Homeಮುಖಪುಟಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

- Advertisement -
- Advertisement -

ಪ್ರಧಾನಮಂತ್ರಿಗಳ ಬೃಹತ್ 20 ಲಕ್ಷ ಕೋಟಿ “ಆತ್ಮ ನಿರ್ಭರ ಭಾರತ” ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಮೂರನೇ ಹಂತದ ಪ್ಯಾಕೇಜ್ ಮೂಲಕ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಕೃಷಿ ವಲಯಕ್ಕೆ ನೀಡಿರುವ ನೆರವು, ಮಾಡಿರುವ ಘೋಷಣೆ ದೊಡ್ಡ ಪ್ರಮಾಣದಲ್ಲಿದೆ.

ಹಾಗಿದ್ದರೂ ಈ ಬಗ್ಗೆ ಪರಸ್ಪರ ಪ್ರಬಲ ವಿರೋಧಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಉತ್ಪಾದನಾ ವಲಯವಾಗಿ ಕೃಷಿ ಹಾಗೆ ಅದರಲ್ಲಿ ತೊಡಗಿರುವ ರೈತಾಪಿ ವರ್ಗ ಈ ಎರಡನ್ನು ಪ್ರತ್ಯೇಕವಾಗಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸದಿರುವುದು ಇದಕ್ಕೆ ಕಾರಣವಾಗಿದೆ.

ಕೃಷಿ ವಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವುದು, ಕರ್ನಾಟಕದ ರಾಗಿ, ಕಾಶ್ಮೀರದ ಕೇಸರಿವರೆಗೆ ಆಯಾ ರಾಜ್ಯದ ಹೆಗ್ಗಳಿಕೆಯ ಕಿರುಉತ್ಪನ್ನಗಳ ಪ್ರೋತ್ಸಾಹದಿಂದ ಜೇನು, ಗಿಡಮೂಲಿಕೆ ಕೃಷಿಗೆ ಪ್ರೋತ್ಸಾಹಿಸುವ ಸುಮಾರು 1.5 ಲಕ್ಷ ಕೋಟಿ ರೂಗಳ ಮೂರನೇ ಹಂತದ ಪ್ಯಾಕೇಜು ಹೊರ ಬಂದಿರುತ್ತದೆ. ಜೊತೆಗೆ 53 ಕೋಟಿ ಜಾನುವಾರುಗಳ ಆರೋಗ್ಯ ರಕ್ಷಣೆ, ಮತ್ಸ್ಯೋದ್ಯಮ ಸದೃಢಗೊಳಿಸುವ ಹಾಗೂ ಕ್ಷೀರ ವಲಯ ಎದುರಿಸುತ್ತಿರುವ ಪ್ರಮುಖ ಮೇವಿನ ಸಮಸ್ಯೆ ಪರಿಹಾರಕ್ಕೂ ಸಹಸ್ರಾರು ಕೋಟಿರೂಗಳನ್ನು ಘೋಷಿಸಲಾಗಿದೆ.

ಕೃಷಿ ವಲಯದ ಪುನಶ್ಚೇತನಕ್ಕೆ ಈ ಕಾರ್ಯಕ್ರಮಗಳು ಉಪಯುಕ್ತ ಎಂದು ತಜ್ಞರು ಸಂತಸ ವ್ಯಕ್ತಪಡಿಸಿದ್ದರೆ, 50 ದಿನಗಳಿಂದ ಸಂಪೂರ್ಣ ಬಳಲಿ ಬೆಂದು ಬೇಸತ್ತಿರುವ ರೈತಾಪಿ ವರ್ಗದ ನೆರವಿಗೆ ಧಾವಿಸಿ ಆತ್ಮಸ್ಥೈರ್ಯ ತುಂಬಲು ಪ್ರಾಮಾಣಿಕ ಪ್ರಯತ್ನವಿಲ್ಲ ಎಂಬ ತೀವ್ರ ಅಸಮಧಾನ ಇನ್ನೊಂದೆಡೆಯೆಂದ ಕೇಳಿಬಂದಿದೆ.

ಕಳೆದ ಸಾಲಿನಲ್ಲಿ ರೈತರು ಮಾಡಿರುವ ಉತ್ಪಾದನೆಯಲ್ಲಿ ಅಬ್ಬಬ್ಬಾ ಅಂದರೆ ಅರ್ಧಭಾಗ ಸದುಪಯೋಗವಾಗಿರಬಹುದು. ಒಂದು ಲೆಕ್ಕಚಾರದ ಪ್ರಕಾರ ತರಕಾರಿ ಬೆಳೆಗಾರರು ಕನಿಷ್ಠ 25 ಸಾವಿರ ಕೋಟಿ ರೂಪಾಯಿ, ಹಾಲು ಉತ್ಪಾದಕರು 10 ಸಾವಿರ ಕೋಟಿ ರೂಪಾಯಿಗಳು, ಕುಕ್ಕುಟ ಉದ್ದಿಮೆಯಲ್ಲಿ ತೊಡಗಿರುವವರು 20 ಸಾವಿರ ಕೋಟಿ ರೂ ನಷ್ಟ ಅನುಭವಿಸಿರುವುಗಾಗಿ ಹಾಗೂ ಕಬ್ಬಿನ ಬೆಳೆಗಾರರಿಗೆ ಕೊಡಬೇಕಾಗಿರುವ ಹಣದಲ್ಲಿ 18 ಸಾವಿರ ಕೋಟಿ ರೂಪಾಯಿ ಇನ್ನೂ ಬಾಕಿ ಇರುವುದಾಗಿ ತಿಳಿದು ಬಂದಿರುತ್ತದೆ.

ಇನ್ನು ಹಣ್ಣು, ಹೂವು ಬೆಳೆದಂತ ರೈತರು, ಮೀನುಗಾರರು ಅನುಭವಿಸಿರುವ ನಷ್ಟದ ಪ್ರಮಾಣವೂ ಅತಿಯಾಗಿರುತ್ತದೆ. ರೈತ ಕಷ್ಟಪಟ್ಟು ಬೆಳದು ಹಾಳಾದ ಪ್ರತಿ ಕಾಳು ಆಹಾರ, ಹಣ್ಣು, ತರಕಾರಿ ದೇಶಕ್ಕಾದ ನಷ್ಟ. ಈ ನಷ್ಟಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದ ಪರಿಹಾರ ಹಣ ತಕ್ಷಣ ರೈತನ ಜೇಬು ತಲುಪಬೇಕಿತ್ತು. ಜೊತೆಗೆ, ಮುಂದಿನ ಮುಂಗಾರಿಗೆ ಬಿತ್ತನೆಗೆ ಮಾಡಲು ಬೀಜ, ಗೊಬ್ಬರ ಹಣಕಾಸು ನೀಡಿ ರೈತನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ನೇರ ಹಣ ಪಾವತಿ ಪ್ರಥಮ ಆದ್ಯತೆಯಾಗಬೇಕಾಗಿತ್ತು.

ಉತ್ಪಾದನೆಯ ಹೊರತಾಗಿ ಬೇರೇನು ಮಾಡಲು ಅಶಕ್ತನಾಗಿರುವ ರೈತನಿಗಿಂದು ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ “ಕೊಯಿಲೋತ್ತರ ಸೇವೆ’’ಗಳನ್ನು ಸರ್ಕಾರವೇ ನೇರವಾಗಿ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನೂ ನೀರೀಕ್ಷಿಸಲಾಗಿತ್ತು. ಸ್ವಾಮಿನಾಥನ್ ವರದಿ ಪ್ರಕಾರ ರೈತನಿಗೆ ಕನಿಷ್ಠ ಶೇಕಡ 50ರಷ್ಟು ಲಾಭ ನೀಡುವ ಬೆಂಬಲ ಬೆಲೆ ಘೋಷಣೆ ಇದು ಅತ್ಯಂತ ಸಕಾಲವಾಗಿದೆ. ಆ ಮೂಲಕವಾದರೂ ಆತನ ಜೇಬಿಗೆ ಸ್ವಲ್ಪ ಹಣ ತುಂಬುತ್ತಿತ್ತು. ಬದಲಿಗೆ ಎರಡನೇ ಕಂತಿನಲ್ಲಿ ಖರೀದಿಗೆ ನೀಡಿರುವ ರೂ 6,000 ಕೋಟಿ ಅತ್ಯಲ್ಪವಾಗಿದೆ.

ಕರ್ನಾಟಕ ರಾಜ್ಯ ಒಂದೇ ತೊಗರಿ ಖರೀದಿಗೆ ಸಾವಿರ ಕೋಟಿ ಕೇಳುತ್ತದೆ. ಹಾಗೆ ಬೇಗನೆ ಹಾಳಾಗುವ ಟೊಮೋಟೊ ಈರುಳ್ಳಿ ಆಲೂಗೆಡ್ಡೆ ಮುಂತಾದವುಗಳ ಖರೀದಿ, ಸರಬರಾಜಿಗೆ ರಾಷ್ಟ್ರಮಟ್ಟದಲ್ಲಿ 500ಕೋಟಿ ರೂಗಳು ನೀಡುತ್ತಿರುವುದು ಮೂಸಿ ನೋಡಲು ಸಾಲದು. ರೈತಾಪಿ ವರ್ಗಕ್ಕೆ ಆರ್ಥಿಕ ಭರವಸೆ ನೀಡುವ ಬಗ್ಗೆ ಗಮನ ಇಲ್ಲದಿರುವುದು ಸ್ಪಷ್ಟವಾಗಿದೆ.

ರೈತರ ಉತ್ಪನ್ನವನ್ನು ಆಕರ್ಷಕ ಧಾರಣೆಯಲ್ಲಿ ಮಾರಾಟಮಾಡಲು ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂಬ ಆಶ್ಚರ್ಯಕರ ಪ್ರಸ್ತಾವನೆ ಹೊರ ಬಂದಿರುತ್ತವೆ. ಇದು ‘ಕೃಷಿ ಬೆಲೆ ಆಯೋಗ’ ಪ್ರಸ್ತಾಪಿಸಿರುವಂತೆ ರೈತರ ಉತ್ಪನ್ನಗಳ ಧಾರಣೆ ಮತ್ತು ಖರೀದಿ ಪ್ರಕ್ರಿಯೆಗಳನ್ನು ಕಾಯಿದೆ ವ್ಯಾಪ್ತಿಗೆ ತಂದು ಯೋಗ್ಯ ಧಾರಣೆಯನ್ನು ಖಾತರಿಗೊಳಿಸುವ ದಿಕ್ಕಿನಲ್ಲಿದೆಯೇ ಎಂದು ಕಾದು ನೋಡಬೇಕಾಗಿದೆ. ಹಾಗೆ, ಸಂಪೂರ್ಣ ರಾಜ್ಯಗಳ ಹಿಡಿತದಲ್ಲಿರುವ ಕೃಷಿ ಮಾರುಕಟ್ಟೆಯನ್ನು ಕೇಂದ್ರದ ಹತೋಟಿಗೆ ತಂದು ಉತ್ಪನ್ನಗಳ ದೇಶದಾದ್ಯಂತ ಸುಗಮ ಸಾಗಾಣಿಕೆಗೆ ಅನುವುಮಾಡಿಕೊಡುವ ವಿಚಾರವನ್ನು ವಿರೋಧ ಪಕ್ಷಗಳ ಹಿಡಿತದಲ್ಲಿರುವ ರಾಜ್ಯ ಸರ್ಕಾರಗಳು ಹೇಗೆ ನೋಡುತ್ತವೆಂದು ತಿಳಿಯದಾಗಿದೆ.

ವಲಸೆ ಕಾರ್ಮಿಕರಲ್ಲಿ ಬಹುತೇಕ ಸಣ್ಣ, ಅತಿಸಣ್ಣ ಬಡ ರೈತರಾಗಿದ್ದು ಹಳ್ಳಿಗಳ ಕಡೆ ಮುಖ ಮಾಡಿರುತ್ತಾರೆ. ಈಗ ಹಿಂತಿರುಗಿದ ವಲಸೆ ಕಾರ್ಮಿಕರನ್ನು ಹಳ್ಳಿಯಲ್ಲಿ ಕೃಷಿ ಯಾಂತ್ರೀಕರಣ, ಸಂಸ್ಕರಣೆಯಿಂದ, ಗ್ರಾಮೀಣ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲು ಇದು ಸದಾವಕಾಶ. ಈ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗ ಸೃಷ್ಟಿ “ನರೇಗ” ಯೋಜನೆಗೆ ಅಧಿಕವಾಗಿ 40 ಸಾವಿರ ಕೋಟಿ ನೀಡಿರುವುದು ಸಮಯೋಚಿತ.

‘ಕರ್ನಾಟಕ ಜನಶಕ್ತಿ ಸಂಘಟನೆ’ ನಡೆಸಿರುವ ಅಧ್ಯಯನದಂತೆ ದಿನಗೂಲಿಯನ್ನು ರೂ 375 ಏರಿಸಬೇಕು ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಹಾಗೆ, ಪಟ್ಟಣಗಳಲ್ಲಿ ಉನ್ನತ ಹುದ್ದೆಯಲ್ಲಿದ ಕೆಲ ಯುವಕರಾದರೂ ಹಳ್ಳಿಗಳಲ್ಲಿ ವಾಸಿಸಿ ಅರ್ಥಪೂರ್ಣ ಬದುಕು ಕಂಡುಕೊಳ್ಳಲು ಸಿದ್ಧರಿದ್ದು ಗ್ರಾಮೀಣ ಪುನಶ್ಚೇತನಕ್ಕೆ ಪೂರಕವಾದ ನವೋದ್ಯಮದಲ್ಲಿ ಇವರನ್ನು ತೊಡಗಿಸಿಕೊಳ್ಳಲು ಇದು ಒಳ್ಳೆಯ ಅವಕಾಶ. ರೈತರ ಹೊಲದ ಸಮೀಪ ಮತ್ತು ಉತ್ಪನ್ನಗಳ ಸಂಗ್ರಹಿಸುವ ಸ್ಥಳಗಳಲ್ಲಿ ಹಣವನ್ನು ಕೃಷಿ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಮತ್ತು ಆ ರೀತಿಯ ನವೋದ್ಯಮಿಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಯೋಜನೆ ತುಸು ಸ್ವಾಗತಾರ್ಹ.

ಸಾಧಾರಣ ಸಮಯದಲ್ಲೂ ಸರ್ಕಾರದ ಘೋಷಣೆ ಮತ್ತು ನೆರವು ಕಾರ್ಯರೂಪಕ್ಕೆ ಬಂದು ತೃಪ್ತಿದಾಯಕವಾಗಿ ಉಪಯೋಗವಾಗಿರುವುದು ಅಪರೂಪ. ಆಡಳಿತ ಯಂತ್ರ ನಿಷ್ಕ್ರಿಯವಾಗಿರುವ ಈಗಿನ ಲಾಕ್‌ಡೌನ್ ಸಂದರ್ಭದಲ್ಲಂತೂ ದೊಡ್ಡ ಘೋಷಣೆ, ಬೃಹತ್ ನೆರವುಗಳಿಗೆ ಅರ್ಥವೇ ಇಲ್ಲ. ನೀತಿ, ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡುವುದು ಸೂಕ್ತವಾಗಿದ್ದರೂ ಇದು ದೀರ್ಘಾವದಿಯದ್ದು. ಘೋಷಿಸಿರುವ ಹಣ ಶೀಘ್ರ ಬಳಕೆಯಾಗಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ‘ನೀಲಿ ನಕ್ಷೆ’, ಸ್ಪಷ್ಟ ಕಾರ್ಯಯೋಜನೆ ಕಂಡು ಬಂದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

ಈಗಂತೂ ಕರೋನ ಮಹಾಮಾರಿಗೆ ಜಗತ್ತೇ ನಡುಗಿ ಜನ ಬದುಕುಳಿಯಲು ಹರಸಾಹಸ ಪಡುತ್ತಿರುವಾಗ ಆಹಾರ ಉತ್ಪನ್ನಗಳ ಸಮರ್ಪಕ ವಿತರಣೆ ಮಾಡಿ ಆ ಮೂಲಕ ಜನಸಾಮಾನ್ಯರ, ಬಡಬಗ್ಗರ ಆರೋಗ್ಯದ ಜವಾಬ್ದಾರಿ ಪೂರ್ತಿ ಸರ್ಕಾರದ ಮೇಲಿದ್ದು, ಇದು ದೇಶದ ಪ್ರಥಮ ಆದ್ಯತೆಯಾಗಬೇಕಾಗಿತ್ತು. ಹಂಚಿಕೆಯನ್ನು ಒಂದು ಸಮಗ್ರ ಆಶಯವಾಗಿ ಅನುಷ್ಠಾನಗೊಳಿಸಲು ಕಾಲ ಈಗ ಪಕ್ವವಾಗಿದ್ದರೂ ಈನಿಟ್ಟಿನಲ್ಲಿ ಚಿಂತನಯೇ ಇಲ್ಲವಾಗಿರುವುದು ಅತ್ಯಂತ ದುರದೃಷ್ಟಕರ.

ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯಾಗಲಿ ಅಥವಾ ಖಾಸಗಿ ವಲಯವಾಗಲಿ ರೈತ ಬೆಳೆದ ಆಹಾರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸಮಾನ ಹಂಚಿಕೆಯ ಬಗ್ಗೆ ಗಮನಹರಿಸಲು ಅಸಾಧ್ಯ ಎಂಬುದನ್ನು ಸದ್ಯದ ಪರಿಸ್ಥಿತಿ ಸಾಬೀತುಪಡಿಸುತ್ತಿದೆ. ಇಂದಿನ ನಿಯಂತ್ರಿತ ಮಾರುಕಟ್ಟೆ (ಎಪಿಎಂಸಿ) ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಡಿಸಿ ಮತ್ತಷ್ಟು ಸ್ಪರ್ಧಾತ್ಮಕವೂ ರೈತಪರವು ಮಾಡುವ ಬದಲಿಗೆ ಸರ್ಕಾರದ ವ್ಯಾಪ್ತಿಯ ಈ ಜನಪ್ರತಿನಿಧಿ ಸಂಸ್ಥೆಗೆ ತಿಲಾಂಜಲಿ ಕೊಡ ಹೊರಟಿರುವುದು ಮೂರ್ಖತನವಾಗಿರುತ್ತದೆ.

ರೈತಾಪಿ ವರ್ಗ ಆಹಾರ ಉತ್ಪಾದನೆಯ ಮಹತ್ಕಾರ್ಯದಿಂದ ಹಿಂಜರಿಯದಂತೆ ನೋಡಿಕೊಳ್ಳುವ ಗಂಭೀರ ಸವಾಲು ಈಗ ಸರ್ಕಾರದ ಮುಂದಿದೆ. ಈ ಬಗ್ಗೆ ಸಮರೋಪಾದಿಯಲ್ಲಿ ಸ್ಪಷ್ಟ ಕಾರ್ಯಯೋಜನೆ ಕೃಷಿ ವಲಯಕ್ಕೆ ಅತ್ಯಗತ್ಯವಾಗಿದ್ದು ಕೇಂದ್ರದ ಘೋಷಣೆ ನಿರಾಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...