Homeಮುಖಪುಟಬದಲಾಗುತ್ತಿರುವ ಸಮಯದಲ್ಲಿ ಯಾವ ಕಥೆ ಹೇಳಬೇಕು?

ಬದಲಾಗುತ್ತಿರುವ ಸಮಯದಲ್ಲಿ ಯಾವ ಕಥೆ ಹೇಳಬೇಕು?

- Advertisement -
- Advertisement -

| ರಾಜಶೇಖರ್ ಅಕ್ಕಿ |

‘ಇಂದಿನ ಮಾಡರ್ನ್ ಹುಡುಗಿಯರು ತುಂಬಾ ಸ್ಮಾರ್ಟ್, ಎಷ್ಟು ಫಾಸ್ಟ್ ಆಗಿರ್ತಾರೆ’, ‘ಇಂದಿನ ಮಕ್ಕಳನ್ನು ನೋಡಿ, ಅವರಿಗೆ ಎಲ್ಲವೂ ತಿಳಿಯುತ್ತೆ; ಆ ವಯಸ್ಸಿನಲ್ಲಿ ನಮಗೇನಾದರೂ ತಿಳೀತಿತ್ತಾ?’, ‘ಇಂದಿನ ಯುವಕರಿಗೆ ಜವಾಬ್ದಾರಿ ಎನ್ನುವುದೇ ಇಲ್ಲ, ತಾವಾಯಿತು, ತಮ್ಮ ಜಿಮ್ ಆಯಿತು, ತಮ್ಮ ಮೊಬೈಲ್ ಫೋನ್ ಆಯಿತು, ಬೇರೇನೂ ಮಾಡುವುದಿಲ್ಲ’, ‘ಮುಂಚೆ ಸಂಬಂಧಗಳು ಎಷ್ಟು ಚೆನ್ನಾಗಿದ್ದವು, ಎಷ್ಟು ನಂಬಿಕೆ ಇತ್ತು, ಎಲ್ಲಾ ಹದಗೆಟ್ಟು ಹೋಗ್ತಿವೆ.’

ಇವೆಲ್ಲ ನಾವು ಸಾಮಾನ್ಯವಾಗಿ ಕೇಳುವ ಮಾತುಗಳು. ಬದಲಾವಣೆ ಜಗತ್ತಿನ ನಿಯಮ. ಬದಲಾವಣೆಯನ್ನು ದಾಖಲಿಸುವುದು ಒಂದು ಮುಖ್ಯ ಕೆಲಸ. ಪ್ರಮುಖವಾಗಿ ಇತಿಹಾಸಕಾರರು ಮಾಡುವ ಈ ಕೆಲಸಕ್ಕೆ ಕಲಾವಿದರ ಕೊಡುಗೆಯೂ ಅಷ್ಟೇ ಮುಖ್ಯವಾಗಿದೆ (ಮುಖ್ಯವಾಗಿರಬೇಕು). ಬದಲಾವಣೆಯ ಸಮಯದಲ್ಲಿ ಯಾವ ಕಥೆ ಹೇಳಬೇಕು ಎನ್ನುವುದಕ್ಕೆ ಉತ್ತರ ಹುಡುಕುವ ಮುನ್ನ, ಈವರೆಗೆ ಆದ ಬದಲಾವಣೆಗಳನ್ನು ಗಮನಿಸುವ.

ಸುಮಾರು 13 ಸಾವಿರ ವರ್ಷಗಳ ಹಿಂದೆ ಕೃಷಿಯನ್ನು ಕಂಡುಹಿಡಿಯಲಾಯಿತಂತೆ. ಅದಕ್ಕಿಂತ ಮುಂಚೆ ಬೇಟೆಯಾಡಿ. ಅದನ್ನೇ ಸಂಗ್ರಹಿಸುವುದು ಒಂದೇ ಮನುಷ್ಯರ ಕಸುಬಾಗಿತ್ತು (hunter gatherers). ಕೃಷಿಯನ್ನು ಕಂಡುಹಿಡಿದ ಮೇಲೆ, ಅದನ್ನು ಸಂಗ್ರಹಿಸುವುದು, ಮಾರುವುದು ಕೊಳ್ಳುವುದು ಹೀಗೆಲ್ಲ ಶುರುವಾಗಿ ಅನೇಕ ಕಸುಬುಗಳು ಹುಟ್ಟಿಕೊಂಡವು. ಸಮಾಜ ಬದಲಾಗುತ್ತ ಬಂದಿತು. ಹೊಟ್ಟೆ ತುಂಬಿಸಿಕೊಳ್ಳುವುದೇ ಪ್ರಧಾನ ಕಸುಬು ಎನ್ನುವುದು ಇಲ್ಲವಾದೊಡನೇ ಇತರ ಕಸುಬುಗಳೊಂದಿಗೆ ಕಲೆ, ಕಲೆಯ ಇತರ ಮಾಧ್ಯಮಗಳೂ ಹುಟ್ಟಿಕೊಂಡವು. (ಈಜಿಪ್ಟಿನ ಪಿರಾಮಿಡ್‍ಗಳನ್ನು ಕಲಾಕೃತಿಯೆಂತಲೇ ಕರೆಯಬಹುದಲ್ಲವೇ?) ಮನುಷ್ಯರ ವಲಸೆ ಹೆಚ್ಚಾದಂತೆ, ಹೊಸ ಹೊಸ ನಾಗರಿಕತೆಗಳು ಹುಟ್ಟಿಕೊಂಡವು, ಯುದ್ಧಗಳಾದವು, ಸಾಮ್ರಾಜ್ಯಗಳನ್ನು ಕಟ್ಟಲಾಯಿತು. ಆ 13 ಸಾವಿರ ವರ್ಷಗಳ ಹಿಂದೆ ಲಕ್ಷಾಂತರ ವರ್ಷಗಳವರೆಗೆ ಆದ ಬದಲಾವಣೆ ಮತ್ತು ಕೃಷಿಯನ್ನು ಕಂಡುಹಿಡಿದ ನಂತರ ಆದ ಬದಲಾವಣೆಗಳನ್ನು ಹೋಲಿಸಿ ನೋಡಿದರೆ, ಈ 13 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳೆಂದೇ ಹೇಳಬೇಕಾಗುತ್ತದೆ.

ಕೈಗಾರಿಕಾ ಕ್ರಾಂತಿಯಿಂದಾಗಿ ಕಳೆದ ಎರಡು ಶತಕಗಳಿಂದ ಬದಲಾವಣೆಯು ತೀವ್ರಗತಿ ಪಡೆದುಕೊಂಡಿತು. ಹೊಸ ತಂತ್ರಜ್ಞಾನಗಳು ಬಂದವು, ಹೊಸ ನಾಗರಿಕತೆಗಳು ಹುಟ್ಟಿಕೊಂಡವು. ಮಾಹಿತಿ ತಂತ್ರಜ್ಞಾನ ಮತ್ತು ಜಾಗತೀಕರಣದಿಂದ ಕಳೆದ ಕೆಲವು ದಶಕಗಳಲ್ಲಿ ಆದ ಕ್ಷಿಪ್ರಬದಲಾವಣೆಯೂ ಸಮಾಜದಲ್ಲಿ ಅತ್ಯಂತ ಗಹನವಾದದ್ದೇ.

ಭಾರತವೂ ಈ ಎಲ್ಲ ಬದಲಾವಣೆಗೆ ಹೊರತಾಗಿಲ್ಲ. ಕೈಗಾರಿಕಾ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳ ಜನರನ್ನು ಇಡಿಯಾಗಿ ಬಾಧಿಸಿ, ಅವರ ಜೀವನಶೈಲಿಯು ಇಡಿಯಾಗಿಯೇ ಬದಲಾದರೆ, ಭಾರತದ ಬದಲಾವಣೆ ಹಂತಹಂತವಾಯಿತು (ಆಗುತ್ತಿದೆ) ಹಾಗೂ ದೇಶದ ಎಲ್ಲರನ್ನೂ ಈ ಬದಲಾವಣೆಗಳು ಸಮಾನವಾಗಿ ಬಾಧಿಸಲಿಲ್ಲ. ನಗರೀಕರಣವು ಅತ್ಯಂತ ವೇಗ ಗತಿಯಲ್ಲಿ ಆಗುತ್ತಿದ್ದರೂ, ಎಲ್ಲಾ ಜನರ ಜೀವನವೂ ಒಂದೇ ರೀತಿಯಲ್ಲಿ ಬದಲಾವಣೆ ಆಗದೇ ಇರುವುದು ಸ್ಪಷ್ಟ. ಈ ಬದಲಾವಣೆಗಳು ನಮ್ಮ ಸಂಬಂಧಗಳಲ್ಲೂ ಬದಲಾವಣೆ ತಂದಿದ್ದು ಸ್ಪಷ್ಟವಾಗಿದೆ. ಬದಲಾವಣೆಯ ಹಂತದಲ್ಲಿರುವ ಸಂಬಂಧಗಳನ್ನು ಅರ್ಥೈಸಿಕೊಳ್ಳುವದು ಅಷ್ಟು ಸುಲಭವಲ್ಲ. ಇಂತಹ ಬದಲಾವಣೆಯ ಸಮಯದಲ್ಲಿ ಆಗುವ ಒಂದು ದೊಡ್ಡ ತೊಡಕೆಂದರೆ, confirmation bias. ಅಂದರೆ, ನಾವು ಕಾಣುವ ಎಲ್ಲಾ ವಿದ್ಯಮಾನಗಳನ್ನು ನಾವು ಮುಂಚೆಯೇ ನಿರ್ಧಾರಕ್ಕೆ ಬಂದ ನಿರ್ಣಯಗಳಿಗೆ ಅನುಗುಣವಾಗಿ ನೋಡುವುದು; ನಾವು ನೋಡುವ ಎಲ್ಲಾ ಉದಾಹರಣೆಗಳು, ಸಾಕ್ಷ್ಯಗಳು ನಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸಿಗುತ್ತವೆ.

ಗ್ರಾಮೀಣ ಬದುಕಿನ ಕಥೆಗಳನ್ನು ಮತ್ತು ಬದಲಾವಣೆಯ ಸೋಂಕು ತಟ್ಟಿದರೂ ಹೆಚ್ಚಿನ ಬದಲಾವಣೆ ಆಗದೇ ಇರುವವರ ಕಥೆ ಹೇಳಿದಾಗ ಅವುಗಳು ಹಳತಾದ್ದವು ಅನಿಸುತ್ತವೆ; ಅದೇ ಆಧುನಿಕ ಜಗತ್ತಿನ ಕಥೆಗಳನ್ನು ಹೇಳಿದಾಗ ಅವುಗಳನ್ನು ಅರ್ಥಮಾಡಿಕೊಂಡಿಲ್ಲ ಮತ್ತು ಆಧುನಿಕ ಜನರನ್ನು ಪೂರ್ವಗ್ರಹಪೀಡಿತ ದೃಷ್ಟಿಯಿಂದ ನೋಡಲಾಗಿದೆ ಹಾಗೂ ಹುರುಳಿಲ್ಲದವು ಎನಿಸುತ್ತವೆ. ಆದರೆ ಈ ಎರಡು ಜಗತ್ತುಗಳು ನಮ್ಮೊಡನೇ ಏಕಕಾಲಕ್ಕೆ ಇರುವುದೂ ಸತ್ಯ. ಈ ಕಾರಣದಿಂದಾಗಿ ಯಾವುದೇ ಕಥೆ ಬರೆಯುವ ಮುನ್ನ ಅಧ್ಯಯನವು ಮುಖ್ಯವಾಗುತ್ತದೆ.

ಕೆಲವರ್ಷಗಳ ಹಿಂದೆ ಸ್ನೇಹಿತನೊಬ್ಬ ಭಾರತದಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನದ ಪ್ರಕರಣಗಳ ಬಗ್ಗೆ ಒಂದು ಕಿರುಚಿತ್ರವನ್ನು ಮಾಡಿದ್ದ. ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನಗಳು ಆಗುತ್ತಿವೆ ಎಂದು ನಂಬಿದ್ದ ಆತ ಒಬ್ಬ ಯುವತಿಯು ವಿಚ್ಛೇದನ ಪಡೆಯುವುದಕ್ಕಾಗಿ ಒಬ್ಬ ವಕೀಲನ ಬಳಿ ಬರುತ್ತಾಳೆ. ಆ ವಕೀಲ ವಿಚ್ಛೇದನಕ್ಕೆ ಕಾರಣಗಳನ್ನು ಕೇಳಿ, ಅವಳು ನೀಡುವ ಕಾರಣ ಕ್ಷುಲ್ಲಕವಾಗಿದೆ ಹಾಗೂ ಈ ದಂಪತಿಗಳು ವಿಚ್ಛೇದನ ಪಡೆಯದೇ ಜೊತೆಗೇ ಇರಬೇಕೆಂದು ತೀರ್ಮಾನಿಸಿ, ವಿಚ್ಛೇದನದ ಪ್ರಕ್ರಿಯೆಯ ಕಾರಣ ಹೇಳಿ ಅವಳೊಂದಿಗೆ ಹಲವಾರು ಸಲ ಭೇಟಿಯಾಗುತ್ತಾನೆ. ವಕೀಲನೊಂದಿಗೆ ಸಮಾಲೋಚನೆಯಾದ ನಂತರ ಯುವತಿಯು ವಿಚ್ಛೇದನವನ್ನು ಪಡೆಯುವ ವಿಚಾರವನ್ನು ಕೈಬಿಟ್ಟು ತನ್ನ ಗಂಡನೊಂದಿಗೆ ವೈವಾಹಿಕ ಜೀವನ ಮುಂದುವರೆಸುತ್ತಾಳೆ.

ಮೇಲ್ನೋಟಕ್ಕೆ ಅವನು ಮಾಡಿದ್ದು ಅನೇಕರಿಗೆ ಸರಿಯೆನಿಸಬಹುದು (ಸರಿಯೆನಿಸಿದೆ ಕೂಡ, ಒಂದು ಚಿತ್ರಬರಹ ಕಾರ್ಯಾಗಾರದಲ್ಲಿ ಈ ಚಿತ್ರವನ್ನು ಪ್ರದರ್ಶನ ಮಾಡಲಾಗಿತ್ತು). ಹೇಗೂ ವಿಚ್ಛೇದನದ ಪ್ರಕರಣಗಳು ಹೆಚ್ಚುತ್ತಿವೆ, ಅದಕ್ಕೆ ಅನೇಕ ಕ್ಷುಲ್ಲಕವಾದ ಕಾರಣಗಳಿವೆ ಎಂದು ಪತ್ರಿಕೆಗಳಲ್ಲಿ ಓದಿದ್ದೂ ಇದೆ. ಆದರೆ ಇದು ನಿಜವಾ? ವಿಚ್ಛೇದನದ ಪ್ರಕರಣಗಳು ನಿಜಕ್ಕೂ ಹೆಚ್ಚಿವೆಯಾ? ಕ್ಷುಲ್ಲಕ ಕಾರಣಗಳಿಂದ ‘ಮಹಿಳೆಯರು’ ವಿಚ್ಛೇದನ ಪಡೆಯುತ್ತಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಭಾರತದಲ್ಲಿ ವಿಚ್ಛೇದನದ ದರ ಶೇ.2ಕ್ಕಿಂತ ಕಡಿಮೆ. (ಕಳೆದ ವರ್ಷದ ಇಪಿಡಬ್ಲು ವರದಿಯ ಪ್ರಕಾರ). ಕ್ಷುಲ್ಲಕ ಕಾರಣದಿಂದ ಯಾವ ಮಹಿಳೆಗೂ ವಿಚ್ಛೇದನ ಪಡೆಯಲು ಅಸಾಧ್ಯವೆಂದೇ ಹೇಳಬಹುದು. ಸಂಗಾತಿ ಎಂತಹವನೇ ಆಗಿರಲಿ ಅವನೊಂದಿಗೆ ಇರಲೇಬೇಕು ಅಥವಾ ಸಾಯಬೇಕು ಎನ್ನುವ ಪರಿಸ್ಥಿತಿ ಇನ್ನೂ ಇದೆ. ಇದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಸಿಗುತ್ತವೆ. ಆದರೆ ಇದೂ ಕನ್ಫರ್ಮೇಷನ್ ಬಯಾಸ್ ಅಲ್ಲ ಎಂದು ಹೇಗೆ ಹೇಳಬಲ್ಲೆವು?

ಮತ್ತೇ ಆ ತಪ್ಪನ್ನು ಮಾಡದಿರಲು, ಸರಿಯಾದ ಅಧ್ಯಯನದೊಂದಿಗೆ ನಾವು ಹೇಳುತ್ತಿರುವ ಪಾತ್ರಗಳನ್ನು ಕೂಲಂಕೂಷವಾಗಿ ಪರಿಶೀಲಿಸಬೇಕಿದೆ. ನಮ್ಮ ಪಾತ್ರಗಳು ಅಥವಾ ಪಾತ್ರಗಳಾಗಲಿರುವ ವ್ಯಕ್ತಿಗಳು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕಾಗುತ್ತದೆ. ಆಯಾ ಪಾತ್ರಗಳು ಅವರು ಮಾಡುವ ಕೆಲಸಗಳಿಗೆ ನಮಗೆ ಕಾರಣಗಳನ್ನು ನೀಡಲು ಸಾಧ್ಯವಾಗದೇ ಹೋಗಬಹದು, ಆಯಾ ಪಾತ್ರಗಳೇ ಕಾರಣಗಳನ್ನು ಅರಿತಿರದೇ ಇರಬಹುದು.

ಬಹುಶಃ ಇದೇ ಕಾರಣಕ್ಕೆ ಹಾಲಿವುಡ್‍ನ ಚಿತ್ರಕಥೆ ಲೇಖಕ ಮತ್ತು ನಿರ್ದೇಶಕ ಡೇವಿಡ್ ಮ್ಯಾಮೆಟ್ ಅವರು ‘keep it simple and stupid’ ಎಂದು ಹೇಳಿರಬೇಕು. ಕಥೆಗಳನ್ನು ನಾವು ಕಂಡಂತೆ ದಾಖಲಿಸುತ್ತ ಹೋಗುವ, ನಮ್ಮ ಅಭಿಪ್ರಾಯಗಳನ್ನು, ಆದರ್ಶಗಳನ್ನು, ಸಿದ್ಧಾಂತಗಳನ್ನು ಬದಿಗಿಟ್ಟು ನಮ್ಮ ಪಾತ್ರಗಳನ್ನು, ಅವರು ಮಾಡುತ್ತಿರುವುದನ್ನು ನೋಡಿ ದಾಖಲಿಸುವ. ಹೀಗೆ ಬರೆದ ಕಥೆಗಳೇ ಮುಂದಿನ ದಿನಗಳಲ್ಲಿ ಸಾಮಾನ್ಯ ಜನತೆಯ ಬದುಕಿನ ಅಧ್ಯಯನವಾಗಿ ಕಾಣಿಸಿಕೊಳ್ಳಬಹುದು. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ನಮ್ಮ ಊರಿನ ರಸಿಕರು ಇದಕ್ಕೆ ಅದ್ಭುತ ಉದಾಹರಣೆ. ಈ ಪುಸ್ತಕದಲ್ಲಿ ಪಾತ್ರಗಳು, ಕಥೆಗಳು ಹುಟ್ಟುತ್ತ ಹೋಗುತ್ತವೆ, ಅಲ್ಲಿ ಆ ದಿನಗಳ ಆರ್ಥಿಕ ಸಾಮಾಜಿಕ ವ್ಯವಸ್ಥೆಯ ವಿವರಣೆ ಅಥವಾ ಟಿಪ್ಪಣಿ ಮಾಡಲು ಹೋಗುವುದಿಲ್ಲ, ಜಾತಿಪದ್ಧತಿಯ ಬಗ್ಗೆ ಅಥವಾ ಅದರ ಕೆಡುಕಿನ ಬಗ್ಗೆ ಬರೆಯುವುದಿಲ್ಲ ಆದರೂ ಆ ಪುಸ್ತಕ ಆ ಪ್ರದೇಶದ ಮತ್ತು ಸಮಯದ ಕನ್ನಡಿಯಾಗಿದೆ.

ಪ್ರಾರಂಭದಲ್ಲಿ ಬರೆದ ಮಾತುಗಳೆಲ್ಲ ಸಂಪೂರ್ಣ ಸುಳ್ಳು ಎಂದು ಹೇಳಲಾಗದಿದ್ದರೂ, ಅಲ್ಲಿ ಯಾವುದೇ ಅಧ್ಯಯನ ಅಥವಾ ಪರಿಶೀಲನೆ ಕಂಡುಬರುವುದಿಲ್ಲ. ಆ ಮಾತುಗಳನ್ನು ನಂಬಿ, ಅದಕ್ಕೆ ಪೂರಕವಾದ ಕಥೆಗಳನ್ನು ಹೇಳಿದಾಗ ಅವುಗಳು ಕೆಟ್ಟ ಕಥೆಗಳಷ್ಟೇ ಅಲ್ಲ, ತಿರೋಗಾಮಿ ಪ್ರವೃತ್ತಿಯನ್ನು ಬೆಳೆಸಲು ಸಹಕಾರಿಯಾಗುವ ಕಥೆಗಳಾಗುತ್ತವೆ. ನಮ್ಮವರೇ ಆದ ಗೊರೂರು ರಾಮಸ್ವಾಮಿಯವರ ಕಥೆಗಳಿಂದ ಕಲಿತುಕೊಳ್ಳುವುದು ಸಾಕಷ್ಟಿದೆ. ಆಯಾ ಘಟನೆಗಳೇ ನಮ್ಮ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಲಿ, ಆಯಾ ಪಾತ್ರಗಳೇ ಸಂಬಂಧಗಳು ಹೇಗಿದ್ದವು, ಕ್ಲಿಷ್ಟವಾಗಿದ್ದವಾ, ಸುಂದರವಾಗಿದ್ದವಾ, ಹದಗೆಟ್ಟಿದ್ದವಾ ಎನ್ನುವುದನ್ನು ಹೇಳಲಿ. ಕಥೆಯನ್ನು ಓದಿದ, ಚಿತ್ರವನ್ನು ನೋಡಿದ ನೋಡುಗರು ಯಾವುದೇ ಅಭಿಪ್ರಾಯ ಹೊಂದಿದ್ದರೂ ಸತ್ಯವನ್ನು ಅಲ್ಲಗಳೆಯಲಾಗದಂತಹ ಕಥೆಗಳನ್ನು ಹೇಳುವ. ಏನೇ ಆಗಲಿ ಯಾವ ಕಥೆಯನ್ನು, ಹೇಗೆ ಹೇಳಬೇಕು ಎನ್ನುವ ತೊಳಲಾಟವಂತೂ ಬಿಟ್ಟದ್ದಲ್ಲ. ಬದಲಾವಣೆಯೊಂದಿಗೆ ಈ ತೊಳಲಾಟವೂ ನಿರಂತರವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...