Homeಮುಖಪುಟಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

- Advertisement -
- Advertisement -

ಸುಮ್ಮನೆ ಊಹಿಸಿಕೊಳ್ಳಿ, ಕೆಲವು ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗುತ್ತಾರೆ, ಅಲ್ಲಿ ಹೋದ ನಂತರ ಅವರಿಗೆ ಗೊತ್ತಾಗುವುದೇನೆಂದರೆ, ನಿನ್ನೆಯ ತನಕ ಐದನೆಯ ತರಗತಿಯಲ್ಲಿದ್ದ ಅವರು ಈಗ ನಾಲ್ಕನೆಯ ತರಗತಿಗೆ ಸೇರಿಕೊಳ್ಳಲಿದ್ದಾರೆ, ನಾಲ್ಕನೆಯ ತರಗತಿಯವರು ಮೂರನೆಯ ತರಗತಿಗೆ; ಯಾವ ಪುಸ್ತಕವನ್ನು ಅವರು ಮೊದಲು ಓದಬಹುದಾಗಿತ್ತೋ, ಈಗ ತೊದಲುತ್ತಿದ್ದಾರೆ, ಯಾರಿಗೆ ಗಣಿತ ಬರುತ್ತಿತ್ತೋ ಈಗ ಅದನ್ನು ಮರೆತಿದ್ದಾರೆ. ಅಂದರೆ ರಾತ್ರೋರಾತ್ರಿ ಇಡೀ ಶಾಲೆ ಒಂದು ಹಂತ ಕೆಳಗೆ ಕುಸಿದುಬಿಟ್ಟಿದೆ. ಯೋಚಿಸಿ, ಆಗ ಆ ಶಾಲೆ, ಆ ಮಕ್ಕಳು, ಆ ಹಳ್ಳಿಯ ಮೇಲೆ ಯಾವ ಪರಿಣಾಮ ಬೀರಬಹುದು. ಇದು ಸೈನ್ಸ್ ಫಿಕ್ಷನ್‌ನ ಒಂದು ಹೊಸ ಕಲ್ಪನೆಯಲ್ಲ. ಇದು ವಾಸ್ತವ. ಕೇವಲ ಒಂದು ಶಾಲೆಯದ್ದಲ್ಲ, ಇಡೀ ದೇಶದ ವಾಸ್ತವ. ಯಾವುದೇ ದೂರದ ದೇಶದ್ದೂ ಅಲ್ಲ, ನಮ್ಮ ಭಾರತದ ಕಥೆಯೇ ಇದು. ಯಾವುದೋ ಒಂದು ಭೂತಕಾಲದ ಕಥೆಯೂ ಅಲ್ಲ, ಕಳೆದ 4 ವರ್ಷಗಳ ದುಃಖಭರಿತ ಕಥೆ ಇದು.

ಕಳೆದ ವರ್ಷ ಪ್ರಥಮ್ ಎಂಬ ಸರಕಾರೇತರ ಸಂಸ್ಥೆಯು ’ಅಸರ್’ ಎಂಬ ಹೆಸರಿನ ಸಮೀಕ್ಷೆಯ 2022ರ ವರದಿ ಬಿಡುಗಡೆ ಮಾಡಿತು, ಈ ವರದಿ ಈ ಧಾರುಣ ಕಥೆ ಹೇಳುತ್ತದೆ. ಅಸರ್ ಎಂದರೆ ’ಎನುವಲ್ ಸ್ಟೇಟಸ್ ಆಫ್ ಎಜ್ಯುಕೇಷನ್ ರಿಪೋರ್ಟ್’ (Annul status of education report). ಇದು ಕಳೆದ 17 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅರ್ಹತೆಯನ್ನು ಅಳೆಯುವ ಒಂದು ಪ್ರಾಮಾಣಿಕ ಅಸ್ತ್ರವಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯಲ್ಲಿ, ಶಾಲೆಯಲ್ಲಿ ಮಕ್ಕಳ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ ಅವರ ಮನೆಗೆ ಹೋಗಿ ಭಾಷೆ ಮತ್ತು ಗಣಿತದ ಸಾಧಾರಣ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರದ್ದೇ ಆದ ಪಠ್ಯಪುಸ್ತಕದ ಒಂದು ಸಾಧಾರಣ ಪ್ಯಾರಾವನ್ನು ಓದಿಸಲಾಗುತ್ತದೆ. ಗಣಿತದಲ್ಲಿ ಕೂಡುವ ಕಳೆಯುವ ಅತ್ಯಂತ ಸಾಧಾರಣ ಲೆಕ್ಕ ಬಿಡಿಸಲು ಹೇಳಲಾಗುತ್ತದೆ.

ಈ ವರ್ಷ ಅಸರ್‌ನ ವರದಿಯನ್ನು ನಾನು ಕಾತುರದಿಂದ ಕಾಯುತ್ತಿದ್ದೆ. 2005ರಿಂದ ಪ್ರತಿ ವರ್ಷ ಹಾಗೂ 2014ರ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ವರದಿ ಹೊರಬರುತ್ತಿದೆ. ಆದರೆ 2018ರ ನಂತರ ಈ ಪ್ರಕ್ರಿಯೆ ನಿಂತಿತ್ತು. ಕೋವಿಡ್ ಮಹಾಮಾರಿಯ ಕಾರಣದಿಂದ ಶಾಲೆಗಳೂ ಮುಚ್ಚಿದ್ದವು ಹಾಗೂ ಅಸರ್ ಸಮೀಕ್ಷೆಯನ್ನೂ ಮಾಡಲಾಗಲಿಲ್ಲ. ಹಾಗಾಗಿ 2022ರ ವರದಿ ಕಳೆದ 4 ವರ್ಷಗಳ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒದಗಿದ ಅಡೆತಡೆಯ ದಾಖಲೆಯಾಗಿ ಹೊರಹೊಮ್ಮಿದೆ. ದೇಶದ 606 ಜಿಲ್ಲೆಗಳಲ್ಲಿ 19 ಸಾವಿರ ಹಳ್ಳಿಗಳ 7 ಲಕ್ಷ ಮಕ್ಕಳ ಸಮೀಕ್ಷೆಯ ಆಧಾರಿತ ಈ ವರದಿ ಮೊದಲ ಬಾರಿ ಕೋವಿಡ್ ಮಹಾಮಾರಿ ಕಾರಣದಿಂದ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣದ ಮೇಲೆ ಆದ ಪರಿಣಾಮಗಳನ್ನು ದಾಖಲಿಸುತ್ತದೆ.

ಸುದ್ದಿ ಒಳ್ಳೆಯದಿಲ್ಲ. ಅಸರ್ 2018ರ ವರದಿಯು 5ನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೇವಲ 51% ಮಕ್ಕಳು 2ನೆಯ ತರಗತಿಯ ಸಾಧಾರಣ ಪುಸ್ತಕದ ಸರಳವಾದ ಪ್ಯಾರಾ ಓದಬಲ್ಲರು ಎಂದು ಹೇಳಿತ್ತು.

ಇದನ್ನೂ ಓದಿ: ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ | ಶಿಕ್ಷಣ ಇಲಾಖೆಯ ಕ್ರಮಕ್ಕೆ ತಜ್ಞರ ವಿರೋಧ

ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿತ್ತು. ಈಗ 2022ರ ವರದಿ ಹೇಳುವುದೇನೆಂದರೆ, ಈ ಅಂಕಿ ಇನ್ನಷ್ಟು ಕೆಳಗಿಳಿದು ಆ ಅನುಪಾದ 43%ಕ್ಕೆ ಕುಸಿದಿದೆ. ಅಂದರೆ ಪ್ರಾಥಮಿಕ ಶಾಲೆ ಪಾಸ್ ಮಾಡುವ 10 ಮಕ್ಕಳಲ್ಲಿ 6 ಮಕ್ಕಳಿಗೆ ತಮ್ಮ ಮೂರು ವರ್ಗ ಕೆಳಗಿನ ಪುಸ್ತಕದ ಸರಳವಾದ ಒಂದು ಪ್ಯಾರಾ ಕೂಡ ಓದಲು ಆಗುವುದಿಲ್ಲ. ಅಸರ್‌ನದ್ದೇ ಹಳೆಯ ಸಮೀಕ್ಷೆಯೊಂದಿಗೆ ಹೋಲಿಸಿದಾಗ ತಿಳಿಯುವುದೇನೆಂದರೆ ಒಂದೇ ಏಟಿನಲ್ಲಿ ನಾವು 2012ರ ಸ್ತರಕ್ಕೆ ಮರಳಿದ್ದೇವೆ. ಒಂದು ತರಗತಿಯಲ್ಲ, ಒಂದು ಶಾಲೆಯಲ್ಲ, ಒಂದು ಹಳ್ಳಿಯಲ್ಲ, ಇಡೀ ದೇಶದ ಶಿಕ್ಷಣದ ಒಂದು ಹಂತ ಕೆಳಗಿಳಿದುಬಿಟ್ಟಿದೆ.

ಈ ಕಥೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಪುನರುಚ್ಚರಿಸಲಾಗಿದೆ. 2ನೆಯ ತರಗತಿಯ ಪುಸ್ತಕ ಓದಲು ಸಾಧ್ಯವಾಗುವ 3ನೆಯ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ 27% ಇತ್ತು; ಈಗ 2022ರಲ್ಲಿ ಕುಸಿದು 21%ಗೆ ನಿಂತಿದೆ. 3ನೆಯ ತರಗತಿಯ ಮಕ್ಕಳು ಕಳೆಯುವ ಪ್ರಶ್ನೆಗಳನ್ನು ಉತ್ತರಿಸಬಲ್ಲ ಹಾಗೂ 5ನೆಯ ತರಗತಿಯ ಮಕ್ಕಳು ಭಾಗಾಕಾರ ಮಾಡಬಲ್ಲವರ ಸಂಖ್ಯೆ 28%ರಿಂದ ಇಳಿದು ಈಗ 26%ಕ್ಕೆ ಬಂದಿದೆ. ಶಿಕ್ಷಣದಲ್ಲಿ ಈ ಕುಸಿತ ಕೇವಲ ಬಡರಾಜ್ಯಗಳಲ್ಲಿ ಕಾಣಿಸಿಲ್ಲ. ಈ ಹೊಡೆತ ಶಿಕ್ಷಣದ ವ್ಯವಸ್ಥೆ ಉತ್ತಮವಾಗಿರುವ ಕೇರಳ, ಹಿಮಾಚಲ ಹಾಗೂ ಹರಿಯಾಣದಂತಹ ರಾಜ್ಯಗಳಲ್ಲೂ ಕಂಡುಬಂದಿದೆ. ಈ ಕುಸಿತ ಎಲ್ಲಾ ರೀತಿಯ ಮಕ್ಕಳಲ್ಲಿ ದಾಖಲಾಗಿದೆ, ಅವರು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾಗಲಿ, ಖಾಸಗಿಯಲ್ಲಿ ಓದುವವರಾಗಿರಲಿ. ಅಂದರೆ, ಕೋವಿಡ್ ಮಹಾಮಾರಿಯ ಸಮಯದಲ್ಲಿ ನಮ್ಮ ಗ್ರಾಮೀಣ ಮಕ್ಕಳ ಶಿಕ್ಷಣ ವ್ಯವಸ್ಥೆ ಧ್ವಂಸಗೊಂಡಿದೆ.

ಆದರೆ ಇದರರ್ಥ ಶಿಕ್ಷಣದಲ್ಲಿ ಪೋಷಕರ ಅಥವಾ ಮಕ್ಕಳ ಆಸಕ್ತಿ ಕುಂದಿದೆ ಅಂತಲ್ಲ. ಇದೇ ಸಮೀಕ್ಷೆ ಈ ವಾಸ್ತವವನ್ನೂ ದಾಖಲಿಸುತ್ತದೆ: ಈ ನಾಲ್ಕು ವರ್ಷಗಳಲ್ಲಿ ಶಾಲೆಗೆ ದಾಖಲಾಗುವ ಗ್ರಾಮೀಣ ಮಕ್ಕಳ ಸಂಖ್ಯೆ 97.2%ರಿಂದ 98.4%ಗೆ ಏರಿದೆ. ಹೆಣ್ಣುಮಕ್ಕಳ ದಾಖಲಾತಿಯೂ ಮೊದಲಿಗಿಂತ ಹೆಚ್ಚಿದೆ. ಶಾಲೆಗಳಲ್ಲಿ ಮಾತ್ರವಲ್ಲ ಅಂಗನವಾಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆಯೂ 57% ಇಂದ ಜಿಗಿತ ಕಂಡು ಈಗ 67% ಆಗಿದೆ. ಮೂರು ವರ್ಷ ವಯಸ್ಸಿನ 78% ಮಕ್ಕಳು ಒಂದಲ್ಲ ಒಂದು ನರ್ಸರಿ ಶಾಲೆಗೆ ಹೋಗುತ್ತಿದ್ದಾರೆ. ಅಂದರೆ ಶಿಕ್ಷಣದ ಹಸಿವು ನಿರಂತರವಾಗಿ ಹೆಚ್ಚುತ್ತಿದೆ.

ಆದರೆ ಶಿಕ್ಷಣದ ಅವಕಾಶದಲ್ಲಿ ಕುಸಿತ ಕಂಡುಬರುತ್ತಿದೆ. ಈ ಸಮೀಕ್ಷೆಯು ಮೊದಲ ಬಾರಿಗೆ ಒಂದು ಐತಿಹಾಸಿಕ ಪ್ರಕ್ರಿಯೆಯು ತಲೆಕೆಳಗಾಗಿದ್ದನ್ನು ದಾಖಲಿಸುತ್ತದೆ. ಬಹಳಷ್ಟು ಸಮಯದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕುಸಿಯುತ್ತಿತ್ತು. ಅದಕ್ಕೆ ಕಾರಣ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಸಾಧ್ಯತೆ ಒಂದು. ಆದರೆ ಮೊದಲ ಬಾರಿ 2018ರಿಂದ 2022ರ ನಡುವೆ ಖಾಸಗಿ ಶಾಲೆಗಳಿಗೆ ಹೋಗುವ ಗ್ರಾಮೀಣ ಮಕ್ಕಳ ಸಂಖ್ಯೆಯು 35%ರಿಂದ ಇಳಿದು 27% ಆಗಿದೆ. ಹೀಗೆ ಆಗಿದ್ದು ಸರಕಾರಿ ಶಾಲೆಗಳ ಗುಣಮಟ್ಟ ಉತ್ತಮಗೊಂಡ ಕಾರಣಕ್ಕೇನೂ ಅಲ್ಲ. ಅದರ ಬದಲಿಗೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂದೆತಾಯಿಯ ಆರ್ಥಿಕ ವ್ಯವಸ್ಥೆಯಲ್ಲಿ ಕುಸಿತ ಕಂಡಿದ್ದರಿಂದ. ಮಹಾಮಾರಿಯ ಕಾರಣದಿಂದ ಶಾಲೆಗಳು ಮುಚ್ಚಿಕೊಂಡವು ಹಾಗೂ ಹೆಚ್ಚಿನ ಜನರ ಗಳಿಕೆಯ ಮೇಲೆ ಪೆಟ್ಟುಬಿತ್ತು; ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಅವರನ್ನು ಸರಕಾರಿ ಶಾಲೆಗಳಿಗೆ ಸೇರಿಸಿದರು.

ಗ್ರಾಮೀಣ ಭಾರತದಲ್ಲಿ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಹಸಿವು, ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕ, ಆದರೆ ಸಾಮಾನ್ಯ ಜನರಿಗೆ ಅಲಭ್ಯವಾಗುತ್ತಿರುವ ಸಂಪನ್ಮೂಲಗಳು ಹಾಗೂ ಸರಕಾರಿ ಶಾಲೆಗಳ ವ್ಯವಸ್ಥೆ ನಿರಂತರವಾಗಿ ಹಿನ್ನೆಡೆ ಕಾಣುತ್ತಿರುವ ಈ ಸಮಯದಲ್ಲಿ, ಶಿಕ್ಷಣದ ಗುಣಮಟ್ಟದಲ್ಲಿ ದಾಖಲಾದ ಕುಸಿತವು ಒಂದು ದೊಡ್ಡ ರಾಷ್ಟ್ರೀಯ ವಿಪತ್ತಿನ ಕಡೆ ಕೈತೋರಿಸುತ್ತದೆ. ಮುಂದಿನ 5 ವರ್ಷಗಳ ತನಕ ದೇಶದ ಶಾಲಾ ಶಿಕ್ಷಣ ಏಕಮೇವ ಮಿಷನ್ ಆಗಿರಬೇಕಾಗಿದೆ. ಅದು ಈ ಹೊಡೆತದ ಪರಿಣಾಮವನ್ನು ತಗ್ಗಿಸಿ, ಗ್ರಾಮೀಣ ಮತ್ತು ನಗರದ ಬಡವರ ಒಂದು ಇಡೀ ತಲೆಮಾರಿಗೆ ಈ ನಷ್ಟದಿಂದ ಕಾಪಾಡಬೇಕಿದೆ. ಇಲ್ಲವಾದರೆ ಇದರ ಪೆಟ್ಟು ಒಂದು ಶಾಶ್ವತ ದುರಂತವಾಗಿ ಬದಲಾಗಬಹುದು.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dont consider the report or study of Pratham organization. This is a fake study.
    This is only coocked data to fetch money from abroad and from governments.

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...