Homeಕರ್ನಾಟಕರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ಲಾಕ್‌ಡೌನ್‌ನ ಪರಿಣಾಮಗಳು ಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದಂತೆ ದೇಶದ ವಿವಿಧ ಕಡೆಗಳಿಂದ ಹಲವು ರೀತಿಯ ದನಿಗಳು ಮೇಲೇಳುತ್ತಿವೆ. ಟಿಯುಸಿಐ ಮುಖಂಡ ಆರ್.‌ಮಾನಸಯ್ಯನವರು ಬರೆದ ಅಂತಹ ಒಂದು ಬರಹ ಇಲ್ಲಿದೆ.

- Advertisement -
- Advertisement -

ಮೊಟ್ಟ ಮೊದಲನೆಯದಾಗಿ ನಾನು ದೈಹಿಕ ಅಂತರ ಕಾಯ್ದುಕೊಳ್ಳ ಬೇಕಾದ ಲಾಕ್‌ಡೌನ್‌ ಪರವಾಗಿದ್ದೇನೆ.ಆದರೆ ಪ್ರಜಾಪ್ರಭುತ್ವವನ್ನ ಹಂತ ಹಂತವಾಗಿ ಲಾಕ್ ಡೌನ್ ಮಾಡುವ, ಕೇಂದ್ರ ಸರಕಾರದ ನೀಚಾತಿನೀಚ ರಾಜಕೀಯ ದಬ್ಬಾಳಿಕೆ ವಿರುದ್ದ ಜನತೆ ಹಾಗೂ ರಾಜಕೀಯ ಪಕ್ಷಗಳು ಕೂಡಲೆ ಧ್ವನಿ ಎತ್ತಬೇಕೆಂದು ಮನವಿ ಮಾಡುತ್ತೇನೆ.

ಕೊರೊನಾ ಕಟ್ಟಿ ಹಾಕುಲು ಇದ್ದ ಆರಂಭದ ಎಲ್ಲ ಅವಕಾಶಗಳನ್ನು ಮೋದಿ ಸರಕಾರ ಬಳಸಿಕೊಳ್ಳಲಿಲ್ಲ. ಇದು ಸರಕಾರದ ಮೊದಲನೆಯ ದೇಶಘಾತುಕ ಕೆಲಸ.

ಎರಡನೆಯದಾಗಿ, ಈ ಭೇಮಾರಿಯನ್ನು ಎದುರಿಸಲು ವೈದ್ಯಕೀಯ ಹಾಗೂ ಆಡಳಿತಾತ್ಮಕ ಸಿದ್ದತೆಗಳು ಅತ್ಯಂತ ಕಳಪೆ ಹಾಗೂ ಯಾತಕ್ಕೂ ಸರಿ ಹೋಗದಂತವುಗಳು. ಇದು ಮೋದಿ ಸರಕಾರದ ಎರಡನೆಯ ದೇಶಘಾತುಕ ಕೆಲಸ.

ಮೂರನೆಯದ್ದಾಗಿ, ಜನತಾ ಕಫ್ಯು೯ ಹಾಗೂ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಣೆಗಿಂತ ಪೂವ೯ದಲ್ಲಿ ವಿವಿಧ ರಾಜ್ಯ ಸರಕಾರಗಳ ಜತೆ, ಸವ೯ಪಕ್ಷಗಳ ಜತೆ, ರೈತ ಕಾಮಿ೯ಕ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ದೀಘ೯ಕಾಲದ ಲಾಕ್‌ಡೌನ್‌ ಎದುರಿಸಲು ಜನರ ಬಳಿ ಏನೇನಿದೆ -ಏನೇನಿರಬೇಕು ಹಾಗೂ ರಾಷ್ಟ್ರೀಯ ತುರ್ತು ಸೇವೆಗಳನ್ನು ಕೊಡ ಮಾಡಲು ಸರಕಾರದ ಬಳಿ  ಯಾವ ಸಿದ್ದತೆಗಳಿರಲಿಲ್ಲ. ಇದು ಸಂಘ ಪರಿವಾರ್‌ ಸರಕಾರದ ಮೂರನೆಯ ಅತೀ ದೊಡ್ಡ ದೇಶ ಘಾತುಕ ಕೆಲಸ.

ಇದಕ್ಕಿಂತ ಮಿಗಿಲಾದ ದ್ರೋಹ ಎಂದರೆ ಇಡೀ ಪರಿಸ್ಥಿಯನ್ನು  ದುರುಪಯೋಗಪಡಿಸಿಕೊಂಡು ವಿರೋಧಮುಕ್ತ ಸವಾ೯ಧಿಕಾರವನ್ನು ಚಲಾಯಿಸಿ, ತನ್ನ ಹಿಂದೂ ರಾಷ್ಟ್ರ ರಾಜಕಾರಣವನ್ನು ದೇಶಾದ್ಯಂತ ಕೊರೊನಾಗಿಂತ ಹೈ ಸ್ಪೀಡನಲ್ಲಿ ಹರಡುತ್ತಿರುವುದು. ಕಳೆದ ಒಂದುವರೆ ತಿಂಗಳಿಂದ 99% ಚಾನಲಗಳು ಹಾಗೂ 75% ಪತ್ರಿಕೆಗಳು ಹಾಗೂ 520000ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ನಕಲಿ ಖಾತೆಗಳ ಮೂಲಕ ವಿರೋಧ ಪಕ್ಷಗಳು,ಪ್ರಜಾಪ್ರಭುತ್ವವಾದಿಗಳು, ಅಂಬೇಡ್ಕರ್ವಾದಿಗಳು, ಮುಸ್ಲೀಮರು, ಕಮ್ಯೂನಿಸ್ಟ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅತೀ ದೊಡ್ಡ ದುಷ್ಪ್ರಚಾರ ಮಾಡುತ್ತಿರುವುದು.

ಈ ಪೈಕಿ ಅತ್ಯಂತ ಹೇಸಿಗೆ ಹಾಗೂ ನಿಲ೯ಜ್ಯದ ಕೆಲಸ ಎಂದರೆ, ಚಪ್ಪಾಳೆ-ಗಂಟೆ ಬಾರಿಸಲು, ಲೈಟ್ ಆಫ್ ಮಾಡಿ ದೀಪ ಹಚ್ಚಲು ಹಾಗೂ ಬಿಡಿಗಾಸಿನ ಬೆಲೆ ಇಲ್ಲದ ಸಪ್ತ ಸೂತ್ರ ಪ್ರಕಟಿಸಲು ದೇಶದ ಪ್ರಧಾನಿಯು ಸಂಪೂಣ೯ ಸೀಮಿತವಾಗಿ ಹೋಗಿದ್ದು!

ಯಾವ ತಯಾರಿ ಹಾಗೂ ಬಿಡಿಗಾಸಿನ ಸಹಾಯ ನೀಡದೆ ಮತ್ತೆ ಲಾಕ್‌ಡೌನ್‌ ವಿಸ್ತರಣೆ ಮಾಡಿದ್ದು ಅತ್ಯಂತ ರಾಜಕೀಯ ದ್ರೋಹವಾಗಿದೆ.

ಮೋದಿ ಸರಕಾರದ ದುರಾಡಳಿತದಿಂದ ಮೊದಲೆ ಮೂಲೆಗುಂಪಾಗಿದ್ದ ದೇಶದ ಆಥಿ೯ಕತೆ, ಸಂಸದೀಯ ಪ್ರಜಾಪ್ರಭುತ್ವ ಹಾಗೂ ವಿಶಾಲ ಜನವಗ೯ಗಳ ಜೀವನವು ಇನ್ನಷ್ಟು ದರಿದ್ರ ಹಾಗೂ ದಾರುಣ ಹಂತ ತಲುಪಲು ತಾನು ಕಾರಣವಲ್ಲ ಎಂದು ಸಮಥಿ೯ಸಿಕೊಳ್ಳಲು ಎಲ್ಲ ಬಗೆಯ ತಯಾರಿ ನಡೆದಿದೆ.

ಒಟ್ಟಾರೆ, ಕೊರೊನಾ ಹೆಸರಲ್ಲಿ ಅತೀ ದೊಡ್ಡ ರಾಜಕೀಯ ದಿಗ್ಭಂದನ ನಮ್ಮ ದೇಶದಲ್ಲಿ ಬಿಗಿಗೊಳ್ಳುತ್ತಿದೆ. ದೇಶದ ನಾಲ್ಲು ಮೂಲೆಗಳು ಪೊಲೀಸ್ ರಾಜ್ಯವಾಗಿ ಹೋಗಿವೆ.ಪ್ರತಿಪಕ್ಷ -ಪ್ರತಿರೋಧ-ಪ್ರತಿಕ್ರಿಯೆ -ಪ್ರತಿಭಟನೆ-ಪ್ರಶ್ನಿಸುವಿಕೆ-ಜಾತ್ಯತೀತತೆ-ಸಮಾನತೆ-ಸ್ವಾತಂತ್ರ್ಯ -ನ್ಯಾಯಾಪೇಕ್ಷೆ ಎಲ್ಲವೂ ಲಾಕ್ ಡೌನ್ ಆಗಿವೆ!
ಭೇಮಾರಿ ಹೆಸರಲ್ಲಿ ಮನುವಾದ ಹಾಗೂ ಕಾಪೊ೯ರೇಟ್ ಸವಾ೯ಧಿಕಾರ ಹದ್ದುಬಸ್ತು ಮೀರಿ ಹರಡುತ್ತದೆ.
ಈ ದೇಶ ಹಿಂದೆದೂ ಕಂಡರಿಯದ ರೀತಿಯಲ್ಲಿ ಮೋಸಕ್ಕೊಳಗಾಗಿದೆ !
ಕೂಡಲೆ ಇದರ ವಿರುದ್ದ ಮುಂಬೈ ಗುಳೆ ಕಾಮಿ೯ಕರಂತೆ  ಮೈಸೂರು ಸಂತ್ರಸ್ತರಂತೆ ಬೀದಿಗಿಳಿಯದಿದ್ದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಂತಿಮ ಯಾತ್ರೆಗೂ ನಮಗೆ ದಿಗ್ಬಂಧನ ಬೀಳಲಿದೆ !
ಆನಂದ ತೆಲತುಂಬ್ಡೆಯ ಬಂಧನವಾಯಿತು! ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದೆ ಅವರ ಮುಂಬೈ ನಿವಾಸ ರಾಜಗ್ರುಹದ ಮೇಲೆ ನಿನ್ನೆ ನೀಲಿ ಬಾವುಟ ಇಳಿಸಿ  ಕಪ್ಪು ಬಾವುಟ ಹಾರಾಡಿತು!
ಇವೆಲ್ಲ ಭಾರತದ ಜನಪರ ರಾಜಕೀಯದ ಪ್ರಳಯದ ಸಂಕೇತಗಳು.
ಬನ್ನಿ! ದೈಹಿಕ ಅಂತರ ಕಾಯ್ದುಕೊಂಡೆ ಬೀದಿಗಿಳಿಯೋಣ! ಬಿಜೆಪಿ ಸವಾ೯ಧಿಕಾರದ ವಿರುದ್ದ ನಮಗಾಗಿ ನಾವು ಹೋರಾಡೋಣ!


ಇದನ್ನು ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....