Homeಕರ್ನಾಟಕಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

ಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

- Advertisement -
- Advertisement -

ವೆಂಕಟೇಶ್ ಪ್ರಸನ್ನ ಎಂಬ ಪೊಲೀಸ್ ಅಧಿಕಾರಿಯು ತನ್ನ ಭೂಗತ ಜಗತ್ತಿನ ಸಂಪರ್ಕ ಮತ್ತು ಶಾಮೀಲುದಾರಿಕೆಯ ಕಾರಣದಿಂದ ಈಗ ರಾಜ್ಯಾದ್ಯಂತ ಸುದ್ದಿಯಲ್ಲಿದ್ದಾರೆ. ಆದರೆ ಆತನನ್ನು ಬಲ್ಲ ಮಂಗಳೂರಿನ ಜನಕ್ಕೆ ಇದ್ಯಾವ ಹೊಸ ಸುದ್ದಿ ಎನಿಸಿ ಎಂದು ಮೂಗು ಮುರಿಯುತ್ತಿದ್ದಾರೆ. ಏಕೆಂದರೆ ರವಿ ಪೂಜಾರಿಯಂತಹ ಭೂಗತ ಡಾನ್‍ಗಳೊಂದಿಗಿನ ವೆಂಕಟೇಶ್ ಪ್ರಸನ್ನರ ಸಂಬಂಧವು ಮಂಗಳೂರಿನಲ್ಲಿದ್ದಾಗಲೇ ಗಟ್ಟಿಗೊಂಡಿದ್ದು. ಪೊಲೀಸ್ ಇಲಾಖೆಯೊಳಗೂ ಇದು ಜಗಜ್ಜಾಹೀರಾದ ವಿಚಾರವೇ.

ಶೃಂಗೇರಿ ತಾಲೂಕಿನ ಬ್ರಾಹ್ಮಣ ಕುಟುಂಬವೊಂದರ ವೆಂಕಟೇಶ್ ಪ್ರಸನ್ನರ ಸಂಬಂಧ ಭೂಗತ ಡಾನ್‍ಗಳೊಂದಿಗೆ ಮಾತ್ರವಿಲ್ಲ; ಅಷ್ಟೇ ಗಾಢ ಸಂಬಂಧವಿರುವುದು ಸಂಘಪರಿವಾರದ ಜೊತೆಗೂ ಆಗಿದೆ. ಒಂದು ಇನ್ನೊಂದನ್ನು ಪೊರೆಯುತ್ತಾ ಇದೆಯೆಂಬುದು ಇನ್ನೊಂದು ವಾಸ್ತವ. ಈ ಮೂರೂ ಅಂಶಗಳು (ವೆಂಕಟೇಶ್ ಪ್ರಸನ್ನ, ಸಂಘಪರಿವಾರ ಮತ್ತು ರವಿಪೂಜಾರಿಯಂತಹ ಭೂಗತ ಲೋಕದ ಜನ) ಒಂದಕ್ಕೊಂದು ಬೆಸೆದುಕೊಂಡಿವೆಯೆಂದು ಮಂಗಳೂರಿನಲ್ಲಿ ಒಮ್ಮೆ ದೊಡ್ಡ ಸುದ್ದಿಯಾಗಿದ್ದು ನೌಷಾದ್ ಖಾಸಿಂಯವರ ಕೊಲೆಯ ಸಂದರ್ಭದಲ್ಲಿ.

ವಿಪರ್ಯಾಸವೆಂದರೆ ಅದೇ ನೌಷಾದ್ ಖಾಸಿಂಯವರ ಕೊಲೆಯ ಆರೋಪಿ ದಿನೇಶ್ ಮತ್ತಿತರರನ್ನು ಇದೇ ವೆಂಕಟೇಶ್ ಪ್ರಸನ್ನ ಬೆಂಗಳೂರಿನಿಂದ ಎತ್ತಾಕಿಕೊಂಡು ಬಂದು ವಿಚಾರಣೆಗೆ ಗುರಿಯಾಗಿಸಿದರು ಎಂಬುದು ಆತನನ್ನು ತಕ್ಷಣದ ಆರೋಪಿ ಸ್ಥಾನದಿಂದ ವಿಮುಕ್ತನನ್ನಾಗಿಸಿತ್ತು. ಆದರೆ ಒಳಗಿನ ಸಂಗತಿ ಬೇರೆಯೇ ಆಗಿತ್ತು.

ನೌಷಾದ್ ಖಾಸಿಂಜಿ ಮಂಗಳೂರಿನ ಜನಪ್ರಿಯ ವಕೀಲರು. ಅದರಲ್ಲೂ ಬಡವರ ಪಾಲಿಗೆ ಆಪತ್ಬಾಂಧವ. ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ವಿವಿಧ ಕೇಸುಗಳಲ್ಲಿ ಬಂಧಿಸಿ ಭಯೋತ್ಪಾದಕ ಪಟ್ಟ ಕಟ್ಟುವುದು ಹೊಸದೇನಲ್ಲ. ಅಂತಹವರ ಪರವಾಗಿ ನ್ಯಾಯ ಕೊಡಿಸಲು ನೌಷಾದ್ ಎಂದೂ ಹಿಂಜರಿಯುತ್ತಿರಲಿಲ್ಲ. ಆ ಕಾರಣದಿಂದ ಮುಸ್ಲಿಂ ವಿರೋಧಿ ಮನಸ್ಥಿತಿಯ ಪೊಲೀಸರಿಗೂ ಅವರಿಗೂ ಶತ್ರುತ್ವವೂ ಬೆಳೆದಿತ್ತು. ಉಡುಪಿ ಎಂಎಲ್‍ಎ ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯರ ನಿಗೂಢ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಸಿಲುಕಿಸಲೆತ್ನಿಸಿದ್ದ ಅತುಲ್‍ರಾವ್ ಪರವೂ ನೌಷಾದ್ ವಾದಿಸಿದ್ದರು.

ಈ ಮಧ್ಯೆ ಮಂಗಳೂರಿನ ಭೂಗತ ಲೋಕದಲ್ಲಿ ಹಿಂದೂ ಮುಸ್ಲಿಂ ಗುಂಪುಗಳು ಬೇರೆ ತಲೆಯೆತ್ತಿದ್ದವು. ಟಿಪಿಕಲ್ ಮಂಗಳೂರು ಸಂಸ್ಕೃತಿಯ ಭಾಗವಾಗಿ. ಇದೇ ಮಂಗಳೂರು ಮೂಲದ ಡಾನ್‍ಗಳು ಬೆಂಗಳೂರು, ಮುಂಬೈಗಳಲ್ಲೆಲ್ಲಾ ಡಾನ್‍ಗಿರಿ ನಡೆಸಿ ದುಬೈ ಮತ್ತಿತರ ಅರಬ್ ದೇಶಗಳಲ್ಲಿ ತಲೆಮರೆಸಿಕೊಳ್ಳುವುದೂ ಹೊಸತಾಗಿರಲಿಲ್ಲ. ಅಂಥದ್ದೆಲ್ಲಾ ನಡೆಸಿ ನಂತರ ‘ಹಿಂದೂ ರಕ್ಷಕ’ರ ಅವತಾರವೆತ್ತಿ ಮತ್ತೆ ಇಲ್ಲಿ ‘ಮುಖ್ಯವಾಹಿನಿ’ ಸೇರಿಕೊಳ್ಳುವುದೂ ಹೊಸದಲ್ಲ.

ಇದೀಗ ಬಂಧಿತವಾಗಿರುವ ರವಿ ಪೂಜಾರಿಯದ್ದೂ ಅದೇ ಜಾಡು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೇಳಿಕೇಳಿ ರವಿ ಪೂಜಾರಿ ನೌಷಾದ್ ಖಾಸಿಂಜಿಯ ಮರ್ಡರ್ (ಏಪ್ರಿಲ್ 9, 2009) ಸಂದರ್ಭದಲ್ಲೇ ಕಮ್ಯುನಲ್ ಮಾಫಿಯಾದ ಭಾಗವಾಗಿದ್ದುದು ಸಾಬೀತಾಗಿತ್ತು. ಹಾಗಾಗಿಯೂ ವೆಂಕಟೇಶ್ ಪ್ರಸನ್ನರ ಹಸ್ತವೂ ಆ ಮರ್ಡರ್‍ನಲ್ಲಿತ್ತು ಎಂಬುದು ಆ ಸಂದರ್ಭದಲ್ಲಿ ಪ್ರತಿಭಟಿಸಿದವರ ಆಕ್ರೋಶದಲ್ಲಿ ಎದ್ದು ಕಾಣುತ್ತಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರು ಎಸ್‍ಪಿ ಆಗಿದ್ದ (ಆಗಿನ್ನೂ ಕಮೀಷನರೇಟ್ ಬಂದಿರಲಿಲ್ಲ) ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಐಜಿ ಗೋಪಾಲ್ ಹೊಸೂರ್ ಅವರ ಮೇಲೆ ವಿಪರೀತ ಒತ್ತಡವಿತ್ತು. ಸ್ಫೋಟವಾಗಲು ಕಾದು ಕುಳಿತಂತಿದ್ದ ಮಂಗಳೂರು, ಕೋಮು ಬಣ್ಣ ಪಡೆದುಕೊಳ್ಳುತ್ತಿದ್ದ ಭೂಗತ ಲೋಕ, ಸರ್ಕಾರ ನಡೆಸುತ್ತಿದ್ದದ್ದು ಬಿಜೆಪಿ – ಹೀಗಿರುವಾಗ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಿರಲಿಲ್ಲ. ಆದರೆ, ನೌಷಾದ್ ಖಾಸಿಂ ಕೊಲೆಗಾರರನ್ನು ಕೊಲೆಯಾದ 15 ದಿನಗಳಲ್ಲಿ ಬಂಧಿಸಲಾಯಿತು. ಬಂಧಿತರಾದ ದಿನೇಶ್ ಶೆಟ್ಟಿ, ರಿತೇಶ್ ಮತ್ತಿತರರೆಲ್ಲರೂ ರವಿ ಪೂಜಾರಿಯ ಸಹಚರರು ಎಂಬುದು ಖಚಿತವಾಗಿತ್ತು.

ಕೊಲೆಯ ವಿರುದ್ಧ ಸಿಡಿದೆದ್ದಿದ್ದ ಪ್ರತಿಭಟನಾಕಾರರು ಸುಮ್ಮನಾದರೂ ನೌಷಾದ್‍ರ ಸೀನಿಯರ್ ಪುರುಷೋತ್ತಮ್ ಪೂಜಾರಿಯವರು ಸುಮ್ಮನಾಗಲಿಲ್ಲ. ಈ ಕೊಲೆಯಲ್ಲಿ ವೆಂಕಟೇಶ್ ಪ್ರಸನ್ನ ಮತ್ತು ಇನ್ನಿಬ್ಬರು ಇನ್ಸ್‍ಪೆಕ್ಟರ್‍ಗಳ ಪಾತ್ರವಿದೆಯೆಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ ಸಿಬಿಐ ತನಿಖೆ ನಡೆಯಬೇಕೆಂದು ಹೈಕೋರ್ಟ್‍ನವರೆಗೆ ಹೋಗಿದ್ದರು. ಅಷ್ಟರಲ್ಲಾಗಲೇ (2011) ತನಿಖೆ ಸಾಕಷ್ಟು ಮುಂದುವರೆದಿದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧದ ಕೇಸನ್ನು ಹೈಕೋರ್ಟು ಕೈಬಿಟ್ಟಿತ್ತು. ಆದರೆ, 2015ರ ನವೆಂಬರ್‍ನಲ್ಲಿ ಇತರ ಆರೋಪಿಗಳಿಗೆ ಶಿಕ್ಷೆಯೂ ಆಯಿತು. ಅವರೇ ಮರ್ಡರರ್ಸ್ ಎಂದು ಕೋರ್ಟು ಎತ್ತಿ ಹಿಡಿದಿತ್ತು.

ಸದರಿ ಕೇಸಿನಲ್ಲಿ ಮಂಗಳೂರು ಪೊಲೀಸರು ತೋರಿದ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನೌಷಾದ್ ಅವರು ರಷೀದ್ ಮಲಬಾರಿ ಎಂಬ ಛೋಟಾ ಶಕೀಲ್‍ನ ಸಹವರ್ತಿಯ ವಕೀಲರಾಗಿದ್ದುದರಿಂದ ಅವರ ಮರ್ಡರ್ ನಡೆದಿತ್ತು. ಇದೇ ನೌಷಾದ್ ಒಬ್ಬ ಪ್ರಸಿದ್ಧ ಮಾನವಹಕ್ಕು ವಕೀಲರಾಗಿಯೂ ಹೆಸರು ಮಾಡಿದ್ದರು. ಸಹಜವಾಗಿ ಪೊಲೀಸರು ಇಂಥವರ ವಿರುದ್ಧ ಇರುತ್ತಾರೆ. ಆದರೆ, ಮಂಗಳೂರಿನ ಅಧಿಕಾರಿಗಳ ತಂಡ ಬೆನ್ನುಬಿದ್ದು ಕೊಲೆಗಾರರನ್ನು ಹಿಡಿದರು. ದಿನೇಶ್ ಮತ್ತಿತರರೇ ಕೊಲೆಗಾರರು ಎಂಬುದು ಕಾಲ್ ರೆಕಾಡ್ರ್ಸ್ ಮತ್ತು ಲೊಕೇಶನ್ ವಿವರಗಳಿಂದ ಶೇ.99ರಷ್ಟು ಖಚಿತವಾದ ಮೇಲೆ ಬೆಂಗಳೂರಿಗೆ ಹೋಗಿ ಹಿಡಿದು ತಂದಿದ್ದಷ್ಟೇ ವೆಂಕಟೇಶ್ ಪ್ರಸನ್ನ. ಹಾಗೆ ನೋಡಿದರೆ ಭೂಗತ ಲೋಕದ ಜೊತೆಗೆ ನಂಟು ಹೊಂದಿರುವ ಇಂತಹ ಅಧಿಕಾರಿಗಳು ಬಹಳ ಚುರುಕಾಗಿಯೂ ಇರುತ್ತಾರೆ. ತಮ್ಮದೇ ಸಂಪರ್ಕ ಬಳಸಿ ಕೆಲವು ಕೇಸುಗಳನ್ನು ಸುಲಭದಲ್ಲಿ ಬಗೆಹರಿಸುತ್ತಾರೆ. ಇನ್ನೆಷ್ಟೋ ಕೇಸುಗಳಲ್ಲಿ ಬರೀ ಡೀಲ್‍ಗಳು ಆಗುತ್ತವೆ.

ಇಂತಹ ವೆಂಕಟೇಶ್ ಪ್ರಸನ್ನ ಇದೀಗ ಬೆಂಗಳೂರಿನಲ್ಲಿ ಎಸಿಪಿ ಮತ್ತು ಭೂಗತ ಪಾತಕಿ ರವಿ ಪೂಜಾರಿಯ ಮಾಹಿತಿದಾರ ಎಂಬ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಸ್ವತಃ ಪೊಲೀಸ್ ಕಮೀಷನರ್ ಭಾಸ್ಕರರಾವ್ ಈ ಕುರಿತು ಡಿಜಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ಇಲಾಖಾ ವಿಚಾರಣೆ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ವೆಂಕಟೇಶ್ ಪ್ರಸನ್ನ ರವಿ ಪೂಜಾರಿಗೆ ತಿಳಿಸುತ್ತಿದ್ದರು ಎಂಬುದು ಹೊಸ ಆರೋಪ. 2016ರಲ್ಲಿ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ ಕುರಿತು ಆಂಬಿಡೆಂಟ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

ಇದೇ ಕಾರಣಕ್ಕೆ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಅವರು ಮತ್ತೆ ಸಿಸಿಬಿಗೇ ಬಂದಿದ್ದರು. ಈಗ ಮತ್ತೊಮ್ಮೆ ಅದೇ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. ಅಂದರೆ ರವಿ ಪೂಜಾರಿಯಂತಹ, ಕರ್ನಾಟಕವೊಂದರಲ್ಲೇ 97 ಪ್ರಕರಣದಲ್ಲಿ ಆರೋಪಿಯಾಗಿರುವ ಆರೋಪಿಯ ಜೊತೆಗೆ ಸಖ್ಯ ಇದೆ ಎನ್ನುವ ಅಧಿಕಾರಿಗೆ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದರೆ ಸಾಕೇ ಎನ್ನುವುದನ್ನು ಇಲಾಖೆಯೇ ಉತ್ತರಿಸಬೇಕಿದೆ.

ದುರಂತವೆಂದರೆ ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ‘ವಿಶೇಷ ಸ್ಥಾನ’ಗಳನ್ನು ಪಡೆದಿರುತ್ತಾರೆ. ಅವರ ‘ಕನೆಕ್ಷನ್’ಗಳು ಹಿರಿಯ ಅಧಿಕಾರಿಗಳಿಗೂ ಬೇಕಿರುತ್ತವೆ. ಎಲ್ಲವನ್ನೂ ಅಧಿಕೃತ ಮಾರ್ಗಗಳಿಂದಲೇ ಮಾಡಲಾಗದಾಗ ಅವರು ಇಂಥವರನ್ನೂ ಬಳಸುತ್ತಾರೆ. ನೋಡುನೋಡುತ್ತಲೇ ಇವರುಗಳು ಸೂಪರ್‍ಕಾಪ್‍ಗಳೆಂಬ ಬಿರುದುಗಳನ್ನೂ ಪಡೆದುಕೊಂಡಿರುತ್ತಾರೆ. ಪೊಲೀಸ್ ಇಲಾಖೆ, ಕಳ್ಳದಂಧೆಗಳು, ಕೊಲೆಗಡುಕ ಮಾಫಿಯಾಗಳು ಇವೆಲ್ಲವೂ ಎಂದೆಂದೂ ಇರುವಂಥವೇ ಮತ್ತು ಅವುಗಳ ಬಗ್ಗೆ ಕ್ರೈಮ್ ಸುದ್ದಿ ಮಾಡುವವರು ಬರೆಯುತ್ತಾ ಅವನ್ನು ರೋಚಕಗೊಳಿಸುತ್ತಾ ಹೋಗುವುದೂ ಇಂದಿನ ನಾರ್ಮೆಲ್ಸಿ ಎಂದಾಗಿಬಿಟ್ಟಿದೆ. ಇವುಗಳ ಹಿಂದೆ ಕರಾಳಲೋಕದ ಆಟಗಳು ಸಾಕಷ್ಟಿರುತ್ತದೆ; ಯಾರ್ಯಾರದ್ದೋ ಬದುಕುಗಳು ಮುರುಟಿ ಹೋಗುತ್ತವೆ ಎಂಬುದು ‘ಸಭ್ಯಲೋಕ’ವಾದ ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮಗಳಿಗೂ ಬೇಡವಾಗಿಬಿಟ್ಟರೆ ಅಲ್ಲಿಗೆ ಎಲ್ಲವೂ ಆಟ ಮಾತ್ರವೇ ಆಗಿಬಿಡುತ್ತದೆ. ಎನ್‍ಕೌಂಟರ್ ಸ್ಪೆಷಲಿಸ್ಟುಗಳು ಕೆಲವೊಮ್ಮೆ ದಂಧೆಗಳನ್ನೂ ನಡೆಸುತ್ತಿರುತ್ತಾರೆ. ಅವರನ್ನು ತೆಗಳುವ ಮತ್ತು ಹೊಗಳುವ ಎರಡೂ ಬಗೆಯ ಪತ್ರಕರ್ತರೂ ಇರುತ್ತಾರೆ. ಈ ದುರಂತವನ್ನು ಬಿಚ್ಚಿಡಲು ಹೋಗುವವರು ನೂರು ಸಾರಿ ಯೋಚಿಸುವ ವಾತಾವರಣವಿದೆ.

ಇವೆಲ್ಲಕ್ಕೂ ಮಿಗಿಲಾದ ಅಪಾಯವಿರುವುದು ಸದರಿ ಪೊಲೀಸ್ ಅಧಿಕಾರಿಗಳು ಕಮ್ಯುನಲ್ ಮಾಫಿಯಾದ ಭಾಗವಾಗುವುದು. ಸರ್ಕಾರವೂ ಅದಕ್ಕೆ ಪೂರಕವಾಗಿಬಿಟ್ಟರೆ ಕಥೆ ಮುಗಿದಂತೆಯೇ. ವೆಂಕಟೇಶ್ ಪ್ರಸನ್ನರ ಲಿಂಕುಗಳು ಈ ರೀತಿ ಹಲವು ಎಳೆಗಳನ್ನು ತೋರುತ್ತಿವೆ. ಒಂದೇ ಪತ್ರಿಕೆಯ ಬಾಕ್ಸ್ ಐಟಮ್ಮಿನಲ್ಲಿ ಅವರ ಪರವಾದ ಸುದ್ದಿಯೂ, ಮುಖ್ಯ ಭಾಗದಲ್ಲಿ ಅವರ ಕರಾಳ ಮುಖವನ್ನು ತೋರುವ ಸುದ್ದಿ ಬರಲು ಈ ಸಿಕ್ಕುಗಳೂ ಕಾರಣವಾಗಿದೆ. ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಇಂಥವು ಬೆಳೆಯಲು ಬಿಡದಿದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...