Homeಅಂಕಣಗಳುಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ...!

ಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ…!

- Advertisement -
- Advertisement -

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟು ಎಂಬ ಪದಪುಂಜ ಅಷ್ಟು ಸರಿಯಲ್ಲ. ಕೊರೊನಾ ಸೋಂಕು ಉದ್ಭವವಾದಾಗ ಅದನ್ನು ನಿಭಾಯಿಸಲಾಗದಂತೆ ನಾವುಗಳು ಸೃಷ್ಟಿಸಿಕೊಂಡಿದ್ದ ಇಕ್ಕಟ್ಟು ಮೂಲ ಸಮಸ್ಯೆಯಾಗಿತ್ತು. ಹಾಗಾಗಿ ಕಣ್ಣಿಗೆ ಕಾಣದ ಮತ್ತು ಪೂರ್ಣ ಜೀವಿಯೂ ಅಲ್ಲದ ವೈರಸ್ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತು. ಅಂದರೆ ಇದು ವೈರಸ್‍ನ ಶಕ್ತಿ ಎನ್ನುವುದಕ್ಕಿಂತ ನಮ್ಮ ದೌರ್ಬಲ್ಯ ಇದಕ್ಕೆಲ್ಲಾ ಕಾರಣವಾಯಿತು. ಈ ಕುರಿತು ಮತ್ತಷ್ಟು ಆಳ ಹಾಗೂ ಒಳನೋಟಗಳನ್ನು ಹೆಕ್ಕುವ ಅಗತ್ಯವಿದೆ. ಆದರೆ, ಇಂದು ಕೊರೊನಾ ಇನ್ನೂ ವ್ಯಾಪಕವಾಗುತ್ತಿರುವಾಗಲೇ ‘ಪುನರ್ ನಿರ್ಮಾಣ’ದ ಕೆಲಸವೂ ಶುರುವಾಗಬೇಕಿರುವುದರಿಂದ ಕೆಲವು ಪ್ರಾಥಮಿಕ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸಿದೆ.

ನಾವು ಮನಸ್ಸು ಮಾಡಿದಲ್ಲಿ ಈ ಸಂದರ್ಭವನ್ನೇ ನಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಸದವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ.

ಲೋಕಲ್, ಗ್ಲೋಬಲ್ ನಡುವೆ ಇರಬೇಕಾದ ಸಮತೋಲನ

ಮೊನ್ನೆ ಮಾತನಾಡುವಾಗ ಪ್ರಧಾನಿಗಳು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸ್ಥಳೀಯವಾದುದರ ಕುರಿತು ಮಾತು ಹೆಚ್ಚು; ಮಾಡುವುದೆಲ್ಲಾ ಅದಕ್ಕೆ ತದ್ವಿರುದ್ಧ ಎನ್ನುವುದು ಪ್ರಧಾನಿಗಳಿಗೆ ಮಾತ್ರ ಸೀಮಿತ ವಲ್ಲ. ಅದನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಜೊತೆಗೆ ನಮ್ಮದು 100% ಲೋಕಲ್ ಎಂದು ಹೇಳುವ ಸಾಧ್ಯತೆಯೂ ಇರದಾಗ, ಎರಡರ ನಡುವೆ ಇರಬೇಕಾದ ಸಮತೋಲನದ ಬಗ್ಗೆ ಚರ್ಚಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹಾಗೆ ಮಾಡದೇ ಹೇಳೋದೊಂದು ಮಾಡೋದೊಂದು ಆಷಾಢಭೂತಿತನದಿಂದ ಹಾನಿಯೇ ಹೆಚ್ಚು. ಬಹಳ ಹಳೆಯದಾದ ‘ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ’ (ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ಕ್ರಿಯಾಶೀಲರಾಗಿ) ಈಗಲೂ ಪ್ರಸ್ತುತ.

ಆರ್ಥಿಕತೆ ಪುನರ್ ಕಟ್ಟಿಕೊಳ್ಳುವ ಬಗೆ

ಬಂಡವಾಳ ಹೂಡಿಕೆ ಮಾಡಬಲ್ಲವರೇ ಸಂಪತ್ತನ್ನು ಸೃಷ್ಟಿಸುವವರು ಮತ್ತು ಉದ್ಯೋಗ ಕೊಡುವವರು ಎಂಬ ಥಿಯರಿ ಚಾಲ್ತಿಯಲ್ಲಿದೆ. ತಮ್ಮನ್ನು ತಾವು ಅನ್ನದಾತರು ಎಂದು ಕರೆದುಕೊಂಡು ಕರ್ನಾಟಕದ ಮಾಲೀಕರ ಸಂಘದವರು ಸರ್ಕಾರಕ್ಕೆ ಬರೆದ ಪತ್ರ ನೋಡಿದರೆ ಗೊತ್ತಾಗುತ್ತದೆ. ಆದರೆ, ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೊರಹೋಗದಿರಲಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದ ಬಿಲ್ಡರ್‍ಗಳು ‘ಕಾರ್ಮಿಕರಿಲ್ಲದೇ ಕೆಲಸವಾಗಲ್ಲ’ ಎಂಬುದನ್ನು ನಿರೂಪಿಸಿದ್ದಾರೆ. ‘ನಾವು ಬಡವಾಗುತ್ತಿದ್ದೇವೆ, 8 ಗಂಟೆಯ ಬದಲು 12 ಗಂಟೆ ಕೆಲಸ ಮಾಡಲು ಕಾನೂನು ತಿದ್ದುಪಡಿ ತನ್ನಿ’ ಎಂದು ಹೇಳಿದವರೂ ಸಹಾ ದುಡಿಮೆಗಾರರೇ ಸಂಪತ್ತನ್ನು ಸೃಷ್ಟಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದಾರೆ.

ಇವರು ದುಡಿಮೆಗಾರರು ಮಾತ್ರವಲ್ಲಾ, ಗ್ರಾಹಕರೂ ಸಹಾ. ಈ ಕೋಟಿ ಕೋಟಿ ಜನ ಅಲ್ಪಸ್ವಲ್ಪ ಕೊಳ್ಳುವಿಕೆಯೇ ಆರ್ಥಿಕತೆಯನ್ನು ತಳದಿಂದ ಮೇಲಿನವರೆಗೆ ಚಾಲ್ತಿಯಲ್ಲಿಡುತ್ತದೆ ಎಂಬುದೂ ಪದೇ ಪದೇ ಸಾಬೀತಾಗುತ್ತಿದೆ. ಹೀಗಿರುವಾಗ ಆರ್ಥಿಕತೆಯನ್ನು ಕಟ್ಟಬೇಕಾದ್ದು ತಳದಿಂದ ಮೇಲಕ್ಕೆ ಎಂಬುದರಲ್ಲಿ ಸಂಶಯವೇ ಇಲ್ಲ. ಈಗ ಬರಬೇಕಿರುವ ಎಲ್ಲಾ ಪ್ಯಾಕೇಜುಗಳು, ನೀತಿ ನಿರೂಪಣೆಗಳು ಅದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದುವರೆಗೆ ಕೆಲಸ ಮಾಡದಿರುವ ಮೇಲಿನಿಂದ ಕಟ್ಟುವ ಥಿಯರಿಗಳನ್ನು ಈಗಾದರೂ ಕಸದ ಬುಟ್ಟಿಗೆ ಹಾಕಬೇಕು.

ಮನುಷ್ಯ ನಿರ್ಮಿತ ಜಾತಿ, ಧರ್ಮಗಳನ್ನು ನಿವಾರಿಸಿಕೊಂಡು ಮನುಷ್ಯರಾಗುವುದು

ವೈರಸ್ಸು ಪ್ರಾಣಿಗಳನ್ನೂ, ಪ್ರಾಣಿಗಳ ನಂತರ ಮನುಷ್ಯರನ್ನೂ ಆವರಿಸಿಕೊಳ್ಳುತ್ತಿದೆ. ಪ್ರಾಣಿ ಸಂಕುಲವನ್ನೇ ಬಿಡದೇ ಇರುವುದು, ಮನುಷ್ಯರನ್ನೆಲ್ಲಾ ಒಂದು ಪ್ರಬೇಧದಂತೆ ಪರಿಗಣಿಸುತ್ತದೆ ಅಷ್ಟೇ. ಒಂದೇ ಧರ್ಮದವರು ವಾಸಿಸುವ ಕೆಲವು ದೇಶಗಳು ಅತ್ಯುತ್ತಮವಾಗಿ ಈ ಸಂದರ್ಭವನ್ನು ನಿಭಾಯಿಸಿದ್ದರೆ, ಅದೇ ಧರ್ಮದವರು ಇರುವ ಇನ್ನೊಂದು ದೇಶ ಇಕ್ಕಟ್ಟಿಗೆ ಸಿಕ್ಕಿದೆ. ಘಟನೆಯೊಂದನ್ನು ಇಟ್ಟುಕೊಂಡು ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿದರೆ, ಇನ್ನೊಂದು ಘಟನೆ ಇಟ್ಟುಕೊಂಡು ಮತ್ತೊಂದು ಸಮುದಾಯವನ್ನೂ ದೂಷಿಸಬಹುದು. ಅಂತಿಮವಾಗಿ ಪ್ರಚಾರ ಯುದ್ಧದಲ್ಲಿ ಯಾರು ಗಟ್ಟಿಯೋ ಅವರ ಕೈ ಮೇಲಾಗಲೂಬಹುದು. ಆದರೆ ವೈರಸ್ ಪ್ರಚಾರಕ್ಕೆ ತಕ್ಕಂತೆ ಹರಡುವುದಿಲ್ಲ. ಅದಕ್ಕೆ ಕಣ್ಣು, ಕಿವಿಗಳಿರುವ ಕುರಿತು ಪುರಾವೆಗಳಿಲ್ಲ. ಹಾಗಾಗಿ ಜಾತಿ, ಧರ್ಮಗಳ ಗೋಡೆಗಳು ಹಾಗೂ ತಾರತಮ್ಯಗಳನ್ನು ನಿವಾರಿಸಿಕೊಳ್ಳುವ ಕುರಿತು ಮನುಷ್ಯರು ಆಲೋಚಿಸಲು ಈ ಸಂದರ್ಭ ಕಾರಣವಾಗಬಹುದೇ?

ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮೂಲಭೂತ ಬದಲಾವಣೆ

ಅಗೋಚರವಾದ ಅರೆಜೀವಿಯೊಂದು ನಮ್ಮನ್ನು ಹೀಗೆಲ್ಲಾ ಮಾಡಬಹುದಾದರೆ ಬದುಕಿರುವಷ್ಟು ದಿನ ಏನು ಮಾಡಬೇಕೆಂದು ಮನುಷ್ಯರು ಯೋಚಿಸಬೇಕಲ್ಲವೇ? ಬ್ರಹ್ಮಾಂಡವೆಲ್ಲವನ್ನೂ ಶೋಧಿಸಿ, ಪಾತಾಳವನ್ನೂ ಬಗೆದು ಸಾಮ್ರಾಜ್ಯ ವಿಸ್ತರಿಸುತ್ತಿರುವ ಮನುಷ್ಯರು ಇಷ್ಟು ಕ್ಷುಲ್ಲಕವಾಗಿ ಸೋತು ನಿಂತಿದ್ದಾರೆ. ಈ ಕ್ಷಣದವರೆಗೂ ಕೊರೊನಾ ಸೋಂಕನ್ನು ಹೀಗ್ಹೀಗೇ ನಿಭಾಯಿಸಲು ಸಾಧ್ಯ ಎಂಬ ಅಂತಿಮ ಷರಾ ಬರೆಯಲು ಯಾವ ದೇಶಕ್ಕೂ ಆಗಿಲ್ಲ. ಮಹಾಮಹಿಮರೂ ಊಹೆಗಳನ್ನು ಮಾಡುತ್ತಿದ್ದಾರೆ. ಭಾರೀ ಭಾರೀ ತಜ್ಞರೂ ವಿರುದ್ಧ ದಿಕ್ಕಿನ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಮಾಸ್ಕ್‍ನ ಅಗತ್ಯವಿಲ್ಲ; ಮಾಸ್ಕೇ ಮೂಲಮಂತ್ರ. ಲಾಕ್‍ಡೌನ್ ಏಕೈಕ ಪರಿಹಾರ; ಲಾಕ್‍ಡೌನ್‍ನಿಂದ ನಷ್ಟವೇ ಹೆಚ್ಚು. ಒಂದೇ ವಾತಾವರಣವಿರುವ ಎರಡು ದೇಶಗಳ ಮಧ್ಯೆ ವೈರಸ್ ಭಿನ್ನ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇದು ಕಾರಣ; ಅಲ್ಲ ಅದು ಕಾರಣವಲ್ಲ. ಕೇವಲ ಕಪ್ಪು ಬಿಳುಪು ಮಾತ್ರವಲ್ಲದೇ, ವಿವಿಧ ವರ್ಣಗಳ ವೈರುಧ್ಯಗಳೂ ಇವೆ.

ಅಂದ ಮೇಲೆ, ಮನುಷ್ಯ ಸಮಾಜದ ಸಾವಿರಾರು ವರ್ಷಗಳ ಜ್ಞಾನಕ್ಕೆ ಈ ಪರಿ ಮಿತಿಯಿದೆಯೇ? ಇದು ಎಲ್ಲರಲ್ಲಿ ವಿನಮ್ರ ಭಾವವೊಂದನ್ನು ಮೂಡಿಸಿದರೆ ಪ್ರಕೃತಿಯೊಂದಿಗೆ ಸೇರಿ ಬಾಳುವ ಹೊಸ ನಾಗರಿಕತೆಯತ್ತ ಪ್ರಪಂಚವನ್ನು ಕರೆದೊಯ್ಯಬಹುದು.

ಆದರೆ ಇವೆಲ್ಲಕ್ಕೂ ಈ ದಿಕ್ಕಿನತ್ತ ಮನಸ್ಸು ಮಾಡಬೇಕು. ಇಲ್ಲದಿದ್ದರೆ ವಿನಾಶದ ಮತ್ತೊಂದು ದಾರಿಯತ್ತಲೂ ಹೋಗುವ ಅವಕಾಶ ಹೇಗೂ ಇದ್ದೇ ಇದೆ. ಹೆಚ್ಚಿನ ಜನರು ಮನುಷ್ಯರಾಗಿ ಯೋಚಿಸುತ್ತಾರೆಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...