Homeಅಂಕಣಗಳುಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ...!

ಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ…!

- Advertisement -
- Advertisement -

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟು ಎಂಬ ಪದಪುಂಜ ಅಷ್ಟು ಸರಿಯಲ್ಲ. ಕೊರೊನಾ ಸೋಂಕು ಉದ್ಭವವಾದಾಗ ಅದನ್ನು ನಿಭಾಯಿಸಲಾಗದಂತೆ ನಾವುಗಳು ಸೃಷ್ಟಿಸಿಕೊಂಡಿದ್ದ ಇಕ್ಕಟ್ಟು ಮೂಲ ಸಮಸ್ಯೆಯಾಗಿತ್ತು. ಹಾಗಾಗಿ ಕಣ್ಣಿಗೆ ಕಾಣದ ಮತ್ತು ಪೂರ್ಣ ಜೀವಿಯೂ ಅಲ್ಲದ ವೈರಸ್ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತು. ಅಂದರೆ ಇದು ವೈರಸ್‍ನ ಶಕ್ತಿ ಎನ್ನುವುದಕ್ಕಿಂತ ನಮ್ಮ ದೌರ್ಬಲ್ಯ ಇದಕ್ಕೆಲ್ಲಾ ಕಾರಣವಾಯಿತು. ಈ ಕುರಿತು ಮತ್ತಷ್ಟು ಆಳ ಹಾಗೂ ಒಳನೋಟಗಳನ್ನು ಹೆಕ್ಕುವ ಅಗತ್ಯವಿದೆ. ಆದರೆ, ಇಂದು ಕೊರೊನಾ ಇನ್ನೂ ವ್ಯಾಪಕವಾಗುತ್ತಿರುವಾಗಲೇ ‘ಪುನರ್ ನಿರ್ಮಾಣ’ದ ಕೆಲಸವೂ ಶುರುವಾಗಬೇಕಿರುವುದರಿಂದ ಕೆಲವು ಪ್ರಾಥಮಿಕ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆನಿಸಿದೆ.

ನಾವು ಮನಸ್ಸು ಮಾಡಿದಲ್ಲಿ ಈ ಸಂದರ್ಭವನ್ನೇ ನಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಸದವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ.

ಲೋಕಲ್, ಗ್ಲೋಬಲ್ ನಡುವೆ ಇರಬೇಕಾದ ಸಮತೋಲನ

ಮೊನ್ನೆ ಮಾತನಾಡುವಾಗ ಪ್ರಧಾನಿಗಳು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸ್ಥಳೀಯವಾದುದರ ಕುರಿತು ಮಾತು ಹೆಚ್ಚು; ಮಾಡುವುದೆಲ್ಲಾ ಅದಕ್ಕೆ ತದ್ವಿರುದ್ಧ ಎನ್ನುವುದು ಪ್ರಧಾನಿಗಳಿಗೆ ಮಾತ್ರ ಸೀಮಿತ ವಲ್ಲ. ಅದನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಜೊತೆಗೆ ನಮ್ಮದು 100% ಲೋಕಲ್ ಎಂದು ಹೇಳುವ ಸಾಧ್ಯತೆಯೂ ಇರದಾಗ, ಎರಡರ ನಡುವೆ ಇರಬೇಕಾದ ಸಮತೋಲನದ ಬಗ್ಗೆ ಚರ್ಚಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹಾಗೆ ಮಾಡದೇ ಹೇಳೋದೊಂದು ಮಾಡೋದೊಂದು ಆಷಾಢಭೂತಿತನದಿಂದ ಹಾನಿಯೇ ಹೆಚ್ಚು. ಬಹಳ ಹಳೆಯದಾದ ‘ಥಿಂಕ್ ಗ್ಲೋಬಲಿ, ಆಕ್ಟ್ ಲೋಕಲಿ’ (ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ಕ್ರಿಯಾಶೀಲರಾಗಿ) ಈಗಲೂ ಪ್ರಸ್ತುತ.

ಆರ್ಥಿಕತೆ ಪುನರ್ ಕಟ್ಟಿಕೊಳ್ಳುವ ಬಗೆ

ಬಂಡವಾಳ ಹೂಡಿಕೆ ಮಾಡಬಲ್ಲವರೇ ಸಂಪತ್ತನ್ನು ಸೃಷ್ಟಿಸುವವರು ಮತ್ತು ಉದ್ಯೋಗ ಕೊಡುವವರು ಎಂಬ ಥಿಯರಿ ಚಾಲ್ತಿಯಲ್ಲಿದೆ. ತಮ್ಮನ್ನು ತಾವು ಅನ್ನದಾತರು ಎಂದು ಕರೆದುಕೊಂಡು ಕರ್ನಾಟಕದ ಮಾಲೀಕರ ಸಂಘದವರು ಸರ್ಕಾರಕ್ಕೆ ಬರೆದ ಪತ್ರ ನೋಡಿದರೆ ಗೊತ್ತಾಗುತ್ತದೆ. ಆದರೆ, ಬೆಂಗಳೂರಿನಿಂದ ವಲಸೆ ಕಾರ್ಮಿಕರು ಹೊರಹೋಗದಿರಲಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದ ಬಿಲ್ಡರ್‍ಗಳು ‘ಕಾರ್ಮಿಕರಿಲ್ಲದೇ ಕೆಲಸವಾಗಲ್ಲ’ ಎಂಬುದನ್ನು ನಿರೂಪಿಸಿದ್ದಾರೆ. ‘ನಾವು ಬಡವಾಗುತ್ತಿದ್ದೇವೆ, 8 ಗಂಟೆಯ ಬದಲು 12 ಗಂಟೆ ಕೆಲಸ ಮಾಡಲು ಕಾನೂನು ತಿದ್ದುಪಡಿ ತನ್ನಿ’ ಎಂದು ಹೇಳಿದವರೂ ಸಹಾ ದುಡಿಮೆಗಾರರೇ ಸಂಪತ್ತನ್ನು ಸೃಷ್ಟಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದಾರೆ.

ಇವರು ದುಡಿಮೆಗಾರರು ಮಾತ್ರವಲ್ಲಾ, ಗ್ರಾಹಕರೂ ಸಹಾ. ಈ ಕೋಟಿ ಕೋಟಿ ಜನ ಅಲ್ಪಸ್ವಲ್ಪ ಕೊಳ್ಳುವಿಕೆಯೇ ಆರ್ಥಿಕತೆಯನ್ನು ತಳದಿಂದ ಮೇಲಿನವರೆಗೆ ಚಾಲ್ತಿಯಲ್ಲಿಡುತ್ತದೆ ಎಂಬುದೂ ಪದೇ ಪದೇ ಸಾಬೀತಾಗುತ್ತಿದೆ. ಹೀಗಿರುವಾಗ ಆರ್ಥಿಕತೆಯನ್ನು ಕಟ್ಟಬೇಕಾದ್ದು ತಳದಿಂದ ಮೇಲಕ್ಕೆ ಎಂಬುದರಲ್ಲಿ ಸಂಶಯವೇ ಇಲ್ಲ. ಈಗ ಬರಬೇಕಿರುವ ಎಲ್ಲಾ ಪ್ಯಾಕೇಜುಗಳು, ನೀತಿ ನಿರೂಪಣೆಗಳು ಅದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದುವರೆಗೆ ಕೆಲಸ ಮಾಡದಿರುವ ಮೇಲಿನಿಂದ ಕಟ್ಟುವ ಥಿಯರಿಗಳನ್ನು ಈಗಾದರೂ ಕಸದ ಬುಟ್ಟಿಗೆ ಹಾಕಬೇಕು.

ಮನುಷ್ಯ ನಿರ್ಮಿತ ಜಾತಿ, ಧರ್ಮಗಳನ್ನು ನಿವಾರಿಸಿಕೊಂಡು ಮನುಷ್ಯರಾಗುವುದು

ವೈರಸ್ಸು ಪ್ರಾಣಿಗಳನ್ನೂ, ಪ್ರಾಣಿಗಳ ನಂತರ ಮನುಷ್ಯರನ್ನೂ ಆವರಿಸಿಕೊಳ್ಳುತ್ತಿದೆ. ಪ್ರಾಣಿ ಸಂಕುಲವನ್ನೇ ಬಿಡದೇ ಇರುವುದು, ಮನುಷ್ಯರನ್ನೆಲ್ಲಾ ಒಂದು ಪ್ರಬೇಧದಂತೆ ಪರಿಗಣಿಸುತ್ತದೆ ಅಷ್ಟೇ. ಒಂದೇ ಧರ್ಮದವರು ವಾಸಿಸುವ ಕೆಲವು ದೇಶಗಳು ಅತ್ಯುತ್ತಮವಾಗಿ ಈ ಸಂದರ್ಭವನ್ನು ನಿಭಾಯಿಸಿದ್ದರೆ, ಅದೇ ಧರ್ಮದವರು ಇರುವ ಇನ್ನೊಂದು ದೇಶ ಇಕ್ಕಟ್ಟಿಗೆ ಸಿಕ್ಕಿದೆ. ಘಟನೆಯೊಂದನ್ನು ಇಟ್ಟುಕೊಂಡು ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿದರೆ, ಇನ್ನೊಂದು ಘಟನೆ ಇಟ್ಟುಕೊಂಡು ಮತ್ತೊಂದು ಸಮುದಾಯವನ್ನೂ ದೂಷಿಸಬಹುದು. ಅಂತಿಮವಾಗಿ ಪ್ರಚಾರ ಯುದ್ಧದಲ್ಲಿ ಯಾರು ಗಟ್ಟಿಯೋ ಅವರ ಕೈ ಮೇಲಾಗಲೂಬಹುದು. ಆದರೆ ವೈರಸ್ ಪ್ರಚಾರಕ್ಕೆ ತಕ್ಕಂತೆ ಹರಡುವುದಿಲ್ಲ. ಅದಕ್ಕೆ ಕಣ್ಣು, ಕಿವಿಗಳಿರುವ ಕುರಿತು ಪುರಾವೆಗಳಿಲ್ಲ. ಹಾಗಾಗಿ ಜಾತಿ, ಧರ್ಮಗಳ ಗೋಡೆಗಳು ಹಾಗೂ ತಾರತಮ್ಯಗಳನ್ನು ನಿವಾರಿಸಿಕೊಳ್ಳುವ ಕುರಿತು ಮನುಷ್ಯರು ಆಲೋಚಿಸಲು ಈ ಸಂದರ್ಭ ಕಾರಣವಾಗಬಹುದೇ?

ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮೂಲಭೂತ ಬದಲಾವಣೆ

ಅಗೋಚರವಾದ ಅರೆಜೀವಿಯೊಂದು ನಮ್ಮನ್ನು ಹೀಗೆಲ್ಲಾ ಮಾಡಬಹುದಾದರೆ ಬದುಕಿರುವಷ್ಟು ದಿನ ಏನು ಮಾಡಬೇಕೆಂದು ಮನುಷ್ಯರು ಯೋಚಿಸಬೇಕಲ್ಲವೇ? ಬ್ರಹ್ಮಾಂಡವೆಲ್ಲವನ್ನೂ ಶೋಧಿಸಿ, ಪಾತಾಳವನ್ನೂ ಬಗೆದು ಸಾಮ್ರಾಜ್ಯ ವಿಸ್ತರಿಸುತ್ತಿರುವ ಮನುಷ್ಯರು ಇಷ್ಟು ಕ್ಷುಲ್ಲಕವಾಗಿ ಸೋತು ನಿಂತಿದ್ದಾರೆ. ಈ ಕ್ಷಣದವರೆಗೂ ಕೊರೊನಾ ಸೋಂಕನ್ನು ಹೀಗ್ಹೀಗೇ ನಿಭಾಯಿಸಲು ಸಾಧ್ಯ ಎಂಬ ಅಂತಿಮ ಷರಾ ಬರೆಯಲು ಯಾವ ದೇಶಕ್ಕೂ ಆಗಿಲ್ಲ. ಮಹಾಮಹಿಮರೂ ಊಹೆಗಳನ್ನು ಮಾಡುತ್ತಿದ್ದಾರೆ. ಭಾರೀ ಭಾರೀ ತಜ್ಞರೂ ವಿರುದ್ಧ ದಿಕ್ಕಿನ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಮಾಸ್ಕ್‍ನ ಅಗತ್ಯವಿಲ್ಲ; ಮಾಸ್ಕೇ ಮೂಲಮಂತ್ರ. ಲಾಕ್‍ಡೌನ್ ಏಕೈಕ ಪರಿಹಾರ; ಲಾಕ್‍ಡೌನ್‍ನಿಂದ ನಷ್ಟವೇ ಹೆಚ್ಚು. ಒಂದೇ ವಾತಾವರಣವಿರುವ ಎರಡು ದೇಶಗಳ ಮಧ್ಯೆ ವೈರಸ್ ಭಿನ್ನ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇದು ಕಾರಣ; ಅಲ್ಲ ಅದು ಕಾರಣವಲ್ಲ. ಕೇವಲ ಕಪ್ಪು ಬಿಳುಪು ಮಾತ್ರವಲ್ಲದೇ, ವಿವಿಧ ವರ್ಣಗಳ ವೈರುಧ್ಯಗಳೂ ಇವೆ.

ಅಂದ ಮೇಲೆ, ಮನುಷ್ಯ ಸಮಾಜದ ಸಾವಿರಾರು ವರ್ಷಗಳ ಜ್ಞಾನಕ್ಕೆ ಈ ಪರಿ ಮಿತಿಯಿದೆಯೇ? ಇದು ಎಲ್ಲರಲ್ಲಿ ವಿನಮ್ರ ಭಾವವೊಂದನ್ನು ಮೂಡಿಸಿದರೆ ಪ್ರಕೃತಿಯೊಂದಿಗೆ ಸೇರಿ ಬಾಳುವ ಹೊಸ ನಾಗರಿಕತೆಯತ್ತ ಪ್ರಪಂಚವನ್ನು ಕರೆದೊಯ್ಯಬಹುದು.

ಆದರೆ ಇವೆಲ್ಲಕ್ಕೂ ಈ ದಿಕ್ಕಿನತ್ತ ಮನಸ್ಸು ಮಾಡಬೇಕು. ಇಲ್ಲದಿದ್ದರೆ ವಿನಾಶದ ಮತ್ತೊಂದು ದಾರಿಯತ್ತಲೂ ಹೋಗುವ ಅವಕಾಶ ಹೇಗೂ ಇದ್ದೇ ಇದೆ. ಹೆಚ್ಚಿನ ಜನರು ಮನುಷ್ಯರಾಗಿ ಯೋಚಿಸುತ್ತಾರೆಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...