Homeಡೇಟಾ ಖೋಲಿಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು.

- Advertisement -
- Advertisement -

ಕೈಲೆ ಆಗಲಾರದಾಗ ಕಥಿ ಹೇಳಿದರೂ ಅನ್ನೋ ಹಂಗ ನಮ್ಮ ಜಾವಡೇಕರ ಅಣ್ಣಾರು ಠೀವಿ ಮ್ಯಾಲೆ ರಾಮಾಯಣ- ಮಹಾಭಾರತ, ಶಕ್ತಿಮಾನು- ವ್ಯೋಮಕೇಶ ಬಕ್ಷಿ ತೋರಸಾಕ ಹತ್ಯಾರು. ಯಾರೂ ಎಲ್ಯೂ ಹೊರಗ ಹೋಗಬ್ಯಾಡ್ರಿ, ಸುಮ್ಮನೆ ಒಂದ ಕಡೆ ಕುತಗೊಂಡು ನೋಡರಿ ಅಂತ ಹೇಳ್ಯಾರು. ಆ ರಾಮಾಯಣದಾಗ ಒಂದು ಕಥಿ ಬರತದ. ಲಕ್ಷ್ಮಣನ ಮ್ಯಾಲೆ ರಾವಣನ ಮಗಾ ಮೇಘನಾಥ ಶಿವನ ಪ್ರಸಾದವಾದ ಪಾಶುಪತ ಅಸ್ತ್ರವನ್ನು ಬಿಡತಾನ. ಅಲ್ಲಿ ತನಕಾ ಎಲ್ಲಾ ಅಸ್ತ್ರಗಳನ್ನ ಎದುರಿಸಿದ ಲಕ್ಷ್ಮಣ ಪಾಶುಪತಕ್ಕ ಮಾತ್ರ ವಿರೋಧ ಮಾಡೋದಿಲ್ಲ. ಅದಕ್ಕ ಶಿರಸಾವಹಿಸಿ ನಮಸ್ಕಾರ ಮಾಡತಾನ. ಅದು ಅವನ ಸುತ್ತ ಹಾಸಿ ಹೋಗಿ ಬಿಡತದ.

ಅವನಿಗೆ ಏನೂ ತೊಂದರೆ ಆಗಂಗಿಲ್ಲ.

ಈ ದುರಿತ ಕಾಲದಾಗ ತ್ರೇತಾಯುಗದ ನೆನಪು ಯಾಕ ಆತಪಾ ಅಂದರ ಈ ಕೊರೊನಾಸುರನ ವಿರುದ್ಧ ನಾವು ಇಟ್ಟಿರೋ ಎಲ್ಲಾ ಹೆಜ್ಜೆಗಳಿಗಿಂತ ಮೀರಿದ್ದು ಒಂದು ಹೆಜ್ಜೆ ಐತಿ. ಅದು ʻಹಿಂಡು ನಿರೋಧʼ. ಈಗಿನ ಕೆಲವು ವಿಜ್ಞಾನಿಗಳು ʻಹೆರ್ಡ ಇಮ್ಯುನಿಟಿʼ ಅಥವಾ ʻಹಿಂಡು ನಿರೋಧʼವೇ ಕೊರೋನಾ ಹೋರಾಟದ ಸುಲಭ ಉಪಾಯ ಅಂತ ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ. ಏನು ಇದು ಹಿಂಡು ನಿರೋಧ?

ಈ ಥಿಯರಿ ಪ್ರಕಾರ ಒಂದು ದೇಶದ 10 ರಿಂದ 40 ಶೇಕಡಾ ಜನರಿಗೆ ಒಂದು ರೋಗದ ಸೋಂಕು ತಗಲಿದರ, ಅವರೂ ಸೇರಿದಂಗ ಇಡೀ ದೇಶ ಗುಣ ಆಗತದ. ಈ ಪ್ರಕ್ರಿಯಾದಾಗ ಕೆಲವರು ಸಾಯಬಹುದು. ಅವರನ್ನ ಕೆರೆಗೆ ಹಾರಕ್ಕ ನಾವು ಬಲಿ ಕೊಟ್ಟ ಸಣ್ಣ ಸೊಸೆ ಅಂತ ತಿಳಕೊಂಡು ಸುಮ್ಮನೇ ಇರಬೇಕು. ಅದನ್ನ ಬಿಟ್ಟು ಈ ಪೀಡೆಗೆ ಬ್ಯಾರೆ ಔಷಧ ಇಲ್ಲ, ಅಂತ ಅವರ ವಾದ.

ಹಂಗ ನೋಡಿದರ ಯಾವುದೇ ವೈರಸ್ಸಿಗೆ ಔಷಧ ಅನ್ನೋದು ಇಲ್ಲ. ವರ್ಷದಾಗ ಮೂರು ಸಲಾ ಬರೋ ನೆಗಡಿಗೂ ಇಲ್ಲ, ಹಣೆಬರಾ ಕೆಟ್ಟಾಗ ಬರೋ ಕರೋನಾಕ್ಕೂ ಇಲ್ಲ.

ಅದರ ವಿರುದ್ಧ ಔಷಧ ಮಾಡಲಿಕ್ಕೆ ಯಾಕ ಬರಂಗಿಲ್ಲ ಅಂದರ ಅದು ತನ್ನ ರೂಪ ತಾನು ಹಗಲೆಲ್ಲಾ ಬದಲಿ ಮಾಡಿಕೋತದ. ಟ್ರಾನ್ಸ್ ಫಾರ್ಮರ್ ಪಿಕ್ಚರನ್ಯಾಗ ಕಾರು ಹೋಗಿ ರೋಬೋಟ್ ಆದಂಗ. ಒಂದು ರೂಪಕ್ಕ ಔಷಧ ಕಂಡು ಹಿಡದರ ಅದು ಬ್ಯಾರೆ ರೂಪ ಧರಿಸಿ ಔಷಧವನ್ನ ನಿರುಪಯೋಗಿ ಮಾಡಿ ಬಿಡತದ.

ಆದರ ವೈರಸ್ಸಿಗೆ ಒಂದು ವರ್ಷದ ನಿರೋಧಕ ಶಕ್ತಿ ಕೊಡೋ ಹಂತಾ ಲಸಿಕೆ ತಯಾರಿಸಬಹುದು. ಲಸಿಕೆ ಅಂದರ ಅದೇ ವೈರಸ್ಸಿನ ನಿರುಪದ್ರವಿ ರೂಪ. ಎಲ್ಲಾರಿಗೂ ಸಣ್ಣ ಪ್ರಮಾಣದಾಗ ಅದೇ ವೈರಸ್ಸಿನ ನಿರುಪದ್ರವಿ ರೂಪವನ್ನು ಕೊಟ್ಟರ ಅವರ ದೇಹ ಅದರ ವಿರುದ್ಧ ನಿರೋಧಕ ಶಕ್ತಿ ಬೆಳಿಸಿಗೋತದ. ಢಿಪ್ತೀರಿಯಾದಂತ ಲಸಿಕೆಯಿಂದ ರೋಗಕ್ಕ ಜೀವನ ಪೂರ್ತಿ ನಿರೋಧಕ ಶಕ್ತಿ ಬರತದ. ವೈರಸ್ಸಿನ ಲಸಿಕೆಗಳಿಂದ ಒಂದು ವರ್ಷ- ಎರಡು ವರ್ಷದ ವರೆಗೆ ನಿರೋಧಕ ಶಕ್ತಿ ಬರತದ.

ಹಿಂಡು ನಿರೋಧದಾಗ ಏನು ಆಗತದ ಅಂದರ ಒಬ್ಬ ಮನುಷ್ಯನ ದೇಹದಿಂದ ಹೊರಗ ಬಂದ ವೈರಸ್ಸು ಇನ್ನೊಬ್ಬನ ದೇಹದಾಗ ಹೋಗತದ. ಹಂಗ ಆಗೋವಾಗ ಮೊದಲಿನವನ ದೇಹದ ಜೊತೆ ಜಗಳ ಆಡಿ, ತನ್ನ ಶಕ್ತಿ ಕಳಕೊಂಡು ದುರ್ಬಲ ಆಗಿರತದ. ಹಂಗ ಒಬ್ಬರಿಂದ ಒಬ್ಬರಿಗೆ ಹೋಗಿ ಹೋಗಿ ಕಡೀಕೆ ಅದು ನಮ್ಮ ದೇಹದಾಗ ಇದ್ದರೂ ಸಹ ನಮಗ ಏನೂ ಮಾಡಲಾರದ ಹಂಗ ಆಗಿ ಬಿಡತದ. ಆಗ ಅದಕ್ಕ ಯಾವ ಲಸಿಕೆನೂ ಬ್ಯಾಡ. ಇಡೀ ಸಮಾಜ ಅದರ ವಿರುದ್ಧ ಸ್ವಾಭಾವಿಕ ನಿರೋಧಕ ಶಕ್ತಿ ಬೆಳಿಸಕೊತದ.

ಇಂಥಾ ಪ್ರಯೋಗ ಈಗಾಗಲೇ ನಡದು ಬಿಟ್ಟಾವು . ಇಂಗ್ಲಂಡದಾಗ ರೋಗ ಹರಡಿದರ ಚಿಂತಿಲ್ಲ. ಹಬ್ಬಿದವರಿಗೆಲ್ಲ ಔಷಧಿ ಸಿಗಬೇಕು, ಸಿಗೋಹಂಗ ನಾವು ಮಾಡತೇವಿ ಅಂತ ಅವರು ಅಂತಾರು. ಕೇವಲ ಮುಂಜಾಗೃತೆ ಕ್ರಮ ಕೈಕೊಳ್ಳಲಿಕ್ಕೆ ಹತ್ಯಾರು.

ನೆದರಲ್ಯಾಂಡ್ಸದವರು ʻಬಾರದು ಬಪ್ಪುದು, ಬಪ್ಪುದು ತಪ್ಪುದುʼ ಅಂತ ಸುಮ್ಮನಿದ್ದು ಬಿಟ್ಟಾರ. ಎಷ್ಟು ಜನಾ ರೋಗಿಗಳಾದರೂ ಸರಿ ನಮ್ಮಲ್ಲೆ ಆಸ್ಪತ್ರೆ ಅದಾವು. ವೆಂಟಿಲೇಟರ ಅದಾವು. ನಾವು ಯಾರನ್ನೂ ಸಾಯಲಿಕ್ಕೆ ಬಿಡಂಗಿಲ್ಲ ಅಂತ ಹೇಳಿ ಸುಮ್ಮನೇ ಇದ್ದು ಬಿಟ್ಟಾರ.

ಆದರ ಭಾರತ ಹಿಂಗ ಮಾಡಲಿಕ್ಕೆ ಸಾಧ್ಯ ಅದ ಏನು? ನಮ್ಮ ಆರೋಗ್ಯ ವ್ಯವಸ್ಥೆ ಎಲ್ಲಾರನ್ನೂ ಕಾಳಜಿ ಮಾಡುವಂಥಾದ್ದು ಅದ ಏನು? ಒಂದು ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಈ ದೇಶದಾಗ ಬರೇ 40,000 ವೆಂಟಿಲೇಟರ ಅವ ಅಂತ. ಮಹಾಮಹಿಮರ ಮೇಕಿನ್ ಇಂಡಿಯಾ ಆಗಲಿ, ಆಮದು – ರಫ್ತು ನೀತಿ ಆಗಲಿ ಅದನ್ನು ಹೆಚ್ಚು ಮಾಡಲಿಕ್ಕೆ ಆಗಿಲ್ಲ. ದೇಶದ ನಲವತ್ತು ಶೇಕಡಾ ಜನ ಅಂದರ ಸುಮಾರು 50 ಕೋಟಿ ಜನರಿಗೆ ಈ ರೋಗ ಬಂತಂತಂದರ ಏನು ಆಗಬಹುದು. ಈಗಿನ ಲೆಕ್ಕದಾಗ 100 ಜನರಿಗೆ ರೋಗ ಬಂದರ ಐದು ಜನ ಸಾಯತಾರ. ಆ ಲೆಕ್ಕದಾಗ ಸುಮಾರು 2.5 ಕೋಟಿ ಜನ ಸಾಯಬೇಕು. ಅದರಾಗ ಬರೇ 40,000 ಮಂದಿನ್ನ ನಾವು ಉಳಿಸಿಕೊಳ್ಳಬಹುದು. ಅದರಾಗ 25,000 ಶಾಸಕರು, ಅವರ ಕುಟುಂಬದವರು, 800 ಸಂಸತ್ತು ಸದಸ್ಯರು ಹಾಗೂ ಕುಟುಂಬದವರು, 6,000 ಐಎಎಸ್ಸು ಅಧಿಕಾರಿಗಳು ಹಾಗೂ ಅವರ ಸ್ಟೆನೋ- ಡ್ರೈವರುಗಳು ಇತ್ಯಾದಿಗಳನ್ನು ಬಿಟ್ಟರ ಉಳಿದವರಿಗೆ ಚಾನ್ಸು ಸಿಗಲಿಕ್ಕೆ ಇಲ್ಲ.

ಹಿಂಡು ನಿರೋಧದ ಹೆಸರಿನ್ಯಾಗ ನಾವು 2 ಕೋಟಿ, 40 ಲಕ್ಷ, 96 ಸಾವಿರ ಜನರನ್ನು ಕಳದು ಕೊಳ್ಳಲಿಕ್ಕೆ ತಯಾರಿದ್ದೇವೇನು? ಈ ಪ್ರಶ್ನೆ ಸರಳ, ಉತ್ತರ ಕಠಿಣ.

ರಾಮಾಯಣದಿಂದ ಶುರು ಮಾಡಿದ ಕಥಿ ಮಹಾಭಾರತದಿಂದ ಮುಗಸೋಣು. ಭಾರತದ ಅತಿ ಜನಪ್ರಿಯ ಅಡ್ಡಕತಿಯೊಳಗ ಒಂದು ಬಕಾಸುರನ ಕಥಿ. ಇದರಿಂದ ಕನ್ನಡ ಹಾಗೂ ಇತರ ಭಾಷಾದಾಗ ಗಾದಿ ಮಾತು ಶುರು ಆದವು. ಬಕಾಸುರನ ಗತೆ ತಿನ್ನೊದು, ಬಕಾಸುರನ ಹೊಟ್ಟಿಗೆ ಅರ್ಧಾ ರುಪಾಯಿ ಮಜ್ಜಿಗಿ, ಬಕಾಸುರನ ಹಸಿವು, ಇತ್ಯಾದಿ.

ಇದರಾಗ ಊರ ಹೊರಗಿನ ರಾಕ್ಷಸ ಬಂದು ಎಲ್ಲಾರನೂ ಒಂದ ಕಾಲಕ್ಕೆ ನಾಶ ಮಾಡಬಾರದು ಅಂತ ಹೇಳಿ ಅಲ್ಲಿನ ಜನ ಅವನ ಸಂಗ್ತೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದೇನಪಾ ಅಂದರ ದಿನಾ ಒಬ್ಬ ಮನುಷಾನ್ನ, ಒಂದು ಬಂಡಿ ಅನ್ನದ ಜೊತೆ ಆ ರಾಕ್ಷಸನಿಗೆ ತಿನ್ನಲಿಕ್ಕೆ ಕಳಸೋದು. ಅವಾ ಒಂದು ವರ್ಷದಾಗ 365 ಜನರನ್ನ ತಿನಕೊಂಡು ಸುಮ್ಮನೇ ಇದ್ದ. ಆ ಊರಿನ ಕಡೆ ವಾಕಿಂಗ್ ಬರಲಿಲ್ಲ. ಕಡೀಕೆ ಒಂದು ದಿವಸ ಕುಂತಿ ಹಾಗೂ ಅಕಿ ಮಕ್ಕಳು ಆ ಊರಿಗೆ ಅಜ್ಞಾತವಾಸಕ್ಕ ಬಂದರು. ಆ ಕಥೀ ಕೇಳಿದರು. ತಾಯಿಗೆ ತಕ್ಕ ಮಗ ಭೀಮ ಗಿನೀ ಪಿಗ್ ಆಗಲಿಕ್ಕೆ ಒಪ್ಪಿದ. ಬಕಾಸುರನ ಕಥಿ ಮುಗಸಿದ.

ಮೂಲ ಭಾರತದಾಗ ಇದು ಬರೇ ಒಂದು ಪುಟದಷ್ಟು ಸಣ್ಣ ಕಥಿ. ಆದರ ಅದರಾಗ ಭಾಳ ದೊಡ್ಡ ದೊಡ್ಡ ಪಾಠ ಅದಾವು. ಬಕಾಸುರನಿಗೆ ಎಲ್ಲಾರನ್ನೂ ಒಂದೇ ಕಾಲಕ್ಕ ನಾಶ ಮಾಡಲಿಕ್ಕೆ ಬರತಿತ್ತೋ ಇಲ್ಲೋ, ಆದರ ಜನಾ ಹಂಗ ತಿಳಕೊಂಡಿದ್ದರು. ಇನ್ನು ತಮ್ಮ ಊರಾಗ ಇರೋ ಕೆಲವರನ್ನು ಕೊಂದು ಉಳಿದವರು ಬದಕೋದು ಎನು ತಪ್ಪಲ್ಲ ಅಂತ ಅವರು ನಂಬಿದ್ದರು. ಅದರ ಬಗ್ಗೆ ಅವರಿಗೆ ನೈತಿಕ ಹಿಂಜರಿಕೆ ಇರಲಿಲ್ಲ. ಮೊನ್ನೆ ನಮ್ಮ ಬಿಳೇಮನಿ ಟ್ರಂಪಣ್ಣನವರ್ ಅವರು ಇಂಥಾದ ಮಾತು ಆಡ್ಯಾರ. ಕೆಲವು ಜನ ಸಾಯಬಹುದು, ಆದರ ವಿಶ್ವದ ಆರ್ಥಿಕ ಸ್ಥಿತಿ ಅಮೇರಿಕದ ಮ್ಯಾಲೆ ನಿಂತದ. ನಮ್ಮ ವ್ಯವಸ್ಥೆ ಕುಸಿದು ಬಿದ್ದರ ಇಡೀ ಜಗತ್ತು ಕುಸಿತದ, ಇತ್ಯಾದಿ, ಇತ್ಯಾದಿ.

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು. ಇವತ್ತಿನ ನಮ್ಮ ದೇಶದ ಹಾಗೂ ಇತರ ದೇಶದ ನಾಯಕರು ಭಾಳ ಜನ ಹಿಂದ ಇದ್ದಾರ. ಅವರಿಗೆ ಸುಲಭವಾದ ಪರಿಹಾರ ಕಾಣತಾವ ಹೊರತು ಕಷ್ಟದ್ದವು ಕಾಣಂಗಿಲ್ಲ.

ಇವುಕುರ ಜೊತೆಗೆ ಚಾಣಕ್ಯ ಅಂತ ಇನ್ನೊಂದು ಸೀರಯಲ್ಲು ಬರತಿತ್ತು. ಅದರಾಗ ಒಂದು ಮಂತ್ರ ಇತ್ತು. ಸರ್ವೇ ಭವಂತು ಸುಖಿನಹ – ಸರ್ವೇ ಸಂತು ನಿರಾಮಯ ಅಂತ. ಅಂದರ ಸರ್ವೇ ಇಲಾಖೆ ಅವರು ಸುಖವಾಗಿರಲಿ, ನಿರೋಗಿಯಾಗಿರಲಿ ಅಂತ ಅಲ್ಲ. ಎಲ್ಲರೂ ಸುಖವಾಗಿರಲಿ, ಎಲ್ಲರೂ ನಿರೋಗಿಯಾಗಿರಲಿ ಅಂತ.

ನಮ್ಮ ಅಜ್ಜಾ- ಅಜ್ಜಿ ಕಡೆ ಕೇಳಿದ ಕಥಿ ನಾವು ಮರತಿರಬಹುದು. ಕನಿಷ್ಟ ಈಗ ಡೀಡೀ ಡಿಕ್ಕಿನ ಮಹಾಭಾರತ-ರಾಮಾಯಣ ನೋಡಿ ಚಾಣಕ್ಯನೂ ನೆನಪಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೆಹಲಿ ಮರಕಜ ಬಗ್ಗೆ ಬರಿರಿ. ಆವಾಗ ನಿಮ್ಮ ಪತ್ರಿಕೆ ನಿಸ್ಸಂದೇಹವಾಗಿ ಜಾತಾತಿತ ಪತ್ರಿಕೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...