Homeಡೇಟಾ ಖೋಲಿಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು.

- Advertisement -
- Advertisement -

ಕೈಲೆ ಆಗಲಾರದಾಗ ಕಥಿ ಹೇಳಿದರೂ ಅನ್ನೋ ಹಂಗ ನಮ್ಮ ಜಾವಡೇಕರ ಅಣ್ಣಾರು ಠೀವಿ ಮ್ಯಾಲೆ ರಾಮಾಯಣ- ಮಹಾಭಾರತ, ಶಕ್ತಿಮಾನು- ವ್ಯೋಮಕೇಶ ಬಕ್ಷಿ ತೋರಸಾಕ ಹತ್ಯಾರು. ಯಾರೂ ಎಲ್ಯೂ ಹೊರಗ ಹೋಗಬ್ಯಾಡ್ರಿ, ಸುಮ್ಮನೆ ಒಂದ ಕಡೆ ಕುತಗೊಂಡು ನೋಡರಿ ಅಂತ ಹೇಳ್ಯಾರು. ಆ ರಾಮಾಯಣದಾಗ ಒಂದು ಕಥಿ ಬರತದ. ಲಕ್ಷ್ಮಣನ ಮ್ಯಾಲೆ ರಾವಣನ ಮಗಾ ಮೇಘನಾಥ ಶಿವನ ಪ್ರಸಾದವಾದ ಪಾಶುಪತ ಅಸ್ತ್ರವನ್ನು ಬಿಡತಾನ. ಅಲ್ಲಿ ತನಕಾ ಎಲ್ಲಾ ಅಸ್ತ್ರಗಳನ್ನ ಎದುರಿಸಿದ ಲಕ್ಷ್ಮಣ ಪಾಶುಪತಕ್ಕ ಮಾತ್ರ ವಿರೋಧ ಮಾಡೋದಿಲ್ಲ. ಅದಕ್ಕ ಶಿರಸಾವಹಿಸಿ ನಮಸ್ಕಾರ ಮಾಡತಾನ. ಅದು ಅವನ ಸುತ್ತ ಹಾಸಿ ಹೋಗಿ ಬಿಡತದ.

ಅವನಿಗೆ ಏನೂ ತೊಂದರೆ ಆಗಂಗಿಲ್ಲ.

ಈ ದುರಿತ ಕಾಲದಾಗ ತ್ರೇತಾಯುಗದ ನೆನಪು ಯಾಕ ಆತಪಾ ಅಂದರ ಈ ಕೊರೊನಾಸುರನ ವಿರುದ್ಧ ನಾವು ಇಟ್ಟಿರೋ ಎಲ್ಲಾ ಹೆಜ್ಜೆಗಳಿಗಿಂತ ಮೀರಿದ್ದು ಒಂದು ಹೆಜ್ಜೆ ಐತಿ. ಅದು ʻಹಿಂಡು ನಿರೋಧʼ. ಈಗಿನ ಕೆಲವು ವಿಜ್ಞಾನಿಗಳು ʻಹೆರ್ಡ ಇಮ್ಯುನಿಟಿʼ ಅಥವಾ ʻಹಿಂಡು ನಿರೋಧʼವೇ ಕೊರೋನಾ ಹೋರಾಟದ ಸುಲಭ ಉಪಾಯ ಅಂತ ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ. ಏನು ಇದು ಹಿಂಡು ನಿರೋಧ?

ಈ ಥಿಯರಿ ಪ್ರಕಾರ ಒಂದು ದೇಶದ 10 ರಿಂದ 40 ಶೇಕಡಾ ಜನರಿಗೆ ಒಂದು ರೋಗದ ಸೋಂಕು ತಗಲಿದರ, ಅವರೂ ಸೇರಿದಂಗ ಇಡೀ ದೇಶ ಗುಣ ಆಗತದ. ಈ ಪ್ರಕ್ರಿಯಾದಾಗ ಕೆಲವರು ಸಾಯಬಹುದು. ಅವರನ್ನ ಕೆರೆಗೆ ಹಾರಕ್ಕ ನಾವು ಬಲಿ ಕೊಟ್ಟ ಸಣ್ಣ ಸೊಸೆ ಅಂತ ತಿಳಕೊಂಡು ಸುಮ್ಮನೇ ಇರಬೇಕು. ಅದನ್ನ ಬಿಟ್ಟು ಈ ಪೀಡೆಗೆ ಬ್ಯಾರೆ ಔಷಧ ಇಲ್ಲ, ಅಂತ ಅವರ ವಾದ.

ಹಂಗ ನೋಡಿದರ ಯಾವುದೇ ವೈರಸ್ಸಿಗೆ ಔಷಧ ಅನ್ನೋದು ಇಲ್ಲ. ವರ್ಷದಾಗ ಮೂರು ಸಲಾ ಬರೋ ನೆಗಡಿಗೂ ಇಲ್ಲ, ಹಣೆಬರಾ ಕೆಟ್ಟಾಗ ಬರೋ ಕರೋನಾಕ್ಕೂ ಇಲ್ಲ.

ಅದರ ವಿರುದ್ಧ ಔಷಧ ಮಾಡಲಿಕ್ಕೆ ಯಾಕ ಬರಂಗಿಲ್ಲ ಅಂದರ ಅದು ತನ್ನ ರೂಪ ತಾನು ಹಗಲೆಲ್ಲಾ ಬದಲಿ ಮಾಡಿಕೋತದ. ಟ್ರಾನ್ಸ್ ಫಾರ್ಮರ್ ಪಿಕ್ಚರನ್ಯಾಗ ಕಾರು ಹೋಗಿ ರೋಬೋಟ್ ಆದಂಗ. ಒಂದು ರೂಪಕ್ಕ ಔಷಧ ಕಂಡು ಹಿಡದರ ಅದು ಬ್ಯಾರೆ ರೂಪ ಧರಿಸಿ ಔಷಧವನ್ನ ನಿರುಪಯೋಗಿ ಮಾಡಿ ಬಿಡತದ.

ಆದರ ವೈರಸ್ಸಿಗೆ ಒಂದು ವರ್ಷದ ನಿರೋಧಕ ಶಕ್ತಿ ಕೊಡೋ ಹಂತಾ ಲಸಿಕೆ ತಯಾರಿಸಬಹುದು. ಲಸಿಕೆ ಅಂದರ ಅದೇ ವೈರಸ್ಸಿನ ನಿರುಪದ್ರವಿ ರೂಪ. ಎಲ್ಲಾರಿಗೂ ಸಣ್ಣ ಪ್ರಮಾಣದಾಗ ಅದೇ ವೈರಸ್ಸಿನ ನಿರುಪದ್ರವಿ ರೂಪವನ್ನು ಕೊಟ್ಟರ ಅವರ ದೇಹ ಅದರ ವಿರುದ್ಧ ನಿರೋಧಕ ಶಕ್ತಿ ಬೆಳಿಸಿಗೋತದ. ಢಿಪ್ತೀರಿಯಾದಂತ ಲಸಿಕೆಯಿಂದ ರೋಗಕ್ಕ ಜೀವನ ಪೂರ್ತಿ ನಿರೋಧಕ ಶಕ್ತಿ ಬರತದ. ವೈರಸ್ಸಿನ ಲಸಿಕೆಗಳಿಂದ ಒಂದು ವರ್ಷ- ಎರಡು ವರ್ಷದ ವರೆಗೆ ನಿರೋಧಕ ಶಕ್ತಿ ಬರತದ.

ಹಿಂಡು ನಿರೋಧದಾಗ ಏನು ಆಗತದ ಅಂದರ ಒಬ್ಬ ಮನುಷ್ಯನ ದೇಹದಿಂದ ಹೊರಗ ಬಂದ ವೈರಸ್ಸು ಇನ್ನೊಬ್ಬನ ದೇಹದಾಗ ಹೋಗತದ. ಹಂಗ ಆಗೋವಾಗ ಮೊದಲಿನವನ ದೇಹದ ಜೊತೆ ಜಗಳ ಆಡಿ, ತನ್ನ ಶಕ್ತಿ ಕಳಕೊಂಡು ದುರ್ಬಲ ಆಗಿರತದ. ಹಂಗ ಒಬ್ಬರಿಂದ ಒಬ್ಬರಿಗೆ ಹೋಗಿ ಹೋಗಿ ಕಡೀಕೆ ಅದು ನಮ್ಮ ದೇಹದಾಗ ಇದ್ದರೂ ಸಹ ನಮಗ ಏನೂ ಮಾಡಲಾರದ ಹಂಗ ಆಗಿ ಬಿಡತದ. ಆಗ ಅದಕ್ಕ ಯಾವ ಲಸಿಕೆನೂ ಬ್ಯಾಡ. ಇಡೀ ಸಮಾಜ ಅದರ ವಿರುದ್ಧ ಸ್ವಾಭಾವಿಕ ನಿರೋಧಕ ಶಕ್ತಿ ಬೆಳಿಸಕೊತದ.

ಇಂಥಾ ಪ್ರಯೋಗ ಈಗಾಗಲೇ ನಡದು ಬಿಟ್ಟಾವು . ಇಂಗ್ಲಂಡದಾಗ ರೋಗ ಹರಡಿದರ ಚಿಂತಿಲ್ಲ. ಹಬ್ಬಿದವರಿಗೆಲ್ಲ ಔಷಧಿ ಸಿಗಬೇಕು, ಸಿಗೋಹಂಗ ನಾವು ಮಾಡತೇವಿ ಅಂತ ಅವರು ಅಂತಾರು. ಕೇವಲ ಮುಂಜಾಗೃತೆ ಕ್ರಮ ಕೈಕೊಳ್ಳಲಿಕ್ಕೆ ಹತ್ಯಾರು.

ನೆದರಲ್ಯಾಂಡ್ಸದವರು ʻಬಾರದು ಬಪ್ಪುದು, ಬಪ್ಪುದು ತಪ್ಪುದುʼ ಅಂತ ಸುಮ್ಮನಿದ್ದು ಬಿಟ್ಟಾರ. ಎಷ್ಟು ಜನಾ ರೋಗಿಗಳಾದರೂ ಸರಿ ನಮ್ಮಲ್ಲೆ ಆಸ್ಪತ್ರೆ ಅದಾವು. ವೆಂಟಿಲೇಟರ ಅದಾವು. ನಾವು ಯಾರನ್ನೂ ಸಾಯಲಿಕ್ಕೆ ಬಿಡಂಗಿಲ್ಲ ಅಂತ ಹೇಳಿ ಸುಮ್ಮನೇ ಇದ್ದು ಬಿಟ್ಟಾರ.

ಆದರ ಭಾರತ ಹಿಂಗ ಮಾಡಲಿಕ್ಕೆ ಸಾಧ್ಯ ಅದ ಏನು? ನಮ್ಮ ಆರೋಗ್ಯ ವ್ಯವಸ್ಥೆ ಎಲ್ಲಾರನ್ನೂ ಕಾಳಜಿ ಮಾಡುವಂಥಾದ್ದು ಅದ ಏನು? ಒಂದು ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಈ ದೇಶದಾಗ ಬರೇ 40,000 ವೆಂಟಿಲೇಟರ ಅವ ಅಂತ. ಮಹಾಮಹಿಮರ ಮೇಕಿನ್ ಇಂಡಿಯಾ ಆಗಲಿ, ಆಮದು – ರಫ್ತು ನೀತಿ ಆಗಲಿ ಅದನ್ನು ಹೆಚ್ಚು ಮಾಡಲಿಕ್ಕೆ ಆಗಿಲ್ಲ. ದೇಶದ ನಲವತ್ತು ಶೇಕಡಾ ಜನ ಅಂದರ ಸುಮಾರು 50 ಕೋಟಿ ಜನರಿಗೆ ಈ ರೋಗ ಬಂತಂತಂದರ ಏನು ಆಗಬಹುದು. ಈಗಿನ ಲೆಕ್ಕದಾಗ 100 ಜನರಿಗೆ ರೋಗ ಬಂದರ ಐದು ಜನ ಸಾಯತಾರ. ಆ ಲೆಕ್ಕದಾಗ ಸುಮಾರು 2.5 ಕೋಟಿ ಜನ ಸಾಯಬೇಕು. ಅದರಾಗ ಬರೇ 40,000 ಮಂದಿನ್ನ ನಾವು ಉಳಿಸಿಕೊಳ್ಳಬಹುದು. ಅದರಾಗ 25,000 ಶಾಸಕರು, ಅವರ ಕುಟುಂಬದವರು, 800 ಸಂಸತ್ತು ಸದಸ್ಯರು ಹಾಗೂ ಕುಟುಂಬದವರು, 6,000 ಐಎಎಸ್ಸು ಅಧಿಕಾರಿಗಳು ಹಾಗೂ ಅವರ ಸ್ಟೆನೋ- ಡ್ರೈವರುಗಳು ಇತ್ಯಾದಿಗಳನ್ನು ಬಿಟ್ಟರ ಉಳಿದವರಿಗೆ ಚಾನ್ಸು ಸಿಗಲಿಕ್ಕೆ ಇಲ್ಲ.

ಹಿಂಡು ನಿರೋಧದ ಹೆಸರಿನ್ಯಾಗ ನಾವು 2 ಕೋಟಿ, 40 ಲಕ್ಷ, 96 ಸಾವಿರ ಜನರನ್ನು ಕಳದು ಕೊಳ್ಳಲಿಕ್ಕೆ ತಯಾರಿದ್ದೇವೇನು? ಈ ಪ್ರಶ್ನೆ ಸರಳ, ಉತ್ತರ ಕಠಿಣ.

ರಾಮಾಯಣದಿಂದ ಶುರು ಮಾಡಿದ ಕಥಿ ಮಹಾಭಾರತದಿಂದ ಮುಗಸೋಣು. ಭಾರತದ ಅತಿ ಜನಪ್ರಿಯ ಅಡ್ಡಕತಿಯೊಳಗ ಒಂದು ಬಕಾಸುರನ ಕಥಿ. ಇದರಿಂದ ಕನ್ನಡ ಹಾಗೂ ಇತರ ಭಾಷಾದಾಗ ಗಾದಿ ಮಾತು ಶುರು ಆದವು. ಬಕಾಸುರನ ಗತೆ ತಿನ್ನೊದು, ಬಕಾಸುರನ ಹೊಟ್ಟಿಗೆ ಅರ್ಧಾ ರುಪಾಯಿ ಮಜ್ಜಿಗಿ, ಬಕಾಸುರನ ಹಸಿವು, ಇತ್ಯಾದಿ.

ಇದರಾಗ ಊರ ಹೊರಗಿನ ರಾಕ್ಷಸ ಬಂದು ಎಲ್ಲಾರನೂ ಒಂದ ಕಾಲಕ್ಕೆ ನಾಶ ಮಾಡಬಾರದು ಅಂತ ಹೇಳಿ ಅಲ್ಲಿನ ಜನ ಅವನ ಸಂಗ್ತೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದೇನಪಾ ಅಂದರ ದಿನಾ ಒಬ್ಬ ಮನುಷಾನ್ನ, ಒಂದು ಬಂಡಿ ಅನ್ನದ ಜೊತೆ ಆ ರಾಕ್ಷಸನಿಗೆ ತಿನ್ನಲಿಕ್ಕೆ ಕಳಸೋದು. ಅವಾ ಒಂದು ವರ್ಷದಾಗ 365 ಜನರನ್ನ ತಿನಕೊಂಡು ಸುಮ್ಮನೇ ಇದ್ದ. ಆ ಊರಿನ ಕಡೆ ವಾಕಿಂಗ್ ಬರಲಿಲ್ಲ. ಕಡೀಕೆ ಒಂದು ದಿವಸ ಕುಂತಿ ಹಾಗೂ ಅಕಿ ಮಕ್ಕಳು ಆ ಊರಿಗೆ ಅಜ್ಞಾತವಾಸಕ್ಕ ಬಂದರು. ಆ ಕಥೀ ಕೇಳಿದರು. ತಾಯಿಗೆ ತಕ್ಕ ಮಗ ಭೀಮ ಗಿನೀ ಪಿಗ್ ಆಗಲಿಕ್ಕೆ ಒಪ್ಪಿದ. ಬಕಾಸುರನ ಕಥಿ ಮುಗಸಿದ.

ಮೂಲ ಭಾರತದಾಗ ಇದು ಬರೇ ಒಂದು ಪುಟದಷ್ಟು ಸಣ್ಣ ಕಥಿ. ಆದರ ಅದರಾಗ ಭಾಳ ದೊಡ್ಡ ದೊಡ್ಡ ಪಾಠ ಅದಾವು. ಬಕಾಸುರನಿಗೆ ಎಲ್ಲಾರನ್ನೂ ಒಂದೇ ಕಾಲಕ್ಕ ನಾಶ ಮಾಡಲಿಕ್ಕೆ ಬರತಿತ್ತೋ ಇಲ್ಲೋ, ಆದರ ಜನಾ ಹಂಗ ತಿಳಕೊಂಡಿದ್ದರು. ಇನ್ನು ತಮ್ಮ ಊರಾಗ ಇರೋ ಕೆಲವರನ್ನು ಕೊಂದು ಉಳಿದವರು ಬದಕೋದು ಎನು ತಪ್ಪಲ್ಲ ಅಂತ ಅವರು ನಂಬಿದ್ದರು. ಅದರ ಬಗ್ಗೆ ಅವರಿಗೆ ನೈತಿಕ ಹಿಂಜರಿಕೆ ಇರಲಿಲ್ಲ. ಮೊನ್ನೆ ನಮ್ಮ ಬಿಳೇಮನಿ ಟ್ರಂಪಣ್ಣನವರ್ ಅವರು ಇಂಥಾದ ಮಾತು ಆಡ್ಯಾರ. ಕೆಲವು ಜನ ಸಾಯಬಹುದು, ಆದರ ವಿಶ್ವದ ಆರ್ಥಿಕ ಸ್ಥಿತಿ ಅಮೇರಿಕದ ಮ್ಯಾಲೆ ನಿಂತದ. ನಮ್ಮ ವ್ಯವಸ್ಥೆ ಕುಸಿದು ಬಿದ್ದರ ಇಡೀ ಜಗತ್ತು ಕುಸಿತದ, ಇತ್ಯಾದಿ, ಇತ್ಯಾದಿ.

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು. ಇವತ್ತಿನ ನಮ್ಮ ದೇಶದ ಹಾಗೂ ಇತರ ದೇಶದ ನಾಯಕರು ಭಾಳ ಜನ ಹಿಂದ ಇದ್ದಾರ. ಅವರಿಗೆ ಸುಲಭವಾದ ಪರಿಹಾರ ಕಾಣತಾವ ಹೊರತು ಕಷ್ಟದ್ದವು ಕಾಣಂಗಿಲ್ಲ.

ಇವುಕುರ ಜೊತೆಗೆ ಚಾಣಕ್ಯ ಅಂತ ಇನ್ನೊಂದು ಸೀರಯಲ್ಲು ಬರತಿತ್ತು. ಅದರಾಗ ಒಂದು ಮಂತ್ರ ಇತ್ತು. ಸರ್ವೇ ಭವಂತು ಸುಖಿನಹ – ಸರ್ವೇ ಸಂತು ನಿರಾಮಯ ಅಂತ. ಅಂದರ ಸರ್ವೇ ಇಲಾಖೆ ಅವರು ಸುಖವಾಗಿರಲಿ, ನಿರೋಗಿಯಾಗಿರಲಿ ಅಂತ ಅಲ್ಲ. ಎಲ್ಲರೂ ಸುಖವಾಗಿರಲಿ, ಎಲ್ಲರೂ ನಿರೋಗಿಯಾಗಿರಲಿ ಅಂತ.

ನಮ್ಮ ಅಜ್ಜಾ- ಅಜ್ಜಿ ಕಡೆ ಕೇಳಿದ ಕಥಿ ನಾವು ಮರತಿರಬಹುದು. ಕನಿಷ್ಟ ಈಗ ಡೀಡೀ ಡಿಕ್ಕಿನ ಮಹಾಭಾರತ-ರಾಮಾಯಣ ನೋಡಿ ಚಾಣಕ್ಯನೂ ನೆನಪಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೆಹಲಿ ಮರಕಜ ಬಗ್ಗೆ ಬರಿರಿ. ಆವಾಗ ನಿಮ್ಮ ಪತ್ರಿಕೆ ನಿಸ್ಸಂದೇಹವಾಗಿ ಜಾತಾತಿತ ಪತ್ರಿಕೆ.

LEAVE A REPLY

Please enter your comment!
Please enter your name here

- Advertisment -

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...