚುನಾಯಿತರಾಗುವ ಅಧ್ಯಕ್ಷರು ಪೂರ್ಣಾವಧಿ ಅಧ್ಯಕ್ಷರೇನೋ ಆಗಬಹುದು, ಆದರೆ ಚುನಾಯಿತ ಅಧ್ಯಕ್ಷರಿಗಿರುವ ಸ್ವಾಯತ್ತತೆ ಅವರಿಗೆ ಎಂದೂ ಇರುವುದಿಲ್ಲ. ಆದರೂ ಚುನಾವಣೆ ನಡೆಯುತ್ತಿದೆ, ಚುನಾಯಿತ ಅಧ್ಯಕ್ಷರು ಅಂತ ಒಬ್ಬರು ಪಕ್ಷದಲ್ಲಿರುತ್ತಾರೆ. ಸಂಪೂರ್ಣ ಸ್ವಾಯತ್ತತೆ ಇಲ್ಲದ ಸ್ಥಿತಿಯಲ್ಲೂ ದೊಡ್ಡ ಪಕ್ಷದ ಅಖಿಲ ಭಾರತ ಮಟ್ಟದ ಅಧ್ಯಕ್ಷಗಿರಿ ಎಂದರೆ ಅದು ದೊಡ್ಡ ರಾಜಕೀಯ ಜವಾಬ್ದಾರಿ. ಅಷ್ಟರಮಟ್ಟಿಗೆ ಖರ್ಗೆಯವರಿಗೆ ಅಭಿನಂದನೆ ಸಲ್ಲುತ್ತದೆ.

ಚುನಾವಣಾ ಕಣದಲ್ಲಿ ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್ ಇದ್ದಾರೆ. ಖರ್ಗೆಯವರು ಕುಟುಂಬದ ಅಭ್ಯರ್ಥಿ ಎನ್ನುವ ಕಾರಣಕ್ಕೆ ಶಶಿ ತರೂರ್ ನಾಮಪತ್ರ ಹಿಂತೆಗೆದುಕೊಂಡಿಲ್ಲ ಮತ್ತು ಹಿಂತೆಗೆದುಕೊಳ್ಳುವುದಿಲ್ಲ ಅಂತ ಅವರು ಹೇಳಿದ್ದಾರೆ. ಕುಟುಂಬದ ಬಲ ಇಲ್ಲದೆ ಅವರು ಗೆಲ್ಲಲಾರರು ಎನ್ನುವುದು ಖಾತ್ರಿ. ಆದರೂ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ’ಶಶಿ ತರೂರ್ ಅವರು ಗೆದ್ದರೂ ಗೆಲ್ಲಬಹುದು ಸೋತರೂ ಸೋಲಬಹುದು, ಅದು ಕಾಂಗ್ರೆಸ್ಸಿನ ಎಲೆಕ್ಟೊರಲ್ ಕಾಲೇಜಿನ ಸದಸ್ಯರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದರ ಮೇಲೆ ನಿರ್ಣಯ ಆಗುತ್ತದೆ’ ಅಂತ ಒಗಟಾಗಿ ಹೇಳಿದ್ದಾರೆ. ಹಾಗೆ ನೋಡಿದರೆ ಒಂದು ವೇಳೆ ಶಶಿ ತರೂರ್ ಅವರೇನಾದರೂ ಅಕಸ್ಮಾತ್ತಾಗಿ ಗೆದ್ದುಬಿಟ್ಟರೆ ಪಕ್ಷದ ಆಂತರಿಕ ಬೆಳವಣಿಗೆಯ ದೃಷ್ಟಿಯಿಂದ ಅದು ಸೂಕ್ತ ಆಯ್ಕೆ ಆಗುತ್ತದೆ. ಕೊನೆಗೂ ಪಕ್ಷ ನೆಹರೂ ಕುಟುಂಬದ ನೆರಳಿನಿಂದ ನಿಜಕ್ಕೂ ಹೊರಬಂದ ಸೂಚನೆ ಅದಾಗುತ್ತದೆ. ಅದೇ ರೀತಿಯಲ್ಲಿ ಪಕ್ಷಕ್ಕೊಂದು ಹೊಸ ಯೋಚನೆ ಮತ್ತು ಪಕ್ಷವನ್ನು ಹೊಸ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದಲೂ ಶಶಿ ತರೂರ್ ಉತ್ತಮ ಆಯ್ಕೆ ಆಗಬಹುದಾಗಿತ್ತೋ ಏನೋ? ಆದರೆ ಕಾಂಗ್ರೆಸ್ಸಿನ ಮುಂದಿರುವ ದ್ವಂದ್ವ ಏನೆಂದರೆ, ಹೊಸ ತಲೆಮಾರನ್ನು ತಲುಪುವ ಮುನ್ನ ಅದಕ್ಕೆ ಹಳೆ ತಲೆಮಾರಿನ ಬೆಂಬಲವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕೆ ಖರ್ಗೆಯವರಂತಹ ಆಯ್ಕೆ ಅನಿವಾರ್ಯ. ಅದಕ್ಕಿಂತಲೂ ಮುಖ್ಯವಾಗಿ ಹೊಸ ತಲೆಮಾರು ಮತ್ತು ಹಳೆ ತಲೆಮಾರು ಎರಡನ್ನೂ ಸರಿತೂಗಿಸಿಕೊಂಡು ಹೋಗಬಲ್ಲ ಒಬ್ಬ ನಾಯಕ ಬಹುಶಃ ಕಾಂಗ್ರೆಸ್ಸಿನಲ್ಲಿ ಇಲ್ಲ. ಒಂದು ವೇಳೆ ಅಂತವರೊಬ್ಬರು ಇದ್ದರೂ ಅವರು ಕುಟುಂಬಕ್ಕೆ ಒಪ್ಪಿಗೆ ಆಗಲಾರದೆ ಇದ್ದರೆ ಅವರಿಗೆ ಅವಕಾಶ ಸಿಗಲಾರದು ಎನ್ನುವ ಸ್ಥಿತಿ ಕಾಂಗ್ರೆಸ್ಸಿನಲ್ಲಿ ಈಗಲೂ ಇದೆ. ಈ ಎಲ್ಲ ಕಾರಣಕ್ಕೆ ಕುಟುಂಬದ ನಿಷ್ಠಾವಂತ ಮತ್ತು ಹಳೆಯ ತಲೆಮಾರಿನವರಿಗೆ ಸ್ವೀಕೃತರಾಗುವ ಖರ್ಗೆ ಅಧ್ಯಕ್ಷಗಿರಿಯ ಹತ್ತಿರಬಂದು ನಿಂತಿದ್ದಾರೆ.

ಚಿದಂಬರಂ

ಚಿದಂಬರಂ ಅವರು ಇನ್ನೊಂದು ವಿಷಯ ಹೇಳಿದ್ದಾರೆ. ಖರ್ಗೆಯವರ ಬದಲಿಗೆ (ಮತ್ತು ತರೂರ್ ಅವರ ಬದಲಿಗೂ) ಯಾರಾದರೂ ಹಿಂದಿ ಮಾತೃಭಾಷೆಯ ಬಲ್ಲ, ಉತ್ತರ ಭಾರತದ ರಾಜ್ಯದವರು ಕಾಂಗ್ರೆಸ್ಸ್ ಅಧ್ಯಕ್ಷರಾಗಿದ್ದರೆ ಚೆನ್ನಾಗಿತ್ತೆಂದು. ಇದು ವಿಚಿತ್ರವಾಗಿದೆ. ಇನ್ನೂ ನಮ್ಮ ರಾಷ್ಟ್ರೀಯ ಪಕ್ಷದವರ ಮನಸ್ಥಿತಿ ಹೇಗಿದೆ ಎಂದರೆ, ರಾಷ್ಟ್ರಮಟ್ಟದ ರಾಜಕೀಯ ಪದವಿಗಳೇನಿದ್ದರೂ ಅದಕ್ಕೆ ಉತ್ತರದವರೇ ಆಗಬೇಕು. ಅಂದರೆ, ಉತ್ತರದವರ ಆಧಿಪತ್ಯವನ್ನು ಅರ್ಥಾತ್ ಹಿಂದಿಯವರ ಆಧಿಪತ್ಯ ಅಥವಾ ನಾಯಕತ್ವವನ್ನು ದಕ್ಷಿಣದವರು ಯಾ ಹಿಂದಿಯೇತರ ಭಾಷೆಯವರು ಒಪ್ಪಿಕೊಳ್ಳಬೇಕು; ಆದರೆ ದಕ್ಷಿಣದವರ ನಾಯಕತ್ವವನ್ನು ಉತ್ತರದವರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು. ಈ ಮಾತ್ರನ್ನು ಹೇಳಿದ ಚಿದಂಬರಂ ದಕ್ಷಿಣವರೇ, ಅದರಲ್ಲೂ ತಮಿಳುನಾಡಿನವರು ಎನ್ನುವುದು ಇನ್ನೊಂದು ವಿಶೇಷ.

ಖರ್ಗೆ ಕರ್ನಾಟಕದವರಾಗಿರುವುದರಿಂದ ಈಗ ಎಲ್ಲರೂ ಕೇಳುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ಅವರು ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನ ಪಡೆಯುತ್ತಿರುವುದು ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ 2023ರ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಸಹಾಯಕವಾಗಬಹುದೆಂದು. ಹೌದು ಸಹಾಯಕವಾಗುತ್ತದೆ ಅಂತ ಒಂದೇ ಪಟ್ಟಿಗೆ ಹೇಳಿ ಬಿಡಬಹುದು. ಆದರೆ, ಹೇಗೆ ಸಹಾಯಕವಾಗುತ್ತದೆ ಅಂತ ಕೇಳಿದರೆ ಬಿಡಿಸಿ ಹೇಳಲು ಕಷ್ಟ. ಏನೇ ಹೇಳುವುದಾದರೂ ಮೊದಲಿಗೆ ಇಲ್ಲಿ ಖರ್ಗೆಯವರ ಜಾತಿಯನ್ನು ಪ್ರಸ್ತಾಪಿಸಬೇಕಾಗುತ್ತದೆ. ಖರ್ಗೆಯವರು ಜಾತಿಯಿಂದ ದಲಿತರು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ಸಿನಲ್ಲಿ ಇವರಿಗೆ ನೀಡಿದ ಉನ್ನತ ಸ್ಥಾನ ಕರ್ನಾಟಕದಲ್ಲಿ ದಲಿತರ ಮತಗಳನ್ನು ಸೆಳೆಯಲು ಕಾಂಗ್ರೆಸಿಗೆ ಎಷ್ಟು ನೆರವಾಗಬಹುದು ಎನ್ನುವುದು ಇಲ್ಲಿರುವ ನಿಜವಾದ ಪ್ರಶ್ನೆ. ಕರ್ನಾಟಕದಲ್ಲಿ ಕಾಂಗೆಸ್ಸಿಗೆ ದಲಿತರ ಬೆಂಬಲ ಒಂದು ಸಂಕ್ರಮಣ ಸ್ಥಿತಿಯಲ್ಲಿದೆ. ರಾಜ್ಯದ ದಲಿತ ಮತದಾರರ ಪೈಕಿ ಎಡಗೈ ಪಂಗಡದ ದಲಿತರನ್ನು ಬಿಜೆಪಿ ದೊಡ್ಡಮಟ್ಟದಲ್ಲಿ ಸೆಳೆದಿದೆ. ಕಾಂಗ್ರೆಸ್ಸಿನಲ್ಲಿ ಈ ಪಂಗಡದ ದಲಿತ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎನ್ನುವ ಅತೃಪ್ತಿಯನ್ನು ಬಳಸಿಕೊಂಡ ಬಿಜೆಪಿ ಆ ಪಂಗಡದ ಕೆಲ ನಾಯಕರಿಗೆ ಅಧಿಕಾರದಲ್ಲಿ ವಿವಿಧ ಸ್ಥಾನಮಾನಗಳನ್ನು ನೀಡಿ ಅವರ ಬೆಂಬಲವನ್ನು ಭದ್ರಪಡಿಸಿಕೊಂಡಿದೆ.

ಶಶಿ ತರೂರ್

ದಲಿತರ ಬಲಗೈ ಪಂಗಡಕ್ಕೆ ಸೇರಿದ ಬಹಳಷ್ಟು ನಾಯಕರು ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಹಾಗೆಂದು ಬಲಗೈ ಪಂಗಡಕ್ಕೆ ಸೇರಿದ ಎಲ್ಲಾ ದಲಿತ ಮತದಾರರು ಕಾಂಗ್ರೆಸ್ಸಿನೊಂದಿಗೆ ಹಿಂದಿನಂತೆ ಗಟ್ಟಿಯಾಗಿ ಇದ್ದಾರೆ ಎನ್ನುವ ಸ್ಥಿತಿ ಈಗ ಇಲ್ಲ. ಖರ್ಗೆಯವರ ಅಧ್ಯಕ್ಷ ಸ್ಥಾನ ದಲಿತ ಮತದಾರರಿಗೆ ಕಾಂಗ್ರೆಸ್ ಕುರಿತಂತೆ ಒಂದು ಸಕಾರಾತ್ಮಕವಾದ ಸಂದೇಶವನ್ನೇನೋ ರವಾನಿಸಬಹುದು. ಆದರೆ, ಬಿಜೆಪಿಯವರೊಂದಿಗೆ ಹೊಂದಿಕೊಂಡಿರುವ ಎಡಗೈ ದಲಿತ ಸಮುದಾಯವನ್ನು ಕಾಂಗ್ರೆಸ್ಸಿನತ್ತ ಒಲಿಸಿಕೊಳ್ಳಲು ಖರ್ಗೆಯವರಿಗೆ ಸಾಧ್ಯವೇ? ಅದೇ ರೀತಿ ಕಾಂಗ್ರೆಸ್ಸಿನೊಂದಿಗಿನ ಭಾವನಾತ್ಮಕ ಕಳಚಿಕೊಳ್ಳುತ್ತಿರುವ ಬಲಗೈ ಪಂಗಡದ ದಲಿತ ಮತದಾರರನ್ನು ಮತ್ತೊಮ್ಮೆ ಕಾಂಗ್ರೆಸ್ಸಿನ ಮತಬ್ಯಾಂಕ್ ಆಗಿ ಪರಿವರ್ತಿಸಬಲ್ಲ ಚಾಕಚಕ್ಯತೆಯನ್ನು ಖರ್ಗೆ ಪ್ರದರ್ಶಿಸಬಲ್ಲರೇ? ದಲಿತ ಮತದಾರರ ಆಶೋತ್ತರಗಳೂ ಬದಲಾಗಿವೆ. ಹೊಸ ತಲೆಮಾರಿನ ದಲಿತ ಮತದಾರರನ್ನು ಅಧಿಕಾರವಿಲ್ಲದ ಸ್ಥಿತಿಯಲ್ಲಿ ಒಲಿಸಿಕೊಳ್ಳಬೇಕಾದರೆ ಅಪಾರವಾದ ರಾಜಕೀಯ ಚಾಕಚಕ್ಯತೆಯ ಜತೆಗೆ ದಣಿವರಿಯದ ದುಡಿಮೆಯೂ ಬೇಕಾಗುತ್ತದೆ. ಬದಲಾವಣೆಗೆ ಒಗ್ಗಿಕೊಳ್ಳದ, ಹೊಸ ರಾಜಕೀಯ ನುಡಿಗಟ್ಟು ಅರ್ಥವಾಗದ ಹಳೆಯ ತಲೆಗಳನ್ನು ಸಂಭಾಳಿಸಿಕೊಂಡೆ ಕೆಲಸಮಾಡಬೇಕಾದ ಎಂಬತ್ತರ ಪ್ರಾಯದ ಖರ್ಗೆಯವರಿಗೆ ಈ ಚಾಕಚಕ್ಯತೆಯನ್ನು ಪ್ರದರ್ಶಿಸಲು ಸಾಧ್ಯ ಎಂದಾದಲ್ಲಿ, ದಣಿವರಿಯದೆ ದುಡಿದು ಯೋಚನೆಗಳನ್ನು ಯೋಜನೆಗಳಾಗಿ ಪರಿವರ್ತಿಸಿ ಅನುಷ್ಠಾನಗೊಳಿಸಬಲ್ಲ ಚೈತನ್ಯ ಇರುವುದಾದರೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೂ ಕಾಂಗೆಸ್ಸಿಗೆ ಅವರ ಅಧ್ಯಕ್ಷಗಿರಿಯಿಂದ ಅನುಕೂಲ ಆಗುತ್ತದೆ. ಇಲ್ಲವಾದರೆ? ಇಲ್ಲವಾದರೆ ಏನೂ ಇಲ್ಲ. ಯಥಾಸ್ಥಿತಿಗಂತೂ ಅವರಿಂದ ಯಾವುದೇ ತೊಂದರೆ ಆಗುವುದಿಲ್ಲ.

 


ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....