Homeಮುಖಪುಟಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

- Advertisement -
- Advertisement -

ಸುಮ್ಮನೆ ಊಹಿಸಿಕೊಳ್ಳಿ, ಕೆಲವು ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗುತ್ತಾರೆ, ಅಲ್ಲಿ ಹೋದ ನಂತರ ಅವರಿಗೆ ಗೊತ್ತಾಗುವುದೇನೆಂದರೆ, ನಿನ್ನೆಯ ತನಕ ಐದನೆಯ ತರಗತಿಯಲ್ಲಿದ್ದ ಅವರು ಈಗ ನಾಲ್ಕನೆಯ ತರಗತಿಗೆ ಸೇರಿಕೊಳ್ಳಲಿದ್ದಾರೆ, ನಾಲ್ಕನೆಯ ತರಗತಿಯವರು ಮೂರನೆಯ ತರಗತಿಗೆ; ಯಾವ ಪುಸ್ತಕವನ್ನು ಅವರು ಮೊದಲು ಓದಬಹುದಾಗಿತ್ತೋ, ಈಗ ತೊದಲುತ್ತಿದ್ದಾರೆ, ಯಾರಿಗೆ ಗಣಿತ ಬರುತ್ತಿತ್ತೋ ಈಗ ಅದನ್ನು ಮರೆತಿದ್ದಾರೆ. ಅಂದರೆ ರಾತ್ರೋರಾತ್ರಿ ಇಡೀ ಶಾಲೆ ಒಂದು ಹಂತ ಕೆಳಗೆ ಕುಸಿದುಬಿಟ್ಟಿದೆ. ಯೋಚಿಸಿ, ಆಗ ಆ ಶಾಲೆ, ಆ ಮಕ್ಕಳು, ಆ ಹಳ್ಳಿಯ ಮೇಲೆ ಯಾವ ಪರಿಣಾಮ ಬೀರಬಹುದು. ಇದು ಸೈನ್ಸ್ ಫಿಕ್ಷನ್‌ನ ಒಂದು ಹೊಸ ಕಲ್ಪನೆಯಲ್ಲ. ಇದು ವಾಸ್ತವ. ಕೇವಲ ಒಂದು ಶಾಲೆಯದ್ದಲ್ಲ, ಇಡೀ ದೇಶದ ವಾಸ್ತವ. ಯಾವುದೇ ದೂರದ ದೇಶದ್ದೂ ಅಲ್ಲ, ನಮ್ಮ ಭಾರತದ ಕಥೆಯೇ ಇದು. ಯಾವುದೋ ಒಂದು ಭೂತಕಾಲದ ಕಥೆಯೂ ಅಲ್ಲ, ಕಳೆದ 4 ವರ್ಷಗಳ ದುಃಖಭರಿತ ಕಥೆ ಇದು.

ಕಳೆದ ವರ್ಷ ಪ್ರಥಮ್ ಎಂಬ ಸರಕಾರೇತರ ಸಂಸ್ಥೆಯು ’ಅಸರ್’ ಎಂಬ ಹೆಸರಿನ ಸಮೀಕ್ಷೆಯ 2022ರ ವರದಿ ಬಿಡುಗಡೆ ಮಾಡಿತು, ಈ ವರದಿ ಈ ಧಾರುಣ ಕಥೆ ಹೇಳುತ್ತದೆ. ಅಸರ್ ಎಂದರೆ ’ಎನುವಲ್ ಸ್ಟೇಟಸ್ ಆಫ್ ಎಜ್ಯುಕೇಷನ್ ರಿಪೋರ್ಟ್’ (Annul status of education report). ಇದು ಕಳೆದ 17 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅರ್ಹತೆಯನ್ನು ಅಳೆಯುವ ಒಂದು ಪ್ರಾಮಾಣಿಕ ಅಸ್ತ್ರವಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯಲ್ಲಿ, ಶಾಲೆಯಲ್ಲಿ ಮಕ್ಕಳ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ ಅವರ ಮನೆಗೆ ಹೋಗಿ ಭಾಷೆ ಮತ್ತು ಗಣಿತದ ಸಾಧಾರಣ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರದ್ದೇ ಆದ ಪಠ್ಯಪುಸ್ತಕದ ಒಂದು ಸಾಧಾರಣ ಪ್ಯಾರಾವನ್ನು ಓದಿಸಲಾಗುತ್ತದೆ. ಗಣಿತದಲ್ಲಿ ಕೂಡುವ ಕಳೆಯುವ ಅತ್ಯಂತ ಸಾಧಾರಣ ಲೆಕ್ಕ ಬಿಡಿಸಲು ಹೇಳಲಾಗುತ್ತದೆ.

ಈ ವರ್ಷ ಅಸರ್‌ನ ವರದಿಯನ್ನು ನಾನು ಕಾತುರದಿಂದ ಕಾಯುತ್ತಿದ್ದೆ. 2005ರಿಂದ ಪ್ರತಿ ವರ್ಷ ಹಾಗೂ 2014ರ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ವರದಿ ಹೊರಬರುತ್ತಿದೆ. ಆದರೆ 2018ರ ನಂತರ ಈ ಪ್ರಕ್ರಿಯೆ ನಿಂತಿತ್ತು. ಕೋವಿಡ್ ಮಹಾಮಾರಿಯ ಕಾರಣದಿಂದ ಶಾಲೆಗಳೂ ಮುಚ್ಚಿದ್ದವು ಹಾಗೂ ಅಸರ್ ಸಮೀಕ್ಷೆಯನ್ನೂ ಮಾಡಲಾಗಲಿಲ್ಲ. ಹಾಗಾಗಿ 2022ರ ವರದಿ ಕಳೆದ 4 ವರ್ಷಗಳ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒದಗಿದ ಅಡೆತಡೆಯ ದಾಖಲೆಯಾಗಿ ಹೊರಹೊಮ್ಮಿದೆ. ದೇಶದ 606 ಜಿಲ್ಲೆಗಳಲ್ಲಿ 19 ಸಾವಿರ ಹಳ್ಳಿಗಳ 7 ಲಕ್ಷ ಮಕ್ಕಳ ಸಮೀಕ್ಷೆಯ ಆಧಾರಿತ ಈ ವರದಿ ಮೊದಲ ಬಾರಿ ಕೋವಿಡ್ ಮಹಾಮಾರಿ ಕಾರಣದಿಂದ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣದ ಮೇಲೆ ಆದ ಪರಿಣಾಮಗಳನ್ನು ದಾಖಲಿಸುತ್ತದೆ.

ಸುದ್ದಿ ಒಳ್ಳೆಯದಿಲ್ಲ. ಅಸರ್ 2018ರ ವರದಿಯು 5ನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೇವಲ 51% ಮಕ್ಕಳು 2ನೆಯ ತರಗತಿಯ ಸಾಧಾರಣ ಪುಸ್ತಕದ ಸರಳವಾದ ಪ್ಯಾರಾ ಓದಬಲ್ಲರು ಎಂದು ಹೇಳಿತ್ತು.

ಇದನ್ನೂ ಓದಿ: ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ | ಶಿಕ್ಷಣ ಇಲಾಖೆಯ ಕ್ರಮಕ್ಕೆ ತಜ್ಞರ ವಿರೋಧ

ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿತ್ತು. ಈಗ 2022ರ ವರದಿ ಹೇಳುವುದೇನೆಂದರೆ, ಈ ಅಂಕಿ ಇನ್ನಷ್ಟು ಕೆಳಗಿಳಿದು ಆ ಅನುಪಾದ 43%ಕ್ಕೆ ಕುಸಿದಿದೆ. ಅಂದರೆ ಪ್ರಾಥಮಿಕ ಶಾಲೆ ಪಾಸ್ ಮಾಡುವ 10 ಮಕ್ಕಳಲ್ಲಿ 6 ಮಕ್ಕಳಿಗೆ ತಮ್ಮ ಮೂರು ವರ್ಗ ಕೆಳಗಿನ ಪುಸ್ತಕದ ಸರಳವಾದ ಒಂದು ಪ್ಯಾರಾ ಕೂಡ ಓದಲು ಆಗುವುದಿಲ್ಲ. ಅಸರ್‌ನದ್ದೇ ಹಳೆಯ ಸಮೀಕ್ಷೆಯೊಂದಿಗೆ ಹೋಲಿಸಿದಾಗ ತಿಳಿಯುವುದೇನೆಂದರೆ ಒಂದೇ ಏಟಿನಲ್ಲಿ ನಾವು 2012ರ ಸ್ತರಕ್ಕೆ ಮರಳಿದ್ದೇವೆ. ಒಂದು ತರಗತಿಯಲ್ಲ, ಒಂದು ಶಾಲೆಯಲ್ಲ, ಒಂದು ಹಳ್ಳಿಯಲ್ಲ, ಇಡೀ ದೇಶದ ಶಿಕ್ಷಣದ ಒಂದು ಹಂತ ಕೆಳಗಿಳಿದುಬಿಟ್ಟಿದೆ.

ಈ ಕಥೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಪುನರುಚ್ಚರಿಸಲಾಗಿದೆ. 2ನೆಯ ತರಗತಿಯ ಪುಸ್ತಕ ಓದಲು ಸಾಧ್ಯವಾಗುವ 3ನೆಯ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ 27% ಇತ್ತು; ಈಗ 2022ರಲ್ಲಿ ಕುಸಿದು 21%ಗೆ ನಿಂತಿದೆ. 3ನೆಯ ತರಗತಿಯ ಮಕ್ಕಳು ಕಳೆಯುವ ಪ್ರಶ್ನೆಗಳನ್ನು ಉತ್ತರಿಸಬಲ್ಲ ಹಾಗೂ 5ನೆಯ ತರಗತಿಯ ಮಕ್ಕಳು ಭಾಗಾಕಾರ ಮಾಡಬಲ್ಲವರ ಸಂಖ್ಯೆ 28%ರಿಂದ ಇಳಿದು ಈಗ 26%ಕ್ಕೆ ಬಂದಿದೆ. ಶಿಕ್ಷಣದಲ್ಲಿ ಈ ಕುಸಿತ ಕೇವಲ ಬಡರಾಜ್ಯಗಳಲ್ಲಿ ಕಾಣಿಸಿಲ್ಲ. ಈ ಹೊಡೆತ ಶಿಕ್ಷಣದ ವ್ಯವಸ್ಥೆ ಉತ್ತಮವಾಗಿರುವ ಕೇರಳ, ಹಿಮಾಚಲ ಹಾಗೂ ಹರಿಯಾಣದಂತಹ ರಾಜ್ಯಗಳಲ್ಲೂ ಕಂಡುಬಂದಿದೆ. ಈ ಕುಸಿತ ಎಲ್ಲಾ ರೀತಿಯ ಮಕ್ಕಳಲ್ಲಿ ದಾಖಲಾಗಿದೆ, ಅವರು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾಗಲಿ, ಖಾಸಗಿಯಲ್ಲಿ ಓದುವವರಾಗಿರಲಿ. ಅಂದರೆ, ಕೋವಿಡ್ ಮಹಾಮಾರಿಯ ಸಮಯದಲ್ಲಿ ನಮ್ಮ ಗ್ರಾಮೀಣ ಮಕ್ಕಳ ಶಿಕ್ಷಣ ವ್ಯವಸ್ಥೆ ಧ್ವಂಸಗೊಂಡಿದೆ.

ಆದರೆ ಇದರರ್ಥ ಶಿಕ್ಷಣದಲ್ಲಿ ಪೋಷಕರ ಅಥವಾ ಮಕ್ಕಳ ಆಸಕ್ತಿ ಕುಂದಿದೆ ಅಂತಲ್ಲ. ಇದೇ ಸಮೀಕ್ಷೆ ಈ ವಾಸ್ತವವನ್ನೂ ದಾಖಲಿಸುತ್ತದೆ: ಈ ನಾಲ್ಕು ವರ್ಷಗಳಲ್ಲಿ ಶಾಲೆಗೆ ದಾಖಲಾಗುವ ಗ್ರಾಮೀಣ ಮಕ್ಕಳ ಸಂಖ್ಯೆ 97.2%ರಿಂದ 98.4%ಗೆ ಏರಿದೆ. ಹೆಣ್ಣುಮಕ್ಕಳ ದಾಖಲಾತಿಯೂ ಮೊದಲಿಗಿಂತ ಹೆಚ್ಚಿದೆ. ಶಾಲೆಗಳಲ್ಲಿ ಮಾತ್ರವಲ್ಲ ಅಂಗನವಾಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆಯೂ 57% ಇಂದ ಜಿಗಿತ ಕಂಡು ಈಗ 67% ಆಗಿದೆ. ಮೂರು ವರ್ಷ ವಯಸ್ಸಿನ 78% ಮಕ್ಕಳು ಒಂದಲ್ಲ ಒಂದು ನರ್ಸರಿ ಶಾಲೆಗೆ ಹೋಗುತ್ತಿದ್ದಾರೆ. ಅಂದರೆ ಶಿಕ್ಷಣದ ಹಸಿವು ನಿರಂತರವಾಗಿ ಹೆಚ್ಚುತ್ತಿದೆ.

ಆದರೆ ಶಿಕ್ಷಣದ ಅವಕಾಶದಲ್ಲಿ ಕುಸಿತ ಕಂಡುಬರುತ್ತಿದೆ. ಈ ಸಮೀಕ್ಷೆಯು ಮೊದಲ ಬಾರಿಗೆ ಒಂದು ಐತಿಹಾಸಿಕ ಪ್ರಕ್ರಿಯೆಯು ತಲೆಕೆಳಗಾಗಿದ್ದನ್ನು ದಾಖಲಿಸುತ್ತದೆ. ಬಹಳಷ್ಟು ಸಮಯದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕುಸಿಯುತ್ತಿತ್ತು. ಅದಕ್ಕೆ ಕಾರಣ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಸಾಧ್ಯತೆ ಒಂದು. ಆದರೆ ಮೊದಲ ಬಾರಿ 2018ರಿಂದ 2022ರ ನಡುವೆ ಖಾಸಗಿ ಶಾಲೆಗಳಿಗೆ ಹೋಗುವ ಗ್ರಾಮೀಣ ಮಕ್ಕಳ ಸಂಖ್ಯೆಯು 35%ರಿಂದ ಇಳಿದು 27% ಆಗಿದೆ. ಹೀಗೆ ಆಗಿದ್ದು ಸರಕಾರಿ ಶಾಲೆಗಳ ಗುಣಮಟ್ಟ ಉತ್ತಮಗೊಂಡ ಕಾರಣಕ್ಕೇನೂ ಅಲ್ಲ. ಅದರ ಬದಲಿಗೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂದೆತಾಯಿಯ ಆರ್ಥಿಕ ವ್ಯವಸ್ಥೆಯಲ್ಲಿ ಕುಸಿತ ಕಂಡಿದ್ದರಿಂದ. ಮಹಾಮಾರಿಯ ಕಾರಣದಿಂದ ಶಾಲೆಗಳು ಮುಚ್ಚಿಕೊಂಡವು ಹಾಗೂ ಹೆಚ್ಚಿನ ಜನರ ಗಳಿಕೆಯ ಮೇಲೆ ಪೆಟ್ಟುಬಿತ್ತು; ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಅವರನ್ನು ಸರಕಾರಿ ಶಾಲೆಗಳಿಗೆ ಸೇರಿಸಿದರು.

ಗ್ರಾಮೀಣ ಭಾರತದಲ್ಲಿ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಹಸಿವು, ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕ, ಆದರೆ ಸಾಮಾನ್ಯ ಜನರಿಗೆ ಅಲಭ್ಯವಾಗುತ್ತಿರುವ ಸಂಪನ್ಮೂಲಗಳು ಹಾಗೂ ಸರಕಾರಿ ಶಾಲೆಗಳ ವ್ಯವಸ್ಥೆ ನಿರಂತರವಾಗಿ ಹಿನ್ನೆಡೆ ಕಾಣುತ್ತಿರುವ ಈ ಸಮಯದಲ್ಲಿ, ಶಿಕ್ಷಣದ ಗುಣಮಟ್ಟದಲ್ಲಿ ದಾಖಲಾದ ಕುಸಿತವು ಒಂದು ದೊಡ್ಡ ರಾಷ್ಟ್ರೀಯ ವಿಪತ್ತಿನ ಕಡೆ ಕೈತೋರಿಸುತ್ತದೆ. ಮುಂದಿನ 5 ವರ್ಷಗಳ ತನಕ ದೇಶದ ಶಾಲಾ ಶಿಕ್ಷಣ ಏಕಮೇವ ಮಿಷನ್ ಆಗಿರಬೇಕಾಗಿದೆ. ಅದು ಈ ಹೊಡೆತದ ಪರಿಣಾಮವನ್ನು ತಗ್ಗಿಸಿ, ಗ್ರಾಮೀಣ ಮತ್ತು ನಗರದ ಬಡವರ ಒಂದು ಇಡೀ ತಲೆಮಾರಿಗೆ ಈ ನಷ್ಟದಿಂದ ಕಾಪಾಡಬೇಕಿದೆ. ಇಲ್ಲವಾದರೆ ಇದರ ಪೆಟ್ಟು ಒಂದು ಶಾಶ್ವತ ದುರಂತವಾಗಿ ಬದಲಾಗಬಹುದು.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dont consider the report or study of Pratham organization. This is a fake study.
    This is only coocked data to fetch money from abroad and from governments.

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...