Homeಕರ್ನಾಟಕಹೆಬ್ಬಾರ್ ಹಿಕಮತ್ತಿನ ಹಕೀಕತ್!!

ಹೆಬ್ಬಾರ್ ಹಿಕಮತ್ತಿನ ಹಕೀಕತ್!!

- Advertisement -
- Advertisement -

| ನಹುಷ |

ಉತ್ತರ ಕನ್ನಡದ ರಾಜಕಾರಣದ ರಂಗು ಬದಲಾಗುತ್ತಿದೆ. ಕಾರಣವಿಷ್ಟೆ ಆಪರೇಷನ್ ಕಮಲಕ್ಕೆ ಬಿಕರಿಗೊಂಡು ರಾಜೀನಾಮೆ ಕೊಟ್ಟಿರುವ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಒಬ್ಬರೇ ಅಲ್ಲದೆ ಮಿನಿಸ್ಟರ್ ಆರ್.ವಿ.ದೇಶ್‍ಪಾಂಡೆಯೂ ಬಿಜೆಪಿ ಸೆಳೆತಕ್ಕೆ ಸಿಲುಕಿದ್ದಾರೆಂಬ ಸುದ್ದಿ ದೊಡ್ಡ ಚರ್ಚೆಗೀಡಾಗಿ ಹೋಗಿದೆ. ಮಜಾ ಎಂದರೆ, ಕಾಂಗ್ರೆಸಲ್ಲಿದ್ದರೆ ತನ್ನ ಆಸೆಗೆಲ್ಲ ದೇಶಪಾಂಡೆ ಕಲ್ಲು ಹಾಕುತ್ತಾರೆಂಬ ಸಿಟ್ಟಿಂದ ಬಿಜೆಪಿ ಪಾಳೆಯಕ್ಕೆ ಎಂಟ್ರಿ ಹೊಡೆದಿದ್ದ ಹೆಬ್ಬಾರ್ ಅದೇ ಹಿತಶತ್ರು ದೇಶಪಾಂಡೆ ತನ್ನ ಬೆನ್ನಟ್ಟಿ ಬರುತ್ತಿರುವುದು ಕೇಳಿ ಬೆಚ್ಚಿಬಿದ್ದಿದ್ದಾರೆ!!

ಕಾಂಗ್ರೆಸ್‍ನಿಂದಲೇ ಸ್ಪರ್ಧಿಸಿ ಏದುಸಿರು ಬಿಡುತ್ತಲೇ ಗೆಲ್ಲುತ್ತಿದ್ದಂತೆಯೇ ಹೆಬ್ಬಾರ್, ದೇಶಪಾಂಡೆಗೆ ಸೆಡ್ಡು ಹೊಡೆದು ಮಂತ್ರಿಗಿರಿಗೆ ಲಾಬಿ ಮಾಡಿದರು. ಮತ್ತೊಂದೆಡೆ ಬಿಜೆಪಿಯವರಿಂದ ಆಪರೇಷನ್ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಯಡ್ಡಿ ಮಗ ಹೆಬ್ಬಾರ್ ಹೆಂಡತಿಯೊಂದಿಗೆ ಲೇವಾದೇವಿ ವ್ಯವಹಾರಕ್ಕಿಳಿದ ಆಡಿಯೋ ಕೂಡ ಆಗ ಹೊರಬಂದಿತ್ತು. ಹೆಬ್ಬಾರ್ ಪರಿವಾರ ಮಾನ ಹರಾಜಾದರೂ ಇದೇ ಸಾಹಸ ಎಂಬಂತೆ ಬೀಗಿದರು. ಮಂತ್ರಿಗಿರಿಗಾಗಿ ಕಾಂಗ್ರೆಸ್ ಹೈಕಮಾಂಡನ್ನು ಬ್ಲಾಕ್‍ಮೇಲ್ ಮಾಡುತ್ತಲೇ ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷತೆ ಕೊಟ್ಟರೂ ಬೇಡವೆನ್ನಲಿಲ್ಲ ಈ ಆಸೆಬುರುಕ!!

ಕೇವಲ ಒಂದು ಸಾವಿರದ ನಾಲ್ಕುನೂರು ಮತಗಳಂತರದಿಂದ ಬಚಾವಾಗಿರುವ ಹೆಬ್ಬಾರ್‍ಗೆ ಮತ್ತೆ ಅದೇ ಕಾಂಗ್ರೆಸ್‍ನಿಂದ ಗೆಲ್ಲುತ್ತೇನೆಂಬ ಧೈರ್ಯ ಉಳಿದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಳ್ಳಾರಿಯ ಕಬ್ಬಿಣದ ಅದಿರು ಕದ್ದು ವಿದೇಶಕ್ಕೆ ರಪ್ತು ಮಾಡಿದ ಕೇಸಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಹೆಬ್ಬಾರ್ ಹಾಗೂ ಆತನ ಕುಲೋದ್ಧಾರಕ ವಿವೇಕ್ ಹೆಬ್ಬಾರ್ ಆ ಕುಣಿಕೆಯಿಂದ ಪಾರಾಗಲು ಬಲಾಢ್ಯ ಬಿಜೆಪಿ ಸೇರುವುದು ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಪ್ರಾಥಮಿಕ ಶಿಕ್ಷಣವೂ ಮುಗಿಸಲಾಗದೆ ಲಾರಿ ಡ್ರೈವರಿಕೆ ಮಾಡಿಕೊಂಡಿದ್ದ ಹೆಬ್ಬಾರ್ ಇವತ್ತು ಕೋಟಿ-ಕೋಟಿ ತೂಗುವ ಅದಿರು ಉದ್ಯಮಿಯಾಗಿ, ರಾಜ್ಯ ಸರ್ಕಾರವನ್ನೇ ಉರುಳಿಸುವ ಪ್ರಭಲ ಶಾಸಕ ಸಾಹೇಬನಾಗಿ ಬೆಳೆದಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ!

ಹೆಬ್ಬಾರ್‍ಗೆ ಬಿಜೆಪಿ “ಸಂಸ್ಕೃತಿ” ಹೊಸತೇನೂ ಅಲ್ಲ. 1990ರ ದಶಕದ ಅಂತ್ಯದಲ್ಲಿ ಆತ ಜಿಲ್ಲಾ ಬಿಜೆಪಿ ಅಧ್ಯಕ್ಷತೆ ನಿಭಾಯಿಸಿದ್ದ. ಆದರೆ ಬಿಜೆಪಿಯಲ್ಲಿ ಆತನಿಗೆ ಕಾಗೇರಿ ಮಾಣಿ, ಅನಂತ್ಮಾಣಿ ಜತೆ ಏಗಲಾಗಲಿಲ್ಲ. ಸಂಸದ ಅನಂತ್ಮಾಣಿ ಶಿರಸಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲೇ ಈ ಹೆಬ್ಬಾರ್‍ಗೆ ಅಂದು ಕೆನ್‍ಕೆನ್ನೆಗೆ ಬಾರಿಸಿದ್ದ. ತಾನು ಬಿಜೆಪಿಯಲ್ಲಿನ್ನೂ ಬಚಾವಾಗಲಾರೆನೆಂದು ಅರಿತ ಹೆಬ್ಬಾರ್ ಕಾಂಗ್ರೆಸ್‍ನ ಪವರ್‍ಫುಲ್ ನಾಯಕಿಯಾಗಿದ್ದ ಮ್ಯಾಗಿಯ ಸೆರಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ. ಬಂದವನೇ ಡಬಲ್‍ಗೇಮ್ ಶುರುಹಚ್ಚಿಕೊಂಡಿದ್ದ. ಹಗಲು ಮ್ಯಾಗಿ ಬಿಡಾರದಲ್ಲಿದ್ದರೆ ರಾತ್ರಿ ದೇಶ್‍ಪಾಂಡೆ ಕ್ಯಾಂಪಿನಲ್ಲಿ ಕಾಣಿಸುತ್ತಿದ್ದ. ಇದರಿಂದ ಕೆರಳಿದ ದೇಶಪಾಂಡೆ ಆತನ ಬಾಲ ಕಟ್ ಮಾಡಲು ಮುಂದಾದರು. ಮ್ಯಾಗಿ ಕಾಂಗ್ರೆಸಲ್ಲಿ ಕಾವು ಕಳಕೊಳ್ಳುತ್ತಿದ್ದಂತೆಯೇ ಹೆಬ್ಬಾರ್ ದೇಶಪಾಂಡೆಗೆ ಆಹಾರವಾಗಿ ಹೋದ!!
ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಹೆಬ್ಬಾರ್ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ್ ತಲೆ ಕಂಡರೆ ಸಂಸದ ಮಾಣಿಗೆ ಆಗದು. ಹಾಗಾಗಿ ಆತ ಹಳೆ ವೈರತ್ವ ಮರೆತು ಸ್ವ-ಜಾತಿಯ ಹೆಬ್ಬಾರ್‍ಗೆ ಸಹಕರಿಸಿದ್ದ. ಈ ಹವ್ಯಕ ಹಿತಾಸಕ್ತಿಯ ರಾಜಕಾರಣದಲ್ಲಿ ಸ್ವರ್ಣವಲ್ಲಿ ಸ್ವಾಮಿಯ “ಮಂತ್ರಾಕ್ಷತೆ”ಯೂ ಕೆಲಸ ಮಾಡಿತ್ತು.

ರಾಮಕೃಷ್ಣ ಹೆಗಡೆ ಕಾಲದಿಂದ ನಿರಂತರವಾಗಿ ಒಂದಿಲ್ಲೊಂದು ಅಧಿಕಾರ ಅನುಭವಿಸುತ್ತಿರುವ ದೇಶಪಾಂಡೆ ಈಗ ಹಣ್ಣಾಗಿದ್ದಾರೆ. ಈ ಮುದಿ ಕಾಲದಲ್ಲಿ ಎರಡು ಆಸೆ ಆತನಲ್ಲಿದೆ. ಒಂದು ತಾನು ಮುಖ್ಯಮಂತ್ರಿ ಆಗಬೇಕೆಂಬುದು. ಮತ್ತೊಂದು, ತನ್ನ ಸುಪುತ್ರ ಪ್ರಶಾಂತನನ್ನು ಎಂಪಿ ಅಥವಾ ಎಮ್ಮೆಲ್ಲೆ ಮಾಡಬೇಕೆಂಬುದು. ಬಿಜೆಪಿ ಸೇರಿದರೆ ಸಿಎಂ ಆಗುವುದು ಕಷ್ಟ. ಹಾಗೆಯೇ ಕಾಂಗ್ರೆಸಲ್ಲುಳಿದರೆ ಮಗನ ಭವಿಷ್ಯಕ್ಕೆ ಮಾರಕ. ಹೀಗಾಗಿ ದೇಶಪಾಂಡೆ ಎರಡು ದೋಣಿಯ ಮೇಲೆ ಕಾಲಿಟ್ಟು ಹೊಯ್ದಾಡುತ್ತಿದ್ದಾರೆ. ಈಗೀಗ ಕಾಂಗ್ರೆಸಲ್ಲೂ ದೇಶಪಾಂಡೆಗೆ ಅಂಥ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದರೂ ತಾನೇನಾದರೂ ರಾಜಿ ಅಭ್ಯರ್ಥಿಯಾಗಿ ಸಮ್ಮಿಶ್ರದ ಸಿಎಂ ಆಗಬಹುದೆಂಬ ಯೋಚನೆಯಿಂದ ದೇಶಪಾಂಡೆ ಗಡಿಬಿಡಿಗೆ ಬಿದ್ದಿದ್ದಾರೆ. ದೇವೇಗೌಡರ ಮನೆಗೆ ಹೋಗಿ ಗಂಟೆಗಟ್ಟಲೆ ಮಾತಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಹೈಕಮಾಂಡ್‍ಗೆ ತನ್ನನ್ನು ಸಿಎಂ ಕ್ಯಾಂಡಿಡೇಟ್ ಮಾಡಿದರೆ ಓಡಿಹೋಗಿರುವ ಶಾಸಕರಲ್ಲಿ ಕೆಲವರನ್ನಾದರೂ ಖರೀದಿಸಿ ತರುತ್ತೇನೆಂದು ಭರವಸೆ ಕೊಡುತ್ತಿದ್ದಾರೆ.
ಈ ನೈಚ್ಯಾನುಸಂಧಾನದಲ್ಲಿ ಸೋತರೆ ದೇಶಪಾಂಡೆಗೆ ಮಗನ ಭವಿಷ್ಯ ಮುಖ್ಯವಾಗುತ್ತಿದೆ. ಅಂದರೆ ಆತ ಬಿಜೆಪಿ ಪಾಲಾಗುವುದು ಪಕ್ಕಾ. ಅಮಿತ್ ಶಾ ಈಚೆಗೆ ಗೋವಾಕ್ಕೆ ಬಂದಾಗ ದೇಶಪಾಂಡೆ ರಹಸ್ಯವಾಗಿ ಸಂಧಿಸಿ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗುತ್ತಲೇ ಆತ ಬಿಜೆಪಿಗೆ ಅಧಿಕೃತವಾಗಿ ಪ್ರವೇಶ ಪಡೆಯುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮಂತ್ರಿಯಾಗುವ ಯೋಗದ ದೇಶಪಾಂಡೆ ಈ ಬಾರಿ ಬಿಜೆಪಿಯಲ್ಲಿ ಮಂತ್ರಿಗಿರಿ ಕೇಳುತ್ತಿಲ್ಲ. ಬದಲಿಗೆ ತನ್ನ ಮಗ ಪ್ರಶಾಂತನಿಗೆ ಎಂಪಿ ಅಥವಾ ಹಳಿಯಾಳದ ಎಮ್ಮೆಲ್ಲೆ ಟಿಕೆಟ್ ಕೇಸರಿ ಪಕ್ಷದಿಂದ ಬಯಸುತ್ತಿದ್ದಾರೆ. ಹಳಿಯಾಳದಲ್ಲಿ ಬಗಲಲ್ಲಿರುವವ ದುಷ್ಮನ್-ಎಮ್ಮೆಲ್ಲೆ ಎಸ್.ಎಲ್.ಘೋಟನೇಕರ್ ತಿರುಗಿ ಬಿದ್ದರೆ ಬಿಜೆಪಿಯಿಂದಲೂ ತನ್ನ ಮಗ ಗೆಲುವು ಕಷ್ಟವೆಂಬ ಲೆಕ್ಕಾಚಾರವೂ ಆತ ಹಾಕಿದ್ದಾರೆ. ಬಹುಸಂಖ್ಯಾತ ಮರಾಠ ಸಮಾಜದ ಘೋಟನೇಕರ್ ತನ್ನ ಮಗನನ್ನು ಹಳಿಯಾಳದ ಭಾವಿ ಎಮ್ಮೆಲ್ಲೆ ಎಂದೇ ದೃಢವಾಗಿ ನಂಬಿದ್ದಾರೆ. ಹೀಗಾಗಿ ದೇಶಪಾಂಡೆ ತನ್ನ ಬೀಗ, ಪ್ರಶಾಂತನಿಗೆ ಹೆಣ್ಣುಕೊಟ್ಟು ಮಾವ ಮುಂಬೈನ ಪ್ರಭಾವಿ ರಾಜಕಾರಣಿ ಪ್ರಫುಲ್ ಪಟೇಲ್ ಬಲವೂ ಸೇರಿಸಿಕೊಂಡು ಮಗನಿಗೆ ಎಂಪಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ದೇಶಪಾಂಡೆ ಬಿಜೆಪಿ ಸೇರಿದರೆ ಏನಾಗುತ್ತದೆ? ಆತನ ಮಗನ ಭವಿಷ್ಯ ಬೆಳಗುತ್ತದೆ. ಶಿವರಾಮ ಹೆಬ್ಬಾರನ ಗ್ರಹಚಾರ ಮತ್ತೆ ಕೆಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...