Homeಕರ್ನಾಟಕಗದಗ ಪ್ರವಾಹ ಭೀಕರವಲ್ಲ: ಬಿಜೆಪಿ ಮತ್ತು ಮಾಜಿ ಸಚಿವರ ಮುಠ್ಠಾಳತನ ಭೀಕರ!

ಗದಗ ಪ್ರವಾಹ ಭೀಕರವಲ್ಲ: ಬಿಜೆಪಿ ಮತ್ತು ಮಾಜಿ ಸಚಿವರ ಮುಠ್ಠಾಳತನ ಭೀಕರ!

- Advertisement -
- Advertisement -

(ಇಂಟ್ರೋ: ಶ್ರವಣಕುಮಾರ್ ಹಡಗಲಿ ಮತ್ತು ರಫೀಕ್ ಕೊಣ್ಣೂರು- ಗೌರಿ ಲಂಕೇಶ್ ರವರ ಅಭಿಮಾನಿಗಳಾದ ಈ ಇಬ್ಬರು ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕುಗಳ ಪ್ರವಾಹಪೀಡಿತ ಊರುಗಳಿಗೆ ಭೇಟಿ ಕೊಟ್ಟು ಫೋಟೊ ಮತ್ತು ವಿಡಿಯೋ ಒದಗಿಸಿದ್ದಾರೆ. ಅವರಿಗೆ ನಮ್ಮ ತಂಡದಿಂದ ಧನ್ಯವಾದಗಳು)

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಹೋಲಿಸಿದರೆ ಮಳೆ-ಪ್ರವಾಹದ ಕಾರಣಕ್ಕೆ ಗದಗ ಜಿಲ್ಲೆಗೇನೂ ದೊಡ್ಡ ನಷ್ಟ (ಸಾಪೇಕ್ಷವಾಗಿ) ಸಂಭವಿಸಿಲ್ಲ. ಧಾರವಾಡ-ಹುಬ್ಬಳ್ಳಿ ಕಡೆ ಹದಿನೈದು ದಿನಗಟ್ಟಲೇ ಮಳೆ ಹಿಡಿಯಿತೆಂದರೆ ಬೆಣ್ಣೆಹಳ್ಳ ಭರಪೂರ ಹರಿಯುತ್ತದೆ, ನವಿಲುತೀರ್ಥದಿಂದ ನೀರು ಬಿಡುಗಡೆ ಹೆಚ್ಚಾದಂತೆ ಮಲಪ್ರಭೆ ಉಕ್ಕತೊಡಗುತ್ತಾಳೆ.

ಮಹಾರಾಷ್ಟ್ರದ ಕೋಯ್ನಾದಿಂದ ಯಾವಾಗ ಎಷ್ಟು ಪ್ರಮಾಣದ ನೀರು ಬಿಡುತ್ತಾರೋ ಎಂಬುದರ ಮಾಹಿತಿ ಅಸಮರ್ಪಕವಾಗಿರುವುದರಿಂದ ಬೆಳಗಾವಿಯ ಜಿಲ್ಲಾಡಳಿತ ತತ್ತರಿಸಿ ಹೋಗುತ್ತದೆ. ಆದರೆ, ಗದಗಿಗೆ ಮೊದಲೇ ಮುನ್ಸೂಚನೆ ಸಿಗುವುದರಿಂದ ಇಲ್ಲಿ ಮೊದಲೇ ನಿಗಾ ವಹಿಸಲು ಸಾಧ್ಯ. ಈ ಸಲ ಜಿಲ್ಲಾಡಳಿತ ಮೊದಲೇ ಎಚ್ಚೆತ್ತ ಪರಿಣಾಮವಾಗಿ ಅಂತಹ ಹಾನಿಯೇನೂ ಸಂಭವಿಸಿಲ್ಲ.

ಎಲ್ಲಿ ಜನಪ್ರತಿನಿಧಿಗಳು?
ಅಂಡು ಸುಟ್ಟ ಬೆಕ್ಕಿನಂತೆ ಈಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಲೆ ತುಂಬ ಸಂಪುಟ ವಿಸ್ತರಣೆಯನ್ನೆ ತುಂಬಿಕೊಂಡ ಪರಿಣಾಮ ಅವರ ಆಗಮನದಿಂದ ಅಧಿಕಾರಿಗಳ ಮೇಲೆ ಯಾವ ಪರಿಣಾಮವೂ ಆಗಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರಿಗೆ ಪ್ರವಾಹ ದುರಂತ ತಾಕಿಯೇ ಇಲ್ಲ. ಬಿಜೆಪಿಯ ಶಾಸಕರಂತೂ ಸಚಿವಗಿರಿ ಪಡೆಯುವ ಉಮೇದಿನಲ್ಲೇ ಇದ್ದಾರೆ.

ಮಳೆ ಮತ್ತು ಪ್ರವಾಹ ಕೇವಲ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಗದಗ ಜಿಲ್ಲೆಗಳಿಗೆ ಅಷ್ಟೇ ಸೀಮಿತವಾಗಿಲ್ಲ. ಕೊಡಗು ಮತ್ತು ಕರಾವಳಿಯ ಮೂರು ಜಿಲ್ಲೆಗಳೂ ಇದರಿಂದ ತೊಂದರೆಗೆ ಸಿಲುಕಿವೆ. ಅಧಿಕೃತ ಅಂಕಿಅಂಶದ ಪ್ರಕಾರವೇ ರಾಜ್ಯದ 15 ಜಿಲ್ಲೆಗಳು ಮಳೆ ಮತ್ತು ಪ್ರವಾಹದ ಕಾರಣದಿಂದ ತತ್ತರಿಸಿ ಹೋಗಿವೆ. 15 ಜಿಲ್ಲೆಗಳು ಸಂಕಟದಲ್ಲಿ ಇರುವಾಘ ರಾಜ್ಯದ 28 ಸಂಸದರು ಎಲ್ಲ ಮುಚ್ಚಿಕೊಂಡು ಸುಮ್ಮನಿದ್ದಾರೆ. ಅದರಲ್ಲೂ ಬಿಜೆಪಿಯ 25 ಸಂಸದರು ಈ ಬಗ್ಗೆ ಮಾತೇ ಆಡಿಲ್ಲ.
ನಿನ್ನೆ ಬಾಯಿ ಬಿಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ: ರಾಜ್ಯದಿಂದ ಅನುದಾನ ಕೋರಿ ಕೇಂದ್ರಕ್ಕೆ ಮನವಿಯೇ ಬಂದಿಲ್ಲ ಎಂದು…..

ಶಿವನೇ, sorry, ರಾಘವೇಂದ್ರ ಸ್ವಾಮಿಯೇ, ಈ ಜೋಶಿ ಎಂಬ ಮನೆಹಾಳನಿಗೆ ಮೊದಲು ಬುದ್ಧಿ ಕೊಡು. ತಮ್ಮದೇ ಪಕ್ಷದ ರಾಜ್ಯ ಸರ್ಕಾರ ವಿಶೇಷ ನೆರವಿಗೆ ಮನವಿ ಸಲ್ಲಿಸಬೇಕಂತೆ! ಅಲ್ಲಿವರೆಗೆ ಈ ಜೋಶಿ ಸಾಹೇಬರು ಕೇಂದ್ರದ ಜೊತೆ ಮಾತಾಡಲ್ಲವಂತೆ!
ಅಲ್ರೀ, ಈ ಜೋಶಿಯೂ ಕೇಂದ್ರ ಸರ್ಕಾರದ ಭಾಗವೇ ಅಲ್ಲವೇ? ಮೂರು ದಿನದ ಹಿಂದೆ ಬೆಳಗಾವಿ ತಲುಪುವ ಮೊದಲು ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಬಗ್ಗೆ ಅನುಮತಿ ಪಡೆಯಲು ಗುಲಾಮನ ತರಹ ಓಡಿ ಹೋಗಿದ್ದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವರಿಗೆ ವಿಶೇಷ ನೆರವಿಗಾಗಿ ಮನವಿ ಮಾಡಬಹುದಿತ್ತಲ್ಲ? ಕಾಶ್ಮೀರದ ‘ಅಭಿವೃದ್ಧಿ’ಗಾಗಿ ಅಲ್ಲಿ ಸಂಸತ್ತಿನಲ್ಲಿ ವೋಟಿಂಗ್ ಮಾಡುವುದು ಮುಗಿದ ನಂತರವಾದರೂ ನಮ್ಮ ಸಂಸದರು ಕರ್ನಾಟಕದ ಸಂಕಷ್ಟದ ಬಗ್ಗೆ ಯೋಚಿಸಬೇಕಿತ್ತಲ್ಲವಾ? ಈ ಹೊತ್ತಿನಲ್ಲೂ ಕೇಂದ್ರ ನೆರವು ಘೋಷಿಸಿಲ್ಲ, ರಾಜ್ಯ ಸರ್ಕಾರ ಕೇಳಿಯೇ ಇಲ್ಲ…

ಸರ್ಕಾರವೇ ಪ್ರವಾಹದಲ್ಲಿ ಸಿಕ್ಕಾಗ…
ಇಲ್ಲಿ ಸರ್ಕಾರವೇ ಇಲ್ಲ ಎಂಬ ಭಾವನೆ ಜನರಿಗೆ ಬರತೊಡಗಿದೆ. ಏಕೆಂದರೆ ಆಪರೇಷನ್ ಕಮಲ ಎಂಬ ಅಸಹ್ಯ ಹಣದ ಪ್ರವಾಹ ಹರಿಸಿ ಸರ್ಕಾರ ರಚನೆ ಮಾಡಿದ ಮೇಲೆ, ಮುಖ್ಯಮಂತ್ರಿ ಬಿಟ್ಟರೆ ಬೇರಾವ ಸಚಿವರೂ ಇಲ್ಲವೇ ಇಲ್ಲ. ಹೀಗಾಗಿ ರಾಜ್ಯ ಬಿಜೆಪಿಯೇ ಈಗ ಅಧಿಕಾರ ಮತ್ತು ಕೇಂದ್ರದ ಅಡಿ ಗುಲಾಮಗಿರಿ ಎಂಬ ಪ್ರವಾಹದಲ್ಲಿ ಮುಳುಗಿದೆ. ಹೀಗಾಗಿ, ಸಚಿವ ಸ್ಥಾನ ಆಕಾಂಕ್ಷಿಗಳಾದ ಜಗದೀಶ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಇತ್ಯಾದಿಗಳಿಗೆ ಪ್ರವಾಹದ ಸಂಕಟ ತಟ್ಟಿಯೇ ಇಲ್ಲ.

ಗದಗ: ಶಾಶ್ವತ ಪರಿಹಾರವೇ ಇಲ್ಲವೇ?
2008-2009ರ ಪ್ರವಾಹದಲ್ಲಿ ಬಾಧೆಗೆ ಒಳಗಾದ ಗ್ರಾಮಗಳೇ ಈಗಲೂ ತೊಂದರೆಗೆ ಒಳಗಾಗಿವೆ. ಗದಗ ಜಿಲ್ಲೆಯಲ್ಲಿ ಪ್ರವಾಹ ಬಂದರೆ ನರಗುಂದ ಮತ್ತು ರೋಣ ತಾಲೂಕುಗಳ ನೂರಾರು ಗ್ರಾಮಗಳು ಸಮಸ್ಯೆಗೆ ಸಿಲುಕುತ್ತವೆ. ಬೆಣ್ಣೆಹಳ್ಳ ಮತ್ತು ಮಲಪ್ರಭೆಯ ಹರಿವು ಆರ್ಭಟಿಸಿಬಿಟ್ಟರೆ ಈ ನೂರಾರು ಹಳ್ಳಿಗಳ ಜನರ ಬದುಕು ಎಕ್ಕುಟ್ಟಿ ಹೋಗುತ್ತದೆ.

2008-09ರ ಭೀಕರ ಪ್ರವಾಹದ ನಂತರ ಮೂವರು ಇದೇ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರ್ಯಾರೂ ಈ ಹಳ್ಳಿಗಳ ಶಾಶ್ವತ ಪುನರ್ವಸತಿಗೆ ಎಂದೂ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ.

ಯಡಿಯೂರಪ್ಪ ಕೃಪೆಯಿಂದ ಸಚಿವರಾಗಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲ, ಜಗದೀಶ ಶೆಟ್ಟರ್ ಆಶಿರ್ವಾದದಿಂದ ಸಚಿವರಾಗಿದ್ದ ರೋಣ ಶಾಸಕ ಕಳಕಪ್ಪ ಬಂಡಿ ತಮ್ಮ ಆ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಪ್ರವಾಹ ಬಂದರೆ ಇವರಿಬ್ಬರ ತಾಲೂಕುಗಳೇ ತೊಂದರೆಗೆ ಸಿಲುಕುವುದು. ಆದರೆ ಈ ಇಬ್ಬರೂ ಒಂದು ಶಾಶ್ವತ ಪರಿಹಾರಕ್ಕೆ ಯತ್ನಿಸಲೇ ಇಲ್ಲ.

ಈಗ ಬನ್ನಿ, 2013-18ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಎಚ್.ಕೆ. ಪಾಟೀಲರು ಕಳಕಪ್ಪ ಬಂಡಿ ಮತ್ತು ಸಿ.ಸಿ. ಪಾಟಲರಂತೆ ಪಂಡರಾಪಟ್ಟಿ ಶಾಸಕ ಎಂದು ಅನಿಸಿಕೊಂಡವರಲ್ಲ. ರಾಜ್ಯ ರಾಜಕಾರಣದಲ್ಲಿ ಎಚ್‍ಕೆ ಅವರಿಗೆ ಒಂದು ಗೌರವದ ಸ್ಥಾನವಿದೆ.

ಆದರೆ, ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ನೆರೆ-ಪ್ರವಾಹ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ರೂಪಿಸಲೇ ಇಲ್ಲ. ಅವರು ಒಂದು ಪರಿಹಾರ ಹುಡುಕಿ ಆ ಪ್ರಸ್ತಾಪವನ್ನು ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದರೂ ಸಾಕಿತ್ತು, ತಕ್ಷಣ ಅನುಮೋದನೆ ಸಿಗುತ್ತಿತ್ತು. ಗದಗಿಗೆ ನಿತ್ಯ ನೀರು ಒದಗಿಸುವ, ಗದಗ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಮೇಲ್ಮೈ ನೀರು (ಸರ್ಫೆಸ್ ವಾಟರ್, ನದಿ ನೀರು) ಒದಗಿಸುವ ದೊಡ್ಡ ಯೋಜನೆಗಳಿಗೆ ಎಲ್ಲ ನೆರವು ನೀಡಿದ ಸಿದ್ದರಾಮಯ್ಯ ಪ್ರವಾಹ ಪರಿಹಾರದ ಯೋಜನೆ ರೂಪಿಸಿದ್ದರೆ ಖಂಡಿತ ಇಲ್ಲ ಅನ್ನುತ್ತಿರಲಿಲ್ಲ.


ಹೀಗಾಗಿ, ಬಂಡಿ, ಸಿಸಿ ಪಾಟೀಲರಂತಹ ತರಹೇವಾರಿ ರಾಜಕಾರಣಿಗಲನ್ನು ಬಿಟ್ಟು ಬಿಡೋಣ. ಎಚ್. ಕೆ. ಪಾಟೀಲರಂತಹ ಹಿರಿಯ, ಗೌರವಾನ್ವಿತ ರಾಜಕಾರಣಿಯನ್ನೇ ಈಗ ನಾವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲೇಬೇಕಿದೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...