HomeUncategorizedಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

ಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

- Advertisement -
- Advertisement -

ನಾನು ಆ ಏರ್ ಇಂಡಿಯಾ ವಿಮಾನದ ಪ್ರಯಾಣಿಕಳಾಗಿರಲಿಲ್ಲ. ಆದರೆ ನಾನು ಅಂದು ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಈಗ ಅದರಲ್ಲಿ ಪ್ರಯಾಣಿಸುತ್ತಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ ಮಿಕ್ಕಿದವರೆಲ್ಲಾ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ನಿರ್ಲಕ್ಷ್ಯವು ಕಾರಣವಾಗಿದೆ. ಸಂಪೂರ್ಣವಾಗಿ ಈ ವಿಪತ್ತನ್ನು ತಪ್ಪಿಸಬಹುದಾಗಿತ್ತು. ಇದು ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಸಾಧ್ಯವಾಗಿಸಿದ ದುರಂತ.

ಈ ವಿಮಾನ ದುರಂತದ ಹಿಂದಿನ ರಾತ್ರಿ ನಾನು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿಳಿದಿದ್ದೆ. ಮರುದಿನ ಬೆಳಿಗ್ಗೆ ಈ ದುರಂತದ ಸುದ್ದಿಯನ್ನು ಕೇಳಿ ಕಿರುಚಿಕೊಂಡು ಎದ್ದೇಳಬೇಕಾಯಿತು. ಅಂದು ನಡೆದ ಘಟನೆ ಕನಸಿನಂತೆ ಭಾಸವಾಗಿತ್ತು. ಈ ಘಟನೆಯ  ಫೋಟೋ, ವೀಡಿಯೋಗಳನ್ನು ನೋಡಿ ವಾಸ್ತವವನ್ನು ಒಪ್ಪಿಕೊಳ್ಳಲು ಸಾಕಷ್ಟು ಹರಸಾಹಸಪಡಬೇಕಾಯಿತು.

ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗಬೇಕಿದ್ದ ಬೋಯಿಂಗ್ ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲೇ ಅಪಘಾತಕ್ಕೀಡಾಯಿತು. ಅದು ಅಹಮದಾಬಾದ್ ವಿಮಾನ ನಿಲ್ದಾಣದ ಆವರಣದಿಂದ ಕೇವಲ ನೂರು ಮೀಟರ್ ಹೊರಗೆ ಇದ್ದ ವೈದ್ಯಕೀಯ ಹಾಸ್ಟೆಲ್‌ ನ ಕಟ್ಟಡದ ಮೇಲೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ವಿಮಾನಕ್ಕೆ ಸಂಪೂರ್ಣವಾಗಿ ಇಂಧನವನ್ನು ತುಂಬಿಸಲಾಗಿತ್ತು. ಇದರ ಪರಿಣಾಮವಾಗಿ ಅದು ಬಹುಬೇಗನೆ ಸ್ಫೋಟಗೊಂಡಿತು. ಆಗ ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಪ್ರಯಾಣಿಕರು ಸಾವನ್ನಪ್ಪಬೇಕಾಯಿತು. ಮೃತಪಟ್ಟ ಪ್ರಯಾಣಿಕರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರಾಗಿದ್ದಾರೆ.

ಆದರೆ ಈ ದುರಂತವು ಅದೃಷ್ಟದ ಕಥೆಯಲ್ಲ. ಇದು ನಿರ್ಲಕ್ಷ್ಯದ ಕುರಿತಾದ ಕಥೆ. ನಮ್ಮನ್ನಾಳುವವರು ಈ ಪ್ರಯಾಣಿಕರ ಜೀವ ಉಳಿಸಲು ವಿಫಲವಾದ ಕಥೆ. ಆದರೆ ಇದು ಹಾಗೆಯೇ ಮುಂದುವರಿದರೆ ಮುಂದೆ ಜನರನ್ನು ತೀವ್ರವಾಗಿ ಅಪಾಯಕ್ಕೊಳಪಡಿಸುತ್ತದೆ. ಇದು ಹಲವು ಸಮಯದಿಂದ ರಾಜಕೀಯ ಉದಾಸೀನತೆಯ ಫಲ. ಹೀಗೆ ಜನರನ್ನು ಸಾಕಷ್ಟು ಸಮಯದವರೆಗೆ ನಿರ್ಲಕ್ಷಿಸಿದರೆ ಒಂದು ದಿನ ಆಕ್ರೋಶ ಸ್ಫೋಟಗೊಳ್ಳುತ್ತದೆ.

ಒಂದು ವಿಷಯ ಕುರಿತು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳೋಣ. ಇದು ಕೇವಲ ಒಂದು ವಿಮಾನಯಾನದ ಅಪಘಾತವಾಗಿರಲಿಲ್ಲ. ಇದು ವ್ಯವಸ್ಥೆಯ ವೈಫಲ್ಯ. ಉದ್ದೇಶಪೂರ್ವಕ ರಾಜಕೀಯ ನಿರ್ಲಕ್ಷ್ಯದಿಂದ ಕೂಡಿದೆ. ಗುಜರಾತಿನಲ್ಲಿರುವ ಈ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ನಿಲ್ದಾಣವು ಬಹಳ ಹಿಂದಿನಿಂದಲೂ ಅಪಾಯಕಾರಿಯಾಗಿ ಇಕ್ಕಟ್ಟಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರ ರನ್‌ವೇಗಳ ಅಕ್ಕಪಕ್ಕ ಜನನಿಬಿಡ ಪ್ರದೇಶವಾಗಿದೆ. ಒಂದು ಅಂತರರಾಷ್ಟ್ರೀಯ ವಿಮಾನವು ಟೇಕ್ ಆಫ್ ಆದ ನಂತರ ದೋಷವುಂಟಾದರೆ ಸರಿಪಡಿಸಿಕೊಳ್ಳಲು ಹೋಗುವುದಕ್ಕಾಗಿ ಎಲ್ಲಿಯೂ ಜಾಗವಿಲ್ಲ. ಈ ವಿಮಾನ ನಿಲ್ದಾಣವು ಕುಣಿಕೆಯಂತೆ ನಗರವನ್ನು ಸುತ್ತುವರೆದಿದೆ.

ಅಂದು ವಿಮಾನವು ಬಿಜೆ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ. ಇದು ಕೇವಲ ವಾಯುಯಾನ ವಿಪತ್ತು ಮಾತ್ರ ಅಲ್ಲ; ಇದು ನಗರ ಪ್ರದೇಶವನ್ನು ಬೆಂಕಿಯ ಬಿರುಗಾಳಿಯನ್ನಾಗಿಸಿತ್ತು. ವೈದ್ಯಕೀಯ ವೃತ್ತಿಜೀವನದ ತುತ್ತ ತುದಿಯಲ್ಲಿದ್ದ ವಿದ್ಯಾರ್ಥಿಗಳು, ವೈದ್ಯರು ಜೀವಂತ ಸಮಾಧಿಯಾದರು. ಇದೆಲ್ಲವೂ ನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲೆಲ್ಲೋ ಸಂಭವಿಸಿಲ್ಲ.  ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದರ ವಾಯುಪ್ರದೇಶ ಮತ್ತು ಜನವಸತಿ ನಡುವೆ ಯಾವುದೇ ರಕ್ಷಣಾತ್ಮಕ ಕ್ರಮಕೈಗೊಳ್ಳದೇ ಅದರ ನಿರ್ಮಾಣಕ್ಕೆ ಅನುಮತಿಸಲಾಗಿದೆ.

ಯಾವುದೋ ಒಂದು ರೀತಿಯಲ್ಲಿ ಕೆಟ್ಟದ್ದಾಗುತ್ತದೆ ಎಂದು ತಿಳಿದಿತ್ತು. ಅಹಮದಾಬಾದ್‌ನ ರನ್‌ವೇ ಯಿಂದ ಆಚೆ ಇರುವ ಮೇಲ್ಮೈಗಳು ಅಪಾಯಕಾರಿ ಎಂದು ಪುನರಾವರ್ತಿತ ಸುರಕ್ಷತಾ ಲೆಕ್ಕಪರಿಶೋಧನೆಗಳು ಎಚ್ಚರಿಸಿವೆ.  2019ರ ಡಿಜಿಸಿಎ ವರದಿಯು ಅಪಾಯಗಳನ್ನು ಸ್ಪಷ್ಟವಾಗಿ ವಿವರಿಸಿದೆ. 2018ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ರನ್‌ವೇಯ ಸುರಕ್ಷತಾ ಪ್ರದೇಶವನ್ನು ವಿಸ್ತರಿಸಲು 29.79 ಎಕರೆ ಭೂಮಿ ಹಂಚಿಕೆ ಮಾಡಲು ಗುಜರಾತ್ ಸರ್ಕಾರವನ್ನು ಕೇಳಿಕೊಂಡಿತ್ತು.  ಪ್ರಾಧಿಕಾರಕ್ಕೆ ಅನುಮೋದನೆ ಸಿಕ್ಕಿತು. ಆದರೆ ಇಂದಿಗೂ ಸಂಬಂಧಿಸಿದ ಭೂಮಿಯನ್ನು ಹಸ್ತಾಂತರ ಮಾಡಲಾಗಿಲ್ಲ. ಏಕೆಂದರೆ  ಈ ಭೂಮಿಯನ್ನು ವಶಪಡಿಸಿಕೊಳ್ಳಲು ಹತ್ತಿರದಲ್ಲಿ ವಾಸಿಸುವ 350 ಕುಟುಂಬಗಳನ್ನು ಸ್ಥಳಾಂತರಿಸುವ ಅಗತ್ಯವಿತ್ತು. ಈ ರೀತಿ ಮಾಡುವುದು ರಾಜಕೀಯ ವ್ಯಕ್ತಿಗಳಿಗೆ ರಾಜಕೀಯವಾಗಿ ಅನುಕೂಲಕರವಾಗಿರಲಿಲ್ಲ. ಹೀಗೆ ಮಾಡುವುದರಿಂದ ಯಾವುದೇ ಮತಗಳು ಬರುವುದಿಲ್ಲವಾದ್ದರಿಂದ ಇಲ್ಲಿಯ ಜನರನ್ನು ಸ್ಥಳಾಂತರ ಮಾಡಲಾಗಿಲ್ಲ. ವಿಮಾನ ನಿಲ್ದಾಣವನ್ನು ಪ್ರಯಾಣಿಕರ ದೃಷ್ಟಿಯಿಂದ ವಿಸ್ತರಿಸುತ್ತಲೇ ಬೇಕಿತ್ತು. ಈಗ ಇರುವ ವಿಮಾನ ನಿಲ್ದಾಣದಿಂದ ಎಂದಿಗೂ ಸುರಕ್ಷತೆ ಇಲ್ಲ. ಅಲ್ಲಿ ಅಪಾಯದ ಸಂದರ್ಭಗಳು ಹೆಚ್ಚುತ್ತಲೇ ಇವೆ. ಅದು ಹೇಗೆಂದರೆ ತನ್ನದೇ ನಗರದ ಮೇಲೆ ನೇರವಾಗಿ ಗುರಿಯಿಟ್ಟು ಲೋಡ್ ಮಾಡಿದ ಬಂದೂಕಿನಂತೆ ಆಗಿದೆ.

ಈ ಎಲ್ಲಾ ವೈಫಲ್ಯದ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿದೆ.  ಆದರೆ ಆಶ್ಚರ್ಯಗೊಳ್ಳುವಂತಹದ್ದೇನೂ ಇಲ್ಲ. ಅಹಮದಾಬಾದ್ ನಗರದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಅಭಿವೃದ್ಧಿಯ “ಮಾದರಿ ನಗರ” ಎಂದು ಬಹಳ ಹಿಂದಿನಿಂದಲೂ ಬಿಂಬಿಸಲಾಗುತ್ತಿದೆ.  ಆದರೆ ಈ ದುರಂತದಿಂದಾಗಿ ಮೋದಿಯವರ ಸ್ವಂತ ಹಿತ್ತಲಿನಲ್ಲಿ ಆ “ಅಭಿವೃದ್ಧಿ” ಎಂದರೆ ಏನು ಎಂಬುದನ್ನು ನಾವು ಕಾಣುತ್ತಿದ್ದೇವೆ. 2022ರಲ್ಲಿ ಘೋಷಿಸಲ್ಪಟ್ಟ ಮತ್ತು ಅಹಮದಾಬಾದ್‌ನ ದಟ್ಟಣೆ ಬಿಕ್ಕಟ್ಟಿಗೆ ಪರಿಹಾರವೆಂದು ಹೇಳಲಾದ ಧೋಲೆರಾದಲ್ಲಿ ಭರವಸೆ ನೀಡಿದ ಎರಡನೇ ವಿಮಾನ ನಿಲ್ದಾಣವನ್ನು ಈಗ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿತ್ತು. ಅದರ ರನ್‌ವೇಗಳು ಇನ್ನೂ ಅಸ್ತಿತ್ವದಲ್ಲಿಲ್ಲದ ಕಾರಣ ಅಲ್ಲಿಂದ ಒಂದು ವಿಮಾನವು ಹಾರಾಟ ನಡೆಸಿಲ್ಲ.

ಗುಜರಾತ್‌ನವರಾದ ಗೃಹ ಸಚಿವ ಅಮಿತ್ ಶಾ ಅವರು ತಾವು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ನಗರದಲ್ಲಿ ಸುರಕ್ಷತೆಗಾಗಿ ಹೊಸತೇನನ್ನೂ ಮಾಡಿಲ್ಲ. ಈ ದುರಂತದಲ್ಲಿ ನಿಧನರಾದವರಲ್ಲಿ ಒಬ್ಬರಾದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ರೂಪಾನಿಯವರಿಗೆ ಈ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಸರಿಪಡಿಸಲು ಈ ಹಿಂದೆ ಅಧಿಕಾರದಲ್ಲಿದ್ದಾಗ ಅವಕಾಶವಿತ್ತು. ಅವರು 2016 ರಿಂದ 2021 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದಕ್ಕಿಂತ ದೊಡ್ಡ ದೋಷಾರೋಪಣೆ ಇನ್ನೇನು ಇರಲು ಸಾಧ್ಯ? ಅಭಿವೃದ್ಧಿಯನ್ನು ಕಡೆಗಣಿಸಿದಾಗ ಇದೆಲ್ಲಾ ಸಂಭವಿಸುತ್ತದೆ. ಇದು ದೇವರು ಮಾಡಿದ ದುರಂತವಲ್ಲ. ಇದು ಮಾನವ ನಿರ್ಮಿತ ದುರಂತ. ಈ ವಿಮಾನ ನಿಲ್ದಾಣದ ಲೋಪದೋಷಣಗಳ ಕುರಿತು ಬಂದ ವರದಿಗಳನ್ನು ನಿರ್ಲಕ್ಷಿಸುವುದರಿಂದ ಉಂಟಾಗಿದೆ. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ನಿರ್ಮಿಸಲು ಆದ್ಯತೆ ನೀಡುವ ಬದಲು ಈ ವಿಮಾನ ನಿಲ್ದಾಣದ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿತ್ತು.

ನಾವು 241 ಜನರ ಸಾವಿಗೆ ಮೌನವಾಗಿ ದುಃಖಿಸಬಾರದು. ಇದಕ್ಕಾಗಿ ನಾವೆಲ್ಲಾ ಗುಜರಾತ್ ಸರ್ಕಾರವನ್ನು ಹೊಣೆ ಮಾಡಬೇಕು. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ಅಮಿತ್ ಶಾ ಕೂಡ ಉತ್ತರಿಸಬೇಕು. ಇಷ್ಟು ಮಾತ್ರವಲ್ಲದೇ  3,000 ಕೋಟಿ ರೂ. ಟರ್ಮಿನಲ್ ವಿಸ್ತರಣಾ ಯೋಜನೆಗಾಗಿ ಘೋಷಿಸಿದ, ಆದರೆ ರನ್‌ವೇ ಸುರಕ್ಷತೆಯ ಮೂಲ ಸಮಸ್ಯೆಯನ್ನು ಪರಿಹರಿಸಲು ಏನನ್ನೂ ಮಾಡದ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ಕೂಡ ಉತ್ತರಿಸಬೇಕು. ಸುರಕ್ಷತಾ ವರದಿಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಪ್ರತಿಯೊಬ್ಬ ಅಧಿಕಾರಿಯೂ ಉತ್ತರಿಸಬೇಕು.  ಹಾಗೆಯೇ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸದ ಮಾಧ್ಯಮ ಸಂಸ್ಥೆಗಳು ಕೂಡ ಇದಕ್ಕೆ ಹೊಣೆ ಹೊರಬೇಕು. ಈ ರೀತಿ ವಿಮಾನ ಅಪಘಾತಕ್ಕೆ ಪರೋಕ್ಷವಾಗಿ ಇವರೆಲ್ಲರೂ ಕಾರಣವಾಗಿರುವುದರಿಂದ ಉತ್ತರಿಸಬೇಕಿದೆ.

ನಾವು ಜಾಗತಿಕ ಶಕ್ತಿಯಾಗುವ ಬಗ್ಗೆ ಮಾತನಾಡುತ್ತೇವೆ. ಆದರೆ ಗುಜರಾತ್ ರಾಜಧಾನಿಯಲ್ಲಿ ಸಾಕಷ್ಟು ಅಗ್ನಿಶಾಮಕ ವಾಹನಗಳಿಲ್ಲ. ಈ ವಿಮಾನ ನಿಲ್ದಾಣದ ರನ್‌ವೇಗಳು ಕೊಳೆಗೇರಿಗಳಿಂದ ಸುತ್ತುವರೆದಿವೆ. ಇಲ್ಲಿಗೆ ಇಷ್ಟು ಸಾಕು. ಆಡಳಿತದಲ್ಲಿ ಯಾವುದೇ ಘನತೆ ಉಳಿದಿದ್ದರೆ, ಪತ್ರಿಕೋದ್ಯಮದಲ್ಲಿ ಯಾವುದೇ ಜವಾಬ್ದಾರಿ ಉಳಿದಿದ್ದರೆ ಮತ್ತು ಸಾರ್ವಜನಿಕರಲ್ಲಿ ಯಾವುದೇ ಧೈರ್ಯ ಉಳಿದಿದ್ದರೆ, ಇದು ಹ್ಯಾಶ್‌ಟ್ಯಾಗ್‌ಗಳೊಂದಿಗೆ ಕೊನೆಗೊಳ್ಳಬಾರದು. ಇದು ಕೆಲವರ ರಾಜೀನಾಮೆಗಳೊಂದಿಗೆ ಕೊನೆಗೊಳ್ಳಬೇಕು. ತನಿಖೆಗಳು, ವಿಚಾರಣೆಗಳು, ವಿಮಾನ ನಿಲ್ದಾಣದ ಸುಧಾರಣೆಗಳು ನಡೆಯಬೇಕು.

ಇದನ್ನು ಸಾಕಷ್ಟು ಕೋಪದಲ್ಲಿ ಬರೆಯಲಾಗಿದೆ ಮತ್ತು ನೀವು ಇದನ್ನು ಅಹಮದಾಬಾದ್, ಅಥವಾ ಲಂಡನ್, ಅಥವಾ ದೆಹಲಿ ಅಥವಾ ಎಲ್ಲಿಯೇ ಓದುತ್ತಿದ್ದರೆ, ಇದನ್ನು ತಿಳಿದುಕೊಳ್ಳಿ: ಇದೇ ರೀತಿ ಮುಂದಾಗುವ ದುರಂತದಲ್ಲಿ ನೀವು ಸಿಲುಕಬಹುದು.

ಮತ್ತು ನಾನು ಹೇಳಿದ್ದರಲ್ಲಿ ಯಾವುದು ಬದಲಾಗದಿದ್ದರೆ, ಮುಂದಿನ ಬಾರಿಯ ದುರಂತ ಬೇರೆ ರೀತಿಯದ್ದಾಗಿರಬಹುದು.

ರಾಹುಲ್ ಗಾಂಧಿಯ ‘ಟ್ರಂಪ್‌ಗೆ ಮೋದಿ ಶರಣು’ ಹೇಳಿಕೆ v/s ಸಿಂಗ್ ಪ್ರಧಾನಿಯಾಗಿದ್ದಾಗ ಮೋದಿಯ ಹೇಳಿಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...