Homeಮುಖಪುಟ‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

- Advertisement -
- Advertisement -

ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯ ಮೂಲಕ ಗಮನ ಸೆಳೆದವರು ‘ಅಂಜಲಿ ಮೆನಾನ್‌’. ‘ಬೆಂಗಳೂರ್‌ ಡೇಸ್‌’, ‘ಕೂಡೆ’, ‘ಕೇರಳ ಕೆಫೆ’, ‘ಉಸ್ತಾದ್ ಹೋಟೆಲ್‌’ನಂತಹ ಸಿನಿಮಾಗಳ ರೈಟರ್‌ ಆಗಿರುವ ಅಂಜಲಿಯವರು, ಎಲೈಟ್ ವರ್ಗದ ಹಿನ್ನೆಲೆಯಲ್ಲಿ ಪಾತ್ರಗಳನ್ನು ಚಿತ್ರಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಪಾತ್ರಗಳು ಎಲೈಟ್ ಹಿನ್ನೆಲೆಯಲ್ಲಿದ್ದರೂ ಎಲ್ಲ ಮನುಷ್ಯರನ್ನು ಸ್ಪರ್ಶಿಸಬಲ್ಲ ವರ್ಗಾತೀತ ಅನುಭವವೊಂದನ್ನು ಅಂಜಲಿಯವರು ತಮ್ಮ ಕತೆಗಳೊಳಗೆ ತರುವ ಪ್ರಯತ್ನ ಮಾಡುವುದು ಗಮನಾರ್ಹ. ಅಂಥದ್ದೇ ಮತ್ತೊಂದು ಸಿನಿಮಾ ಕತೆಯನ್ನು ಬರೆದು, ಅವರೀಗ ನಿರ್ದೇಶಿಸಿದ್ದಾರೆ.

ಅಂಜಲಿ ಮೆನಾನ್‌ ನಿರ್ದೇಶನದ ಇತ್ತೀಚಿನ ಸಿನಿಮಾ ‘ವಂಡರ್‌ ವುಮೆನ್‌’ (ಇಂಗ್ಲಿಷ್‌) ‘ಸೋನಿಲೈವ್‌’ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ‘ವಂಡರ್‌ ವುಮೆನ್‌’ ತಾಯ್ತನ, ಗರ್ಭಿಣಿಯರ ಕಷ್ಟಸುಖದ ಸುತ್ತ ಸಾಗುತ್ತದೆ. ನವಿರಾದ ಸಂಭಾಷಣೆಯು ಹಿತವೆನಿಸುತ್ತದೆ ಹಾಗೂ ಕೆಲವು ಗಂಭೀರ ಚಿಂತನೆಗಳಿಗೆ ಅವಕಾಶ ನೀಡಿದೆ.

ಆರು ಮಂದಿ ತುಂಬು ಗರ್ಭಿಣಿಯರು ‘ಪ್ರಸವ ಪೂರ್ವ ತರಗತಿ’ಗೆ ಸೇರುತ್ತಾರೆ. ತಮ್ಮ ಮುಂದಿರುವ ಸವಾಲುಗಳನ್ನು ನಿವಾರಿಸಿಕೊಂಡು, ಪ್ರಸವ ವೇದನೆಯನ್ನು ಮೀರಿ ತಾಯ್ತನದ ನೆಮ್ಮದಿಯನ್ನು ಪಡೆಯುವುದು ಇಂತಹ ತರಗತಿ/ತರಬೇತಿಯ ಉದ್ದೇಶ. ಆರು ಮಂದಿ ಗರ್ಭಿಣಿಯರ ಹಿನ್ನೆಲೆಯೂ ವಿಭಿನ್ನ. ಅವರೆಂದರೆ- ಸಂಪ್ರದಾಯವಾದಿ ಹಿಂದೂ ಕುಟುಂಬದ ಮಹಿಳೆ, ಕ್ರಿಶ್ಚಿಯನ್‌ ಮಹಿಳೆ, ಪ್ರಸವ ಪೂರ್ವ ತರಬೇತಿ ನೀಡುವ ತಜ್ಞೆಯೊಂದಿಗೆ ಇರುವ ಕೆಲಸದಾಕೆ, ಲಿವಿಂಗ್ ಟುಗೆದರ್‌ ಮೂಲಕ ಜೀವನ ನಡೆಸುತ್ತಿರುವಾಕೆ, ಸಿಂಗಲ್‌ ಪೇರೆಂಟ್ (ಅಂದರೆ- ಪ್ರಸವ ಪೂರ್ವದಲ್ಲಿ ವಿಚ್ಛೇದನಾ ಪಡೆದಿರುವ ಮುಸ್ಲಿಂ ಮಹಿಳೆ), ಈಗಾಗಲೇ ಎರಡು ಸಲ ಗರ್ಭಪಾತವಾಗಿ ತಾಯ್ತನಕ್ಕಾಗಿ ಹಂಬಲಿಸುತ್ತಿರುವ ಮರಾಠಿ ಮೂಲದ ಮಹಿಳೆ.

Wonder Women OTT Release Date is OUT

ಪ್ರತಿ ಹೆಣ್ಣಿನ ಹಿಂದೆಯೂ ಇರುವ ಸುಖ- ದುಃಖದ ಅನಾವರಣ ಮಾಡುತ್ತಾ, ಒಬ್ಬೊರ ದುಃಖದಲ್ಲಿ ಇನ್ನೊಬ್ಬರು ಸಹಭಾಗಿಯಾಗಿ ಸಂತ್ವಾನ ಮೆರೆಯುತ್ತಾ ಸುಖ್ಯಾಂತ್ಯದಲ್ಲಿ ಕತೆ ಮುಗಿಯುತ್ತದೆ. ಗರ್ಭಿಣಿ ಮಹಿಳೆಯರು ಎದುರಿಸುವ ಸವಾಲು, ಭಯ, ಆತಂಕ, ತಾಯಿ ಮತ್ತು ಮಗುವಿನ ಪಾಲನೆಯಲ್ಲಿ ಗಂಡ ಹಾಗೂ ಕುಟುಂಬದ ಜವಾಬ್ದಾರಿ- ಇತ್ಯಾದಿಗಳ ವಿಷಯಗಳನ್ನು ಸೂಕ್ಷ್ಮವಾಗಿ ಕತೆ ಚರ್ಚಿಸುತ್ತದೆ.

ಶ್ರೇಣೀಕೃತ ಪುರುಷಾಧಿಪತ್ಯದ ಪ್ರಶ್ನೆಯನ್ನು ಗಂಭೀರವಾಗಿಯಲ್ಲದಿದ್ದರೂ ಖೋ ಖೋ ಆಟದಂತೆ ಸ್ಪರ್ಶಿಸಿ ಕಥೆ ಮುಂದೆ ಸಾಗುತ್ತದೆ. ಎಲ್ಲರ ಹಿಂದೆಯೂ ಕಷ್ಟಗಳಿವೆ ಎಂಬ ಸಿದ್ಧಸೂತ್ರವನ್ನು ಹೆಣೆದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮಾದರಿಯನ್ನು ಇಲ್ಲಿ ಕಾಣಬಹುದು. ತಾಯಿ ಮತ್ತು ಮಗುವಿನ ಪಾಲನೆಗಿರುವ ತೊಡರುಗಳನ್ನು ಪರಿಹರಿಸಿಕೊಳ್ಳುವತ್ತ ಕಥೆಯನ್ನು ಕೇಂದ್ರೀಕರಿಸಲಾಗಿದೆ.

ಮಲಯಾಳಂ, ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಕನ್ನಡ ಭಾಷಾ ಹಿನ್ನೆಲೆಯ ಇಲ್ಲಿನ ಪಾತ್ರಗಳು ಮುಖ್ಯವಾಗಿ ವ್ಯವಹಿಸುವುದು ‘ಇಂಗ್ಲಿಷ್‌’ ಮೂಲಕ. ಭಾವನೆಗಳ ಹಂಚಿಕೆಗೆ ಭಾಷೆ ಮುಖ್ಯವಲ್ಲ ಎಂಬ ಎಚ್ಚರಿಕೆಯನ್ನು ಇಂಗ್ಲಿಷ್ ಭಾರದಿರುವ ಮರಾಠಿ ಮಹಿಳೆಯ ಮೂಲಕ ಹೇಳಲು ಹೊರಟಿರುವುದನ್ನು ಗಮನಿಸಬಹುದು.

ಎಲೈಟ್‌ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಇಲ್ಲಿನ ಪಾತ್ರಗಳೊಳಗೆ, ಪ್ರಸವ ಪೂರ್ವ ತರಬೇತಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿಯನ್ನು ಒಳಗೊಳ್ಳುವ ಮೂಲಕ- ವರ್ಗ ಪ್ರಣೀತ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆದರೆ ಇದು ಸಾಂಕೇತಿಕವೆನಿಸುತ್ತದೆಯೇ ಹೊರತು, ಇಂತಹ ತರಬೇತಿಗಳೆಲ್ಲ ಎಲೈಟ್‌ ವರ್ಗವನ್ನೇ ಪ್ರತಿನಿಧಿಸುತ್ತವೆ ಎಂಬುದು ವಾಸ್ತವ. ಪ್ರಸವ ಪೂರ್ವದಲ್ಲಿ ಈ ರೀತಿಯ ಮುಂಜಾಗ್ರತೆ ಎಲ್ಲ ಹಿನ್ನೆಲೆಯ ಮಹಿಳೆಯರಿಗೆ ಅಗತ್ಯ ಎಂಬುದನ್ನು ತಳ್ಳಿಹಾಕಲಾಗದು.

ಸರ್‌ ನೇಮ್‌ನಿಂದ ಗುರುತಿಸಿಕೊಳ್ಳಬೇಕು ಎಂಬ ಸಂಪ್ರದಾಯವಾದಿ ಕುಟುಂಬದ ಹಿನ್ನೆಲೆಯ ಅತ್ತೆಯ ಪಾತ್ರವೊಂದನ್ನು ಇಲ್ಲಿ ಬರುತ್ತದೆ. ತನ್ನ ಸೊಸೆ ಗಂಡನ ಹೆಸರಿನಿಂದ ಗುರುತಿಸಿಕೊಳ್ಳದಿದ್ದರೆ ಮಹಾಪರಾಧ ಎಂಬಂತೆ ಈ ಪಾತ್ರ ವರ್ತಿಸುತ್ತದೆ. ಹೆಣ್ಣಿನ ಭಾವನೆಗಳು ಮತ್ತು ತಾಯ್ತನದ ಕುರಿತು ಗಂಡಿನಲ್ಲಿ ತಿಳಿವಳಿಕೆಯ ಕೊರತೆ ಇದೆ ಎಂಬುದನ್ನು ಮನಗಾಣಿಸುವ ಪ್ರಯತ್ನವಾಗಿ ಸಂಪ್ರದಾಯವಾದಿ ಕುಟುಂಬದ ಮಹಿಳೆಯ ಗಂಡನನ್ನು ಪುರುಷಾಧಿಪತ್ಯ ವ್ಯವಸ್ಥೆಯ ಪ್ರತಿನಿಧಿಯಂತೆ ಚಿತ್ರಿಸಲಾಗಿದೆ. ಉಳಿದೆಲ್ಲ ಗಂಡಸರ ಪಾತ್ರಗಳಿಗಿಂತ ಪ್ರತಿಗಾಮಿಯಂತೆ ತೋರುವ ಈ ಪಾತ್ರವು ಮನಃಪರಿವರ್ತನೆಯಾಗಲು ಹೆಚ್ಚು ಸಮಯ ಬೇಡುವುದಿಲ್ಲ. ಸಂಪ್ರದಾಯನಿಷ್ಠ ಅತ್ತೆಯ ಪಾತ್ರವೂ ಹೀಗೆಯೇ ಬದಲಾಗುತ್ತದೆ. ಪಾತ್ರಗಳ ಮಾನಸಿಕತೆಯ ಬದಲಾವಣೆಯಲ್ಲಿ ಧಾವಂತ ಎದ್ದು ಕಾಣುತ್ತದೆ.

ಇದನ್ನೂ ಓದಿರಿ: ಮುಂದಿನ ಸಲ ಗಂಭೀರವಾಗಿ ಸಂಶೋಧನೆ ಮಾಡಿ: ಅಗ್ನಿಹೋತ್ರಿಗೆ ಅನುರಾಗ್ ಕಶ್ಯಪ್‌ ಸಲಹೆ

ವಿಚ್ಛೇದನಾ ಪಡೆಯುತ್ತಿರುವ ಗರ್ಭಿಣಿಯನ್ನು ‘ಮುಸ್ಲಿಂ’ ಸಮುದಾಯದ ಭಾಗವಾಗಿ ಚಿತ್ರಿಸಿರುವುದು ಕತೆಯ ಆಶಯಕ್ಕೆ ಚ್ಯುತಿ ಬರುವಂತಿದೆ. ಪುರುಷಾಧಿಪತ್ಯ ಹಾಗೂ ಹೆಣ್ಣನ್ನು ಭೋಗಿಸುವವರು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಪಿತೂರಿ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಕಟಕಟೆಯಲ್ಲಿ ನಿಲ್ಲುಸುತ್ತದೆ. “ಹೆಣ್ಣನ್ನು ಭೋಗಿಸಿ, ವಂಚಿಸುವ ಧರ್ಮಾಂಧರಿವರು” ಎಂಬಂತೆ ಕತೆಗಳನ್ನು ಹಬ್ಬಿಸಿ, ದ್ವೇಷವನ್ನು ಹರಡುವ ಮೂಲಭೂತವಾದಿ ವ್ಯವಸ್ಥೆಯನ್ನು ಇಂದು ಕಾಣುತ್ತಿದ್ದೇವೆ. ಹೀಗಾಗಿ ಸಿಂಗಲ್ ಪೇರೆಂಟ್‌ ಗರ್ಭಿಣಿಯನ್ನು ಮುಸ್ಲಿಂ ಎಂದು ಬಿಂಬಿಸುವುದು- ಸದ್ಯದ ರಾಜಕೀಯ ಪಿತೂರಿಗೆ ಇಂಬು ನೀಡಿದಂತಾಗುತ್ತದೆ. ಹೀಗಾಗಿ ಈ ಪಾತ್ರದ ಸುತ್ತ ಬಹುಸಂಖ್ಯಾತ ರಾಜಕೀಯ ಪ್ರಣೀತ ಪ್ರಶ್ನೆ ಏಳದಂತೆ ಅಂಜಲಿಯವರು ಎಚ್ಚರ ವಹಿಸಬೇಕಿತ್ತು. ಸಿಂಗಲ್‌ ಪೇರೆಂಟ್‌‌- ಬಹುಸಂಖ್ಯಾತ ಹಿನ್ನೆಲೆಯವಳೆನ್ನುವುದಕ್ಕಿಂತ ಅಲ್ಪಸಂಖ್ಯಾತಳಾಗಿ ಚಿತ್ರಿತವಾದರೆ ಅಲ್ಲಿ ಹುಟ್ಟುವ ರಾಜಕೀಯ ತರಂಗಳು ಬೇರೆಬೇರೆಯಾಗುತ್ತವೆ. ಈ ಚರ್ಚೆಯು ಎರಡಗಲಿನ ಕತ್ತಿಯೆಂಬುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.

ನವಿರಾದ ಹಾಗೂ ಸುಖ್ಯಾಂತದಲ್ಲಿ ಮುಗಿಯುವ ‘ವಂಡರ್‌ ವುಮೆನ್‌’- ತಾಯ್ತನದ ಸುತ್ತ ಮೂಡಿಬಂದಿರುವ ವಿಭಿನ್ನ ಪ್ರಯತ್ನ. ತಾರಾಗಣದಲ್ಲಿ ನದಿಯಾ ಮೊಯ್ದು, ನಿತ್ಯಾ ಮೆನೆನ್, ಪಾರ್ವತಿ ತಿರುವೋತು, ಪದ್ಮಪ್ರಿಯಾ, ಸಯನೋರಾ ಫಿಲಿಪ್, ಅರ್ಚನಾ ಪದ್ಮಿನಿ ಮತ್ತು ಅಮೃತಾ ಸುಭಾಷ್ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಾಲ್ಕೈದು ಲೊಕೇಷನ್‌ಗಳಲ್ಲಿಯೇ ಕತೆ ಮುಗಿದು ಹೋದರೂ ಮನೇಶ್ ಮಾಧವನ್ ಅವರ ಛಾಯಾಗ್ರಹಣ ಮೆಚ್ಚುವಂತಿದೆ. ಗೋವಿಂದ ವಸಂತ ಅವರ ಸಂಗೀತ ಭಾವುಕ ದೃಶ್ಯಗಳನ್ನು ತೀವ್ರವಾಗಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...