Homeಮುಖಪುಟಏನಿದು ಫಿಲ್ಮ್ ಡೈರೆಕ್ಷನ್?

ಏನಿದು ಫಿಲ್ಮ್ ಡೈರೆಕ್ಷನ್?

- Advertisement -
- Advertisement -

| ರಾಜಶೇಖರ್ ಅಕ್ಕಿ |

ನಾನಾಗ ಹೈಸ್ಕೂಲಿನಲ್ಲಿದ್ದೆ, ಒಂದು ಸಿನೆಮಾ ನೋಡಿ ಬಂದ ನಂತರ ನನ್ನ ಒಬ್ಬ ಗೆಳೆಯ ಹೇಳಿದ್ದು, ‘ಪಿಚ್ಚರ್ ಅಷ್ಟು ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’. ಇದೇನಿದು? ಇದ್ಹೆಂಗೆ ಸಾಧ್ಯ? ಅಭಿನಯ ಅಂದ್ರೆ ಗೊತ್ತು, ಛಾಯಾಗ್ರಹಣ ಗೊತ್ತು, ಸಂಗೀತ ಗೊತ್ತು, ಈ ಡೈರೆಕ್ಷನ್ ಅಂದ್ರೇನು? ಸಿನೆಮಾಗಳನ್ನು ಇಷ್ಟು ಇಷ್ಟ ಪಡುವ ನನಗೆ ಈ ಡೈರೆಕ್ಷನ್ ಅನ್ನೋದೇನು ಎನ್ನೋದು ಗೊತ್ತೇ ಇಲ್ವಲ್ಲ? ನಾನು ಕಣ್ಣು ಪಿಳಿ ಪಿಳಿ ಬಿಟ್ಟು ನೋಡಿದೆ.

ಹಂಗಾದ್ರೆ ಚಲನಚಿತ್ರ ನಿರ್ದೇಶನ ಅಂದ್ರೇನು?
ಚಿತ್ರಕಥೆಯನ್ನು ತೆಗೆದುಕೊಂಡು ದೃಶ್ಯ ಮಾಧ್ಯಮಕ್ಕೆ ಇಳಿಸುವುದೇ ನಿರ್ದೇಶನ ಹಾಗೂ ಅದನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವ ಜವಾಬ್ದಾರಿ ಹೊತ್ತವನನ್ನು ನಿರ್ದೇಶಕ ಎನ್ನಬಹುದು. ಅಂದರೆ, ಸ್ಕ್ರಿಪ್ಟ್‍ಅನ್ನು ತೆಗೆದುಕೊಂಡು ಆಯಾ ದೃಶ್ಯಕ್ಕೆ ಬೇಕಾಗಿರುವ ಶಾಟ್‍ಗಳನ್ನು ಆಯ್ಕೆ ಮಾಡಿ ಶೂಟಿಂಗ್ ಮಾಡಿ ಸಂಕಲನ ಮಾಡಿದರೆ ಅದುವೇ ನಿರ್ದೇಶನ.

ಅಷ್ಟೇನಾ? ಹಂಗಂದ್ರೆ, ನನ್ನ ಗೆಳೆಯ ಹೇಳಿದ ಮಾತು, ಡೈರೆಕ್ಷನ್ ಮಸ್ತ್ ಇತ್ತು ಅಂದರೇನು? ನಿರ್ದೇಶನ ಮಸ್ತ್ ಆಗಲು ಏನೆಲ್ಲ ಮಾಡಬೇಕು? ಏನೆಲ್ಲ ಒಳಗೊಂಡಿರುತ್ತೆ ಈ ಚಲನಚಿತ್ರ ನಿರ್ದೇಶನ?

ಸರಳವಾಗಿ ಹೇಳಬೇಕೆಂದರೆ, ಕಥೆಯ, ಚಿತ್ರಕಥೆಯ, ಛಾಯಾಗ್ರಹಣದ, ಅಭಿನಯದ ಮತ್ತು ಸಂಕಲನದ ಆಳವಾದ ಜ್ಞಾನ ನಿರ್ದೇಶಕನಿಗಿರಬೇಕು, ಈ ಎಲ್ಲಾ ವಿಭಾಗಗಳಿಗೂ ನಿರ್ದೇಶಕನೇ ಜವಾಬ್ದಾರ. ಅಂದರೆ ನಿರ್ದೇಶಕ ಬರೀ ಸೂಪರ್‍ವೈಸರ್ ಆಗಿರಬೇಕಾ? ಅಥವಾ ಆಯಾ ದೃಶ್ಯಗಳಲ್ಲಿ ಯಾವ್ಯಾವ ಶಾಟ್ ಬೇಕು ಎಂದು ಛಾಯಾಗ್ರಾಹಕನಿಗೆ ಮತ್ತು ನಟರಿಗೆ ಹೇಳುವುದೇ ನಿರ್ದೇಶಕನ ಕೆಲಸ ಮತ್ತು ಇತರ ಕೆಲಸಗಳನ್ನೆಲ್ಲಾ ಮೇಲ್ವಿಚಾರಣೆ ಮಾಡುವುದು ಎಂದು ಅನ್ನಬಹುದಾ?

ಇರಲಿ, ನಿರ್ದೇಶಕನ ಕೆಲಸಗಳೇನು ಎಂದು ಸದ್ಯಕ್ಕೆ ನನಗೆ ತಿಳಿದಿರುವ ಕೆಲಸಗಳ ಪಟ್ಟಿ ಮಾಡುವ.
ಒಂದು, ಕಥೆಯ ಆಳ ಜ್ಞಾನ, ಕಥೆ ಹೇಗೆ ಕೆಲಸ ಮಾಡುವುದು ಎನ್ನುವುದರ ಸ್ಪಷ್ಟತೆ (ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ. ಲಿಂಕ್) ಈ ಕಥೆ ಏನು? ಈ ಕಥೆ ಏಕೆ? ಈ ಕಥೆಯೇ ಏಕೆ? ಈ ಕಥೆಗೆ ಈ ನಿರ್ದೇಶಕನೇ ಏಕೆ? ಈ ಕಥೆ ಇಂದೇಕೆ? ಮೊದಲು ಈ ಮೂಲಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ ನಂತರ ಈ ಕಥೆ ಯಾರದ್ದು, ಕಥೆಯ ಉದ್ದೇಶ ಏನು, ಕಥಾನಾಯಕಿಯ ಉದ್ದೇಶ ಏನು, ಕಥೆ ಎಲ್ಲೆಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ, ಚಿತ್ರಕಥೆಯಲ್ಲಿ ಬರೆದ ದೃಶ್ಯಗಳು ಕಥೆಯ ಆತ್ಮವನ್ನು ಬಿಂಬಿಸುತ್ತಿವೆಯೇ ಎನ್ನುವ ಹತ್ತಾರು ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕು.

ಮೇಲಿನ ಎಲ್ಲಾ ಅಂಶಗಳನ್ನು ಖಾತ್ರಿಪಡಿಸಿಕೊಂಡ ನಂತರ ಆಯಾ ದೃಶ್ಯಗಳಿಗೆ ಆಗತ್ಯವಿರುವ ಶಾಟ್‍ಗಳನ್ನು ಆಯ್ಕೆ ಮಾಡಬೇಕು. (ಇದರ ಬಗ್ಗೆ ಮುಂದಿನ ಪ್ಯಾರಾದಲ್ಲಿ). ಆ ದೃಶ್ಯಕ್ಕೆ ಆಯ್ಕೆ ಮಾಡಿದ ಶಾಟ್‍ಗಳು ಸಾಕೇ, ಇನ್ನೂ ಕಡಿಮೆ ಶಾಟ್‍ಗಳಲ್ಲಿ ಆ ದೃಶ್ಯದ ಸಾರವನ್ನು ಸೆರೆಹಿಡಿಯಬಹುದೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿ ಅದರನುಗುಣವಾಗಿ ಚಿತ್ರೀಕರಣ ಮಾಡಬೇಕು. ಈ ಹಂತದಲ್ಲಿ ನಿರ್ದೇಶಕನಿಗೆ ತಾಂತ್ರಿಕ ಅಂಶಗಳ ಸಂಪೂರ್ಣ ಅರಿವು ಇರಬೇಕಾಗುತ್ತದೆ. ಯಾವ ಕ್ಯಾಮರ ಬಳಸಬೇಕು, ಯಾವ ಲೆನ್ಸ್ ಬಳಸಬೇಕು, ಯಾವ ಕೋನ ಇಡಬೇಕು, ಶಾಟ್‍ನಲ್ಲಿ ಕ್ಯಾಮರ ಚಲನೆ ಇರಬೇಕೇ ಇತ್ಯಾದಿ ಪ್ರಶ್ನೆಗಳೊಂದಿಗೆ ಪರದೆಯಲ್ಲಿ ಕಾಣುವ ಎಲ್ಲಾ ವಸ್ತುಗಳು ಹೇಗಿರಬೇಕು ಎನ್ನುವುದನ್ನೂ ನಿರ್ದೇಶಕನೇ ನಿರ್ಧರಿಸಬೇಕು.

ಇದರೊಂದಿಗೆ ಅಭಿನಯ. ನಟರ ಹಾವಭಾವದೊಂದಿಗೆ ಎಲ್ಲಾ ನಟರ ಚಲನೆಗಳನ್ನೂ ನಿರ್ದೇಶಕನೇ ನಿರ್ಧರಿಸಬೇಕು. (ಪಾತ್ರ ಸೃಷ್ಟಿಯಲ್ಲಿ ನಿರ್ದೇಶಕನ ಪಾತ್ರದ ಬಗ್ಗೆ ಈಗಾಗಲೇ ಬರೆದಿದ್ದೇನೆ.) ಚಿತ್ರೀಕರಣ ಮುಗಿಸಿದ ನಂತರ ಅತ್ಯಂತ ಮುಖ್ಯ ಅಂಗವಾದ ಸಂಕಲನದ ಪ್ರಕ್ರಿಯೆಯಲ್ಲಿ ಸಂಕಲನಕಾರಳೊಂದಿಗೆ ಸೇರಿ ಪ್ರೇಕ್ಷಕರಿಗೆ ಕೊನೆಯದಾಗಿ ಚಿತ್ರ ಹೇಗೆ ತಲುಪುವುದು ಎನ್ನುವ ಕೆಲಸ ಮುಗಿಸಬೇಕು. (ಸಂಕಲನದ ಬಗ್ಗೆ ಇನ್ನೊಂದು ಲೇಖನ ಬೇಕು.)

ಅಂದ್ರೆ? ಇಷ್ಟೇನಾ ನಿರ್ದೇಶನ ಅಂದರೆ?
ನಿರ್ದೇಶನದ ಬಗ್ಗೆ ಹಲವಾರು ಥಿಯರಿಗಳಿವೆ. ಅಂದ್ರೆ ತಾರ್ಕಾವ್‍ಸ್ಕಿ (Andrei Tarkovsky)ಎಂಬ ರಷಿಯಾದ ನಿರ್ದೇಶಕ ಸಿನೆಮಾ ಎನ್ನುವುದು ಸಮಯದಲ್ಲಿ ಕೆತ್ತನೆ (sculpting) ಮಾಡಿದಂತೆ ಎಂದು ಹೇಳಿ ಚಲನಚಿತ್ರ ಎಂದರೆ ಏನು, ಅದರ ಜೀವ ಎಂಥದ್ದು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಸ್ಟಾಕರ್, ಸೊಲಾರಿಸ್, ಮಿರರ್ ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿದ ಇವರ ಸಿನೆಮಾಗಳಲ್ಲಿ ಆಧ್ಯಾತ್ಮ, ಕನಸು ಮುಂತಾದ ವಿಷಯಗಳನ್ನು ಸೆರೆಹಿಡಿಯುವ ಪ್ರಯತ್ನ ಕಾಣಿಸುತ್ತದೆ. ಇವರ ಚಿತ್ರಗಳಲ್ಲಿ ತುಂಬಾ ಉದ್ದದ ಶಾಟ್‍ಗಳು ಮತ್ತು ತುಂಬಾ ಕಡಿಮೆ ಕಟ್‍ಗಳು ಕಾಣಿಸುತ್ತವೆ. ಆದರೆ ಐಸೆನ್‍ಸ್ಟೈನ್ ಮತ್ತು ಡೇವಿಡ್ ಮ್ಯಾಮೆಟ್(ಇವರ ಬಗ್ಗೆ ಬರೆದಿದ್ದೇನೆ) ಮುಂತಾದವರು ಮೊಂಟಾಜ್ ಥಿಯರಿಯನ್ನು ಮುಂದಿಡುತ್ತಾರೆ. ಚಿತ್ರದಲ್ಲಿ ಮುಂದೇನಾಗುವುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಹಿಡಿದಿಡಬೇಕು, ಪ್ರತಿಯೊಂದು ದೃಶ್ಯವೂ ಕಥೆಯನ್ನು ಮುಂದೊಯ್ಯಬೇಕು, ಪ್ರತಿಯೊಂದು ದೃಶ್ಯದ ಉದ್ದೇಶ ಸ್ಪಷ್ಟವಾಗಿರಬೇಕು, ಸಂಭಾಷಣೆಯ ಪ್ರತಿಯೊಂದು ತುಣುಕು ಸಹ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಇತ್ಯಾದಿ.

ಅಂದರೆ, ಈ ಎರಡೂ ಥಿಯರಿಗಳು ಒಂದಕ್ಕೊಂದು ವಿರುದ್ಧದ ಥಿಯರಿಗಳಾ? ದೃಶ್ಯದ ಉದ್ದೇಶ ಸ್ಪಷ್ಟವಾದರೆ ಸಾಕಲ್ವಾ, ಅದಕ್ಕೆ ಜೀವ ತುಂಬೋದು ಅಂದರೆ ಏನು?

ಕಥೆಗಳ ಆಧಾರದ ಮೇಲೆ ಅದರ ಹಿಂದಿರಬೇಕಾದ ಥಿಯರಿ ನಿರ್ಧಾರವಾಗಬೇಕೆ? ಅಥವಾ ನಿರ್ದೇಶಕ ಒಂದೇ ಥಿಯರಿಗೆ ಬದ್ಧವಾಗಬೇಕೆ?
1999ರಲ್ಲಿ ಪೋಸ್ಟ್‍ಮೆನ್ ಇನ ದ ಮೌಂಟನ್ಸ್ ಎನ್ನುವ ಚಿತ್ರ ಬಂತು. ಅದರಲ್ಲಿಯ ಮೊದಲ ದೃಶ್ಯ; ತಂದೆ ಮಗ ಇಬ್ಬರೂ ಮಾರನೆಯ ದಿನ ಬೆಳಗ್ಗೆ ತಮ್ಮ ಪ್ರವಾಸಕ್ಕೆ ಹೊರಡಲಿದ್ದಾರೆ, ಹಾಗಾಗಿ ರಾತ್ರಿ ದೀಪದ ಬೆಳಕಿನಲ್ಲಿ ನಕ್ಷೆಗಳನ್ನು, ಇತರ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ತಂದೆ ಮಗ ಒಂದು ಊರಿಗೆ ಬೆಳ್ಳಂಬೆಳಗ್ಗೆ ಬಂದು ಮುಟ್ಟುತ್ತಾರೆ. ಈ ದೃಶ್ಯಗಳನ್ನು ನೋಡುತ್ತಿರುವಾಗ ಒಬ್ಬ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅಲ್ಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾನೆ ನಿರ್ದೇಶಕ ಹೋ ಜಿಯಾಂಗಿ? ಅದನ್ನು ಮಾಡಲು ಹೇಗೆ ಸಾಧ್ಯವಾಯಿತು?

ಸಿಡ್ನಿ ಲುಮೆಟ್ ಅವರ ಚಿತ್ರ ದಿ ವರ್ಡಿಕ್ಟ್ ನೋಡುವಾಗ ಅದೊಂದು ವಿದ್ಯುತ್ ಪ್ರವಹಿಸುತ್ತಿರುವ ತಂತಿ ಎಂತಲೇ ಭಾಸವಾಯಿತು. ಪ್ರತಿಯೊಂದು ದೃಶ್ಯವೂ ಜೀವಂತವಾಗಿದೆ; ಅದರದೇ ಬಿಗಿತ, ಟೆನ್ಷನ್ ಹೊಂದಿದೆ. ಆ ಬಿಗಿತ ಪ್ರೇಕ್ಷಕನನ್ನು ಒಂದುಕ್ಷಣವೂ ಬಿಡುವುದಿಲ್ಲ. ಹಿನ್ನಲೆ ಸಂಗೀತ ಇಲ್ಲದೇ ಅಷ್ಟು ಟೆನ್ಷನ್ ತಂದಿಡುತ್ತಾರೆ. ಅದನ್ನು ಹೇಗೆ ಮಾಡಲು ಸಾಧ್ಯವಾಯಿತು?

ನಾವು ಚಿಕ್ಕವರಿದ್ದಾಗ ಒಂದು ಮಾಡ್ತಿದ್ವಿ. ಯಾರೋ ಸಿನೆಮಾ ನೋಡಿ ಬಂದಕೂಡಲೇ, ಅವರನ್ನು ಸ್ಟೋರಿ ಹೇಳು ಎಂದು ಪೀಡಿಸುತ್ತಿದ್ವಿ. ಅನೇಕ ಸಲ ಅವರು ಆ ಚಿತ್ರದ ಸಂಪೂರ್ಣ ಸ್ಟೋರಿಯನ್ನು ಕಣ್ಣಿಗೆ ಕಾಣುವ ಹಾಗೆ ಹೇಳುತ್ತಿದ್ದರು. (ಮಕ್ಕಳಷ್ಟೇ ಅಲ್ಲ, ವಯಸ್ಕರೂ ಇದನ್ನು ಮಾಡುತ್ತಿದ್ದರು.) ಅಂದರೆ, ಸಿನೆಮಾ ಎಂದರೆ ಕಥೆ ಎಂದಾಯಿತಲ್ಲ?

ಫಾರೆಸ್ಟ್ ಗಂಪ್, ಕಾಸ್ಟ್ ಅವೇ ಮುಂತಾದ ಚಿತ್ರಗಳು ಎಲ್ಲರಿಗೂ ಇಷ್ಟವಾಗಿದ್ದರೂ ಆ ಚಿತ್ರಗಳ ನಿರ್ದೇಶಕ ಯಾರು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅದೇಕೆ?

ನಿರ್ದೇಶನದ ವಿಷಯಕ್ಕೆ ಬಂದಾಗ ಇನ್ನೂ ಇಂತಹ ನೂರಾರು ಪ್ರಶ್ನೆಗಳು ಎದುರಾಗುತ್ತವೆ. ಲೇಖಕನ ತಲೆಯಲ್ಲಿ ಬಿತ್ತಿದ ಕಥೆಯೆನ್ನುವ ಬೀಜ ಮೊಳಕೆಯೊಡೆದು, ಚಿಗುರಿ, ಗಿಡವಾಗಿ, ಮರವಾಗಿ ಹೂ ಹಣ್ಣು ಕೊಡುವ ಪ್ರಕ್ರಿಯೆ ಇದು; ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯವರು ಪೋಷಿಸುತ್ತ ಹೋಗುತ್ತಾರೆ. ನಮಗೆ ಹಣ್ಣು ರುಚಿಕರವಾಗಿರಬೇಕು ಅಷ್ಟೇ.

ಅಂದಹಾಗೆ, ‘ಪಿಚ್ಚರ್ ಚೆನ್ನಾಗಿದ್ದಿಲ್ಲ, ಆದರೆ ಡರೆಕ್ಷನ್ ಮಸ್ತ್ ಇತ್ತು’ ಎಂದು ಹೇಳಿದ ನನ್ನ ಹೈಸ್ಕೂಲಿನ ಆ ಗೆಳೆಯ ಡಬ್ಬಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...