Homeಅಂಕಣಗಳುನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

ನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

- Advertisement -
- Advertisement -

ಎಲೆಮರೆ- 14

`ಐದು ಎಕರೆ ಬಳ್ಳಿ ಶೇಂಗಾ ಹಾಕಿದ್ದೆ ಕಾಯಿ ಚಲೋ ಹಿಡದಾತಿ, ಬೇರೆಯವ್ರು ಸರಕಾರಿ ಗೊಬ್ಬರ ಹಾಕಿ, ಕಳೆನಾಶಕ ಸಿಂಪಡಿಸಿದ್ರು. ನಾನು ಸೆಗಣಿಗೊಬ್ಬರ ಹಾಕಿ ಕಳೆ ತಗಸಿದ್ದೆ. ಅದಕ್ಕ ನಲ್ವತ್ ಸಾವ್ರ ಖರ್ಚಾಗಿತ್ತು. ಇದನ್ನ ನೋಡಿ ಊರವರೆಲ್ಲ ನಕ್ಕಿದ್ರು. ಈತಗ ಹುಚ್ ಹಿಡದಿರಬೇಕು, ಎರಡು ಸಾವ್ರ ಕಳೆನಾಶಕ ಹೊಡದಿದ್ರ ಸಾಕಿತ್ತು ಅಂದಿದ್ರು. ನನ್ನ ಲೆಕ್ಕ ಹೆಂಗಂದ್ರ ಕಳೆ ತಗಿಯೋರು ಬದುಕಬೇಕು ನಾನು ಬದುಕಬೇಕು ಅನ್ನೋದು. ಸೆಗಣಿ ಹಾಕಿ, ಕಳೆ ತಗಸಿದ್ದಕ್ಕ ನೆಲ ಮಿದುವು ಆಗಿ ಕಾಯಿ ಬಾಳ ಹಿಡದಾತಿ. 60-70 ಚೀಲ ಆಗಬಹುದು. ಬೇರೆಯವ್ರದ್ದು ಸರಕಾರಿ ಗೊಬ್ಬರ, ಕಳೆನಾಶಕ ಬಳಸಿದ್ದಕ್ಕ ಮಳಿನೂ ಬಾಳ ಆಗಿ ನೆಲ ಬಿಗುವು ಆಗಿ ಕಾಯಿ ಹಿಡದಿಲ್ಲ. ಅಂತ ರೈತರೆಲ್ಲಾ ಈ ಸಲ ಲಾಸ್ ಆದ್ರು. ನೀರಾವರಿಗೆ ಒಂದೆಕರೆ ಬಾಳೆ ಹಾಕೀನಿ. ಒಬ್ಬಂಟಿಗರಾಗಿ ಬಾಳ ಹೊಲ ಮಾಡಕಾಗಲ್ಲ’ ಹೀಗೆ ತಣ್ಣಗೆ ನೆಲದ ಜತೆಗಿನ ಪಿಸುಮಾತುಗಳನ್ನು ಆಡುವ ಕವಿ ಚಂಸು ಪಾಟೀಲ.

ಚಂದ್ರಶೇಖರ ಸುಭಾಶಗೌಡ ಪಾಟೀಲ ಅಂದ್ರೆ ಯಾರೀತ, ಯಾವುದೋ ರಾಜಕಾರಣೀದೋ, ದೊಡ್ ಮನ್ಷನ ಹೆಸರಿದ್ದಂಗೈತಿ ಅಂತ ಅನ್ನಿಸುತ್ತದೆ. ಇದೇ ಹೆಸರನ್ನು ಸಂಕ್ಷಿಪ್ತಗೊಳಿಸಿ ಚಂಸು ಪಾಟೀಲ ಅಂದರೆ ಸಾಹಿತ್ಯ ವಲಯದ ಹೊಸ ತಲೆಮಾರನ್ನು ಸೂಕ್ಷ್ಮವಾಗಿ ಗಮನಿಸುವ ಕೆಲವರಿಗಾದರೂ, ಅದರಲ್ಲೂ ಪೇಸ್‍ಬುಕ್‍ನ್ನು ಆಕ್ಟಿವ್ ಆಗಿ ಬಳಸುವವರಿಗೆ ಈ ಹೆಸರಿನ ಜತೆ ರೈತಾಪಿ ಮುಖದ ಚಿತ್ರವೊಂದು ಕಣ್ಮುಂದೆ ಬರಬಹುದು. ನನಗೋ ಕಾಸ್ಟವೆ ಸಿನೆಮಾದ ಕೊನೆಯಲ್ಲಿ ರೂಪಾಂತರ ಹೊಂದಿದ ನಟ ಟಾಮ್ ಹ್ಯಾಂಕ್ಸ್ ತರವೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹಾಗೆಯೂ ಚಂಸು ಕಾಣಿಸುತ್ತಾನೆ.

ನನಗೆ ಕಳೆದ ಒಂದೂವರೆ ದಶಕದಿಂದ ಚಂಸು ಪಾಟೀಲ ಪರಿಚಯ. ಆತ ಸಾದಾಸೀದಾ ಜವಾರಿ ಮನ್ಷ. ಒಮ್ಮೆ ಸೊಂಡೂರು ಭೂ ಹೋರಾಟ ಪುಸ್ತಕ ಬರೆಯುವಾಗ ದಾಖಲೆಗಳನ್ನು ಹುಡುಕಿಕೊಂಡು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಹೋಗಿದ್ದೆ. ಆಗ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಐವತ್ತು ದಾಟಿದ ತಲೆ ಬಿಳಿಯಾದ ಹಿರಿಯರೇ ತುಂಬಿರುವಾಗ ಕರಿಕೂದಲಿನ ಕಡ್ಡಿಯಂಥ ಹುಡುಗ ಒಂದು ಮೂಲೆಯ ಹಳೇ ಕಂಪ್ಯೂಟರಿನಲ್ಲಿ ಕಣ್ಣು ನೆಟ್ಟು ಕೂತಿದ್ದ. ನಾನು ನನ್ನ ಹೆಸರೇಳಿ ಪರಿಚಯಿಸಿಕೊಂಡೆ, `ಹೇಯ್ ಬರ್ರಿ ಅರುಣ್ ನೀವು ನಮಗ ಗೊತ್ತು ನಿಮ್ಮ ಬರಹ ಓದೇನಿ’ ಎಂದು ಸಹಜವಾದ ಪ್ರೀತಿ ತೋರಿದ್ದ’ ಈ ಹುಡುಗನೆ ಚಂಸು ಪಾಟೀಲ. ಬಹುಶಃ ನನಗೆ ನೆನಪಿರುವಂತೆ ಅದುವೆ ಮೊದಲ ಭೇಟಿ ಇರಬೇಕು.

2002 ರಲ್ಲಿ ಬೆಂಗಳೂರಿನ `ನೋಟ’ ವಾರಪತ್ರಿಕೆಯಲ್ಲಿಯೂ, 2003 ರಲ್ಲಿ ಗುಲ್ಬರ್ಗಾದ ಕ್ರಾಂತಿ ದೈನಿಕದಲ್ಲಿಯೂ, 2003 ರಿಂದ 2006 ರ ತನಕ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕದಲ್ಲಿಯೂ ಚಂಸು ಪತ್ರಕರ್ತನಾಗಿ ಕೆಲಸ ಮಾಡಿದ. ಈತನ ವ್ಯಕ್ತಿ ಸ್ವಭಾವಕ್ಕೆ ಈ ಪತ್ರಕರ್ತ ಹುದ್ದೆ ಉಸಿರುಕಟ್ಟಿಸಿತು, ಮನೆಯ ಘಟನೆಗಳೂ ಪತ್ರಕರ್ತನಾಗಿ ಮುಂದುವರಿಯಲು ತೊಡಕಾದವು. ಈ ಎಲ್ಲದರ ಕಾರಣ ಹುಟ್ಟೂರಿಗೆ ಬಂದು, ತಾನು ಓದಿದ್ದೆಲ್ಲವನ್ನೂ ಮರೆತು 2007 ರಿಂದ ಕಮ್ತಕ್ಕೆ ನಿಂತ. ಆರಂಭಕ್ಕೆ ರೈತಾಪಿ ಕೆಲಸ ಸುಲಭವೇನಾಗಿರಲಿಲ್ಲ. ಹೊಲವೇ ಕಡುಕಷ್ಟಗಳನ್ನೊಡ್ಡಿ ಚಂಸುವನ್ನು ಪರೀಕ್ಷಿಸಿತು. ಈ ಎಲ್ಲಾ ಕಷ್ಟಗಳಿಗೆ ಬಂಡೆಯಂತಾಗಿ ನೆಲದ ಜತೆಗಿನ ಸಾಂಗತ್ಯವನ್ನು ಮುಂದುವರಿಸಿದ. ಬರುಬರುತ್ತಾ ನೆಲ ಚಂಸುವನ್ನು ಕೈಹಿಡಿಯತೊಡಗಿತು. ಅಹರ್ನಿಶಿ ಮತ್ತು ನಾವುನಮ್ಮಲ್ಲಿ ಬಳಗ 2018 ರಲ್ಲಿ ಪ್ರಕಟಿಸಿದ `ಬೇಸಾಯದ ಕತಿ’ ಪುಸ್ತಕದಲ್ಲಿ ಈ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಚಂಸು ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಬೇಕು ಅಂದುಕೊಂಡ ಯುವಜನತೆಗೆ ಇದೊಂದು ಅತ್ಯಂತ ಪ್ರಾಯೋಗಿಕ ಮಾರ್ಗದರ್ಶಿ. ಈ ಕೃತಿಯನ್ನು ಹಿರಿಯ ರೈತ ಹೋರಾಟಗಾರರಾದ ಶಾಮಣ್ಣನವರು ಅಕ್ಷತಾ ಅವರಿಂದ ಪುಸ್ತಕ ಪಡೆದು ರೈತ ಸಮಾವೇಶಗಳು ನಡೆವಲ್ಲಿ ಹೋಗಿ ಸ್ವತಃ ತಾವೇ ರೈತರಿಗೆ ಮಾರಾಟ ಮಾಡಿದ್ದಾರೆ. ಬಹುಶಃ ಈ ಕೃತಿಯ ಮಹತ್ವವನ್ನು ಇದಕ್ಕಿಂತ ಬೇರೆ ರೂಪದಲ್ಲಿ ಹೇಳಲಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ನಮ್ಮ ಗ್ರಾಮೀಣ ಕೃಷಿಕರು ಮಾಡುತ್ತಿದ್ದ ಸಹಜ ಸಾವಯವ ಬೇಸಾಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಚಂಸು ಪಾಟೀಲರು ಮೂಲತಃ ಕವಿ. ಈ ತನಕ `ಗೆಳೆಯನಿಗೆ’ (1995), `ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’ (2005) `ಅದಕ್ಕೇ ಇರಬೇಕು’ (2009) ಮೂರು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
2007 ರ ನಂತರ ಕಮ್ತಕ್ಕೆ ಬಂದಾಗಿನಿಂದ ನೆಲದ ಜತೆಗಿನ ಪಿಸುಮಾತುಗಳ ಆಲಿಸಿಕೊಂಡು ರೈತರ ಕಣ್ಣೋಟದಲ್ಲಿ ಕವಿತೆ ಬರೆಯಲು ತೊಡಗಿದ್ದಾರೆ. ಈ ಕವಿತೆಗಳು ಚಂಸು ಅವರ ಮೊದಲ ಕವಿತೆಗಳಿಗಿಂತ ತೀರಾ ಭಿನ್ನವಾಗಿವೆ. ಈ ನೆಲದ ನಿಜದ ರೈತನ ನಾಡಿಮಿಡಿತದಂತೆ ಈ ಕವಿತೆಗಳು ಮಾತನಾಡುತ್ತವೆ. ಚಂಸು ಅವರಿಗಿರುವ ವಿಶಿಷ್ಟತೆ ಏನೆಂದರೆ ತನ್ನ ಹಳ್ಳಿ ಕೂನುಬೇವಿನ ಹೊಲದಲ್ಲಿ ಉಳುಮೆ ಮಾಡಿಕೊಂಡೇ ಪೇಸ್‍ಬುಕ್ ಮತ್ತು ಅಂತರ್ಜಾಲದಲ್ಲಿ ಲೋಕದ ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಇದಕ್ಕೆಲ್ಲಾ ಪ್ರಖರವಾದ ವ್ಯಂಗ್ಯ ವಿಷಾದ ಸಿಟ್ಟು ತಣ್ಣನೆಯ ಪ್ರತಿರೋಧದ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪ್ರತಿಕ್ರಿಯೆಯನ್ನು ದಾಟಿಸಲು ಚಂಸು ಕವಿತೆಯನ್ನು ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

ಟಿ.ಕೆ.ತ್ಯಾಗರಾಜ್ ಅವರು ಸಂಪಾದಕರಾಗಿರುವ `ದ ಡೆಕ್ಕನ್ ನ್ಯೂಸ್’ ಅಂತರ್ಜಾಲ ಪತ್ರಿಕೆಯಲ್ಲಿ ಚಂಸು `ಭಪ್ಪರೇ ಶವ್ವಾ’ ಎನ್ನುವ ಅಂಕಣ ಬರೆಯುತ್ತಾರೆ. ಬಯಲಾಟ ದೊಡ್ಡಾಟದಲ್ಲಿ ಪರಸ್ಪರ ಹೊಗಳುವ ಸಂದರ್ಭದಲ್ಲಿ ಅಲೆಲೆಲೆ ಭಪ್ಪರೇ ಶವ್ವಾ..! ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ. ಹಾಗಾಗಿಯೇ ಚಂಸು ಸಾಮಾನ್ಯ ಜನರ ಬದುಕಿನ ಅಪರೂಪದ ಘಟನೆಗಳ ಕುರಿತು ಬರೆಯಲು `ಭಪ್ಪರೇ ಶವ್ವಾ..!’ ಎಂದು ಹೆಸರುಕೊಟ್ಟುಕೊಂಡಿದ್ದಾರೆ.

ಈ ಅಂಕಣವು ಲಘು ಹಾಸ್ಯಮಿಶ್ರಿತ ವ್ಯಂಗ್ಯ ನೋವು ಸಂಕಟ ಎಲ್ಲವನ್ನೂ ಬೆರೆಸಿದಂತಿದೆ. ಹೊಸ ತಲೆಮಾರು ಬರೆವ ಬರಹದಲ್ಲಿ ಇದು ವಿಶಿಷ್ಟವಾಗಿದೆ. ಗ್ರಾಮೀಣ ಚಿತ್ರಕಲಾವಿದ ಮುರಿಗೆಜ್ಜಪ್ಪ, ಅಪ್ಪಣ್ಣ, ಉಪ್ಪಾರ ಗುಡ್ಡಪ್ಪ, ಬಯಲಾಟದ ಅನುಭವ, ಶಿಶುನಾಳ ಶರೀಫರ ಹಾಡುಗಳು ನೆಲೆಗೊಂಡ ಬಗೆ, ರಂಗಭೂಮಿಯ ನಂಟು ಭಜನೆಯ ಒಡನಾಟ ಹೀಗೆ ಹಾವೇರಿ, ರಾಣೇಬೆನ್ನೂರು ಭಾಗದ ಸಾಂಸ್ಕøತಿಕ ಗುರುತುಗಳನ್ನು ಬೆರೆಸಿ ಅಲ್ಲಿಯದ್ದೇ ಆದ ಉಪಭಾಷೆಯ ನುಡಿಗಟ್ಟನ್ನು ಬಳಸಿ ವಿಶಿಷ್ಟ ಸಂಕಥನದಂತೆ ಈ ಅಂಕಣ ಬರೆಯುತ್ತಿದ್ದಾರೆ.

`ಪ್ರತಿದಿನವೂ/ವಲಸೆ ಬರುವ/ ಸೂರ್ಯ ಚಂದ್ರರಿಗೆ/ ಸಿಕ್ಕಬಹುದೇ? ಪೌರತ್ವದ ಕೊಡುಗೆ ! ಆದರೂ ನಿತ್ಯ/ ಈ ಅತಿಕ್ರಮಣವನ್ನು ಸಹಿಸುವುದು ಹೇಗೆ?/ ಕೊರಳುಪಟ್ಟಿ/ ಹಿಡಿದು ದಬ್ಬಿರವರನು/ಹೊರಗೆ’ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹೀಗೆ ಕವಿತೆ ಬರೆವ ಚಂಸು, ಸಾಸಿವೆ ಕಾಳಿನಷ್ಟು ಬರೆದು ಬೆಟ್ಟದಷ್ಟು ಪ್ರಚಾರ ಬಯಸುವ ಈ ಕಾಲದ ಹೊಸತಲೆಮಾರಿನ ಕವಯಿತ್ರಿ ಕವಿಗಳಿಗಿಂತ ನೂರುಪಾಲು ಎತ್ತರದಲ್ಲಿದ್ದಾರೆ. ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿ ಬೇಸಾಯದ ಕತಿ ಹೇಳುವ ಚಂಸುಗೆ ಒಳಿತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...