Homeಮುಖಪುಟಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

ಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

- Advertisement -
- Advertisement -

ಮೊದಲು ರೈತರು ಕೇಳುತ್ತಿದ್ದ ಪ್ರಶ್ನೆಯನ್ನು ಈಗ ಕುಸ್ತಿಪಟುಗಳು ಕೇಳುತ್ತಿದ್ದಾರೆ: ಪ್ರಧಾನಿಗಳು ಸುಮ್ಮನಿರುವುದಾದರೂ ಏತಕ್ಕೆ? ಅಪರಾಧದ ದಾಖಲೆ ಹೊಂದಿರುವ ಮತ್ತು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಾಯಕರ ವಿರುದ್ಧ ಅವರು ಕ್ರಮ ಏಕೆ ಕೈಗೊಳ್ಳುವುದಿಲ್ಲ? ಅಷ್ಟಕ್ಕೂ ಪ್ರಧಾನಮಂತ್ರಿಯವರ ಅಸಹಾಯಕತೆ ಏನು? ಎಂದು.

ಮಹಿಳಾ ಕುಸ್ತಿಪಟುಗಳು ಹೊರಿಸಿದ ಆರೋಪಗಳು ಸಾಮಾನ್ಯ ಆರೋಪಗಳಲ್ಲ. ಯಾವುದೇ ಸಂವೇದನಾಶೀಲ ವ್ಯಕ್ತಿಯ ಹೃದಯ ಕಂಪಿಸಬೇಕು, ಯಾವುದೇ ದೇಶಭಕ್ತನು ತಲೆಬಾಗಬೇಕು, ಅಂತಹ ಆರೋಪಗಳವು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಇಂದಿನಿಂದಲ್ಲ, ಸುಮಾರು 10 ವರ್ಷಗಳಿಂದ ನಡೆಯುತ್ತಿದೆ. ಕೇವಲ ಒಬ್ಬ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿಲ್ಲ, ಕುಸ್ತಿ ಫೆಡರೇಷನ್‌ನ ಅನೇಕ ಕೋಚ್‌ಗಳೂ ಶಾಮೀಲಾಗಿದ್ದಾರೆ ಎಂದು ಆರೋಪಗಳಿವೆ. ಈ ದೌರ್ಜನ್ಯದ ಬಲಿಪಶು ಆದವರಲ್ಲಿ ಅಪ್ರಾಪ್ತ ಬಾಲಕಿಯರೂ ಇದ್ದಾರೆ ಮತ್ತು ಈ ಆರೋಪ ಹೊರಿಸಿದ್ದು ಕೇವಲ ಒಬ್ಬ ಮಹಿಳೆ ಅಲ್ಲ, ಅನೇಕ ಮಹಿಳೆಯರು ಆರೋಪಗಳನ್ನು ಮಾಡಿದ್ದಾರೆ. ಆರೋಪದ ಗಂಭೀರತೆಯನ್ನು ಖುದ್ದು ಸುಪ್ರೀಂಕೋರ್ಟ್ ಸ್ವೀಕರಿಸಿದೆ. ಇದಿಷ್ಟೇ ಅಲ್ಲದೆ, ಎರಡು ವರ್ಷಗಳ ಮುಂಚೆಯೇ ಸಾಕ್ಷಿ ಮಲಿಕ್ಪ್ರಧಾನಮಂತ್ರಿಗೆ ನೇರವಾಗಿ  ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೂರನ್ನು ನೀಡಿದ್ದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದು ಮೊದ ಆರೋಪವೇನೂ ಅಲ್ಲ. ಆರು ಬಾರಿ ಲೋಕಸಭೆಯ ಸದಸ್ಯನಾಗಿರುವ ಬ್ರಿಜ್ ಭೂಷಣ್‌ನ ಚುನಾವಣಾ ಅಫಿಡವಿಟ್ ಆತನ ಅಪರಾಧದ ದಾಖಲೆಯ ಕಥೆ ಬಿಚ್ಚಿಡುತ್ತದೆ. ಕಳೆದ ಲೋಕಸಭೆ ಚುನಾವಣೆಗಳಲ್ಲಿ ಅವನ ಅಫಿಡವಿಟ್‌ನಲ್ಲಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ನಾಲ್ಕು ಅಪರಾಧದ ವಿಷಯಗಳ ಉಲ್ಲೇಖವಿದೆ. ಕೊಲೆಯ ಇನ್ನೊಂದು ಪ್ರಕರಣದಲ್ಲಿ ಆತನನ್ನು ಸಾಕ್ಷ್ಯದ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್

ಸಂಸದ ಮಹಾಶಯರು ಖುದ್ದು ತಮ್ಮ ಅಪರಾಧಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ವರ್ಷ ಲಲ್ಲನ್‌ಟಾಪ್‌ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಅವರೇ ಹೇಳಿದ್ದು: ’ನನ್ನ ಜೀವನದಲ್ಲಿ ನನ್ನ ಕೈಯಿಂದ ಒಂದು ಕೊಲೆಯಾಗಿದೆ, ಜನರು ಏನೇ ಹೇಳಲಿ, ನಾನು ಒಂದು ಕೊಲೆ ಮಾಡಿದ್ದೇನೆ..’ ಎಂದು; ಆದರೆ ಆ ಕೊಲೆಯ ಪ್ರಕರಣದಲ್ಲಿ ಈತನ ಮೇಲೆ ವಿಚಾರಣೆಯೇ ನಡೆದಿಲ್ಲ, ಇದರ ಯಾವ ದಾಖಲೆಯೂ ಇಲ್ಲ. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೋಂಡಾದಿಂದ ಬಿಜೆಪಿ ಈತನ ಬದಲು ಘನಷ್ಯಾಮ್ ಶುಕ್ಲರನ್ನು ಅಭ್ಯರ್ಥಿಯನ್ನಾಗಿ ಮಾಡಿದಾಗ ಮತದಾನದ ದಿನದಂದು ಒಂದು ದುರ್ಘಟನೆಯಲ್ಲಿ ಶುಕ್ಲ ಅವರು ನಿಧನರಾದರು. ಈ ಸಾವಿನ ಹಿಂದೆ ಬ್ರಿಜ್ ಭೂಷಣ್‌ನ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದು ಬೇರೆ ಯಾರೂ ಅಲ್ಲ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ. ಈ ವಿಷಯವನ್ನು ಬಹಿರಂಗಪಡಿಸಿದ್ದು ಬೇರೆ ಯಾರೂ ಅಲ್ಲ, ಖುದ್ದು ಬ್ರಿಜ್ ಭೂಷಣ್ ’ದಿ ಸ್ಕ್ರಾಲ್’ಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಪ್ರಶ್ನೆ ಏನೆಂದರೆ, ಇಂತಹ ವ್ಯಕ್ತಿಗೆ ಪ್ರಧಾನಮಂತ್ರಿಗಳ ರಕ್ಷಣೆ ಹೇಗೆ ಪ್ರಾಪ್ತಿಯಾಯಿತು? ಪ್ರಶ್ನೆಯ ಆಳಕ್ಕೆ ಹೋದರೆ, ನಿಮಗೆ ಸಿಗುವುದೇನೆಂದರೆ, ಬ್ರಿಜ್ ಭೂಷಣ್ ಮಾತ್ರ ಒಂದು ಅಪವಾದವೇನಲ್ಲ ಎಂಬ ಕಟುವಾಸ್ತವ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳಿರುವ ಬಿಜೆಪಿಯ ನಾಯಕರ ಒಂದು ದೀರ್ಘ ಪಟ್ಟಿಯನ್ನೇ ಮಾಡಬಹುದು, ಆದರೆ ಬಿಜೆಪಿ ಅಥವಾ ಪ್ರಧಾನಮಂತ್ರಿ ಮೂಲಕ ಅವರಲ್ಲಿ ಬಹುತೇಕರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂಬುದೂ ಸತ್ಯ.

ಈ ಪಟ್ಟಿಯಲ್ಲಿ ಕುಲದೀಪ್ ಸೆಂಗರ್, ಚಿನ್ಮಯಾನಂದ ಸ್ವಾಮಿ, ಸಾಕ್ಷಿ ಮಹಾರಾಜ್, ಎಂ.ಜೆ ಅಕ್ಬರ್, ಉಮೇಶ್ ಅಗರ್ವಾಲ್, ಬರ್ನಾರ್ಡ್ ಮರಾಕ್ ಹಾಗೂ ಸಂದೀಪ್ ಸಿಂಗ್ ಅವರುಗಳ ಹೆಸರು ಇರಹುದು. ಅತ್ತ ತಥಾಕಥಿತ ಸ್ವಘೋಷಿತ ದೇವಮಾನವರಾದ ಬಾಬಾ ರಾಮ ರಹೀಮ್ ಮತ್ತು ಆಸಾರಾಮ್ ನಂತವರು ಬಿಜೆಪಿಗೆ ನಿಕಟವಾಗಿದ್ದರು ಎಂಬ ಕಟುಸತ್ಯ ಎಲ್ಲರಿಗೂ ತಿಳಿದಿದ್ದೇ ಇದೆ.

ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಹಲ್ಲೆ: ‘ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ಕೊಲ್ಲಬಹುದು’ ಎಂದು ಕಣ್ಣೀರಿಟ್ಟ ವಿನೇಶ್ ಫೋಗಟ್

ಹಿಂದಿನ ಕೆಲವು ವರ್ಷಗಳಲ್ಲಿ, ನಮ್ಮ ಪ್ರಧಾನಮಂತ್ರಿಯವರ ವಿವಿಧ ಅಧಿಕಾರಾವಧಿಯಲ್ಲಿ ಹಾಥರಸ್, ಕಠುವಾ ಅಥವಾ ಬಿಲ್ಕಿಸ್ ಬಾನೋರಂತಹ ಮಹಿಳೆಯರ ವಿರುದ್ಧ ಬಲಾತ್ಕಾರ ಅಥವಾ ಶೋಷಣೆಯ (ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ಸೇರಿ) ಪ್ರಮುಖ ಘಟನೆಗಳ ಬಗ್ಗೆಯೂ ಪ್ರಧಾನಮಂತ್ರಿಗಳು ವಿಚಿತ್ರವಾದ ಮೌನ ವಹಿಸಿದ್ದಾರೆ.

ಈ ಪ್ರಶ್ನೆ ಹೊಸದಲ್ಲ. ಕೇಂದ್ರೀಯ ಗೃಹ ರಾಜ್ಯ ಸಚಿವ ಅಜಯ್ ಮಿಶ್ರ ಟೇನಿಯ ಬಗ್ಗೆಯೂ ರೈತರು ಇದೇ ಪ್ರಶ್ನೆಯನ್ನು ಕೇಳಿದ್ದರು. ಹಾಡುಹಗಲೇ ರೈತರನ್ನು ಕೊಂದ ಆರೋಪಿಯ ತಂದೆ ಹಾಗೂ ಆ ಹತ್ಯಾಕಾಂಡದ ಪಿತೂರಿಯ ಪ್ರಮುಖ ಆರೋಪಿ ಅಜಯ್ ಮಿಶ್ರ ಟೇನಿ ಇಂದಿಗೂ ಮಂತ್ರಿಮಂಡಲದಲ್ಲಿ ಏಕೆ ಇದ್ದಾರೆ? ಇಂದು ಅದೇ ಪ್ರಶ್ನೆ ಬ್ರಿಜ್ ಭೂಷಣ್ ಸಿಂಗ್ ಬಗ್ಗೆ ಎತ್ತಲಾಗಿದೆ. ಬೇಟಿ ಬಚಾವೊ ಎಂಬ ಘೋಷಣೆ ನೀಡಿದ ಪ್ರಧಾನಮಂತ್ರಿ, ಅಪ್ರಾಪ್ತ ಬಾಲಕಿಯ ಮೇಲೆ ಆದ ಲೈಂಗಿಕ ದೌರ್ಜನ್ಯದ ಆರೋಪ ಬಂದ ಮೇಲೂ ಬ್ರಿಜ್ ಭೂಷಣ್‌ಗೆ ಅಭಯಹಸ್ತ ಏಕೆ ನೀಡಿದ್ದಾರೆ? ಈ ಆಟಗಾರರನ್ನು ಭಾರತದ ಹೆಮ್ಮೆ ಎನ್ನುವ ಮೋದೀಜಿ ಬ್ರಿಜ್ ಭೂಷಣ್ ಶರಣ್ ಸಿಂಗ್‌ನನ್ನು ಕುಸ್ತಿ ಸಂಘದ ಅಧ್ಯಕ್ಷ ಪದದಿಂದ ತೆಗೆದುಹಾಕುವ ಸಾಮಾನ್ಯ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿದ್ದಾರೆ? ಈ ವರ್ಷ ಜನವರಿಯಲ್ಲಿ ಈ ಹಗರಣ ಸಾರ್ವಜನಿಕ ಆದ ಮೇಲೂ ಹಾಗೂ ಆಟಗಾರರಿಗೆ ಸೂಕ್ತ ಕ್ರಮ ಆಶ್ವಾಸನೆ ನೀಡಿದ ಮೇಲೂ ಯಾವುದೇ ಕ್ರಮ ಯಾಕೆ ಕೈಗೊಳ್ಳಲಾಗಲಿಲ್ಲ?

ನರೇಂದ್ರ ಮೋದಿ

ಈ ಪ್ರಶ್ನೆಗೆ ಎರಡು ಉತ್ತರಗಳು ಸಾಧ್ಯ. ಒಂದೋ ರಾಜಕೀಯ ಅನಿವಾರ್ಯತೆಯ ವಿಷಯವಿದೆ ಅಥವಾ ನೈತಿಕ ದೌರ್ಬಲ್ಯದ ವಿಷಯ. ಲೈಂಗಿಕ ದೌರ್ಜನ್ಯದ ಈ ಎಲ್ಲ ಆರೋಪಿಗಳು ತಮ್ಮ ತಮ್ಮ ಪ್ರದೇಶದ ಪ್ರಬಲ ನಾಯಕರಾಗಿದ್ದಾರೆ ಹಾಗೂ ಕೆಲವು ಜಾತಿಗಳ ಮತಗಳಿಗೆ ಗುತ್ತಿಗೆದಾರರಾಗಿದ್ದಾರೆ. ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದರ ಅರ್ಥ, ಬಿಜೆಪಿಯ ವೋಟ್ ಬ್ಯಾಂಕ್‌ನಲ್ಲಿ ಆ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಒಂದು ವೇಳೆ ಇದೇ ಕಾರಣವಾಗಿದ್ದರೆ, ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: ದೇಶದ ’ಎಲ್ಲಕ್ಕಿಂತ ಜನಪ್ರಿಯ ಮತ್ತು ಪ್ರಬಲ’ ನಾಯಕ ಕೆಲವು ಸ್ಥಳೀಯ ಪ್ರಭಾವಶಾಲಿ ನಾಯಕರ ಎದುರಿಗೆ ಇಷ್ಟೊಂದು ದೈನೇಸಿಯಾಗಿದ್ದಾರೆಯೇ? ಅಷ್ಟಕ್ಕೂ ಬ್ರಿಜ್ ಭೂಷಣ್ ತಾನು ಬಾಯಿ ಬಿಚ್ಚಿದರೆ ಸುನಾಮಿ ಬಂದುಬಿಡುತ್ತೆ ಎಂದು ಯಾವ ಆಧಾರದ ಮೇಲೆ ಬೆದರಿಕೆ ಹಾಕುತ್ತಾನೆ? ಅನೇಕ ದೊಡ್ಡದೊಡ್ಡ ನಾಯಕರನ್ನು ಅಂಚಿಗೆ ತಳ್ಳಿದ ನರೇಂದ್ರ ಮೋದಿ, ಈ ಅರೋಪಿತ ನಾಯಕನ ಎದುರು ಯಾಕೆ ಅಸಹಾಯಕರಾಗಿದ್ದಾರೆ? ಹಾಗೂ ಒಂದು ವೇಳೆ ಅಸಹಾಯಕರಾಗಿದ್ದಲ್ಲಿ, ಯಾವ ಬಾಯಿಂದ ರಾಷ್ಟ್ರದ ಹೆಮ್ಮೆ ಮತ್ತು ಬೇಟಿ ಬಚಾವೊ ಮಾತುಗಳನ್ನಾಡುತ್ತಾರೆ?

ಮತ್ತೊಂದು ಕೋನದಲ್ಲಿ ಯೋಚಿಸುವುದಾದರೆ, ಮಹಿಳೆಯರ ವಿರುದ್ಧ ಆಗುವ ಈ ಅಪರಾಧಗಳನ್ನು ಪ್ರಧಾನಮಂತ್ರಿ ಹಗುರವಾಗಿ ಪರಿಗಣಿಸುತ್ತಾರೆಯೇ? ಅಥವಾ ಪ್ರಧಾನಮಂತ್ರಿಯೂ, ಹೆಚ್ಚೆಚ್ಚು ಮಹಿಳೆಯರೊಂದಿಗೆ ಆಗುವ ಕಿರುಕುಳವನ್ನು ನೋಡಿ ನಕ್ಕು ತಮಾಷೆ ಮಾಡುವ, ಕೌಟುಂಬಿಕ ಹಿಂಸೆಯ ವಾಸ್ತವವನ್ನು ನಿರಾಕರಿಸುವ ಮತ್ತು ಬಲಾತ್ಕಾರದಂತಹ ಘೋರ ಅಪರಾಧಗಳ ಬಗ್ಗೆ ’ಇವೆಲ್ಲ ಮಾಮೂಲಿ’ ಎಂಬ ನಿಲುವನ್ನು ತೆಗೆದುಕೊಳ್ಳುವ ಪುರುಷ ಅಹಂಕಾರದ ಬಲಿಪಶುಗಳಾಗಿದ್ದಾರೆಯೇ? ಪ್ರಧಾನಮಂತ್ರಿಗಳ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ ಹಾಗೂ ಇದು ಸತ್ಯ ಅಲ್ಲ ಎಂದೇ ನಾವು ಆಶಿಸಬೇಕಿದೆ. ಆದರೆ, ಸಾಕ್ಷಿ ಮಲಿಕ್‌ಳ ಕಣ್ಣೀರು, ಬ್ರಿಜ್ ಭೂಷಣ್‌ನ ಅಹಂಕಾರದ ಠೀವಿ ಮತ್ತು ಪ್ರಧಾನಮಂತ್ರಿಯ ಮೌನವನ್ನು ನೋಡುವ ಕೋಟ್ಯಂತರ ಮಹಿಳೆಯರಿಗೆ ಹೀಗೇ ಅನಿಸಬಹುದಲ್ಲವೇ? ಎಲ್ಲಿಯವರೆಗೆ ಪ್ರಧಾನಮಂತ್ರಿ ತಮ್ಮ ಬಾಯಿ ಬಿಚ್ಚುವುದಿಲ್ಲವೋ, ಅಲ್ಲಿಯವರೆಗೆ ಈ ಪ್ರಶ್ನೆ ಎಲ್ಲರ ಕಣ್ಣುಮುಂದೆಯೇ ಇರಲಿದೆ.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳು ಭಾರತದ ’ಬೇಟಿ’ಗಳಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...