Homeಮುಖಪುಟಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

ಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

ಮೂರು ದಶಕಗಳ ಕಾಲ ಕೊರಗರ ಸ್ವಾಭಿಮಾನದ ಬದುಕಿಗಾಗಿ ದುಡಿದ ಮತ್ತು 2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದ ಶಕುಂತಲಾ ಕೊರಗ ನೇಜಾರ್‌ರವರ ಮಾತುಗಳು.

- Advertisement -
- Advertisement -

ಎಲೆಮರೆ-30

  • ಅರುಣ್ ಜೋಳದಕೂಡ್ಲಿಗಿ.

ಫೆಬ್ರವರಿ 11, 2020 ರಂದು ಯುನೈಟೆಡ್ ಅರಬ್ ಎಮಿರೈಟ್ಸ್‌ನ ರಾಜಧಾನಿಯಾದ ಅರೇಬಿಯನ್ ಧ್ವೀಪವೊಂದರಲ್ಲಿರುವ ಅಬುದಾಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಆಯೋಜನೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಉಡುಪಿಯ ನೇಜಾರದ ಕೊರಗ ಸಮುದಾಯದ ಶಕುಂತಲಾ ಅವರು `2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದರು. ಈ ಇದು ಕೊರಗ ಸಮುದಾಯದ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿ ದಾಖಲಾಯಿತು. ಕಾರಣ ಮೊದಲ ಬಾರಿಗೆ ಕೊರಗ ಸಮುದಾಯದ ಮಹಿಳೆಯೊಬ್ಬರು ವಿದೇಶಕ್ಕೆ ತೆರಳಿ ಇಂತಹದ್ದೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯೊಂದನ್ನು ಸ್ವೀಕರಿಸಿದರು. ಈ ಪ್ರಶಸ್ತಿಯ ಜಾಡು ಹಿಡಿದು ಹಿಂದಕ್ಕೆ ನಡೆದರೆ 1987 ರಿಂದ ಕೊರಗ ಸಮುದಾಯದ ಅಭಿವೃದ್ಧಿಗಾಗಿ ದುಡಿದ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆಯು ಕೊರಗ ಸಮುದಾಯದಲ್ಲಿ ಮೂಡಿಸಿದ ಸ್ವಾಭಿಮಾನದ ಕಥನವು ಬಿಚ್ಚಿಕೊಳ್ಳುತ್ತದೆ.

ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಾದುಬರುವುದು ಅಷ್ಟು ಸುಲಭವಲ್ಲ. 195 ದೇಶಗಳ 3000 ಸ್ವಯಂ ಸೇವಾ ಸಂಸ್ಥೆಗಳು ಈ ಪ್ರಶಸ್ತಿಗೆ ಪೈಪೋಟಿ ನಡೆಸಿದ್ದವು. ಅಂತಿಮ ಸುತ್ತಿಗೆ ಆಯ್ಕೆಯಾದ ಹತ್ತು ಸಂಸ್ಥೆಗಳ ಕಾರ್ಯಗಳ ಬಗ್ಗೆ ಸ್ವತಃ ವಿಶ್ವಸಂಸ್ಥೆಯ ಪ್ರತಿನಿಧಿಗಳು ಭೇಟಿನೀಡಿ ಜನರೊಟ್ಟಿಗೆ ಮಾತಾಡಿ, ಸುಧಾರಣ ಕೆಲಸಗಳನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಈ ವರದಿಯನ್ನು ಆಧರಿಸಿ ಅಂತಿಮವಾಗಿ ನಾಲ್ಕು ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಜಾಗತಿಕ ದಕ್ಷಿಣ ವಿಭಾಗದಿಂದ `ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ’ಗೆ ಗೋಲ್ಡನ್ ಪ್ರಶಸ್ತಿ ಲಭಿಸಿತು. ಭಾರತಕ್ಕೆ ಈತನಕ ನಾಲ್ಕು ಬಾರಿ ಮಾತ್ರ ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಬಂದಿದೆ. ವಿಶೇಷವೆಂದರೆ ಈ ಪ್ರಶಸ್ತಿ ಕರ್ನಾಟಕಕ್ಕೆ ಸಿಕ್ಕಿರುವುದು ಇದೇ ಮೊದಲು.

ಹಾಗಾದರೆ ಇಂತಹ ಪ್ರಶಸ್ತಿಗೆ ಭಾಜನವಾದ ಸಂಸ್ಥೆಯ ಕೆಲಸವಾದರೂ ಎಂಥದು ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು 1987 ರಿಂದ ರಾಜ್ಯದ ಬುಡಕಟ್ಟು ಸಮುದಾಯಗಳ ಹಕ್ಕೊತ್ತಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕ ಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಕೊರಗರು, ಹಲಸರು, ಗೊಂಡ, ಮಲೆಕುಡಿಯ, ಹಕ್ಕಿಪಿಕ್ಕಿ, ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ, ಡೋಂಗ್ರಿ ಗರಾಸಿಯ ಈ ಸಮುದಾಯಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಜಾಗೃತಗೊಳಿಸಿ ಸ್ವಾಭಿಮಾನದ ಘನತೆಯ ಬದುಕು ರೂಪಿಸಲು ಶ್ರಮಿಸಿದ್ದಕ್ಕೆ ಈ ಪ್ರಶಸ್ತಿಯು ಲಭಿಸಿದೆ.

ಮುಖ್ಯವಾಗಿ ಸಮುದಾಯಗಳ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಹಕ್ಕು ಕೊಡಿಸುವುದು, ವಸತಿ ಸೌಲಭ್ಯ, ಜೀವನಾಧಾರಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು, ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ಆರೋಗ್ಯದ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಈ ಪ್ರಶಸ್ತಿಯು ಎತ್ತಿ ಹಿಡಿದಿದೆ. ಈ ಕೆಲಸದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಜಂಟಿಯಾಗಿ ಶ್ರಮಿಸಿವೆ. ಇಂತಹ ಜಾಗೃತಿಯ ಚಳವಳಿಯಲ್ಲಿ ಬುಡಕಟ್ಟು ಸಮುದಾಯದ ಸದಸ್ಯರುಗಳು ತೊಡಗಿಸಿಕೊಂಡು ಮೇಲೆ ಬಂದವರಲ್ಲಿ ಶಕುಂತಲಾ ಕೊರಗ ನಜೇರು ಒಬ್ಬರು.

`ಬಾಲ್ಯದಿಂದಲೆ ಕಲ್ಯಾಣಪುರಿ ಗೊರಟ್ಟಿ ಆಸ್ಪತ್ರೆಯಲ್ಲಿ ನಾವು ಬೆಳೆದದ್ದು. ಅಮ್ಮ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಳು. ಹಾಗಾಗಿ ಆಸ್ಪತ್ರೆಯಲ್ಲೆ ಒಂದು ರೂಮು ಕೊಟ್ಟಿದ್ರು. ಹಂಗಾಗಿ ನಾವು ಅಲ್ಲೇ ರ‍್ತಿದ್ವಿ. ಆಗ ಶಾಲೆಗೆ ಹೋಗೋದು ತೊಂದ್ರೆಯೇನು ಆಗಿರಲಿಲ್ಲ. ನಾವು ಒಂದು ದಿನ ಶಾಲೆಗೆ ಹೋಗದೆ ಇದ್ರೆ ಮನೇಲಿ ಯಾಕೆ ಶಾಲೆಗೆ ಹೋಗಿಲ್ಲ ಎಂದು ಕೇಳುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಹೋಗೋಕೆ ಅಷ್ಟು ಆಸಕ್ತಿ ತೋರದೆ ಏಳನೆ ತರಗತಿ ಓದಿ ಅರ್ಧಕ್ಕೆ ಬಿಟ್ಟೆ. ನಂತರ ಬಾರ್ಕೂರ್ ನಲ್ಲಿ ಮದ್ವೆ ಆಯ್ತು. ಗಂಡ ಮೊದಲು ಉಡುಪಿಯಲ್ಲಿ ಸ್ಪೀಪರ್ ಕೆಲಸ ಮಾಡತಿದ್ರು. 1993 ರಲ್ಲಿ ದೊಡ್ಡ ಮಗನ ನಂತರ ಎರಡನೆ ಮಗ ಚಿಕ್ಕವನಿದ್ದ. ಆಗ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ ಬಾರ್ಕೂರಲ್ಲಿ ಸಂಘಟನೆ ಮಾಡೋಕೆ ಬಂದಿದ್ರು. ನಾವು ಮೊದಲು ಸಂಘಟನೆ ಅಂದ್ರೆ ಹೆರ‍್ತಾ ಇದ್ವಿ. ಗಂಡಸರನ್ನು ಮುಂದೆ ಬಿಟ್ಟು ನಾವು ಹಾಗೆ ಹಿಂದೆ ಇದ್ದುಕೊಂಡು ಸಂಘಟನೆಗೆ ಸೇರಿದೆ. ನಾವು ಒಂದೊAದು ಗ್ರಾಮದಲ್ಲಿ ಹತ್ ಮನೆ, ಇಪ್ಪತ್ ಮನೆಗಳಲ್ಲಿ ಮೀಟಿಂಗ್ ಮಾಡಿ ಅವರಲ್ಲಿ ಸಂಘಟನೆ ಮಾಡ್ತಾ ಇದ್ವಿ. ಮೊದಲು ಅಸ್ಪೃಶ್ಯತೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದೆವು’ ಎಂದು ಶಕುಂತಲಾ ಅವರು ತನ್ನ ಹೋರಾಟದ ಹಾದಿಯನ್ನು ನೆನೆಯುತ್ತಾರೆ.

ಶಕುಂತಲಾ ಅವರ ಗಂಡ ಸಂಜೀವ ಕೊರಗ ಕೂಡ ಕೊರಗ ಸಮುದಾಯದ ಜಾಗೃತಿಗಾಗಿ ಬದ್ಧತೆಯಿಂದ ಕೆಲಸ ಮಾಡಿದವರು. ಹಾಗಾಗಿ ಶಕುಂತಲಾ ಅವರ ಚಳವಳಿಯ ಸಾಂಗತ್ಯಕ್ಕೆ ಗಂಡ ಸಂಜೀವರು ಹೆಗಲು ಕೊಟ್ಟಿದ್ದಾರೆ. ಶಕುಂತಲಾ ಏಳನೆಯ ತರಗತಿಯ ತನಕ ಓದಿದರೂ, ಸಂಘಟನೆಗಳು ಕೊಟ್ಟ ಎಚ್ಚರದ ಪರಿಣಾಮ ಇಬ್ಬರು ಮಕ್ಕಳನ್ನು ಉತ್ತಮವಾಗಿ ಓದಿಸಿದ್ದಾರೆ. ದೊಡ್ಡ ಮಗ ಸಂದೀಪ್ ಫಿಸಿಕ್ಸ್ನಲ್ಲಿ ಎಂಎಸ್ಸಿ ಪದವಿ ಪಡೆದು ಈಗ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ಸಣ್ಣ ಮಗ ಸತೀಶ್ ಎಂಟೆಕ್ ಮಾಡಿ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದಾರೆ. ಇವರ ವಿದ್ಯಾಭ್ಯಾಸದ ಹಿಂದೆ ಶಕುಂತಲಾ ಮತ್ತು ಸಂಜೀವ್ ಅವರ ಅವಿರತ ಶ್ರಮವಿದೆ.

`ಶಕುಂತಲಾ ಸುಮಾರು 30 ವರ್ಷಗಳ ಕಾಲ ಕಲ್ಯಾಣಪುರಿ ಗೊರಟ್ಟಿ ಆಸ್ಪತ್ರೆಯಲ್ಲಿ ಆಯಾ ಕೆಲಸ ನಿರ್ವಹಿಸಿ ಈಗ ನಿವೃತ್ತಿ ಪಡೆದು ಪೂರ್ಣಕಾಲೀನ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. 1990 ರಿಂದ ಶಕುಂತಲಾ ಅವರ ಕುಟುಂಬ ಕೊರಗರ ಚಳುವಳಿಯಲ್ಲಿ ತೊಡಗಿಸಿಕೊಂಡಿದೆ. ಬಹಳ ಮುಖ್ಯವಾಗಿ ಕೊರಗರ ಭೂಮಿ ಹೋರಾಟ, ಅಜಲು ನಿಶೇಧ ಕಾಯ್ದೆ ಬರುವುದಕ್ಕಾಗಿನ ಹೋರಾಟ, ಗುಣಮಟ್ಟದ ಪೌಷ್ಟಿಕ ಆಹಾರದ ಹೋರಾಟ, ಕುಡಿತ, ದುಶ್ಚಟಗಳ ವಿರುದ್ಧದ ಹೋರಾಟ, ಮಹಿಳೆಯರ ಸ್ವಾಭಿಮಾನದ ಚಳವಳಿ, ಶಿಕ್ಷಣ, ಆರೋಗ್ಯದ ಕೆಲಸಗಳಲ್ಲಿ ಶಕುಂತಲಾ ಮುಂಚೂಣಿಯಲ್ಲಿದ್ದರು’ ಎಂದು `ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ’ಯ ಅಶೋಕ ಅವರು ಹೇಳುತ್ತಾರೆ.

`ನಾವು ಮೂವತ್ತು ವರ್ಷದಿಂದ ಸಂಘಟನೆಯಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಕೆಲಸ ಮಾಡಿದರೂ, ಇನ್ನೂ ಹಳ್ಳಿ ಕಡೆಗಳಲ್ಲಿ ಕೊರಗರನ್ನು ಅಸ್ಪೃಶ್ಯರನ್ನಾಗಿಯೇ ನೋಡಲಾಗುತ್ತಿದೆ. ಅಸ್ಪೃಶ್ಯತೆಯನ್ನು ಜನರು ಒಳ್ಳೆ ಮೈಂಡಲ್ಲಿ ಇಟ್ಕೊಂಡಿದಾರೆ. ಅದು ಹೇಗೆ ನಾಟಿದೆ ಅಂದರೆ ಈ ಕೊರೋನಾ ಬೇಕಾದರೆ ಓಡಿಸಬಹುದು. ಆದರೆ ಅಸ್ಪೃಶ್ಯತೆಯನ್ನು ಓಡಿಸೋಕೆ ಆಗಲ್ಲ. ಆದರೆ ಸಂಘಟನೆಯ ಆರಂಭಕ್ಕೂ ಮುನ್ನ ಮೂರು ದಶಕಗಳ ಹಿಂದಿನ ಕೊರಗರ ಬದುಕನ್ನು ಹೋಲಿಸಿಕೊಂಡರೆ ಸಂಘಟನೆಗಳ ಕೆಲಸದಿಂದ ತುಂಬಾ ಬದಲಾವಣೆಯಾಗಿದೆ. ಡ್ರಾಪ್‌ಔಟ್ ಆದ ಸಬಿತಾ ಎನ್ನುವ ಕೊರಗರ ಹುಡುಗಿಯೊಬ್ಬಳು ಆಶ್ರಮದ ಹಾಸ್ಟೆಲ್‌ನಲ್ಲಿ ಓದು ಮುಂದುವರಿಸಿ ಇಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದಾರೆ. ಹೀಗೆ ಸಂಘಟನೆಗಳು ಕೊರಗ ಸಮುದಾಯದಲ್ಲಿ ಜಾಗೃತಿ ಮೂಡಿಸಿವೆ. ಹತ್ತಾರು ಜನರು ಸೇರಿ ಈ ಸಂಘಟನೆಗಳ ಕೆಲಸದಲ್ಲಿ ದುಡಿದಿದ್ದೇವೆ, ಅದರಲ್ಲಿ ನನ್ನ ಸಣ್ಣ ಪಾಲಿದೆ. ನಾನು ಸಂಘಟನೆಯಲ್ಲಿದ್ದರೂ ಈತನಕ ಅಧ್ಯಕ್ಷೆ ಆಗಿರಲಿಲ್ಲ. ಎರಡು ವರ್ಷಕ್ಕೊಮ್ಮೆ ಸಂಘಟನೆಯ ಅಧ್ಯಕ್ಷಗಿರಿ ಬದಲಾಗೋದ್ರಿಂದ ಎಲ್ಲರ ಒತ್ತಾಯದ ಮೇರೆಗೆ ನಾನು ಅಧ್ಯಕ್ಷೆಯಾದೆ, ನಾನು ಅಧ್ಯಕ್ಷೆಯಾದ ಸಂದರ್ಭದಲ್ಲಿಯೇ ಇಂತಹದ್ದೊಂದು ದೊಡ್ಡ ಪ್ರಶಸ್ತಿ ಬಂದಿದೆ. ಅದು ಈತನಕದ ಎಲ್ಲರ ದುಡಿಮೆಗೆ ಸಿಕ್ಕ ಫಲ ಎಂದು ಶಕುಂತಲಾ ಅವರು ಹೇಳುತ್ತಾರೆ. ತಮ್ಮ ಹೋರಾಟ, ಕೊರಗರ ಬದುಕಿನಲ್ಲಾದ ಬದಲಾವಣೆಯ ಬಗ್ಗೆ ನನಗೆ ಅಷ್ಟು ಗೊತ್ತಾಗಲ್ಲ ಸರ್ ಎನ್ನುವ ಮುಗ್ಧತೆಯಲ್ಲಿಯೇ ಮಾತನಾಡುವ ಶಕುಂತಲಾ ಅವರು ಕೊರಗ ಸಮುದಾಯದ ಈಗಿನ ಯುವಜನತೆಗೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...