Homeಚಳವಳಿ’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ...

’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ…

- Advertisement -
- Advertisement -

ಈಗ ನಮ್ಮ ದೇಶದಾಗ ಹಿಂದೂ ಅನ್ನೋ ಪದ ಎನ್ನುವುದು ಟ್ರೆಂಡಿಂಗ್ ಆಗೇದ. ಒಂದ ಏನಪಾ ಅಂದರ ಹಿಂದೆಲ್ಲಾ ‘ನಾವೆಲ್ಲ ಹಿಂದೂ ಅಂತ ಅಂತಿದ್ದವರು ಈಗ ನಾವಷ್ಟ ಹಿಂದೂ’ ಅಂತ ಅನ್ನಲಿಕ್ಕೆ ಹತ್ಯಾರ.

ಭಾರತ- ಪಾಕಿಸ್ತಾನ ಎರಡೂ ದೇಶಗಳ ಸಾಂಸ್ಕೃತಿಕ ಕೊಂಡಿಯಾಗಿದ್ದ ಜನಪ್ರಿಯ ಕವಿ ಫೈಜ್ ಅಹಮದ್ ಫೈಜ್ ಅವರ ‘ಹಮ್ ದೇಖೇಂಗೆ’ ಅನ್ನೋ ಹಾಡು ಹಿಂದೂ ವಿರೋಧಿ ಅಂತ ಕೆಲವರು ದೂರು ಕೊಟ್ಟಾರ. ಅದು ಹೌದೋ ಅಲ್ಲೋ ಅಂತ ನೋಡಲಿಕ್ಕೆ ಐಐಟಿ ಯವರು ಒಂದು ಸಮಿತಿ ನೇಮಕ ಮಾಡ್ಯಾರ. ವಿಧಾನಸೌಧದ ಮೂರನೇ ಮಹಡಿಯೊಳಗ ಒಂದು ಜೋಕ್ ಅದ. ಯಾವುದರೇ ವಿಷಯಕ್ಕ ಯಾವ ನಿರ್ಧಾರಕ್ಕ ಬರಬೇಕು ಅಂತ ತಿಳೀದೇ ಇದ್ದಾಗ ಒಂದು ಸಮಿತಿ ನೇಮಕ ಮಾಡ್ರಿ.

ಹಿಂಗ ಮಾಡಬಹುದು ಅಂತ ಗೊತ್ತಾದನಂತರ ಅದನ್ನ ಈಗ ಸದ್ಯ ಜಾರಿ ಮಾಡಬಾರದು ಅಂತ ಇದ್ದರ ಅದರ ಪರಾಮರ್ಶೆಗೆ ಇನ್ನೊಂದು ಸಮಿತಿ ನೇಮಿಸಿರಿ ಅಂತ.

ನಾಲ್ಕು ಪ್ಯಾರಾದ ಆ ಹಾಡಿನ್ಯಾಗ ಬಳಸಿದ ಕೆಲವು ಶಬ್ದ ಕೆಲವರಿಗೆ ಕಿರಿಕಿರಿ ಆಗ್ಯಾವು.

ಇದರಾಗಿನ ಒಂದು ಸಾಲು ಇದು- “ದೇವ ಭೂಮಿ ಕಾಬಾದಾಗಿನ ಎಲ್ಲಾ ಮೂರ್ತಿಗಳನ್ನು ತೆಗೆಯಲಾಗತದ”. ಇದು ಇಸ್ಲಾಮಿನ ಇತಿಹಾಸಕ್ಕೆ ಸಂಬಂಧಪಟ್ಟದ್ದು. ಇಸ್ಲಾಂ ಪೂರ್ವ ಅರೇಬಿಯಾದಲ್ಲಿ ಮೂರ್ತಿ ಪೂಜೆ ಇತ್ತು. ಪ್ರವಾದಿ ಮಹಮ್ಮದರು ಮೂರ್ತಿ ಪೂಜೆಯ ವಿರೋಧಿ. ಅವರು ಬದ್ರದ ಯುದ್ಧ ಗೆದ್ದು ಮೆಕ್ಕಾಗೆ ಬಂದನಂತರ ಕಾಬಾದಾಗ ಸುಮಾರು 360 ಮೂರ್ತಿಗಳನ್ನ ಇಟ್ಟದ್ದನ್ನ ನೋಡಿದರು. ಅದರಾಗ ಅಂದಿನ ಪ್ರಮುಖ ದೇವತೆ ಹುಬಾಲನ ವಿಗ್ರಹವೂ ಇತ್ತು.

ಅವನ್ನೆಲ್ಲಾ ಅವರು ಅಲ್ಲಿಂದ ತೆಗೆದರು.
ಫೈಜ್ ಅವರ ಕವನದಲ್ಲಿ ಇದು ಮೂರ್ತಿ ಪೂಜೆಯ ವಿರೋಧದಂತೆ ಕಂಡರೂ, ಅದು ಅಸಲಿಗೆ ಆಧುನಿಕ ಕಾಲದ ವ್ಯಕ್ತಿ ಪೂಜೆಯ ವಿರೋಧವಾಗಿರೋದು.

ಇನ್ನ ಅದರಾಗ “ಎಲ್ಲಾ ಕಡೆ ಅನಲ್ ಹಕ್‍ನ ಘೋಷಣೆ ಹೊಮ್ಮಲಿದೆ” ಅನ್ನೋ ಇನ್ನೊಂದು ಸಾಲು ಅದ. ಇದು “ಅಹಂ ಬ್ರಹ್ಮಾಸ್ಮಿ”ಗೆ ಹತ್ತಿರವಾದದ್ದು.

“ನಾನೇ ದೇವರು, ನಾನೇ ಸತ್ಯ” ಅನ್ನೋದು ಇಸ್ಲಾಂನ ಮೂಲತತ್ವ ಅಲ್ಲ ಅಂತ ವಾದಿಸುವವರು ಇರಬಹುದು. ಆದರೆ ಅದನ್ನೇ ನಂಬಿ ಬದುಕಿದ. ಆ ಘೋಷಣೆ ಕೂಗಿದ್ದಕ್ಕೆ ಫಾಸಿ ಶಿಕ್ಷೆ ಅನುಭವಿಸಿದ ಸೂಫಿ ಮನ್ಸೂರ ಅಂಥವರೂ ಇಲ್ಲೇ ದೆಹಲಿಯೊಳಗ ಇದ್ದರು ಅನ್ನೋದು ನಾವು ಮರೆಯಬಾರದು.

ಅದು ಇರಲಿ ಬಿಡಲಿ. ಅಹಂ ಬ್ರಹ್ಮಾಸ್ಮಿ ಅನ್ನೋದಂತೂ ಚೊಕ್ಕ ಹಿಂದೂ ಧರ್ಮದ ತತ್ವ. ಅದನ್ನು ಯಾರಿಗೂ ನೆನಪು ಮಾಡೋದು ಬ್ಯಾಡ.
ಹಂಗಾರ ಇದರಾಗ ಹಿಂದೂ ವಿರೋಧಿ ಅನ್ನೋದು ಏನು ಐತಿ?
ಹೋಗಲಿ ಬಿಡ್ರಿ. ಹಿಂದೂ ಅಂದರರ ಏನು?

ಇದರ ಬಗ್ಗೆ ತತ್ವಜ್ಞಾನಿಗಳು ತಮ್ಮಳವಿಗೆ ತಿಳಿದಂತೆ ಉತ್ತರ ಕೊಟ್ಟರ ಭಾರತದ ಸರ್ವೋಚ್ಚ ನ್ಯಾಯಾಲಯ ಇನ್ನೊಂದು ಉತ್ತರ ಕೊಟ್ಟದ.

ಇವತ್ತಿಗೆ ಸುಮಾರು 50 ವರ್ಷದ ಹಿಂದೆ ಶಾಸ್ತ್ರಿ ವಿರುದ್ಧ ಮೂಲದಾಸ ಪ್ರಕರಣದಾಗ ನ್ಯಾಯಮೂರ್ತಿ ಪಿ. ಬಿ ಗಜೇಂದ್ರಗಡಕರ ಅವರು ಮತ್ತು ಇತರರು ಇದಕ್ಕೊಂದು ಸರ್ವಮಾನ್ಯ ಅನ್ನೋವಂಥಾ ವ್ಯಾಖ್ಯಾನ ಕೊಟ್ಟಾರ.

“ಹಿಂದೂ ಅಂದರ ಅದು ಒಂದು ಜೀವನಶೈಲಿ ಅಷ್ಟೇ. ಅದಕ್ಕೂ ಹೆಚ್ಚಿನದೇನೂ ಇಲ್ಲ” ಅಂತ ಅಧಿಕಾರಯುತವಾಗಿ ಅವರು ಹೇಳಿದ ಮಾತು ಇವತ್ತಿನವರೆಗೂ ನಮ್ಮ ನ್ಯಾಯಾಲಯಗಳನ್ನ ಕೈಹಿಡಿದು ನಡೆಸುತ್ತಾ ಬಂದದ.

ಆ ತೀರ್ಪಿನೊಳಗ ಕಾಣುವ ಮಾತುಗಳು ಇವು.
“ವೇದಗಳಲ್ಲಿ ವಿಶ್ವಾಸ ಹಾಗೂ ಪುನರ್‍ಜನ್ಮದಲ್ಲಿ ನಂಬಿಕೆ ಮತ್ತು ಜನನಮರಣದ ಚಕ್ರದಿಂದ ಬಿಡುಗಡೆಯೇ ಹಿಂದೂ ಧರ್ಮದಲ್ಲಿ ಜೀವನದ ಅಂತಿಮ ಗುರಿ.

ಇದು ಸಾಧ್ಯವಾಗುವುದು ಅನೇಕ ವಿಧಗಳಿಂದ, ಅನೇಕ ರೀತಿ ರಿವಾಜುಗಳಿಂದ. ಇದಕ್ಕ ಒಂದ ದಾರಿ, ಒಂದ ರೀತಿ, ಒಂದ ಧರ್ಮಸಿಂಧು ಅಂತ ಇಲ್ಲ.

ಕೆಲವರು ಇದು ಜ್ಞಾನದಿಂದ ಸಾಧ್ಯ ಎಂದರೆ ಕೆಲವರು ಕರ್ಮ ಹಾಗೂ ಇನ್ನು ಕೆಲವರು ಭಕ್ತಿಯಿಂದ ಅಂತಾರ. ಸತ್ಯಕ್ಕೆ ಹಲವು ಮುಖ. ಅವುಗಳನ್ನು ಯಾರೂ ಸಂಪೂರ್ಣವಾಗಿ ತಿಳಿಸಲು ಸಾಧ್ಯ ಇಲ್ಲ. ಆದ್ದರಿಂದ ಅವೆಲ್ಲವೂ ಖರೆ.”

“ಇದು ಸತ್ಯ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಅದನ್ನು ಅರ್ಥಮಾಡಿಕೊಂಡಾರ. ಆದ್ದರಿಂದನ ಎಲ್ಲಾರಿಗೂ ಹಿಂದೂ ಧರ್ಮದ ಯಾವುದೇ ಮುಖ ಅಪರಿಚಿತ ಅನ್ನಿಸೋದಿಲ್ಲ. ಯಾರು ಯಾವ ಅಭಿಪ್ರಾಯ ಮಂಡಿಸಿದರೂ ಅದನ್ನು ಒಪ್ಪುವುದು ಸಹಜ. ನಂದ ಖರೇ ಅಂತ ಯಾರಾದರೂ ವಾದಾ ಮಾಡಿದರ ಇರಲೆಪ್ಪ, ನನಗ ನಂದ ಖರೇ ನಿನಗ ನಿಂದ ಖರೇ, ಅಂತ ಹೇಳಿ ಸುಮ್ಮನೇ ಆಗತಾರ. ಸತ್ಯದ ಕಡೆ ಹೋಗೋ ದಾರಿ ಪ್ರತಿಯೊಬ್ಬರದೂ ಬ್ಯಾರೆ ಇರಬಹುದು. ಆದರ ಈ ದಾರಿಯೊಳಗ ಬಂದವರಷ್ಟ ನಮ್ಮವರು, ಆ ದಾರಿಯೊಳಗ ಬಂದವರು ನಮ್ಮವರಲ್ಲಾ ಅಂತ ಹೇಳಲಿಕ್ಕೆ ಬರೋದಿಲ್ಲ. ಇದೇ ಸತ್ಯ. ಹಿಂದೂ ಧರ್ಮದ ಪರಂಪರೆಯೊಳಗ ಇರುವ ಅಗಣಿತ ತಾತ್ವಿಕ ಪರಂಪರೆಗಳು ಎಲ್ಲವೂ ಮಾನ್ಯ. ಯಾವುವೂ ತಿರಸ್ಕಾರಕ್ಕೆ ಯೋಗ್ಯ ಅಲ್ಲ.”

“ಯಾಕೆ ಇಷ್ಟೋಂದು ಪಂಥಗಳು ಆದವು ಅನ್ನೋದು ಸಹಿತ ಆಸಕ್ತಿಕರ ವಿಷಯ. ಅದು ಈ ಧಾರ್ಮಿಕ ಪರಂಪರೆಯೊಳಗಿನ ಸೃಜನಶೀಲ ಚಲನೆಯ ಕುರುಹು. ಸಂತರು, ದಾರ್ಶನಿಕರು, ಈ ಧರ್ಮ ಭ್ರಷ್ಟತೆಯನ್ನ, ಅಂಧ ವಿಶ್ವಾಸವನ್ನ ಎದುರಿಸಿದರು. ಪುರೋಹಿತಶಾಹಿಯ ವಿರುದ್ಧ, ವಿಚಾರಕ್ಕಿಂತ ಆಚರಣೆಯ ಹೆಚ್ಚು ಮಹತ್ವ ಪಡೆಯುವುದರ ವಿರುದ್ಧ, ಸಮರ ಸಾರಿದರು. ಇದರಿಂದಾಗಿಯೇ ನಮಗೆ ಬೇರೆ ಬೇರೆ ಪಂಥ ಅಂತ ಅನ್ನಿಸತಾವು. ಆದರ ಇವು ಎಲ್ಲವೂ ಸತ್ಯವನ್ನು ಕಂಡುಕೊಳ್ಳುವ ವಿವಿಧ ದಾರಿಗಳು ಅಷ್ಟ. ಮೇಲುನೋಟಕ್ಕ ಇವು ಬ್ಯಾರೆ ಅಂತ ಅನ್ನಿಸಿದರೂ ಇವು ಒಳಗೆಲ್ಲಾ ಒಂದೇ.”

“ಈ ಎಲ್ಲಾ ಸಂತರ ವಿಚಾರದ ಮೂಲ ನೋಡಿದಾಗ ಅವು ವೇದಗಳಿಂದ ಬಂದದ್ದವು ಅಂತ ಸ್ಪಷ್ಟವಾಗಿ ಗೊತ್ತಾಗತದ. ವೇದ ಎಂಬ ವೈಚಾರಿಕ ಜಲಾಶಯದಿಂದನ ಇವರಿಗೆಲ್ಲಾ ಸ್ಫೂರ್ತಿ ಸಿಕ್ಕದ. ಅವರ ವಿಚಾರದ ಮೂಲಗಳ ಆಕರ ವೇದ ಎಂಬ ಝರಿ. ಹಿಂದೂ ಧರ್ಮ ಅಪೌರುಶೇಯ. ಇದಕ್ಕೆ ಯಾರೋ ಒಬ್ಬ ಮೂಲ ಪುರುಷ, ಜನಕ ಅಥವಾ ಸ್ಥಾಪಕ ಅಂತ ಇಲ್ಲ. ಒಂದೇ ಸಿದ್ಧಾಂತ ಅಂತ ಇಲ್ಲ. ಹಿಂದೂಗಳು ಒಬ್ಬ ದೇವರನ್ನೇ ಪೂಜಿಸುತ್ತಾರೆ ಅಂತೇನೂ ಇಲ್ಲ. ಒಂದೇ ಕಟ್ಟುಪಾಡುಗಳು, ರೀತಿ ರಿವಾಜುಗಳು ಇಲ್ಲ. ಖರೇ ಹೇಳಬೇಕಂದರ ಧರ್ಮ ಅಂದರ ಹಿಂಗ ಇರಬೇಕು ಅಂತ ನಾವು ಯಾವುದಕ್ಕ ಹೇಳತೇವೋ ಅವು ಯಾವ ಗುಣಗಳೂ ಇದಕ್ಕೆ ಇಲ್ಲ. ಇದೊಂದು ಜೀವನ ಶೈಲಿ ಅಷ್ಟ”.
ನಂತರ ಅಪ್ಪಾ ಬಾಳು ಇಂಗಳೆ ಪ್ರಕರಣದಾಗ ಅಸ್ಪøಶ್ಯತೆ ಎನ್ನುವುದು ಹಿಂದೂ ಧರ್ಮವನ್ನು ನಾವು ಅಪಾರ್ಥ ಮಾಡಿಕೊಂಡಿದ್ದರಿಂದ ಬಂದ ಕೆಡುಕು. ಇದು ಹಿಂದು ಧರ್ಮದ ಭಾಗ ಅಂತ ವಾದ ಮಾಡೋರು ಹಿಂದೂ ಧರ್ಮ ಅರ್ಥಮಾಡಿಕೊಂಡೇ ಇಲ್ಲ ಅನ್ನೋ ಮಾತು ಬಂತು.

ಹಿಂದೂ ಧರ್ಮ ಅನ್ನೋದು ಇಷ್ಟು ಸರಳ ಅಂತಾದರ, ಹಿಂದೂ ವಿರೋಧಿ ಅನ್ನೋದು ಯಾಕ ನಮಗ ಅಷ್ಟ ಕಠಿಣ ಆಗೇದ? ತಿಳಿಯಲಾರದವರೇ ತಿಳಿ ಹೇಳಬೇಕು.

ಅಷ್ಟಕ್ಕೂ ಆಳುವವರು ಕಾವ್ಯ ವಿರೋಧಿಗಳಾಗಿರೋದು ಯಾಕ?
ಅದರ ಉತ್ತರ ಕವಿ ಹಬೀಬ್ ಜಾಲಿಬ್‍ರ ಶಾಯರಿಯೊಳಗ ಐತಿ.

“ಶೇರು ಶಾಯರಿಗಳಿಗೆ ಹೆದರತಾರೋ ಇವರು
ಇರುಳುಗಣ್ಣಿನವರು ಬೆಳಕಿಗೆ ಹೆದರತಾರೋ”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...