Homeಕರ್ನಾಟಕರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ಲಾಕ್‌ಡೌನ್‌ನ ಪರಿಣಾಮಗಳು ಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದಂತೆ ದೇಶದ ವಿವಿಧ ಕಡೆಗಳಿಂದ ಹಲವು ರೀತಿಯ ದನಿಗಳು ಮೇಲೇಳುತ್ತಿವೆ. ಟಿಯುಸಿಐ ಮುಖಂಡ ಆರ್.‌ಮಾನಸಯ್ಯನವರು ಬರೆದ ಅಂತಹ ಒಂದು ಬರಹ ಇಲ್ಲಿದೆ.

- Advertisement -
- Advertisement -

ಮೊಟ್ಟ ಮೊದಲನೆಯದಾಗಿ ನಾನು ದೈಹಿಕ ಅಂತರ ಕಾಯ್ದುಕೊಳ್ಳ ಬೇಕಾದ ಲಾಕ್‌ಡೌನ್‌ ಪರವಾಗಿದ್ದೇನೆ.ಆದರೆ ಪ್ರಜಾಪ್ರಭುತ್ವವನ್ನ ಹಂತ ಹಂತವಾಗಿ ಲಾಕ್ ಡೌನ್ ಮಾಡುವ, ಕೇಂದ್ರ ಸರಕಾರದ ನೀಚಾತಿನೀಚ ರಾಜಕೀಯ ದಬ್ಬಾಳಿಕೆ ವಿರುದ್ದ ಜನತೆ ಹಾಗೂ ರಾಜಕೀಯ ಪಕ್ಷಗಳು ಕೂಡಲೆ ಧ್ವನಿ ಎತ್ತಬೇಕೆಂದು ಮನವಿ ಮಾಡುತ್ತೇನೆ.

ಕೊರೊನಾ ಕಟ್ಟಿ ಹಾಕುಲು ಇದ್ದ ಆರಂಭದ ಎಲ್ಲ ಅವಕಾಶಗಳನ್ನು ಮೋದಿ ಸರಕಾರ ಬಳಸಿಕೊಳ್ಳಲಿಲ್ಲ. ಇದು ಸರಕಾರದ ಮೊದಲನೆಯ ದೇಶಘಾತುಕ ಕೆಲಸ.

ಎರಡನೆಯದಾಗಿ, ಈ ಭೇಮಾರಿಯನ್ನು ಎದುರಿಸಲು ವೈದ್ಯಕೀಯ ಹಾಗೂ ಆಡಳಿತಾತ್ಮಕ ಸಿದ್ದತೆಗಳು ಅತ್ಯಂತ ಕಳಪೆ ಹಾಗೂ ಯಾತಕ್ಕೂ ಸರಿ ಹೋಗದಂತವುಗಳು. ಇದು ಮೋದಿ ಸರಕಾರದ ಎರಡನೆಯ ದೇಶಘಾತುಕ ಕೆಲಸ.

ಮೂರನೆಯದ್ದಾಗಿ, ಜನತಾ ಕಫ್ಯು೯ ಹಾಗೂ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಣೆಗಿಂತ ಪೂವ೯ದಲ್ಲಿ ವಿವಿಧ ರಾಜ್ಯ ಸರಕಾರಗಳ ಜತೆ, ಸವ೯ಪಕ್ಷಗಳ ಜತೆ, ರೈತ ಕಾಮಿ೯ಕ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ದೀಘ೯ಕಾಲದ ಲಾಕ್‌ಡೌನ್‌ ಎದುರಿಸಲು ಜನರ ಬಳಿ ಏನೇನಿದೆ -ಏನೇನಿರಬೇಕು ಹಾಗೂ ರಾಷ್ಟ್ರೀಯ ತುರ್ತು ಸೇವೆಗಳನ್ನು ಕೊಡ ಮಾಡಲು ಸರಕಾರದ ಬಳಿ  ಯಾವ ಸಿದ್ದತೆಗಳಿರಲಿಲ್ಲ. ಇದು ಸಂಘ ಪರಿವಾರ್‌ ಸರಕಾರದ ಮೂರನೆಯ ಅತೀ ದೊಡ್ಡ ದೇಶ ಘಾತುಕ ಕೆಲಸ.

ಇದಕ್ಕಿಂತ ಮಿಗಿಲಾದ ದ್ರೋಹ ಎಂದರೆ ಇಡೀ ಪರಿಸ್ಥಿಯನ್ನು  ದುರುಪಯೋಗಪಡಿಸಿಕೊಂಡು ವಿರೋಧಮುಕ್ತ ಸವಾ೯ಧಿಕಾರವನ್ನು ಚಲಾಯಿಸಿ, ತನ್ನ ಹಿಂದೂ ರಾಷ್ಟ್ರ ರಾಜಕಾರಣವನ್ನು ದೇಶಾದ್ಯಂತ ಕೊರೊನಾಗಿಂತ ಹೈ ಸ್ಪೀಡನಲ್ಲಿ ಹರಡುತ್ತಿರುವುದು. ಕಳೆದ ಒಂದುವರೆ ತಿಂಗಳಿಂದ 99% ಚಾನಲಗಳು ಹಾಗೂ 75% ಪತ್ರಿಕೆಗಳು ಹಾಗೂ 520000ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ನಕಲಿ ಖಾತೆಗಳ ಮೂಲಕ ವಿರೋಧ ಪಕ್ಷಗಳು,ಪ್ರಜಾಪ್ರಭುತ್ವವಾದಿಗಳು, ಅಂಬೇಡ್ಕರ್ವಾದಿಗಳು, ಮುಸ್ಲೀಮರು, ಕಮ್ಯೂನಿಸ್ಟ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅತೀ ದೊಡ್ಡ ದುಷ್ಪ್ರಚಾರ ಮಾಡುತ್ತಿರುವುದು.

ಈ ಪೈಕಿ ಅತ್ಯಂತ ಹೇಸಿಗೆ ಹಾಗೂ ನಿಲ೯ಜ್ಯದ ಕೆಲಸ ಎಂದರೆ, ಚಪ್ಪಾಳೆ-ಗಂಟೆ ಬಾರಿಸಲು, ಲೈಟ್ ಆಫ್ ಮಾಡಿ ದೀಪ ಹಚ್ಚಲು ಹಾಗೂ ಬಿಡಿಗಾಸಿನ ಬೆಲೆ ಇಲ್ಲದ ಸಪ್ತ ಸೂತ್ರ ಪ್ರಕಟಿಸಲು ದೇಶದ ಪ್ರಧಾನಿಯು ಸಂಪೂಣ೯ ಸೀಮಿತವಾಗಿ ಹೋಗಿದ್ದು!

ಯಾವ ತಯಾರಿ ಹಾಗೂ ಬಿಡಿಗಾಸಿನ ಸಹಾಯ ನೀಡದೆ ಮತ್ತೆ ಲಾಕ್‌ಡೌನ್‌ ವಿಸ್ತರಣೆ ಮಾಡಿದ್ದು ಅತ್ಯಂತ ರಾಜಕೀಯ ದ್ರೋಹವಾಗಿದೆ.

ಮೋದಿ ಸರಕಾರದ ದುರಾಡಳಿತದಿಂದ ಮೊದಲೆ ಮೂಲೆಗುಂಪಾಗಿದ್ದ ದೇಶದ ಆಥಿ೯ಕತೆ, ಸಂಸದೀಯ ಪ್ರಜಾಪ್ರಭುತ್ವ ಹಾಗೂ ವಿಶಾಲ ಜನವಗ೯ಗಳ ಜೀವನವು ಇನ್ನಷ್ಟು ದರಿದ್ರ ಹಾಗೂ ದಾರುಣ ಹಂತ ತಲುಪಲು ತಾನು ಕಾರಣವಲ್ಲ ಎಂದು ಸಮಥಿ೯ಸಿಕೊಳ್ಳಲು ಎಲ್ಲ ಬಗೆಯ ತಯಾರಿ ನಡೆದಿದೆ.

ಒಟ್ಟಾರೆ, ಕೊರೊನಾ ಹೆಸರಲ್ಲಿ ಅತೀ ದೊಡ್ಡ ರಾಜಕೀಯ ದಿಗ್ಭಂದನ ನಮ್ಮ ದೇಶದಲ್ಲಿ ಬಿಗಿಗೊಳ್ಳುತ್ತಿದೆ. ದೇಶದ ನಾಲ್ಲು ಮೂಲೆಗಳು ಪೊಲೀಸ್ ರಾಜ್ಯವಾಗಿ ಹೋಗಿವೆ.ಪ್ರತಿಪಕ್ಷ -ಪ್ರತಿರೋಧ-ಪ್ರತಿಕ್ರಿಯೆ -ಪ್ರತಿಭಟನೆ-ಪ್ರಶ್ನಿಸುವಿಕೆ-ಜಾತ್ಯತೀತತೆ-ಸಮಾನತೆ-ಸ್ವಾತಂತ್ರ್ಯ -ನ್ಯಾಯಾಪೇಕ್ಷೆ ಎಲ್ಲವೂ ಲಾಕ್ ಡೌನ್ ಆಗಿವೆ!
ಭೇಮಾರಿ ಹೆಸರಲ್ಲಿ ಮನುವಾದ ಹಾಗೂ ಕಾಪೊ೯ರೇಟ್ ಸವಾ೯ಧಿಕಾರ ಹದ್ದುಬಸ್ತು ಮೀರಿ ಹರಡುತ್ತದೆ.
ಈ ದೇಶ ಹಿಂದೆದೂ ಕಂಡರಿಯದ ರೀತಿಯಲ್ಲಿ ಮೋಸಕ್ಕೊಳಗಾಗಿದೆ !
ಕೂಡಲೆ ಇದರ ವಿರುದ್ದ ಮುಂಬೈ ಗುಳೆ ಕಾಮಿ೯ಕರಂತೆ  ಮೈಸೂರು ಸಂತ್ರಸ್ತರಂತೆ ಬೀದಿಗಿಳಿಯದಿದ್ದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಂತಿಮ ಯಾತ್ರೆಗೂ ನಮಗೆ ದಿಗ್ಬಂಧನ ಬೀಳಲಿದೆ !
ಆನಂದ ತೆಲತುಂಬ್ಡೆಯ ಬಂಧನವಾಯಿತು! ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದೆ ಅವರ ಮುಂಬೈ ನಿವಾಸ ರಾಜಗ್ರುಹದ ಮೇಲೆ ನಿನ್ನೆ ನೀಲಿ ಬಾವುಟ ಇಳಿಸಿ  ಕಪ್ಪು ಬಾವುಟ ಹಾರಾಡಿತು!
ಇವೆಲ್ಲ ಭಾರತದ ಜನಪರ ರಾಜಕೀಯದ ಪ್ರಳಯದ ಸಂಕೇತಗಳು.
ಬನ್ನಿ! ದೈಹಿಕ ಅಂತರ ಕಾಯ್ದುಕೊಂಡೆ ಬೀದಿಗಿಳಿಯೋಣ! ಬಿಜೆಪಿ ಸವಾ೯ಧಿಕಾರದ ವಿರುದ್ದ ನಮಗಾಗಿ ನಾವು ಹೋರಾಡೋಣ!


ಇದನ್ನು ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...