Homeಅಂತರಾಷ್ಟ್ರೀಯಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು?

ಬಿಳೇಮನಿಯ ಕರೀ ಒಪ್ಪಂದ : ಟ್ರಂಪ್‌ನಿಂದ ಭಾರತಕ್ಕಾಗುವ ಅಪಾಯಗಳೇನು?

- Advertisement -
- Advertisement -

ನಮ್ಮ ಬಿಳೇಮನಿ ಡೋನಾಲ್ಡಪ್ಪ ಟ್ರಂಪಣ್ಣನವರ್ ಅವರು ಮನ್ನೆ ಇಲ್ಲಿಗೆ ಬಂದು ಹೋಗ್ಯಾರ. ಅವರ ಜೊತಿಗೆ ’ಕಂಬದ ಮ್ಯಾಲಿನಾ ಗೊಂಬಿಯೇ ನಂಬಲೇನ ನಿನ್ನ ಮಾತನ್ನ’ ಅನಕೊತ ಅವರ ಮ್ಯಾಲಿನಾನೂ ಬಂದಿದ್ರು. ಅವರ ಅಳಿಯ ಮಗಳೂ ಬಂದಿದ್ರು, ಇಂಡಿಯಾದಾಗಿನ ಐದು ಟ್ರಂಪು ಹೊಟೆಲು ಹೆಂಗ ನಡದಾವು, ಅದರ ಮುನೀಮರು ಸಮಾ ಲೆಕ್ಕಾ ಇಟ್ಟಾರೋ ಇಲ್ಲೋ ಅಂತ ನೋಡಲಿಕ್ಕೆ, ಅವರು ಕೊಡೋ ಡಾಲರು ಕಾಸಿಗೆ ಇಲ್ಲಿ ಕೆಲಸ ಮಾಡೋ ಮೆದು ಸರಕು (ಸಾಫ್ಟವೇರ್) ಕೂಲಿಗಳು ಸಮಾ ದುಡಿಲಿಕ್ಕೆ ಹತ್ಯಾವೋ ಇಲ್ಲೋ ಅಂತ, ಒಮ್ಮೆ ತೆಕ್ಕಿಗೆ ಹಾಕಿಕೊಂಡ ಅಣ್ತಮ್ಮಾ ಅಂತ ಕರದ ಇಲ್ಲಿನ ರಾಜಕಾರಣಿಗಳು ತಮ್ಮ ಆಣತಿಗೆ ತಕ್ಕಂಗ ಕೆಲಸ ಮಾಡಲಿಕ್ಕೆ ಹತ್ಯಾರೋ ಇಲ್ಲೋ ಅಂತೆಲ್ಲಾ ನೋಡಲಿಕ್ಕೆ, ಅಲ್ಲಿಂದಾ ಅಧಿಕಾರಿಗಳೂ ಬಂದಿದ್ದರು.

ಆ ಮನಷ್ಯ, (ಅವರ ಬಗ್ಗೆ ಈ ಶಬ್ದ ಉಪಯೋಗಿಸೋದು ಕೆಲವರಿಗೆ ಸರಿ ಕಾಣಂಗಿಲ್ಲ, ಇರ್ಲಿ) ಇಲ್ಲಿ ಬಂದು, ನಮ್ಮ ಪ್ರಧಾನಿನ ಹಗ್ಗು ಮಾಡಿ, ಇದು ಬರೀ ನಮ್ಮಿಬ್ಬರ ಹಗ್ಗಲ್ಲಾ, ಇದು ವಿಶ್ವದ ಅತಿದೊಡ್ಡ ಹಾಗೂ ವಿಶ್ವದ ಹಳೆಯ ಪ್ರಜಾಪ್ರಭುತ್ವಗಳ ಸ್ನೇಹದ ಪ್ರತೀಕ. ಅಮೆರಿಕಾಗೆ ಪ್ರಿಯವಾದ ದೇಶ ಭಾರತ. ಅಮೆರಿಕಾ ಯಾವಾಗಲೂ ಭಾರತಕ್ಕೆ ನಂಬಿಕಸ್ತ ಸ್ನೇಹಿತನಾಗಿ, ನಿಷ್ಠಾವಂತನಾಗಿ ಇರುತ್ತದೆ.. ಅಂತೆಲ್ಲಾ ಭಾಷಣ ಮಾಡಿದರು.

ಬರೇ ಮೂವತ್ತಾರು ತಾಸು ಇಲ್ಲಿ ಇದ್ದು, ಸುಮಾರು ನೂರು ಕೋಟಿ ರೂಪಾಯಿ ಬಡವರ ರೊಕ್ಕ ಖರ್ಚು ಮಾಡಿ ವಾಪಸು ಹೋದರು. ಹೋದ ಕೆಲವೇ ದಿನಕ್ಕ ಅಫಘಾನಿಸ್ತಾನದ ತಾಲಿಬಾನಿನ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡರು.

ಆ ಅಣುಕು ಯುದ್ಧದ ಹಿನ್ನೆಲೆ ಏನು?

ಕಳೆದ 20 ವರ್ಷದ ತಾಲಿಬಾನು ಜೊತೆ ಯುದ್ಧ ಸುಮಾರು 2,500 ಅಮೆರಿಕನ್ ಸೈನಿಕರನ್ನ ಬಲಿ ತೊಗೊಂಡದ. ಅಲ್ ಕೈದಾದವರು ಅಮೆರಿಕಾದ ಮ್ಯಾಲೆ 2001 ರಾಗ ಭಯೋತ್ಪಾದಕ ದಾಳಿ ಮಾಡಿದಾಗ ಮೂರು ಸಾವಿರಕ್ಕ ನಾಕು ಜನ ಕಮ್ಮಿ (2,996) ಅಮೆರಿಕಾ ಹಾಗೂ ಇತರ ದೇಶದ ಜನ ಬಲಿ ಆಗಿದ್ದರು. ಅವರಿಗೆ ತಾಲಿಬಾನಿನವರು ಬೆಂಬಲ ಕೊಟ್ಟಾರ ಅಂತ ಹೇಳಿ ಅಮೇರಿಕಾದವರು ಇವರ ಮ್ಯಾಲೆ ಮುಗಿಬಿದ್ದರು. ಅಮೆರಿಕದ ನಾಲ್ಕು ವಿಮಾನಗಳನ್ನು ಹೈಜಾಕು ಮಾಡಿದ 19 ಜನರೊಳಗ 15 ಜನ ಸೌದಿ ಅರೇಬಿಯಾದವರು ಇದ್ದರು. ಆದರ ಅಮೆರಿಕದವರ ತೈಲ ರಾಜಕಾರಣದಿಂದ ಸೌದಿ ಮ್ಯಾಲೆ ಯಾವ ವಿಚಾರಣೆನೂ ಆಗಲಿಲ್ಲ. ಅಫಘಾನಿಸ್ತಾನದಾಗ ಭಾರತವೂ ಸೇರಿದಂತೆ ಸುಮಾರು 15 ದೇಶಗಳ ಶಾಂತಿಸ್ಥಾಪನಾ ಪಡೆ ಹೋಗಿ ಮುಕ್ಕಾಂ ಹೂಡಿತು. ಅಲ್ಲಿ ಚುನಾವಣೆ ಆಗಿ ಹಾಮಿದ ಕರಝಾಯಿ ಅಧಿಕಾರಕ್ಕೆ ಬಂದರು. ಅವರು ತಮ್ಮ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕೆ ಆಗಲಿಲ್ಲ ಅಂತ ಹೇಳಿ ಅವರನ್ನು ಸುಪರ್ ಪಾವರುಗಳು ಕೈಹಿಡೀಲಿಲ್ಲ. ಯುದ್ಧ ನಡೀತಲೇ ಇತ್ತು. ಅದರಾಗ ಅನೇಕ ನಾಗರಿಕರು ಸತ್ತು ಹೋದರು. ಇದು ಯಾರ ಅಂತರಾತ್ಮವನ್ನೂ ಕಲುಕಲಿಲ್ಲ.

ಕಡಿಕೆ ಅಮೆರಿಕಾದಾಗ ನಮ್ಮ ಹುಡುಗರು – ಹುಡುಗಿಯರು ಅಫಘಾನಿಸ್ತಾನದಾಗ ಸಾಯಲಿಕ್ಕೆ ಹತ್ಯಾರ. ಇದು ತಪ್ಪು ಅವರನ್ನು ವಾಪಸ ಕರಿಸಿಕೋರಿ ಅಂತ ಆಂದೋಲನ ಸುರು ಆತು. ಟ್ರಂಪಣ್ಣನವರು ಅದಕ್ಕೊಂದು ಅಧ್ಯಯನ ಸಮಿತಿ ರಚಿಸಿದರು. ಅವರ ಶಿಫಾರಸಿನ ಪ್ರಕಾರ ಈ ಒಪ್ಪಂದಕ್ಕ ಸಹಿ ಮಾಡಲಾಯಿತು.

ಆ ಶಾಂತಿ ಒಪ್ಪಂದದೊಳಗ ಏನದ?

ಈ ಒಪ್ಪಂದ ಜಾರಿಯಾದ ಒಂದು ವರ್ಷದೊಳಗ ಅಫಘಾನಿಸ್ತಾನದಾಗ ಭಯೋತ್ಪಾದನಾ ವಿರೋಧಿ ಪಡೆಯ ಎಲ್ಲಾ ಅಮೇರಿಕಾ ಸೈನಿಕರು ವಾಪಸು ಹೋಗಬೇಕು.

ಆ ಮ್ಯಾಲಿನ 14 ತಿಂಗಳೊಳಗ ಎಲ್ಲಾ ಸೈನಿಕರು ವಾಪಸು ಆಗಬೇಕು. ಅಫಘಾನಿಸ್ತಾನ ಹಾಗೂ ಸುತ್ತಲಿನ ದೇಶದೊಳಗ ಇರೋ ಅಮೆರಿಕಾ ಸೈನಿಕ ಶಿಬಿರಗಳನ್ನು ಮುಚ್ಚಬೇಕು.

ಒಂದು ವರ್ಷದೊಳಗ ಐದು ಸಾವಿರ ಅಮೆರಿಕಾ, ಅಫಘಾನಿಸ್ತಾನ ಹಾಗೂ ಇತರ ದೇಶದ ಜೈಲಿನೊಳಗ ಇರೋ ತಾಲಿಬಾನಿ ಸೈನಿಕರು, ಶಂಕಿತ ಭಯೋತ್ಪಾದಕರ ಬಿಡುಗಡೆ ಆಗಬೇಕು. ಮುಂದಿನ ವರ್ಷದೊಳಗ ಎಲ್ಲಾ ತಾಲಿಬಾನಿ ಕೈದಿಗಳ ಬಿಡುಗಡೆ ಆಗಬೇಕು ಇತ್ಯಾದಿ, ಇತ್ಯಾದಿ.

ಇವುಗಳ ಬದಲಾಗಿ ಆ ದೇಶ ಅಮೆರಿಕಾಗೆ ಏನು ಕೊಡತದ? ʻಅಫಘಾನಿಸ್ತಾನದ ನೆಲದಲ್ಲಿ ಅಮೆರಿಕಾದ ಸುರಕ್ಷೆಗೆ ಭಂಗ ಬರೋ ಯಾವುದೇ ಕೆಲಸಕ್ಕೆ ಆಸ್ಪದ ಕೊಡೋದಿಲ್ಲʼ ಅನ್ನೋ ಭರವಸೆ. ಈ ಭರವಸೆಯನ್ನು ಕಾನೂನುಪ್ರಕಾರ ಜಾರಿ ಮಾಡೋರು ಯಾರು? ಯಾರೂ ಇಲ್ಲ. ಯಾಕಂದರ ಅಫಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಇರೋ ತಾಲಿಬಾನಿನ ಸರಕಾರವನ್ನು ಅಮೆರಿಕಾ ಮಾನ್ಯ ಮಾಡೋದಿಲ್ಲ. ʻʻತಾಲಿಬಾನು ಸರಕಾರವನ್ನು ಅಮೆರಿಕಾ ಮಾನ್ಯ ಮಾಡುವುದಿಲ್ಲವಾದ್ದರಿಂದ ಅದನ್ನು ತಾಲಿಬಾನ ಸಂಘಟನೆ ಎಂದು ಪರಿಗಣಿಸುತ್ತದೆ. ಇದರ ಜೊತೆ ಅಮೆರಿಕಾ ಒಪ್ಪಂದ ಮಾಡಿಕೊಳ್ಳುತ್ತಿದೆʼʼ ಅಂತಲೇ ಆ ಒಪ್ಪಂದ ಸುರು ಆಗತದ.

ʻಜಾರಿ ಮಾಡಲಾಗದಂತ ಒಪ್ಪಂದವನ್ನು ಮಾಡಿಕೊಳ್ಳಬಾರದುʼ ಎನ್ನುವುದು ಕರಾರು ಕಾನೂನಿನ ಮೂಲ ಮಂತ್ರ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ರಾಷ್ಟ್ರ ಅಮೆರಿಕಾಕ್ಕೆ ಇದು ಗೊತ್ತಿರಲಿಕ್ಕಿಲ್ಲೇನು?

ಇದು ಯಾಕೆ ಹಾಸ್ಯಾಸ್ಪದ?

ಇದು ಹಾಸ್ಯಾಸ್ಪದ ಒಪ್ಪಂದ. ಇದು ಅಮೆರಿಕಾಕ್ಕೆ ಆದ ಅತಿದೊಡ್ಡ ಅವಮಾನ ಅಂತ ಅಮೆರಿಕಾದ ಪತ್ರಿಕೆಗಳು ಟೀಕೆ ಮಾಡ್ಯಾವು. ಟೈಮ್ ಮ್ಯಾಗಜೀನ್ ಅಂತೂ ಯುದ್ಧ ಸೋತು ಹೋದ ಟ್ರಂಪ್ ಅವರು ಮುಖ ಮುಚ್ಚಿಕೊಳ್ಳಲಾಗದೇ ಮಾಡಿದ ಒಪ್ಪಂದ. ಇದು ಅಮೆರಿಕಾದ ಸಾರ್ವಭೌಮತೆಗೆ ಮಾಡಿದ ಹಾನಿ ಅಂತ ಅಗ್ರಲೇಖನ ಬರೀತು. ವಿಯೆಟ್ನಾಂನ ಸೋಲಿನ ನಂತರ ಇದು ಅಮೆರಿಕಾದ ಅತಿದೊಡ್ಡ ಸೋಲು. ಇದು ಒಪ್ಪಂದ ಅಲ್ಲ. ಪಲಾಯನ. ದೇಶಕ್ಕಾಗಿ ಜೀವಕೊಟ್ಟ ಸೈನಿಕರ ಅವಮಾನ ಅಂತೆಲ್ಲಾ ಟೀಕಿಸಿತು.

ಇದು ಭಾರತಕ್ಕೆ ಯಾಕೆ ಅಪಾಯಕಾರಿ?

ಈಗ ಅಜಿತ ದೋವಾಲ ಅಂತ ಒಬ್ಬರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂತ ಇದ್ದಾರ. ಅವರು ಅಟಲ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಗೃಹ ಇಲಾಖೆಯ ದೊಡ್ಡ ಹುದ್ದೆಯೊಳಗ ಇದ್ದರು. ಭಾರತೀಯ ವಿಮಾನವನ್ನು ಹರಕತ್ ಉಲ್ ಮುಜಾಹಿದೀನ್ ಭಯೋತ್ಪಾದಕರು 1999 ರಲ್ಲಿ ಅಪಹರಿಸಿರು. ಅದನ್ನ ತೊಗೊಂಡು ಹೋಗಿ ಅಫಘಾನಿಸ್ತಾನದಾಗ ಇಳಿಸಿದರು. ಅಲ್ಲೆ ಅವರಿಗೆ ಸಿರಿಯಾ ದೇಶದ ಭಯೋತ್ಪಾದಕರ ಬೆಂಬಲ ಇತ್ತು. ಅಪಹರಣಕಾರರು ಭಯೋತ್ಪಾದನೆ ಆರೋಪದ ಮ್ಯಾಲೆ ಬಂಧನದೊಳಗಿದ್ದ ಮಜೂರ ಅಸದ, ಸಯೀದ ಶೇಖ ಹಾಗೂ ಅಹಮದ ಜರಗರ ಅವರನ್ನ ಬಿಡುಗಡೆ ಮಾಡೋ ಶರತ್ತು ಹಾಕಿದರು. ನಮ್ಮ ಗೂಢಚಾರಿ ಅಜಿತ ದೋವಾಲ ಅವರು ಈ ಮೂರು ಜನರನ್ನ ನಾಜೂಕಾಗಿ ಕರಕೊಂಡು ಹೋಗಿ ಕಂದಹಾರದಾಗ ಬಿಟ್ಟು ಬಂದರು. ಆ ಮಜೂರ ಅಸದ ಅವರು ಈಗ ಪಾಕಿಸ್ತಾನದಾಗ ರಾಜಕೀಯ ಪಕ್ಷ ಹುಟ್ಟು ಹಾಕ್ಯಾರ. ಅವರನ್ನು ಹಳೆ ಅಪರಾಧಗಳ ಆಧಾರದ ಮ್ಯಾಲೆ ನಮಗ ಬಿಟ್ಟು ಕೊಡ್ರಿ ಅಂತ ಭಾರತದವರೇನೂ ಪಾಕಿಸ್ತಾನವನ್ನು ಕೇಳಿಲ್ಲ. ಕಳೆದ ಆರು ವರ್ಷದಾಗೂ ಕೇಳಿಲ್ಲ.

ನಾಳೆ ಟ್ರಂಪಣ್ಣನವರ ಹರಕತ್ತಿನಿಂದ ಬಿಡುಗಡೆ ಆಗಲಿರುವ ತಾಲಿಬಾನಿ ಕೈದಿಗಳ ಪೈಕಿ ಅಫಘಾನಿಸ್ತಾನ, ಸಿರಿಯಾದವರೂ ಸೇರಿದಂತೆ ಅನೇಕ ದೇಶದ ಭಯೋತ್ಪಾದಕರು ಇದ್ದಾರ. ಅವರನ್ನ ಹೊರಗ ಬಿಟ್ಟರ ಅವರು ಭಾರತವೂ ಸೇರಿದಂತೆ ಅನೇಕ ದೇಶಗಳಿಗೆ ಅಪಾಯ ಉಂಟುಮಾಡೋ ಸಾಧ್ಯತೆ ಅದ. ʻಅವರನ್ನು ಬಿಡಬ್ಯಾಡರಿ, ಅವರು ನಮಗೆ ಅಪಾಯಕಾರಿʼ ಅಂತ ಇವತ್ತಿನವರೆಗೂ ಟ್ರಂಪಿನವರ ಅತ್ಯಂತ ಜಿಗರಿ ದೋಸ್ತರಾದ ನಮ್ಮ ಪ್ರಧಾನಿಯಾಗಲಿ, ಅದೇ ಕೆಲಸ ಮಾಡಬೇಕಾಗಿರುವ ವಿದೇಶ ಮಂತ್ರಿ ಜಯಶಂಕರ ಅವರಾಗಲಿ, ರಕ್ಷಣಾ ಮಂತ್ರಿ, ಗೃಹ ಮಂತ್ರಿ ಅಥವಾ ಇನ್ನು ಯಾವುದೇ ಅಧಿಕಾರಿ ಒಂದು ಮಾತು ಹೇಳಿಲ್ಲ. ಅವರು ಖಾಸಗಿಯಾಗಿ ಹೇಳಿದ್ದರ ನಮಗ ಗೊತ್ತಿಲ್ಲ.

ಅದು ಬ್ಯಾರೆ ವಿಷಯ. ಆದರ ಇದರಾಗ ನಾವು ಕಲಿಯೋವಂಥಾ ಒಂದು ಪಾಠ ಅದ. ಭಾರತ ಉಪಖಂಡದ ಆಸುಪಾಸಿನ ದೇಶಗಳೆಲ್ಲರಿಗೂ ಯುದ್ಧ ಸಾಮಗ್ರಿ ಮಾರಾಟ ಮಾಡಿ ಮಜಾ ನೋಡುವ, ಭಾರತಕ್ಕೂ, ಅದರ ನೆರೆಹೊರೆಯ ಚೀನಾ- ಪಾಕಿಸ್ತಾನಕ್ಕೂ ಮದ್ದುಗುಂಡು- ವಿಮಾನ- ಹೆಲಿಕಾಪ್ಟರ್ ಮಾಡಿ, ಯುದ್ಧ ತಯಾರಿ ಮಾಡಿಸಿ, ಜಗಳ ಮಾಡಲಿಕ್ಕೆ ಅನುವು ಮಾಡಿಕೊಡೋ ಅಮೆರಿಕಾ ತಾನು ಮಾತ್ರ ತನ್ನ ಘನಘೋರ ವೈರಿ ಜೊತೆ ಶಾಂತಿಒಪ್ಪಂದ ಮಾಡಿಕೋತದ. ಇದನ್ನು, ನಮ್ಮ ನಾಯಕರು, ನಮ್ಮ ಅಧಿಕಾರಿಗಳು, ಚಿಂತಕರು, ಮಾಧ್ಯಮದವರು, ಎಲ್ಲಾದಕ್ಕೂ ಕಣ್ಣಮುಚಿಗಂಡು ಚಪ್ಪಾಳೆ ಹೊಡೆಯೋರು, ಹಾಗೂ ಈ ದೇಶದ ನಾಗರಿಕರು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...