Homeಮುಖಪುಟಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

ಕೊರೋನವನ್ನಾದರೂ ಓಡಿಸಬಹುದು, ಈ ಅಸ್ಪೃಶ್ಯತೆಯನ್ನು ಓಡಿಸೋಕಾಗಲ್ಲ: ಶಕುಂತಲಾ ಕೊರಗ ನೇಜಾರ್

ಮೂರು ದಶಕಗಳ ಕಾಲ ಕೊರಗರ ಸ್ವಾಭಿಮಾನದ ಬದುಕಿಗಾಗಿ ದುಡಿದ ಮತ್ತು 2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದ ಶಕುಂತಲಾ ಕೊರಗ ನೇಜಾರ್‌ರವರ ಮಾತುಗಳು.

- Advertisement -
- Advertisement -

ಎಲೆಮರೆ-30

  • ಅರುಣ್ ಜೋಳದಕೂಡ್ಲಿಗಿ.

ಫೆಬ್ರವರಿ 11, 2020 ರಂದು ಯುನೈಟೆಡ್ ಅರಬ್ ಎಮಿರೈಟ್ಸ್‌ನ ರಾಜಧಾನಿಯಾದ ಅರೇಬಿಯನ್ ಧ್ವೀಪವೊಂದರಲ್ಲಿರುವ ಅಬುದಾಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಆಯೋಜನೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಉಡುಪಿಯ ನೇಜಾರದ ಕೊರಗ ಸಮುದಾಯದ ಶಕುಂತಲಾ ಅವರು `2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದರು. ಈ ಇದು ಕೊರಗ ಸಮುದಾಯದ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿ ದಾಖಲಾಯಿತು. ಕಾರಣ ಮೊದಲ ಬಾರಿಗೆ ಕೊರಗ ಸಮುದಾಯದ ಮಹಿಳೆಯೊಬ್ಬರು ವಿದೇಶಕ್ಕೆ ತೆರಳಿ ಇಂತಹದ್ದೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯೊಂದನ್ನು ಸ್ವೀಕರಿಸಿದರು. ಈ ಪ್ರಶಸ್ತಿಯ ಜಾಡು ಹಿಡಿದು ಹಿಂದಕ್ಕೆ ನಡೆದರೆ 1987 ರಿಂದ ಕೊರಗ ಸಮುದಾಯದ ಅಭಿವೃದ್ಧಿಗಾಗಿ ದುಡಿದ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆಯು ಕೊರಗ ಸಮುದಾಯದಲ್ಲಿ ಮೂಡಿಸಿದ ಸ್ವಾಭಿಮಾನದ ಕಥನವು ಬಿಚ್ಚಿಕೊಳ್ಳುತ್ತದೆ.

ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಾದುಬರುವುದು ಅಷ್ಟು ಸುಲಭವಲ್ಲ. 195 ದೇಶಗಳ 3000 ಸ್ವಯಂ ಸೇವಾ ಸಂಸ್ಥೆಗಳು ಈ ಪ್ರಶಸ್ತಿಗೆ ಪೈಪೋಟಿ ನಡೆಸಿದ್ದವು. ಅಂತಿಮ ಸುತ್ತಿಗೆ ಆಯ್ಕೆಯಾದ ಹತ್ತು ಸಂಸ್ಥೆಗಳ ಕಾರ್ಯಗಳ ಬಗ್ಗೆ ಸ್ವತಃ ವಿಶ್ವಸಂಸ್ಥೆಯ ಪ್ರತಿನಿಧಿಗಳು ಭೇಟಿನೀಡಿ ಜನರೊಟ್ಟಿಗೆ ಮಾತಾಡಿ, ಸುಧಾರಣ ಕೆಲಸಗಳನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಈ ವರದಿಯನ್ನು ಆಧರಿಸಿ ಅಂತಿಮವಾಗಿ ನಾಲ್ಕು ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಜಾಗತಿಕ ದಕ್ಷಿಣ ವಿಭಾಗದಿಂದ `ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ’ಗೆ ಗೋಲ್ಡನ್ ಪ್ರಶಸ್ತಿ ಲಭಿಸಿತು. ಭಾರತಕ್ಕೆ ಈತನಕ ನಾಲ್ಕು ಬಾರಿ ಮಾತ್ರ ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಬಂದಿದೆ. ವಿಶೇಷವೆಂದರೆ ಈ ಪ್ರಶಸ್ತಿ ಕರ್ನಾಟಕಕ್ಕೆ ಸಿಕ್ಕಿರುವುದು ಇದೇ ಮೊದಲು.

ಹಾಗಾದರೆ ಇಂತಹ ಪ್ರಶಸ್ತಿಗೆ ಭಾಜನವಾದ ಸಂಸ್ಥೆಯ ಕೆಲಸವಾದರೂ ಎಂಥದು ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು 1987 ರಿಂದ ರಾಜ್ಯದ ಬುಡಕಟ್ಟು ಸಮುದಾಯಗಳ ಹಕ್ಕೊತ್ತಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕ ಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಕೊರಗರು, ಹಲಸರು, ಗೊಂಡ, ಮಲೆಕುಡಿಯ, ಹಕ್ಕಿಪಿಕ್ಕಿ, ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ, ಡೋಂಗ್ರಿ ಗರಾಸಿಯ ಈ ಸಮುದಾಯಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಜಾಗೃತಗೊಳಿಸಿ ಸ್ವಾಭಿಮಾನದ ಘನತೆಯ ಬದುಕು ರೂಪಿಸಲು ಶ್ರಮಿಸಿದ್ದಕ್ಕೆ ಈ ಪ್ರಶಸ್ತಿಯು ಲಭಿಸಿದೆ.

ಮುಖ್ಯವಾಗಿ ಸಮುದಾಯಗಳ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಹಕ್ಕು ಕೊಡಿಸುವುದು, ವಸತಿ ಸೌಲಭ್ಯ, ಜೀವನಾಧಾರಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು, ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ಆರೋಗ್ಯದ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಈ ಪ್ರಶಸ್ತಿಯು ಎತ್ತಿ ಹಿಡಿದಿದೆ. ಈ ಕೆಲಸದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಜಂಟಿಯಾಗಿ ಶ್ರಮಿಸಿವೆ. ಇಂತಹ ಜಾಗೃತಿಯ ಚಳವಳಿಯಲ್ಲಿ ಬುಡಕಟ್ಟು ಸಮುದಾಯದ ಸದಸ್ಯರುಗಳು ತೊಡಗಿಸಿಕೊಂಡು ಮೇಲೆ ಬಂದವರಲ್ಲಿ ಶಕುಂತಲಾ ಕೊರಗ ನಜೇರು ಒಬ್ಬರು.

`ಬಾಲ್ಯದಿಂದಲೆ ಕಲ್ಯಾಣಪುರಿ ಗೊರಟ್ಟಿ ಆಸ್ಪತ್ರೆಯಲ್ಲಿ ನಾವು ಬೆಳೆದದ್ದು. ಅಮ್ಮ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಳು. ಹಾಗಾಗಿ ಆಸ್ಪತ್ರೆಯಲ್ಲೆ ಒಂದು ರೂಮು ಕೊಟ್ಟಿದ್ರು. ಹಂಗಾಗಿ ನಾವು ಅಲ್ಲೇ ರ‍್ತಿದ್ವಿ. ಆಗ ಶಾಲೆಗೆ ಹೋಗೋದು ತೊಂದ್ರೆಯೇನು ಆಗಿರಲಿಲ್ಲ. ನಾವು ಒಂದು ದಿನ ಶಾಲೆಗೆ ಹೋಗದೆ ಇದ್ರೆ ಮನೇಲಿ ಯಾಕೆ ಶಾಲೆಗೆ ಹೋಗಿಲ್ಲ ಎಂದು ಕೇಳುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಹೋಗೋಕೆ ಅಷ್ಟು ಆಸಕ್ತಿ ತೋರದೆ ಏಳನೆ ತರಗತಿ ಓದಿ ಅರ್ಧಕ್ಕೆ ಬಿಟ್ಟೆ. ನಂತರ ಬಾರ್ಕೂರ್ ನಲ್ಲಿ ಮದ್ವೆ ಆಯ್ತು. ಗಂಡ ಮೊದಲು ಉಡುಪಿಯಲ್ಲಿ ಸ್ಪೀಪರ್ ಕೆಲಸ ಮಾಡತಿದ್ರು. 1993 ರಲ್ಲಿ ದೊಡ್ಡ ಮಗನ ನಂತರ ಎರಡನೆ ಮಗ ಚಿಕ್ಕವನಿದ್ದ. ಆಗ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ ಬಾರ್ಕೂರಲ್ಲಿ ಸಂಘಟನೆ ಮಾಡೋಕೆ ಬಂದಿದ್ರು. ನಾವು ಮೊದಲು ಸಂಘಟನೆ ಅಂದ್ರೆ ಹೆರ‍್ತಾ ಇದ್ವಿ. ಗಂಡಸರನ್ನು ಮುಂದೆ ಬಿಟ್ಟು ನಾವು ಹಾಗೆ ಹಿಂದೆ ಇದ್ದುಕೊಂಡು ಸಂಘಟನೆಗೆ ಸೇರಿದೆ. ನಾವು ಒಂದೊAದು ಗ್ರಾಮದಲ್ಲಿ ಹತ್ ಮನೆ, ಇಪ್ಪತ್ ಮನೆಗಳಲ್ಲಿ ಮೀಟಿಂಗ್ ಮಾಡಿ ಅವರಲ್ಲಿ ಸಂಘಟನೆ ಮಾಡ್ತಾ ಇದ್ವಿ. ಮೊದಲು ಅಸ್ಪೃಶ್ಯತೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದೆವು’ ಎಂದು ಶಕುಂತಲಾ ಅವರು ತನ್ನ ಹೋರಾಟದ ಹಾದಿಯನ್ನು ನೆನೆಯುತ್ತಾರೆ.

ಶಕುಂತಲಾ ಅವರ ಗಂಡ ಸಂಜೀವ ಕೊರಗ ಕೂಡ ಕೊರಗ ಸಮುದಾಯದ ಜಾಗೃತಿಗಾಗಿ ಬದ್ಧತೆಯಿಂದ ಕೆಲಸ ಮಾಡಿದವರು. ಹಾಗಾಗಿ ಶಕುಂತಲಾ ಅವರ ಚಳವಳಿಯ ಸಾಂಗತ್ಯಕ್ಕೆ ಗಂಡ ಸಂಜೀವರು ಹೆಗಲು ಕೊಟ್ಟಿದ್ದಾರೆ. ಶಕುಂತಲಾ ಏಳನೆಯ ತರಗತಿಯ ತನಕ ಓದಿದರೂ, ಸಂಘಟನೆಗಳು ಕೊಟ್ಟ ಎಚ್ಚರದ ಪರಿಣಾಮ ಇಬ್ಬರು ಮಕ್ಕಳನ್ನು ಉತ್ತಮವಾಗಿ ಓದಿಸಿದ್ದಾರೆ. ದೊಡ್ಡ ಮಗ ಸಂದೀಪ್ ಫಿಸಿಕ್ಸ್ನಲ್ಲಿ ಎಂಎಸ್ಸಿ ಪದವಿ ಪಡೆದು ಈಗ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ಸಣ್ಣ ಮಗ ಸತೀಶ್ ಎಂಟೆಕ್ ಮಾಡಿ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದಾರೆ. ಇವರ ವಿದ್ಯಾಭ್ಯಾಸದ ಹಿಂದೆ ಶಕುಂತಲಾ ಮತ್ತು ಸಂಜೀವ್ ಅವರ ಅವಿರತ ಶ್ರಮವಿದೆ.

`ಶಕುಂತಲಾ ಸುಮಾರು 30 ವರ್ಷಗಳ ಕಾಲ ಕಲ್ಯಾಣಪುರಿ ಗೊರಟ್ಟಿ ಆಸ್ಪತ್ರೆಯಲ್ಲಿ ಆಯಾ ಕೆಲಸ ನಿರ್ವಹಿಸಿ ಈಗ ನಿವೃತ್ತಿ ಪಡೆದು ಪೂರ್ಣಕಾಲೀನ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. 1990 ರಿಂದ ಶಕುಂತಲಾ ಅವರ ಕುಟುಂಬ ಕೊರಗರ ಚಳುವಳಿಯಲ್ಲಿ ತೊಡಗಿಸಿಕೊಂಡಿದೆ. ಬಹಳ ಮುಖ್ಯವಾಗಿ ಕೊರಗರ ಭೂಮಿ ಹೋರಾಟ, ಅಜಲು ನಿಶೇಧ ಕಾಯ್ದೆ ಬರುವುದಕ್ಕಾಗಿನ ಹೋರಾಟ, ಗುಣಮಟ್ಟದ ಪೌಷ್ಟಿಕ ಆಹಾರದ ಹೋರಾಟ, ಕುಡಿತ, ದುಶ್ಚಟಗಳ ವಿರುದ್ಧದ ಹೋರಾಟ, ಮಹಿಳೆಯರ ಸ್ವಾಭಿಮಾನದ ಚಳವಳಿ, ಶಿಕ್ಷಣ, ಆರೋಗ್ಯದ ಕೆಲಸಗಳಲ್ಲಿ ಶಕುಂತಲಾ ಮುಂಚೂಣಿಯಲ್ಲಿದ್ದರು’ ಎಂದು `ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ’ಯ ಅಶೋಕ ಅವರು ಹೇಳುತ್ತಾರೆ.

`ನಾವು ಮೂವತ್ತು ವರ್ಷದಿಂದ ಸಂಘಟನೆಯಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಕೆಲಸ ಮಾಡಿದರೂ, ಇನ್ನೂ ಹಳ್ಳಿ ಕಡೆಗಳಲ್ಲಿ ಕೊರಗರನ್ನು ಅಸ್ಪೃಶ್ಯರನ್ನಾಗಿಯೇ ನೋಡಲಾಗುತ್ತಿದೆ. ಅಸ್ಪೃಶ್ಯತೆಯನ್ನು ಜನರು ಒಳ್ಳೆ ಮೈಂಡಲ್ಲಿ ಇಟ್ಕೊಂಡಿದಾರೆ. ಅದು ಹೇಗೆ ನಾಟಿದೆ ಅಂದರೆ ಈ ಕೊರೋನಾ ಬೇಕಾದರೆ ಓಡಿಸಬಹುದು. ಆದರೆ ಅಸ್ಪೃಶ್ಯತೆಯನ್ನು ಓಡಿಸೋಕೆ ಆಗಲ್ಲ. ಆದರೆ ಸಂಘಟನೆಯ ಆರಂಭಕ್ಕೂ ಮುನ್ನ ಮೂರು ದಶಕಗಳ ಹಿಂದಿನ ಕೊರಗರ ಬದುಕನ್ನು ಹೋಲಿಸಿಕೊಂಡರೆ ಸಂಘಟನೆಗಳ ಕೆಲಸದಿಂದ ತುಂಬಾ ಬದಲಾವಣೆಯಾಗಿದೆ. ಡ್ರಾಪ್‌ಔಟ್ ಆದ ಸಬಿತಾ ಎನ್ನುವ ಕೊರಗರ ಹುಡುಗಿಯೊಬ್ಬಳು ಆಶ್ರಮದ ಹಾಸ್ಟೆಲ್‌ನಲ್ಲಿ ಓದು ಮುಂದುವರಿಸಿ ಇಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದಾರೆ. ಹೀಗೆ ಸಂಘಟನೆಗಳು ಕೊರಗ ಸಮುದಾಯದಲ್ಲಿ ಜಾಗೃತಿ ಮೂಡಿಸಿವೆ. ಹತ್ತಾರು ಜನರು ಸೇರಿ ಈ ಸಂಘಟನೆಗಳ ಕೆಲಸದಲ್ಲಿ ದುಡಿದಿದ್ದೇವೆ, ಅದರಲ್ಲಿ ನನ್ನ ಸಣ್ಣ ಪಾಲಿದೆ. ನಾನು ಸಂಘಟನೆಯಲ್ಲಿದ್ದರೂ ಈತನಕ ಅಧ್ಯಕ್ಷೆ ಆಗಿರಲಿಲ್ಲ. ಎರಡು ವರ್ಷಕ್ಕೊಮ್ಮೆ ಸಂಘಟನೆಯ ಅಧ್ಯಕ್ಷಗಿರಿ ಬದಲಾಗೋದ್ರಿಂದ ಎಲ್ಲರ ಒತ್ತಾಯದ ಮೇರೆಗೆ ನಾನು ಅಧ್ಯಕ್ಷೆಯಾದೆ, ನಾನು ಅಧ್ಯಕ್ಷೆಯಾದ ಸಂದರ್ಭದಲ್ಲಿಯೇ ಇಂತಹದ್ದೊಂದು ದೊಡ್ಡ ಪ್ರಶಸ್ತಿ ಬಂದಿದೆ. ಅದು ಈತನಕದ ಎಲ್ಲರ ದುಡಿಮೆಗೆ ಸಿಕ್ಕ ಫಲ ಎಂದು ಶಕುಂತಲಾ ಅವರು ಹೇಳುತ್ತಾರೆ. ತಮ್ಮ ಹೋರಾಟ, ಕೊರಗರ ಬದುಕಿನಲ್ಲಾದ ಬದಲಾವಣೆಯ ಬಗ್ಗೆ ನನಗೆ ಅಷ್ಟು ಗೊತ್ತಾಗಲ್ಲ ಸರ್ ಎನ್ನುವ ಮುಗ್ಧತೆಯಲ್ಲಿಯೇ ಮಾತನಾಡುವ ಶಕುಂತಲಾ ಅವರು ಕೊರಗ ಸಮುದಾಯದ ಈಗಿನ ಯುವಜನತೆಗೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...