Homeಪುಸ್ತಕ ವಿಮರ್ಶೆತುಂಟ, ಹೈಪರ್ ಆಕ್ಟೀವ್‌ ಹುಡುಗಿಯನ್ನು ಮುದ್ದಾಗಿ ಬೆಳೆಸಿ ಮಾದರಿಯಾದ ತಾಯಿ

ತುಂಟ, ಹೈಪರ್ ಆಕ್ಟೀವ್‌ ಹುಡುಗಿಯನ್ನು ಮುದ್ದಾಗಿ ಬೆಳೆಸಿ ಮಾದರಿಯಾದ ತಾಯಿ

- Advertisement -
- Advertisement -

ಇದು ಬಲು ತೀಟೆ ಅಥವಾ ಹೈಪರ್ ಆ್ಯಕ್ಟೀವಾಗಿದ್ದ ಹುಡುಗಿಯೊಬ್ಬಳು ಕಲಿಯುತ್ತಿದ್ದ ಶಾಲೆಯಿಂದ ಹೊರಹಾಕಲ್ಪಟ್ಟು ನಂತರ ಸಹಜ ಕಲಿಕೆಯ ಶಾಲೆಗೆ ಸೇರಿ ಯಶಸ್ವೀ ಮಹಿಳೆಯಾದ ಕತೆಯಾದರೂ, ಇದು ತೊಮೊಯೆ ಎಂಬ ಶಾಲೆಯು ಮಕ್ಕಳೊಡನೆ ಜೀವ ತಳೆದಿದ್ದ ಕತೆ. ಸೊಸಾಕು ಕೊಬಾಯಾಶಿ ಎಂಬ ಶಿಕ್ಷಣ ತಜ್ಞ ಸಹಜ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆದ ಅಮರಕತೆ.

ಹೌದು, ಒಂದು ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ, ಅದು ವ್ಯಕ್ತಿಗತವಾಗಿಯಾದರೂ ಅಥವಾ ಸಾಮಾಜಿಕವಾಗಿಯಾದರೂ, ಕುಟುಂಬ, ಶಿಕ್ಷಕರು ಮತ್ತು ಕಲಿಕೆಯ ಕೇಂದ್ರ; ಎಲ್ಲವೂ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇವರಲ್ಲಿ ಯಾರೂ ಮಕ್ಕಳ ಬಗ್ಗೆ ಅಲಕ್ಷ್ಯ ಮಾಡಬಾರದು ಎಂದು ತೊತ್ತೊ-ಚಾನ್ ಧ್ವನಿಸುತ್ತದೆ.

ತಾಯಿ

ತನ್ನ ಪುಟ್ಟ ಮಗಳು ತೊತ್ತೊ-ಚಾನ್ ಶಾಲೆಯಲ್ಲಿ ಡೆಸ್ಕನ್ನು ಪದೇಪದೇ ತೆಗೆದು ಮುಚ್ಚುತ್ತಾಗಲಾಟೆ ಮಾಡುವುದನ್ನು ಉಪಾಧ್ಯಾಯಿನಿ ದೂರಿನ ಪಟ್ಟಿಯಲ್ಲಿಟ್ಟರೂ ತಾಯಿ ಅದರ ಹಿಂದಿನ ಕಾರಣ, ಕುತೂಹಲ ಮತ್ತು ಅದರ ಪರಿಣಾಮವನ್ನು ಯೋಚಿಸುತ್ತಾಳೆ. ತಮ್ಮ ಮನೆಯಲ್ಲಿದ್ದ ಮೇಜಿನಲ್ಲಿ ಎಳೆಯುವ ಡ್ರಾಯರ್ ಇದ್ದು, ಶಾಲೆಯಲ್ಲಿ ಡೆಸ್ಕಿನ ಡಬ್ಬಿಯ ಮುಚ್ಚಳದಂತೆ ತೆಗೆದುಹಾಕುವುದಕ್ಕೆ ಅವಳಿಗೆ ಸಂತೋಷ ಎಂದು ತಿಳಿಯುತ್ತಾಳೆ. ಅದರ ಬಗ್ಗೆ ಉಪಾಧ್ಯಾಯರಿಗೂ ಹೇಳುವುದಿಲ್ಲ. ತನ್ನ ಮಗುವಿಗೂ ಹೇಳುವುದಿಲ್ಲ. ತೊತ್ತೋ ಗುಬ್ಬಚ್ಚಿಯ ಬಳಿ ಮಾತಾಡುವುದು, ಕಿಟಕಿಯ ಬಳಿ ನಿಂತುಕೊಂಡು ಸ್ಟ್ರೀಟ್ ಬ್ಯಾಂಡ್‍ರವರನ್ನು ಕರೆದು ಸಂಗೀತವಾದ್ಯಗಳನ್ನು ನುಡಿಸುವಂತೆ ಮಾಡುವುದೇ ಮೊದಲಾದ ಎಲ್ಲಾ ಆರೋಪಗಳ ಪಟ್ಟಿಯು “ನಿಮ್ಮ ಮಗಳನ್ನು ಶಾಲೆಯಿಂದ ಹೊರ ಹಾಕಲಾಗಿದೆ” ಎಂದು ಉಪಾಧ್ಯಾಯಿನಿ ತಾಯಿಗೆ ಹೇಳುವಂತಾಯಿತು. ಶಾಲೆಯಿಂದ ಹೊರಹಾಕುವುದನ್ನು ಸ್ವೀಕರಿಸಿದ ತಾಯಿ, ಅವಳ ಮಗಳ ಮೇಲಿನ ಆರೋಪಗಳ ಪಟ್ಟಿಯನ್ನು ಸ್ವೀಕರಿಸುವುದಿಲ್ಲ. ಬದಲಿಗೆ ನನ್ನ ಮಗಳು ಇವರಿಗರ್ಥವಾಗಲಿಲ್ಲ ಎಂದೇ ಬೇರೆ ಶಾಲೆಗೆ ಹೊರಳುತ್ತಾಳೆ. ಆದರೆ ಮಗಳಿಗೆ ನೀನು ಶಾಲೆಯಿಂದ ಹೊರದೂಡಲ್ಪಟ್ಟವಳೆಂದು ಹೇಳುವುದೇ ಇಲ್ಲ. ಹೇಳುತ್ತಾಳೆ, ತೊತ್ತೋಗೆ ಇಪ್ಪತ್ತನೇ ವರ್ಷದ ಹುಟ್ಟುಹಬ್ಬದಲ್ಲಿ. ಸಣ್ಣ ಮಗುವಿನ ಮೃದು ಮನಸ್ಸಿಗೆ ನೀನು ತಿರಸ್ಕೃತೆ ಎಂಬ ಭಾವಉಂಟಾಗದಿರುವಂತೆ ನೋಡಿಕೊಂಡತಾಯಿ ಅವರು.

ತೊಮೊಯೆ

ತೊಮೊಯೆ ಶಾಲೆಯ ಹೆಸರು. ನಿಸರ್ಗದ ಒಡಲಲ್ಲಿ ಆ ಶಾಲೆ ಮಕ್ಕಳಿಗೆ ಮಡಿಲನ್ನೊದಗಿಸಿತ್ತು. ಇನ್ನು ತರಗತಿಗಳೋ ರೈಲಿನ ಡಬ್ಬಿಗಳು. ಮಕ್ಕಳ ಆಯ್ಕೆಯ ವಿಷಯಗಳು ಅವರ ಕಲಿಕೆಗೆ. ಅವರವರ ಕಲಿಕೆ ಅವರಿಗೆ ಬಿಟ್ಟದ್ದು.ಉಪಾಧ್ಯಾಯರ ಸಹಾಯ ಬೇಕಾದಾಗ ಅವರೊದಗುತ್ತಾರೆ. ಮಧ್ಯಾಹ್ನ ಎಲ್ಲರೂ ಕಲೆತು ಊಟ ಮಾಡಿದ ಮೇಲೆ ತರಗತಿಗಳೆಂದು ಕರೆಸಿಕೊಳ್ಳುವ ರೈಲಿನ ಬೋಗಿಗಳಿಗೆ ಹೋಗುವಷ್ಟಿಲ್ಲ. ಹೊರಗೆ ನಿಸರ್ಗದಲ್ಲಿ ಮಿಕ್ಕೆಲ್ಲಾ ಸಹಜ ಕಲಿಕೆ. ನಿರ್ಬಂಧಿಸುವರಿಲ್ಲ, ತಾಕೀತು ಮಾಡುವವರಿಲ್ಲ, ಕಲಿಸುವಿಕೆ, ಕಲಿಯುವಿಕೆ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಎಲ್ಲವೂ ಸಹಜ.

ತೊತ್ತೊ ತನ್ನ ಮುನ್ನುಡಿಯಲ್ಲಿ ಹೇಳುವ ಮಾತು ನಿಜ. “ಈಗ ತೊಮೊಯೆದಂತಹ ಶಾಲೆಗಳಿದ್ದಿದ್ದರೆ ಇಂದು ಕಂಡುಬರುತ್ತಿರುವ ಕ್ರೌರ್ಯ ಎಷ್ಟೋ ಕಡಿಮೆಯಾಗುತ್ತಿತ್ತು.”

ಕೊಬಾಯಾಶಿ

ಸೊಸಾಕು ಕೊಬಾಯಾಶಿಯೇ ತೊತ್ತೊ-ಚಾನ್ ಪುಸ್ತಕದ ನಾಯಕ. ತೊಮೊಯೆ ಶಾಲೆಯ ಅಡಿಪಾಯ. ಅವರ ಶಿಕ್ಷಣ ನೀತಿಯೇ ಮಕ್ಕಳಿಗೆ ಉಸಿರಾಡಲು ತಂಗಾಳಿಯನ್ನು ನೀಡುತ್ತಿದ್ದದ್ದು. ಇಡೀ ಪುಸ್ತಕ ಹೇಳುವುದು ಕೊಬಾಯಾಶಿಯವರ ಸಹಜ ಕಲಿಕೆಯ ಪದ್ಧತಿ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿಸಾಧಿಸಿದ ಯಶಸ್ಸನ್ನು. ಎಲ್ಲಾ ಮಕ್ಕಳೂ ಸ್ವಾಭಾವಿಕವಾಗಿ ಉತ್ತಮರೇ. ಪರಿಸರ ಮತ್ತುದೊಡ್ಡವರ ಬೇಡದೇ ಇರುವ ಪ್ರಭಾವದಿಂದ ಹಾಳಾಗುತ್ತದೆ ಎಂಬುದು ಅವರ ತಿಳಿವಳಿಕೆ. ಮಕ್ಕಳು ತಮ್ಮ ಸಹಜ ಸ್ವಭಾವದಂತೆ ಕಲಿತುಕೊಂಡು ಹೋಗಲು, ಪ್ರಕೃತಿಯಿಂದ ತಿಳಿವಳಿಕೆ ಪಡೆಯಲು ಸಹಕರಿಸುವುದನ್ನು ತಮ್ಮ ಹೊಣೆಯಾಗಿಸಿಕೊಂಡಿದ್ದರು.

ಅವರ ಶಾಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಎಲ್ಲರೂ ಗ್ರೂಪ್ ಪೋಟೋ ತೆಗೆಸಿಕೊಳ್ಳುವಾಗ ಕೊಬಾಯಾಶಿ ಅಲ್ಲಿಕಾಣುವ ಇತರ ಮಕ್ಕಳನ್ನೆಲ್ಲಾ ಕರೆದು ಪೋಟೋಗೆ ನಿಲ್ಲಿಸಿಕೊಳ್ಳುತ್ತಿದ್ದರು. ಔಪಚಾರಿಕವಾದ ಪದವೀಧರರ ಚಿತ್ರಗಳಿಗಿಂತ ಮಕ್ಕಳ ಜೀವಂತ ಚಿತ್ರಗಳನ್ನು ನೋಡುವ ಪ್ರೀತಿ ಅವರದು.

ಮೊದಲ ದಿನ ತೊತ್ತೊ ಶಾಲೆಗೆ ಸೇರಲು ಬಂದಾಗ ಕೊಬಾಯಾಶಿ ಮಗುವಿಗೆ ಪ್ರಶ್ನೆಗಳನ್ನು ಕೇಳದೇ ಅವಳೇ ಅವಳಿಷ್ಟದ್ದನ್ನೆಲ್ಲಾ ಹೇಳಲು ಬಿಡುತ್ತಾರೆ. ಇದೇ ಅವರಿಗೆ ಮಗುವಿನ ಪ್ರೀತಿ ಪಡೆಯಲು ಸಾಧ್ಯವಾಗುವುದು. ಅವಳು ಹೇಳಿದ್ದನ್ನೆಲ್ಲಾ ಕೇಳಿ, “ನೀನು ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ”ಎಂದಾಗ ಅವಳು ಅನುಭವಿಸುವ ವಾತ್ಸಲ್ಯ ಅನುಪಮವಾದದ್ದು.

ಅವರು ಪದೇಪದೇ ಹೇಳುತ್ತಿರುತ್ತಾರೆ, “ನೀನು ನಿಜವಾಗಿ ಒಳ್ಳೆಯ ಹುಡುಗಿ”ಅಂತ. ಇದನ್ನು ಕೇಳಿ ಕೇಳಿಯೇ ತೊತ್ತೋ ಆತ್ಮವಿಶ್ವಾಸವನ್ನು ಮತ್ತು ತನ್ನ ಬಗ್ಗೆ ಧನಾತ್ಮಕ ಧೋರಣೆಯನ್ನು ಹೊಂದಲು ಸಾಧ್ಯವಾಗಿದ್ದು. ಇಲ್ಲವಾಗಿದ್ದರೆ ಕೆಟ್ಟ ಹುಡುಗಿ ಎಂಬ ಕೀಳರಿಮೆಯಲ್ಲಿ ತನ್ನ ವ್ಯಕ್ತಿತ್ವವನ್ನು ತಾನೇ ನಾಶ ಮಾಡಿಕೊಳ್ಳುತ್ತಿದ್ದಳೇನೋ ಎಂದು ತಾನೇ ಹೇಳಿಕೊಳ್ಳುತ್ತಾರೆ. ಮುಂದೆ ತೊಮೊಯೆ ಯುದ್ಧದಲ್ಲಿ ನಾಶವಾದಾಗ ಸಂಕಟವಾಗುತ್ತದೆ.

ಇಡೀ ಪುಸ್ತಕವು ನವಿರಾದ ಹಾಸ್ಯ ಮತ್ತು ಗಂಭೀರದಲ್ಲಿ ವಿಚಾರಗಳನ್ನು ತೆರೆದಿಡುತ್ತದೆ. ನಗಿಸುತ್ತದೆ, ಚಿಂತಿಸುವಂತೆ ಮಾಡುತ್ತದೆ. ಮಕ್ಕಳ ವಿಕಾಸಕ್ಕೆ ಪೂರಕವಾದ ಕಲಿಕೆಯ ಕ್ರಮವನ್ನು ಅರಿವಿಗೆಟಕಿಸುತ್ತದೆ.

ಮಕ್ಕಳನ್ನು ಪ್ರೀತಿಸುವವರು ಈ ಪುಸ್ತಕದ ಓದನ್ನು ತಪ್ಪಿಸಿಕೊಂಡರೆ ಒಂದು ಕೊರತೆಯೆಂದೇ ನನ್ನ ಭಾವನೆ. ಇದನ್ನು ಕನ್ನಡಕ್ಕೆ ವಿ ಗಾಯತ್ರಿಯವರು ತಂದಿದ್ದು, ನ್ಯಾಷನಲ್ ಬುಕ್‍ಟ್ರಸ್ಟ್ ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...