Homeಮುಖಪುಟಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು.

- Advertisement -
- Advertisement -

ದೃಶ್ಯ -1
ಲಾಕ್ ಡೌನ್ ನಿಂದ ಕಂಗಾಲಾಗಿ ತಲೆ ಮೇಲೆ ಗಂಟು ಮೂಟೆ, ಹೆಗಲಲ್ಲಿ ನಿದ್ದೆಗೆ ಜಾರಿದ ಮಗುವನ್ನು ಕಟ್ಟಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕುಟುಂಬಗಳನ್ನು ಸಂದರ್ಶಿಸುವ ಬಿಬಿಸಿಯ ವರದಿಗಾರನೋರ್ವ ವಲಸಿಗನ ಬರಿಗಾಲ ಕಂಡು ತನ್ನ ಷೂ ಗಳನ್ನೆ ಕಳಚಿ ವಲಸಿಗನಿಗೆ ಹಾಕಿ ಕಳುಹಿಸುತ್ತಾನೆ.

ದೃಶ್ಯ-2
ಖ್ಯಾತ ಪತ್ರಕರ್ತೆ ಬರ್ಕಾದತ್ ಮಕ್ಕಳು – ಮರಿಗಳ ಜೊತೆ ವಲಸೆ ಹೊರಟ ತಾಯಿಯೊಬ್ಬಳನ್ನು ಸಂದರ್ಶಿಸುವಾಗ ನೋಡುಗರ ಕಣ್ಣು ನೀರಾಡದೆ ಇರದು.

ದೃಶ್ಯ-3
ಮುಂಬೈ -ನಾಸಿಕ ಹೆದ್ದಾರಿಯಲ್ಲಿ ಲಕ್ನೋಗೆ ಟೆಂಪೋ ದಲ್ಲಿ ಅನ್ನ ನೀರು ಇಲ್ಲದೆ ವಲಸೆ ಹೊರಟಿದ್ದ ಹತ್ತಾರು ಕುಟುಂಬಗಳನ್ನು ಸಂದರ್ಶಿಸುವ ಎನ್.ಡಿಟಿ.ವಿ ವರದಿಗಾರ ತನ್ನ ಬಳಿ ಇದ್ದ ಬಿಸ್ಕೇಟ್ ಪೊಟ್ಟಣಗಳನ್ನು ಕೊಟ್ಟು ಮುಂದೆ ಹೋಗಿ ವಾಪಾಸ್ ಬರುವಾಗ ಅದೇ ಹೆದ್ದಾರಿಯಲ್ಲಿ ಟೆಂಪೋ ಅಪಘಾತಕ್ಕೀಡಾಗಿ ಚಾಲಕ ಸಾವು ಕಂಡು ಹೆಂಡತಿ ಮಕ್ಕಳು, ಕಾರ್ಮಿಕರು ಗಾಯಗೊಂಡದ್ದನ್ನು ಕಾಣುತ್ತಾನೆ. ಯಾವೊಬ್ಬ ಪತ್ರಕರ್ತನಿಗೂ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಸಂದರ್ಭ ಕಾಣುವ ದಿನಗಳು ಬರದಿರಲಿ ಎಂದು ಆದ್ರಃಗೊಳ್ಳುತ್ತಾನೆ.

ಲಾಕ್‌ಡೌನ್ ಕಾಲದಲ್ಲಿ ಇಂತಹ ಅನೇಕ ಘಟನೆಗಳು, ದುಃಖಗಳ ಮಡುವೇ ಹರಿದಿದೆ. ಕಂಡಿದ್ದು ಕೆಲವು ಮಾತ್ರ. ಇದಕ್ಕೆಲ್ಲಾ ಯಾರೂ ಹೊಣೆ ಎಂದು ಯಾರಾದರೂ ಯೋಚಿಸಿದ್ದೀರಾ?

ಕೊರೊನಾ ಸೋಂಕು ವಿರುದ್ದ ಹೋರಾಟದಲ್ಲಿ ಭಾರತ ಎಡವಿದ್ದು, ಕೊರೊನಾ ಸೋಂಕಿನಿಂದ ಬಾಧಿತರಾಗುವುದಕ್ಕಿಂತ ಅದರ ನಿರ್ಬಂಧ , ದಿಗ್ಬಂಧನಗಳಿಂದ ಜನ ನರಳಿದ್ದು, ಸಾವು ಕಂಡಿದ್ದೇ ಹೆಚ್ಚು. ಚೀನಾ, ಅಮೇರಿಕಾ, ಇಟಲಿಯಂತ ದೊಡ್ಡ ದೊಡ್ಡ ರಾಷ್ಟ್ರಗಳನ್ನು ಕೊರೊನಾ ಕಾಡಿದ್ದು ಕಣ್ಣ ಮುಂದೆ ಇರುವಾಗ ಅದನ್ನು ನಿರ್ಲಕ್ಷಿಸುವುದು ಭಾರತಕ್ಕೆ ಸಾಧ್ಯವೇ ಇಲ್ಲ ನಿಜ, ಆದರೆ ಎಚ್ಚೆತ್ತುಕೊಳ್ಳುವ ಕಾಲಕ್ಕೆ ಮೈಮರೆತು ಮೆರೆದಾಡಿದ್ದರಿಂದ ರೋಗಕ್ಕಿಂತ ಅದರ ನೆರಳಲ್ಲಿ ಸೃಷ್ಟಿಸಿದ ಭಯ (ಭಯೋತ್ಪಾದನೆ) ವೇ ಭೀಕರತೆಯಿಂದ ಕೂಡಿದೆ.

ನಲವತ್ತೈದು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಬಾಧಿತರ ಸಂಖ್ಯೆ ಇಂದಿಗೆ ಒಟ್ಟು 90,927 ಆಗಿದ್ದರೆ, 2872 ಜನ ಸಾವು ಕಂಡಿದ್ದಾರೆ. (ಸೋಂಕಿತರ ಸಂಖ್ಯೆ ಲಕ್ಷ ದಾಟುವತ್ತ ಸಾಗಿದೆ.) ಅಂದರೆ ಸುಮಾರು ಶೇ. 3ರಷ್ಟು ಜನ ಸೋಂಕಿನಿಂದ ಸಾವು ಕಂಡಿದ್ದಾರೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ಗುಣಮುಖರಾಗಿರುವುದನ್ನು ಗಮನಿಸಬೇಕು. ಸಾವು ಕಂಡವರಲ್ಲಿ ವೃದ್ದರೇ ಹೆಚ್ಚಾಗಿರುವುದರಿಂದ ಅದು ವಯೋಸಹಜ ಕಾರಣಗಳನ್ನು ಅವಲಂಬಿಸಿದೆ. ಈ ಪ್ರಮಾಣವನ್ನು ಅಮೇರಿಕಾಕ್ಕೆ ಹೋಲಿಸಿದಾಗ ಭಾರತದ ಸ್ಥಿತಿ ಅಷ್ಟೇನೂ ಭೀಕರವಾಗಿಲ್ಲ ಎಂಬುದು ಕಾಣುತ್ತದೆ. ಭಾರತದ ನೈಸರ್ಗಿಕ ವಾತಾವರಣ, ಇಲ್ಲಿನ ಜನರಲ್ಲಿನ ರೋಗನಿರೋಧಕ ಸಾಮರ್ಥ್ಯ ವೇ ದೊಡ್ಡಮಟ್ಟದ ಜೀವ ನಷ್ಟವನ್ನು ತಂದೊಡ್ಡುವಲ್ಲಿ ತಡೆಯೊಡ್ಡಿದೆ. ಜನವರಿ ತಿಂಗಳಲ್ಲೇ ಕೊರೊನಾ ಜಗತ್ತಿನಾದ್ಯಂತ ವಿಸ್ತರಗೊಳ್ಳುತ್ತಿರುವ ಸೂಚನೆಗಳು ಕಾಣತೊಡಗಿದ್ದರೂ ಭಾರತ ಅಮೇರಿಕಾದ ಅಧ್ಯಕ್ಷರನ್ನು ಕರೆದು ಕಳುಹಿಸುವ ಉತ್ಸಾಹದಲ್ಲಿ ಓಡಾಡತೊಡಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಕರೆಗಳನ್ನು ಭಾರತ ಕಿರುಗಣ್ಣಿನಿಂದಲೂ ನೋಡಲಿಲ್ಲ. ರಾಹುಲ್‌ಗಾಂಧಿ ಯ ಎಚ್ಚರಿಕೆಯ ಟ್ವೀಟ್‌ನ್ನು ಎಂದಿನಂತೆ ಲೇವಡಿ ಮಾಡಿತು ಸರ್ಕಾರ. ಭಾರತದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿದ್ದೆಗೆ ಜಾರಿತ್ತು.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಹೊತ್ತಿಗೆ ಕೊರೊನಾ ಸೋಂಕು ದೇಶದ ಮೂಲೆ ಮೂಲೆಗಳನ್ನು ತಲುಪಿ ಕೇಕೆ ಹಾಕುತ್ತಿತ್ತು. ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು. ಜನರನ್ನು ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ದೂಡುವಲ್ಲಿ ಸರ್ಕಾರವೇ ಯಶಸ್ವಿಯಾಗಿದೆ.

ಕೋಟ್ಯಾಂತರ ವಲಸೆ ಕಾರ್ಮಿಕರ ಬದುಕು ಬರ್ಬರವಾಯಿತು, ಜನಸಾಮಾನ್ಯರು , ಮಧ್ಯಮ ವರ್ಗದವರು ಅನ್ನಕ್ಕಾಗಿ ಪರದಾಡುವಂತಾಯಿತು. ಒಂದು ಸರ್ಕಾರವೇ ಜನರನ್ನು ವ್ಯವಸ್ಥಿತವಾಗಿ ಬೀದಿಗೆ ನೂಕಿ ಹಸಿವಿಗೆ ಈಡು ಮಾಡುವ, ಆರ್ಥಿಕತೆಯನ್ನು ಪಾತಾಳಕ್ಕೆ ತುಳಿಯುವ ಹೊಣೆಗೇಡಿತವನ್ನು ಮಾಡಿ ಕೈಚೆಲ್ಲಿ ಕುಳಿತುಕೊಂಡಿತು. ಆಶ್ಚರ್ಯವೆಂದರೆ ಈ ದೇಶದ ಕಾರ್ಮಿಕ ಸಚಿವಾಲಯಕ್ಕೆ ತನ್ನ ದೇಶದಲ್ಲಿ ಎಷ್ಟು ಪ್ರಮಾಣದ ಕಾರ್ಮಿಕರಿದ್ದಾರೆ. ಅವರ ಹಕ್ಕು, ಸವಲತ್ತುಗಳೇನು? ಅದಕ್ಕಾಗಿ ಖಜಾನೆಯಲ್ಲಿ ಇರಬಹುದಾದ ಮೊತ್ತವೆಷ್ಟು,? ಒಂದು ಪಕ್ಷ ಕಾರ್ಮಿಕರ ಬದುಕಿಗೆ ದಿಢೀರನೆ ನಷ್ಟವೊಂದು ಒದಗಿ ಬಂದರೆ ಅವರಿಗಾಗಿ ಮಾಡಬಹುದಾದ ತಕ್ಷಣದ ಕ್ರಮಗಳೇನು ಎಂಬ ಯಾವ ಡಾಟಾವೂ ಇಲ್ಲದಿರುವುದು ಬೆಳಕಿಗೆ ಬಂತು. ಆರೋಗ್ಯ ಸಚಿವಾಲಯವೂ ಕೂಡ ಇಂತಹುದ್ದೆ ಸ್ಥಿತಿಯಲ್ಲಿರುವುದು ಜಗಜ್ಜಾಹೀರಾಯಿತು. ದಾರಿ ಹಿಡಿದು ಹೊರಟ 16 ಜನ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕು ಸತ್ತದ್ದು, ಲಕ್ನೋದ ಹೆದ್ದಾರಿಯಲ್ಲಿ 24 ವಲಸೆ ಕಾರ್ಮಿಕರ ದೇಹಗಳು ನುಜ್ಜುಗುಜ್ಜಾಗಿ ಚೆಲ್ಲಾಡಿದ್ದು ಪ್ರಭುತ್ವ ಪ್ರಾಯೋಜಿತ ಕೊಲೆ ಎಂದು ಈ ದೇಶದ ಮಾಧ್ಯಮಗಳಿಗೆ ಅನಿಸಲೇ ಇಲ್ಲ. ಇದಕ್ಕೆ ಯಾರನ್ನೂ ಹೊಣೆ ಗಾರರನ್ನಾಗಿ ಮಾಡಲಿಲ್ಲ. ರಾಜೀನಾಮೆ ಕೇಳಲಿಲ್ಲ.! ಈ ದೇಶದ ಪ್ರಧಾನಿಯ 56 ಇಂಚು ಎದೆ ಕ್ಷಣಕಾಲವೂ ಕದಲಿಲ್ಲ. ಯಾವೊಬ್ಬ ಸಚಿವನೂ ನೈತಿಕ ಹೊಣೆ ಹೊರಲಿಲ್ಲ. ವಿಪಕ್ಷಗಳು ಹರತಾಳ ನಡೆಸಲಿಲ್ಲ. ಎಂತಹ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಯೋಚಿಸಿ.

ಲಾಕ್ ಡೌನ್ ನಿಂದ ಕಂಗಾಲಾಗಿ ಬೀದಿಗಿಳಿದ ವಲಸೆ ಕಾರ್ಮಿಕರು, ಬಡಕುಟುಂಬಗಳು ಕೊರೊನಾ ಸೋಂಕು ನಿಂದ ಸಾಯುವ ಭೀತಿಗಿಂತ ಅಭದ್ರತೆ, ಹಸಿವಿನಿಂದ ಸಾಯುವ ಆತಂಕವನ್ನು ಹೊತ್ತು ದೇಶದ ಉದ್ದಗಲಕ್ಕೂ ಹೊರಟು ಬಿಟ್ಟಿದ್ದರು. ಸೋಂಕಿನಿಂದ ಸತ್ತವರಿಗಿಂತ ಇಂತಹ ಅಭದ್ರತೆ, ಹಸಿವಿನಿಂದ ಸತ್ತವರ ಪ್ರಮಾಣವೇ ಹೆಚ್ಚಾಗಿದೆ. ಇದಾವುದನ್ನೂ ಕಂಡೂ ಕಾಣದೆ ಇದ್ದ ಸರ್ಕಾರಗಳು ಸ್ಪೆಷಲ್ ಫ್ಲೈಟ್ ಗಳಲ್ಲಿ ತಮ್ಮ ತಮ್ಮ ಕುಟುಂಬಸ್ಥರುನ್ನು ಬಂಧು ಬಾಂಧವರನ್ನು ವಿದೇಶದಿಂದ ಸುರಕ್ಷಿತವಾಗಿ ಮನಗೆ ಕರೆಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಜನರಿಗೆ ಅನ್ನಕ್ಕಿಂತ ಭಾಷಣಗಳನ್ನು ಉಣಿಸಿದ್ದೇ ಹೆಚ್ಚು. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕು, ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಹೆಲಿಕಾಪ್ಟರ್ ಗಳಿಂದ ಹೂಮಳೆಗೆರೆಯಿರಿ ಎಂದು ದಿಕ್ಕು ತಪ್ಪಿಸಲಾಯಿತು. ಈ ಸದ್ದು-ಸಂಭ್ರಮಗಳ ಅಬ್ಬರದಲ್ಲಿ ದೇಶದುದ್ದಗಲಕ್ಕೂ ದಾರಿ ಹುಡುಕುತ್ತಾ ಹೊರಟ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರ ಹಸಿವಿನ ಆಕ್ರಂದನ, ಬರಿಗಾಲ ಸದ್ದುಗಳು ಜಗತ್ತಿಗೆ ತಿಳಿಯದಾಯಿತು. ಮಾಧ್ಯಮಗಳು ಚಪ್ಪಾಳೆ ತಟ್ಟುವುದನ್ನು, ಹೂಮಳೆಗೆರೆಯುವುದನ್ನು ಕೊಂಡಾಡುವಲ್ಲಿ ಮುಳುಗಿದವೆ ವಿನಃ ವಲಸೆ ಹೊರಟ ಜನರ ದುಃಖ, ದುಮ್ಮಾನಗಳಿಗೆ ಕ್ಯಾಮರಾ ಹಿಡಿಯಲಿಲ್ಲ. ಪೆನ್ನುಗಳು ತಹತಹಿಸಲಿಲ್ಲ.

ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪುತ್ತಿರುವ ಹೊತ್ತಿನಲ್ಲಿ ಇನ್ನೇನು ದೇಶ ನಾಶವಾಗಿಬಿಡುತ್ತದೆ. ಜನರೆಲ್ಲಾ ರೋಗಕ್ಕೆ ತುತ್ತಾಗಿ ಇಲ್ಲವಾಗಿಬಿಡುತ್ತಾರೆ ಎಂಬ ಪೋಬಿಯಾವನ್ನು ಬಿತ್ತಲಾಗುತ್ತಿದೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ರೋಗವನ್ನು ಎದುರಿಸಿ ಗುಣಮುಖರಾಗುತ್ತಿರುವ ಆಶಾದಾಯಕ ಬೆಳವಣಿಗೆಯನ್ನು ಜನರಿಗೆ ತಿಳಿಸುತ್ತಿಲ್ಲ. ಮದ್ದೇ ಇಲ್ಲದ ಈ ಸೋಂಕನ್ನು ಲಾಕ್ ಡೌನ್ ಎಂಬ ದಿಗ್ಬಂಧನಗಳಿಂದ ಕಟ್ಟಿಹಾಕುವುದಷ್ಟೇ ನಮಗೆ ಉಳಿದಿರುವ ದಾರಿ ಎಂದೇ ಭಾವಿಸಿರುವ ಮಾಧ್ಯಮಗಳು ಲಾಕ್ ಡೌನ್ ಎಂಬ ಅಸ್ತ್ರದಿಂದ ಭಾರತದೊಳಗಿನ ಬಡ ಭಾರತವನ್ನು ದಂಡಿಸಲು ಪ್ರಚೋದಿಸುತ್ತಿವೆ. ಜಾಗತೀಕರಣವನ್ನು ಹಾಸು ಹೊದ್ದು, ಉಣ್ಣುತ್ತಿರುವಾಗ ಈ ದೇಶದ ಪ್ರಧಾನಿ ಆತ್ಮ ನಿರ್ಭರ ಎಂಬ ಕಗ್ಗ ವಾಚನ ಮಾಡುತ್ತಿದ್ದಾರೆ.

ಜನತೆ ಈ ರೋಗದ ಜೊತೆ ಗುದ್ದಾಡುತ್ತಲೆ ಬದುಕಬೇಕೆಂಬ ಪರ‍್ಯಾಯ ಮಾರ್ಗಗಳನ್ನು ತೋರುವ, ಜನರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆ ಕೊರೊನಾ ಬರುವುದಕ್ಕಿಂತಲೂ ಮೊದಲೇ ವಿಫಲತೆಯ ಸೋಂಕು ಹಿಡಿದು ಉಸಿರೆಳೆಯುತ್ತಿತ್ತು. ಈಗ ಎಲ್ಲಾ ಅಸಮರ್ಥತೆಯನ್ನು ಕೊರೊನಾ ತಲೆಗೆಕಟ್ಟಿ ತಲೆ ಉಳಿಸಿಕೊಳ್ಳುವ ಕೆಲಸ ನಡೆದಿದೆ. ಇತ್ತ ಜನತೆ ಕೊರೊನಾ ಫೋಬಿಯಾದಿಂದ ಹೊರಬಂದು ಕೊರೊನಾ ಜೊತೆಯೇ ಬದುಕು ಕಟ್ಟಿಕೊಳ್ಳಬೇಕಾಗಿದೆ.

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...