Homeಕರ್ನಾಟಕರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ಲಾಕ್‌ಡೌನ್‌ನ ಪರಿಣಾಮಗಳು ಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದಂತೆ ದೇಶದ ವಿವಿಧ ಕಡೆಗಳಿಂದ ಹಲವು ರೀತಿಯ ದನಿಗಳು ಮೇಲೇಳುತ್ತಿವೆ. ಟಿಯುಸಿಐ ಮುಖಂಡ ಆರ್.‌ಮಾನಸಯ್ಯನವರು ಬರೆದ ಅಂತಹ ಒಂದು ಬರಹ ಇಲ್ಲಿದೆ.

- Advertisement -
- Advertisement -

ಮೊಟ್ಟ ಮೊದಲನೆಯದಾಗಿ ನಾನು ದೈಹಿಕ ಅಂತರ ಕಾಯ್ದುಕೊಳ್ಳ ಬೇಕಾದ ಲಾಕ್‌ಡೌನ್‌ ಪರವಾಗಿದ್ದೇನೆ.ಆದರೆ ಪ್ರಜಾಪ್ರಭುತ್ವವನ್ನ ಹಂತ ಹಂತವಾಗಿ ಲಾಕ್ ಡೌನ್ ಮಾಡುವ, ಕೇಂದ್ರ ಸರಕಾರದ ನೀಚಾತಿನೀಚ ರಾಜಕೀಯ ದಬ್ಬಾಳಿಕೆ ವಿರುದ್ದ ಜನತೆ ಹಾಗೂ ರಾಜಕೀಯ ಪಕ್ಷಗಳು ಕೂಡಲೆ ಧ್ವನಿ ಎತ್ತಬೇಕೆಂದು ಮನವಿ ಮಾಡುತ್ತೇನೆ.

ಕೊರೊನಾ ಕಟ್ಟಿ ಹಾಕುಲು ಇದ್ದ ಆರಂಭದ ಎಲ್ಲ ಅವಕಾಶಗಳನ್ನು ಮೋದಿ ಸರಕಾರ ಬಳಸಿಕೊಳ್ಳಲಿಲ್ಲ. ಇದು ಸರಕಾರದ ಮೊದಲನೆಯ ದೇಶಘಾತುಕ ಕೆಲಸ.

ಎರಡನೆಯದಾಗಿ, ಈ ಭೇಮಾರಿಯನ್ನು ಎದುರಿಸಲು ವೈದ್ಯಕೀಯ ಹಾಗೂ ಆಡಳಿತಾತ್ಮಕ ಸಿದ್ದತೆಗಳು ಅತ್ಯಂತ ಕಳಪೆ ಹಾಗೂ ಯಾತಕ್ಕೂ ಸರಿ ಹೋಗದಂತವುಗಳು. ಇದು ಮೋದಿ ಸರಕಾರದ ಎರಡನೆಯ ದೇಶಘಾತುಕ ಕೆಲಸ.

ಮೂರನೆಯದ್ದಾಗಿ, ಜನತಾ ಕಫ್ಯು೯ ಹಾಗೂ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಣೆಗಿಂತ ಪೂವ೯ದಲ್ಲಿ ವಿವಿಧ ರಾಜ್ಯ ಸರಕಾರಗಳ ಜತೆ, ಸವ೯ಪಕ್ಷಗಳ ಜತೆ, ರೈತ ಕಾಮಿ೯ಕ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ದೀಘ೯ಕಾಲದ ಲಾಕ್‌ಡೌನ್‌ ಎದುರಿಸಲು ಜನರ ಬಳಿ ಏನೇನಿದೆ -ಏನೇನಿರಬೇಕು ಹಾಗೂ ರಾಷ್ಟ್ರೀಯ ತುರ್ತು ಸೇವೆಗಳನ್ನು ಕೊಡ ಮಾಡಲು ಸರಕಾರದ ಬಳಿ  ಯಾವ ಸಿದ್ದತೆಗಳಿರಲಿಲ್ಲ. ಇದು ಸಂಘ ಪರಿವಾರ್‌ ಸರಕಾರದ ಮೂರನೆಯ ಅತೀ ದೊಡ್ಡ ದೇಶ ಘಾತುಕ ಕೆಲಸ.

ಇದಕ್ಕಿಂತ ಮಿಗಿಲಾದ ದ್ರೋಹ ಎಂದರೆ ಇಡೀ ಪರಿಸ್ಥಿಯನ್ನು  ದುರುಪಯೋಗಪಡಿಸಿಕೊಂಡು ವಿರೋಧಮುಕ್ತ ಸವಾ೯ಧಿಕಾರವನ್ನು ಚಲಾಯಿಸಿ, ತನ್ನ ಹಿಂದೂ ರಾಷ್ಟ್ರ ರಾಜಕಾರಣವನ್ನು ದೇಶಾದ್ಯಂತ ಕೊರೊನಾಗಿಂತ ಹೈ ಸ್ಪೀಡನಲ್ಲಿ ಹರಡುತ್ತಿರುವುದು. ಕಳೆದ ಒಂದುವರೆ ತಿಂಗಳಿಂದ 99% ಚಾನಲಗಳು ಹಾಗೂ 75% ಪತ್ರಿಕೆಗಳು ಹಾಗೂ 520000ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ನಕಲಿ ಖಾತೆಗಳ ಮೂಲಕ ವಿರೋಧ ಪಕ್ಷಗಳು,ಪ್ರಜಾಪ್ರಭುತ್ವವಾದಿಗಳು, ಅಂಬೇಡ್ಕರ್ವಾದಿಗಳು, ಮುಸ್ಲೀಮರು, ಕಮ್ಯೂನಿಸ್ಟ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅತೀ ದೊಡ್ಡ ದುಷ್ಪ್ರಚಾರ ಮಾಡುತ್ತಿರುವುದು.

ಈ ಪೈಕಿ ಅತ್ಯಂತ ಹೇಸಿಗೆ ಹಾಗೂ ನಿಲ೯ಜ್ಯದ ಕೆಲಸ ಎಂದರೆ, ಚಪ್ಪಾಳೆ-ಗಂಟೆ ಬಾರಿಸಲು, ಲೈಟ್ ಆಫ್ ಮಾಡಿ ದೀಪ ಹಚ್ಚಲು ಹಾಗೂ ಬಿಡಿಗಾಸಿನ ಬೆಲೆ ಇಲ್ಲದ ಸಪ್ತ ಸೂತ್ರ ಪ್ರಕಟಿಸಲು ದೇಶದ ಪ್ರಧಾನಿಯು ಸಂಪೂಣ೯ ಸೀಮಿತವಾಗಿ ಹೋಗಿದ್ದು!

ಯಾವ ತಯಾರಿ ಹಾಗೂ ಬಿಡಿಗಾಸಿನ ಸಹಾಯ ನೀಡದೆ ಮತ್ತೆ ಲಾಕ್‌ಡೌನ್‌ ವಿಸ್ತರಣೆ ಮಾಡಿದ್ದು ಅತ್ಯಂತ ರಾಜಕೀಯ ದ್ರೋಹವಾಗಿದೆ.

ಮೋದಿ ಸರಕಾರದ ದುರಾಡಳಿತದಿಂದ ಮೊದಲೆ ಮೂಲೆಗುಂಪಾಗಿದ್ದ ದೇಶದ ಆಥಿ೯ಕತೆ, ಸಂಸದೀಯ ಪ್ರಜಾಪ್ರಭುತ್ವ ಹಾಗೂ ವಿಶಾಲ ಜನವಗ೯ಗಳ ಜೀವನವು ಇನ್ನಷ್ಟು ದರಿದ್ರ ಹಾಗೂ ದಾರುಣ ಹಂತ ತಲುಪಲು ತಾನು ಕಾರಣವಲ್ಲ ಎಂದು ಸಮಥಿ೯ಸಿಕೊಳ್ಳಲು ಎಲ್ಲ ಬಗೆಯ ತಯಾರಿ ನಡೆದಿದೆ.

ಒಟ್ಟಾರೆ, ಕೊರೊನಾ ಹೆಸರಲ್ಲಿ ಅತೀ ದೊಡ್ಡ ರಾಜಕೀಯ ದಿಗ್ಭಂದನ ನಮ್ಮ ದೇಶದಲ್ಲಿ ಬಿಗಿಗೊಳ್ಳುತ್ತಿದೆ. ದೇಶದ ನಾಲ್ಲು ಮೂಲೆಗಳು ಪೊಲೀಸ್ ರಾಜ್ಯವಾಗಿ ಹೋಗಿವೆ.ಪ್ರತಿಪಕ್ಷ -ಪ್ರತಿರೋಧ-ಪ್ರತಿಕ್ರಿಯೆ -ಪ್ರತಿಭಟನೆ-ಪ್ರಶ್ನಿಸುವಿಕೆ-ಜಾತ್ಯತೀತತೆ-ಸಮಾನತೆ-ಸ್ವಾತಂತ್ರ್ಯ -ನ್ಯಾಯಾಪೇಕ್ಷೆ ಎಲ್ಲವೂ ಲಾಕ್ ಡೌನ್ ಆಗಿವೆ!
ಭೇಮಾರಿ ಹೆಸರಲ್ಲಿ ಮನುವಾದ ಹಾಗೂ ಕಾಪೊ೯ರೇಟ್ ಸವಾ೯ಧಿಕಾರ ಹದ್ದುಬಸ್ತು ಮೀರಿ ಹರಡುತ್ತದೆ.
ಈ ದೇಶ ಹಿಂದೆದೂ ಕಂಡರಿಯದ ರೀತಿಯಲ್ಲಿ ಮೋಸಕ್ಕೊಳಗಾಗಿದೆ !
ಕೂಡಲೆ ಇದರ ವಿರುದ್ದ ಮುಂಬೈ ಗುಳೆ ಕಾಮಿ೯ಕರಂತೆ  ಮೈಸೂರು ಸಂತ್ರಸ್ತರಂತೆ ಬೀದಿಗಿಳಿಯದಿದ್ದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಂತಿಮ ಯಾತ್ರೆಗೂ ನಮಗೆ ದಿಗ್ಬಂಧನ ಬೀಳಲಿದೆ !
ಆನಂದ ತೆಲತುಂಬ್ಡೆಯ ಬಂಧನವಾಯಿತು! ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದೆ ಅವರ ಮುಂಬೈ ನಿವಾಸ ರಾಜಗ್ರುಹದ ಮೇಲೆ ನಿನ್ನೆ ನೀಲಿ ಬಾವುಟ ಇಳಿಸಿ  ಕಪ್ಪು ಬಾವುಟ ಹಾರಾಡಿತು!
ಇವೆಲ್ಲ ಭಾರತದ ಜನಪರ ರಾಜಕೀಯದ ಪ್ರಳಯದ ಸಂಕೇತಗಳು.
ಬನ್ನಿ! ದೈಹಿಕ ಅಂತರ ಕಾಯ್ದುಕೊಂಡೆ ಬೀದಿಗಿಳಿಯೋಣ! ಬಿಜೆಪಿ ಸವಾ೯ಧಿಕಾರದ ವಿರುದ್ದ ನಮಗಾಗಿ ನಾವು ಹೋರಾಡೋಣ!


ಇದನ್ನು ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...