Homeಅಂಕಣಗಳುಇದನ್ನು ನಮಸ್ತೆ ಟ್ರಂಪ್ ವೈರಸ್ ಅಂತ ಯಾಕೆ ಕರೀತಿಲ್ಲ?

ಇದನ್ನು ನಮಸ್ತೆ ಟ್ರಂಪ್ ವೈರಸ್ ಅಂತ ಯಾಕೆ ಕರೀತಿಲ್ಲ?

- Advertisement -
- Advertisement -

ಮಹಾಭಾರತದ ಪರೀಕ್ಷಿತನ ಕತೆ ಎಲ್ಲಾರಿಗೂ ಗೊತ್ತು. ಅಜ್ಞಾತವಾಸದ ಕಾಲದಾಗ ಅರ್ಜುನ ವಿರಾಟರಾಜನ ಮಗಳು ಉತ್ತರಾಗ ಭರತನಾಟ್ಯ ಕಲಿಸತಾನ. ಒಂದು ವರ್ಷದ ನಂತರ ಅವಳನ್ನ ಸೊಸೆಯಾಗಿ ಮಾಡಿಕೋತಾನ. ಅವಳ ಮಗ ಪರೀಕ್ಷಿತ. ಧರ್ಮರಾಜನ ನಂತರ ಅವನೇ ಹಸ್ತಿನಾಪುರದ ರಾಜ. “ನಿನ್ನ ಸಾವು ಹಾವಿನ ವಿಷದಿಂದ” ಅಂತ ಹೇಳಿ ಅವನಿಗೆ ಋಷಿಯೊಬ್ಬ ಶಾಪ ಕೊಡತಾನ. ಪರೀಕ್ಷಿತ ಹೆದರಿ ತನ್ನ ದೇಶದ ಎಲ್ಲಾ ಹಾವುಗಳನ್ನು ಕೊಲ್ಲಲಿಕ್ಕೆ ಸರ್ಪ ಸಂಹಾರ ಯಾಗ ಮಾಡತಾನ. ಆದರೂ ಸಹಿತ ಹಾವುಗಳ ರಾಜ ತಕ್ಷಕ ಒಂದು ಸಣ್ಣ ಕ್ರಿಮಿಯಾಗಿ ಅವನು ತಿನ್ನೋ ಹಣ್ಣಿನೊಳಗ ಸೇರಿಕೊಂಡು ಆತನ್ನ ಕೊಲ್ಲತಾನ.

ಆ ಹಣ್ಣು ತಿನ್ನೋ ಮುಂಚೆ ಆ ರಾಜ ಅದನ್ನ ಪರೀಕ್ಷೆ ಮಾಡಿದ್ದರ ಅವನ ಜೀವಾ ಉಳೀತಿತ್ತು ಅಂತ ಒಂದೊಂದು ಸರ್ತಿ ಅನ್ನಸತದ.
ಇದು ಯಾಕ ನೆನಪು ಮಾಡಬೇಕಾತು ಅಂದರ ಈ ಕಿರೀಟಿ ವೈರಸ್ಸಿನ ಸಂಕಟದೊಳಗ ನಮ್ಮ ಸರಕಾರದ ಮೇಲೆ ಇರೋ ಆರೋಪ ಏನಂದರ ಅದು ಎಷ್ಟು ಬೇಕೋ ಅಷ್ಟು ಪರೀಕ್ಷೆ ಮಾಡತಾ ಇಲ್ಲಾ ಅಂತ. ಒಂದು ನೂರಾ ಮೂವತ್ತು ಕೋಟಿ ಜನಾ ಇರೋ ಈ ದೇಶದೊಳಗ ಬರೇ ಹದಿಮೂರು ಲಕ್ಷ ಪರೀಕ್ಷೆ ಆಗಿದಾವು. ಖರೇ ಹೇಳಬೇಕಂದರ ಒಂದು ದಿನಕ್ಕ ಹತ್ತು ಲಕ್ಷದ ಲೆಕ್ಕದಾಗ ನೂರು ದಿನಕ್ಕ ಹತ್ತು ಕೋಟಿ ಪರೀಕ್ಷೆ ಆಗಬೇಕಿತ್ತು ಅಂತ ತಜ್ಞರ ಅಂಬೋಣ.

ನೀವು ಯಾಕ ಮಾಡತಿಲ್ಲಾ ಅಂತ ಯಾರನ್ನೂ ಕೇಳಂಗಿಲ್ಲ. ಯಾರನ್ನ ಕೇಳತೀರಿ? ಅಧಿಕಾರಿನ್ನ ಕೇಳಿದರ ರಾಜಕಾರಣಿ ಕಡೆ ತೋರಸತಾರ. ರಾಜಕಾರಣಿ ಪ್ರಧಾನಿ ಕಚೇರಿ ಕಡೆ ತೋರಸತಾರ. ಅಲ್ಲಿ ನೋಡಿದರೆ ಪಂತ ಪ್ರಧಾನರು ಬಾಯಿಗೆ ಶಾಲು ಕಟ್ಟಿಕೊಂಡು ಕೂತಾರ.

ಸರಕಾರ ಯಾಕ ಪರೀಕ್ಷೆ ಹೆಚ್ಚು ಮಾಡತಾ ಇಲ್ಲ? ಯಾಕಂದರ ಒಂದು ಪರೀಕ್ಷೆಗೆ ಸುಮಾರು 5,000 ರೂಪಾಯಿ ಬೇಕಾಗತದ. ಎಲ್ಲರಿಗೂ ಮಾಡೋವಷ್ಟು ನಮ್ಮಲ್ಲೆ ದುಡ್ಡು ಇಲ್ಲ. ಇದ್ದರೂ ನಾವು ಮಾಡಂಗಿಲ್ಲ. ಯಾಕಂದ್ರ ಪೋಲಿಯೋದ ಗತೆ ಮನಿ – ಮನೀಗೆ ಹೋಗಿ ಮಾಡಿದರ ಜನಾ ಹೆದರಿಕೋತಾರ ಅಂತ ನಮ್ಮನ್ನಾಳುವವರು ಹೇಳಿಕೋತ ಹೊಂಟಾರ.

ಆದರ ಈ ಅಸಹಾಯಕ ಉತ್ತರದ ಹಿಂದ ಒಂದು ಕುತಂತ್ರ ಇದ್ದಂಗ ಕಾಣತದ. ಇವರು ಕೊರೋನಾ ಪರೀಕ್ಷೆಯನ್ನ ಸಹಿತ ರಾಜಕೀಯ ತಂತ್ರ ಮಾಡಿಕೊಂಡಂಗ ಕಾಣತಾರ. ದೆಹಲಿ ನಿಜಾಮುದ್ದೀನಿಗೆ ಹೋದ ಮುಸ್ಲೀಮರು ಇದನ್ನು ಹಬ್ಬಿಸಿದರು ಅಂತ ಹೇಳಿ ಜನರನ್ನ ಮುಸ್ಲೀಮರ ವಿರುದ್ಧ ಎತ್ತಿ ಕಟ್ಟೋದು, ಅಲ್ಲಿಗೆ ಹೋಗಿ ಬಂದವರ ಮೊದಲನೇ ಹಾಗೂ ಎರಡನೇ ಸಂಪರ್ಕಕ್ಕ ಬಂದ ವ್ಯಕ್ತಿಗಳನ್ನ ಅಷ್ಟ ಪರೀಕ್ಷೆ ಮಾಡೋದು, ಇದು ನಡದು ಬಿಟ್ಟದ. ಆ ಮುಸ್ಲೀಮರು ಇರೋ ಪ್ರದೇಶಗಳನ್ನ ಕಂಟೇನಮೆಂಟು ಜೋನ್ ಅಂತ ಮಾಡಿ ಅಲ್ಲಿ ಸೀಲ್ ಡೌನು ಮಾಡಿ ಅವರಿಗೆ ನೀರು- ನಿಡಿ ಸಿಗಲಾರದ ಹಂಗ ಮಾಡೋದು. ಅದರ ಬಗ್ಗೆ ಎಲ್ಲರಿಗೂ ಒಂದು ಕೆಟ್ಟ ಭಾವನಾ ಬಂದು ಮೈಲಿಗೆ ಪ್ರದೇಶ ಅಂತ ಮಾಡಿ ಅದರಿಂದ ಎಲ್ಲರೂ ದೂರ ಇರೋ ಹಂಗ ಮಾಡೋದು ಇವರ ಹುನ್ನಾರ ಅಂತ ಅನ್ನಸತದ.

ಇದ ಸರಕಾರ `ನಮಸ್ತೇ ಟ್ರಂಪ’ ಸಮಾರಂಭಕ್ಕೆ ಹೋದವರನ್ನು ಯಾಕ ಪರೀಕ್ಷೆ ಮಾಡತಿಲ್ಲಾ? ಮಾಡಿದರೂ ಕೂಡ ಅಹಮದಾಬಾದಿಗೆ ಹೋಗಿ ಬಂದವರು ಅಂತ ಹೇಳತದ ಹೊರತು, ಟ್ರಂಪ ಸಮಾರಂಭಕ್ಕೆ ಹೋದವರು ಅಂತ ಹೇಳಂಗಿಲ್ಲ. ಅವರ ಮೊದಲನೇ – ಎರಡನೇ ಸಂಪರ್ಕಗಳನ್ನ ಪರೀಕ್ಷೆ ಮಾಡತಾ ಇಲ್ಲ. ಅವರ ಮನೆಗಳನ್ನು ಸೀಲು ‍‍ಡೌನು ಮಾಡಿ ಅದಕ್ಕ ಮೈಲಿಗೆ ಪ್ರದೇಶ ಅಂತ ಹೇಳತಾ ಇಲ್ಲ.

ಜನವರಿಯಿಂದ ಮಾರ್ಚ 24 ರವರಗೆ ಭಾರತಕ್ಕ 20 ಲಕ್ಷ ಜನ ವಿಮಾನಗಳಿಂದ ಬಂದಾರಂತ. ಅವರನ್ನು ಕಡ್ಡಾಯ ಪರೀಕ್ಷೆ ಮಾಡಿಲ್ಲ. ಅವರ ಮೊದಲನೇ ಎರಡನೇ ಸಂಪರ್ಕ ಪರೀಕ್ಷೆ ಮಾಡಿಲ್ಲ. ಅವರ ಪ್ರದೇಶಕ್ಕೆ ಮೈಲಿಗೆ ಅಂಟಿಸಿಲ್ಲ.

ಫೆಬ್ರವರಿ- ಮಾರ್ಚಿ ತಿಂಗಳದಾಗ ಈ ದೇಶದ ಅನೇಕ ಹಳ್ಳಿ- ನಗರದೊಳಗ ಜಾತ್ರಿ- ಉತ್ಸವ- ಹಬ್ಬ ಆಗಿದಾವು, ಅಲ್ಲಿಗೆ ಲಕ್ಷಾಂತರ ಜನಾ ಹೋಗಿ ಬಂದಾರು. ಅವರನ್ನ ಪರೀಕ್ಷೆ ಮಾಡಿಲ್ಲ. ಅವರ ಸಂಪರ್ಕಕ್ಕ ಬಂದವರನ್ನ ಪರೀಕ್ಷೆ ಮಾಡಿಲ್ಲ. ಅವರಿಗೆ ಮೈಲಿಗೆ ಅಂಟಿಸಿಲ್ಲ.

ಬೆಂಗಳೂರು- ಮಂಗಳೂರು- ಬಾಗಲಕೋಟಿಯೊಳಗ ಐಟಿ ಕಂಪನಿ ಉದ್ಯೋಗಿಗಳಿಂದ ಸೋಂಕು ಹರಡೇತಿ. ಅವರಿಗೆ ಐಟಿ ಬಾಂಬ್ ಅಂತ ಹಣೆ ಪಟ್ಟಿ ಕಟ್ಟಿಲ್ಲ. ಅವರಿರೋ ಪ್ರದೇಶಗಳಿಗೆ ಮೈಲಿಗೆ ಅಂಟಿಲ್ಲ.

ಮೈಸೂರಿನ ಕಾರಖಾನೆಗೆ ಚೈನಾದಿಂದ ಸೋಂಕು ಬಂದೇತಿ ಅಂತಾರು. ಅದನ್ನ ಸರಿಯಾಗಿ ತನಿಖೆ ನಡಸಲಿಲ್ಲ. ಚೈನಾದ ಕಂಪನಿಗಳ ಜೊತೆ ವ್ಯಾಪಾರ – ವ್ಯವಹಾರ ನಡೆಸೋ ಸಾವಿರಾರು ಕಂಪನಿಗಳು ಹಳ್ಳಿಹಳ್ಳಿಗಳೊಳಗ ಅದಾವು. ಅವಕ್ಕ ಯಾರು ಮೈಲಿಗೆ ಅಂಟಿಸಿಲ್ಲ.

ಹಂಗಾರ ಸರಕಾರ ಮಾಡತಾ ಇರೋ ಮಸಲತ್ತು ಏನು?

ಐವತ್ತು ದಿವಸ ಅಗದೀ ಕಟ್ಟಾ ಲಾಕ್ ಡೌನ್ ಮಾಡಿ, ಹಾಲು ತರಲಿಕ್ಕೆ ಹೋದ ಮುದಕೀಯರ ಮ್ಯಾಲೆಲ್ಲಾ ಲಾಠಿ ಬಾರಿಸಿದ ಸರಕಾರ ಒಂದು ದಿವಸ ಮುಂಜಾನೆ ದೇಶದಾಗಿನ ಹೆಂಡದಂಗಡಿ ಎಲ್ಲಾ ತಗದು ಎಲ್ಲಾ ಕುಡಕರನ್ನು ಖುಷಿಯಾಗಿಸಿತು. ಹೆಂಡದಂಗಡಿ ಮುಂದ ಒಬ್ಬರ ಮ್ಯಾಲೆ ಒಬ್ಬರು ಬಿದ್ದು ಎಷ್ಟು ಜನರಿಗೆ ಕೊರೋನಾ ಹರಡಿತು ಅಂತ ಯಾರೂ ಪರೀಕ್ಷೆ ಮಾಡಲಿಲ್ಲ.

ಇದರ ಹಿಂದಿನ ಲೆಕ್ಕಾಚಾರ ಏನು? ಜನಾ ಸತ್ತರ ಸಾಯಲಿ, ನಮಗ ರೊಕ್ಕ ಬರಲಿ, ಅಂತೇನು ?

ಇದು ಜಾಗತಿಕ ಪರೀಕ್ಷೆಗೆ ಸಮಯ ಅಲ್ಲ. ಟಾರ್ಗೆಟೆಡ್ ಟೆಸ್ಟಿಂಗ್‍ನ ಸಮಯ ಅಂತ ಅಧಿಕಾರಿಗಳು ಅನ್ನಾಕ ಹತ್ಯಾರು. ಹಿಂಗಂದರ ಏನು? ಕೊರೋನಾ ಪರೀಕ್ಷೆ ಅಂದರ ಯಾರದರ ದೇಶಾಭಿಮಾನವನ್ನು ಒರೆಗೆ ಹಚ್ಚೋದೋ ಅಥವಾ ಬಡವರನ್ನ ಬಲಿ ಕೊಡೋದೋ?

ಮೊನ್ನೆ ಡೊನಾಲ್ಡಪ್ಪಾ ಟ್ರಂಪಣ್ಣನವರ ಅವರು ತಮ್ಮ ಬಿಳೀಮನಿಯೊಳಗ ಒಂದು ಪತ್ರಿಕಾ ಗೋಷ್ಠಿ ಕರದಿದ್ದರು. ಅದರಾಗ ಒಬ್ಬಕಿ ಹೆಣಮಗಳು ಅಮೇರಿಕಾದ ಕೊರೋನಾ ಪರೀಕ್ಷಾ ಪ್ರಮಾಣದ ಬಗ್ಗೆ, ಅಲ್ಲಿನ ಸರಕಾರದ ಇತರ ಕ್ರಮಗಳ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದು ಬಿಟ್ಟರು. ನನ್ನೇನು ಕೇಳತೀರಿ, ಚೈನಾನ್ನ ಕೇಳರಿ ಅಂತ ಭುಸುಭುಸು ಮಾಡಿಕೋತ ಗೋಷ್ಠಿ ಅರ್ಧಾಕ್ಕ ನಿಲ್ಲಿಸಿ ಎದ್ದು ಹೋದರು. ಅವರ ಕೋಪ ಮತ್ತು ಅಮೇರಿಕಾದ ಹತಾಶ ಪರಿಸ್ಥಿತಿ ಬಗ್ಗೆ ಅಲ್ಲಿನ ಪತ್ರಿಕೆಗಳು ಬರದವು.

ನಮ್ಮಲ್ಲೂ ಹಿಂಗೇನಾರ ಆದರ ಪತ್ರಿಕೆಗಳು ಬರೀಬಹುದೇನೋ. ಆದರ ಇಲ್ಲಿನ ಬಿಳೀಮನಿಯೊಳಗ ಪತ್ರಿಕಾ ಗೋಷ್ಠಿನ ಇಲ್ಲಲ್ಲಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...