Homeಕರ್ನಾಟಕಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

ಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

- Advertisement -
- Advertisement -

ವೆಂಕಟೇಶ್ ಪ್ರಸನ್ನ ಎಂಬ ಪೊಲೀಸ್ ಅಧಿಕಾರಿಯು ತನ್ನ ಭೂಗತ ಜಗತ್ತಿನ ಸಂಪರ್ಕ ಮತ್ತು ಶಾಮೀಲುದಾರಿಕೆಯ ಕಾರಣದಿಂದ ಈಗ ರಾಜ್ಯಾದ್ಯಂತ ಸುದ್ದಿಯಲ್ಲಿದ್ದಾರೆ. ಆದರೆ ಆತನನ್ನು ಬಲ್ಲ ಮಂಗಳೂರಿನ ಜನಕ್ಕೆ ಇದ್ಯಾವ ಹೊಸ ಸುದ್ದಿ ಎನಿಸಿ ಎಂದು ಮೂಗು ಮುರಿಯುತ್ತಿದ್ದಾರೆ. ಏಕೆಂದರೆ ರವಿ ಪೂಜಾರಿಯಂತಹ ಭೂಗತ ಡಾನ್‍ಗಳೊಂದಿಗಿನ ವೆಂಕಟೇಶ್ ಪ್ರಸನ್ನರ ಸಂಬಂಧವು ಮಂಗಳೂರಿನಲ್ಲಿದ್ದಾಗಲೇ ಗಟ್ಟಿಗೊಂಡಿದ್ದು. ಪೊಲೀಸ್ ಇಲಾಖೆಯೊಳಗೂ ಇದು ಜಗಜ್ಜಾಹೀರಾದ ವಿಚಾರವೇ.

ಶೃಂಗೇರಿ ತಾಲೂಕಿನ ಬ್ರಾಹ್ಮಣ ಕುಟುಂಬವೊಂದರ ವೆಂಕಟೇಶ್ ಪ್ರಸನ್ನರ ಸಂಬಂಧ ಭೂಗತ ಡಾನ್‍ಗಳೊಂದಿಗೆ ಮಾತ್ರವಿಲ್ಲ; ಅಷ್ಟೇ ಗಾಢ ಸಂಬಂಧವಿರುವುದು ಸಂಘಪರಿವಾರದ ಜೊತೆಗೂ ಆಗಿದೆ. ಒಂದು ಇನ್ನೊಂದನ್ನು ಪೊರೆಯುತ್ತಾ ಇದೆಯೆಂಬುದು ಇನ್ನೊಂದು ವಾಸ್ತವ. ಈ ಮೂರೂ ಅಂಶಗಳು (ವೆಂಕಟೇಶ್ ಪ್ರಸನ್ನ, ಸಂಘಪರಿವಾರ ಮತ್ತು ರವಿಪೂಜಾರಿಯಂತಹ ಭೂಗತ ಲೋಕದ ಜನ) ಒಂದಕ್ಕೊಂದು ಬೆಸೆದುಕೊಂಡಿವೆಯೆಂದು ಮಂಗಳೂರಿನಲ್ಲಿ ಒಮ್ಮೆ ದೊಡ್ಡ ಸುದ್ದಿಯಾಗಿದ್ದು ನೌಷಾದ್ ಖಾಸಿಂಯವರ ಕೊಲೆಯ ಸಂದರ್ಭದಲ್ಲಿ.

ವಿಪರ್ಯಾಸವೆಂದರೆ ಅದೇ ನೌಷಾದ್ ಖಾಸಿಂಯವರ ಕೊಲೆಯ ಆರೋಪಿ ದಿನೇಶ್ ಮತ್ತಿತರರನ್ನು ಇದೇ ವೆಂಕಟೇಶ್ ಪ್ರಸನ್ನ ಬೆಂಗಳೂರಿನಿಂದ ಎತ್ತಾಕಿಕೊಂಡು ಬಂದು ವಿಚಾರಣೆಗೆ ಗುರಿಯಾಗಿಸಿದರು ಎಂಬುದು ಆತನನ್ನು ತಕ್ಷಣದ ಆರೋಪಿ ಸ್ಥಾನದಿಂದ ವಿಮುಕ್ತನನ್ನಾಗಿಸಿತ್ತು. ಆದರೆ ಒಳಗಿನ ಸಂಗತಿ ಬೇರೆಯೇ ಆಗಿತ್ತು.

ನೌಷಾದ್ ಖಾಸಿಂಜಿ ಮಂಗಳೂರಿನ ಜನಪ್ರಿಯ ವಕೀಲರು. ಅದರಲ್ಲೂ ಬಡವರ ಪಾಲಿಗೆ ಆಪತ್ಬಾಂಧವ. ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ವಿವಿಧ ಕೇಸುಗಳಲ್ಲಿ ಬಂಧಿಸಿ ಭಯೋತ್ಪಾದಕ ಪಟ್ಟ ಕಟ್ಟುವುದು ಹೊಸದೇನಲ್ಲ. ಅಂತಹವರ ಪರವಾಗಿ ನ್ಯಾಯ ಕೊಡಿಸಲು ನೌಷಾದ್ ಎಂದೂ ಹಿಂಜರಿಯುತ್ತಿರಲಿಲ್ಲ. ಆ ಕಾರಣದಿಂದ ಮುಸ್ಲಿಂ ವಿರೋಧಿ ಮನಸ್ಥಿತಿಯ ಪೊಲೀಸರಿಗೂ ಅವರಿಗೂ ಶತ್ರುತ್ವವೂ ಬೆಳೆದಿತ್ತು. ಉಡುಪಿ ಎಂಎಲ್‍ಎ ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯರ ನಿಗೂಢ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಸಿಲುಕಿಸಲೆತ್ನಿಸಿದ್ದ ಅತುಲ್‍ರಾವ್ ಪರವೂ ನೌಷಾದ್ ವಾದಿಸಿದ್ದರು.

ಈ ಮಧ್ಯೆ ಮಂಗಳೂರಿನ ಭೂಗತ ಲೋಕದಲ್ಲಿ ಹಿಂದೂ ಮುಸ್ಲಿಂ ಗುಂಪುಗಳು ಬೇರೆ ತಲೆಯೆತ್ತಿದ್ದವು. ಟಿಪಿಕಲ್ ಮಂಗಳೂರು ಸಂಸ್ಕೃತಿಯ ಭಾಗವಾಗಿ. ಇದೇ ಮಂಗಳೂರು ಮೂಲದ ಡಾನ್‍ಗಳು ಬೆಂಗಳೂರು, ಮುಂಬೈಗಳಲ್ಲೆಲ್ಲಾ ಡಾನ್‍ಗಿರಿ ನಡೆಸಿ ದುಬೈ ಮತ್ತಿತರ ಅರಬ್ ದೇಶಗಳಲ್ಲಿ ತಲೆಮರೆಸಿಕೊಳ್ಳುವುದೂ ಹೊಸತಾಗಿರಲಿಲ್ಲ. ಅಂಥದ್ದೆಲ್ಲಾ ನಡೆಸಿ ನಂತರ ‘ಹಿಂದೂ ರಕ್ಷಕ’ರ ಅವತಾರವೆತ್ತಿ ಮತ್ತೆ ಇಲ್ಲಿ ‘ಮುಖ್ಯವಾಹಿನಿ’ ಸೇರಿಕೊಳ್ಳುವುದೂ ಹೊಸದಲ್ಲ.

ಇದೀಗ ಬಂಧಿತವಾಗಿರುವ ರವಿ ಪೂಜಾರಿಯದ್ದೂ ಅದೇ ಜಾಡು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೇಳಿಕೇಳಿ ರವಿ ಪೂಜಾರಿ ನೌಷಾದ್ ಖಾಸಿಂಜಿಯ ಮರ್ಡರ್ (ಏಪ್ರಿಲ್ 9, 2009) ಸಂದರ್ಭದಲ್ಲೇ ಕಮ್ಯುನಲ್ ಮಾಫಿಯಾದ ಭಾಗವಾಗಿದ್ದುದು ಸಾಬೀತಾಗಿತ್ತು. ಹಾಗಾಗಿಯೂ ವೆಂಕಟೇಶ್ ಪ್ರಸನ್ನರ ಹಸ್ತವೂ ಆ ಮರ್ಡರ್‍ನಲ್ಲಿತ್ತು ಎಂಬುದು ಆ ಸಂದರ್ಭದಲ್ಲಿ ಪ್ರತಿಭಟಿಸಿದವರ ಆಕ್ರೋಶದಲ್ಲಿ ಎದ್ದು ಕಾಣುತ್ತಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರು ಎಸ್‍ಪಿ ಆಗಿದ್ದ (ಆಗಿನ್ನೂ ಕಮೀಷನರೇಟ್ ಬಂದಿರಲಿಲ್ಲ) ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಐಜಿ ಗೋಪಾಲ್ ಹೊಸೂರ್ ಅವರ ಮೇಲೆ ವಿಪರೀತ ಒತ್ತಡವಿತ್ತು. ಸ್ಫೋಟವಾಗಲು ಕಾದು ಕುಳಿತಂತಿದ್ದ ಮಂಗಳೂರು, ಕೋಮು ಬಣ್ಣ ಪಡೆದುಕೊಳ್ಳುತ್ತಿದ್ದ ಭೂಗತ ಲೋಕ, ಸರ್ಕಾರ ನಡೆಸುತ್ತಿದ್ದದ್ದು ಬಿಜೆಪಿ – ಹೀಗಿರುವಾಗ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಿರಲಿಲ್ಲ. ಆದರೆ, ನೌಷಾದ್ ಖಾಸಿಂ ಕೊಲೆಗಾರರನ್ನು ಕೊಲೆಯಾದ 15 ದಿನಗಳಲ್ಲಿ ಬಂಧಿಸಲಾಯಿತು. ಬಂಧಿತರಾದ ದಿನೇಶ್ ಶೆಟ್ಟಿ, ರಿತೇಶ್ ಮತ್ತಿತರರೆಲ್ಲರೂ ರವಿ ಪೂಜಾರಿಯ ಸಹಚರರು ಎಂಬುದು ಖಚಿತವಾಗಿತ್ತು.

ಕೊಲೆಯ ವಿರುದ್ಧ ಸಿಡಿದೆದ್ದಿದ್ದ ಪ್ರತಿಭಟನಾಕಾರರು ಸುಮ್ಮನಾದರೂ ನೌಷಾದ್‍ರ ಸೀನಿಯರ್ ಪುರುಷೋತ್ತಮ್ ಪೂಜಾರಿಯವರು ಸುಮ್ಮನಾಗಲಿಲ್ಲ. ಈ ಕೊಲೆಯಲ್ಲಿ ವೆಂಕಟೇಶ್ ಪ್ರಸನ್ನ ಮತ್ತು ಇನ್ನಿಬ್ಬರು ಇನ್ಸ್‍ಪೆಕ್ಟರ್‍ಗಳ ಪಾತ್ರವಿದೆಯೆಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ ಸಿಬಿಐ ತನಿಖೆ ನಡೆಯಬೇಕೆಂದು ಹೈಕೋರ್ಟ್‍ನವರೆಗೆ ಹೋಗಿದ್ದರು. ಅಷ್ಟರಲ್ಲಾಗಲೇ (2011) ತನಿಖೆ ಸಾಕಷ್ಟು ಮುಂದುವರೆದಿದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧದ ಕೇಸನ್ನು ಹೈಕೋರ್ಟು ಕೈಬಿಟ್ಟಿತ್ತು. ಆದರೆ, 2015ರ ನವೆಂಬರ್‍ನಲ್ಲಿ ಇತರ ಆರೋಪಿಗಳಿಗೆ ಶಿಕ್ಷೆಯೂ ಆಯಿತು. ಅವರೇ ಮರ್ಡರರ್ಸ್ ಎಂದು ಕೋರ್ಟು ಎತ್ತಿ ಹಿಡಿದಿತ್ತು.

ಸದರಿ ಕೇಸಿನಲ್ಲಿ ಮಂಗಳೂರು ಪೊಲೀಸರು ತೋರಿದ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನೌಷಾದ್ ಅವರು ರಷೀದ್ ಮಲಬಾರಿ ಎಂಬ ಛೋಟಾ ಶಕೀಲ್‍ನ ಸಹವರ್ತಿಯ ವಕೀಲರಾಗಿದ್ದುದರಿಂದ ಅವರ ಮರ್ಡರ್ ನಡೆದಿತ್ತು. ಇದೇ ನೌಷಾದ್ ಒಬ್ಬ ಪ್ರಸಿದ್ಧ ಮಾನವಹಕ್ಕು ವಕೀಲರಾಗಿಯೂ ಹೆಸರು ಮಾಡಿದ್ದರು. ಸಹಜವಾಗಿ ಪೊಲೀಸರು ಇಂಥವರ ವಿರುದ್ಧ ಇರುತ್ತಾರೆ. ಆದರೆ, ಮಂಗಳೂರಿನ ಅಧಿಕಾರಿಗಳ ತಂಡ ಬೆನ್ನುಬಿದ್ದು ಕೊಲೆಗಾರರನ್ನು ಹಿಡಿದರು. ದಿನೇಶ್ ಮತ್ತಿತರರೇ ಕೊಲೆಗಾರರು ಎಂಬುದು ಕಾಲ್ ರೆಕಾಡ್ರ್ಸ್ ಮತ್ತು ಲೊಕೇಶನ್ ವಿವರಗಳಿಂದ ಶೇ.99ರಷ್ಟು ಖಚಿತವಾದ ಮೇಲೆ ಬೆಂಗಳೂರಿಗೆ ಹೋಗಿ ಹಿಡಿದು ತಂದಿದ್ದಷ್ಟೇ ವೆಂಕಟೇಶ್ ಪ್ರಸನ್ನ. ಹಾಗೆ ನೋಡಿದರೆ ಭೂಗತ ಲೋಕದ ಜೊತೆಗೆ ನಂಟು ಹೊಂದಿರುವ ಇಂತಹ ಅಧಿಕಾರಿಗಳು ಬಹಳ ಚುರುಕಾಗಿಯೂ ಇರುತ್ತಾರೆ. ತಮ್ಮದೇ ಸಂಪರ್ಕ ಬಳಸಿ ಕೆಲವು ಕೇಸುಗಳನ್ನು ಸುಲಭದಲ್ಲಿ ಬಗೆಹರಿಸುತ್ತಾರೆ. ಇನ್ನೆಷ್ಟೋ ಕೇಸುಗಳಲ್ಲಿ ಬರೀ ಡೀಲ್‍ಗಳು ಆಗುತ್ತವೆ.

ಇಂತಹ ವೆಂಕಟೇಶ್ ಪ್ರಸನ್ನ ಇದೀಗ ಬೆಂಗಳೂರಿನಲ್ಲಿ ಎಸಿಪಿ ಮತ್ತು ಭೂಗತ ಪಾತಕಿ ರವಿ ಪೂಜಾರಿಯ ಮಾಹಿತಿದಾರ ಎಂಬ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಸ್ವತಃ ಪೊಲೀಸ್ ಕಮೀಷನರ್ ಭಾಸ್ಕರರಾವ್ ಈ ಕುರಿತು ಡಿಜಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ಇಲಾಖಾ ವಿಚಾರಣೆ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ವೆಂಕಟೇಶ್ ಪ್ರಸನ್ನ ರವಿ ಪೂಜಾರಿಗೆ ತಿಳಿಸುತ್ತಿದ್ದರು ಎಂಬುದು ಹೊಸ ಆರೋಪ. 2016ರಲ್ಲಿ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ ಕುರಿತು ಆಂಬಿಡೆಂಟ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

ಇದೇ ಕಾರಣಕ್ಕೆ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಅವರು ಮತ್ತೆ ಸಿಸಿಬಿಗೇ ಬಂದಿದ್ದರು. ಈಗ ಮತ್ತೊಮ್ಮೆ ಅದೇ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. ಅಂದರೆ ರವಿ ಪೂಜಾರಿಯಂತಹ, ಕರ್ನಾಟಕವೊಂದರಲ್ಲೇ 97 ಪ್ರಕರಣದಲ್ಲಿ ಆರೋಪಿಯಾಗಿರುವ ಆರೋಪಿಯ ಜೊತೆಗೆ ಸಖ್ಯ ಇದೆ ಎನ್ನುವ ಅಧಿಕಾರಿಗೆ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದರೆ ಸಾಕೇ ಎನ್ನುವುದನ್ನು ಇಲಾಖೆಯೇ ಉತ್ತರಿಸಬೇಕಿದೆ.

ದುರಂತವೆಂದರೆ ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ‘ವಿಶೇಷ ಸ್ಥಾನ’ಗಳನ್ನು ಪಡೆದಿರುತ್ತಾರೆ. ಅವರ ‘ಕನೆಕ್ಷನ್’ಗಳು ಹಿರಿಯ ಅಧಿಕಾರಿಗಳಿಗೂ ಬೇಕಿರುತ್ತವೆ. ಎಲ್ಲವನ್ನೂ ಅಧಿಕೃತ ಮಾರ್ಗಗಳಿಂದಲೇ ಮಾಡಲಾಗದಾಗ ಅವರು ಇಂಥವರನ್ನೂ ಬಳಸುತ್ತಾರೆ. ನೋಡುನೋಡುತ್ತಲೇ ಇವರುಗಳು ಸೂಪರ್‍ಕಾಪ್‍ಗಳೆಂಬ ಬಿರುದುಗಳನ್ನೂ ಪಡೆದುಕೊಂಡಿರುತ್ತಾರೆ. ಪೊಲೀಸ್ ಇಲಾಖೆ, ಕಳ್ಳದಂಧೆಗಳು, ಕೊಲೆಗಡುಕ ಮಾಫಿಯಾಗಳು ಇವೆಲ್ಲವೂ ಎಂದೆಂದೂ ಇರುವಂಥವೇ ಮತ್ತು ಅವುಗಳ ಬಗ್ಗೆ ಕ್ರೈಮ್ ಸುದ್ದಿ ಮಾಡುವವರು ಬರೆಯುತ್ತಾ ಅವನ್ನು ರೋಚಕಗೊಳಿಸುತ್ತಾ ಹೋಗುವುದೂ ಇಂದಿನ ನಾರ್ಮೆಲ್ಸಿ ಎಂದಾಗಿಬಿಟ್ಟಿದೆ. ಇವುಗಳ ಹಿಂದೆ ಕರಾಳಲೋಕದ ಆಟಗಳು ಸಾಕಷ್ಟಿರುತ್ತದೆ; ಯಾರ್ಯಾರದ್ದೋ ಬದುಕುಗಳು ಮುರುಟಿ ಹೋಗುತ್ತವೆ ಎಂಬುದು ‘ಸಭ್ಯಲೋಕ’ವಾದ ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮಗಳಿಗೂ ಬೇಡವಾಗಿಬಿಟ್ಟರೆ ಅಲ್ಲಿಗೆ ಎಲ್ಲವೂ ಆಟ ಮಾತ್ರವೇ ಆಗಿಬಿಡುತ್ತದೆ. ಎನ್‍ಕೌಂಟರ್ ಸ್ಪೆಷಲಿಸ್ಟುಗಳು ಕೆಲವೊಮ್ಮೆ ದಂಧೆಗಳನ್ನೂ ನಡೆಸುತ್ತಿರುತ್ತಾರೆ. ಅವರನ್ನು ತೆಗಳುವ ಮತ್ತು ಹೊಗಳುವ ಎರಡೂ ಬಗೆಯ ಪತ್ರಕರ್ತರೂ ಇರುತ್ತಾರೆ. ಈ ದುರಂತವನ್ನು ಬಿಚ್ಚಿಡಲು ಹೋಗುವವರು ನೂರು ಸಾರಿ ಯೋಚಿಸುವ ವಾತಾವರಣವಿದೆ.

ಇವೆಲ್ಲಕ್ಕೂ ಮಿಗಿಲಾದ ಅಪಾಯವಿರುವುದು ಸದರಿ ಪೊಲೀಸ್ ಅಧಿಕಾರಿಗಳು ಕಮ್ಯುನಲ್ ಮಾಫಿಯಾದ ಭಾಗವಾಗುವುದು. ಸರ್ಕಾರವೂ ಅದಕ್ಕೆ ಪೂರಕವಾಗಿಬಿಟ್ಟರೆ ಕಥೆ ಮುಗಿದಂತೆಯೇ. ವೆಂಕಟೇಶ್ ಪ್ರಸನ್ನರ ಲಿಂಕುಗಳು ಈ ರೀತಿ ಹಲವು ಎಳೆಗಳನ್ನು ತೋರುತ್ತಿವೆ. ಒಂದೇ ಪತ್ರಿಕೆಯ ಬಾಕ್ಸ್ ಐಟಮ್ಮಿನಲ್ಲಿ ಅವರ ಪರವಾದ ಸುದ್ದಿಯೂ, ಮುಖ್ಯ ಭಾಗದಲ್ಲಿ ಅವರ ಕರಾಳ ಮುಖವನ್ನು ತೋರುವ ಸುದ್ದಿ ಬರಲು ಈ ಸಿಕ್ಕುಗಳೂ ಕಾರಣವಾಗಿದೆ. ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಇಂಥವು ಬೆಳೆಯಲು ಬಿಡದಿದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...