ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಹೆಬ್ ಅಖ್ತರ್ ಜಗತ್ತನ್ನು ಅಪಾಯಕ್ಕೆ ಒಡ್ಡಿರುವ ಕೊರೊನ ವೈರಸ್ ರೋಗವನ್ನು ಎದುರಿಸಲು ಧರ್ಮ ಮತ್ತು ಜನಾಂಗದ ಅಡೆತಡೆಗಳನ್ನು ಮೀರಿ ನಿಲ್ಲಲು ಜನರನ್ನು ವಿನಂತಿಸಿದ್ದಾರೆ.
“ಕೊರೊನ ವೈರಸ್ ಜಾಗತಿಕ ಬಿಕ್ಕಟ್ಟು, ನಾವು ಜಾಗತಿಕ ಶಕ್ತಿಯಾಗಿ ಯೋಚಿಸಬೇಕು, ಧರ್ಮಕ್ಕಿಂತ ಮೇಲೇರಬೇಕು. ವೈರಸ್ ಹರಡದಂತೆ ಲಾಕ್ಡೌನ್ ನಡೆಯುತ್ತಿದೆ. ನೀವು ಸ್ಥಳಗಳಲ್ಲಿ ಸಂವಹನ ಮತ್ತು ಸಭೆ ನಡೆಸುತ್ತಿದ್ದರೆ, ಅದು ಸಾಧ್ಯವಿಲ್ಲ” ಎಂದು ಶೋಹಿಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
“ನೀವು ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ, ದಯವಿಟ್ಟು ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಯೋಚಿಸಿ. ಮಳಿಗೆಗಳು ಖಾಲಿಯಾಗಿವೆ, 3 ತಿಂಗಳ ನಂತರ ನೀವು ಬದುಕುವಿರಿ ಎಂಬ ಭರವಸೆ ಏನು? ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಯೋಚಿಸಿ, ಅವರು ತಮ್ಮ ಕುಟುಂಬವನ್ನು ಹೇಗೆ ಪೋಷಿಸುತ್ತಾರೆ? ಜನರ ಬಗ್ಗೆ ಯೋಚಿಸಿ, ಮನುಷ್ಯನಾಗಲು ಇದು ಸಮಯ ಹಿಂದೂ, ಮುಸ್ಲಿಂ ಅಲ್ಲ. ಜನರು ಪರಸ್ಪರ ಸಹಾಯ ಮಾಡಲು ಹಣವನ್ನು ಸಂಗ್ರಹಿಸಬೇಕು, ಶೇಖರಣೆ ಮಾಡುವುದನ್ನು ನಿಲ್ಲಿಸಿ” ಎಂದು ಅಖ್ತರ್ ಹೇಳಿದ್ದಾರೆ.
“ಶ್ರೀಮಂತರು ಬದುಕುಳಿಯುತ್ತಾರೆ, ಬಡವರು ಹೇಗೆ ಬದುಕುಳಿಯುತ್ತಾರೆ? ನಂಬಿಕೆ ಇರಲಿ. ನಾವು ಪ್ರಾಣಿಗಳಂತೆ ಬದುಕುತ್ತಿದ್ದೇವೆ, ಮನುಷ್ಯರಂತೆ ಬದುಕೋಣ. ಮತ್ತೊಬ್ಬರಿಗೆ ಸಹಾಯಕವಾಗಲು ಪ್ರಯತ್ನಿಸಿ, ದಯವಿಟ್ಟು ವಸ್ತುಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿ. ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳುವ ಸಮಯ ಇದು. ವಿಭಜಿಸಲು ಸಮಯವಿಲ್ಲ, ನಾವು ಮನುಷ್ಯರಾಗಿ ಬದುಕಬೇಕು, ”ಎಂದು ಅಖ್ತರ್ ತಳಿಸಿದ್ದಾರೆ.
ಕೊರೊನ ವೈರಸ್ ರೋಗ ಜಗತ್ತಿನ ಮೇಲೆ ಹಿಡಿತ ಸಾಧಿಸುತ್ತಿರುವುದರಿಂದ 2020 ರ ಒಲಿಂಪಿಕ್ಸ್ ಅನ್ನು ಮುಂದೂಡುವುದು ಒಲಿಂಪಿಕ್ಸ್ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಭಾನುವಾರ ಹೇಳಿದೆ.
“ಕ್ರೀಡಾಕೂಟವನ್ನು ಒಳಗೊಂಡಂತೆ ಎಲ್ಲಕ್ಕಿಂತ ಹೆಚ್ಚು ಮಾನವನ ಜೀವವೇ ಆದ್ಯತೆ ಪಡೆಯುತ್ತದೆ” ಎಂದು ಬ್ಯಾಚ್ ಕ್ರೀಡಾಪಟುಗಳಿಗೆ ಬಹಿರಂಗ ಪತ್ರದಲ್ಲಿ ಅಖ್ತರ್ ಬರೆದಿದ್ದಾರೆ. ” ಮೊದಲೇ ಸೂಚಿಸಿದಂತೆ, ವಿಭಿನ್ನ ಸನ್ನಿವೇಶಗಳಲ್ಲಿ ಯೋಚಿಸುತ್ತಿದ್ದೇವೆ ಮತ್ತು ಅವುಗಳನ್ನು ದಿನದಿಂದ ದಿನಕ್ಕೆ ಹೊಂದಿಕೊಳ್ಳುತ್ತಿದ್ದೇವೆ. ಟೋಕಿಯೋ 2020 ರ ಒಲಿಂಪಿಕ್ ಕ್ರೀಡಾಕೂಟದ ದಿನಾಂಕದ ಬಗ್ಗೆ ಅಂತಿಮ ನಿರ್ಧಾರವು ಇನ್ನೂ ಅಕಾಲಿಕವಾಗಿರುತ್ತದೆ” ಎಂದು ಹೇಳಿದ್ದಾರೆ.


