Homeಮುಖಪುಟಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಎನ್‌ಡಿಟಿವಿ ಚಾನೆಲ್‌ಗೆ ರಾಜೀನಾಮೆ

ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಎನ್‌ಡಿಟಿವಿ ಚಾನೆಲ್‌ಗೆ ರಾಜೀನಾಮೆ

- Advertisement -
- Advertisement -

ಅದಾನಿ ಗ್ರೂಪ್‌ ದೇಶದ ಖ್ಯಾತ ಮಾಧ್ಯಮ ಸಂಸ್ಥೆಯಾದ ಎನ್‌ಡಿಟಿವಿಯನ್ನು ತನ್ನ ಸ್ವಾಧೀನ ಮಾಡಿದ ನಂತರ ಅಲ್ಲಿನ ಹಿರಿಯ ಪತ್ರಕರ್ತರು ಮತ್ತು ಅಧಿಕಾರಿಗಳು ಸಂಸ್ಥೆಗೆ ರಾಜೀನಾಮೆ ನೀಡಿದ್ದರು. ಇದಾಗಿ ಕೆಲವೇ ಸಮಯದಲ್ಲಿ ಸಂಸ್ಥೆಯು ಮತ್ತೊಬ್ಬ ಹಿರಿಯ ಪತ್ರಕರ್ತನನ್ನು ಕಳೆದುಕೊಂಡಿದೆ. ಎನ್‌ಡಿಟಿವಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಚಾನೆಲ್‌ಗೆ ರಾಜೀನಾಮೆ ನೀಡಿದ್ದಾಗಿ ಶನಿವಾರ ಘೋಷಿಸಿದ್ದಾರೆ.

ಎನ್‌ಡಿಟಿವಿ ಚಾನೆಲ್‌ನ ಗ್ರೂಪ್ ಎಡಿಟರ್ ಆಗಿದ್ದ ಅವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. “ಎಲ್ಲರಿಗೂ ನಮಸ್ಕಾರ. ಎನ್‌ಡಿಟಿವಿಯಲ್ಲಿನ ಅದ್ಭುತ ಮತ್ತು ಸುಮಾರು ಮೂರು ದಶಕಗಳ ಸುದೀರ್ಘ ಓಟ ಇಂದು ಕೊನೆಗೊಳ್ಳುತ್ತದೆ. ರಾಜೀನಾಮೆ ನಿರ್ಧಾರ ಸುಲಭವಲ್ಲ, ಆದರೆ……it is what it is. ಮತ್ತಷ್ಟು ನಂತರ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶ್ರೀನಿವಾಸನ್‌ ಜೈನ್ ಅವರು 1995 ರಿಂದ ಎನ್‌ಡಿಟಿವಿ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅವರು ಎನ್‌ಡಿಟಿವಿ24×7 ನಲ್ಲಿ ಪ್ರತಿವಾರ ಪ್ರಸಾರವಾಗುವ ‘ಟ್ರೂತ್ ವರ್ಸಸ್ ಹೈಪ್’ ಎಂಬ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು.

2003 ರಿಂದ 2008ರ ವರೆಗೆ ಎನ್‌ಡಿಟಿವಿ ನೆಟ್‌ವರ್ಕ್‌ನ ಮುಂಬೈ ಬ್ಯೂರೋ ಮುಖ್ಯಸ್ಥರಾಗಿದ್ದರು. ಇದರ ನಂತರ ಅವರು NDTV ಯ ವ್ಯವಹಾರ ಚಾನೆಲ್ ಆದ ಪ್ರಾಫಿಟ್‌ನ ವ್ಯವಸ್ಥಾಪಕ ಸಂಪಾದಕರಾಗಿ ಕೂಡಾ ಕೆಲಸ ಮಾಡಿದ್ದರು. ಇಷ್ಟೆ ಅಲ್ಲದೆ ‘ಬಿಸಿನೆಸ್ ಸ್ಟ್ಯಾಂಡರ್ಡ್‌’ ಪತ್ರಿಕೆಗೆ ಅವರು ಅಂಕಣಗಳನ್ನು ಸಹ ಬರೆದಿದ್ದಾರೆ. ತಮ್ಮ ಮುಂದಿನ ವೃತ್ತಿಜೀವನದ ನಡೆಯ ಬಗ್ಗೆ ಅವರು ಪ್ರಕಟಿಸಿಲ್ಲ.

2022 ರ ನವೆಂಬರ್‌ನಲ್ಲಿ NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ರವೀಶ್ ಕುಮಾರ್ ಅವರು ರಾಜೀನಾಮೆ ನೀಡಿದ್ದರು. ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಎನ್‌ಡಿಟಿವಿಯಲ್ಲಿನ ತಮ್ಮ ಹೆಚ್ಚಿನ ಷೇರುಗಳನ್ನು ಗೌತಮ್ ಅದಾನಿ ಅವರ ಎಎಂಜಿ ಮೀಡಿಯಾ ನೆಟ್‌ವರ್ಕ್‌ಗೆ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಎನ್‌ಡಿಟಿವಿ ಗ್ರೂಪ್‌‌ ಅಧ್ಯಕ್ಷೆ ಸುಪರ್ಣಾ ಸಿಂಗ್‌ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಕೂಡಾ ರಾಜೀನಾಮೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...