Homeಮುಖಪುಟಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು.

- Advertisement -
- Advertisement -

ದೃಶ್ಯ -1
ಲಾಕ್ ಡೌನ್ ನಿಂದ ಕಂಗಾಲಾಗಿ ತಲೆ ಮೇಲೆ ಗಂಟು ಮೂಟೆ, ಹೆಗಲಲ್ಲಿ ನಿದ್ದೆಗೆ ಜಾರಿದ ಮಗುವನ್ನು ಕಟ್ಟಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕುಟುಂಬಗಳನ್ನು ಸಂದರ್ಶಿಸುವ ಬಿಬಿಸಿಯ ವರದಿಗಾರನೋರ್ವ ವಲಸಿಗನ ಬರಿಗಾಲ ಕಂಡು ತನ್ನ ಷೂ ಗಳನ್ನೆ ಕಳಚಿ ವಲಸಿಗನಿಗೆ ಹಾಕಿ ಕಳುಹಿಸುತ್ತಾನೆ.

ದೃಶ್ಯ-2
ಖ್ಯಾತ ಪತ್ರಕರ್ತೆ ಬರ್ಕಾದತ್ ಮಕ್ಕಳು – ಮರಿಗಳ ಜೊತೆ ವಲಸೆ ಹೊರಟ ತಾಯಿಯೊಬ್ಬಳನ್ನು ಸಂದರ್ಶಿಸುವಾಗ ನೋಡುಗರ ಕಣ್ಣು ನೀರಾಡದೆ ಇರದು.

ದೃಶ್ಯ-3
ಮುಂಬೈ -ನಾಸಿಕ ಹೆದ್ದಾರಿಯಲ್ಲಿ ಲಕ್ನೋಗೆ ಟೆಂಪೋ ದಲ್ಲಿ ಅನ್ನ ನೀರು ಇಲ್ಲದೆ ವಲಸೆ ಹೊರಟಿದ್ದ ಹತ್ತಾರು ಕುಟುಂಬಗಳನ್ನು ಸಂದರ್ಶಿಸುವ ಎನ್.ಡಿಟಿ.ವಿ ವರದಿಗಾರ ತನ್ನ ಬಳಿ ಇದ್ದ ಬಿಸ್ಕೇಟ್ ಪೊಟ್ಟಣಗಳನ್ನು ಕೊಟ್ಟು ಮುಂದೆ ಹೋಗಿ ವಾಪಾಸ್ ಬರುವಾಗ ಅದೇ ಹೆದ್ದಾರಿಯಲ್ಲಿ ಟೆಂಪೋ ಅಪಘಾತಕ್ಕೀಡಾಗಿ ಚಾಲಕ ಸಾವು ಕಂಡು ಹೆಂಡತಿ ಮಕ್ಕಳು, ಕಾರ್ಮಿಕರು ಗಾಯಗೊಂಡದ್ದನ್ನು ಕಾಣುತ್ತಾನೆ. ಯಾವೊಬ್ಬ ಪತ್ರಕರ್ತನಿಗೂ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಸಂದರ್ಭ ಕಾಣುವ ದಿನಗಳು ಬರದಿರಲಿ ಎಂದು ಆದ್ರಃಗೊಳ್ಳುತ್ತಾನೆ.

ಲಾಕ್‌ಡೌನ್ ಕಾಲದಲ್ಲಿ ಇಂತಹ ಅನೇಕ ಘಟನೆಗಳು, ದುಃಖಗಳ ಮಡುವೇ ಹರಿದಿದೆ. ಕಂಡಿದ್ದು ಕೆಲವು ಮಾತ್ರ. ಇದಕ್ಕೆಲ್ಲಾ ಯಾರೂ ಹೊಣೆ ಎಂದು ಯಾರಾದರೂ ಯೋಚಿಸಿದ್ದೀರಾ?

ಕೊರೊನಾ ಸೋಂಕು ವಿರುದ್ದ ಹೋರಾಟದಲ್ಲಿ ಭಾರತ ಎಡವಿದ್ದು, ಕೊರೊನಾ ಸೋಂಕಿನಿಂದ ಬಾಧಿತರಾಗುವುದಕ್ಕಿಂತ ಅದರ ನಿರ್ಬಂಧ , ದಿಗ್ಬಂಧನಗಳಿಂದ ಜನ ನರಳಿದ್ದು, ಸಾವು ಕಂಡಿದ್ದೇ ಹೆಚ್ಚು. ಚೀನಾ, ಅಮೇರಿಕಾ, ಇಟಲಿಯಂತ ದೊಡ್ಡ ದೊಡ್ಡ ರಾಷ್ಟ್ರಗಳನ್ನು ಕೊರೊನಾ ಕಾಡಿದ್ದು ಕಣ್ಣ ಮುಂದೆ ಇರುವಾಗ ಅದನ್ನು ನಿರ್ಲಕ್ಷಿಸುವುದು ಭಾರತಕ್ಕೆ ಸಾಧ್ಯವೇ ಇಲ್ಲ ನಿಜ, ಆದರೆ ಎಚ್ಚೆತ್ತುಕೊಳ್ಳುವ ಕಾಲಕ್ಕೆ ಮೈಮರೆತು ಮೆರೆದಾಡಿದ್ದರಿಂದ ರೋಗಕ್ಕಿಂತ ಅದರ ನೆರಳಲ್ಲಿ ಸೃಷ್ಟಿಸಿದ ಭಯ (ಭಯೋತ್ಪಾದನೆ) ವೇ ಭೀಕರತೆಯಿಂದ ಕೂಡಿದೆ.

ನಲವತ್ತೈದು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಬಾಧಿತರ ಸಂಖ್ಯೆ ಇಂದಿಗೆ ಒಟ್ಟು 90,927 ಆಗಿದ್ದರೆ, 2872 ಜನ ಸಾವು ಕಂಡಿದ್ದಾರೆ. (ಸೋಂಕಿತರ ಸಂಖ್ಯೆ ಲಕ್ಷ ದಾಟುವತ್ತ ಸಾಗಿದೆ.) ಅಂದರೆ ಸುಮಾರು ಶೇ. 3ರಷ್ಟು ಜನ ಸೋಂಕಿನಿಂದ ಸಾವು ಕಂಡಿದ್ದಾರೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ಗುಣಮುಖರಾಗಿರುವುದನ್ನು ಗಮನಿಸಬೇಕು. ಸಾವು ಕಂಡವರಲ್ಲಿ ವೃದ್ದರೇ ಹೆಚ್ಚಾಗಿರುವುದರಿಂದ ಅದು ವಯೋಸಹಜ ಕಾರಣಗಳನ್ನು ಅವಲಂಬಿಸಿದೆ. ಈ ಪ್ರಮಾಣವನ್ನು ಅಮೇರಿಕಾಕ್ಕೆ ಹೋಲಿಸಿದಾಗ ಭಾರತದ ಸ್ಥಿತಿ ಅಷ್ಟೇನೂ ಭೀಕರವಾಗಿಲ್ಲ ಎಂಬುದು ಕಾಣುತ್ತದೆ. ಭಾರತದ ನೈಸರ್ಗಿಕ ವಾತಾವರಣ, ಇಲ್ಲಿನ ಜನರಲ್ಲಿನ ರೋಗನಿರೋಧಕ ಸಾಮರ್ಥ್ಯ ವೇ ದೊಡ್ಡಮಟ್ಟದ ಜೀವ ನಷ್ಟವನ್ನು ತಂದೊಡ್ಡುವಲ್ಲಿ ತಡೆಯೊಡ್ಡಿದೆ. ಜನವರಿ ತಿಂಗಳಲ್ಲೇ ಕೊರೊನಾ ಜಗತ್ತಿನಾದ್ಯಂತ ವಿಸ್ತರಗೊಳ್ಳುತ್ತಿರುವ ಸೂಚನೆಗಳು ಕಾಣತೊಡಗಿದ್ದರೂ ಭಾರತ ಅಮೇರಿಕಾದ ಅಧ್ಯಕ್ಷರನ್ನು ಕರೆದು ಕಳುಹಿಸುವ ಉತ್ಸಾಹದಲ್ಲಿ ಓಡಾಡತೊಡಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಕರೆಗಳನ್ನು ಭಾರತ ಕಿರುಗಣ್ಣಿನಿಂದಲೂ ನೋಡಲಿಲ್ಲ. ರಾಹುಲ್‌ಗಾಂಧಿ ಯ ಎಚ್ಚರಿಕೆಯ ಟ್ವೀಟ್‌ನ್ನು ಎಂದಿನಂತೆ ಲೇವಡಿ ಮಾಡಿತು ಸರ್ಕಾರ. ಭಾರತದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿದ್ದೆಗೆ ಜಾರಿತ್ತು.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಹೊತ್ತಿಗೆ ಕೊರೊನಾ ಸೋಂಕು ದೇಶದ ಮೂಲೆ ಮೂಲೆಗಳನ್ನು ತಲುಪಿ ಕೇಕೆ ಹಾಕುತ್ತಿತ್ತು. ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು. ಜನರನ್ನು ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ದೂಡುವಲ್ಲಿ ಸರ್ಕಾರವೇ ಯಶಸ್ವಿಯಾಗಿದೆ.

ಕೋಟ್ಯಾಂತರ ವಲಸೆ ಕಾರ್ಮಿಕರ ಬದುಕು ಬರ್ಬರವಾಯಿತು, ಜನಸಾಮಾನ್ಯರು , ಮಧ್ಯಮ ವರ್ಗದವರು ಅನ್ನಕ್ಕಾಗಿ ಪರದಾಡುವಂತಾಯಿತು. ಒಂದು ಸರ್ಕಾರವೇ ಜನರನ್ನು ವ್ಯವಸ್ಥಿತವಾಗಿ ಬೀದಿಗೆ ನೂಕಿ ಹಸಿವಿಗೆ ಈಡು ಮಾಡುವ, ಆರ್ಥಿಕತೆಯನ್ನು ಪಾತಾಳಕ್ಕೆ ತುಳಿಯುವ ಹೊಣೆಗೇಡಿತವನ್ನು ಮಾಡಿ ಕೈಚೆಲ್ಲಿ ಕುಳಿತುಕೊಂಡಿತು. ಆಶ್ಚರ್ಯವೆಂದರೆ ಈ ದೇಶದ ಕಾರ್ಮಿಕ ಸಚಿವಾಲಯಕ್ಕೆ ತನ್ನ ದೇಶದಲ್ಲಿ ಎಷ್ಟು ಪ್ರಮಾಣದ ಕಾರ್ಮಿಕರಿದ್ದಾರೆ. ಅವರ ಹಕ್ಕು, ಸವಲತ್ತುಗಳೇನು? ಅದಕ್ಕಾಗಿ ಖಜಾನೆಯಲ್ಲಿ ಇರಬಹುದಾದ ಮೊತ್ತವೆಷ್ಟು,? ಒಂದು ಪಕ್ಷ ಕಾರ್ಮಿಕರ ಬದುಕಿಗೆ ದಿಢೀರನೆ ನಷ್ಟವೊಂದು ಒದಗಿ ಬಂದರೆ ಅವರಿಗಾಗಿ ಮಾಡಬಹುದಾದ ತಕ್ಷಣದ ಕ್ರಮಗಳೇನು ಎಂಬ ಯಾವ ಡಾಟಾವೂ ಇಲ್ಲದಿರುವುದು ಬೆಳಕಿಗೆ ಬಂತು. ಆರೋಗ್ಯ ಸಚಿವಾಲಯವೂ ಕೂಡ ಇಂತಹುದ್ದೆ ಸ್ಥಿತಿಯಲ್ಲಿರುವುದು ಜಗಜ್ಜಾಹೀರಾಯಿತು. ದಾರಿ ಹಿಡಿದು ಹೊರಟ 16 ಜನ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕು ಸತ್ತದ್ದು, ಲಕ್ನೋದ ಹೆದ್ದಾರಿಯಲ್ಲಿ 24 ವಲಸೆ ಕಾರ್ಮಿಕರ ದೇಹಗಳು ನುಜ್ಜುಗುಜ್ಜಾಗಿ ಚೆಲ್ಲಾಡಿದ್ದು ಪ್ರಭುತ್ವ ಪ್ರಾಯೋಜಿತ ಕೊಲೆ ಎಂದು ಈ ದೇಶದ ಮಾಧ್ಯಮಗಳಿಗೆ ಅನಿಸಲೇ ಇಲ್ಲ. ಇದಕ್ಕೆ ಯಾರನ್ನೂ ಹೊಣೆ ಗಾರರನ್ನಾಗಿ ಮಾಡಲಿಲ್ಲ. ರಾಜೀನಾಮೆ ಕೇಳಲಿಲ್ಲ.! ಈ ದೇಶದ ಪ್ರಧಾನಿಯ 56 ಇಂಚು ಎದೆ ಕ್ಷಣಕಾಲವೂ ಕದಲಿಲ್ಲ. ಯಾವೊಬ್ಬ ಸಚಿವನೂ ನೈತಿಕ ಹೊಣೆ ಹೊರಲಿಲ್ಲ. ವಿಪಕ್ಷಗಳು ಹರತಾಳ ನಡೆಸಲಿಲ್ಲ. ಎಂತಹ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಯೋಚಿಸಿ.

ಲಾಕ್ ಡೌನ್ ನಿಂದ ಕಂಗಾಲಾಗಿ ಬೀದಿಗಿಳಿದ ವಲಸೆ ಕಾರ್ಮಿಕರು, ಬಡಕುಟುಂಬಗಳು ಕೊರೊನಾ ಸೋಂಕು ನಿಂದ ಸಾಯುವ ಭೀತಿಗಿಂತ ಅಭದ್ರತೆ, ಹಸಿವಿನಿಂದ ಸಾಯುವ ಆತಂಕವನ್ನು ಹೊತ್ತು ದೇಶದ ಉದ್ದಗಲಕ್ಕೂ ಹೊರಟು ಬಿಟ್ಟಿದ್ದರು. ಸೋಂಕಿನಿಂದ ಸತ್ತವರಿಗಿಂತ ಇಂತಹ ಅಭದ್ರತೆ, ಹಸಿವಿನಿಂದ ಸತ್ತವರ ಪ್ರಮಾಣವೇ ಹೆಚ್ಚಾಗಿದೆ. ಇದಾವುದನ್ನೂ ಕಂಡೂ ಕಾಣದೆ ಇದ್ದ ಸರ್ಕಾರಗಳು ಸ್ಪೆಷಲ್ ಫ್ಲೈಟ್ ಗಳಲ್ಲಿ ತಮ್ಮ ತಮ್ಮ ಕುಟುಂಬಸ್ಥರುನ್ನು ಬಂಧು ಬಾಂಧವರನ್ನು ವಿದೇಶದಿಂದ ಸುರಕ್ಷಿತವಾಗಿ ಮನಗೆ ಕರೆಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಜನರಿಗೆ ಅನ್ನಕ್ಕಿಂತ ಭಾಷಣಗಳನ್ನು ಉಣಿಸಿದ್ದೇ ಹೆಚ್ಚು. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕು, ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಹೆಲಿಕಾಪ್ಟರ್ ಗಳಿಂದ ಹೂಮಳೆಗೆರೆಯಿರಿ ಎಂದು ದಿಕ್ಕು ತಪ್ಪಿಸಲಾಯಿತು. ಈ ಸದ್ದು-ಸಂಭ್ರಮಗಳ ಅಬ್ಬರದಲ್ಲಿ ದೇಶದುದ್ದಗಲಕ್ಕೂ ದಾರಿ ಹುಡುಕುತ್ತಾ ಹೊರಟ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರ ಹಸಿವಿನ ಆಕ್ರಂದನ, ಬರಿಗಾಲ ಸದ್ದುಗಳು ಜಗತ್ತಿಗೆ ತಿಳಿಯದಾಯಿತು. ಮಾಧ್ಯಮಗಳು ಚಪ್ಪಾಳೆ ತಟ್ಟುವುದನ್ನು, ಹೂಮಳೆಗೆರೆಯುವುದನ್ನು ಕೊಂಡಾಡುವಲ್ಲಿ ಮುಳುಗಿದವೆ ವಿನಃ ವಲಸೆ ಹೊರಟ ಜನರ ದುಃಖ, ದುಮ್ಮಾನಗಳಿಗೆ ಕ್ಯಾಮರಾ ಹಿಡಿಯಲಿಲ್ಲ. ಪೆನ್ನುಗಳು ತಹತಹಿಸಲಿಲ್ಲ.

ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪುತ್ತಿರುವ ಹೊತ್ತಿನಲ್ಲಿ ಇನ್ನೇನು ದೇಶ ನಾಶವಾಗಿಬಿಡುತ್ತದೆ. ಜನರೆಲ್ಲಾ ರೋಗಕ್ಕೆ ತುತ್ತಾಗಿ ಇಲ್ಲವಾಗಿಬಿಡುತ್ತಾರೆ ಎಂಬ ಪೋಬಿಯಾವನ್ನು ಬಿತ್ತಲಾಗುತ್ತಿದೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ರೋಗವನ್ನು ಎದುರಿಸಿ ಗುಣಮುಖರಾಗುತ್ತಿರುವ ಆಶಾದಾಯಕ ಬೆಳವಣಿಗೆಯನ್ನು ಜನರಿಗೆ ತಿಳಿಸುತ್ತಿಲ್ಲ. ಮದ್ದೇ ಇಲ್ಲದ ಈ ಸೋಂಕನ್ನು ಲಾಕ್ ಡೌನ್ ಎಂಬ ದಿಗ್ಬಂಧನಗಳಿಂದ ಕಟ್ಟಿಹಾಕುವುದಷ್ಟೇ ನಮಗೆ ಉಳಿದಿರುವ ದಾರಿ ಎಂದೇ ಭಾವಿಸಿರುವ ಮಾಧ್ಯಮಗಳು ಲಾಕ್ ಡೌನ್ ಎಂಬ ಅಸ್ತ್ರದಿಂದ ಭಾರತದೊಳಗಿನ ಬಡ ಭಾರತವನ್ನು ದಂಡಿಸಲು ಪ್ರಚೋದಿಸುತ್ತಿವೆ. ಜಾಗತೀಕರಣವನ್ನು ಹಾಸು ಹೊದ್ದು, ಉಣ್ಣುತ್ತಿರುವಾಗ ಈ ದೇಶದ ಪ್ರಧಾನಿ ಆತ್ಮ ನಿರ್ಭರ ಎಂಬ ಕಗ್ಗ ವಾಚನ ಮಾಡುತ್ತಿದ್ದಾರೆ.

ಜನತೆ ಈ ರೋಗದ ಜೊತೆ ಗುದ್ದಾಡುತ್ತಲೆ ಬದುಕಬೇಕೆಂಬ ಪರ‍್ಯಾಯ ಮಾರ್ಗಗಳನ್ನು ತೋರುವ, ಜನರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆ ಕೊರೊನಾ ಬರುವುದಕ್ಕಿಂತಲೂ ಮೊದಲೇ ವಿಫಲತೆಯ ಸೋಂಕು ಹಿಡಿದು ಉಸಿರೆಳೆಯುತ್ತಿತ್ತು. ಈಗ ಎಲ್ಲಾ ಅಸಮರ್ಥತೆಯನ್ನು ಕೊರೊನಾ ತಲೆಗೆಕಟ್ಟಿ ತಲೆ ಉಳಿಸಿಕೊಳ್ಳುವ ಕೆಲಸ ನಡೆದಿದೆ. ಇತ್ತ ಜನತೆ ಕೊರೊನಾ ಫೋಬಿಯಾದಿಂದ ಹೊರಬಂದು ಕೊರೊನಾ ಜೊತೆಯೇ ಬದುಕು ಕಟ್ಟಿಕೊಳ್ಳಬೇಕಾಗಿದೆ.

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...