HomeUncategorizedಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

ಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

- Advertisement -
- Advertisement -

ನಾನು ಆ ಏರ್ ಇಂಡಿಯಾ ವಿಮಾನದ ಪ್ರಯಾಣಿಕಳಾಗಿರಲಿಲ್ಲ. ಆದರೆ ನಾನು ಅಂದು ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಈಗ ಅದರಲ್ಲಿ ಪ್ರಯಾಣಿಸುತ್ತಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ ಮಿಕ್ಕಿದವರೆಲ್ಲಾ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ನಿರ್ಲಕ್ಷ್ಯವು ಕಾರಣವಾಗಿದೆ. ಸಂಪೂರ್ಣವಾಗಿ ಈ ವಿಪತ್ತನ್ನು ತಪ್ಪಿಸಬಹುದಾಗಿತ್ತು. ಇದು ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಸಾಧ್ಯವಾಗಿಸಿದ ದುರಂತ.

ಈ ವಿಮಾನ ದುರಂತದ ಹಿಂದಿನ ರಾತ್ರಿ ನಾನು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿಳಿದಿದ್ದೆ. ಮರುದಿನ ಬೆಳಿಗ್ಗೆ ಈ ದುರಂತದ ಸುದ್ದಿಯನ್ನು ಕೇಳಿ ಕಿರುಚಿಕೊಂಡು ಎದ್ದೇಳಬೇಕಾಯಿತು. ಅಂದು ನಡೆದ ಘಟನೆ ಕನಸಿನಂತೆ ಭಾಸವಾಗಿತ್ತು. ಈ ಘಟನೆಯ  ಫೋಟೋ, ವೀಡಿಯೋಗಳನ್ನು ನೋಡಿ ವಾಸ್ತವವನ್ನು ಒಪ್ಪಿಕೊಳ್ಳಲು ಸಾಕಷ್ಟು ಹರಸಾಹಸಪಡಬೇಕಾಯಿತು.

ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗಬೇಕಿದ್ದ ಬೋಯಿಂಗ್ ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲೇ ಅಪಘಾತಕ್ಕೀಡಾಯಿತು. ಅದು ಅಹಮದಾಬಾದ್ ವಿಮಾನ ನಿಲ್ದಾಣದ ಆವರಣದಿಂದ ಕೇವಲ ನೂರು ಮೀಟರ್ ಹೊರಗೆ ಇದ್ದ ವೈದ್ಯಕೀಯ ಹಾಸ್ಟೆಲ್‌ ನ ಕಟ್ಟಡದ ಮೇಲೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ವಿಮಾನಕ್ಕೆ ಸಂಪೂರ್ಣವಾಗಿ ಇಂಧನವನ್ನು ತುಂಬಿಸಲಾಗಿತ್ತು. ಇದರ ಪರಿಣಾಮವಾಗಿ ಅದು ಬಹುಬೇಗನೆ ಸ್ಫೋಟಗೊಂಡಿತು. ಆಗ ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಪ್ರಯಾಣಿಕರು ಸಾವನ್ನಪ್ಪಬೇಕಾಯಿತು. ಮೃತಪಟ್ಟ ಪ್ರಯಾಣಿಕರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರಾಗಿದ್ದಾರೆ.

ಆದರೆ ಈ ದುರಂತವು ಅದೃಷ್ಟದ ಕಥೆಯಲ್ಲ. ಇದು ನಿರ್ಲಕ್ಷ್ಯದ ಕುರಿತಾದ ಕಥೆ. ನಮ್ಮನ್ನಾಳುವವರು ಈ ಪ್ರಯಾಣಿಕರ ಜೀವ ಉಳಿಸಲು ವಿಫಲವಾದ ಕಥೆ. ಆದರೆ ಇದು ಹಾಗೆಯೇ ಮುಂದುವರಿದರೆ ಮುಂದೆ ಜನರನ್ನು ತೀವ್ರವಾಗಿ ಅಪಾಯಕ್ಕೊಳಪಡಿಸುತ್ತದೆ. ಇದು ಹಲವು ಸಮಯದಿಂದ ರಾಜಕೀಯ ಉದಾಸೀನತೆಯ ಫಲ. ಹೀಗೆ ಜನರನ್ನು ಸಾಕಷ್ಟು ಸಮಯದವರೆಗೆ ನಿರ್ಲಕ್ಷಿಸಿದರೆ ಒಂದು ದಿನ ಆಕ್ರೋಶ ಸ್ಫೋಟಗೊಳ್ಳುತ್ತದೆ.

ಒಂದು ವಿಷಯ ಕುರಿತು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳೋಣ. ಇದು ಕೇವಲ ಒಂದು ವಿಮಾನಯಾನದ ಅಪಘಾತವಾಗಿರಲಿಲ್ಲ. ಇದು ವ್ಯವಸ್ಥೆಯ ವೈಫಲ್ಯ. ಉದ್ದೇಶಪೂರ್ವಕ ರಾಜಕೀಯ ನಿರ್ಲಕ್ಷ್ಯದಿಂದ ಕೂಡಿದೆ. ಗುಜರಾತಿನಲ್ಲಿರುವ ಈ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ನಿಲ್ದಾಣವು ಬಹಳ ಹಿಂದಿನಿಂದಲೂ ಅಪಾಯಕಾರಿಯಾಗಿ ಇಕ್ಕಟ್ಟಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರ ರನ್‌ವೇಗಳ ಅಕ್ಕಪಕ್ಕ ಜನನಿಬಿಡ ಪ್ರದೇಶವಾಗಿದೆ. ಒಂದು ಅಂತರರಾಷ್ಟ್ರೀಯ ವಿಮಾನವು ಟೇಕ್ ಆಫ್ ಆದ ನಂತರ ದೋಷವುಂಟಾದರೆ ಸರಿಪಡಿಸಿಕೊಳ್ಳಲು ಹೋಗುವುದಕ್ಕಾಗಿ ಎಲ್ಲಿಯೂ ಜಾಗವಿಲ್ಲ. ಈ ವಿಮಾನ ನಿಲ್ದಾಣವು ಕುಣಿಕೆಯಂತೆ ನಗರವನ್ನು ಸುತ್ತುವರೆದಿದೆ.

ಅಂದು ವಿಮಾನವು ಬಿಜೆ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ. ಇದು ಕೇವಲ ವಾಯುಯಾನ ವಿಪತ್ತು ಮಾತ್ರ ಅಲ್ಲ; ಇದು ನಗರ ಪ್ರದೇಶವನ್ನು ಬೆಂಕಿಯ ಬಿರುಗಾಳಿಯನ್ನಾಗಿಸಿತ್ತು. ವೈದ್ಯಕೀಯ ವೃತ್ತಿಜೀವನದ ತುತ್ತ ತುದಿಯಲ್ಲಿದ್ದ ವಿದ್ಯಾರ್ಥಿಗಳು, ವೈದ್ಯರು ಜೀವಂತ ಸಮಾಧಿಯಾದರು. ಇದೆಲ್ಲವೂ ನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲೆಲ್ಲೋ ಸಂಭವಿಸಿಲ್ಲ.  ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದರ ವಾಯುಪ್ರದೇಶ ಮತ್ತು ಜನವಸತಿ ನಡುವೆ ಯಾವುದೇ ರಕ್ಷಣಾತ್ಮಕ ಕ್ರಮಕೈಗೊಳ್ಳದೇ ಅದರ ನಿರ್ಮಾಣಕ್ಕೆ ಅನುಮತಿಸಲಾಗಿದೆ.

ಯಾವುದೋ ಒಂದು ರೀತಿಯಲ್ಲಿ ಕೆಟ್ಟದ್ದಾಗುತ್ತದೆ ಎಂದು ತಿಳಿದಿತ್ತು. ಅಹಮದಾಬಾದ್‌ನ ರನ್‌ವೇ ಯಿಂದ ಆಚೆ ಇರುವ ಮೇಲ್ಮೈಗಳು ಅಪಾಯಕಾರಿ ಎಂದು ಪುನರಾವರ್ತಿತ ಸುರಕ್ಷತಾ ಲೆಕ್ಕಪರಿಶೋಧನೆಗಳು ಎಚ್ಚರಿಸಿವೆ.  2019ರ ಡಿಜಿಸಿಎ ವರದಿಯು ಅಪಾಯಗಳನ್ನು ಸ್ಪಷ್ಟವಾಗಿ ವಿವರಿಸಿದೆ. 2018ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ರನ್‌ವೇಯ ಸುರಕ್ಷತಾ ಪ್ರದೇಶವನ್ನು ವಿಸ್ತರಿಸಲು 29.79 ಎಕರೆ ಭೂಮಿ ಹಂಚಿಕೆ ಮಾಡಲು ಗುಜರಾತ್ ಸರ್ಕಾರವನ್ನು ಕೇಳಿಕೊಂಡಿತ್ತು.  ಪ್ರಾಧಿಕಾರಕ್ಕೆ ಅನುಮೋದನೆ ಸಿಕ್ಕಿತು. ಆದರೆ ಇಂದಿಗೂ ಸಂಬಂಧಿಸಿದ ಭೂಮಿಯನ್ನು ಹಸ್ತಾಂತರ ಮಾಡಲಾಗಿಲ್ಲ. ಏಕೆಂದರೆ  ಈ ಭೂಮಿಯನ್ನು ವಶಪಡಿಸಿಕೊಳ್ಳಲು ಹತ್ತಿರದಲ್ಲಿ ವಾಸಿಸುವ 350 ಕುಟುಂಬಗಳನ್ನು ಸ್ಥಳಾಂತರಿಸುವ ಅಗತ್ಯವಿತ್ತು. ಈ ರೀತಿ ಮಾಡುವುದು ರಾಜಕೀಯ ವ್ಯಕ್ತಿಗಳಿಗೆ ರಾಜಕೀಯವಾಗಿ ಅನುಕೂಲಕರವಾಗಿರಲಿಲ್ಲ. ಹೀಗೆ ಮಾಡುವುದರಿಂದ ಯಾವುದೇ ಮತಗಳು ಬರುವುದಿಲ್ಲವಾದ್ದರಿಂದ ಇಲ್ಲಿಯ ಜನರನ್ನು ಸ್ಥಳಾಂತರ ಮಾಡಲಾಗಿಲ್ಲ. ವಿಮಾನ ನಿಲ್ದಾಣವನ್ನು ಪ್ರಯಾಣಿಕರ ದೃಷ್ಟಿಯಿಂದ ವಿಸ್ತರಿಸುತ್ತಲೇ ಬೇಕಿತ್ತು. ಈಗ ಇರುವ ವಿಮಾನ ನಿಲ್ದಾಣದಿಂದ ಎಂದಿಗೂ ಸುರಕ್ಷತೆ ಇಲ್ಲ. ಅಲ್ಲಿ ಅಪಾಯದ ಸಂದರ್ಭಗಳು ಹೆಚ್ಚುತ್ತಲೇ ಇವೆ. ಅದು ಹೇಗೆಂದರೆ ತನ್ನದೇ ನಗರದ ಮೇಲೆ ನೇರವಾಗಿ ಗುರಿಯಿಟ್ಟು ಲೋಡ್ ಮಾಡಿದ ಬಂದೂಕಿನಂತೆ ಆಗಿದೆ.

ಈ ಎಲ್ಲಾ ವೈಫಲ್ಯದ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿದೆ.  ಆದರೆ ಆಶ್ಚರ್ಯಗೊಳ್ಳುವಂತಹದ್ದೇನೂ ಇಲ್ಲ. ಅಹಮದಾಬಾದ್ ನಗರದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಅಭಿವೃದ್ಧಿಯ “ಮಾದರಿ ನಗರ” ಎಂದು ಬಹಳ ಹಿಂದಿನಿಂದಲೂ ಬಿಂಬಿಸಲಾಗುತ್ತಿದೆ.  ಆದರೆ ಈ ದುರಂತದಿಂದಾಗಿ ಮೋದಿಯವರ ಸ್ವಂತ ಹಿತ್ತಲಿನಲ್ಲಿ ಆ “ಅಭಿವೃದ್ಧಿ” ಎಂದರೆ ಏನು ಎಂಬುದನ್ನು ನಾವು ಕಾಣುತ್ತಿದ್ದೇವೆ. 2022ರಲ್ಲಿ ಘೋಷಿಸಲ್ಪಟ್ಟ ಮತ್ತು ಅಹಮದಾಬಾದ್‌ನ ದಟ್ಟಣೆ ಬಿಕ್ಕಟ್ಟಿಗೆ ಪರಿಹಾರವೆಂದು ಹೇಳಲಾದ ಧೋಲೆರಾದಲ್ಲಿ ಭರವಸೆ ನೀಡಿದ ಎರಡನೇ ವಿಮಾನ ನಿಲ್ದಾಣವನ್ನು ಈಗ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿತ್ತು. ಅದರ ರನ್‌ವೇಗಳು ಇನ್ನೂ ಅಸ್ತಿತ್ವದಲ್ಲಿಲ್ಲದ ಕಾರಣ ಅಲ್ಲಿಂದ ಒಂದು ವಿಮಾನವು ಹಾರಾಟ ನಡೆಸಿಲ್ಲ.

ಗುಜರಾತ್‌ನವರಾದ ಗೃಹ ಸಚಿವ ಅಮಿತ್ ಶಾ ಅವರು ತಾವು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ನಗರದಲ್ಲಿ ಸುರಕ್ಷತೆಗಾಗಿ ಹೊಸತೇನನ್ನೂ ಮಾಡಿಲ್ಲ. ಈ ದುರಂತದಲ್ಲಿ ನಿಧನರಾದವರಲ್ಲಿ ಒಬ್ಬರಾದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ರೂಪಾನಿಯವರಿಗೆ ಈ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಸರಿಪಡಿಸಲು ಈ ಹಿಂದೆ ಅಧಿಕಾರದಲ್ಲಿದ್ದಾಗ ಅವಕಾಶವಿತ್ತು. ಅವರು 2016 ರಿಂದ 2021 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದಕ್ಕಿಂತ ದೊಡ್ಡ ದೋಷಾರೋಪಣೆ ಇನ್ನೇನು ಇರಲು ಸಾಧ್ಯ? ಅಭಿವೃದ್ಧಿಯನ್ನು ಕಡೆಗಣಿಸಿದಾಗ ಇದೆಲ್ಲಾ ಸಂಭವಿಸುತ್ತದೆ. ಇದು ದೇವರು ಮಾಡಿದ ದುರಂತವಲ್ಲ. ಇದು ಮಾನವ ನಿರ್ಮಿತ ದುರಂತ. ಈ ವಿಮಾನ ನಿಲ್ದಾಣದ ಲೋಪದೋಷಣಗಳ ಕುರಿತು ಬಂದ ವರದಿಗಳನ್ನು ನಿರ್ಲಕ್ಷಿಸುವುದರಿಂದ ಉಂಟಾಗಿದೆ. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ನಿರ್ಮಿಸಲು ಆದ್ಯತೆ ನೀಡುವ ಬದಲು ಈ ವಿಮಾನ ನಿಲ್ದಾಣದ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿತ್ತು.

ನಾವು 241 ಜನರ ಸಾವಿಗೆ ಮೌನವಾಗಿ ದುಃಖಿಸಬಾರದು. ಇದಕ್ಕಾಗಿ ನಾವೆಲ್ಲಾ ಗುಜರಾತ್ ಸರ್ಕಾರವನ್ನು ಹೊಣೆ ಮಾಡಬೇಕು. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ಅಮಿತ್ ಶಾ ಕೂಡ ಉತ್ತರಿಸಬೇಕು. ಇಷ್ಟು ಮಾತ್ರವಲ್ಲದೇ  3,000 ಕೋಟಿ ರೂ. ಟರ್ಮಿನಲ್ ವಿಸ್ತರಣಾ ಯೋಜನೆಗಾಗಿ ಘೋಷಿಸಿದ, ಆದರೆ ರನ್‌ವೇ ಸುರಕ್ಷತೆಯ ಮೂಲ ಸಮಸ್ಯೆಯನ್ನು ಪರಿಹರಿಸಲು ಏನನ್ನೂ ಮಾಡದ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ಕೂಡ ಉತ್ತರಿಸಬೇಕು. ಸುರಕ್ಷತಾ ವರದಿಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಪ್ರತಿಯೊಬ್ಬ ಅಧಿಕಾರಿಯೂ ಉತ್ತರಿಸಬೇಕು.  ಹಾಗೆಯೇ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸದ ಮಾಧ್ಯಮ ಸಂಸ್ಥೆಗಳು ಕೂಡ ಇದಕ್ಕೆ ಹೊಣೆ ಹೊರಬೇಕು. ಈ ರೀತಿ ವಿಮಾನ ಅಪಘಾತಕ್ಕೆ ಪರೋಕ್ಷವಾಗಿ ಇವರೆಲ್ಲರೂ ಕಾರಣವಾಗಿರುವುದರಿಂದ ಉತ್ತರಿಸಬೇಕಿದೆ.

ನಾವು ಜಾಗತಿಕ ಶಕ್ತಿಯಾಗುವ ಬಗ್ಗೆ ಮಾತನಾಡುತ್ತೇವೆ. ಆದರೆ ಗುಜರಾತ್ ರಾಜಧಾನಿಯಲ್ಲಿ ಸಾಕಷ್ಟು ಅಗ್ನಿಶಾಮಕ ವಾಹನಗಳಿಲ್ಲ. ಈ ವಿಮಾನ ನಿಲ್ದಾಣದ ರನ್‌ವೇಗಳು ಕೊಳೆಗೇರಿಗಳಿಂದ ಸುತ್ತುವರೆದಿವೆ. ಇಲ್ಲಿಗೆ ಇಷ್ಟು ಸಾಕು. ಆಡಳಿತದಲ್ಲಿ ಯಾವುದೇ ಘನತೆ ಉಳಿದಿದ್ದರೆ, ಪತ್ರಿಕೋದ್ಯಮದಲ್ಲಿ ಯಾವುದೇ ಜವಾಬ್ದಾರಿ ಉಳಿದಿದ್ದರೆ ಮತ್ತು ಸಾರ್ವಜನಿಕರಲ್ಲಿ ಯಾವುದೇ ಧೈರ್ಯ ಉಳಿದಿದ್ದರೆ, ಇದು ಹ್ಯಾಶ್‌ಟ್ಯಾಗ್‌ಗಳೊಂದಿಗೆ ಕೊನೆಗೊಳ್ಳಬಾರದು. ಇದು ಕೆಲವರ ರಾಜೀನಾಮೆಗಳೊಂದಿಗೆ ಕೊನೆಗೊಳ್ಳಬೇಕು. ತನಿಖೆಗಳು, ವಿಚಾರಣೆಗಳು, ವಿಮಾನ ನಿಲ್ದಾಣದ ಸುಧಾರಣೆಗಳು ನಡೆಯಬೇಕು.

ಇದನ್ನು ಸಾಕಷ್ಟು ಕೋಪದಲ್ಲಿ ಬರೆಯಲಾಗಿದೆ ಮತ್ತು ನೀವು ಇದನ್ನು ಅಹಮದಾಬಾದ್, ಅಥವಾ ಲಂಡನ್, ಅಥವಾ ದೆಹಲಿ ಅಥವಾ ಎಲ್ಲಿಯೇ ಓದುತ್ತಿದ್ದರೆ, ಇದನ್ನು ತಿಳಿದುಕೊಳ್ಳಿ: ಇದೇ ರೀತಿ ಮುಂದಾಗುವ ದುರಂತದಲ್ಲಿ ನೀವು ಸಿಲುಕಬಹುದು.

ಮತ್ತು ನಾನು ಹೇಳಿದ್ದರಲ್ಲಿ ಯಾವುದು ಬದಲಾಗದಿದ್ದರೆ, ಮುಂದಿನ ಬಾರಿಯ ದುರಂತ ಬೇರೆ ರೀತಿಯದ್ದಾಗಿರಬಹುದು.

ರಾಹುಲ್ ಗಾಂಧಿಯ ‘ಟ್ರಂಪ್‌ಗೆ ಮೋದಿ ಶರಣು’ ಹೇಳಿಕೆ v/s ಸಿಂಗ್ ಪ್ರಧಾನಿಯಾಗಿದ್ದಾಗ ಮೋದಿಯ ಹೇಳಿಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...