Homeಮುಖಪುಟಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

ಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

- Advertisement -
- Advertisement -

ಮೊದಲು ರೈತರು ಕೇಳುತ್ತಿದ್ದ ಪ್ರಶ್ನೆಯನ್ನು ಈಗ ಕುಸ್ತಿಪಟುಗಳು ಕೇಳುತ್ತಿದ್ದಾರೆ: ಪ್ರಧಾನಿಗಳು ಸುಮ್ಮನಿರುವುದಾದರೂ ಏತಕ್ಕೆ? ಅಪರಾಧದ ದಾಖಲೆ ಹೊಂದಿರುವ ಮತ್ತು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಾಯಕರ ವಿರುದ್ಧ ಅವರು ಕ್ರಮ ಏಕೆ ಕೈಗೊಳ್ಳುವುದಿಲ್ಲ? ಅಷ್ಟಕ್ಕೂ ಪ್ರಧಾನಮಂತ್ರಿಯವರ ಅಸಹಾಯಕತೆ ಏನು? ಎಂದು.

ಮಹಿಳಾ ಕುಸ್ತಿಪಟುಗಳು ಹೊರಿಸಿದ ಆರೋಪಗಳು ಸಾಮಾನ್ಯ ಆರೋಪಗಳಲ್ಲ. ಯಾವುದೇ ಸಂವೇದನಾಶೀಲ ವ್ಯಕ್ತಿಯ ಹೃದಯ ಕಂಪಿಸಬೇಕು, ಯಾವುದೇ ದೇಶಭಕ್ತನು ತಲೆಬಾಗಬೇಕು, ಅಂತಹ ಆರೋಪಗಳವು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಇಂದಿನಿಂದಲ್ಲ, ಸುಮಾರು 10 ವರ್ಷಗಳಿಂದ ನಡೆಯುತ್ತಿದೆ. ಕೇವಲ ಒಬ್ಬ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿಲ್ಲ, ಕುಸ್ತಿ ಫೆಡರೇಷನ್‌ನ ಅನೇಕ ಕೋಚ್‌ಗಳೂ ಶಾಮೀಲಾಗಿದ್ದಾರೆ ಎಂದು ಆರೋಪಗಳಿವೆ. ಈ ದೌರ್ಜನ್ಯದ ಬಲಿಪಶು ಆದವರಲ್ಲಿ ಅಪ್ರಾಪ್ತ ಬಾಲಕಿಯರೂ ಇದ್ದಾರೆ ಮತ್ತು ಈ ಆರೋಪ ಹೊರಿಸಿದ್ದು ಕೇವಲ ಒಬ್ಬ ಮಹಿಳೆ ಅಲ್ಲ, ಅನೇಕ ಮಹಿಳೆಯರು ಆರೋಪಗಳನ್ನು ಮಾಡಿದ್ದಾರೆ. ಆರೋಪದ ಗಂಭೀರತೆಯನ್ನು ಖುದ್ದು ಸುಪ್ರೀಂಕೋರ್ಟ್ ಸ್ವೀಕರಿಸಿದೆ. ಇದಿಷ್ಟೇ ಅಲ್ಲದೆ, ಎರಡು ವರ್ಷಗಳ ಮುಂಚೆಯೇ ಸಾಕ್ಷಿ ಮಲಿಕ್ಪ್ರಧಾನಮಂತ್ರಿಗೆ ನೇರವಾಗಿ  ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೂರನ್ನು ನೀಡಿದ್ದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದು ಮೊದ ಆರೋಪವೇನೂ ಅಲ್ಲ. ಆರು ಬಾರಿ ಲೋಕಸಭೆಯ ಸದಸ್ಯನಾಗಿರುವ ಬ್ರಿಜ್ ಭೂಷಣ್‌ನ ಚುನಾವಣಾ ಅಫಿಡವಿಟ್ ಆತನ ಅಪರಾಧದ ದಾಖಲೆಯ ಕಥೆ ಬಿಚ್ಚಿಡುತ್ತದೆ. ಕಳೆದ ಲೋಕಸಭೆ ಚುನಾವಣೆಗಳಲ್ಲಿ ಅವನ ಅಫಿಡವಿಟ್‌ನಲ್ಲಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ನಾಲ್ಕು ಅಪರಾಧದ ವಿಷಯಗಳ ಉಲ್ಲೇಖವಿದೆ. ಕೊಲೆಯ ಇನ್ನೊಂದು ಪ್ರಕರಣದಲ್ಲಿ ಆತನನ್ನು ಸಾಕ್ಷ್ಯದ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್

ಸಂಸದ ಮಹಾಶಯರು ಖುದ್ದು ತಮ್ಮ ಅಪರಾಧಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ವರ್ಷ ಲಲ್ಲನ್‌ಟಾಪ್‌ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಅವರೇ ಹೇಳಿದ್ದು: ’ನನ್ನ ಜೀವನದಲ್ಲಿ ನನ್ನ ಕೈಯಿಂದ ಒಂದು ಕೊಲೆಯಾಗಿದೆ, ಜನರು ಏನೇ ಹೇಳಲಿ, ನಾನು ಒಂದು ಕೊಲೆ ಮಾಡಿದ್ದೇನೆ..’ ಎಂದು; ಆದರೆ ಆ ಕೊಲೆಯ ಪ್ರಕರಣದಲ್ಲಿ ಈತನ ಮೇಲೆ ವಿಚಾರಣೆಯೇ ನಡೆದಿಲ್ಲ, ಇದರ ಯಾವ ದಾಖಲೆಯೂ ಇಲ್ಲ. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೋಂಡಾದಿಂದ ಬಿಜೆಪಿ ಈತನ ಬದಲು ಘನಷ್ಯಾಮ್ ಶುಕ್ಲರನ್ನು ಅಭ್ಯರ್ಥಿಯನ್ನಾಗಿ ಮಾಡಿದಾಗ ಮತದಾನದ ದಿನದಂದು ಒಂದು ದುರ್ಘಟನೆಯಲ್ಲಿ ಶುಕ್ಲ ಅವರು ನಿಧನರಾದರು. ಈ ಸಾವಿನ ಹಿಂದೆ ಬ್ರಿಜ್ ಭೂಷಣ್‌ನ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದು ಬೇರೆ ಯಾರೂ ಅಲ್ಲ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ. ಈ ವಿಷಯವನ್ನು ಬಹಿರಂಗಪಡಿಸಿದ್ದು ಬೇರೆ ಯಾರೂ ಅಲ್ಲ, ಖುದ್ದು ಬ್ರಿಜ್ ಭೂಷಣ್ ’ದಿ ಸ್ಕ್ರಾಲ್’ಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಪ್ರಶ್ನೆ ಏನೆಂದರೆ, ಇಂತಹ ವ್ಯಕ್ತಿಗೆ ಪ್ರಧಾನಮಂತ್ರಿಗಳ ರಕ್ಷಣೆ ಹೇಗೆ ಪ್ರಾಪ್ತಿಯಾಯಿತು? ಪ್ರಶ್ನೆಯ ಆಳಕ್ಕೆ ಹೋದರೆ, ನಿಮಗೆ ಸಿಗುವುದೇನೆಂದರೆ, ಬ್ರಿಜ್ ಭೂಷಣ್ ಮಾತ್ರ ಒಂದು ಅಪವಾದವೇನಲ್ಲ ಎಂಬ ಕಟುವಾಸ್ತವ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳಿರುವ ಬಿಜೆಪಿಯ ನಾಯಕರ ಒಂದು ದೀರ್ಘ ಪಟ್ಟಿಯನ್ನೇ ಮಾಡಬಹುದು, ಆದರೆ ಬಿಜೆಪಿ ಅಥವಾ ಪ್ರಧಾನಮಂತ್ರಿ ಮೂಲಕ ಅವರಲ್ಲಿ ಬಹುತೇಕರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂಬುದೂ ಸತ್ಯ.

ಈ ಪಟ್ಟಿಯಲ್ಲಿ ಕುಲದೀಪ್ ಸೆಂಗರ್, ಚಿನ್ಮಯಾನಂದ ಸ್ವಾಮಿ, ಸಾಕ್ಷಿ ಮಹಾರಾಜ್, ಎಂ.ಜೆ ಅಕ್ಬರ್, ಉಮೇಶ್ ಅಗರ್ವಾಲ್, ಬರ್ನಾರ್ಡ್ ಮರಾಕ್ ಹಾಗೂ ಸಂದೀಪ್ ಸಿಂಗ್ ಅವರುಗಳ ಹೆಸರು ಇರಹುದು. ಅತ್ತ ತಥಾಕಥಿತ ಸ್ವಘೋಷಿತ ದೇವಮಾನವರಾದ ಬಾಬಾ ರಾಮ ರಹೀಮ್ ಮತ್ತು ಆಸಾರಾಮ್ ನಂತವರು ಬಿಜೆಪಿಗೆ ನಿಕಟವಾಗಿದ್ದರು ಎಂಬ ಕಟುಸತ್ಯ ಎಲ್ಲರಿಗೂ ತಿಳಿದಿದ್ದೇ ಇದೆ.

ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಹಲ್ಲೆ: ‘ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ಕೊಲ್ಲಬಹುದು’ ಎಂದು ಕಣ್ಣೀರಿಟ್ಟ ವಿನೇಶ್ ಫೋಗಟ್

ಹಿಂದಿನ ಕೆಲವು ವರ್ಷಗಳಲ್ಲಿ, ನಮ್ಮ ಪ್ರಧಾನಮಂತ್ರಿಯವರ ವಿವಿಧ ಅಧಿಕಾರಾವಧಿಯಲ್ಲಿ ಹಾಥರಸ್, ಕಠುವಾ ಅಥವಾ ಬಿಲ್ಕಿಸ್ ಬಾನೋರಂತಹ ಮಹಿಳೆಯರ ವಿರುದ್ಧ ಬಲಾತ್ಕಾರ ಅಥವಾ ಶೋಷಣೆಯ (ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ಸೇರಿ) ಪ್ರಮುಖ ಘಟನೆಗಳ ಬಗ್ಗೆಯೂ ಪ್ರಧಾನಮಂತ್ರಿಗಳು ವಿಚಿತ್ರವಾದ ಮೌನ ವಹಿಸಿದ್ದಾರೆ.

ಈ ಪ್ರಶ್ನೆ ಹೊಸದಲ್ಲ. ಕೇಂದ್ರೀಯ ಗೃಹ ರಾಜ್ಯ ಸಚಿವ ಅಜಯ್ ಮಿಶ್ರ ಟೇನಿಯ ಬಗ್ಗೆಯೂ ರೈತರು ಇದೇ ಪ್ರಶ್ನೆಯನ್ನು ಕೇಳಿದ್ದರು. ಹಾಡುಹಗಲೇ ರೈತರನ್ನು ಕೊಂದ ಆರೋಪಿಯ ತಂದೆ ಹಾಗೂ ಆ ಹತ್ಯಾಕಾಂಡದ ಪಿತೂರಿಯ ಪ್ರಮುಖ ಆರೋಪಿ ಅಜಯ್ ಮಿಶ್ರ ಟೇನಿ ಇಂದಿಗೂ ಮಂತ್ರಿಮಂಡಲದಲ್ಲಿ ಏಕೆ ಇದ್ದಾರೆ? ಇಂದು ಅದೇ ಪ್ರಶ್ನೆ ಬ್ರಿಜ್ ಭೂಷಣ್ ಸಿಂಗ್ ಬಗ್ಗೆ ಎತ್ತಲಾಗಿದೆ. ಬೇಟಿ ಬಚಾವೊ ಎಂಬ ಘೋಷಣೆ ನೀಡಿದ ಪ್ರಧಾನಮಂತ್ರಿ, ಅಪ್ರಾಪ್ತ ಬಾಲಕಿಯ ಮೇಲೆ ಆದ ಲೈಂಗಿಕ ದೌರ್ಜನ್ಯದ ಆರೋಪ ಬಂದ ಮೇಲೂ ಬ್ರಿಜ್ ಭೂಷಣ್‌ಗೆ ಅಭಯಹಸ್ತ ಏಕೆ ನೀಡಿದ್ದಾರೆ? ಈ ಆಟಗಾರರನ್ನು ಭಾರತದ ಹೆಮ್ಮೆ ಎನ್ನುವ ಮೋದೀಜಿ ಬ್ರಿಜ್ ಭೂಷಣ್ ಶರಣ್ ಸಿಂಗ್‌ನನ್ನು ಕುಸ್ತಿ ಸಂಘದ ಅಧ್ಯಕ್ಷ ಪದದಿಂದ ತೆಗೆದುಹಾಕುವ ಸಾಮಾನ್ಯ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿದ್ದಾರೆ? ಈ ವರ್ಷ ಜನವರಿಯಲ್ಲಿ ಈ ಹಗರಣ ಸಾರ್ವಜನಿಕ ಆದ ಮೇಲೂ ಹಾಗೂ ಆಟಗಾರರಿಗೆ ಸೂಕ್ತ ಕ್ರಮ ಆಶ್ವಾಸನೆ ನೀಡಿದ ಮೇಲೂ ಯಾವುದೇ ಕ್ರಮ ಯಾಕೆ ಕೈಗೊಳ್ಳಲಾಗಲಿಲ್ಲ?

ನರೇಂದ್ರ ಮೋದಿ

ಈ ಪ್ರಶ್ನೆಗೆ ಎರಡು ಉತ್ತರಗಳು ಸಾಧ್ಯ. ಒಂದೋ ರಾಜಕೀಯ ಅನಿವಾರ್ಯತೆಯ ವಿಷಯವಿದೆ ಅಥವಾ ನೈತಿಕ ದೌರ್ಬಲ್ಯದ ವಿಷಯ. ಲೈಂಗಿಕ ದೌರ್ಜನ್ಯದ ಈ ಎಲ್ಲ ಆರೋಪಿಗಳು ತಮ್ಮ ತಮ್ಮ ಪ್ರದೇಶದ ಪ್ರಬಲ ನಾಯಕರಾಗಿದ್ದಾರೆ ಹಾಗೂ ಕೆಲವು ಜಾತಿಗಳ ಮತಗಳಿಗೆ ಗುತ್ತಿಗೆದಾರರಾಗಿದ್ದಾರೆ. ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದರ ಅರ್ಥ, ಬಿಜೆಪಿಯ ವೋಟ್ ಬ್ಯಾಂಕ್‌ನಲ್ಲಿ ಆ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಒಂದು ವೇಳೆ ಇದೇ ಕಾರಣವಾಗಿದ್ದರೆ, ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: ದೇಶದ ’ಎಲ್ಲಕ್ಕಿಂತ ಜನಪ್ರಿಯ ಮತ್ತು ಪ್ರಬಲ’ ನಾಯಕ ಕೆಲವು ಸ್ಥಳೀಯ ಪ್ರಭಾವಶಾಲಿ ನಾಯಕರ ಎದುರಿಗೆ ಇಷ್ಟೊಂದು ದೈನೇಸಿಯಾಗಿದ್ದಾರೆಯೇ? ಅಷ್ಟಕ್ಕೂ ಬ್ರಿಜ್ ಭೂಷಣ್ ತಾನು ಬಾಯಿ ಬಿಚ್ಚಿದರೆ ಸುನಾಮಿ ಬಂದುಬಿಡುತ್ತೆ ಎಂದು ಯಾವ ಆಧಾರದ ಮೇಲೆ ಬೆದರಿಕೆ ಹಾಕುತ್ತಾನೆ? ಅನೇಕ ದೊಡ್ಡದೊಡ್ಡ ನಾಯಕರನ್ನು ಅಂಚಿಗೆ ತಳ್ಳಿದ ನರೇಂದ್ರ ಮೋದಿ, ಈ ಅರೋಪಿತ ನಾಯಕನ ಎದುರು ಯಾಕೆ ಅಸಹಾಯಕರಾಗಿದ್ದಾರೆ? ಹಾಗೂ ಒಂದು ವೇಳೆ ಅಸಹಾಯಕರಾಗಿದ್ದಲ್ಲಿ, ಯಾವ ಬಾಯಿಂದ ರಾಷ್ಟ್ರದ ಹೆಮ್ಮೆ ಮತ್ತು ಬೇಟಿ ಬಚಾವೊ ಮಾತುಗಳನ್ನಾಡುತ್ತಾರೆ?

ಮತ್ತೊಂದು ಕೋನದಲ್ಲಿ ಯೋಚಿಸುವುದಾದರೆ, ಮಹಿಳೆಯರ ವಿರುದ್ಧ ಆಗುವ ಈ ಅಪರಾಧಗಳನ್ನು ಪ್ರಧಾನಮಂತ್ರಿ ಹಗುರವಾಗಿ ಪರಿಗಣಿಸುತ್ತಾರೆಯೇ? ಅಥವಾ ಪ್ರಧಾನಮಂತ್ರಿಯೂ, ಹೆಚ್ಚೆಚ್ಚು ಮಹಿಳೆಯರೊಂದಿಗೆ ಆಗುವ ಕಿರುಕುಳವನ್ನು ನೋಡಿ ನಕ್ಕು ತಮಾಷೆ ಮಾಡುವ, ಕೌಟುಂಬಿಕ ಹಿಂಸೆಯ ವಾಸ್ತವವನ್ನು ನಿರಾಕರಿಸುವ ಮತ್ತು ಬಲಾತ್ಕಾರದಂತಹ ಘೋರ ಅಪರಾಧಗಳ ಬಗ್ಗೆ ’ಇವೆಲ್ಲ ಮಾಮೂಲಿ’ ಎಂಬ ನಿಲುವನ್ನು ತೆಗೆದುಕೊಳ್ಳುವ ಪುರುಷ ಅಹಂಕಾರದ ಬಲಿಪಶುಗಳಾಗಿದ್ದಾರೆಯೇ? ಪ್ರಧಾನಮಂತ್ರಿಗಳ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ ಹಾಗೂ ಇದು ಸತ್ಯ ಅಲ್ಲ ಎಂದೇ ನಾವು ಆಶಿಸಬೇಕಿದೆ. ಆದರೆ, ಸಾಕ್ಷಿ ಮಲಿಕ್‌ಳ ಕಣ್ಣೀರು, ಬ್ರಿಜ್ ಭೂಷಣ್‌ನ ಅಹಂಕಾರದ ಠೀವಿ ಮತ್ತು ಪ್ರಧಾನಮಂತ್ರಿಯ ಮೌನವನ್ನು ನೋಡುವ ಕೋಟ್ಯಂತರ ಮಹಿಳೆಯರಿಗೆ ಹೀಗೇ ಅನಿಸಬಹುದಲ್ಲವೇ? ಎಲ್ಲಿಯವರೆಗೆ ಪ್ರಧಾನಮಂತ್ರಿ ತಮ್ಮ ಬಾಯಿ ಬಿಚ್ಚುವುದಿಲ್ಲವೋ, ಅಲ್ಲಿಯವರೆಗೆ ಈ ಪ್ರಶ್ನೆ ಎಲ್ಲರ ಕಣ್ಣುಮುಂದೆಯೇ ಇರಲಿದೆ.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳು ಭಾರತದ ’ಬೇಟಿ’ಗಳಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...