Homeಮುಖಪುಟಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

- Advertisement -
- Advertisement -

ಸುಮ್ಮನೆ ಊಹಿಸಿಕೊಳ್ಳಿ, ಕೆಲವು ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗುತ್ತಾರೆ, ಅಲ್ಲಿ ಹೋದ ನಂತರ ಅವರಿಗೆ ಗೊತ್ತಾಗುವುದೇನೆಂದರೆ, ನಿನ್ನೆಯ ತನಕ ಐದನೆಯ ತರಗತಿಯಲ್ಲಿದ್ದ ಅವರು ಈಗ ನಾಲ್ಕನೆಯ ತರಗತಿಗೆ ಸೇರಿಕೊಳ್ಳಲಿದ್ದಾರೆ, ನಾಲ್ಕನೆಯ ತರಗತಿಯವರು ಮೂರನೆಯ ತರಗತಿಗೆ; ಯಾವ ಪುಸ್ತಕವನ್ನು ಅವರು ಮೊದಲು ಓದಬಹುದಾಗಿತ್ತೋ, ಈಗ ತೊದಲುತ್ತಿದ್ದಾರೆ, ಯಾರಿಗೆ ಗಣಿತ ಬರುತ್ತಿತ್ತೋ ಈಗ ಅದನ್ನು ಮರೆತಿದ್ದಾರೆ. ಅಂದರೆ ರಾತ್ರೋರಾತ್ರಿ ಇಡೀ ಶಾಲೆ ಒಂದು ಹಂತ ಕೆಳಗೆ ಕುಸಿದುಬಿಟ್ಟಿದೆ. ಯೋಚಿಸಿ, ಆಗ ಆ ಶಾಲೆ, ಆ ಮಕ್ಕಳು, ಆ ಹಳ್ಳಿಯ ಮೇಲೆ ಯಾವ ಪರಿಣಾಮ ಬೀರಬಹುದು. ಇದು ಸೈನ್ಸ್ ಫಿಕ್ಷನ್‌ನ ಒಂದು ಹೊಸ ಕಲ್ಪನೆಯಲ್ಲ. ಇದು ವಾಸ್ತವ. ಕೇವಲ ಒಂದು ಶಾಲೆಯದ್ದಲ್ಲ, ಇಡೀ ದೇಶದ ವಾಸ್ತವ. ಯಾವುದೇ ದೂರದ ದೇಶದ್ದೂ ಅಲ್ಲ, ನಮ್ಮ ಭಾರತದ ಕಥೆಯೇ ಇದು. ಯಾವುದೋ ಒಂದು ಭೂತಕಾಲದ ಕಥೆಯೂ ಅಲ್ಲ, ಕಳೆದ 4 ವರ್ಷಗಳ ದುಃಖಭರಿತ ಕಥೆ ಇದು.

ಕಳೆದ ವರ್ಷ ಪ್ರಥಮ್ ಎಂಬ ಸರಕಾರೇತರ ಸಂಸ್ಥೆಯು ’ಅಸರ್’ ಎಂಬ ಹೆಸರಿನ ಸಮೀಕ್ಷೆಯ 2022ರ ವರದಿ ಬಿಡುಗಡೆ ಮಾಡಿತು, ಈ ವರದಿ ಈ ಧಾರುಣ ಕಥೆ ಹೇಳುತ್ತದೆ. ಅಸರ್ ಎಂದರೆ ’ಎನುವಲ್ ಸ್ಟೇಟಸ್ ಆಫ್ ಎಜ್ಯುಕೇಷನ್ ರಿಪೋರ್ಟ್’ (Annul status of education report). ಇದು ಕಳೆದ 17 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅರ್ಹತೆಯನ್ನು ಅಳೆಯುವ ಒಂದು ಪ್ರಾಮಾಣಿಕ ಅಸ್ತ್ರವಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯಲ್ಲಿ, ಶಾಲೆಯಲ್ಲಿ ಮಕ್ಕಳ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ ಅವರ ಮನೆಗೆ ಹೋಗಿ ಭಾಷೆ ಮತ್ತು ಗಣಿತದ ಸಾಧಾರಣ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರದ್ದೇ ಆದ ಪಠ್ಯಪುಸ್ತಕದ ಒಂದು ಸಾಧಾರಣ ಪ್ಯಾರಾವನ್ನು ಓದಿಸಲಾಗುತ್ತದೆ. ಗಣಿತದಲ್ಲಿ ಕೂಡುವ ಕಳೆಯುವ ಅತ್ಯಂತ ಸಾಧಾರಣ ಲೆಕ್ಕ ಬಿಡಿಸಲು ಹೇಳಲಾಗುತ್ತದೆ.

ಈ ವರ್ಷ ಅಸರ್‌ನ ವರದಿಯನ್ನು ನಾನು ಕಾತುರದಿಂದ ಕಾಯುತ್ತಿದ್ದೆ. 2005ರಿಂದ ಪ್ರತಿ ವರ್ಷ ಹಾಗೂ 2014ರ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ವರದಿ ಹೊರಬರುತ್ತಿದೆ. ಆದರೆ 2018ರ ನಂತರ ಈ ಪ್ರಕ್ರಿಯೆ ನಿಂತಿತ್ತು. ಕೋವಿಡ್ ಮಹಾಮಾರಿಯ ಕಾರಣದಿಂದ ಶಾಲೆಗಳೂ ಮುಚ್ಚಿದ್ದವು ಹಾಗೂ ಅಸರ್ ಸಮೀಕ್ಷೆಯನ್ನೂ ಮಾಡಲಾಗಲಿಲ್ಲ. ಹಾಗಾಗಿ 2022ರ ವರದಿ ಕಳೆದ 4 ವರ್ಷಗಳ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒದಗಿದ ಅಡೆತಡೆಯ ದಾಖಲೆಯಾಗಿ ಹೊರಹೊಮ್ಮಿದೆ. ದೇಶದ 606 ಜಿಲ್ಲೆಗಳಲ್ಲಿ 19 ಸಾವಿರ ಹಳ್ಳಿಗಳ 7 ಲಕ್ಷ ಮಕ್ಕಳ ಸಮೀಕ್ಷೆಯ ಆಧಾರಿತ ಈ ವರದಿ ಮೊದಲ ಬಾರಿ ಕೋವಿಡ್ ಮಹಾಮಾರಿ ಕಾರಣದಿಂದ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣದ ಮೇಲೆ ಆದ ಪರಿಣಾಮಗಳನ್ನು ದಾಖಲಿಸುತ್ತದೆ.

ಸುದ್ದಿ ಒಳ್ಳೆಯದಿಲ್ಲ. ಅಸರ್ 2018ರ ವರದಿಯು 5ನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೇವಲ 51% ಮಕ್ಕಳು 2ನೆಯ ತರಗತಿಯ ಸಾಧಾರಣ ಪುಸ್ತಕದ ಸರಳವಾದ ಪ್ಯಾರಾ ಓದಬಲ್ಲರು ಎಂದು ಹೇಳಿತ್ತು.

ಇದನ್ನೂ ಓದಿ: ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ | ಶಿಕ್ಷಣ ಇಲಾಖೆಯ ಕ್ರಮಕ್ಕೆ ತಜ್ಞರ ವಿರೋಧ

ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿತ್ತು. ಈಗ 2022ರ ವರದಿ ಹೇಳುವುದೇನೆಂದರೆ, ಈ ಅಂಕಿ ಇನ್ನಷ್ಟು ಕೆಳಗಿಳಿದು ಆ ಅನುಪಾದ 43%ಕ್ಕೆ ಕುಸಿದಿದೆ. ಅಂದರೆ ಪ್ರಾಥಮಿಕ ಶಾಲೆ ಪಾಸ್ ಮಾಡುವ 10 ಮಕ್ಕಳಲ್ಲಿ 6 ಮಕ್ಕಳಿಗೆ ತಮ್ಮ ಮೂರು ವರ್ಗ ಕೆಳಗಿನ ಪುಸ್ತಕದ ಸರಳವಾದ ಒಂದು ಪ್ಯಾರಾ ಕೂಡ ಓದಲು ಆಗುವುದಿಲ್ಲ. ಅಸರ್‌ನದ್ದೇ ಹಳೆಯ ಸಮೀಕ್ಷೆಯೊಂದಿಗೆ ಹೋಲಿಸಿದಾಗ ತಿಳಿಯುವುದೇನೆಂದರೆ ಒಂದೇ ಏಟಿನಲ್ಲಿ ನಾವು 2012ರ ಸ್ತರಕ್ಕೆ ಮರಳಿದ್ದೇವೆ. ಒಂದು ತರಗತಿಯಲ್ಲ, ಒಂದು ಶಾಲೆಯಲ್ಲ, ಒಂದು ಹಳ್ಳಿಯಲ್ಲ, ಇಡೀ ದೇಶದ ಶಿಕ್ಷಣದ ಒಂದು ಹಂತ ಕೆಳಗಿಳಿದುಬಿಟ್ಟಿದೆ.

ಈ ಕಥೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಪುನರುಚ್ಚರಿಸಲಾಗಿದೆ. 2ನೆಯ ತರಗತಿಯ ಪುಸ್ತಕ ಓದಲು ಸಾಧ್ಯವಾಗುವ 3ನೆಯ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ 27% ಇತ್ತು; ಈಗ 2022ರಲ್ಲಿ ಕುಸಿದು 21%ಗೆ ನಿಂತಿದೆ. 3ನೆಯ ತರಗತಿಯ ಮಕ್ಕಳು ಕಳೆಯುವ ಪ್ರಶ್ನೆಗಳನ್ನು ಉತ್ತರಿಸಬಲ್ಲ ಹಾಗೂ 5ನೆಯ ತರಗತಿಯ ಮಕ್ಕಳು ಭಾಗಾಕಾರ ಮಾಡಬಲ್ಲವರ ಸಂಖ್ಯೆ 28%ರಿಂದ ಇಳಿದು ಈಗ 26%ಕ್ಕೆ ಬಂದಿದೆ. ಶಿಕ್ಷಣದಲ್ಲಿ ಈ ಕುಸಿತ ಕೇವಲ ಬಡರಾಜ್ಯಗಳಲ್ಲಿ ಕಾಣಿಸಿಲ್ಲ. ಈ ಹೊಡೆತ ಶಿಕ್ಷಣದ ವ್ಯವಸ್ಥೆ ಉತ್ತಮವಾಗಿರುವ ಕೇರಳ, ಹಿಮಾಚಲ ಹಾಗೂ ಹರಿಯಾಣದಂತಹ ರಾಜ್ಯಗಳಲ್ಲೂ ಕಂಡುಬಂದಿದೆ. ಈ ಕುಸಿತ ಎಲ್ಲಾ ರೀತಿಯ ಮಕ್ಕಳಲ್ಲಿ ದಾಖಲಾಗಿದೆ, ಅವರು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾಗಲಿ, ಖಾಸಗಿಯಲ್ಲಿ ಓದುವವರಾಗಿರಲಿ. ಅಂದರೆ, ಕೋವಿಡ್ ಮಹಾಮಾರಿಯ ಸಮಯದಲ್ಲಿ ನಮ್ಮ ಗ್ರಾಮೀಣ ಮಕ್ಕಳ ಶಿಕ್ಷಣ ವ್ಯವಸ್ಥೆ ಧ್ವಂಸಗೊಂಡಿದೆ.

ಆದರೆ ಇದರರ್ಥ ಶಿಕ್ಷಣದಲ್ಲಿ ಪೋಷಕರ ಅಥವಾ ಮಕ್ಕಳ ಆಸಕ್ತಿ ಕುಂದಿದೆ ಅಂತಲ್ಲ. ಇದೇ ಸಮೀಕ್ಷೆ ಈ ವಾಸ್ತವವನ್ನೂ ದಾಖಲಿಸುತ್ತದೆ: ಈ ನಾಲ್ಕು ವರ್ಷಗಳಲ್ಲಿ ಶಾಲೆಗೆ ದಾಖಲಾಗುವ ಗ್ರಾಮೀಣ ಮಕ್ಕಳ ಸಂಖ್ಯೆ 97.2%ರಿಂದ 98.4%ಗೆ ಏರಿದೆ. ಹೆಣ್ಣುಮಕ್ಕಳ ದಾಖಲಾತಿಯೂ ಮೊದಲಿಗಿಂತ ಹೆಚ್ಚಿದೆ. ಶಾಲೆಗಳಲ್ಲಿ ಮಾತ್ರವಲ್ಲ ಅಂಗನವಾಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆಯೂ 57% ಇಂದ ಜಿಗಿತ ಕಂಡು ಈಗ 67% ಆಗಿದೆ. ಮೂರು ವರ್ಷ ವಯಸ್ಸಿನ 78% ಮಕ್ಕಳು ಒಂದಲ್ಲ ಒಂದು ನರ್ಸರಿ ಶಾಲೆಗೆ ಹೋಗುತ್ತಿದ್ದಾರೆ. ಅಂದರೆ ಶಿಕ್ಷಣದ ಹಸಿವು ನಿರಂತರವಾಗಿ ಹೆಚ್ಚುತ್ತಿದೆ.

ಆದರೆ ಶಿಕ್ಷಣದ ಅವಕಾಶದಲ್ಲಿ ಕುಸಿತ ಕಂಡುಬರುತ್ತಿದೆ. ಈ ಸಮೀಕ್ಷೆಯು ಮೊದಲ ಬಾರಿಗೆ ಒಂದು ಐತಿಹಾಸಿಕ ಪ್ರಕ್ರಿಯೆಯು ತಲೆಕೆಳಗಾಗಿದ್ದನ್ನು ದಾಖಲಿಸುತ್ತದೆ. ಬಹಳಷ್ಟು ಸಮಯದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕುಸಿಯುತ್ತಿತ್ತು. ಅದಕ್ಕೆ ಕಾರಣ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಸಾಧ್ಯತೆ ಒಂದು. ಆದರೆ ಮೊದಲ ಬಾರಿ 2018ರಿಂದ 2022ರ ನಡುವೆ ಖಾಸಗಿ ಶಾಲೆಗಳಿಗೆ ಹೋಗುವ ಗ್ರಾಮೀಣ ಮಕ್ಕಳ ಸಂಖ್ಯೆಯು 35%ರಿಂದ ಇಳಿದು 27% ಆಗಿದೆ. ಹೀಗೆ ಆಗಿದ್ದು ಸರಕಾರಿ ಶಾಲೆಗಳ ಗುಣಮಟ್ಟ ಉತ್ತಮಗೊಂಡ ಕಾರಣಕ್ಕೇನೂ ಅಲ್ಲ. ಅದರ ಬದಲಿಗೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂದೆತಾಯಿಯ ಆರ್ಥಿಕ ವ್ಯವಸ್ಥೆಯಲ್ಲಿ ಕುಸಿತ ಕಂಡಿದ್ದರಿಂದ. ಮಹಾಮಾರಿಯ ಕಾರಣದಿಂದ ಶಾಲೆಗಳು ಮುಚ್ಚಿಕೊಂಡವು ಹಾಗೂ ಹೆಚ್ಚಿನ ಜನರ ಗಳಿಕೆಯ ಮೇಲೆ ಪೆಟ್ಟುಬಿತ್ತು; ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಅವರನ್ನು ಸರಕಾರಿ ಶಾಲೆಗಳಿಗೆ ಸೇರಿಸಿದರು.

ಗ್ರಾಮೀಣ ಭಾರತದಲ್ಲಿ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಹಸಿವು, ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕ, ಆದರೆ ಸಾಮಾನ್ಯ ಜನರಿಗೆ ಅಲಭ್ಯವಾಗುತ್ತಿರುವ ಸಂಪನ್ಮೂಲಗಳು ಹಾಗೂ ಸರಕಾರಿ ಶಾಲೆಗಳ ವ್ಯವಸ್ಥೆ ನಿರಂತರವಾಗಿ ಹಿನ್ನೆಡೆ ಕಾಣುತ್ತಿರುವ ಈ ಸಮಯದಲ್ಲಿ, ಶಿಕ್ಷಣದ ಗುಣಮಟ್ಟದಲ್ಲಿ ದಾಖಲಾದ ಕುಸಿತವು ಒಂದು ದೊಡ್ಡ ರಾಷ್ಟ್ರೀಯ ವಿಪತ್ತಿನ ಕಡೆ ಕೈತೋರಿಸುತ್ತದೆ. ಮುಂದಿನ 5 ವರ್ಷಗಳ ತನಕ ದೇಶದ ಶಾಲಾ ಶಿಕ್ಷಣ ಏಕಮೇವ ಮಿಷನ್ ಆಗಿರಬೇಕಾಗಿದೆ. ಅದು ಈ ಹೊಡೆತದ ಪರಿಣಾಮವನ್ನು ತಗ್ಗಿಸಿ, ಗ್ರಾಮೀಣ ಮತ್ತು ನಗರದ ಬಡವರ ಒಂದು ಇಡೀ ತಲೆಮಾರಿಗೆ ಈ ನಷ್ಟದಿಂದ ಕಾಪಾಡಬೇಕಿದೆ. ಇಲ್ಲವಾದರೆ ಇದರ ಪೆಟ್ಟು ಒಂದು ಶಾಶ್ವತ ದುರಂತವಾಗಿ ಬದಲಾಗಬಹುದು.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dont consider the report or study of Pratham organization. This is a fake study.
    This is only coocked data to fetch money from abroad and from governments.

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...