Homeಅಂಕಣಗಳು“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

- Advertisement -
- Advertisement -

ಬದನೆಕಾಯಿ ಇರೋದು ತಿನ್ನಕ್ಕೆ ಪುರಾಣ ಇರದು ಹೇಳಕ್ಕೆ. ಇದೊಂದು ಹಳ್ಳಿ ಕಡೆಯ ಗಾದೆ. ಇದನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಎಡೂರಪ್ಪನ ಸರಕಾರ ಕೊರೊನಾ ಕಾಯಿಲೆ ನಿಯಂತ್ರಿಸುವ ನಿಷೇಧಗಳನ್ನ ಜನಗಳ ಮೇಲೆ ಹೇರಿ ತಾವು ಮಾತ್ರ ಮದುವೆ ಮುಂಜಿ ಹಬ್ಬಹರಿದಿನಗಳಲ್ಲಿ ಆರಾಮವಾಗಿ ಅಡ್ಡಾಡುತ್ತಿವೆಯಂತಲ್ಲಾ. ಹಾಗೆ ನೋಡಿದರೆ ಈ ಬಿಜೆಪಿಗಳೇ ಹಾಗೆ. ಬಾಯಿಬಿಟ್ಟಕೂಡಲೇ ಪುರಾಣವನ್ನು ಹೇಳುವ ಪ್ರಧಾನಿಯನ್ನ ಪಡೆದಿರುವ ನಾವು, ಅವರ ಸರಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ನಾಯಕರಿಂದ ಇನ್ನೇನು ಪಡೆಯಲು ಸಾಧ್ಯ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನೂರು ಜನ ಸೇರಿ ಮಾಡುತ್ತಿದ್ದ ಅಮ್ಮನ ಹಬ್ಬ ತಡೆದ ಡಿ.ಸಿ, ಸಾಹಸವನ್ನೆ ಗೈದಂತೆ ಹೋಗುತ್ತಿದ್ದರೆ ಅತ್ತ ಎಡೂರಪ್ಪ `ಕೊರೊನ ಪರೋನ ನನಿಗೆ ಬರದಿಲ್ಲ’ ಅನ್ನಂಗೆ ತಪಾಸಣೆ ತಡಾಯ್ದು ಹೋಗುತ್ತಿದ್ದರೆ ಇತ್ತ ದೇವೇಗೌಡರು ನಾಲ್ಕೈದು ಸಾವಿರ ಜನ ಸೇರಿ ಮಾಡಿದ ಮದುವೆಯ ಮಧ್ಯದಲ್ಲಿದ್ದರು. ಇನ್ನ ಈಶ್ವರಪ್ಪನೂ ಕೂಡ ನಾನೇನು ಕಡಿಮೆ ಎನ್ನುವಂತೆ ಹಬ್ಬ ಸಡಗರದಲ್ಲಿದ್ದರಂತಲ್ಲಾ, ಥೂತ್ತೇರಿ.

ಜನ ಸೇರುವ ಹಬ್ಬ, ಹರಿದಿನ ಹುಡುಕುತ್ತ, ತಿರುಗುತ್ತಿರುವ ಈಶ್ವರಪ್ಪ ಬದುಕಿನಲ್ಲಿ ಬಹಳ ಪುರಾಣ ಹೇಳುವ ಮನುಷ್ಯನಂತಲ್ಲಾ. ಮಾಂಸ ನಿಷೇಧವಿದ್ದಾಗಲೇ ಭಕ್ಷಣೆ ಮಾಡಿ ತಾನು ಅಸುರ ಸಂತತಿ ಎಂದು ಹೇಳಿದವರು. ಚಡ್ಡಿಗಳಿಗೆ ಎಡೂರಪ್ಪನಿಗಿಂತಲೂ ಪ್ರಿಯರಾದವರು. ಅದಕ್ಕೇ ಏನೋ ಎಡೂರಪ್ಪನವರು ದಾವಣಗೆರೆ ಉಸ್ತುವಾರಿ ಸಚಿವರನ್ನಾಗಿ ಮಾಡಿಬಿಟ್ಟಿದ್ದಾರೆ. ಲಂಕೇಶ್ ಹೇಳುತ್ತಿದ್ದ ಪ್ರಕಾರ, ದಾವಣಗೆರೆಯಲ್ಲಿ ಒಂದು ಕಲ್ಲು ಬೀಸಿದರೆ ಅದು ಒಬ್ಬ ಲಿಂಗಾಯತನಿಗೇ ತಗಲುತ್ತದಂತೆ. ಮೊದಲು ಸೆಕ್ಯುಲರ್ ಎಂದೇಳುವ ಶ್ಯಾಮನೂರು ಜೊತೆಗಿದ್ದು, ಈಗ ಬಿಜೆಪಿ ಸಿದ್ದೇಶನ ಜೊತೆ ಸೇರಿಕೊಂಡು ಮೋದಿ ಭಜನೆ ಮಾಡುತ್ತಿರುವ ದಾವಣಗೆರೆಗೆ ಈಶ್ವರಪ್ಪನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿರುವುದು ಸೇಡುತೀರಿಸಿಕೊಳ್ಳುವ ಕ್ರಮವೆಂದು ಹೇಳುತ್ತಿದ್ದಾರಲ್ಲಾ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಲಿಂಗಾಯತರೆಲ್ಲಾ ಸೇರಿಕೊಂಡು ಈಶ್ವರಪ್ಪನನ್ನು ಹುಡುಕಿಕೊಡಿ ಎಂದು ಪ್ರತಿಭಟಿಸಿದಾಗ, ಈಶ್ವರಪ್ಪ ಹಬ್ಬದಲ್ಲಿ ಭಾಗವಹಿಸಿ ಕೊರೊನಾ ಗಿರೋನ ಯಲ್ಲ ದೇವೇಗೌಡನಂತ ಮುದುಕರಿಗೆ ಬತ್ತದೆ ಕಂಡ್ರಿ ನಮಗಲ್ಲ ಎಂದರಂತಲ್ಲಾ, ಥೂತ್ತೇರಿ.

ವಿಧಾನಸೌಧದ ಹೊರಗೆ ಈ ಕತೆಯಾದರೆ, ಇನ್ನ ವಿಧಾನಸೌಧದ ಒಳಗಿನ ಕತೆಗಳು ಮನಕರಗುವಂತಿವೆಯಲ್ಲ. ಪ್ರವಾಹ, ಜನರ ಗೋಳು, ದೊರೆಸ್ವಾಮಿ ನಿಂದನೆಯ ವಿಚಾರ ಚರ್ಚೆಯಾಗಲು ಅವಕಾಶ ಕೊಡದೆ ಕಾಗೇರಿ, ಸಂವಿಧಾನ ಚರ್ಚೆಯಾಗಲು ಧಾರಾಳ ಅವಕಾಶಕೊಟ್ಟು, ಅಳುತ್ತ ಹೋದರಂತಲ್ಲ. ಇವರ ಬುದ್ಧವಂತಿಕೆ ಗ್ರಹಿಸುವುದಾದರೆ, ಪ್ರವಾಹಸಂತ್ರಸ್ತರ ವಿಷಯಕ್ಕೆ ಸಮಯ ಕೊಟ್ಟರೆ ಸರಕಾರದ ಮರ್ಯಾದೆ ಹರಾಜಾಗುತ್ತದೆ. ಜನರ ಗೋಳಿನ ಚರ್ಚೆಯೂ ಅಂತಹ ಅನಾಹುತವನ್ನೆ ಮಾಡಬಹುದು. ಇನ್ನ ದೊರೆಸ್ವಾಮಿ ವಿಷಯ ಪಾರ್ಟಿಯಲ್ಲಿ ಅನಾಗರಿಕರ ಅಪೂರ್ವ ಗುಣಗಳನ್ನ ಅನಾವರಣಮಾಡಬಹುದು. ಸಂವಿಧಾನಕ್ಕೆ ಅವಕಾಶ ಕೊಟ್ಟರೆ ಹಾಗಾಗುವುದಿಲ್ಲ. ಚಡ್ಡಿಗಳಿಗೂ ಸಂವಿಧಾನದ ಬಗ್ಗೆ ಗೌರವವಿದೆ ಎಂಬುದು ಜಗಜ್ಜಾಹೀರಾಗುತ್ತದೆ. ಇಂತಹ ಯೋಚನೆಯ ಕಾಗೇರಿ ಹೊಗಳುಭಟ್ಟರ ಸಂತತಿಯವರಾದ ರಮೇಶಕುಮಾರರಿಂದ ಹಿಗಾಮುಗ್ಗ ಹೊಗಳಿಸಿಕೊಂಡು ನಿರ್ಗಮಿಸಿದರಂತಲ್ಲಾ, ಥೂತ್ತೇರಿ.

ಇನ್ನ ವಿಧಾನಪರಿಷತ್‍ನಲ್ಲಿ ಯಾತಕ್ಕೂ ಲಾಯಕ್ ಅಲ್ಲದ ಕೋಟ ಶ್ರೀನಿವಾಸ ಪೂಜಾರಿ ಎಂಬ ಸಭಾನಾಯಕ ಕರ್ನಾಟಕದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇಲ್ಲ ಎಂದು ಬಿಟ್ಟಿದ್ದಾನಲ್ಲ. ಈ ಅಜ್ಞಾನಿಗೆ ಬಹುಶ ದೃಷ್ಟಿದೋಷವಿರಬಹುದು ಇಲ್ಲವೇ ಕೂಪಮಂಡೂಕನಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬಿ.ಜೆ.ಪಿ.ಯ ಭಯಂಕರ ಸುಳ್ಳುಗಾರನಿರಬಹುದು. ಈತನನ್ನ ಹಿಡಿದುಕೊಂಡು ಹೋಗಿ ಅಸ್ಪøಶ್ಯತೆ ಭೀಕರವಾಗಿರುವ ನಮ್ಮ ಹಳ್ಳಿಗಳ ಆಚರಣೆ ತೋರಿಸಬೇಕು. ಅಲ್ಲಿ ಹೊಲೆಯರವನು ಇನ್ನೂ ಅಮ್ಮನಗುಡಿ ಮುಂದೆ ತಮಟೆ ಬಡಿಯುತ್ತಿದ್ದಾನೆ. ಮಾದಿಗರವನು ಕೊಂಡ ಹಾಕುತ್ತಿದ್ದಾನೆ. ಮಡಿವಾಳರವನ್ನು ನೆಡೆಮಡಿಹಾಸಿ ಪತ್ತು ಹಿಡಿಯುತ್ತಿದ್ದಾನೆ. ಕ್ಷೌರಿಕರವನು ವಾಲಗ ಊದುತ್ತಿದ್ದಾನೆ ಇವರೆಲ್ಲಾ ತಮ್ಮತಮ್ಮ ಸ್ಥಾನದಲ್ಲಿ ತಮ್ಮ ಕರ್ತವ್ಯ ಅಂದರೆ ಭಕ್ತಿ ಅರ್ಪಿಸುತ್ತಿದ್ದಾರೆ. ಇನ್ನ ಹೊಟೇಲುಗಳಿಗೆ ಪ್ಲಾಸ್ಟಿಕ್ ಲೋಟ ಬಂದಿರುವುದರಿಂದ ಅದರ ಸಮಸ್ಯೆ ಸಾಲ್ವು ಆಗಿದೆ. ಇಂತಹ ಕೇರಿಗಳಿಗೆ ಈ ಪೂಜಾರಿ ಹೋಗಿ ನೋಡಬೇಕು. ಅವನು ಅಲ್ಲಿಗೆಲ್ಲ ಹೋಗುವುದಿಲ್ಲ. ಸುಳ್ಳುಗಾರ ಜನಕ್ಕೆ ಪ್ರತ್ಯಕ್ಷದ ಅಗತ್ಯವಿಲ್ಲವಂತಲ್ಲಾ, ಥೂತ್ತೇರಿ.

ಪ್ರಭಾಕರ ಕೋರೆಗೆ ಕೆಂಗಲ್ ಹನುಮಂತಯ್ಯ ಸಂಸ್ಕøತಿ ದತ್ತಿ ಪ್ರಶಸ್ತಿ ಪ್ರಾಪ್ತವಾಗಿದೆ. ಕೋರೆಗೆ ಅಭಿನಂದನೆ, ಆದರೆ ಅದನ್ನ ಕೊಡಮಾಡಿದ ಲೀಡರ್ ಬಗ್ಗೆ ಅನುಮಾನ ಎದ್ದಿವೆಯಲ್ಲಾ. ಏಕೆಂದರೆ, ಈ ಪ್ರಶಸ್ತಿಯನ್ನ ಕನ್ನಡ ಸಾಹಿತ್ಯ ಪರಿಷತ್ ಕೊಡುತ್ತದೆ. ಅದರ ಅಧ್ಯಕ್ಷ ಮನುಬಳಿಗಾರ. ಈತ ಪ್ರಶಸ್ತಿ ಕೊಡುವ ಮೊದಲೇ ಸದಸ್ಯರಿಗೆ ಸೂಚನೆ ಕೊಡುವ ಗಿರಾಕಿ. ಆದ್ದರಿಂದ ಕೆಂಗಲ್ ಮತ್ತು ಕೋರೆಗೆ ಜೊತೆಯಾಗಿಯೇ ಅವಮಾನವಾಗಿದೆ. ಕೆಂಗಲ್ ಕರ್ನಾಟಕ ಕಂಡ ಅಪ್ರತಿಮ ನಾಯಕ. ವಿಧಾನಸೌಧ ಕಟ್ಟಿದವರು. ನೆಹರೂಗೆ ಹೆದರದ ಧೀರ. ಇಂದಿರಾಗಾಂಧಿ ಎದುರು ಪಾರ್ಟಿ ಕಟ್ಟಿದವರು. ಭಗವಧ್ಗೀತೆ ಸಾಮಾನ್ಯನೂ ಓದಲೆಂದು ಮುದ್ರಿಸಿ ಹಂಚಿದವರು. ಕನ್ನಡದ ಸಂಸ್ಕøತಿ ಮತ್ತು ರಾಜಕಾರಣದ ಪ್ರತಿನಿಧಿ ಅನ್ನಬಹುದು. ಇಂತಹ ಮಹಾನಾಯಕನ ಹೆಸರಿನ ಪ್ರಶಸ್ತಿ ಕೋರೆಗೆ ಅನವುನ್ಸಾದಾಗ ಬಹುಶ: ಕೋರೆಗೆ ಅಚ್ಚರಿಯಾಗಿರಬಹುದು. ಕೊಟ್ಟವರಾರು ಎಂದು ಗೊತ್ತಾದಾಗ ಈಸಿಕೊಳ್ಳಲು ಸಂಕೋಚವೂ ಆಗಿರಬಹುದು. ಅದಕ್ಕಾಗಿ ಪ್ರಶಸ್ತಿ ಹಣವಾದ 25 ಸಾವಿರವನ್ನು ನೀನೇ ಇಟ್ಟಗಳೊ ಬಳಿಗಾರ ಅನ್ನುವ ಸಂಭವವಿದೆಯೆಂದು ಸಣ್ಣ ಸಂಸ್ಕøತಿ ಜನ ಆಡಿಕೊಳ್ಳುತ್ತಿದ್ದಾರಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...