Homeಕರ್ನಾಟಕಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

ಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

- Advertisement -
- Advertisement -

ವೆಂಕಟೇಶ್ ಪ್ರಸನ್ನ ಎಂಬ ಪೊಲೀಸ್ ಅಧಿಕಾರಿಯು ತನ್ನ ಭೂಗತ ಜಗತ್ತಿನ ಸಂಪರ್ಕ ಮತ್ತು ಶಾಮೀಲುದಾರಿಕೆಯ ಕಾರಣದಿಂದ ಈಗ ರಾಜ್ಯಾದ್ಯಂತ ಸುದ್ದಿಯಲ್ಲಿದ್ದಾರೆ. ಆದರೆ ಆತನನ್ನು ಬಲ್ಲ ಮಂಗಳೂರಿನ ಜನಕ್ಕೆ ಇದ್ಯಾವ ಹೊಸ ಸುದ್ದಿ ಎನಿಸಿ ಎಂದು ಮೂಗು ಮುರಿಯುತ್ತಿದ್ದಾರೆ. ಏಕೆಂದರೆ ರವಿ ಪೂಜಾರಿಯಂತಹ ಭೂಗತ ಡಾನ್‍ಗಳೊಂದಿಗಿನ ವೆಂಕಟೇಶ್ ಪ್ರಸನ್ನರ ಸಂಬಂಧವು ಮಂಗಳೂರಿನಲ್ಲಿದ್ದಾಗಲೇ ಗಟ್ಟಿಗೊಂಡಿದ್ದು. ಪೊಲೀಸ್ ಇಲಾಖೆಯೊಳಗೂ ಇದು ಜಗಜ್ಜಾಹೀರಾದ ವಿಚಾರವೇ.

ಶೃಂಗೇರಿ ತಾಲೂಕಿನ ಬ್ರಾಹ್ಮಣ ಕುಟುಂಬವೊಂದರ ವೆಂಕಟೇಶ್ ಪ್ರಸನ್ನರ ಸಂಬಂಧ ಭೂಗತ ಡಾನ್‍ಗಳೊಂದಿಗೆ ಮಾತ್ರವಿಲ್ಲ; ಅಷ್ಟೇ ಗಾಢ ಸಂಬಂಧವಿರುವುದು ಸಂಘಪರಿವಾರದ ಜೊತೆಗೂ ಆಗಿದೆ. ಒಂದು ಇನ್ನೊಂದನ್ನು ಪೊರೆಯುತ್ತಾ ಇದೆಯೆಂಬುದು ಇನ್ನೊಂದು ವಾಸ್ತವ. ಈ ಮೂರೂ ಅಂಶಗಳು (ವೆಂಕಟೇಶ್ ಪ್ರಸನ್ನ, ಸಂಘಪರಿವಾರ ಮತ್ತು ರವಿಪೂಜಾರಿಯಂತಹ ಭೂಗತ ಲೋಕದ ಜನ) ಒಂದಕ್ಕೊಂದು ಬೆಸೆದುಕೊಂಡಿವೆಯೆಂದು ಮಂಗಳೂರಿನಲ್ಲಿ ಒಮ್ಮೆ ದೊಡ್ಡ ಸುದ್ದಿಯಾಗಿದ್ದು ನೌಷಾದ್ ಖಾಸಿಂಯವರ ಕೊಲೆಯ ಸಂದರ್ಭದಲ್ಲಿ.

ವಿಪರ್ಯಾಸವೆಂದರೆ ಅದೇ ನೌಷಾದ್ ಖಾಸಿಂಯವರ ಕೊಲೆಯ ಆರೋಪಿ ದಿನೇಶ್ ಮತ್ತಿತರರನ್ನು ಇದೇ ವೆಂಕಟೇಶ್ ಪ್ರಸನ್ನ ಬೆಂಗಳೂರಿನಿಂದ ಎತ್ತಾಕಿಕೊಂಡು ಬಂದು ವಿಚಾರಣೆಗೆ ಗುರಿಯಾಗಿಸಿದರು ಎಂಬುದು ಆತನನ್ನು ತಕ್ಷಣದ ಆರೋಪಿ ಸ್ಥಾನದಿಂದ ವಿಮುಕ್ತನನ್ನಾಗಿಸಿತ್ತು. ಆದರೆ ಒಳಗಿನ ಸಂಗತಿ ಬೇರೆಯೇ ಆಗಿತ್ತು.

ನೌಷಾದ್ ಖಾಸಿಂಜಿ ಮಂಗಳೂರಿನ ಜನಪ್ರಿಯ ವಕೀಲರು. ಅದರಲ್ಲೂ ಬಡವರ ಪಾಲಿಗೆ ಆಪತ್ಬಾಂಧವ. ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ವಿವಿಧ ಕೇಸುಗಳಲ್ಲಿ ಬಂಧಿಸಿ ಭಯೋತ್ಪಾದಕ ಪಟ್ಟ ಕಟ್ಟುವುದು ಹೊಸದೇನಲ್ಲ. ಅಂತಹವರ ಪರವಾಗಿ ನ್ಯಾಯ ಕೊಡಿಸಲು ನೌಷಾದ್ ಎಂದೂ ಹಿಂಜರಿಯುತ್ತಿರಲಿಲ್ಲ. ಆ ಕಾರಣದಿಂದ ಮುಸ್ಲಿಂ ವಿರೋಧಿ ಮನಸ್ಥಿತಿಯ ಪೊಲೀಸರಿಗೂ ಅವರಿಗೂ ಶತ್ರುತ್ವವೂ ಬೆಳೆದಿತ್ತು. ಉಡುಪಿ ಎಂಎಲ್‍ಎ ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯರ ನಿಗೂಢ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಸಿಲುಕಿಸಲೆತ್ನಿಸಿದ್ದ ಅತುಲ್‍ರಾವ್ ಪರವೂ ನೌಷಾದ್ ವಾದಿಸಿದ್ದರು.

ಈ ಮಧ್ಯೆ ಮಂಗಳೂರಿನ ಭೂಗತ ಲೋಕದಲ್ಲಿ ಹಿಂದೂ ಮುಸ್ಲಿಂ ಗುಂಪುಗಳು ಬೇರೆ ತಲೆಯೆತ್ತಿದ್ದವು. ಟಿಪಿಕಲ್ ಮಂಗಳೂರು ಸಂಸ್ಕೃತಿಯ ಭಾಗವಾಗಿ. ಇದೇ ಮಂಗಳೂರು ಮೂಲದ ಡಾನ್‍ಗಳು ಬೆಂಗಳೂರು, ಮುಂಬೈಗಳಲ್ಲೆಲ್ಲಾ ಡಾನ್‍ಗಿರಿ ನಡೆಸಿ ದುಬೈ ಮತ್ತಿತರ ಅರಬ್ ದೇಶಗಳಲ್ಲಿ ತಲೆಮರೆಸಿಕೊಳ್ಳುವುದೂ ಹೊಸತಾಗಿರಲಿಲ್ಲ. ಅಂಥದ್ದೆಲ್ಲಾ ನಡೆಸಿ ನಂತರ ‘ಹಿಂದೂ ರಕ್ಷಕ’ರ ಅವತಾರವೆತ್ತಿ ಮತ್ತೆ ಇಲ್ಲಿ ‘ಮುಖ್ಯವಾಹಿನಿ’ ಸೇರಿಕೊಳ್ಳುವುದೂ ಹೊಸದಲ್ಲ.

ಇದೀಗ ಬಂಧಿತವಾಗಿರುವ ರವಿ ಪೂಜಾರಿಯದ್ದೂ ಅದೇ ಜಾಡು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೇಳಿಕೇಳಿ ರವಿ ಪೂಜಾರಿ ನೌಷಾದ್ ಖಾಸಿಂಜಿಯ ಮರ್ಡರ್ (ಏಪ್ರಿಲ್ 9, 2009) ಸಂದರ್ಭದಲ್ಲೇ ಕಮ್ಯುನಲ್ ಮಾಫಿಯಾದ ಭಾಗವಾಗಿದ್ದುದು ಸಾಬೀತಾಗಿತ್ತು. ಹಾಗಾಗಿಯೂ ವೆಂಕಟೇಶ್ ಪ್ರಸನ್ನರ ಹಸ್ತವೂ ಆ ಮರ್ಡರ್‍ನಲ್ಲಿತ್ತು ಎಂಬುದು ಆ ಸಂದರ್ಭದಲ್ಲಿ ಪ್ರತಿಭಟಿಸಿದವರ ಆಕ್ರೋಶದಲ್ಲಿ ಎದ್ದು ಕಾಣುತ್ತಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರು ಎಸ್‍ಪಿ ಆಗಿದ್ದ (ಆಗಿನ್ನೂ ಕಮೀಷನರೇಟ್ ಬಂದಿರಲಿಲ್ಲ) ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಐಜಿ ಗೋಪಾಲ್ ಹೊಸೂರ್ ಅವರ ಮೇಲೆ ವಿಪರೀತ ಒತ್ತಡವಿತ್ತು. ಸ್ಫೋಟವಾಗಲು ಕಾದು ಕುಳಿತಂತಿದ್ದ ಮಂಗಳೂರು, ಕೋಮು ಬಣ್ಣ ಪಡೆದುಕೊಳ್ಳುತ್ತಿದ್ದ ಭೂಗತ ಲೋಕ, ಸರ್ಕಾರ ನಡೆಸುತ್ತಿದ್ದದ್ದು ಬಿಜೆಪಿ – ಹೀಗಿರುವಾಗ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಿರಲಿಲ್ಲ. ಆದರೆ, ನೌಷಾದ್ ಖಾಸಿಂ ಕೊಲೆಗಾರರನ್ನು ಕೊಲೆಯಾದ 15 ದಿನಗಳಲ್ಲಿ ಬಂಧಿಸಲಾಯಿತು. ಬಂಧಿತರಾದ ದಿನೇಶ್ ಶೆಟ್ಟಿ, ರಿತೇಶ್ ಮತ್ತಿತರರೆಲ್ಲರೂ ರವಿ ಪೂಜಾರಿಯ ಸಹಚರರು ಎಂಬುದು ಖಚಿತವಾಗಿತ್ತು.

ಕೊಲೆಯ ವಿರುದ್ಧ ಸಿಡಿದೆದ್ದಿದ್ದ ಪ್ರತಿಭಟನಾಕಾರರು ಸುಮ್ಮನಾದರೂ ನೌಷಾದ್‍ರ ಸೀನಿಯರ್ ಪುರುಷೋತ್ತಮ್ ಪೂಜಾರಿಯವರು ಸುಮ್ಮನಾಗಲಿಲ್ಲ. ಈ ಕೊಲೆಯಲ್ಲಿ ವೆಂಕಟೇಶ್ ಪ್ರಸನ್ನ ಮತ್ತು ಇನ್ನಿಬ್ಬರು ಇನ್ಸ್‍ಪೆಕ್ಟರ್‍ಗಳ ಪಾತ್ರವಿದೆಯೆಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ ಸಿಬಿಐ ತನಿಖೆ ನಡೆಯಬೇಕೆಂದು ಹೈಕೋರ್ಟ್‍ನವರೆಗೆ ಹೋಗಿದ್ದರು. ಅಷ್ಟರಲ್ಲಾಗಲೇ (2011) ತನಿಖೆ ಸಾಕಷ್ಟು ಮುಂದುವರೆದಿದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧದ ಕೇಸನ್ನು ಹೈಕೋರ್ಟು ಕೈಬಿಟ್ಟಿತ್ತು. ಆದರೆ, 2015ರ ನವೆಂಬರ್‍ನಲ್ಲಿ ಇತರ ಆರೋಪಿಗಳಿಗೆ ಶಿಕ್ಷೆಯೂ ಆಯಿತು. ಅವರೇ ಮರ್ಡರರ್ಸ್ ಎಂದು ಕೋರ್ಟು ಎತ್ತಿ ಹಿಡಿದಿತ್ತು.

ಸದರಿ ಕೇಸಿನಲ್ಲಿ ಮಂಗಳೂರು ಪೊಲೀಸರು ತೋರಿದ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನೌಷಾದ್ ಅವರು ರಷೀದ್ ಮಲಬಾರಿ ಎಂಬ ಛೋಟಾ ಶಕೀಲ್‍ನ ಸಹವರ್ತಿಯ ವಕೀಲರಾಗಿದ್ದುದರಿಂದ ಅವರ ಮರ್ಡರ್ ನಡೆದಿತ್ತು. ಇದೇ ನೌಷಾದ್ ಒಬ್ಬ ಪ್ರಸಿದ್ಧ ಮಾನವಹಕ್ಕು ವಕೀಲರಾಗಿಯೂ ಹೆಸರು ಮಾಡಿದ್ದರು. ಸಹಜವಾಗಿ ಪೊಲೀಸರು ಇಂಥವರ ವಿರುದ್ಧ ಇರುತ್ತಾರೆ. ಆದರೆ, ಮಂಗಳೂರಿನ ಅಧಿಕಾರಿಗಳ ತಂಡ ಬೆನ್ನುಬಿದ್ದು ಕೊಲೆಗಾರರನ್ನು ಹಿಡಿದರು. ದಿನೇಶ್ ಮತ್ತಿತರರೇ ಕೊಲೆಗಾರರು ಎಂಬುದು ಕಾಲ್ ರೆಕಾಡ್ರ್ಸ್ ಮತ್ತು ಲೊಕೇಶನ್ ವಿವರಗಳಿಂದ ಶೇ.99ರಷ್ಟು ಖಚಿತವಾದ ಮೇಲೆ ಬೆಂಗಳೂರಿಗೆ ಹೋಗಿ ಹಿಡಿದು ತಂದಿದ್ದಷ್ಟೇ ವೆಂಕಟೇಶ್ ಪ್ರಸನ್ನ. ಹಾಗೆ ನೋಡಿದರೆ ಭೂಗತ ಲೋಕದ ಜೊತೆಗೆ ನಂಟು ಹೊಂದಿರುವ ಇಂತಹ ಅಧಿಕಾರಿಗಳು ಬಹಳ ಚುರುಕಾಗಿಯೂ ಇರುತ್ತಾರೆ. ತಮ್ಮದೇ ಸಂಪರ್ಕ ಬಳಸಿ ಕೆಲವು ಕೇಸುಗಳನ್ನು ಸುಲಭದಲ್ಲಿ ಬಗೆಹರಿಸುತ್ತಾರೆ. ಇನ್ನೆಷ್ಟೋ ಕೇಸುಗಳಲ್ಲಿ ಬರೀ ಡೀಲ್‍ಗಳು ಆಗುತ್ತವೆ.

ಇಂತಹ ವೆಂಕಟೇಶ್ ಪ್ರಸನ್ನ ಇದೀಗ ಬೆಂಗಳೂರಿನಲ್ಲಿ ಎಸಿಪಿ ಮತ್ತು ಭೂಗತ ಪಾತಕಿ ರವಿ ಪೂಜಾರಿಯ ಮಾಹಿತಿದಾರ ಎಂಬ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಸ್ವತಃ ಪೊಲೀಸ್ ಕಮೀಷನರ್ ಭಾಸ್ಕರರಾವ್ ಈ ಕುರಿತು ಡಿಜಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ಇಲಾಖಾ ವಿಚಾರಣೆ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ವೆಂಕಟೇಶ್ ಪ್ರಸನ್ನ ರವಿ ಪೂಜಾರಿಗೆ ತಿಳಿಸುತ್ತಿದ್ದರು ಎಂಬುದು ಹೊಸ ಆರೋಪ. 2016ರಲ್ಲಿ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ ಕುರಿತು ಆಂಬಿಡೆಂಟ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

ಇದೇ ಕಾರಣಕ್ಕೆ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಅವರು ಮತ್ತೆ ಸಿಸಿಬಿಗೇ ಬಂದಿದ್ದರು. ಈಗ ಮತ್ತೊಮ್ಮೆ ಅದೇ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. ಅಂದರೆ ರವಿ ಪೂಜಾರಿಯಂತಹ, ಕರ್ನಾಟಕವೊಂದರಲ್ಲೇ 97 ಪ್ರಕರಣದಲ್ಲಿ ಆರೋಪಿಯಾಗಿರುವ ಆರೋಪಿಯ ಜೊತೆಗೆ ಸಖ್ಯ ಇದೆ ಎನ್ನುವ ಅಧಿಕಾರಿಗೆ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದರೆ ಸಾಕೇ ಎನ್ನುವುದನ್ನು ಇಲಾಖೆಯೇ ಉತ್ತರಿಸಬೇಕಿದೆ.

ದುರಂತವೆಂದರೆ ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ‘ವಿಶೇಷ ಸ್ಥಾನ’ಗಳನ್ನು ಪಡೆದಿರುತ್ತಾರೆ. ಅವರ ‘ಕನೆಕ್ಷನ್’ಗಳು ಹಿರಿಯ ಅಧಿಕಾರಿಗಳಿಗೂ ಬೇಕಿರುತ್ತವೆ. ಎಲ್ಲವನ್ನೂ ಅಧಿಕೃತ ಮಾರ್ಗಗಳಿಂದಲೇ ಮಾಡಲಾಗದಾಗ ಅವರು ಇಂಥವರನ್ನೂ ಬಳಸುತ್ತಾರೆ. ನೋಡುನೋಡುತ್ತಲೇ ಇವರುಗಳು ಸೂಪರ್‍ಕಾಪ್‍ಗಳೆಂಬ ಬಿರುದುಗಳನ್ನೂ ಪಡೆದುಕೊಂಡಿರುತ್ತಾರೆ. ಪೊಲೀಸ್ ಇಲಾಖೆ, ಕಳ್ಳದಂಧೆಗಳು, ಕೊಲೆಗಡುಕ ಮಾಫಿಯಾಗಳು ಇವೆಲ್ಲವೂ ಎಂದೆಂದೂ ಇರುವಂಥವೇ ಮತ್ತು ಅವುಗಳ ಬಗ್ಗೆ ಕ್ರೈಮ್ ಸುದ್ದಿ ಮಾಡುವವರು ಬರೆಯುತ್ತಾ ಅವನ್ನು ರೋಚಕಗೊಳಿಸುತ್ತಾ ಹೋಗುವುದೂ ಇಂದಿನ ನಾರ್ಮೆಲ್ಸಿ ಎಂದಾಗಿಬಿಟ್ಟಿದೆ. ಇವುಗಳ ಹಿಂದೆ ಕರಾಳಲೋಕದ ಆಟಗಳು ಸಾಕಷ್ಟಿರುತ್ತದೆ; ಯಾರ್ಯಾರದ್ದೋ ಬದುಕುಗಳು ಮುರುಟಿ ಹೋಗುತ್ತವೆ ಎಂಬುದು ‘ಸಭ್ಯಲೋಕ’ವಾದ ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮಗಳಿಗೂ ಬೇಡವಾಗಿಬಿಟ್ಟರೆ ಅಲ್ಲಿಗೆ ಎಲ್ಲವೂ ಆಟ ಮಾತ್ರವೇ ಆಗಿಬಿಡುತ್ತದೆ. ಎನ್‍ಕೌಂಟರ್ ಸ್ಪೆಷಲಿಸ್ಟುಗಳು ಕೆಲವೊಮ್ಮೆ ದಂಧೆಗಳನ್ನೂ ನಡೆಸುತ್ತಿರುತ್ತಾರೆ. ಅವರನ್ನು ತೆಗಳುವ ಮತ್ತು ಹೊಗಳುವ ಎರಡೂ ಬಗೆಯ ಪತ್ರಕರ್ತರೂ ಇರುತ್ತಾರೆ. ಈ ದುರಂತವನ್ನು ಬಿಚ್ಚಿಡಲು ಹೋಗುವವರು ನೂರು ಸಾರಿ ಯೋಚಿಸುವ ವಾತಾವರಣವಿದೆ.

ಇವೆಲ್ಲಕ್ಕೂ ಮಿಗಿಲಾದ ಅಪಾಯವಿರುವುದು ಸದರಿ ಪೊಲೀಸ್ ಅಧಿಕಾರಿಗಳು ಕಮ್ಯುನಲ್ ಮಾಫಿಯಾದ ಭಾಗವಾಗುವುದು. ಸರ್ಕಾರವೂ ಅದಕ್ಕೆ ಪೂರಕವಾಗಿಬಿಟ್ಟರೆ ಕಥೆ ಮುಗಿದಂತೆಯೇ. ವೆಂಕಟೇಶ್ ಪ್ರಸನ್ನರ ಲಿಂಕುಗಳು ಈ ರೀತಿ ಹಲವು ಎಳೆಗಳನ್ನು ತೋರುತ್ತಿವೆ. ಒಂದೇ ಪತ್ರಿಕೆಯ ಬಾಕ್ಸ್ ಐಟಮ್ಮಿನಲ್ಲಿ ಅವರ ಪರವಾದ ಸುದ್ದಿಯೂ, ಮುಖ್ಯ ಭಾಗದಲ್ಲಿ ಅವರ ಕರಾಳ ಮುಖವನ್ನು ತೋರುವ ಸುದ್ದಿ ಬರಲು ಈ ಸಿಕ್ಕುಗಳೂ ಕಾರಣವಾಗಿದೆ. ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಇಂಥವು ಬೆಳೆಯಲು ಬಿಡದಿದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...