Homeಅಂಕಣಗಳುಇದನ್ನು ನಮಸ್ತೆ ಟ್ರಂಪ್ ವೈರಸ್ ಅಂತ ಯಾಕೆ ಕರೀತಿಲ್ಲ?

ಇದನ್ನು ನಮಸ್ತೆ ಟ್ರಂಪ್ ವೈರಸ್ ಅಂತ ಯಾಕೆ ಕರೀತಿಲ್ಲ?

- Advertisement -
- Advertisement -

ಮಹಾಭಾರತದ ಪರೀಕ್ಷಿತನ ಕತೆ ಎಲ್ಲಾರಿಗೂ ಗೊತ್ತು. ಅಜ್ಞಾತವಾಸದ ಕಾಲದಾಗ ಅರ್ಜುನ ವಿರಾಟರಾಜನ ಮಗಳು ಉತ್ತರಾಗ ಭರತನಾಟ್ಯ ಕಲಿಸತಾನ. ಒಂದು ವರ್ಷದ ನಂತರ ಅವಳನ್ನ ಸೊಸೆಯಾಗಿ ಮಾಡಿಕೋತಾನ. ಅವಳ ಮಗ ಪರೀಕ್ಷಿತ. ಧರ್ಮರಾಜನ ನಂತರ ಅವನೇ ಹಸ್ತಿನಾಪುರದ ರಾಜ. “ನಿನ್ನ ಸಾವು ಹಾವಿನ ವಿಷದಿಂದ” ಅಂತ ಹೇಳಿ ಅವನಿಗೆ ಋಷಿಯೊಬ್ಬ ಶಾಪ ಕೊಡತಾನ. ಪರೀಕ್ಷಿತ ಹೆದರಿ ತನ್ನ ದೇಶದ ಎಲ್ಲಾ ಹಾವುಗಳನ್ನು ಕೊಲ್ಲಲಿಕ್ಕೆ ಸರ್ಪ ಸಂಹಾರ ಯಾಗ ಮಾಡತಾನ. ಆದರೂ ಸಹಿತ ಹಾವುಗಳ ರಾಜ ತಕ್ಷಕ ಒಂದು ಸಣ್ಣ ಕ್ರಿಮಿಯಾಗಿ ಅವನು ತಿನ್ನೋ ಹಣ್ಣಿನೊಳಗ ಸೇರಿಕೊಂಡು ಆತನ್ನ ಕೊಲ್ಲತಾನ.

ಆ ಹಣ್ಣು ತಿನ್ನೋ ಮುಂಚೆ ಆ ರಾಜ ಅದನ್ನ ಪರೀಕ್ಷೆ ಮಾಡಿದ್ದರ ಅವನ ಜೀವಾ ಉಳೀತಿತ್ತು ಅಂತ ಒಂದೊಂದು ಸರ್ತಿ ಅನ್ನಸತದ.
ಇದು ಯಾಕ ನೆನಪು ಮಾಡಬೇಕಾತು ಅಂದರ ಈ ಕಿರೀಟಿ ವೈರಸ್ಸಿನ ಸಂಕಟದೊಳಗ ನಮ್ಮ ಸರಕಾರದ ಮೇಲೆ ಇರೋ ಆರೋಪ ಏನಂದರ ಅದು ಎಷ್ಟು ಬೇಕೋ ಅಷ್ಟು ಪರೀಕ್ಷೆ ಮಾಡತಾ ಇಲ್ಲಾ ಅಂತ. ಒಂದು ನೂರಾ ಮೂವತ್ತು ಕೋಟಿ ಜನಾ ಇರೋ ಈ ದೇಶದೊಳಗ ಬರೇ ಹದಿಮೂರು ಲಕ್ಷ ಪರೀಕ್ಷೆ ಆಗಿದಾವು. ಖರೇ ಹೇಳಬೇಕಂದರ ಒಂದು ದಿನಕ್ಕ ಹತ್ತು ಲಕ್ಷದ ಲೆಕ್ಕದಾಗ ನೂರು ದಿನಕ್ಕ ಹತ್ತು ಕೋಟಿ ಪರೀಕ್ಷೆ ಆಗಬೇಕಿತ್ತು ಅಂತ ತಜ್ಞರ ಅಂಬೋಣ.

ನೀವು ಯಾಕ ಮಾಡತಿಲ್ಲಾ ಅಂತ ಯಾರನ್ನೂ ಕೇಳಂಗಿಲ್ಲ. ಯಾರನ್ನ ಕೇಳತೀರಿ? ಅಧಿಕಾರಿನ್ನ ಕೇಳಿದರ ರಾಜಕಾರಣಿ ಕಡೆ ತೋರಸತಾರ. ರಾಜಕಾರಣಿ ಪ್ರಧಾನಿ ಕಚೇರಿ ಕಡೆ ತೋರಸತಾರ. ಅಲ್ಲಿ ನೋಡಿದರೆ ಪಂತ ಪ್ರಧಾನರು ಬಾಯಿಗೆ ಶಾಲು ಕಟ್ಟಿಕೊಂಡು ಕೂತಾರ.

ಸರಕಾರ ಯಾಕ ಪರೀಕ್ಷೆ ಹೆಚ್ಚು ಮಾಡತಾ ಇಲ್ಲ? ಯಾಕಂದರ ಒಂದು ಪರೀಕ್ಷೆಗೆ ಸುಮಾರು 5,000 ರೂಪಾಯಿ ಬೇಕಾಗತದ. ಎಲ್ಲರಿಗೂ ಮಾಡೋವಷ್ಟು ನಮ್ಮಲ್ಲೆ ದುಡ್ಡು ಇಲ್ಲ. ಇದ್ದರೂ ನಾವು ಮಾಡಂಗಿಲ್ಲ. ಯಾಕಂದ್ರ ಪೋಲಿಯೋದ ಗತೆ ಮನಿ – ಮನೀಗೆ ಹೋಗಿ ಮಾಡಿದರ ಜನಾ ಹೆದರಿಕೋತಾರ ಅಂತ ನಮ್ಮನ್ನಾಳುವವರು ಹೇಳಿಕೋತ ಹೊಂಟಾರ.

ಆದರ ಈ ಅಸಹಾಯಕ ಉತ್ತರದ ಹಿಂದ ಒಂದು ಕುತಂತ್ರ ಇದ್ದಂಗ ಕಾಣತದ. ಇವರು ಕೊರೋನಾ ಪರೀಕ್ಷೆಯನ್ನ ಸಹಿತ ರಾಜಕೀಯ ತಂತ್ರ ಮಾಡಿಕೊಂಡಂಗ ಕಾಣತಾರ. ದೆಹಲಿ ನಿಜಾಮುದ್ದೀನಿಗೆ ಹೋದ ಮುಸ್ಲೀಮರು ಇದನ್ನು ಹಬ್ಬಿಸಿದರು ಅಂತ ಹೇಳಿ ಜನರನ್ನ ಮುಸ್ಲೀಮರ ವಿರುದ್ಧ ಎತ್ತಿ ಕಟ್ಟೋದು, ಅಲ್ಲಿಗೆ ಹೋಗಿ ಬಂದವರ ಮೊದಲನೇ ಹಾಗೂ ಎರಡನೇ ಸಂಪರ್ಕಕ್ಕ ಬಂದ ವ್ಯಕ್ತಿಗಳನ್ನ ಅಷ್ಟ ಪರೀಕ್ಷೆ ಮಾಡೋದು, ಇದು ನಡದು ಬಿಟ್ಟದ. ಆ ಮುಸ್ಲೀಮರು ಇರೋ ಪ್ರದೇಶಗಳನ್ನ ಕಂಟೇನಮೆಂಟು ಜೋನ್ ಅಂತ ಮಾಡಿ ಅಲ್ಲಿ ಸೀಲ್ ಡೌನು ಮಾಡಿ ಅವರಿಗೆ ನೀರು- ನಿಡಿ ಸಿಗಲಾರದ ಹಂಗ ಮಾಡೋದು. ಅದರ ಬಗ್ಗೆ ಎಲ್ಲರಿಗೂ ಒಂದು ಕೆಟ್ಟ ಭಾವನಾ ಬಂದು ಮೈಲಿಗೆ ಪ್ರದೇಶ ಅಂತ ಮಾಡಿ ಅದರಿಂದ ಎಲ್ಲರೂ ದೂರ ಇರೋ ಹಂಗ ಮಾಡೋದು ಇವರ ಹುನ್ನಾರ ಅಂತ ಅನ್ನಸತದ.

ಇದ ಸರಕಾರ `ನಮಸ್ತೇ ಟ್ರಂಪ’ ಸಮಾರಂಭಕ್ಕೆ ಹೋದವರನ್ನು ಯಾಕ ಪರೀಕ್ಷೆ ಮಾಡತಿಲ್ಲಾ? ಮಾಡಿದರೂ ಕೂಡ ಅಹಮದಾಬಾದಿಗೆ ಹೋಗಿ ಬಂದವರು ಅಂತ ಹೇಳತದ ಹೊರತು, ಟ್ರಂಪ ಸಮಾರಂಭಕ್ಕೆ ಹೋದವರು ಅಂತ ಹೇಳಂಗಿಲ್ಲ. ಅವರ ಮೊದಲನೇ – ಎರಡನೇ ಸಂಪರ್ಕಗಳನ್ನ ಪರೀಕ್ಷೆ ಮಾಡತಾ ಇಲ್ಲ. ಅವರ ಮನೆಗಳನ್ನು ಸೀಲು ‍‍ಡೌನು ಮಾಡಿ ಅದಕ್ಕ ಮೈಲಿಗೆ ಪ್ರದೇಶ ಅಂತ ಹೇಳತಾ ಇಲ್ಲ.

ಜನವರಿಯಿಂದ ಮಾರ್ಚ 24 ರವರಗೆ ಭಾರತಕ್ಕ 20 ಲಕ್ಷ ಜನ ವಿಮಾನಗಳಿಂದ ಬಂದಾರಂತ. ಅವರನ್ನು ಕಡ್ಡಾಯ ಪರೀಕ್ಷೆ ಮಾಡಿಲ್ಲ. ಅವರ ಮೊದಲನೇ ಎರಡನೇ ಸಂಪರ್ಕ ಪರೀಕ್ಷೆ ಮಾಡಿಲ್ಲ. ಅವರ ಪ್ರದೇಶಕ್ಕೆ ಮೈಲಿಗೆ ಅಂಟಿಸಿಲ್ಲ.

ಫೆಬ್ರವರಿ- ಮಾರ್ಚಿ ತಿಂಗಳದಾಗ ಈ ದೇಶದ ಅನೇಕ ಹಳ್ಳಿ- ನಗರದೊಳಗ ಜಾತ್ರಿ- ಉತ್ಸವ- ಹಬ್ಬ ಆಗಿದಾವು, ಅಲ್ಲಿಗೆ ಲಕ್ಷಾಂತರ ಜನಾ ಹೋಗಿ ಬಂದಾರು. ಅವರನ್ನ ಪರೀಕ್ಷೆ ಮಾಡಿಲ್ಲ. ಅವರ ಸಂಪರ್ಕಕ್ಕ ಬಂದವರನ್ನ ಪರೀಕ್ಷೆ ಮಾಡಿಲ್ಲ. ಅವರಿಗೆ ಮೈಲಿಗೆ ಅಂಟಿಸಿಲ್ಲ.

ಬೆಂಗಳೂರು- ಮಂಗಳೂರು- ಬಾಗಲಕೋಟಿಯೊಳಗ ಐಟಿ ಕಂಪನಿ ಉದ್ಯೋಗಿಗಳಿಂದ ಸೋಂಕು ಹರಡೇತಿ. ಅವರಿಗೆ ಐಟಿ ಬಾಂಬ್ ಅಂತ ಹಣೆ ಪಟ್ಟಿ ಕಟ್ಟಿಲ್ಲ. ಅವರಿರೋ ಪ್ರದೇಶಗಳಿಗೆ ಮೈಲಿಗೆ ಅಂಟಿಲ್ಲ.

ಮೈಸೂರಿನ ಕಾರಖಾನೆಗೆ ಚೈನಾದಿಂದ ಸೋಂಕು ಬಂದೇತಿ ಅಂತಾರು. ಅದನ್ನ ಸರಿಯಾಗಿ ತನಿಖೆ ನಡಸಲಿಲ್ಲ. ಚೈನಾದ ಕಂಪನಿಗಳ ಜೊತೆ ವ್ಯಾಪಾರ – ವ್ಯವಹಾರ ನಡೆಸೋ ಸಾವಿರಾರು ಕಂಪನಿಗಳು ಹಳ್ಳಿಹಳ್ಳಿಗಳೊಳಗ ಅದಾವು. ಅವಕ್ಕ ಯಾರು ಮೈಲಿಗೆ ಅಂಟಿಸಿಲ್ಲ.

ಹಂಗಾರ ಸರಕಾರ ಮಾಡತಾ ಇರೋ ಮಸಲತ್ತು ಏನು?

ಐವತ್ತು ದಿವಸ ಅಗದೀ ಕಟ್ಟಾ ಲಾಕ್ ಡೌನ್ ಮಾಡಿ, ಹಾಲು ತರಲಿಕ್ಕೆ ಹೋದ ಮುದಕೀಯರ ಮ್ಯಾಲೆಲ್ಲಾ ಲಾಠಿ ಬಾರಿಸಿದ ಸರಕಾರ ಒಂದು ದಿವಸ ಮುಂಜಾನೆ ದೇಶದಾಗಿನ ಹೆಂಡದಂಗಡಿ ಎಲ್ಲಾ ತಗದು ಎಲ್ಲಾ ಕುಡಕರನ್ನು ಖುಷಿಯಾಗಿಸಿತು. ಹೆಂಡದಂಗಡಿ ಮುಂದ ಒಬ್ಬರ ಮ್ಯಾಲೆ ಒಬ್ಬರು ಬಿದ್ದು ಎಷ್ಟು ಜನರಿಗೆ ಕೊರೋನಾ ಹರಡಿತು ಅಂತ ಯಾರೂ ಪರೀಕ್ಷೆ ಮಾಡಲಿಲ್ಲ.

ಇದರ ಹಿಂದಿನ ಲೆಕ್ಕಾಚಾರ ಏನು? ಜನಾ ಸತ್ತರ ಸಾಯಲಿ, ನಮಗ ರೊಕ್ಕ ಬರಲಿ, ಅಂತೇನು ?

ಇದು ಜಾಗತಿಕ ಪರೀಕ್ಷೆಗೆ ಸಮಯ ಅಲ್ಲ. ಟಾರ್ಗೆಟೆಡ್ ಟೆಸ್ಟಿಂಗ್‍ನ ಸಮಯ ಅಂತ ಅಧಿಕಾರಿಗಳು ಅನ್ನಾಕ ಹತ್ಯಾರು. ಹಿಂಗಂದರ ಏನು? ಕೊರೋನಾ ಪರೀಕ್ಷೆ ಅಂದರ ಯಾರದರ ದೇಶಾಭಿಮಾನವನ್ನು ಒರೆಗೆ ಹಚ್ಚೋದೋ ಅಥವಾ ಬಡವರನ್ನ ಬಲಿ ಕೊಡೋದೋ?

ಮೊನ್ನೆ ಡೊನಾಲ್ಡಪ್ಪಾ ಟ್ರಂಪಣ್ಣನವರ ಅವರು ತಮ್ಮ ಬಿಳೀಮನಿಯೊಳಗ ಒಂದು ಪತ್ರಿಕಾ ಗೋಷ್ಠಿ ಕರದಿದ್ದರು. ಅದರಾಗ ಒಬ್ಬಕಿ ಹೆಣಮಗಳು ಅಮೇರಿಕಾದ ಕೊರೋನಾ ಪರೀಕ್ಷಾ ಪ್ರಮಾಣದ ಬಗ್ಗೆ, ಅಲ್ಲಿನ ಸರಕಾರದ ಇತರ ಕ್ರಮಗಳ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದು ಬಿಟ್ಟರು. ನನ್ನೇನು ಕೇಳತೀರಿ, ಚೈನಾನ್ನ ಕೇಳರಿ ಅಂತ ಭುಸುಭುಸು ಮಾಡಿಕೋತ ಗೋಷ್ಠಿ ಅರ್ಧಾಕ್ಕ ನಿಲ್ಲಿಸಿ ಎದ್ದು ಹೋದರು. ಅವರ ಕೋಪ ಮತ್ತು ಅಮೇರಿಕಾದ ಹತಾಶ ಪರಿಸ್ಥಿತಿ ಬಗ್ಗೆ ಅಲ್ಲಿನ ಪತ್ರಿಕೆಗಳು ಬರದವು.

ನಮ್ಮಲ್ಲೂ ಹಿಂಗೇನಾರ ಆದರ ಪತ್ರಿಕೆಗಳು ಬರೀಬಹುದೇನೋ. ಆದರ ಇಲ್ಲಿನ ಬಿಳೀಮನಿಯೊಳಗ ಪತ್ರಿಕಾ ಗೋಷ್ಠಿನ ಇಲ್ಲಲ್ಲಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...