Homeಅಂಕಣಗಳು'ಮತ್ತೆ ಮತ್ತೆ ಮಳೆ' ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ.....

‘ಮತ್ತೆ ಮತ್ತೆ ಮಳೆ’ ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ…..

- Advertisement -
- Advertisement -

ಕವಿತೆ/ಕಲೆ ಎನ್ನುವುದು ಕೊಂಡ ಹಾಯುವ ಆಚರಣೆಯಂತೆ. ತನ್ನ ಬದುಕಿನ ಮತ್ತು ಸಮಾಜದ ನೆನಪುಗಳನ್ನು ಆ ಕೊಂಡದಲ್ಲಿ ಹಾಯಿಸಿಕೊಳ್ಳುವುದೇ ಕವಿಯ/ಕಲಾವಿದನ ಕೆಲಸ. ಏಕೆಂದರೆ ಕಾವ್ಯ/ಸಾಹಿತ್ಯ/ಕಲೆ ಅನ್ನೋದು ಶೋಷಿತರ ಮೇಲಿನ ಭಾರ ಇಳಿಸುವುದು, ಲೋಕದ ಪಾಪಗಳ ಭಾರ ಹೊರುವುದೇ ಆಗಿದೆ.

ಕವಿತೆಯನ್ನು ಕಟ್ಟುವ, ಸೃಷ್ಟಿಸುವ ಕವಿಯ ವ್ಯಕ್ತಿಗತವಾದ ಪ್ರೇಮ, ವಿರಹ, ಸಂತೋಷದ, ನೆನಪುಗಳು, ಅವಮಾನಗಳು, ಸಾಮಾಜಿಕ, ರಾಜಕೀಯ ಸಂಗತಿಗಳು ಅವನ/ಆಕೆಯ ಮನದಾಳಕ್ಕೆ ಇಳಿದು, ಅವನ/ಆಕೆಯ ಭಾವದಲ್ಲಿ ಕಡೆದು ಅರಿವಿನ ಚಿತ್ರವಾಗಿ ಮೂಡುವಂತೆ ಮಾಡುವುದೇ ಕವಿಯ ಕೆಲಸ.

ಈ ಕೆಲಸಕ್ಕೆ ಭಾಷೆ ಅತಿ ಮುಖ್ಯವಾದದ್ದು. ಆದರೆ ಅದೇ ಎಲ್ಲವೂ ಅಲ್ಲ.

ಈ ಚರ್ಚೆಗಳ ಹಿನ್ನೆಲೆಯಲ್ಲಿ ಗಮನಿಸಬಹುದಾದ ಮುಖ್ಯಸಂಗತಿ ಎಂದರೆ ಕಾವ್ಯಕ್ಕೆ ಶಬ್ದ-ಅರ್ಥಗಳೇ ಮುಖ್ಯ ಎಂಬ ವಿಚಾರ ಕನ್ನಡ ಕಾವ್ಯದ ಮೇಲೂ ಹೆಚ್ಚಿನ ಪ್ರಭಾವ ಬೀರಿ, ಕೇವಲ ಭಾಷೆಯ ಬಳಕೆಯೊಂದರಿಂದಲೇ ಹುಸಿ ಕಾವ್ಯ (pseudo poetry) ಮುನ್ನಲೆಗೆ ಬಂದು ನಿಜವಾದ ಕಾವ್ಯ ಹಿನ್ನೆಲೆಗೆ, ಮರೆಗೆ ಸರಿಯುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವದಲ್ಲಿ ಕಾವ್ಯ ಅನ್ನೋದು ಬದುಕಿಗೆ ಉಪಯೋಗವಾಗಬೇಕು, ಹಿತಕಾರಿಯಾಗಬೇಕು ಎಂಬ ಬಹುಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ.

ಹೀಗೆ ರೂಪುಗೊಳ್ಳುವ ಕವಿತೆಯ ಸ್ವರೂಪ, ಅದರ ಅಂತಿಮ ಗುರಿ ಏನು ಎಂಬುದನ್ನು ನಮ್ಮ ಜನಪದ ಕಾವ್ಯದಲ್ಲಿ ಪ್ರಚಲಿತವಿರುವ ’ಬಾಲಗೋಪಾಲನ ಲಾವಣಿಗಳು’ ಬರುವ ಸಾಲುಗಳು ವಿವರಿಸುತ್ತವೆ.

“ಬಾಲಗೋಪಾಲನ ಹಾಡ ಕೇಳರಿ
ಹಸುಗೂಸಿಗಿ ಹಾಕಿದಾಂಗ ಕ್ಷೀರವನಾ” ಎಂದು.

ಈ ಸಾಲುಗಳಲ್ಲಿ ಹಸುಗೂಸು ಹಾಲು ಕುಡಿಯುವ ಸಹಜ ಕ್ರಿಯೆಯನ್ನು ಕವಿತೆ ಓದುವ, ಕೇಳುವ ಸಹೃದಯನಿಗೆ ಹೋಲಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಹಸುಗೂಸು ಹಾಲು ಕುಡಿಯುವ ಒಟ್ಟು ಕ್ರಿಯೆ, ಕಾವ್ಯದ ಸ್ವರೂಪ ಮತ್ತು ಅದರ ಪ್ರಯೋಜನವನ್ನು ಅರ್ಥವತ್ತಾಗಿ ಹೇಳುತ್ತಿದೆ. ತಾಯಿ ಕವಿಯನ್ನು ಸಂಕೇತಿಸಿದರೆ, ತಾಯ ಎದೆಹಾಲು ಕವಿತೆಯನ್ನು, ಹಸುಗೂಸು ಓದುಗನನ್ನು ಸಂಕೇತಿಸುತ್ತದೆ. ಎದೆಹಾಲು ದೋಷದಿಂದ ಮುಕ್ತವಾದ ಉತ್ತಮಕಾವ್ಯವನ್ನು ಸಂಕೇತಿಸುತ್ತದೆ.

ಹಾಲು ಕುಡಿಯುವ ಕ್ರಿಯೆ ಕೂಸಿಗೆ ಕೊಂಚವೂ ತೊಡಕಾಗಿರದೆ, ಇಷ್ಟವಾದ, ಸಹಜವಾದ, ಸಲೀಸಾದ ಕೆಲಸವಾಗಿ, ಹಾಲು ಕೂಸಿಗೆ ಹಿತವನ್ನುಂಟುಮಾಡುತ್ತದೆ. ಜೀವಶಕ್ತಿಯನ್ನು ಹೆಚ್ಚಿಸುತ್ತದೆ, ಆನಂದವನ್ನು ಉಂಟುಮಾಡುತ್ತದೆ. ಹಾಗೆಯೇ ಕಾವ್ಯವು ಸಹಜವಾಗಿರಬೇಕು, ಸರಳವಾಗಿರಬೇಕು. ಓದುಗನಿಗೆ/ಸಹೃದಯನಿಗೆ ಇಷ್ಟವಾದುದೂ, ಅವನ ಬೆಳವಣಿಗೆಗೆ ಶಕ್ತಿಯನ್ನೊದಗಿಸುವಂತಹದು, ಆನಂದವನ್ನುಂಟುಮಾಡುವಂತಹದು ಆಗಿರಬೇಕು. ಒಟ್ಟಿನಲ್ಲಿ ಅವನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಬೇಕು.

ಇಷ್ಟೆಲ್ಲಾ ಮಾತುಗಳು ಆಡಲು ಕಾರಣ ಹೇಮಂತ ಲಿಂಗಪ್ಪ ಅವರ ಮೊದಲ ಸಂಕಲನದ ಓದು.

ಹೇಮಂತರ ’ಮತ್ತೆ ಮತ್ತೆ ಮಳೆ’ ಸಂಕಲನದಲ್ಲಿ ಒಟ್ಟು ನಲ್ವತ್ತನಾಲ್ಕು ಕವನಗಳಿವೆ. ಇಷ್ಟೂ ಕವನಗಳಲ್ಲಿ ನಾನು ಗಮನಿಸಿದ ಹಾಗೆ ಹೇಮಂತರ ಕವಿತೆಗಳ ಬಹುಮುಖ್ಯ ಅಂಶ ಅಂದರೆ ತನ್ನ ಅನುಭವವನ್ನು ಹಾಗೆ ಒಂದು ಚಿತ್ರವನ್ನಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟುವುದು. ಇದರ ಮೂಲಕ ಕವಿ ಏನು ಹೇಳಲು ಪ್ರಯತ್ನಿಸುತ್ತಾನೆ ಅನ್ನೋದು ಮುಖ್ಯವಲ್ಲ, ಕಾವ್ಯ ಓದುಗನಿಗೆ ಏನನ್ನು ಹೇಳುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಆ ವಿಚಾರವನ್ನು ಹೇಮಂತರ ಕವಿತೆಗಳು ಒಳಗೊಂಡಿವೆ ಅನ್ನೋದೇ ಅವರ ಕವಿತೆಗಳ ಯಶಸ್ಸು.

ಉದಾಹರಣೆಗೆ: 1.

ಉಬ್ಬಿದೆದೆಯ ಏದುಸಿರು
ಕಿವಿಯಿಟ್ಟು ಆಲಿಸೆ
ಕೇಳುತಿದೆ ಸಂಗೀತದಂತೆ

ನಾನು ಗಾಳಿಯೂದಲೇ ಇಲ್ಲ,
ಕೇವಲ ತುಟಿ ಸೋಕಿಸಿದಷ್ಟೆ…
ನೋಡನೋಡ ನೋಡುತ್ತಲೇ ಅವುಗಳು ಉಬ್ಬಿದ್ದೇಕೆ?
ಶಿಖರಗಳ ತುತ್ತತುದಿಯ, ತುಟಿ ಮುತ್ತಿದ್ದೇಕೆ?

ಈಗ ಮೌನದ್ದೇ ಮಾತು,
ಉಸಿರುಗಳದ್ದೇ ಗದ್ದಲ
ಸ್ಪರ್ಶದ್ದೇ ಕಾರುಬಾರು
ಮುತ್ತುಗಳದ್ದೇ ಚರ್ಚೆ….

2.

ತುಂಬಿ ಹರಿದ ಕೆರೆಯ
ತೂಬಿನಲ್ಲಿ ತಡಕಾಡಿ
ಹಿಡಿದ ಮೀನು- ಏಡಿಗಳ
ನನ್ನೂರ ಕೆರೆ
ಅದರ ಏರಿಯೂ..

ಇಂತವು ಹಲವಾರು.

ಎರಡನೆಯದಾಗಿ, ಕವಿಯಾದವನಿಗೆ ತುಂಬು ಜೀವನ ಪ್ರೀತಿ ಇರಬೇಕು ಮತ್ತದು ಪ್ರಾಮಾಣಿಕವಾಗಿರಬೇಕು. ಆಗ ಅದು ಅವನ ಕವಿತೆಗಳಲ್ಲಿ ಸಾಮಾಜಿಕವಾದ ರೂಪ ಪಡೆಯುತ್ತದೆ ಮತ್ತು ಎಲ್ಲರ ಜೀವನಪ್ರೀತಿಯಾಗುತ್ತೆ. ಅಂತಹ ಅಪಾರ ಜೀವನ ಪ್ರೀತಿ ಹೇಮಂತರ ಕವನಗಳಲ್ಲಿ ಎದ್ದು ಕಾಣುತ್ತದೆ. ಅದು ವ್ಯಕ್ತಿಗತವಾದ ಪ್ರೇಮ; ಆ ಪ್ರೇಮ ಅಚಾನಕ್ಕಾಗಿ ಕೊಡುವ ವಿರಹ, ಆ ವಿರಹದ ಅಭಿವ್ಯಕ್ತಿ ಎಲ್ಲರ ವಿರಹವಾಗಿ ಕಡೆಗೆ ವಿಷಾದವಾಗುವ ಬಗೆಯನ್ನು ಕುರಿತು, ಪ್ರೇಮದ ನೆನಪುಗಳ ಕುರಿತು, ಹಾಗೆ ಪರಿಸರ ಮತ್ತು ಅದರ ಜೊತೆಗಿನ ಜೀವಸಂಕುಲಗಳ ಬಗೆಗಿನ ಕಾಳಜಿ ಕುರಿತಾಗಿರಬಹುದು- ಇಲ್ಲೆಲ್ಲಾ ಉತ್ಕಟ ಪ್ರೇಮದ ಅಭಿವ್ಯಕ್ತಿ ಸಹಜವಾಗಿ ವ್ಯಕ್ತವಾಗಿದೆ. ಜೊತೆಗೆ ಪ್ರೇಮದ ಬಗೆಗಳನ್ನು ಹೇಮಂತ್ ತಮ್ಮ ಕವಿತೆಗಳಲ್ಲಿ ಎದುರಾಗುತ್ತಾರೆ.

ತಮ್ಮ ಮೊದಲ ಸಂಕಲನಗಳಲ್ಲಿ ಪ್ರೇಮ, ವಿರಹ, ವಿಷಾದ, ನೆನಪುಗಳನ್ನು ಕವಿತೆ ಮಾಡಲು ಹೋಗಿ ಭಾಷಣ ಮಾಡುವ ಇಲ್ಲವೇ ವಿಚಾರದ ಒಣಮಾತುಗಳ ಕಟ್ಟುಗಳನ್ನಾಗಿಸುವವರೇ ಹೆಚ್ಚು. ಆಗ ಮಾತು ಅನುಭವದ ಹೆಣವಾಗುತ್ತದೆ. ಹೇಮಂತರ ಈ ಸಂಕಲನದಲ್ಲಿ ಒಂದೆರಡು ಕವಿತೆಗಳನ್ನು ಬಿಟ್ಟರೆ ಉಳಿದಂತೆ ಗೆದ್ದಿದ್ದಾರೆ.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಆಹ್ವಾನ, ಮಳೆ, ಪ್ರೀತಿ, ಹುಡುಕಿಕೊಡು ಹುಡುಗಿ, ಮರೆವು, ಬನ್ನಿ ಬನ್ನಿ ಪದಗಳೆ, ಹೇಗೆ, ನೆನಪು, ಬ್ರೀವರಿಯ ಹುಡುಗಿ, ಮಿಳಿತ, ನನ್ನ ತಪ್ಪಲ್ಲ, ಮಳೆಗಾಳಿ, ಪಠ್ಯಪುಸ್ತಕ, ಮತ್ತೆ ಮತ್ತೆ ಮಳೆ, ನೈಟ್ ಜರ್ನಿ ಕವಿತೆಗಳು ಮೇಲಿನ ಮಾತುಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ.

ಮೂರನೆಯದಾಗಿ, ಕವಿ ಏಟ್ಸ್‌ನ ‘Poetry is an escape from Emotion’- ಈ ಮಾತಿಗೆ ಸಾಕ್ಷಿ ಒದಗಿಸುವ ಹಾಗೆ ಕೇವಲ ಪ್ರೇಮ, ವಿರಹಗಳೇ ಕಾವ್ಯದ ವಸ್ತುವಲ್ಲ ಎನ್ನುವುದನ್ನು ಹೇಳುವಂತೆ ಹೇಮಂತರ ಕಾವ್ಯದ ಮತ್ತೊಂದು ಬಹುಮುಖ್ಯ ಮಗ್ಗಲು ಎಂದರೆ ಬದುಕನ್ನು, ಬದುಕಿನ ಘಟ್ಟಗಳನ್ನು, ಸನ್ನಿವೇಶಗಳನ್ನು ಭಿನ್ನವಾಗಿ ನೋಡಲೆತ್ನಿಸುವ ಕ್ರಮ ವಿಶೇಷವೆನ್ನಿಸುತ್ತದೆ..

ನಮಿಸಲಿ ನಾ ಯಾರಿಗೆ, ನನಗೂ ಮೊಲೆಗಳ ಕೊಡು ದೇವರೇ, ಮಳೆಗಾಲದ ಮುಂಜಾನೆ, ಮಗಳು, ಬೆಂಗಳೂರು ನೋಡಿದಾಗಲೆಲ್ಲಾ, ನಾವು ಕೆ.ಇ.ಬಿಯವರು, ಮಗಳಿಗೊಂದಷ್ಟು ಮಾತು- ಈ ಕವಿತೆಗಳು ಹೇಮಂತ್ ಅವರನ್ನು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ಸೂಚನೆಯನ್ನು ಕೊಟ್ಟು ನಂಬಿಕೆಯನ್ನು ಹುಟ್ಟಿಸುತ್ತದೆ.

ನಾಲ್ಕನೆಯದಾಗಿ, ಈ ಸಂಕಲನದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ನಾವುಗಳು ನೋಡುತ್ತಿರುವ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದ, ಇಲ್ಲಿನ ಬಡವರು-ಜನಸಾಮಾನ್ಯರು-ತಳ ಸಮುದಾಯಗಳ ಮೇಲಿನ ಹಿಂಸೆ, ದೌರ್ಜನ್ಯ, ಅನ್ಯಾಯಗಳ ಕೃತ್ಯಗಳನ್ನು ಖಂಡಿಸುತ್ತಲೇ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದದ ಅಮಾನವೀಯತೆಯ ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡುತ್ತಾರೆ. ಇವು ಮೇಲ್ನೋಟಕ್ಕೆ ಬಂಡಾಯ ಕವಿತೆಗಳಂತೆ ಕಂಡರೂ ಬಂಡಾಯದ ರೋಷ, ಆವೇಶಗಳು ಈ ಕವಿತೆಗಳಲ್ಲಿ ಇಲ್ಲ. ಇಲ್ಲಿ ಕಾರುಣ್ಯ, ವಿಷಾದ, ಅರ್ತತೆಯೆ ಸ್ಥಾಯಿಗುಣಗಳಾಗಿವೆ.

ಕಡೆಯದಾಗಿ, ಹೇಮಂತ್ ಈ ಸಂಕಲನದಲ್ಲಿ ಎರಡು ಕವಿತೆಗಳನ್ನು ಅನುವಾದಿಸಿದ್ದಾರೆ. ಆಫ್ರಿಕಾ ಮೂಲದ ಬರಹಗಾರ ಚಿನುವಾ ಅಚಿಬೆಯ ಒಂದು ಕವಿತೆ. ಅಕಾವ್ಯವನ್ನು ಕಾವ್ಯ ಜಗತ್ತಿಗೆ ಪರಿಚಯಿಸಿದ ನೆರೂಡನ ಒಂದು ಕವಿತೆ. ಎರಡೂ ಭಿನ್ನ ವಿಚಾರಗಳ ಕವಿತೆಗಳು. ಇವು ಕನ್ನಡದವೇ ಎಂಬಂತೆ ಅನುವಾದಗೊಂಡಿವೆ. ಹೇಮಂತ್ ಉತ್ತಮ ಅನುವಾದಕರೂ ಆಗಬಹುದು ಎಂಬ ಸೂಚನೆಗಳು ಈ ಅನುವಾದದಲ್ಲಿ ಕಾಣಬಹುದು.

ಕಾವ್ಯ ಮುಲಾಜಿನಿಂದ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಕಾವ್ಯದ ಬಗ್ಗೆ ಮಾತನಾಡುವಾಗ, ಬರೆಯುವಾಗಲೂ ಕೂಡ ಮುಲಾಜಿಗೆ ಒಳಗಾಗಿ ಮಾತನಾಡಬಾರದು ಎನ್ನುವ ಎಚ್ಚರ ನನ್ನನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಕವಿ ಹೇಮಂತ್ ಅವರ ಈ ಸಂಕಲನದಲ್ಲಿ ಟೆಕ್ನಿಕಲ್ ದೃಷ್ಟಿಯಿಂದ ಕವಿತೆ ಪರವಾಗಿಲ್ಲ ಅನ್ನಿಸಿದರೂ ಆಶಯದ ದೃಷ್ಟಿಯಿಂದ ಕೆಲವು ಕೆಟ್ಟ ಪದ್ಯಗಳೂ ಇವೆ. ಉದಾಹರಣೆಗೆ ಗಂಡಿನ ಮನೋಧರ್ಮವನ್ನು ಢಾಳಾಗಿ ಕಾಣಿಸುವ ’ನಿವೇದನೆ’ ಕವಿತೆ. ಇಂತಹ ಕವಿತೆಗಳನ್ನು ಹೇಮಂತ್ ಬರೆಯದಿದ್ದರೆ ಒಳ್ಳೆಯದು. ಹಾಗೆಯೇ ’ದೇಶಪ್ರೇಮ’ ಎಂಬ ಚುಟುಕು ಪದ್ಯ.

ಈ ಮಿತಿಯ ನಡುವೆಯೂ ಹಲವು ಉತ್ತಮ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟಿರುವ ಹೇಮಂತ್‌ಗೆ ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ಸಂಕಲನದಲ್ಲಿ ಇನ್ನಷ್ಟು ಉತ್ತಮ ಕವಿತೆಗಳನ್ನು ಕೊಡುವಂತಾಗಲಿ ಎಂದು ಆಶಿಸುತ್ತೇನೆ.

ಎಚ್ ಎಸ್ ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...