Homeಅಂಕಣಗಳುಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ...!

ಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ…!

- Advertisement -
- Advertisement -

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟು ಎಂಬ ಪದಪುಂಜ ಅಷ್ಟು ಸರಿಯಲ್ಲ. ಕೊರೊನಾ ಸೋಂಕು ಉದ್ಭವವಾದಾಗ ಅದನ್ನು ನಿಭಾಯಿಸಲಾಗದಂತೆ ನಾವುಗಳು ಸೃಷ್ಟಿಸಿಕೊಂಡಿದ್ದ ಇಕ್ಕಟ್ಟು ಮೂಲ ಸಮಸ್ಯೆಯಾಗಿತ್ತು. ಹಾಗಾಗಿ ಕಣ್ಣಿಗೆ ಕಾಣದ ಮತ್ತು ಪೂರ್ಣ ಜೀವಿಯೂ ಅಲ್ಲದ ವೈರಸ್ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತು. ಅಂದರೆ ಇದು ವೈರಸ್‍ನ ಶಕ್ತಿ ಎನ್ನುವುದಕ್ಕಿಂತ ನಮ್ಮ ದೌರ್ಬಲ್ಯ ಇದಕ್ಕೆಲ್ಲಾ ಕಾರಣವಾಯಿತು. ಈ ಕುರಿತು ಮತ್ತಷ್ಟು ಆಳ ಹಾಗೂ ಒಳನೋಟಗಳನ್ನು ಹೆಕ್ಕುವ ಅಗತ್ಯವಿದೆ. ಆದರೆ, ಇಂದು ಕೊರೊನಾ ಇನ್ನೂ ವ್ಯಾಪಕವಾಗುತ್ತಿರುವಾಗಲೇ ‘ಪುನರ್ ನಿರ್ಮಾಣ’ದ ಕೆಲಸವೂ ಶುರುವಾಗಬೇಕಿರುವುದರಿಂದ ಕೆಲವು ಪ್ರಾಥಮಿಕ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸಿದೆ.

ನಾವು ಮನಸ್ಸು ಮಾಡಿದಲ್ಲಿ ಈ ಸಂದರ್ಭವನ್ನೇ ನಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಸದವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ.

ಲೋಕಲ್, ಗ್ಲೋಬಲ್ ನಡುವೆ ಇರಬೇಕಾದ ಸಮತೋಲನ

ಮೊನ್ನೆ ಮಾತನಾಡುವಾಗ ಪ್ರಧಾನಿಗಳು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸ್ಥಳೀಯವಾದುದರ ಕುರಿತು ಮಾತು ಹೆಚ್ಚು; ಮಾಡುವುದೆಲ್ಲಾ ಅದಕ್ಕೆ ತದ್ವಿರುದ್ಧ ಎನ್ನುವುದು ಪ್ರಧಾನಿಗಳಿಗೆ ಮಾತ್ರ ಸೀಮಿತ ವಲ್ಲ. ಅದನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಜೊತೆಗೆ ನಮ್ಮದು 100% ಲೋಕಲ್ ಎಂದು ಹೇಳುವ ಸಾಧ್ಯತೆಯೂ ಇರದಾಗ, ಎರಡರ ನಡುವೆ ಇರಬೇಕಾದ ಸಮತೋಲನದ ಬಗ್ಗೆ ಚರ್ಚಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹಾಗೆ ಮಾಡದೇ ಹೇಳೋದೊಂದು ಮಾಡೋದೊಂದು ಆಷಾಢಭೂತಿತನದಿಂದ ಹಾನಿಯೇ ಹೆಚ್ಚು. ಬಹಳ ಹಳೆಯದಾದ ‘ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ’ (ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ಕ್ರಿಯಾಶೀಲರಾಗಿ) ಈಗಲೂ ಪ್ರಸ್ತುತ.

ಆರ್ಥಿಕತೆ ಪುನರ್ ಕಟ್ಟಿಕೊಳ್ಳುವ ಬಗೆ

ಬಂಡವಾಳ ಹೂಡಿಕೆ ಮಾಡಬಲ್ಲವರೇ ಸಂಪತ್ತನ್ನು ಸೃಷ್ಟಿಸುವವರು ಮತ್ತು ಉದ್ಯೋಗ ಕೊಡುವವರು ಎಂಬ ಥಿಯರಿ ಚಾಲ್ತಿಯಲ್ಲಿದೆ. ತಮ್ಮನ್ನು ತಾವು ಅನ್ನದಾತರು ಎಂದು ಕರೆದುಕೊಂಡು ಕರ್ನಾಟಕದ ಮಾಲೀಕರ ಸಂಘದವರು ಸರ್ಕಾರಕ್ಕೆ ಬರೆದ ಪತ್ರ ನೋಡಿದರೆ ಗೊತ್ತಾಗುತ್ತದೆ. ಆದರೆ, ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೊರಹೋಗದಿರಲಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದ ಬಿಲ್ಡರ್‍ಗಳು ‘ಕಾರ್ಮಿಕರಿಲ್ಲದೇ ಕೆಲಸವಾಗಲ್ಲ’ ಎಂಬುದನ್ನು ನಿರೂಪಿಸಿದ್ದಾರೆ. ‘ನಾವು ಬಡವಾಗುತ್ತಿದ್ದೇವೆ, 8 ಗಂಟೆಯ ಬದಲು 12 ಗಂಟೆ ಕೆಲಸ ಮಾಡಲು ಕಾನೂನು ತಿದ್ದುಪಡಿ ತನ್ನಿ’ ಎಂದು ಹೇಳಿದವರೂ ಸಹಾ ದುಡಿಮೆಗಾರರೇ ಸಂಪತ್ತನ್ನು ಸೃಷ್ಟಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದಾರೆ.

ಇವರು ದುಡಿಮೆಗಾರರು ಮಾತ್ರವಲ್ಲಾ, ಗ್ರಾಹಕರೂ ಸಹಾ. ಈ ಕೋಟಿ ಕೋಟಿ ಜನ ಅಲ್ಪಸ್ವಲ್ಪ ಕೊಳ್ಳುವಿಕೆಯೇ ಆರ್ಥಿಕತೆಯನ್ನು ತಳದಿಂದ ಮೇಲಿನವರೆಗೆ ಚಾಲ್ತಿಯಲ್ಲಿಡುತ್ತದೆ ಎಂಬುದೂ ಪದೇ ಪದೇ ಸಾಬೀತಾಗುತ್ತಿದೆ. ಹೀಗಿರುವಾಗ ಆರ್ಥಿಕತೆಯನ್ನು ಕಟ್ಟಬೇಕಾದ್ದು ತಳದಿಂದ ಮೇಲಕ್ಕೆ ಎಂಬುದರಲ್ಲಿ ಸಂಶಯವೇ ಇಲ್ಲ. ಈಗ ಬರಬೇಕಿರುವ ಎಲ್ಲಾ ಪ್ಯಾಕೇಜುಗಳು, ನೀತಿ ನಿರೂಪಣೆಗಳು ಅದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದುವರೆಗೆ ಕೆಲಸ ಮಾಡದಿರುವ ಮೇಲಿನಿಂದ ಕಟ್ಟುವ ಥಿಯರಿಗಳನ್ನು ಈಗಾದರೂ ಕಸದ ಬುಟ್ಟಿಗೆ ಹಾಕಬೇಕು.

ಮನುಷ್ಯ ನಿರ್ಮಿತ ಜಾತಿ, ಧರ್ಮಗಳನ್ನು ನಿವಾರಿಸಿಕೊಂಡು ಮನುಷ್ಯರಾಗುವುದು

ವೈರಸ್ಸು ಪ್ರಾಣಿಗಳನ್ನೂ, ಪ್ರಾಣಿಗಳ ನಂತರ ಮನುಷ್ಯರನ್ನೂ ಆವರಿಸಿಕೊಳ್ಳುತ್ತಿದೆ. ಪ್ರಾಣಿ ಸಂಕುಲವನ್ನೇ ಬಿಡದೇ ಇರುವುದು, ಮನುಷ್ಯರನ್ನೆಲ್ಲಾ ಒಂದು ಪ್ರಬೇಧದಂತೆ ಪರಿಗಣಿಸುತ್ತದೆ ಅಷ್ಟೇ. ಒಂದೇ ಧರ್ಮದವರು ವಾಸಿಸುವ ಕೆಲವು ದೇಶಗಳು ಅತ್ಯುತ್ತಮವಾಗಿ ಈ ಸಂದರ್ಭವನ್ನು ನಿಭಾಯಿಸಿದ್ದರೆ, ಅದೇ ಧರ್ಮದವರು ಇರುವ ಇನ್ನೊಂದು ದೇಶ ಇಕ್ಕಟ್ಟಿಗೆ ಸಿಕ್ಕಿದೆ. ಘಟನೆಯೊಂದನ್ನು ಇಟ್ಟುಕೊಂಡು ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿದರೆ, ಇನ್ನೊಂದು ಘಟನೆ ಇಟ್ಟುಕೊಂಡು ಮತ್ತೊಂದು ಸಮುದಾಯವನ್ನೂ ದೂಷಿಸಬಹುದು. ಅಂತಿಮವಾಗಿ ಪ್ರಚಾರ ಯುದ್ಧದಲ್ಲಿ ಯಾರು ಗಟ್ಟಿಯೋ ಅವರ ಕೈ ಮೇಲಾಗಲೂಬಹುದು. ಆದರೆ ವೈರಸ್ ಪ್ರಚಾರಕ್ಕೆ ತಕ್ಕಂತೆ ಹರಡುವುದಿಲ್ಲ. ಅದಕ್ಕೆ ಕಣ್ಣು, ಕಿವಿಗಳಿರುವ ಕುರಿತು ಪುರಾವೆಗಳಿಲ್ಲ. ಹಾಗಾಗಿ ಜಾತಿ, ಧರ್ಮಗಳ ಗೋಡೆಗಳು ಹಾಗೂ ತಾರತಮ್ಯಗಳನ್ನು ನಿವಾರಿಸಿಕೊಳ್ಳುವ ಕುರಿತು ಮನುಷ್ಯರು ಆಲೋಚಿಸಲು ಈ ಸಂದರ್ಭ ಕಾರಣವಾಗಬಹುದೇ?

ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮೂಲಭೂತ ಬದಲಾವಣೆ

ಅಗೋಚರವಾದ ಅರೆಜೀವಿಯೊಂದು ನಮ್ಮನ್ನು ಹೀಗೆಲ್ಲಾ ಮಾಡಬಹುದಾದರೆ ಬದುಕಿರುವಷ್ಟು ದಿನ ಏನು ಮಾಡಬೇಕೆಂದು ಮನುಷ್ಯರು ಯೋಚಿಸಬೇಕಲ್ಲವೇ? ಬ್ರಹ್ಮಾಂಡವೆಲ್ಲವನ್ನೂ ಶೋಧಿಸಿ, ಪಾತಾಳವನ್ನೂ ಬಗೆದು ಸಾಮ್ರಾಜ್ಯ ವಿಸ್ತರಿಸುತ್ತಿರುವ ಮನುಷ್ಯರು ಇಷ್ಟು ಕ್ಷುಲ್ಲಕವಾಗಿ ಸೋತು ನಿಂತಿದ್ದಾರೆ. ಈ ಕ್ಷಣದವರೆಗೂ ಕೊರೊನಾ ಸೋಂಕನ್ನು ಹೀಗ್ಹೀಗೇ ನಿಭಾಯಿಸಲು ಸಾಧ್ಯ ಎಂಬ ಅಂತಿಮ ಷರಾ ಬರೆಯಲು ಯಾವ ದೇಶಕ್ಕೂ ಆಗಿಲ್ಲ. ಮಹಾಮಹಿಮರೂ ಊಹೆಗಳನ್ನು ಮಾಡುತ್ತಿದ್ದಾರೆ. ಭಾರೀ ಭಾರೀ ತಜ್ಞರೂ ವಿರುದ್ಧ ದಿಕ್ಕಿನ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಮಾಸ್ಕ್‍ನ ಅಗತ್ಯವಿಲ್ಲ; ಮಾಸ್ಕೇ ಮೂಲಮಂತ್ರ. ಲಾಕ್‍ಡೌನ್ ಏಕೈಕ ಪರಿಹಾರ; ಲಾಕ್‍ಡೌನ್‍ನಿಂದ ನಷ್ಟವೇ ಹೆಚ್ಚು. ಒಂದೇ ವಾತಾವರಣವಿರುವ ಎರಡು ದೇಶಗಳ ಮಧ್ಯೆ ವೈರಸ್ ಭಿನ್ನ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇದು ಕಾರಣ; ಅಲ್ಲ ಅದು ಕಾರಣವಲ್ಲ. ಕೇವಲ ಕಪ್ಪು ಬಿಳುಪು ಮಾತ್ರವಲ್ಲದೇ, ವಿವಿಧ ವರ್ಣಗಳ ವೈರುಧ್ಯಗಳೂ ಇವೆ.

ಅಂದ ಮೇಲೆ, ಮನುಷ್ಯ ಸಮಾಜದ ಸಾವಿರಾರು ವರ್ಷಗಳ ಜ್ಞಾನಕ್ಕೆ ಈ ಪರಿ ಮಿತಿಯಿದೆಯೇ? ಇದು ಎಲ್ಲರಲ್ಲಿ ವಿನಮ್ರ ಭಾವವೊಂದನ್ನು ಮೂಡಿಸಿದರೆ ಪ್ರಕೃತಿಯೊಂದಿಗೆ ಸೇರಿ ಬಾಳುವ ಹೊಸ ನಾಗರಿಕತೆಯತ್ತ ಪ್ರಪಂಚವನ್ನು ಕರೆದೊಯ್ಯಬಹುದು.

ಆದರೆ ಇವೆಲ್ಲಕ್ಕೂ ಈ ದಿಕ್ಕಿನತ್ತ ಮನಸ್ಸು ಮಾಡಬೇಕು. ಇಲ್ಲದಿದ್ದರೆ ವಿನಾಶದ ಮತ್ತೊಂದು ದಾರಿಯತ್ತಲೂ ಹೋಗುವ ಅವಕಾಶ ಹೇಗೂ ಇದ್ದೇ ಇದೆ. ಹೆಚ್ಚಿನ ಜನರು ಮನುಷ್ಯರಾಗಿ ಯೋಚಿಸುತ್ತಾರೆಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...