Homeಚಳವಳಿಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಮಸ್ಕಿಯಿಂದ ರಾಜ್ಯದೆಲ್ಲೆಡೆ ಹೋರಾಟದ ಹಾಡುಗಳನ್ನು ಪಸರಿಸಿದ ಜನಕವಿ ದಾನಪ್ಪ ನಿಲೋಗಲ್

ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

- Advertisement -
- Advertisement -

ಎಲೆಮರೆ-26

  • ಅರುಣ್‌ ಜೋಳದ ಕೂಡ್ಲಿಗಿ

ಕರ್ನಾಟಕದ ಜನಪರ ಚಳವಳಿ, ಕಾರ್ಯಾಗಾರ, ಸಭೆಗಳ ಹೋರಾಟದ ಹಾಡುಗಳಲ್ಲಿ ಒಂದಾದರೂ ಮಸ್ಕಿಯ ದಾನಪ್ಪ ನಿಲೋಗಲ್ ರಚನೆ ಇದ್ದೇ ಇರುತ್ತೆ. ಹೀಗೆ ಹಾಡುವಾಗ ಕೆಲವೊಮ್ಮೆ ಈ ಹಾಡನ್ನು ದಾನಪ್ಪ ಕಟ್ಟಿದ್ದು ಎನ್ನುವುದೂ ಮರೆಯಾಗುತ್ತದೆ. ಅಂದರೆ ದಾನಪ್ಪನ ಹಾಡುಗಳು ಜನಪದ ಗೀತೆಗಳಂತೆ ನಾಡಿನಾದ್ಯಂತ ಹೆಸರಿನ ಹಂಗಿಲ್ಲದೆ ಚಲಿಸುತ್ತಿವೆ. ಹೀಗೆ ಜನರನ್ನು ತಲುಪುವುದೇ ಮುಖ್ಯ ನನ್ನ ಹೆಸರನ್ನು ಹೇಳುವ ಅಗತ್ಯವಿಲ್ಲ ಎಂದು ಸ್ವತಃ ದಾನಪ್ಪ ತನ್ನ ಹಾಡನ್ನು ಸಾರ್ವಜನಿಕ ವಲಯಕ್ಕೆ ಒಪ್ಪಿಸಿದ್ದಾರೆ. ಹೀಗೆ ಎಂಬತ್ತರ ದಶಕದಿಂದಲೂ ದಲಿತ ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ.

ದಾನಪ್ಪ ಮಸ್ಕಿಯಲ್ಲೇ ಇದ್ದರೂ ಆತನ ಹಾಡುಗಳು ದಣಿವರಿಯದೆ ಚಳವಳಿಯಲ್ಲಿ ನಿರತವಾಗಿರುತ್ತವೆ. ‘ದಾನಪ್ಪನ ಜತೆ ಹಾಡಿದವರು, ಹಾಡುಕಟ್ಟಿದವರು ಅದನ್ನೇ ಏಣಿ ಮಾಡಿಕೊಂಡು ಕಳೆದು ಹೋದರೂ, ದಾನಪ್ಪ ಮಾತ್ರ ಈಗಲೂ ಹಾಡನ್ನೇ ಬದುಕುತ್ತಿದ್ದಾರೆ. ಇದೇ ನನ್ನಂಥವರಿಗೆ ಸೋಜಿಗ’ ಎನ್ನುವ ಕೊಟಗಾನಹಳ್ಳಿ ರಾಮಯ್ಯನವರ ಮಾತುಗಳು ದಾನಪ್ಪನವರ ಬದ್ಧತೆಗೆ ಸಾಕ್ಷಿಯಾಗಿವೆ.

’ಹೈದರಾಬಾದ್ ಕರ್ನಾಟಕ ಅಂದ್ರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದದ್ದು ಅಂತಾರೆ ಅದು ಸತ್ಯ, ಅದರ ಜೊತೆಗೆ ಹಿಂದುಳಿಯೋಕೆ ಕಾರಣ ಏನು ಅಂತ ನೋಡುವಾಗ ಇಲ್ಲಿ ಫ್ಯೂಡಲ್ ಸಂಸ್ಕೃತಿ ಜೀವಂತವಾಗಿರುವ ನೆಲ. ಅಂತೆಯೇ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷದ ನಂತರ ಸ್ವಾತಂತ್ರ್ಯ ಸಿಕ್ಕ ಪ್ರದೇಶ. ಹೈದರಾಬಾದ್ ನಿಜಾಮನ ಆಡಳಿತವಿದ್ದ ಕಾರಣ ಫ್ಯೂಡಲ್ ವ್ಯವಸ್ಥೆಯೂ ಜೀವಂತವಾಗಿದ್ದು, ಪ್ರತಿಯೊಂದು ಹಳ್ಳಿಯಲ್ಲಿಯೂ ದಲಿತ ಮತ್ತು ಅಸ್ಪೃಶ್ಯರ ಜೀವನ ಗಂಭೀರವಾದ ಕಡು ಬಡತನದಲ್ಲಿತ್ತು. ಇವರಿಗೆ ಭೂಮಿ ಇಲ್ಲ, ಓದು ಇಲ್ಲ. ಹೀಗಿರುವಾಗ ಗೌಡ್ರು, ಜಮೀನ್ದಾರರ ದಬ್ಬಾಳಿಕೆಯ ಆಡಳಿತ. ಈ ಸ್ಥಿತಿಯಲ್ಲಿ ನನಗೆ ಓದಲು ಅವಕಾಶ ಸಿಕ್ಕದ್ದೇ ದೊಡ್ ವಿಷ್ಯ. ನಮ್ದು ನಿಲೋಗಲ್ ಆದ್ರೂ ಸಹ ಹತ್ತನ್ನೆರಡು ಕಿ.ಮೀ ದೂರದ ಹಟ್ಟಿ ಗೋಲ್ಡ್ ಮೈನ್ಸ್‌ನಲ್ಲಿ ನಮ್ಮಪ್ಪ ಕಾರ್ಮಿಕ ಆಗಿದ್ದ ಕಾರಣ ನನಗೆ ಓದೋಕೆ ಅವಕಾಶ ಸಿಕ್ತು. ಗೆದ್ದಲಗಟ್ಟಿ, ನಿಲೋಗಲ್‌ಗಳು ಧಣಿಗಳ ದರ್ಬಾರ್ ಇರೋ ಊರುಗಳು. ಅಕಸ್ಮಾತ್ ಕೂಲಿ ಆಗಿ ಕಳೆದು ಹೋಗೋನು ಓದಿ ಉಳಕಂಡೆ’ ಎಂದು ಬಾಲ್ಯದ ಅನುಭವಗಳನ್ನು ಹೇಳುತ್ತಾರೆ ದಾನಪ್ಪ.

’ನಮ್ಮ ಮನೆ ಎದುರು ಈರಣ್ಣನ ಕಟ್ಟೆ ಇತ್ತು. ಅಲ್ಲಿ ಭಜನಿ ಮಾಡತಿದ್ದರು. ನಾನು ಮಕ್ಕಂಡೇ ಈ ಭಜನಿ ಹಾಡುಗಳನ್ನು ಕೇಳಿಸಿಕೊಂಡು ಗುನುಗ್ತಾ ಇದ್ದೆ. ಹಿಮ್ಮೇಳವಾಗಿ ಭಜನಿಯಲ್ಲಿ ಕೂತು ಹಾಡತಿದ್ದೆ. ಕ್ರಿಶ್ಚಿಯನ್ ಮಾಸ್ ಗೀತೆಗಳ ಜತೆ ಹಾಡ್ತಿದ್ದೆ. ನಮ್ಮಪ್ಪ ಭಜನೆ ಪದಾನ ಚೊಲೋ ಹಾಡತಿದ್ದ. `ಗೂಳಿ ಬಂತು ಗೂಳಿ ಬಂತಣ್ಣಾ, ಗುರುಮಠಕೆ ತಕ್ಕ ಗೂಳಿ ಬಂತು ಗೂಳಿ ಬಂತಣ್ಣಾ..’ ತರಹದ ಜನಪದ ಭಜನೆಗಳು ನನ್ನೊಳಗೆ ಹಾಡಿನ ಲಯವನ್ನು ಕೂರಿಸ್ತಾ ಇದ್ವು. ’ನೀರ ನಿಲ್ಲದ ಬಾವಿ ತುಂಬುವುದೋ/ತುಂಬಿ ತುಳಕುವುದೋ/ಇರುವಿ ನೀರಡಿಸಿ ಬಂದು ಕುಡಿಯುವುದೋ/ಜಲ ಬತ್ತುವುದೋ/ ರೆಕ್ಕೆ ಇಲ್ಲದ ಪಕ್ಷಿ ಸುತ್ತುವುದೋ..’ ಈ ತರಹದ ತತ್ವಪದಗಳು ನನಗೆ ಹೆಚ್ಚು ಪ್ರಭಾವ ಬರ‍್ತಾ ಇದ್ವು. ಇಂತಹ ಹಿನ್ನೆಲೆಯ ಕಾರಣ ಇದೇ ಹಾಡಿಕೆ ಲಯಗಾರಿಕೆ ಚಳವಳಿಗೆ ದುಮುಕಿದ ಮೇಲೆ ಮತ್ತೆ ನನ್ನೊಳಗೆ ಹೊಸ ರೂಪ ಪಡೆದವು. ದಲಿತ ಕಲಾ ಮಂಡಳಿಯ ಹಾಡಿಕೆ, ಪದ ರಚನೆಗಳೂ ಆ ಕಾಲಕ್ಕೆ ನಮ್ಮನ್ನು ತುಂಬಾ ಪ್ರಭಾವ ಬೀರಿದ್ವು. ಪಿಚ್ಚಳ್ಳಿ ಶ್ರೀನಿವಾಸರ ಹಾಡುಗಳು ಆಗ ದೊಡ್ಡಮಟ್ಟದಲ್ಲಿ ಚಳವಳಿಯಲ್ಲಿ ಹಾಡಿಕೆಗೆ ಬಂದಿದ್ದವು. ಹೀಗಿರುವಾಗ ಹಿರೇನಗನೂರು ಹೋಟೆಲ್ ಪ್ರವೇಶ ಹೋರಾಟದ ಸಂದರ್ಭದಲ್ಲಿ ’ಅವತ್ತು ಸೋಮವಾರ, ಅಪ್ಪ ಬಸವನ ವಾರ’ ಅನ್ನೋ ಮೊದಲ ಹಾಡನ್ನ ಬರದೆ. ಎಂಬತ್ತರ ದಶಕದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ಅವರ ಕಾರ್ಯಕ್ರಮ ನೋಡಲು ಸಿಕ್ಕಿತು. ಜನಪರ ಸಾಹಿತ್ಯದ ಒಳ ತಿರುಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿತು. ’ವಂಚಿತರೇ ಈ ದೇಶದ ವಾರಸುದಾರರು’ ಎನ್ನುವ ಸ್ಪಷ್ಟ ಕಲ್ಪನೆ ಬಂದಿತು. ಜನ ಕಲಾ ಮಂಡಳಿಯ ನಂಟಿನಿಂದ ಚೌಡಕಿ ಕತೆ, ನೀಲಗಿರಿ, ಹೆಸರಾದ ತವರೂರು, ಕೊಡಗು ಹೀಗೆ ಆಯಾ ಕಾಲದ ವಿಷ್ಯಗಳನ್ನು ಹಾಡುಗಳನ್ನಾಗಿ ಬರೆಯೋದು ಹಾಡೋದು ಶುರುವಾತು.

ನನ್ನ ಪ್ರತಿಯೊಂದು ಹಾಡಿನ ಮೊದಲ ತಾಲೀಮು ನನ್ನ ಮನೆ. ನನ್ನ ಹೆಂಡ್ತಿ ಮೇರಿ (ಮರಿಯಮ್ಮ) ಮಕ್ಕಳಾದ ಸ್ನೇಹಲತಾ, ಪ್ರಶಾಂತ್, ಪ್ರಮೋದ್ ಇವರನ್ನು ಅದೆಷ್ಟೋ ರಾತ್ರಿಗಳು ನಿದ್ದೆಗೆಡಿಸಿ ಕೋರಸ್ಸಿಗೆ ಎಬ್ಸಿದ್ದು, ರಾಗ ಲಯ ತಿದ್ದಿ ತೀಡಿ ಹಾಡು ಹೊರಬರೋ ಹೊತ್ತಿಗೆ ಬೆಳಕರಿದದ್ದೂ ಇದೆ’ ಎಂದು ಹಾಡಿಕೆಯ ಜಾಡನ್ನು ದಾನಪ್ಪ ನೆನೆಯುತ್ತಾರೆ.

ಅಂಬೇಡ್ಕರ್ ಹೇಳುವ `ಓದು-ಹೋರಾಟ’ ಒಟ್ಟೊಟ್ಟಿಗೆ ಆಗಬೇಕೆಂಬ ಮಾತನ್ನು ದಾನಪ್ಪ ಅಕ್ಷರಶಃ ಪಾಲಿಸಿದ್ದರು. ಬಿ.ಕೆ ಅವರ ಮಾರ್ಗದರ್ಶನ, ದಲಿತ ಕಲಾ ಮಂಡಳಿಯ ಪಿಚ್ಚಳ್ಳಿ ಶ್ರೀನಿವಾಸ, ಮುನಿಸ್ವಾಮಿ ಮೊದಲಾದವರ ಹೋರಾಟದ ಹಾಡುಗಳ ಸ್ಪೂರ್ತಿ, ಇದೆಲ್ಲದರ ಪರಿಣಾಮ ಧಾರವಾಡ ಜಿಲ್ಲೆಯ ದ.ಸಂ.ಸದ ಚಟುವಟಿಕೆಗಳು ಹಳ್ಳಿಗಳತ್ತ ನಡೆದದ್ದು, ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಘಾಳ ಪೂಜೆ ಭೂ ಹೋರಾಟ, ಧರಣಿ ಹೋರಾಟ, ಅರೆಸ್ಟು, ಧಿಕ್ಕಾರಗಳು ಇವೆಲ್ಲ ದಾನಪ್ಪನ ನಿತ್ಯದ ಒಡನಾಡಿಗಳಾದವು. ’ಬಿ.ಕೆಯವರ ನಿರಂತರ ಒಡನಾಟ, ರಾಮದೇವ ರಾಕೆ, ಹೆಚ್.ಗೋವಿಂದಯ್ಯ, ಶಿವಲಿಂಗಪ್ಪ (ಶಿವಮೊಗ್ಗ), ಸಿ.ಎಂ.ಮುನಿಯಪ್ಪ (ಕೋಲಾರ) ಎಂ.ವೆಂಕಟಸ್ವಾಮಿ, ದೇವನೂರ ಮಹಾದೇವ, ಕವಿ ಸಿದ್ಧಲಿಂಗಯ್ಯ, ಮೊದಲಾದವರ ಭೇಟಿ ಚರ್ಚೆ ಮಾತುಕತೆ ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದವು’ ಎಂದು ದಾನಪ್ಪ ನೆನೆಯುತ್ತಾರೆ.

ಹೀಗೆ ದಾನಪ್ಪ ನಿಲೋಗಲ್ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೀಗೊಂದು ಹೋರಾಟದ ಹಾಡಿನ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಇದೀಗ ದಾನಪ್ಪನ ಮಗ ಪ್ರಶಾಂತನೂ ಈ ಪರಂಪರೆ ಮುಂದುವರಿಸಿದ್ದಾನೆ. ಗಂಗಾವತಿಯ ರಮೇಶ್ ಗಬ್ಬೂರು ಈ ಪರಂಪರೆಯನ್ನು ತಮ್ಮ ವಿದ್ಯಾರ್ಥಿಗಳ ಮೂಲಕ ಈ ಹಾಡಿಕೆಯ ಪರಂಪರೆಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.


ಇದನ್ನೂ ಓದಿ: ರೆಡ್ಡಿ ಸಹೋದರರ ವಿರುದ್ಧ ಪಟ್ಟುಬಿಡದೇ ಹೋರಾಡಿ ಗೆದ್ದ ದಿಟ್ಟ ಯುವತಿಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...