HomeUncategorizedಇಂದಿನ ಕ್ರೂರ ಪರಿಸ್ಥಿತಿಯ ಎದುರು ಇಂದಿರಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಪಿಕ್ನಿಕ್‌ಗೆ ಸಮ...!

ಇಂದಿನ ಕ್ರೂರ ಪರಿಸ್ಥಿತಿಯ ಎದುರು ಇಂದಿರಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಪಿಕ್ನಿಕ್‌ಗೆ ಸಮ…!

- Advertisement -
- Advertisement -

ಜಾಣ ಮೌನಕ್ಕಿದು ಸಮಯವಲ್ಲ. ದಮನಿತರು ದನಿಯೆತ್ತದಿರುವುದು ದಮನಕಾರಿಯ ಧೈರ್ಯವನ್ನು ಹೆಚ್ಚಿಸುತ್ತದೆ. ಮೌನ ಸಲ್ಲದು ಎಂಬ ಮಾತು ಎಷ್ಟು ಮುಖ್ಯವೋ, ಹಿಂಸೆ ಸರ್ವಥಾ ಸಲ್ಲದು ಎಂಬ ವಿವೇಕವೂ ಅಷ್ಟೇ ಮುಖ್ಯ. ಮಾತಾಡದೆ ಹೋಗಿದ್ದರೆ ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿ ಅಷ್ಟು ಲಗುಬಗೆಯಲ್ಲಿ ತೊಲಗುತ್ತಿರಲಿಲ್ಲ. ನೆನಪಿಡೋಣ, ಈಗ ದೇಶದ ಕೈಕಾಲುಗಳ ಕಟ್ಟಿ ಹಾಕಿ ಬಾಯಿಗೆ ಬೀಗ ಜಡಿಯಲು ಮುಂದಾಗಿರುವ ಪ್ರಭುಗಳೂ ಆಗ ತುರ್ತುಪರಿಸ್ಥಿತಿ ವಿರುದ್ಧ ಮಾತಾಡಿದ್ದರು… ಸರ್ವಾಧಿಕಾರದ ವಿರುದ್ಧ ಪ್ರಜೆಗಳ ಎಚ್ಚರಿಸಲು ‘ಕಹಳೆ’, ’ದುಂದುಭಿ’ ಮುಂತಾದ ಭೂಗತ ಪತ್ರಿಕೆಗಳನ್ನು ಹೊರತಂದಿದ್ದರು. ಇತಿಹಾಸದ ಈ ಭಾಗವನ್ನು ಮರೆತಂತೆ ನಟಿಸತೊಡಗಿದ್ದಾರೆ ಅವರು.

ನಿರಂತರ ಎಚ್ಚರವೇ ಜೀವಂತ ಜನತಂತ್ರಕ್ಕೆ ನಾವು ತೆರಬೇಕಾದ ಬೆಲೆ. ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿದೆ. ವಿವೇಕದ ಮಾತುಗಳು ಹುಸಿಯಾಗುವುದಿಲ್ಲ. ಇತಿಹಾಸ ದಿಟವಾಗಿಯೂ ಮರುಕಳಿಸಿದೆ. ಆದರೆ ನಾಜೀ ಜರ್ಮನಿಯ ಇತಿಹಾಸ ಭಾರತದ ಭೂಪ್ರದೇಶದಲ್ಲಿ ಮರುಕಳಿಸಿದೆ. ಇದರ ಮುಂದೆ ಇಂದಿರಾ ಗಾಂಧೀ ಅವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿ ಕೇವಲ ವನವಿಹಾರ ಸಮಾನ. ಡಿಸೆಂಬರ್ 21-22ರಂದು ಮೈಸೂರಿನಲ್ಲಿ ಮಾಧ್ಯಮ ಮತ್ತು ಜನತಂತ್ರ ಕುರಿತ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ಮಹಾತ್ಮಾ ಗಾಂಧೀಯವರ ಮೊಮ್ಮಗ ರಾಜಮೋಹನಗಾಂಧೀ ಅವರು ಬಳಸಿದ ಪದವಿದು – ‘ವನವಿಹಾರ’. Emergency was just a picnic before what is happening to the Country now ಎಂಬುದಾಗಿ ಅವರು ಉದ್ಗರಿಸಿದ್ದುಂಟು.

ಸತ್ತು ಹೋಗಿದೆಯೆಂದೇ ಭಾವಿಸಲಾಗಿದ್ದ ವಿದ್ಯಾರ್ಥಿ ಚಳವಳಿ ಗರಿಕೆಯಂತೆ ಮೊಳೆತು ಚಿಗುರಿದೆ. ದೇಶದ ಮೂಲೆ ಮೂಲೆಗಳಲ್ಲಿ ವ್ಯಾಪಿಸಿ ಹಸಿರೊಡೆದಿದೆ. ಜೆ.ಪಿ.ಆಂದೋಲನದಲ್ಲಿ ಬೆರೆತು ಭುಗಿಲೆದ್ದಿದ್ದ ಅಂದಿನ ಆ ಶಕ್ತಿಶಾಲಿ ವಿದ್ಯಾರ್ಥಿ ಚಳವಳಿಯಲ್ಲಿ ಇಂದಿನ ಪ್ರಭುಗಳಲ್ಲಿ ಅನೇಕರೂ ಮತ್ತು ಪರಿವಾರದ ಸಂಘಟನೆಗಳೂ ಭಾಗವಹಿಸಿದ್ದವು. ದೇಶವನ್ನು ದಾಸ್ಯದ ನೊಗದಿಂದ ಬಿಡಿಸಬೇಕೆಂದು ಘರ್ಜಿಸಿದ್ದವು. ಪ್ರಜೆಗಳು ಬಂದರು ಸಿಂಹಾಸನ ಖಾಲಿ ಮಾಡಿರಿ ಎಂಬ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕ್ರಾಂತಿಗೀತೆಗೆ ದನಿಗೂಡಿಸಿ ಹಾಡಿದ್ದವು. ಇಂದು ಆ ಅವೇ ಶಕ್ತಿಗಳು-ಸಂಘಟನೆಗಳು ಸಿಂಹಾಸನ ಏರಿ ಕುಳಿತಿವೆ. ಪ್ರಜೆಗಳನ್ನು ಧಿಕ್ಕರಿಸಿವೆ. ದೇಶದ ಕೊರಳು ಮತ್ತೊಂದು ಬಗೆಯ ದಾಸ್ಯದ ನೊಗಕ್ಕೆ ಹೂಡಲ್ಪಡುತ್ತಿದೆ. ವಿದ್ಯಾರ್ಥಿ ಚಳವಳಿಗೆ ದೇಶದ್ರೋಹದ ಹೆಸರಿಡಲಾಗುತ್ತಿದೆ. ಸುಳ್ಳು ಸುದ್ದಿಗಳು ಮತ್ತು ಮಿಥ್ಯಾಪ್ರಚಾರದ ವಾಟ್ಸ್ಯಾಪ್ ಯೂನಿವರ್ಸಿಟಿಗಳನ್ನು ಕಟ್ಟಿ ನಿಲ್ಲಿಸಲಾಗುತ್ತಿದೆ. ಅರಿವಿನ ಮತ್ತು ಸಮಾನತೆಯ ಬೆಳಕನ್ನು ಹಂಚುವ ನಿಜದ ವಿಶ್ವವಿದ್ಯಾಲಯಗಳನ್ನು ಕೆಡವುವ ಕಾರಸ್ಥಾನ ಜರುಗಿದೆ.

ದಮನದ ವಿರುದ್ಧ ಅನ್ಯಾಯಕ್ಕೆ ಎದುರಾಗಿ ವಿದ್ಯಾರ್ಥಿಶಕ್ತಿ ತೋರತೊಡಗಿರುವ ಸಾತ್ವಿಕ ಕೆಚ್ಚು ವಿವೇಕದ ದೊಂದಿಯನ್ನು ಸಮಾಜಶಕ್ತಿ ಎತ್ತಿ ಹಿಡಿಯಬೇಕಿದೆ. ತಡಮಾಡಿದರೆ ಸರದಿಯ ಪ್ರಕಾರ ಕಾಲಬುಡಕ್ಕೆ ಬಂದೀತು… ಬಲು ತುಟ್ಟಿಯಾಗಿ ಪರಿಣಮೀಸೀತು… ಮತ್ತು…ದುರಿತ ಕಾಲದ ಬಹುಜನ ಭಾರತ ಓದಿಕೊಳ್ಳಬೇಕಿರುವ ಕೆಲ ಕವಿತೆಗಳು ಇಲ್ಲಿವೆ…

ಆಡು, ಮಾತಾಡು
ತುಟಿಗಳಿಗೆ ಅಂಕೆ ಇಲ್ಲ
ಆಡು, ಮಾತಾಡು
ನಾಲಗೆ ಇನ್ನೂ ನಿನ್ನದೇ
ಆಡು, ಮಾತಾಡು,
ದೇಹ ನಿನ್ನ ಸ್ವಂತದ್ದು
ಆಡು, ಮಾತಾಡು,
ಜೀವ ಹಾರಿ ಹೋಗಿಲ್ಲ
ಹಾಡು ಮಾತಾಡು

ನೋಡು, ಕಮ್ಮಾರನ ಕುಲುಮೆಯಲಿ
ಭುಗಿಲೆದ್ದಿದೆ ಜ್ವಾಲೆ, ಕೆಂಪೇರಿದೆ ಲೋಹ,
ಸಡಿಲಾಗುತ್ತಿದೆ ಬೀಗಗಳ ಬಾಯಿ
ಮುರಿಯುತ್ತಿದೆ ಸರಪಳಿಗಳ ಕೀಲು.
ದೇಹ ನಾಲಗೆ ಸತ್ತು ಹೋಗುವ ಮುಂಚಿನ
ಈ ಎರಡು ಗಳಿಗೆಯೇ ಸಾಕು
ಆಡು, ಮಾತಾಡು

ಸತ್ಯ ಇನ್ನೂ ಉಸಿರಾಡುತಿದೆ
ಆಡು, ಮಾತಾಡು
ಹೇಳಲೇಬೇಕಾದ್ದು, ಹೇಳಿಯೇಬಿಡು
ಆಡು ಮಾತಾಡು.
(ಫೈಜ್ ಅಹ್ಮದ್ ಫೈಜ್- ಅನುವಾದ- ಬಾಗೇಶ್ರೀ)

ಗಂಟೆ
ಫೋನಿನ ಗಂಟೆ ಮೊಳಗಿತು
ನಾನೆಂದೆ- ನಾನು ಇಲ್ಲ ಕಣ್ರೀ
ಮತ್ತು ಮಗ್ಗುಲು ಬದಲಿಸಿ ನಿದ್ದೆ ಹೋದೆ.

ಬಾಗಿಲ ಗಂಟೆ ಮೊಳಗಿತು
ನಾನೆಂದೆ- ನಾನು ಇಲ್ಲ ಕಣ್ರೀ
ಮತ್ತು ಮಗ್ಗುಲು ಬದಲಿಸಿ ನಿದ್ದೆ ಹೋದೆ.

ಅಲಾರಂ ಗಂಟೆ ಮೊಳಗಿತು
ನಾನೆಂದೆ- ನಾನು ಇಲ್ಲ ಕಣ್ರೀ
ಮತ್ತು ಮಗ್ಗುಲು ಬದಲಿಸಿ ನಿದ್ದೆ ಹೋದೆ.

ಒಂದು ದಿನ
ಮರಣದ ಗಂಟೆ ಮೊಳಗಿತು…
ಗಡಿಬಿಡಿ ಮಾಡಿ ಎದ್ದು ಕುಳಿತೆ
ನಾನಿರುವೆ.. ನಾನಿರುವೆ.. ನಾನಿರುವೆ..
ಮರಣ ಹೇಳಿತು-
ನಿದ್ದೆ ಹೋಗಯ್ಯಾ ಈಗ ಮಗ್ಗಲು ಬದಲಿಸಿ
(ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಕುಂವರ್ ನಾರಾಯಣ್)

ಅವರು ಮೊದಲು ಬಂದದ್ದು..
ಅವರು ಮೊದಲು ಬಂದದ್ದು ಕಮ್ಯೂನಿಸ್ಟರ ಎತ್ತಿ ಹಾಕಿಕೊಳ್ಳಲು
ಮತ್ತು ನಾನು ತುಟಿ ತೆರೆಯಲಿಲ್ಲ
ಯಾಕೆಂದ್ರೆ ನಾನು ಕಮ್ಯೂನಿಸ್ಟ್ ಆಗಿರಲಿಲ್ಲ

ನಂತರ ಅವರು ಬಂದರು ಸಮಾಜವಾದಿಗಳ ಎತ್ತಿ ಹಾಕಿಕೊಂಡು ಹೋಗಲು
ಮತ್ತು ನಾನು ಪ್ರತಿಭಟಿಸಲಿಲ್ಲ
ಯಾಕೆಂದ್ರೆ ನಾನು ಸಮಾಜವಾದಿ ಆಗಿರಲಿಲ್ಲ,

ಆನಂತರ ಅವರು ಬಂದರು ಕಾರ್ಮಿಕ ನಾಯಕರನ್ನು ಹಿಡಿದೊಯ್ಯಲು
ಮತ್ತು ನಾನು ಬಾಯಿ ಹೊಲಿದುಕೊಂಡಿದ್ದೆ
ಯಾಕೆಂದ್ರೆ ನಾನು ಕಾರ್ಮಿಕ ನಾಯಕನಾಗಿರಲಿಲ್ಲ

ತದನಂತರವೂ ಅವರು ಬಂದರು ಯಹೂದಿಗಳನ್ನು ಎಳೆದೊಯ್ಯಲು
ಮತ್ತು ಆಗಲೂ ನಾನು ದನಿ ಎತ್ತಲಿಲ್ಲ
ಯಾಕೆಂದ್ರೆ ನಾನು ಯಹೂದಿಯೇನೂ ಆಗಿರಲಿಲ್ಲ

ತರುವಾಯ ಅವರು ಬಂದೇ ಬಂದರು…
ನನ್ನನ್ನು ಕೈದು ಮಾಡಲು
ಮತ್ತು ಆಗ ಯಾರೂ ಉಳಿದಿರಲಿಲ್ಲ
ಕೊರಳೆತ್ತಲು, ನನ್ನ ಸಲುವಾಗಿ.
(- ಮಾರ್ಟಿನ್ ನಿಮೋಲರ್, ಹಿಟ್ಲರನ ಅಭಿಮಾನಿಯಾಗಿದ್ದು ವಿರೋಧಿಯಾಗಿ ಪರಿವರ್ತನೆಗೊಂಡ ಪಾದ್ರಿ )

ರೊಟ್ಟಿ ಮತ್ತು ಸಂಸತ್ತು
ಒಬ್ಬ ಮನುಷ್ಯ
ರೊಟ್ಟಿ ಬೇಯಿಸ್ತಾನೆ,
ಒಬ್ಬ ಮನುಷ್ಯ ರೊಟ್ಟಿ ತಿಂತಾನೆ
ಮೂರನೆಯ ಮನುಷ್ಯನೂ ಒಬ್ಬನಿದ್ದಾನೆ
ಅವನು ರೊಟ್ಟಿಯನ್ನು ಬೇಯಿಸುವುದೂ ಇಲ್ಲ ತಿನ್ನುವುದೂ ಇಲ್ಲ
ಅವನು ಕೇವಲ ರೊಟ್ಟಿಯೊಂದಿಗೆ ಆಟ ಆಡ್ತಾನೆ
ಯಾರು ಈ ಮೂರನೆಯ ಮನುಷ್ಯ?
ನನ್ನ ದೇಶದ ಸಂಸದ ಮೌನ ಧರಿಸಿದ್ದಾನೆ.
(-ಧೂಮಿಲ್)

ಅವರು ಭಯಪಡುತ್ತಾರೆ
ಅವರು ಭಯಪಡುತ್ತಾರೆ
ಯಾವುದರ ಬಗ್ಗೆ ಅವರಿಗೆ ಭಯ ಅವರಿಗೆ
ಧನ ದೌಲತ್ತು
ಸಿಡುಗುಂಡು, ಸುಡುಮದ್ದು, ಪೊಲೀಸ್ ಫೌಜು ಸರ್ವಸ್ವ ಇದ್ದಾಗ್ಯೂ
ಅವರು ಭಯ ಪಡುತ್ತಾರೆ
ಯಾಕೆಂದ್ರೆ ಒಂದಲ್ಲ ಒಂದು ದಿನ
ಹತಾರುಗಳಿರದ ಬರಿಗೈಗಳ ದೀನ ದರಿದ್ರ ಜನ
ಅವರನ್ನು ಕಂಡು
ಭಯಪಡುವುದ
ನಿಲ್ಲಿಸಿಬಿಡುತ್ತಾರೆ
(ಗೋರಖನಾಥ ಪಾಂಡೆ)

ಮುರಿದು ಸುರಿಯಲಿ ಸಾವಿರ ಸಿಡಿಲುಗಳು

ಬಡಿದು ಬೀಸಲಿ ಲಕ್ಷ ಬಿರುಗಾಳಿಗಳು

ಅರಳಿಯೇ ಅರಳಲಿವೆ ಅರಳಬೇಕಿರುವ ಹೂವುಗಳು

(ಸಾಹಿರ್ ಲೂಧಿಯಾನ್ವಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...